April 29, 2020

ಅಪ್ಪೆ ಸಾರು

ಇನ್ನು ಮಾವಿನಕಾಯಿ ಮಾವಿನ ಹಣ್ಣಿನ season ಶುರು.
ಪರಿಮಳ ಯುಕ್ತ ಮಾವಿನ ಕಾಯಿಯನ್ನು ನೀರಲ್ಲಿ ಬೇಯಿಸಿ. ಇದಕ್ಕೆ ಹಸಿ ಮೆಣಸಿನ ಕಾಯಿ, ಹಿಂಗು ಸೇರಿಸಿ ಎಲ್ಲವನ್ನೂ ನುಣ್ಣಗೆ ರುಬ್ಬಿ.  ತೆಂಗಿನ ಎಣ್ಣೆ ಕೊನೆಯಲ್ಲಿ ಸೇರಿಸಿ. ಅಥವಾ ಸಾಸಿವೆ, ಜೀರಿಗೆ, ಕರಿಬೇವಿನ, ಒಣ ಮೆಣಸಿನ ಒಗ್ಗರಣೆ ಹಾಕಿ. ಸೂಪ್ ತರಹ ಸೇವಿಸಬಹುದು ಅಥವಾ ಅನ್ನಕ್ಕೆ ಕಲಿಸಿ ಉಣ್ಣ ಬಹುದು.
ಅಪ್ಪೆಮಿಡಿ ಉಪ್ಪಿನಕಾಯಿಗೆ ಹಾಕಲು ತಂದಿದ್ದೆವು. ಅದರಲ್ಲಿ ಏಟಾದ ಕೆಲವು ಕಾಯಿ ಇತ್ತು. ಅದನ್ನು ಉಪಯೋಗಿಸಿ ಅಪ್ಪೆ ಸಾರು ಮಾಡಿದ್ದು




April 28, 2020

ಮಳೆ ಮಾರ್ಕೆಟ್ etc

ಇವತ್ತು ಬೆಳ್ ಬೆಳಗ್ಗೆ ಮೋಡ. ಕೆಲವು ದಿನಗಳಿಂದ ತುಂಬಾ ಸೆಕೆ. ಈ ಮಳೆಯಿಂದ ಬೆಂಗಳೂರು ಸ್ವಲ್ಪ ತಣ್ಣಗೆ ಆಗಬಹುದು. ಲಾಕ್ ಡೌನ್ ಕೊನೆ ಗೊಳ್ಳಲು ಇನ್ನು ಕೆಲವು ದಿನಗಳಿವೆ.
ನಿನ್ನೆ ಆಶೀರ್ವಾದ್ ಸೂಪರ್ ಮಾರ್ಕೆಟ್ ಗೆ ಹೋಗಿದ್ದೆ. ವಾಪಸ್ ಬರ್ತಾ ಕ್ಲಿಕ್ಕಿಸಿದ ಕೆಲವು ಚಿತ್ರಗಳು.
ನಿನ್ನೆ ಬಿಲ್ಡಿಂಗ್ ಗೆ ಸ್ವೀಟ್ chariot ಬೇಕರಿಯಿಂದ ಗಾಡಿ ಬಂದಿತ್ತು. ಕೆಲಗಿವೆ ಚಿತ್ರಗಳು
ಹಾಗೆ ಕೊರೊನ ವೈರಸ್ ನ ಪ್ರತಿಕೃತಿ ಮಾಫಿ ಸರ್ಕಲ್ ನಲ್ಲಿ ಹೀಗಿಟ್ಟಿದ್ದ






April 19, 2020

Birthday in the times of social distancing

My niece celebrated her 18th birthday in the US...her friends drove by to wish her like this 👇👇
Kids came up with novel ideas
Cupcakes for the friends to take away
Talking from a safe distance

With permisdion from my sis. Just loved the idea. They all sang the birthday song aloud. A birthday to remember 


April 16, 2020

ಹೊರಟು ಬಿಟ್ರು ಕೊಟ್ರಪ್ಪ

ತುಂಬಾ ಸಮಾಧಾನಿ ನಮ್ಮ ಕೊಟ್ರಪ್ಪ. ಬೈಕ್ ಬೇಕು ಅಂತ ತುಂಬಾ ಆಸೆ ಪಟ್ಟಿದ್ರು. ಶ್ರೀಕಾಂತ್ ಒಂದು ರಾಜದೂತ್ ಬೈಕ್ ಕೊಡಿಸಿದ್ರು.. ನಮ್ಮ ತೋಟಕ್ಕೆ ಹೋಗುವ ಸಮಾಯ ಬೆಳಿಗ್ಗೆ ೯. ೦೦ ರಿಂದ ಸಂಜೆ ೪ ರವರೆಗೆ. ಶ್ರೀಕಾಂತ್ ಕಸಿನ್ ಅವರದು ಭರ್ಜರಿ ತೋಟ. ಅದಕ್ಕೋಸ್ಕರ ಅವರು ತಮ್ಮ ತೋಟದ ಸಹಾಯಕರಿಗಾಗಿ ಪುಟ್ಟ ಪುಟ್ಟ ಹೆಂಚಿನ ಮನೆಗಳನ್ನು ಕಟ್ಟಿಸಿದ್ದಾರೆ. ಹಾಗೆ ಒಂದರಲ್ಲಿ ಕೊಟ್ರಪ್ಪ ಹಾಗು ಅವರ ದೂರದ ಸಂಬಂಧಿ ಬಿಡಾರ, ನಮ್ಮ ಕೊಟ್ರಪ್ಪನವರು ಲಿಂಗಾಯತ ಧರ್ಮದವರು...ಜೀವನದಲ್ಲಿ ಅಪಾರವಾದ ಕಟ್ಟು ನಿಟ್ಟು, ನೇಮ ನಿಯಮ. ಕೃಷ್ಣನ ಸಹಾಯಕ್ರಿಗೆ ಅಡಿಗೆ ಮಾಡುವವರೊಬ್ಬರಿದ್ದಾರೆ. ಆದರೆ ಕೊಟ್ರಪ್ಪ ಅವರ ಅಡಿಗೆ ಅವರೇ ಮಾಡಿಕೊಳ್ಳೋರು, ಊರಿನಿಂದ ಬರುವಾಗ ಜೋಳದ ಹಿಟ್ಟು ತರುತ್ತಿದ್ದರು. ಪ್ರತಿ ಸೋಮವಾರ ನಡೆಯುವ ತೀರ್ಥಹಳ್ಳಿ ಸಂತೆ ಹೋಗಿ ವಾರಕ್ಕೆ ಬೇಕಾಗುವಷ್ಟು ತರಕಾರಿ,,,ಇಲ್ಲದಿದ್ದರೆ ನೀರುಳ್ಳಿ, ಮೆಣಸಿನಕಾಯಿ ಇದ್ದಾರೆ ಆಯ್ತು. ಬೇರೆಯವರು ಮಾಡಿದ ಟಿ ಸಹಿತ ಕುಡಿಯುತ್ತಿರಲಿಲ್ಲ. ಅಂತದ್ದರಲ್ಲಿ ಅವರ ಸಂಭಂದಿ ಹುಡುಗನಿಗೆ ಕುಡಿತ, ಮಾಂಸಾಹಾರಿ ಅಭ್ಯಾಸ. ಗುಂಡು ತುಂಡು ಮಾಡಿದಾಗ ಅವರಿಗೆ ಮನೆಗೆ ಸೇರಿಸುತ್ತಿರಲಿಲ್ಲ ಕೊಟ್ರಪ್ಪ. ಕೊನೆಗೆ ಸಾಕಾಗಿ 'ತೋಟ ನಾನೇ ನೋಡಿಕೊಳ್ತೇನೆ....ಆತನಿಗೆ ಊರಿಗೆ ಕಳುಹಿಸಿಕೊಡಿ ಅಂತ ಒಂದೇ ವರಾತ.... ಹಾಗೆ ಮಾಡಿದ್ದೂ ಆಯಿತು. ಅವರು ಅಡಿಗೆ ಪಡಿಗೆ ಎಲ್ಲ ಮಾಡಿ ತೋಟಕ್ಕೆ ಬರುವಾಗ ೧೧,೦೦ ಗಂಟೆ ಕಳೆದು ಹೋಗುತ್ತಿದ್ದರೂ ನಾವು ಏನು ಅನ್ನಲಿಲ್ಲ. 
ಯುಗಾದಿಗೆ ಊರಿಗೆ ಹೋದ್ರೆ ಒಂದು ೧೫ ದಿನ ಠಿಕಾಣಿ . ಅದಕ್ಕೊಂದು ತುಂಬಾ ಕಾಯ್ತಿದ್ರು. ಆದರೆ ಹಿಂದಿನ ವರ್ಷ ಅವರ ಊರಲ್ಲಿ ಜೋರು  ಮಳೆಗೆ ಅವರ ಮಗ ಸೊಸೆ ಕೆಲಸ ಮಾಡುವ ಕಡೆ ತುಂಬಾ ನಷ್ಟವಾಗಿ ಫಾಕ್ಟರಿ ಬಂದ್ ಮಾಡಲಾಯಿತು, ಹಾಗಾಗಿ ಮಗ, ಸೊಸೆ, ಮೊಮ್ಮಗ ಕೃಷ್ಣನ ತೋಟಕ್ಕೆ ವಲಸೆ ಬಂದರು. ಸೊಸೆ ಅಡಿಗೆ ಮಾಡ್ತಿದ್ದರಿಂದ ಕೊಟ್ರಪ್ಪ ನಿರಾತಂಕ ವಾಗಿ ತೋಟಕ್ಕೆ ಹೋಗಿ ಬರೋದು ಮಾಡ್ತಿದ್ರು. ಈ ವರ್ಷ ಪಾಪ ಕೊರೋನಾ ವೈರಸ್ ಅಂತ ಯುಗಾದಿಗೆ ಹೋಗಲಾಗಲಿಲ್ಲ.
ನಾನು ತೋಟಕ್ಕೆ ಹೋಗಿ ಏನೇನೋ ಸಾಹಸ ಮಾಡಿದಾಗಲೆಲ್ಲ ಅವರ ಮುಖದಲ್ಲಿ ಕಿರಿದಾದ ಮಂದಹಾಸ. ಸೊಗದೆ ಬೇರು, ಅಮೃತ ಬಳ್ಳಿ ಎಲ್ಲ ಅವರು ಹೇಗೆ ಬಳಸುತ್ತಾರೆಂದು ನನಗೆ ಪಾಠ. 
ಕೆಳಗಿನ ಲೇಖ ಶ್ರೀಕಾಂತ ಬರೆದಿದ್ದು. ಉಳಿದಿದ್ದ ಮಾಯಿತಿ ಅದರಲ್ಲಿದೆ.  

ಹೋಗಿ ಬನ್ನಿ ಕೊಟ್ರಪ್ಪ 🙏


April 14, 2020

21 days


I frown
On the lockdown 😗🙄😎


Of course i love my family
Yet at times i feel suffocated, claustrophobic
Irritated with a capital I
Went to fetch milk...guess what? The milk crates were in front of the shop, the owner had not turned up..then the daily milk supplier to the apartment, called him..In the mean time the elastic of my mask came off...there were a few elderly people waiting for the milk, all without mask 🤔For want of something to do, i  removed my hairclip and attached the elastic to my hair with the clip and was smiling to myself like mad...😁😁

No shortage of essential stuffs. Reliance van coming on alternate days..Namadhari's taking online orders, lady vegetable vendor coming alternate days with her entire family...sister, husband, son and daughter in law...each selling fruits, vegetables, flowers, coconuts etc







The cake that went day before yesterday


And some pastries



April 12, 2020

ಬಿಟ್ಟಿ ಸಲಹೆಗಳು

ಲಾಕ್ ಡೌನ್ 30 ರ ತನಕ ವಿಸ್ತರಿಸಲಾಗಿದೆ.
ಅಡಿಗೆ ಬಗ್ಗೆ ಬರೆದಿದ್ದೇನೆ ಆದರೆ ಸೌಂದರ್ಯ, ಮುಖ ಕಾಂತಿ, ಕೂದಲಿನ ಆರೈಕೆ ಬಗ್ಗೆ ಬರೆದಿಲ್ಲ..ಯಾಕಂದ್ರೆ ನಾ ಸೌಂದರ್ಯದ ಬಗ್ಗೆ ಯಾವತ್ತೂ ತಲೆ ಕೆಡಿಸಿ ಕೊಂಡಿಲ್ಲ 😀😀

ಹಾಲಂತೂ ಸಿಗುತ್ತಿದೆ. ಕೆನೆಗೆ ಸ್ವಲ್ಪ ಅರಿಶಿನ, ಗುಲಾಬ್ ಜಲ್ ಬೆರೆಸಿ ಮುಖಕ್ಕೆ ಹಚ್ಚಿ, ಐದು ನಿಮಿಷ ಹಾಗೆ ಇಡಿ. ಆಮೇಲೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಸ್ನಾನ ಮಾಡುವಾಗ ನಿಮ್ಮ regular ಬಳಸುವ ಸಾಬೂನಿನಿಂದ ಮುಖ ತೊಳೆಯಿರಿ.

ಮುಖದ ಜಿಡ್ಡು ತೆಗೆಯಲು : ರಾಗಿ ಹಿಟ್ಟಿಗೆ ಸ್ವಲ್ಪ ನೀರು ಬೆರೆಸಿ ಪೇಸ್ಟ್ ಮಾಡಿಕೊಳ್ಳಿ..ಮುಖಕ್ಕೆ ಚೆನ್ನಾಗಿ ತಿಕ್ಕಿ..ಕೂಡಲೇ ತಣ್ಣೀರಿನಿಂದ ತೊಳೆಯಿರಿ. ಜಿಡ್ಡು ಹೋಗುವುದು ಮಾತ್ರವಲ್ಲ ಮುಖದ ಚರ್ಮ ಕೋಮಲವಾಗುತ್ತೆ.

ಕೂದಲಿಗೆ : ತೆಂಗಿನ ಎಣ್ಣೆ ಬಿಸಿ ಮಾಡಿ. ಅದಕ್ಕೆ ಕರಿಬೇವಿನ ಎಲೆ, ಮೆಂತೆ ಹಾಕಿಡಿ. ತಣ್ಣಗಾದ ನಂತರ ,ಇದ್ದತೆ ನಿಂಬೆ ರಸ ಬೆರೆಸಿ. ಕೂದಲಿನ ಬುಡಕ್ಕೆ ಹಚ್ಚಿ ಹಗೂರವಾಗಿ ಮಾಲಿಶ್ ಮಾಡಿ. ಅರ್ಧ ಗಂಟೆ ಬಿಟ್ಟು ಬಿಸಿ ನೀರಿನಿಂದ ಸ್ವಚ್ಛ ಮಾಡಿ. ಕೂದಲು ನುಣುಪು ಹಾಗೂ ಶೈನ್ ಪಡೆಯುತ್ತೆ.
Warning : try at your own risk 😀😀

ಮನೆಯಲ್ಲಿ ಸೊಳ್ಳೆ ಇವೆಯೇ? 
ತೆಂಗಿನ ಚರಟಕ್ಕೆ ಬೆಂಕಿ ಹಾಕಿ, ಇದ್ದಿಲ ಕೆಂಡ ಮಾಡಿ ಕೊಳ್ಳಿ. ಕೈ ಸುಡದ ಹಾಗೆ ಒಂದು ಪಾತ್ರೆಯಾಗಲಿ,ಅಥವಾ ಸೌಟು ಇದರಲ್ಲಿ ಹಾಕಿ, ಪೂಜೆಗೆ ಬಳಸುವ ಕರ್ಪೂರ ಹಾಕಿ. ಹೊಗೆ ಬರುತ್ತಿದ್ದಾಗಲೇ ಪಾತ್ರೆಯ ಜತೆ ಮನೆಯೆಲ್ಲಾ ತಿರುಗಿ... ಸೊಳ್ಳೆಗಳೂ ಹೋಗುತ್ತೆ, ವ್ಯಾಯಾಮವೂ ಆಗುತ್ತೆ. 😀😀


April 11, 2020

ದ್ರಾಕ್ಷಿ




ದ್ರಾಕ್ಷಿ - ಅನಾನಸು ಸಾಸಿವೆ

ಇವತ್ತು ದ್ರಾಕ್ಷಿ ಬೆಳೆಸುವ ರೈತರು ಅಪಾರ್ಟ್ಮೆಂಟ್ ಗೆ ಬಂದಿದ್ದರು. ಕೆಜಿ ಒಂದಕ್ಕೆ 55₹. ತುಂಬಾ ಕಡಿಮೆಯಾಯ್ತು ಅಅನ್ನಿಸ್ತು.  ಶರದ್ variety. ಇನ್ನೊಂದು variety ಕೂಡ ಇದೆ ಆದ್ರೆ, harvest ಮಾಡಲು ಅವರಿಗೆ ಜನ ಸಿಗಲಿಲ್ಲವಂತೆ. ಸುಮಾರು ಜನ ತೆಗೊಂಡ್ರು. ಕೆಲವರು ಒಂದು ಕೆ ಜಿ ತೆಗೊಂದು, ರುಚಿ ನೋಡಿ ಇನ್ನಷ್ಟು ದ್ರಾಕ್ಷಿ ಖರೀದಿಸಿದರು
ನಮ್ಮ ಬಿಲ್ಡಿಂಗ್ ನಲ್ಲಿರೋ ಅನುಪಮ ಅನ್ನುವವರು 2 ಕೆ ಜಿ ದ್ರಸ್ಕಿ, ನಾಲ್ಕು ಸೆಕ್ಯೂರಿತಿಯವರಿಗೆ ಕೊಟ್ಟರು...ಶ್ರೀಕಾಂತ ಮತ್ತು ಅವರ ಪರಿಚಯದವರು ಲಿಂಗಣ್ಣ ಅವರು ಕೆಲವು ಕೆ ಜಿ ದ್ರಾಕ್ಷಿ ಖರೀದಿಸಿ ಬಿ ಬಿ ಎಂ ಸಿ ಹೌಸ್ ಕೀಪಿಂಗ್ ನವರಿಗೆ ಕೊಟ್ಟರು. Nice ಅಲ್ವಾ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಮದುವೆ, ಮುಂಜಿ ಮುಂತಾದ ಸಮಾರಂಭಕ್ಕೆ ಕಡ್ಡಾಯವಾಗಿ ಮಾವು , ಅನಾನಸು, ಗೇರು ಹಣ್ಣು, ದ್ರಾಕ್ಷಿ ಮುಂತಾದು ಹಾಕಿ ಸಾಸಿವೆ ಮಾಡುತ್ತಾರೆ. ಕೇಕ್ ಆರ್ಡರ್ ಇತ್ತು. ಅದಕ್ಕಾಗಿ ಅನಾನಸು ತರಿಸಿದ್ದು, ಕೆಲವು ಹೋಳು ಉಳಿದಿತ್ತು. ಇವತ್ತು ದ್ರಾಕ್ಷಿ ಕೂಡ ಸಿಕ್ಕಿದ್ದರಿಂದ ದ್ರಾಕ್ಷಿ -  ಅನಾನಸಿನ ಸಾಸಿವೆ ನಮ್ಮನೇಲಿ
#ಲಾಕ್ ಡೌನ್..

April 9, 2020

Lock down day ???

Here i was today thinking it is tuesday and akka says 'amma where are you, it is thursday...i am losing sense of day and time and wrote a prose like poem

In the times of quarantine
I forget date and time
Days seem interminable
Garden is losing its charm
Book holds no interest
Soul longing to get out
To breathe fresh air
And watch the sights
Envy the birds and bees
The tiny little busy bodies
Going about their work
With no care for quarantine

Mmm some nice aroma of something cooking is wafting through the balcony doors. 

When lockdown was declared i had withdrawn 5000₹ , not much spent. I go once in three days to fetch milk...and i look forward to that walk...i go early to beat the rush. They have white washed spots for us to stand..social distancing

My nimpi is stuck in Bhopal till month end..i am pissed off. We should now not depend on other countries for stuffs...eat local, buy local..those stuff that are not available we should produce them or find an alternative or forget about them

Today's rain has made bangalore cooler.

Just some rambling..


April 6, 2020

Lock Down Day 14

ಅಯ್ಯೋ ತೀರಿಕೊಂಡು ಬಿಟ್ರಾ?
ಎನ್ ಕಾಯಿಲೆ
ಕೋ


ರೋ







ರಿ

ಅನ್ನುವಷ್ಟರಲ್ಲಿ ಓಡಿ ಹೋದ್ರು..ಪೂರ್ತಿ ಕೇಳಿಸಿಕೊಳ್ಳಲೇ ಇಲ್ಲ
Coronary heart disease ನಿಂದ ತೀರಿ ಕೊಂಡಿದ್ದು ಪಾಪ
Jokes apart
Seriously, the call by PM was to switch of all lights and light diyas or candle..do people really ask whether to switch off AC, fan refrigerator etc...and as an answer message from electrical engineers about grid collapse and stuff... People just forward msgs on whatsapp without reading i suppose.
Then people began screaming /catcalls and even some crackers were burst. People cannot follow one single instruction
Some people were very creative in displaying their lights/diyas that fell on the balcony laughing...my cell is no good in capturing night images 😊


Anyway thanks to whatsapp university, me an akka were able to answer correctly 8 out 10 general knowledge questions on virus given in the Hindu Magazine section


April 5, 2020

Lock Down Day 13....ಸಣ್ಣ ಕತೆ

ಕೆಳಗಿನ ಮನೆಯವರು ಕಂಪ್ಲೈನ್ ಮಾಡಲು ಬಂದಿದ್ದರು. 'ನಾವು ವರ್ಕ್ ಫ್ರಮ್ ಹೋಮ್, ಇಡಿ ದಿನ ನಿಮ್ಮ ಮನೆಯಲ್ಲಿ ಓಡಾಡುವ, ಕುಣಿದಾಡುವ, ಸಾಮಾನು ಬೀಳಿಸುವ ಸದ್ದು. ಒಂದು ಗಳಿಗೆ, ಎರಡು ಗಳಿಗೆ ಅಲ್ಲ, ಈಡಿ ದಿನ. ತಲೆ ಮೇಲೆ ಎದೆ ಮೇಲೆ ಗುದ್ದಿದಂಗೆ ಆಗುತ್ತೆ." ರೇಖಾಳ ಮುಖ ಎಲ್ಲ ಮುಜುಗರದಿಂದ ಕೆಂಪೇರಿತ್ತು..ಅಲ್ಲೇ ನಿಂತು ಇದನ್ನೆಲ್ಲ ಕೇಳುತ್ತಿದ್ದ ಗಂಡ ಶ್ರೀಧರ ನ ಮುಖದ ಮೇಲೆ ಆಕೆಯನ್ನು ಸುಟ್ಟು ಬಿಡುವಂತ ನೋಟ... 
11 ವರ್ಷ ವಯಸ್ಸಿನ ಶಿಶಿರನಿಗ autism. ಮಲಗಿರುವ ಸಮಯ ಬಿಟ್ಟರೆ ಉಳಿದ ಸಮಯವೆಲ್ಲ ಹೈಪರ್ active. ವಾರದಲ್ಲಿ 5 ದಿನ ಅವನಿಗೆ ಶಾಲೆ ಬೆಳಿಗ್ಗೆ 9 ತರಿಂದ ಸಂಜೆ 3.45 ರ ತನಕ. ಶಾಲಾ ವಾಹನದ ಸೌಕರ್ಯ ಇತ್ತು. ರೇಖಾಳಿಗೆ ಅಷ್ಟು ಹೊತ್ತು ಸ್ವಲ್ಪ ನೆಮ್ಮದಿ. ರಜಾ ದಿನಗಳಲ್ಲಿ ಅವಳಿಗೆ ಶಿಶಿರನನ್ನು ಸಂಭಾಳಿಸುವಷ್ಟರಲ್ಲಿ ಹೆಣ ಬೀಳುತ್ತಿತ್ತು. ಶ್ರೀಧರನಿಗೆ ವಾರ್ಯ0ತದಲ್ಲಿ ರಜೆ. ಆದರೂ ಶಿಶಿರನನ್ನು ನೋಡಿಕೊಳ್ಳುವ ಜವಾಬ್ದಾರಿ ತಪ್ಪಿಸಲು ಅವನು ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದ
ಈಗ lock ಡೌN ಘೋಷಿಸಿದ್ದರಿಂದ ಅವನಿಗೆ ಗ್ರಹ ಬಂಧನ... ಕೆಲಸದ ನೆವ ಹೇಳಿ ರೂಮೊಳಗೆ ಬಾಗಿಲು ಹಾಕಿಯೇ ಇರುತ್ತಿದ್ದ. ಶಿಶಿರಣದ್ದು ಒಂದೇ ಕಡೆ ಕೂತಿರುವ ಜಾಯಮಾನವಲ್ಲ..ಮನೆ ಇಡೀ ಒದ್ದಾಡುತ್ತಿರಬೇಕು
 ಔಷಧಿಯ ದುಷ್ಪರಿಣಾಮದಿಂದ ಮೈ ಕೂಡ ಬಂದಿದ್ದರಿಂದ ಮನೆಯವರಿಗೆ ದಭ ದಭ ಸದ್ದು ಕೇಳುವದಕ್ಕೆ ಕಷ್ಟ ಆಗುತ್ತಿತ್ತು ಇನ್ನು ಕೆಳಗಿನ ಮನೆಯವರು ಬಂದು ಆಕ್ಷೇಪಿಸಿದ್ದು ತಪ್ಪು ಅನ್ನುವಂತಿರಲಿಲ್ಲ...ಉಳಿದ ಸಮಯ ಕೆಳಗಿನ ಮನೆ ದಂಪತಿ ಕೆಲಸಕ್ಕೆ ಹೋಗುತ್ತಿದ್ದರು. ಬೆಳಿಗ್ಗೆ ಹೋದರೆ ಸಂಜೆ ವಾಪಸ್..ವಾರ್ಯಅಂತ್ಯದಲ್ಲಿ ಊರಿಗೆ ಹೋಗುತ್ತಿದ್ದರು, ಮಿತ್ರರ ಭೇಟಿ ಅಂತ ಮನೆಗೆ ವಾಪಸ್ ರಾತ್ರಿ ನೆ ಮರಳುತ್ತಿದ್ದರು. ಇನ್ನೂ ಹೊಸದಾಗಿ ಮದುವೆಯಾದವರು.
Lock ಡೌನ್ ನಿಮಿತ್ತ ಶಿಶಿರಣ ಶಾಲೆಗೂ ಕೂಡ ರಜೆ...ರೇಖಾಳಿಗೆ ಏನು ಮಾಡುವುದೆಂದು ತೋಚುತ್ತಿರಲಿಲ್ಲ. ಮನೆಗೆಲಸ ಮಾಡ್ತಾ ಶಿಶಿರನ್ನು ಸಂಭಾಳಿಸುತ್ತ ಹೈರಾನಾಗಿದ್ದಳು. ಕೆಲಸಫಾವರನ್ನು ನೇಮಿಸುವ ಅಂದ್ರೆ ಅವರ ಗ್ರಹ ಸಮುಚ್ಸಿಚಯದವರು ಕಡ್ಡಾಯವಾಗಿ ಸೋಷಿಯಲ್ distancing ಪಾಲಿಸಲೇ ಬೇಕು..ಯಾರೂ ಕೆಲಸದವರನ್ನು, ಅಡಿಗೆ ಯವರನ್ನು ಮನೆಗೆ ಕರೆಸುವಂತಿಲ್ಲ ಅಂತ ಕಟ್ಟುನಿಟ್ಟಿನ  ನಿಯಮ ಹಾಕಿದ್ದರು
ಸಂಜೆ ರೇಖಾಳ ತಂಗಿ, ಯು ಎಸ್ ನಲ್ಲಿ ಡಾಕ್ಟರ್ ಆಗಿರುವ ಅರುಣ face time ಮಾಡುವಾಗ...'ಏನಾಗಿದ್ಯೆ ನಿನಗೆ, ತುಂಬಾ ಸೋತು ಹೋಗಿದ್ದೀಯ' ಅಂತ ಆತಂಕದಿಂದ ಕೇಳಿದಳು..ತನ್ನ ಕಷ್ಟಗಳನ್ನು ಹೇಳಿಕೊಂಡಳು.
"ತುಂಬಾ ಹೈಪರ್ ಆದಾಗ ಒಂದು ಚಮಚ benadryl ಕುಡಿಸು...ಒಳ್ಳೆ ನಿದ್ದೆ ಮಾಡ್ತಾನೆ..ಆದರೆ ಅದೇ ಅಭ್ಯಾಸ ಮಾಡಿಸಬೇಡ..ಅಂತ ಸಲಹೆ ಕೊಟ್ಟಿದ್ದಾಳೆ
Quarantine is not always a happy family time for some!!! ಕೆಲವರು..family time, enjoy with your family..stay safe..ಅಂತೆಲ್ಲ ಗಿಣಿಪಾಠದ ತರಹ ಒಪ್ಪಿಸ್ತಾರಲ್ಲ್ವಾ..ಹಾಗಾಗಿ ಈ ಕತೆಗೆ ಪ್ರೇರಣೆ..

April 4, 2020

Lock Down Day 12...ನೆನಪು

ರಸ್ತೆ ಕಡೆ ನೋಡ್ತಾ ಇದ್ದೆ. ಕೆಲ ವಾಹನಗಳ ಸಂಚಾರ ಬಿಟ್ರೆ ರಸ್ತೆ ಖಾಲಿ . ಉಳಿದ ಸಮಯದಲ್ಲಿ ವಾಹನಗಳ ಚಲಿಸುವಿಕೆ, ಹಾರ್ನ, ಸ್ಕ್ರೀಚ್, ರ್ಅಂಬುಲನ್ಸ್, ಸಿಗ್ನಲ್ ಬೀಪ್, ಸಿಗ್ನಲ್ ನಲ್ಲಿ ಪೆನ್ಸಿಲ್, ಪೆನ್, ಬಲೂನ್, ಕೀಚೈನ್ ಎಲ್ಲ ಮಾರುವವರು (ಹೆಚ್ಚಿನವರು ರಾಜಸ್ಥಾನದವರು) ನಾಪತ್ತೇ. ಇವರೆಲ್ಲ ಈಗ ಎಲ್ಲಿದ್ದಾರೋ ಪಾಪ....
ಅವರ ಬಗ್ಗೆ ಆಲೋಚಿಸುವಾಗ ಈ ಘಟನೆ ನೆನಪಾಯ್ತು
ಬೆಳ್ಳಂದೂರಿನ ಸಾವಯವ ಮೇಳ ಕ್ಕೆ ಹೋಗಿದ್ವಿ. ಮೇಳದಲ್ಲಿ ಸುತ್ತಾಡಿ ಅಲ್ಲೇ ರೊಟ್ಟಿ ಮಿಲ್ಲೆಟ್ಸ್ ಮುಂತಾದ್ದು ತಿಂಡಿದ್ದಾಯ್ತು. ಕೊನೆಗೆ entry ಗೇಟ್ ಹತ್ತಿರ ಬೆಲ್ಲದಿಂದ ಮಾಡಿದ ಸ್ವೀಟ್ಸ್ ಮಾರುವ ಗಾಡಿ ನೋಡಿದ್ವಿ. ನೋಡಲಿಕ್ಕೆ ಚೆನ್ನಾಗಿದ್ದವು. ಆದರೆ ಹಸಿವಿರಲಿಲ್ಲ. ಮನೆಗೆ ತಂದು ತಿನ್ನುವ ಅಂದ್ರೆ parcel ಮಾಡಲು ಅವರ ಬಳಿ ಸಾಮಗ್ರಿ ಇರಲಿಲ್ಲ. ಕೊನೆಗೆ ಒಂದು ಬಾಳೆಎಲೆ ದೊನ್ನೆಯಲ್ಲಿ ಹಾಕಿಸಿಕೊಂಡು ಅದರ ಮೇಲೆ ಇನ್ನೊಂದು ದೊನ್ನೆ ಮಗುಚಿ ಇಟ್ಟು ಮನೆಗೆ ಅಂತ ರೀಕ್ಷದಲ್ಲಿ ಹೊರಟ್ವಿ. ಅರ್ಧ ದಾರಿ ಗೆ ಜೋರು ಗಾಳಿ ಬೀಸಿ, ಮಗುಚಿದ ದೊನ್ನೆ ಹಾರಿ ಹೋಯ್ತು 😊
ಮನೆ ಹತ್ತಿರ ರಿಕ್ಷಾ ನಿಲ್ಲಿಸಿ, ನಾನು ರಿಕ್ಷಾದವನಿಗೆ ದುಡ್ಡು ಪವತಿಸ ಬೇಕಾದ್ರೆ..ಎಲ್ಲಿದ್ದರೋ ಸುಮಾರು ರಸ್ತೆ ಬದಿ ಚಿಕ್ಕ ಪುಟ್ಟ ಸಾಮಾನು ಮಾರುವವರು ನಿಹಾ ಗೆ ಸುತ್ತು ವರೆದರು...ಅದರಲ್ಲೊಬ್ಬ ಹುಡುಗಿ cool ಆಗಿ ನಿಹಾ ಕೈನಿಂದ ರಸಗುಲ್ಲದ ದೊನ್ನೆ ಕಸಿದುಕೊಂಡು ತಿನ್ನಲು ಶುರು ಮಾಡಿದಳು...ನನಗೆ ಅಕ್ಕನಿಗೆ ತಕ್ಷಣಕ್ಕೆ ಸಿಟ್ಟು ಬಂತ್ತು... ಆದರೆ ನಿಹಾ ಮಾತ್ರ ವಿಚಲಿತಳಾಗದೆ, ' ಹಾಗೆಲ್ಲ ಮಾಡಬಾರದಲ್ಲವ ಅಂತ ಹೇಳಿ ಅವಳ ಬಳಿಯಿರುವ apple. Orange ಎಲ್ಲ ಕೊಟ್ಟು...ಎಲ್ಲರೂ ಹಂಚಿಕೊಂಡು ತಿನ್ನಬೇಕು ಆಯ್ತಾ ಅಂತ ನಕ್ಕು ಹೇಳಿ, ನಾವು ರಸ್ತೆ ಕ್ರಾಸ್ ಮಾಡಿ ಮನೆ ತಲುಪಿದೆವು
ಆ ಹುಡುಗಿಯ ಕಾಂಫಿಡೆನ್ಸ್ ಇನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ 😊

April 3, 2020

Lock Down Day 11



ಬೆಳಿಗ್ಗೆ ಶ್ರೀಕಾಂತ ರ conference call ಕಿರುಚಾಟ, ನನ್ನ ಮನೆ ಕೆಲಸ ಅಡುಗೆ...ಊಟದ ನಂತರ ಶ್ರೀಕಾಂತ್ ಮಧ್ಯಾನ್ಹದ ಸಣ್ಣ ನಿದ್ದೆ, ಅಕ್ಕ ಕಿವಿಗೆ ಹಾಕ್ಕೊಂಡು ಮೊಬೈಲ್ ನಲ್ಲಿ ಕೊರಿಯನ್ ಡ್ರಾಮ..ಆದ್ರೆ, ನಾನು ಇನ್ಸ್ಟಾಗ್ರಾಮ್ ವಿಡಿಯೊ ನೋಡ್ತಿರ್ತೇನೆ.

ಕತ್ರಿನಾ ಕೈಫ್ ಪಾತ್ರೆ ತೊಳೆಯೋದು, ದೀಪಿಕಾ ಪಡುಕೋಣೆ ಗಂಡನ ಜತೆ ಚೇಷ್ಟೆ ಮಾಡೋದು, ತಬಸ್ಸುಮ್ (ತಬು) ಕವನ ಬರೆದು ಹಾಕೋದು, ಸುಧಾಮೂರ್ತಿ ತಮ್ಮ ಸಾಕುನಾಯಿ ಜತೆ ಆಡೋದು, ಶಿಲ್ಪ ಶೆಟ್ಟಿ ಗಂಡನಿಗೆ exercise ಮಾಡಲು ಪ್ರೇರೇಪಿಸೋದು, ಅಂಗಳ ಗುಡಿಸಿ, ಗಿಡಗಳಿಗೆ ನೀರು ಹಾಕೋದು, ಮಗನ ಜತೆ ಪೇಪರ್ ಕ್ರಾಫ್ಟ್ ಮಾಡೋದು..ಇಂತವೆಲ್ಲ ನೋಡೋದ್ರಲ್ಲಿ ಟೈಂ ಹೋದದ್ದೇ ತಿಳಿಯೋದಿಲ್ಲ. 😊
ಇವತ್ತು ಮಲಯಾಳಂ ಸಿನಿಮಾ 'ಟ್ರಾನ್ಸ್' ನೋಡಿದೆ. ಕೆಲವು ಚೆನ್ನಾಗಿರೋ stills ಗಳಿವೆ. ಚೆಂದದ ಸಿನಿಮಾ
ಇವತ್ತಿನ ಪೇಪರ್ ನಲ್ಲಿ ಇವರಲ್ಲಿ ಒಬ್ಬರಾದ ಲೂಯಿಸ್ ನಿಧನದ ವಾರ್ತೆ ಇತ್ತು..ಈಗ ಈ ಹಳೆಯ ತುಷಾರದಲ್ಲಿ ಅವರ ಬಗ್ಗೆ ಇನ್ನಷ್ಟು ಮಾಹಿತಿ ಸಿಕ್ಕಿತು

ಇವತ್ತಿಗಿಷ್ಟೇ....
😊

April 2, 2020

Lock down day 10

                       ಚಿತ್ರವನ್ನು ಹಿಗ್ಗಿಸಿ ಓದಿ 🤓..ರಾಯರು ಬರೆದದ್ದು. ಅಡಿಗೆ ನಾನೇ ಮಾಡಿದ್ದು

ದಿನ ಇಡೀ quiz, trivia, puzzles.. ಉಳಿದ ಸಮಯ amazon ನಲ್ಲಿ ಮಲಯಾಳಿ ಸಿನಿಮಾ.
ನನಗಿಷ್ಟವಾದ ಕೆಲವು ಸಿನಿಮಾ ಅನ್ವೇಷಣಂ, ನಿರ್ಣಾಯಕಮ್..ನೀವು ನೋಡಿ ಹೇಳಿ..

ನಿನ್ನೆ ಶ್ರೀಕಾಂತ್ agri batch mates ಗಳ virtual drinks ಪಾರ್ಟಿ...zoom ಹಾಕ್ಕೊಂಡು ಅದೇನು ಸಂತಸ ಸಂಭ್ರಮ !!!
ಲಾಕ್ ಡೌನ್ ನಲ್ಲಿ ಎರಡನೇ ಹಬ್ಬ - ರಾಮ ನವಮಿ 👍

April 1, 2020

ಮಿನಿ ಕತೆ

ಮೊನ್ನೆ ಆಕೆ ತನ್ನ 99 ನೆ ವಯಸ್ಸಿಗೆ ತೀರಿಕೊಂಡರು.

ಅಣ್ತಮ್ಮ, ಅಕ್ಕಾತಂಗಿಯರ ಮಕ್ಕಳು ಮೊಮ್ಮಕಳನ್ನು ಮರಿಮಕ್ಕಳನ್ನು  ನೋಡಿ ಆಡಿದ ಹೆಮ್ಮೆ ಆಕೆಯದು
ಸಿರಿವಂತರ ಕುಟುಂಬ. ಆದರೆ ಒಡಹುಟ್ಟಿದವರ ರೂಪ, ಅಂದ ಚಂದ ಆಕೆಗಿರಲಿಲ್ಲ. ಗುಣ ಮಾತ್ರ ಶುದ್ಧ ಅಪರಂಜಿ
ಎಲ್ಲರ  ಹಾಗೆ ಆಕೆಗೂ ಮದುವೆಯಾಗಿತ್ತು. ಆದರೆ ರಾತ್ರಿ ಬೆಳಗಾಗುವಷ್ಟರಲ್ಲಿ ಆತ ಕಣ್ಮರೆಯಾಗಿದ್ದ. ರಾತ್ರಿ ಆಕೆಯ ಒಡೆದ ಹಿಮ್ಮಡಿ ನೋಡಿ, ಲಾಡ್ಜ್ ಬಳಿಯ ಔಷಧಿ ಅಂಗಡಿಯಿಂದ ಮುಲಾಮು ತಂದು ಆಕೆಯ ಹಿಮ್ಮದಿಗೆ ಹಿತವಾಗಿ ಹಚ್ಚಿದ ನೆನಪು ಮಾತ್ರ ಆಕೆಯ ಜತೆ ಕೊನೆವರೆಗೂ ಉಳಿದದ್ದು .5 ವರ್ಷದ ತನಕ ಆತನನ್ನು ಹುಡುಕಿದರೂ ಅಂವ ಸಿಗಲಿಲ್ಲ.
ಅಕ್ಕ ತಂಗಿ ಅಣ್ಣ ತಮ್ಮ0ದಿರ ಮನೆಗೆ ಅವರ ಮಕ್ಕಳ ಬಾನಣಂತನ, ಅಡುಗೆ ಮುಂತಾದ್ದು ಮಾಡಿ ಈವರೆಗೆ ಜೀವನ ಸವೆಸಿದಳು..
ಅಷ್ಟೇ ಕತೆ 🙏😁😁