October 30, 2009

ಅಕ್ಕಿ ರೊಟ್ಟಿ

3 ಬಟ್ಟಲು- ಅಕ್ಕಿ ಹಿಟ್ಟು
2 ಟೇಬಲ್ ಚಮಚ ತಾಜಾ ಹೆರೆದ ತೆಂಗಿನಕಾಯಿ
3 ಹದ ಗಾತ್ರದ ಈರುಳ್ಳಿ ಸಣ್ಣಗೆ ಹೆಚ್ಚಿದ್ದು
1 ಬಟ್ಟಲು ಮೊಸರು, ಹೆಚ್ಚಿದ ಹಸಿಮೆಣಸಿನಕಾಯಿ, ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಉಪ್ಪು


ಮೇಲೆ ಹೇಳಿದ ಎಲ್ಲ ಪದಾರ್ಥವನ್ನು ಮಿಕ್ಸ್ ಮಾಡಿ ಮೃದುವಾದ ಕಣಕ ತಯಾರಿಸಿ. ಬಾಳೆ ಎಲೆಗೆ ಸ್ವಲ್ಪ ಎಣ್ಣೆ ಹಚ್ಚಿ. ಬಾಳೆ ಎಲೆ ಮೇಲೆ ಕಣಕದ ಗೋಲವನ್ನು ಇಟ್ಟು ಬೆರಳಿನಿಂದ ತಟ್ಟಿ. ಒದ್ದೆ ಕೈ ಬೆರಳಿನಿಂದ ತಟ್ಟಿ. ಎಲೆಯನ್ನು ನಿಧಾನವಾಗಿ ಎತ್ತಿ ಕಾವಲಿ ಮೇಲೆ ಕವಚಿ.ಸ್ವಲ್ಪ ಎಣ್ಣೆ ಹಾಕಿ ಎರಡೂ ಬದಿ ಕೆಂಪಾಗುವಂತೆ ಕಾಯಿಸಿ
ಅವರೆ ಕಾಳು season ನಲ್ಲಿ ಬೇಯಿಸಿ mash ಮಾಡಿದ ಅವರೆ ಬೇಳೆಯನ್ನು ಬೆರೆಸಬಹುದು.
ತುರಿದ carrot ಕೂಡಾ ಮಿಕ್ಸ್ ಮಾಡಬಹುದು
serve hot with ತಾಜಾ ಬೆಣ್ಣೆ ಮತ್ತು ಬೆಳ್ಳುಳ್ಳಿ ಚಟ್ನಿ

:-)

October 26, 2009

Post without title


I had been to her place on the request of my dear friend. Her name was Vani. She was engaged to be married, to a man from Bangalore. She was quite good looking. My husband, a banker was deputed to this village. A beautiful village surrounded by lovely mountains. My friend (my husband’s colleague) being a widow could not attend the engagement function so she chose that particular day to congratulate her childhood friend.

Her father was the high priest of the village temple, situated mid-town and their house was attached to the temple. She and her brother both were born here. Her mother had passed away a few years ago.

We were seated in the hall. Her home consisted of a huge hall, a middle room and Kitchen. The house was built on a slope and likewise a few rooms were situated at the top and the kitchen was located lower than the hall where we were seated, and bathroom at a still lower level. One had to descend/ascend a few steps to get to the kitchen.

No sooner we took our seats, she got us some water and jaggery as is the custom. She stumbled once and recovered quickly. I noticed the small tear at the bottom of her saree petticoat, big enough for her toe to get in.

She stumbled likewise twice, in the hour’s time we spent there. We left after my friend and vani exchanged pleasantries. As we were walking towards home I wanted to warn my friend about the danger of her friend tripping due to that torn petticoat. But somehow our topic turned to our trekking expeditions and the preparations that we were to make.

Anyways a few days later, my friend came to me in a hurry and said Vani had met with a fall and her right leg was fractured and the culprit the same torn petticoat. Her leg was in the cast for six months.

The wedding could not be postponed, since the bridegroom could not postpone his leave, and also there was no other auspicious date for a long time, She got married with the cast on. The marriage ceremony was conducted with great pomp and her father shelled an awful amount of gold and money as dowry.

The honeymoon was postponed until after the removal of the cast. Even after the cast was removed, there was a slight limp in her right leg. The doctor pronounced the limp to be permanent. The boy was not able to adjust to this new situation. And he sent her back to her fathers place. The girl had no mother. The brother was a hooligan. Even after six months of stay the boy was not ready to have her back. On intervention from the holy - seer and other relatives he agreed to take her back provided the father-in-law gave him money to buy a bike. Having borrowed heavily for the marriage, it was difficult for the father to get more money to cater to the boys demand. Also the income from the temple was not very high.

But somehow he managed to sell the small property that he possessed in his native place which, he had kept aside to tide him over in his old age. He borrowed some more from his friends This time round, when the girl was with her husband he slowly started harassing her calling her a handicapped person and also came home drunk and burnt her on the neck and arms with cigarette butts. He locked her inside the house when he went about his chores. The girl suffered all this in silence for she had not much education and did not want to return to her parental home, scared of the gossip that might spread in her small village.

Only when a relative visited them, he saw the sad state of affairs and got her back to her fathers’ place. Two years had passed by then. As soon as the girl left him, he shifted his residence unknown to everybody. Rumors came to the girl about his going about with another woman. Then one day she received lawyers notice asking for signatures on the divorce form. Again there was some try at getting them to reconcile but to no effect. This divorce proceeding again took a long time. It took its toll on her old father and he expired. Since another priest came there to stay with his family, the girl had nowhere to go. Last we heard she had gone to stay with her very distant, aged relatives where she was not given a humane treatment, as if it was her fault that situation took such a turn.

We were deputed to a far off metro by then and all subsequent news was shared by my friend over mail. But my question is if the father had utilized the money spent on her dowry to educate her or to start off some sort of a small business for her, he need not have gone to such lengths, avoiding all the heartburns on the way. Why is it that girls, (even now) are bought up as a burden, where -in she has to be married off as soon as possible?

October 20, 2009

ಹಿಮವದ್ ಗೋಪಾಲಸ್ವಾಮಿ ಬೆಟ್ಟ

ದೀಪಾವಳಿಯ ದಿನ ಶ್ರೀಕಾಂತ್ sudden ಪ್ಲಾನ್ ಹಾಕಿ ಬಿಟ್ಟರು. ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಬಗ್ಗೆ ತುಂಬ ಕೇಳಿದ್ದೇನೆ. ಅಲ್ಲಿಗೆ ಹೋದರೆ ಹೇಗೆ? ಮಕ್ಕಳು ಕೂಡಲೇ alert. ದೊಡ್ಡ ಮಗಳಿಗೆ ಆ ದಿನ ಅವಳ ವಾರದ ರಜೆ ಸಿಕ್ಕಿತು. ಅವಳು ಹೋಟಲ್ ಮ್ಯಾನೆಜ್ ಮೆಂಟ್ course ಮಾಡುವುದರಿಂದ, ಅವಳಿಗೆ ರಜೆ ಕಡಿಮೆ.
ದೀಪಾವಳಿಯ ಎಣ್ಣೆ ಅಭ್ಯಂಜನ, ಪೂಜೆ ಮುಗಿಸಿ, ಉದ್ದಿನ ದೋಸೆ, ಪಲ್ಯ, ಚಟ್ನೀ ಪುಡಿ, ಪುಳಿಯೊಗರೆ ಹಾಗೂ ಹಬ್ಬಕ್ಕೆ ಮಾಡಿದ ಕುರುಕಲು ತಿಂಡಿ ಮತ್ತು ಹಣ್ಣುಗಳನ್ನು pack ಮಾಡಿ ಕೊಂಡು ನಮ್ಮ ಕಾರ್ ಬೆಂಗಳೂರಿನಿಂದ ಹೊರಟಿತು.

ಬೆಂಗಳೂರಿಂದ ಮೈಸೂರು, ಅಲ್ಲಿಂದ ಗುಂಡ್ಲುಪೇಟೆ. ಗುಂಡ್ಲು ಪೇಟೆ ಯಿಂದ ಗೋಪಾಲಸ್ವಾಮಿ ಬೆಟ್ಟ ೧೫ ಕಿ.ಮಿ. ಶಿಖರವನ್ನೇರಲು 5 ಕಿ.ಮಿ ಅಷ್ಟು ಮಾರ್ಗ ಮೇಲೇರಬೇಕಾಗುತ್ತದೆ. ಸಮುದ್ರ ಮಟ್ಟದಿಂದ 1446 ಮೀ ಎತ್ತರದಲ್ಲಿರುವ ಈ ಬೆಟ್ಟ ಅತೀ ಸುಂದರವಾದ ಹಸಿರು ತಾಣ ಹೊಂದಿದೆ. ಬೆಟ್ಟದ ಬುಡದಲ್ಲಿನ ಚೆಕ್ ಪೋಸ್ಟ್ ನವರು ಪ್ಲ್ಯಾಸ್ಟಿಕ್ ಅಥವಾ ಪ್ರಾಣಿಗಳಿಗೆ ಹಾನಿ ಉಂಟು ಮಾಡುವಂತಹ ವಸ್ತುಗಳನ್ನು ತೆಗೆದು ಕೊಂಡು ಹೋಗಲು ಬಿಡುವುದಿಲ್ಲ.
ಅಲ್ಲಿನ ದೇವಸ್ಥಾನದಲ್ಲಿರುವ ದೇವರು ವೇಣುಗೋಪಾಲಸ್ವಾಮಿ. ಅನೇಕ ನೀರ ಬುಗ್ಗೆ ಗಳಿಂದ ಹಾಗೂ ಉತ್ತಮ ಮಣ್ಣಿನಿಂದ ಈ ಬೆಟ್ಟ ಸದಾ ಹಸಿರುಮಯವಾಗಿರುತ್ತದೆ.. ವರ್ಷದ ಬಹುಪಾಲು ಮಂಜು ಮೋಡ ಮುಸುಕಿರುವುದರಿಂದ ಈ ಬೆಟ್ಟಕ್ಕೆ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಎಂದು ಹೆಸರು.. ನಾವು ಹೋದಾಗ ಸ್ವಲ್ಪ ಲೇಟ್ ಆದ್ದರಿಂದ ಬಿಸಿಲು ಏರಿದ್ದು, ನಮಗೆ ವೈನಾಡಿನ ಹಸಿರು ಕಾಡು ಕಾಣ ಸಿಕ್ಕಿತು.

ಹಳೆಯ ಕೋಟೆಯೊಂದರ ಒಳಗೆ ಈ ದೇವಸ್ಥಾನ ಸ್ಥಿತ ವಾಗಿದೆ. ಈಗ ಕೋಟೆ ಹೋಗಿ ಸಿಮೆಂಟ್ ನಿಂದ ಮಾಡಿದ ಕಾಂಪೌಂಡ್ ಒಳಗಿದೆ ಈ ದೇವಸ್ಥಾನ. ದೇವರ ಮೂರ್ತಿ ತುಂಬಾ ಚೆನ್ನಾಗಿದೆ. ದೇವಾಲಯದ ಎಡ ಬದಿಗೆ ಹೋದಾಗ airtel ನ ’ತಮಿಳುನಾಡಿಗೆ ಸ್ವಾಗತ’ ಎಂಬ ಎಸ್.ಎಮ್.ಎಸ್ ಬಂತು. ದೇವಸ್ಥಾನ ಬಲಬದಿಗೆ, ಅಂದರೆ ಸ್ವಲ್ಪ ತಗ್ಗಿನ ಪ್ರದೇಶಕ್ಕೆ ಹೋದಾಗ welcome to Kerala ಅನ್ನುವ ಅವರ ಎಸ್.ಎಮ್.ಎಸ್. ಬಂಡಿಪುರ್ ಅರಣ್ಯದಲ್ಲಿರುವ ಈ ಬೆಟ್ಟದಲ್ಲಿ , ಅಲ್ಲೆಲ್ಲ ಆನೆ ಓಡಾಡುತ್ತಿರುವ ಸಂಕೇತವಾಗಿ ಆನೆ ಲದ್ದಿ ಕಂಡೆವು.



ಊಟದ ಸಮಯದಲ್ಲಿ ನೋಡಿದರೆ ತಟ್ಟೆಗಳನ್ನೆ ತಂದಿರಲಿಲ್ಲ ನಾನು. ಡಬ್ಬಿಯ ಮುಚ್ಚಳಗಳನ್ನೆ ಉಪಯೋಗಿಸಬೇಕಾಯ್ತು. ಹಾಗೂ ಅಲ್ಲಿ ಊಟ/ತಿಂಡಿ/ ಕುಡಿಯುವ ನೀರು ಸಿಗುವುದಿಲ್ಲ. ಇದೂ ಒಂದು ತರಹ ಒಳ್ಳೆಯದೇ, ಯಾಕೆಂದರೆ ಜನರು ಇನ್ನಷ್ಟು ಜಾಗ ಗಲೀಜು ಮಾಡಿ ಬಿಡ್ತಾರೆ. ಆದರೂ ಕೆಲವು ಕಡೆ cigarette pack, ಬೀರ್ ಕ್ಯಾನ್ , ಪ್ಲ್ಯಾಸ್ಟಿಕ್ ಚೀಲಗಳು ಹಾರಾಡುತ್ತಿದ್ದವು. but ಬೆಟ್ಟದಲ್ಲಿ ಹೆಂಗಸರಿಗಾಗಿ toilet ಸೌಲಭ್ಯ ಇಲ್ಲದೇ ಸ್ವಲ್ಪ ತೊಂದರೆಯಾಯಿತು. ದೇವರ ದರ್ಶನಕ್ಕೆ ಆ ದಿನ ತುಂಬ ಜನರಿದ್ದರು. ಕ್ಯೂ ಸಿಸ್ಟಮ್ ಇದ್ದುದರಿಂದ ಎಲ್ಲರಿಗೂ ಗರ್ಭಗುಡಿಯಲ್ಲಿ ಎರಡೆರಡು ನಿಮಿಷ time ಕೊಡಲಾಯಿತು. ತುಲಸಿ ಹಾಗೂ ಹೂವಿನ ಅಲಂಕಾರದಿಂದ ದೇವರ ಮೂರ್ತಿ ಕಾಣ್ತಿರಲಿಲ್ಲ. ಆದರೂ ಪುರೋಹಿತರು, ಮಾಲೆಗಳನ್ನು ಎತ್ತಿ ದೇವರ ಮಸ್ತಕ, ಕೊಳಲು, ದೇವರ ಪಾದದ ಬಳಿಯಿರುವ ವಿಗ್ರಹಗಳನ್ನು ತೋರಿಸಿ, ಗರ್ಭಗುಡಿಯ ಬಾಗಿಲ ಮೇಲಿಂದ ಒಸರುತ್ತಿದ್ದ ಹಿಮ/mist ನ್ನು ಮುಟ್ಟಲು ಅವಕಾಶ ಮಾಡಿಕೊಟ್ಟರು. ಅಲ್ಲಿಂದ ಸ್ವಲ್ಪ ನೀರನ್ನು ಭಕ್ತರ ಮೇಲೆ ಸಿಂಪಡಿಸಿದರು. ISKCON ನಿಂದ ಬಂದ ಗುಂಪು ಕೃಷ್ಣನ ಕೆಲವು ಗೀತೆಗಳನ್ನು ಸುಶ್ಯ್ರಾವ್ಯವಾಗಿ ಹಾಡಿತು.
ಬಿಸಿಲು ನೆರಳಿನಾಟದಲ್ಲಿ ಗುಡ್ಡದ ಬಣ್ಣವು change ಆಗ್ತಾ ಇದ್ದದ್ದು ನೋಡುವುದೇ ಒಂದು ಆಹ್ಲಾದಕರವಾದ ಅನುಭವ. ಎಷ್ಟೋ ಹೊತ್ತು ಅದನ್ನು ನೋಡುತ್ತ ಕುತಿದ್ದೆವು. ಇನ್ನೊಮ್ಮೆ ನಾವು ದೊಡ್ಡ ಗುಂಪುನ್ನು ಮಾಡಿ ಅಲ್ಲಿಗೆ ಹೋಗುವ plan ಹಾಕ್ಕೊಂಡಿದ್ದೇವೆ. ನೀವು ಎಂದಾದರೊಮ್ಮೆ ಭೇಟಿ ನೀಡಲೇ ಬೇಕಾದ ತಾಣ.

ಈ ದಿನ ನನ್ನ ಹುಟ್ಟು ಹಬ್ಬ(according to ನಮ್ಮ ಪಂಚಾಂಗ) ಕೂಡ ಇತ್ತು. ಮಕ್ಕಳು ಅಲ್ಲಿ ಸಿಕ್ಕ ಬೆಟ್ಟದಲ್ಲಿನ ಹೂಗಳಿಂದ ನನಗೋಸ್ಕರ ಒಂದು ಹೂಗುಚ್ಛ ಮಾಡಿ ಕೊಟ್ಟರು.


ಅಲ್ಲಿಂದ ಮೈಸೂರಿಗೆ ಬಂದು ದಸರಾ ಕರಕುಶಲ ಮೇಳಕ್ಕೆ ಹೋದೆವು. 200 ಕ್ಕಿಂತ ಹೆಚ್ಚು ಕರಕುಶಲ, ಬಟ್ಟೆ, ಪಾತ್ರೆ, ಆಟ, ತಿಂಡಿಗಳ ಮಳಿಗೆಗಳಿದ್ದವು. ಈ ವರ್ಷದ ವಿಶೇಷ ಆಕರ್ಷಣೆ ’snow ball’ ಅನ್ನುವ ಮಳಿಗೆ. ಸಂಜೆ ಅರಮನೆ ದೀಪಾಲಂಕೃತಗೊಂಡು ಮನಮೋಹಕ ದೃಶ್ಯ ಒದಗಿಸಿಕೊಟ್ಟಿತು. ದಸರಾ ಉತ್ಸವಕ್ಕೆ ಹೋದಾಗ ನಾವು ಇದನ್ನು ಮಿಸ್ ಮಾಡ್ಕೊಂಡಿದ್ದೆವು. ಡಿಸೆಂಬರ್ ತನಕ ನಡೆಯುತ್ತದೆ ಈ ಮೇಳ. ವಿವಿಧ ಆಟದಲ್ಲಿ ತಲ್ಲಿನ ಮಕ್ಕಳು ಹಾಗು ದೊಡ್ಡವರನ್ನು ನೋಡುವುದೂ ಮಜವಾಗಿತ್ತು.

as usual ನಮ್ಮ ಕ್ಯಾಮರಾ ಕೈ ಕೊಟ್ಟು, ಇಲ್ಲಿ ಹಾಕಿರುವ ಚಿತ್ರಗಳೆಲ್ಲ cell phone ನಿಂದ ತೆಗೆದದ್ದು.

October 14, 2009

ಒಂದು ಭಾನುವಾರ- ಹಾಗೆ ಸುಮ್ಮನೆ

ಇತ್ತೀಚಿಗೆ ರಂಗಶಂಕರದಲ್ಲಿ ಮಧ್ಯಾನ್ಹ 3.30 ಗಂಟೆಗೆ ನಾಟಕದ ಶೋ ಇಡುತ್ತಾರೆ, ಇದರಿಂದ ನಮಗೆ ಅನುಕೂಲವಾಗಿದೆ. ಮಹಾಲಕ್ಷ್ಮಿಪುರಂ ದಿಂದ ಜೆ.ಪಿ ನಗರ ಸ್ವಲ್ಪ ದೂರ. ರಿಕ್ಷಾದವರು ಕೆಲವೊಮ್ಮೆ ಬರಲು ಒಪ್ಪುವುದಿಲ್ಲ.

ಭಾನುವಾರ ೩.೩೦ ಗಂಟೆಯ ಶೋ ‘ನಾ ತುಕಾರಾಮ್ ಅಲ್ಲ’ ಗೆ ಹೊರೆಟೆವು. ಸ್ವಲ್ಪ ಗಡಿಬಿಡಿಯಾಯ್ತು. ಬಸ್ಸು, ರಿಕ್ಷಾ ಹಿಡಿದು, ರಂಗಶಂಕರ ತಲುಪಿದಾಗ ಶೋ ಶುರು ಆಗುವ ಮೊದಲ ಗಂಟೆಯ ಸದ್ದಾಯಿತು. on-line ಟಿಕೆಟ್ ಬುಕ್ ಮಾಡಿದ್ದರಿಂದ ಅದನ್ನು ಕೊಟ್ಟು ಬೇರೆ ಪಾಸ ಅವರಿಂದ ಪಡೆದುಕೊಳ್ಳ ಬೇಕಿತ್ತು. ಅಂತು ಅದೆಲ್ಲಾ ಫೋರ್‌ಮೆಲಿಟಿ ಪೋರೈಸಿ, ಓಡ್ತಾ ಮೆಟ್ಟಿಲು ಹತ್ತಿ, ತುಂಬಾ ಎತ್ತರದ ಜಾಗದಲ್ಲಿ ಹೋಗಿ ಕುಳಿತು ಕೊಂಡೆವು, ಉಳಿದಿದ್ದ ಜಾಗವೆಲ್ಲಾ ಭರ್ತಿಯಾಗಿತ್ತು.

ನಾಟಕ ಇನ್ನೂ ಶುರು ಮಾಡಿರಲಿಲ್ಲ. ಅದಕ್ಕೆ ಸುಮ್ಮನೆ ಪರಿಚಯದವರೂ ಯಾರಾದರೂ ಇದ್ದಾರಾ ಅಂತ ನೋಡುತ್ತಿರುವಾಗ ಜಯಂತ ಕಾಯ್ಕಿಣಿ ಅವರ ಮಗನ ಜತೆ ಕೂತಿದ್ದು ಕಾಣಿಸಿತು ದೂರದಲ್ಲಿ ಸುಧನ್ವಾ ದೇರಾಜೆ ಯವರನ್ನು ಕಂಡೆ. ಅವರ (ಮುಖ) ಪರಿಚಯ ನನಗೆ ಮೇ ಪ್ಲವರ್ ನ,fish market ಕಾರ್ಯಕ್ರಮದಲ್ಲಿ, ದುಂಡಿರಾಜ ಅವರ ಕವನ ಗಳ ಬಗ್ಗೆ ಮಾತನಾಡಲು ಕರೆದಾಗ ಆಗಿತ್ತು. (ಆ ಕಾರ್ಯಕ್ರಮದಲ್ಲಿ ಶ್ರೀಕಾಂತ್ ಅವರ ಕಡೆ ಬೆಟ್ಟು ಮಾಡಿ- ಅವನು ಸುಧನ್ವಾ ದೇರಾಜೆ-ಉಜಿರೆಯವನು- ಒಳ್ಳೆಯ ಹುಡುಗ ಅಂತ ಪರಿಚಯಿಸಿದ್ದು ನೆನಪಾಗಿ ನಗೆ ಬಂದಿತ್ತು) ದೇರಾಜೆಯವರು ತುಂಬ ಕುತೂಹಲದಿಂದ ರಂಗಸಜ್ಜಿಕೆಯನ್ನು study ಮಾಡ್ತಾ ಇದ್ದರು. (ಮರು ದಿನ ನಾಟಕದ ಬಗ್ಗೆ ಪುಟ್ಟ ಮುದ್ದಾದ ಬರಹ ವಿಜಯ ಕರ್ನಾಟಕದಲ್ಲಿ ಹಾಕಿದ್ದರು.)
ನಾವು ಕುಳಿತುಕೊಂಡ ಸಾಲಿನಲ್ಲಿ ಕೆಲವು ಖಾಲಿ ಸೀಟ್ ಇದ್ದುದರಿಂದ, ಅರುಂಧತಿ ನಾಗ ನಮ್ಮ ಹತ್ತಿರ ಕುಳಿತುಕೊಂಡ್ರು. ಕೂತ ಕಡೆಯಿಂದ ಎಲ್ಲರಿಗೂ ಮೊಬೈಲ್ ಸ್ವಿಚ್ ಆಫ್ ಮಾಡಲು ರಿಕ್ವೆಶ್ಟ್ ಮಾಡ್ತಾ ಇದ್ರು. ಜಯಂತ ಕಾಯ್ಕಿಣಿ ಮಾಡಿರಲಿಲ್ಲ. ಅದಕ್ಕೆ ಅರುಂಧತಿ ಅವರ ಬಳಿ ಹೋಗಿ, ಅವರ ಕೈ ಕುಲುಕಿ, ಕುಶಲೋಪರಿ ಬಳಿಕ ಅವರನ್ನು ಮೊಬೈಲ್ ಸ್ವಿಚ್ ಆಫ್ ಮಾಡಲು ಕೇಳಿಕೊಂಡರು.

ನಾಟಕ ತಕ್ಕ ಮಟ್ಟಿಗೆ ಚೆನ್ನಾಗಿತ್ತು. ಕೆಲವು ಡಯಾಲಗ್ ತುಂಬಾ ಉದ್ದವಿತ್ತು. ಶ್ರೀಕಾಂತ್ ತುಂಬಾ ನಗ್ತಾ ಇದ್ದರು. ಅವರೆಲ್ಲಾದ್ರು ನಗ್ತ ನಗ್ತ ಬೀಳಬಹುದೆಂದನಿಸಿ, ನಾಟಕಕ್ಕಿಂತ ಅವರನ್ನು ಗಮನಿಸ್ತ್ತಾ ಇದ್ದೆ. ಎಲ್ಲ ಪಾತ್ರಧಾರಿಗಳು ತುಂಬಾ ಚೆನ್ನಾಗಿ ಅಭಿನಯಿಸಿದ್ರು. ವೃದ್ಧ್ಯಾಪದಲ್ಲಿ ಕಾಡುವ ಅನಿಶ್ಚಿತತೆ, ಅದನ್ನು ದೂರಮಾಡಲು ವೃದ್ದರು ಕಂಡು ಕೊಂಡ ಉಪಾಯ ತಮಾಷೆಯಾದ್ರೂ, ಮನಸ್ಸಿಗೆ ತಟ್ಟುವಂತಿತ್ತು. ನನ್ನ ಹಿರಿ ಮಗಳು ಬ್ಯಾಕ್ ರೆಸ್ಟ್ ಗೆ ತಲೆಯಾನಿಸಿ ಒಳ್ಳೆ ನಿದ್ದೆ ಮಾಡಿದಳು. ಯಾಕೆಂದರೆ ಪ್ರತಿ ಭಾನುವಾರ ಊಟದ ನಂತರ ಒಂದಷ್ಟು ಮಲಗುವುದು ಅವಳ ಅಭ್ಯಾಸ. ನಾಟಕ ಮುಗಿದ ಮೇಲೆ ‘ಇಷ್ಟು ಬೇಗ ಮುಗಿದು ಹೋಯಿತಾ ಅಂತ ಅವಳ ಪ್ರಶ್ನೆ. ಸಧ್ಯ ಅವಳು ಮಲಗಿದ್ದು ಇವರಿಗೆ ಗೊತ್ತಿರಲಿಲ್ಲ. ಇಲ್ಲದಿದ್ದರೆ ಇವರು ಲೆಕ್ಚರ ಮೋಡ್ ಗೆ ಸಜ್ಜಾಗುತ್ತಿದ್ದರು.

೫.೩೦ ಗೆ ನಾಟಕ ಸಮಾಪ್ತ ವಾಯ್ತು. ಹೊರಗೆ ಜಯಂತ ಕಾಯ್ಕಿಣಿ ಅವರ ಮಗನನ್ನು ಆಪ್ತರಿಗೆ ಪರಿಚಯಿಸ್ತಾ ಇದ್ದರು. ನಾವು ಶಂಕರ್ ಬುಕ್ ಹೌಸ್ ನಿಂದ ಕೆಲವು ಹಳೆಯ ಕಪ್ಪು-ಬಿಳುಪು , ಕನ್ನಡ ಫಿಲ್ಮ್ ಸಿ. ಡಿ. ಗಳನ್ನು ಕೊಂಡುಕೊಂಡೆವು.

ಮಕ್ಕಳಿಗೆ ಅಷ್ಟು ಬೇಗ ಮನೆಗೆ ಹೋಗುವ ಮನಸ್ಸು ಇರಲಿಲ್ಲ. ಅದಕ್ಕೆ ನಮ್ಮವರು, ‘ನಡೀರಿ, ಗಾಂಧಿಬಜಾರ್ ಕಡೆಗೆ ಹೋಗುವ. ನೀವು ಅಲ್ಲಿ ಹೋಗಿಲ್ಲವಲ್ಲ’ ಅಂತ ಹೇಳಿ ರಿಕ್ಷಾದಲ್ಲಿ ಹೋಗಿ ಹೋಟೆಲ್ ಶಿವ ಸಾಗರ್ ಹತ್ತಿರ ಇಳಿದು. ಅಲ್ಲಿಂದ ನಮ್ಮನ್ನು ನಡೆಸಿಕೊಂಡು, ‘ಹಳೆಯ ಸಾಹಿತಿಗಳಿಗೆಲ್ಲ, film makers ಗಳಿಗೆಲ್ಲ ಅಚ್ಚು ಮೆಚ್ಚಿನ ತಾಣ ಅಂತ ವಿವರಿಸ್ತಾ, ಅಲ್ಲಿ ಭೇಟಿ ನೀಡುತಿದ್ದ ಎಲ್ಲ ಸಾಹಿತಿಗಳ ಹೆಸರನ್ನು ಪಟ ಪಟನೆ ಹೇಳುತ್ತಾ ಹೋದ್ರು. ಅಲ್ಲಿನ ಹೂವಿನ ಮಾರುಕಟ್ಟೆ ನನಗೆ ತುಂಬಾ ಇಷ್ಟವಾಯ್ತು. ತರಹ ತರಹದ ಆಕಾರದಲ್ಲಿ ಕಟ್ಟಿದ ಹೂ ಮಾಲೆ, ವಿವಿಧ ಜಾತಿಯ ಹೂಗಳು, ಅದನ್ನು ಕೊಳ್ಳುವ ಜನರು.ಬಹುಶ: ಅಲ್ಲೆಲ್ಲೋ ದೇವಸ್ಥಾನವಿದೆಯೋ ಎನೋ, ಗೊತ್ತಾಗಲಿಲ್ಲ.

ಡಿ.ವಿ.ಜಿ ರೋಡಲ್ಲಿ ಗುಲಕನ್ನ್-ಮಸಾಲಾ ಸೋಡಾ ಅಂಗಡಿಗೂ ಕರೆದುಕೊಂಡು ಹೋದ್ರು. ಅಂಗಡಿಯವನ ಮಾತನ್ನು ನನ್ನ ಮಕ್ಕಳು ಮಿಮಿಕ್ರಿ ಮಾಡಿದಾಗ, ಕುಡಿಯುತ್ತಿರುವ ಸೋಡಾ ನೆತ್ತಿಗೆ ಹತ್ತಿ, ಇವರ ಕೆಂಗಣ್ಣಿಗೆ ಗುರಿಯಾಗಬೇಕಾಯ್ತು. ನಿಮಗೆ ನಗಲಿಕ್ಕೆ- ತಮಾಷೆ ಮಾಡಲಿಕ್ಕೆ ಹೊತ್ತು-ಗೊತ್ತು ಇಲ್ಲ ಅಂತ ಅಂದು ಬಿಟ್ರು. ಆ ಸೋಡ ಅಂಗಡಿಗಿಂತ ಮುನ್ನ, ದೇವರ ಸಾಮಾನು, ಕುಸುರಿ ಕೆತ್ತನೆಯ ಕೊಬ್ಬರಿ, ಸಕ್ಕರೆ ಅಚ್ಚುಗಳನ್ನು ಮಾರುವ ಸುಮಾರು ಅಂಗಡಿಗಳನ್ನು ನೋಡಿದೆ. ಅಲ್ಲಿ ಸಹ ಸಾಕಷ್ಟು ಜನಸಂದಣಿ ಇತ್ತು. ಅಂಗಡಿಯವನಿಗೆ ‘ಇಲ್ಲಿ ಯಾವಾಗಲೂ ಹೀಗೆ ರಶ್ ಆ’? ಅಂದಿದ್ದಕ್ಕೆ ಅವನು ‘ಅಮ್ಮ,- ಮದುವೆ, ಮುಂಜಿ, ಬಾಗಿನ, ಗಣೇಶ ಗೌರಿ ವೃತಕ್ಕೆ, ಏಳನೇ ತಿಂಗ ಳ ಶಾಸ್ತ್ರಕ್ಕೆ , ದೇವರ ಧೂಪ, ದೀಪ, ಬತ್ತಿ ಮುಂತಾದ ಸಾಮಾನೆಲ್ಲಾ ನಮ್ಮಲ್ಲಿ ದೊರೆಯುತ್ತೆ, ಅದಕ್ಕೆ ಇಲ್ಲಿ ಯವಾಗಲೂ ಜನ ಏನನ್ನಾದ್ರೂ ಕೊಂಡುಕೊಳ್ಳ್ತಾರೆ ಅಂತ ಹೇಳಿದ್ರು.

ಹಾಗೆ ನಡೆದುಕೊಂಡು ಹೋಗ್ತಾ ಇದ್ದಾಗ ನಮ್ಮೆದುರೇ ಅಂಕಿತ ಬುಕ್ಕ ಸ್ಟೋರ್ ಸಿಕ್ಕಿತು. ‘ಬಾ ನಿನಗೆ ನಿನ್ನ ಫ್ರೆಂಡ್ (ವಸುಧೇಂದ್ರರ ಹಂಪಿ ಎಕ್ಸ್‌ಪ್ರೆಸ್) ಪುಸ್ತಕ ಕೊಡಿಸ್ತೇನೆ ಅಂತ ಇವರು ನಮ್ಮನ್ನೆಲಾ ಅಂಗಡಿಗೆ ಕರೆದು ಕೊಂಡು ಹೋದ್ರು. ಪುಸ್ತಕ ದ ಅಂಗಡಿ ಹೊಕ್ಕಿದ್ದು ಅಂದ್ರೆ ಸಧಾರಣವಾಗಿ ನಾವೆಲ್ಲಾ ಹೊರಗೆ ಬರುವುದು ಎರಡು ಗಂಟೆ ಮೇಲೆ. ಮಕ್ಕಳಿಬ್ಬರೂ ಕನಿಷ್ಠ ಪಕ್ಷ ಎರಡು ಕಾಮಿಕ್ ಬುಕ್ ಗಳನ್ನು ಓದಲೇ ಬೇಕು. ನನಗ್ಯಾಕೋ ಅಂಗಡಿ ತುಂಬಾ ಕ್ರಾಂಪ್ಡ (claustrophobic ) ಅನ್ನಿಸಿತು. ಅದಕ್ಕೆ ನಾನು ಮೆಟ್ಟಿಲ ಹತ್ತಿರ ಇದ್ದ ಪುಸ್ತಕದ ಮೇಲೆ ಕಣ್ಣೋಡಿಸ್ತಾ ಇದ್ದೆ. ಎರಡು ಹಂಪಿ ಎಕ್ಸ್‌ಪ್ರೆಸ್ ಪುಸ್ತಕಗಳು, ಜಯಂತ ಕಾಯ್ಕಿಣಿ ಕವಿತೆಗಳ ಪುಸ್ತಕ ‘ಶ್ರಾವಣ ಮಧ್ಯಾನ್ಹ-ನೀಲಿ ಮಳೆ’ ಪಕ್ಕದಲ್ಲಿಟ್ಟು, ಅಂಗಡಿಗೆ ಬಂದ ಇತರ ಜನರನ್ನು ಗಮನಿಸ್ತಾ ಇದ್ದೆ. ತುಂಬ ಜನ ಇದ್ದರು. ಜಾಸ್ತಿ ಯುವಕರೇ. ಖುಶಿಯಾಯ್ತು. ಜನರಲ್ಲಿ ಪುಸ್ತಕ ಓದುವ ಅಭ್ಯಾಸ ಇನ್ನೂ ಇದೆ ಅಂತ ಆಯ್ತು

ಆಗಲೇ ಗಂಟೆ ೮.೩೦ ಯಾಗಿತ್ತು. ಅವರೆನ್ನೆಲ್ಲಾ ಹೊರಡಿಸಿ, ರೋಟಿ ಘರ್ ನಲ್ಲಿ ಊಟ ಮಾಡಿದ್ವಿ. ಮತ್ತೆ ಮನೆಗೆ ಮರಳಲು, ನಮ್ಮ ಏರಿಯಾಗೆ ಬರಲು ಯಾವೊಬ್ಬ ರಿಕ್ಷಾದವನೂ ಒಪ್ಪಲಿಲ್ಲ. ಬೇರೆ ವಿಧಿಯಿಲ್ಲದೇ ಬಸ್ಸ್ ಗೆ ಕಾದು, ಅಂತು ಇಂತು ಬಸ್ಸು ಬಂದು, ಅದರಲ್ಲಿ ಕುಳಿತು ಕೊಳ್ಳಲು ಜಾಗ ಸಿಕ್ಕಾಗ ನೆಮ್ಮದಿ. ಯಾಕೆಂದ್ರೆ ಪುಸ್ತಕ ಖರಿದಿ ಜೋರಾಗಿ, ಬ್ಯಾಗ್ ತುಂಬಾ ವಜ್ಜೆ heavy ಆಗಿತ್ತು. ಕಿಟಕಿ ಬಾಗಿಲು ತೆಗೆದು, ನನ್ನ ದೊಡ್ಡಮಗಳಿಗೆ ಆ ಜಾಗ ಬಿಟ್ಟು ಕೊಟ್ಟು ನಾನು ಪಕ್ಕದಲ್ಲಿ ಕುಳಿತುಕೊಂಡೆ.

ಬಸ್ಸ್ ಹತ್ತುವಾಗಲೇ ಖಾಲಿ ಇರುವ ಸೀಟ್ ನ ಹಿಂಬದಿ ಒಂದು ಪುಟ್ಟ ಪಾಪು ನ ನೋಡಿದ್ದೆ. ಸರಿ , ಕುಳಿತು ಎರಡು ನಿಮಿಷದ ಮೇಲೆ ತಲೆ ಮೇಲೆ ಪುಟ್ಟ ಕೈ ಯಿಂದ ತಬಲಾ ಬಾರಿಸಿದ ಹಾಗೆ ಅನ್ನಿಸ್ತು. ನಾನು ತಿರುಗಿ ನೋಡಲಿಲ್ಲ. ಹಾಗೇ ಮೂರು ನಾಲ್ಕು ಬಾರಿ ಆಯ್ತು. ಬಹುಶ: ನನ್ನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಿದು ಮಗುವಿಗೆ ಆಶ್ಚರ್ಯ ವಾಗಿರಬಹುದು. ನಿಧಾನವಾಗಿ ಪುಟ್ಟ ಕೈ ನಿಂದ ಸರಳು ಹಿಡಿದುಕೊಂಡು ಮುಖ ನನ್ನ ಬಳಿಗೆ ತಂದಿತು. ನಾನು ಮಗುವನ್ನು ನೋಡಿ, ತಟ್ಟಂತ ನಾಲಿಗೆ ಹೊರಚಾಚಿದಾಗ, ಮೊದಲಿಗೆ ಬೆಚ್ಚಿ ಆಮೇಲೆ ತಕ್ಷಣ ಅದು ಗಟ್ಟಿ ನಗಲು ಶುರು ಮಾಡಿತು. ಹಲ್ಲಿಲ್ಲದ ಬೊಚ್ಚು ಬಾಯಿಯ, ಜೊಲ್ಲು ಸುರಿಸುತ್ತಾ ನಕ್ಕಿದ್ದು ತುಂಬಾ ಖುಶಿ ಕೊಟ್ಟಿತು. ಮಗುವಿನ ಅಪ್ಪ ಅಮ್ಮ ಜಂಬದಿಂದ ಮಗುವಿನ ಬಾ ಲೀಲೆ ಹೇಳಲು ಮುಂದಾದರು. ಮಗುವಿನ ಹೆಸರು ಶ್ರೀ ರಾಮ ಚಂದ್ರ. ೧೧ ತಿಂಗಳು ವಯಸ್ಸು, ನೋಡಲಿಕ್ಕೆ ದುಂಡಗಿತ್ತು, ಮುದ್ದಾಗಿತ್ತು. ಸುಮಾರು ಹೊತ್ತು ಆಡ್ತಾ , ಒಂದು ಅರ್ಧಾ ಲೀಟರ್ ಜೊಲ್ಲು ಸುರಿದಿರಬೇಕು. ಆವಾಗಾವಾಗ ನನ್ನ ವೈಲ್ ನಿಂದ ಅದರ ಬಾಯಿ ಒರೆಸುತ್ತಾ ಇದ್ದೆ. ಯಾವುದೋ ಒಂದು ದೇವರನಾಮ (ಪವಮಾನ) ‘ಆಆಆಆsssssss ಅದರ ಬಾಲ ಭಾಷೆಯಿಂದ’ ಮಗುವಿನ ತಂದೆತಾಯಿ ಹಾಡಿಸಿದ್ರು. ಮತ್ತು ಅವರು ಇಳಿಯುವ ಸ್ಟಾಪ್ ಬಂತು. ಮಗುವಿಗೆ ದುಂಡಗಿನ ಕಪ್ಪು ಬಟ್ಟು ಇಟ್ಟಿದ್ರೂ ನಾನು ದೃಷ್ಟಿಯಾಗದಂತೆ ನನ್ನ ಬೆರಳಿನಿಂದ ನೆಟಿಕೆ ಮುರಿದು, ಮಗುವನ್ನು ಅದರ ಪೋಷಕರ ಬಳಿಗೆ ಕಳಿಸಿದೆ.

ಎಷ್ಟು ಎಂಜಾಯ್ ಮಾಡಿದೆ ಆ ದಿನ.

October 12, 2009

ರಾಗಿ-ಗೋದಿ ಹಿಟ್ಟಿನ ದೋಸೆ


ರಾಗಿ-ಗೋದಿ ದೋಸೆ

ಬೇಕಾಗುವ ಪದಾರ್ಥ

1 ಕಪ್ ರಾಗಿ ಹಿಟ್ಟು

1 ಕಪ್ ಗೋದಿ ಹಿಟ್ಟು

ಸಣ್ಣಗೆ ಕತ್ತರಿಸಿದ ಹಸಿ ಮೆಣಸು, ನೀರುಳ್ಳಿ, ಕೊತ್ತಂಬರಿ ಸೊಪ್ಪು, ತಾಜಾ ತುರಿದ ಕಾಯಿ, ತುರಿದ ಕ್ಯಾರೆಟ್, ಉಪ್ಪು, ಚಿಟಿಕೆ ಸಕ್ಕರೆ, 1 ಕಪ್ ಮೊಸರು


ಮಾಡುವ ವಿಧಾನ:
ಹಿಂದಿನ ದಿನ ರಾತ್ರಿ ರಾಗಿ ಹಿಟ್ಟು ,ಗೋದಿ ಹಿಟ್ಟನ್ನು ನೀರು ಹಾಕಿ ಗಂಟಾಗದಂತೆ ಪಾತ್ರೆಯಲ್ಲಿ ಮಿಕ್ಸ್ ಮಾಡಿ ತೆಳ್ಳಗೆ ಮಾಡಿಡಿ. ಮರು ದಿನ ಮೇಲೆ ನಿಂತ ನೀರನ್ನು ನಿಧಾನವಾಗಿ ತೆಗೆದು ಚೆಲ್ಲಿ ಬಿಡಿ.ತಳದಲ್ಲಿರುವ ಹಿಟ್ಟಿಗೆ ಉಳಿದ ಎಲ್ಲ ಪದಾರ್ಥಗಳನ್ನು ಸೇರಿಸಿ, ಬೇಕಾದಲ್ಲಿ (ದೋಸೆ ಹದಕ್ಕೆ ತರಲು )ನೀರು ಹಾಕಿ, (dosa consistency).ಬಿಸಿ ಕಾವಲಿ ಮೇಲೆ ಹುಯ್ದು, ಎರಡು ಕಡೆ ಕೆಂಪಾಗುವಂತೆ ಬೇಯಿಸಿ.
ತುಪ್ಪ ಚಟ್ನಿ ಯೊಂದಿಗೆ- ಬಿಸಿ ಇದ್ದಾಗಲೇ ತಿನ್ನಿ ಸೂಪರ್!!!
tasty and healthy.

October 11, 2009

ಸಂಚಿಯಿಂದ ಇನ್ನೊಂದು ನೆನಪು


ಆಗ ನಾನು ಎರಡನೇಯ ತರಗತಿಯಲ್ಲಿದ್ದೆ. ಆ ದಿನಾ ನನ್ನ ಹುಟ್ಟಿದ ಹಬ್ಬ. ಕೆಂಪು- ಕೆನೆ ಬಣ್ಣದ ಕಸೂತಿ ಮಾಡಿದ ಪಾಕೀಜಾ (pakeezah) ಡ್ರೆಸ್ಸ್ ಹಾಕ್ಕೊಂಡಿದ್ದೆ. ಪಾಕೀಜಾ ಮೀನಾ ಕುಮಾರಿಯ ಕೊನೆಯ, ಹಿಟ್ ಚಿತ್ರ. ಅದರಲ್ಲಿ ಅವರು ಧರಿಸಿದ ಲಖನೌವಿ ಘಾಗ್ರ, ಚೋಲಿನೂ ಹಿಟ್ ಆಗಿತ್ತು.ನನ್ನ ಅಮ್ಮನೇ ನನಗೆ ಮುದ್ದಾದ ಬಟ್ಟೆಗಳನ್ನು ಹೊಲಿಯುತ್ತಿದ್ದರು. ಶಾಲೆಯಲ್ಲಿ ಚಾಕಲೇಟು ಹಂಚಿಯಾದ ಮೇಲೆ, ಇನ್ನೇನು ಪಠ್ಯ ಪುಸ್ತಕ ತೆರೆಯುತ್ತಿದ್ದಂತೆ, ಏನೋ ಗಲಾಟೆ ಶುರು ಆಗಿದೆಯಂತ ನಮ್ಮನ್ನು ಶಾಲೆಯಿಂದ ಬೇಗ ಬೇಗ ಮನೆಗೆ ಹೋಗಲು ಒತ್ತಾಯಿಸಲಾಯಿತು. ಮನೆ ಶಾಲೆಯ ಬಳಿಯಲ್ಲೇನೋ ಇತ್ತು ನಿಜ. ಆದರೆ ಬೆಳಿಗ್ಗೆ ಕಾರಿನಲ್ಲಿ ಡ್ರೈವರ್ ಜತೆ ಬಂದು, ಸಾಯಂಕಾಲ ನನ್ನ ಆಜೋಬಾ (ಅಜ್ಜ - ಮರಾಠಿ ಸಂಬೋಧನೆ) ಮನೆಗೆ ಕರೆದು ಕೊಂಡು ಹೋಗುವುದು ರೂಢಿ, ಯಾಕೆಂದರೆ ನಡೆದುಕೊಂಡು ಹೋಗುವ ದಾರಿಯಲ್ಲಿ ನಾವು ರೈಲ್ವೆ ಹಳಿ ದಾಟಿಕೊಂಡು ಹೋಗಬೇಕಿತ್ತು.

ಸರಿ ಆ ದಿನ ನನ್ನಷ್ಟಕ್ಕೆ ನಾನೇ ಹೊರಟೆ. ನಾನು ಹಳಿ ಇನ್ನೇನು ದಾಟ ಬೇಕು ಎನ್ನುವಷ್ಟರಲ್ಲಿ ರೈಲು ಸಿಗ್ನಲ್ ಕೈ ಕೆಳಗಿಳಿಯಿತು. ನಾವು ಹಳಿದಾಟಬೇಕಾದ ಕಡೆಯಲ್ಲಿ ಆ ಸಿಗ್ನಲ್ ತಂತಿ ಇತ್ತು. ರೈಲು ಬರ್ತಾ ಇದೆ ಅನ್ನುವುದಕ್ಕೆ ಸೂಚನೆ. ನನ್ನ ಉದ್ದನೆಯ ಪಾಕೀಜಾ ಡ್ರೆಸ್, ತಂತಿಯಲ್ಲಿ ಹೇಗೋ ಸಿಕ್ಕಿಕೊಂಡಿತು. ನನ್ನ ಪುಟ ಕೈ ಗಳಿಂದ ಎಳೆದದ್ದೆ ಆಯ್ತು. ಕೊನೆಗೂ ಸುಸ್ತಾಗಿ ಸುಮ್ಮನಿದ್ದು ಬಿಟ್ಟೆ. ಸಾವು ಏನು ಅಂತ ಗೊತ್ತಿರಲಿಲ್ಲ ಆದರೂ ಎನೋ ಒಂದು ತೆರನಾದ, ಕೆಟ್ಟದ್ದು ಘಟಿಸಲಿದೆ ಎಂಬುದು ಮನವರಿಕೆ ಯಾಗಿ ರೈಲಿನ ದಡಬಡ ಸದ್ದಿಗಿಂತ ನನ್ನ ಎದೆ ಬಡಿತದ ಸದ್ದು ಜಾಸ್ತಿಯಾಗಿತ್ತು.
ರೈಲು ಇನ್ನೇನೂ ಹತ್ತಿರವಾಗಲಿದ್ದಾಗ, ಬಿಳಿ ಜುಬ್ಬಾ-ಪೈಜಾಮ, ಗಾಂಧಿ ಟೋಪಿ ಹಾಕಿ ಕೊಂಡಿದ್ದ ಸುಮಾರು ನನ್ನ ಅಜ್ಜನ ವಯಸ್ಸಿನವರು, ನನ್ನ ಲಂಗವನ್ನು ತಂತಿಯಿಂದ ಬಿಡಿಸಿ ಬೇಗ ಬೇಗನೆ ನನ್ನ ಕೈಗಳನ್ನು ಹಿಡಿದು ರೈಲಿನ ಹಳಿಯಿಂದ ದೂರ ಕರೆದುಕೊಂಡು ಹೋಗಿ ನಿಲ್ಲಿಸಿದರು. ರೈಲು ಹೋಗಿಯಾದ ಮೇಲೆ ನನ್ನನ್ನು ಹಳಿ ದಾಟಿಸಿ ’ಪೋರ್ ಆತಾ ಘರಿ ಜಾಶಿಲ್ ಕಾಯ” (ಮಗು ಈಗ ಮನೆಗೆ ಹೋಗ್ತಿಯಾ) ಅಂತ ಪ್ರಿತಿಯಿಂದ ತಲೆ ನೇವರಿಸಿ ಕೇಳಿದರು. ನಾನಂತು ಧನ್ಯವಾದ ಕೂಡ ಹೇಳದೆ ಬೇಗ ಬೇಗ ಮನೆಗೆ ನಡೆದು ಬಿಟ್ಟೆ.

ಈ ಘಟನೆ ನಡೆದು ಎಷ್ಟೊಂದು ವರ್ಷಗಳಾಗಿವೆ. ಆದರೂ ಅವರ ಚಹರೇ ಈಗಲೂ ಸ್ಪಷ್ಟವಾಗಿ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಯಾವುದೇ ಕಾರಣಕ್ಕೆ ಖುಷಿಯಾದಾಗ ನಾನು ನೆನೆಸುವುದು ಅವರನ್ನು. ಆ ದಿನ ಅವರು ಹಾಗೆ ಬರದೆ ಹೋಗಿದ್ದಿದ್ದರೆ would not have lived to tell this tale

:-)

October 5, 2009

Art for Hearts sake



























We use such illustrations in our training manuals/brochures/fliers targeting the rural folk
:-)


October 2, 2009

ಬಣ್ಣ ಬಣ್ಣದ ದಸರಾ ಮೆರವಣಿಗೆ

ನಾಳೆ ನಾವು ಮೈಸೂರಿಗೆ ಹೋಗ್ತಾ ಇದ್ದೇವೆ’ ಅಂದರು ಶ್ರೀಕಾಂತ್. ಹೇಳಿದ್ದು ಹೇಗಿತ್ತೆಂದರೆ ಇದರ ಬಗ್ಗೆ ದೂಸರಾ ಮಾತಿಲ್ಲ ಅನ್ನುವಂತಹ ಧಾಟಿ.


ಇದಕ್ಕೆ ಕಾರಣ ಇದೆ. ನಾವು ಬೆಂಗಳೂರಿಗೆ ಬಂದು ಆಗಲೇ ಒಂಬತ್ತು ವರ್ಷವಾಗಿದೆ. ಪ್ರತೀ ಸಲ ಶ್ರೀಕಾಂತ್ ದಸರೆಗೆ ಮೈಸೂರಿಗೆ ಹೋಗುವ ಅಂದರೆ ನಾನೇನಾದ್ರೂ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ. ನನಗೆ ಜನ ಜಂಗುಳಿಯಂದ್ರೆ ಆಗದು.


ಶ್ರೀಕಾಂತ್ ಮಿತ್ರರು ಮೈಸೂರನಲ್ಲಿ ನಾವು ವಿಜಯದಶಮಿಯ ದಿನ ಕಳೆಯಲು ಎಲ್ಲ ಏರ್ಪಾಡು ಮಾಡಿದ್ದರು. ನಾವು ಬೆಳಿಗ್ಗೆ 7.00 ಗಂಟೆಗೆ ಬೆಂಗಳೂರು ಬಿಡಿವುದೆಂದಾಯಿತು. ಮಗಳ ಫರ್ಮಾಯಿಶ್ ನಂತೆ ವಾಂಗೀ ಭಾತ್, ಮೊಸರನ್ನ ಬುತ್ತಿ ಕಟ್ಟಿಕೊಂಡು ಹೊರಟೆವು.


ನಾವು ಬಾಡಿಗೆಗೆ ಪಡೆದುಕೊಂಡ ಟ್ಯಾಕ್ಸಿ ಚಾಲಕ ತೀರ್ಥಹಳ್ಳಿಯವನು. ಶ್ರೀಕಾಂತ್ ಗಂತೂ ಇದು ಖುಶಿಯ ವಿಷಯ. ಊರಿನ ವಿಷಯ ಹರಟುತ್ತ ಸಾಗಿತು ನಮ್ಮ ಪ್ರವಾಸ.

ಮೊದಲು ಶ್ರೀರಂಗಪಟ್ಟಣಕ್ಕೆ ನಮ್ಮ ಪ್ರಯಾಣ.ದೇವಾಲಯದ ಹೊರಗಿನ ಗೋಪುರ ತುಂಬಾ ಆಕರ್ಷಕವಾಗಿದೆ. ಒಳಗೆ ಹೋಗುವ ಮುನ್ನ ’ಪ್ಲಾಸ್ಟಿಕ್ ಹಾಗೂ ಮೊಬೈಲ್ ನಿಷೇಧಿಸಿದೆ’ ಬೋರ್ಡ ನೋಡಿ ತುಂಬ ಖುಶಿಯಾಯಿತು. ದೇವಾಲಯದ ಒಳಗಡೆ ಫೋಟೊ ತೆಗೆಯುವುದು ನೀಷೇಧಿಸಿತ್ತು.ದ್ರಾವಿಡ/ವಿಜಯನಗರ- ಹೊಯ್ಸಳ ಶೈಲಿಯಲ್ಲಿ ಕಟ್ಟಿದ ದೇವಾಲಯ, ಸೂಕ್ಷ್ಮವಾದ ಕೆತ್ತನೆಯಿಂದ ತುಂಬಾ ಚಂದ ವಾಗಿದೆ. ನವರಂಗದಲ್ಲಿನ ಕಂಬಗಳು ನನಗೆ ತುಂಬ ಇಷ್ಟವಾಯಿತು. ಇಡೀ ದೇವಾಲಯ ಇಂತಹ ಕಂಬಗಳ ಮೇಲೆ ನಿಂತಿವೆ. ಪ್ರತಿ ಕಂಬದ ಕೆತ್ತನೆ ಕೆಲಸ ವೈವಿಧ್ಯಮಯವಾಗಿದೆ.-


ಏಳು ತಲೆಯ ಆದಿಶೇಷನ ಮೇಲೆ ಪವಡಿಸಿರುವ ಶ್ರೀ ರಂಗನಾಥಸ್ವಾಮಿಯ ಮೂರ್ತಿ ತುಂಬ ಆಕರ್ಷಕವಾಗಿದೆ. ಸಾಧಾರಣವಾಗಿ ಗರ್ಬಗುಡಿಯಲ್ಲಿ ವಿದ್ಯುದ್ದೀಪ ಇರುವುದಿಲ್ಲ. ಇಲ್ಲಿ ಲೈಟ್ ಹಾಕಿದ್ದರಿಂದ ಒಳಗಣ ದೇವರ ಮೂರ್ತಿ ಸ್ಪುಟವಾಗಿ ಕಾಣುತಿತ್ತು. ರಂಗನಾಥಸ್ವಾಮಿ ಪಾದದ ಬಳಿ ಲಕ್ಷ್ಮಿ ವಿಗ್ರಹವಿದೆ.


ಅಲ್ಲಿಂದ ನಾವು ಟಿಪ್ಪು ಸುಲ್ತಾನ್ ಕಟ್ಟಿಸಿದ ಕಾರಾಗ್ರಹವನ್ನು ನೋಡಿದೆವು. ಮತ್ತು ನಂತರದ ಭೇಟಿ ನಿಮಿಷಾಂಬ ದೇವಾಲಯಕ್ಕೆ. ಆದರೆ ಅಲ್ಲಿ ತುಂಬ ಗದ್ದಲ ಇದ್ದ ಕಾರಣ ನಾವು ಒಳಗೆ ಹೋಗಲಿಲ್ಲ. ಅಲ್ಲಿಯೆ ಒಂದು ಮಾರು ದೂರದಲ್ಲಿದ್ದ ಕೆರೆಯ ಬಳಿಗೆ ತೆರಳಿ ನಾವು ಕಟ್ಟಿ ತಂದಿರುವ ಬುತ್ತಿಯನ್ನು ತಿಂದೆವು. ಅಲ್ಲಿಂದ ದರಿಯಾ ದೌಲತ್ ಗೆ. ಅಲ್ಲೂ ಒಳ ಹೋಗುವ ಕ್ಯೂ ತುಂಬ ದೊಡ್ಡದಾಗಿತ್ತು.


ಸೊ ಅದನ್ನೂ ಬಿಟ್ಟು ಅಲ್ಲಿಂದ ನಾವು ಸಂಗಮ್ ಗೆ ತೆರಳಿದೆವು. ಅಲ್ಲಿ ಕೆಲವು ಬಂಗಾಲಿಗಳು ಸೇರಿ ದುರ್ಗೆಯ ವಿಸರ್ಜನೆಗೆ ತಯಾರಿ ನಡಿಸಿದ್ದರು. ತರುಣ ತರುಣಿಯರು ಹಣೆಯ ಮೇಲೆ ಗುಲಾಲನ್ನು ಢಾಳಾಗಿ ಲೇಪಿಸಿ ದೇವಿಯ ಸುತ್ತ ಧೋಲಕದ ತಾಳಕ್ಕೆಮನಮೋಹಕವಾಗಿ, ನರ್ತಿಸಿದರು. ಹೂವಿನಿಂದ ಅಲಂಕೃತ ದುರ್ಗೆಯ ಮೂರ್ತಿ ಕೂಡ ಸುಂದರವಾಗಿತ್ತು.









ಎರಡು ಗಂಟೆಗೆ ನಾವು ಬನ್ನಿ ಮಂಟಪ ರಸ್ತೆಯಲ್ಲಿರುವ ಸಿಂಡಿಕೇಟ್ ಬ್ಯಾಂಕ ಹತ್ತಿರ ಬಂದೆವು. ಮೈಸೂರಿನ ಮಿತ್ರರು ನಮಗಾಗಿ ಕಾದಿದ್ದರು. ನಾನು ಮಗಳು ಮೆಟ್ಟಿಲ ಮೇಲೆ ಪವಡಿಸಿದೆವು. ಶ್ರೀಕಾಂತ್ ಗೆ ರಾಜಯೋಗ, ಕುರ್ಚಿ ಸಿಕ್ಕಿತು.

ಮೆರವಣಿಗೆ ಇನ್ನೂ ಶುರುವಾಗದೆ ಇದ್ದುದರಿಂದ ಶ್ರೀಕಾಂತ್ ತೀರ್ಥಹಳ್ಳಿಯಲ್ಲಿ ಅವರ ಚಿಕ್ಕಂದಿನ ದಸರಾ ಕಾರ್ಯಕ್ರಮದ ಬಗ್ಗೆ ವಿವಿರಿಸಿದರು. ಅವರ ಅಕ್ಕಂದಿರು- ತಂಗಿಯಂದಿರು ಸೇರಿ ಗೊಂಬೆ ಹಬ್ಬ ಆಚರಿಸುತ್ತಿದ್ದರಂತೆ. ಸಾಯಂಕಾಲ ಗಂಡು ಮಕ್ಕಳನ್ನು ’ನೀವು ಹೊರಗೆ ಹೋಗಿ ಅಡ್ಡಾಡಿಕೊಂಡು ಬನ್ನಿ ಅಂದರೆ ಇವರು ಮಹಡಿ ಮೇಲೆ ಅಡಗಿ ಕೂರುತ್ತಿದ್ದರಂತೆ. ಹೆಂಗೆಳೆಯರು ಧಾವಣಿ/ಸೀರೆ ಉಟ್ಟಿಕೊಂಡು, ದಸರಾ ಗೊಂಬೆಗಳ ಎದುರು ಕೋಲಾಟ/ ಹಾಡು ಮುಂತಾದವುಗಳನ್ನು ನಡೆಸಿ ಚರಪು ತಿಂದು ಹೋಗುತ್ತಿದರಂತೆ. ಸುಂದರಿಯರಾದ ಹೆಣ್ಣು ಮಕ್ಕಳ ಮೇಲೆ ಈ ಗಂಡು ಮಕ್ಕಳ ಕಣ್ಣು ಇರುತ್ತಿತ್ತಂತೆ. ರಾತ್ರಿ ಆ ಹುಡುಗಿಯರ ನೃತ್ಯದ mimicry ಮಾಡಿ ಏಟು ತಿಂದಿದ್ದೂ ಹೇಳಿದರು.

ಬನ್ನಿ ವೃಕ್ಷದ ಬಗ್ಗೆ : ತೀರ್ಥಹಳ್ಳಿಯ ಕುಶಾವತಿಯಲ್ಲಿ ಒಂದು ಶಮೀ (ಬನ್ನಿ) ವೃಕ್ಷ ಇದೆ. ವಿಜಯದಶಮಿಯಂದು ಊರಿನ ಎಲ್ಲರೂ ಶಮಿ ಎಲೆಗಳನ್ನು ಅಲ್ಲಿಂದ ತಂದು ಒಬ್ಬ್ಬರಿಗೊಬ್ಬರು ಅದನ್ನು ವಿನಿಮಯ ಮಾಡುತ್ತ, ಕಿರಿಯರು ’ಪ್ರೀತಿ -ವಿಶ್ವಾಸ- ಅಭಿಮಾನಗಳು ಯಾವಾಗಲೂ ಇರುವಂತೆ ಕೇಳಿಕೊಳ್ಳುತ್ತ ಹಿರಿಯರ ಕಾಲಿಗೆ ಒರಗಿ ಆಶೀರ್ವಾದವನ್ನು ಬೇಡುವ ಕ್ರಮ ಈಗಲೂ ಇದೆ.
ಬ್ಯಾಂಕಿನ ಮೆಟ್ಟಿಲ ಮೇಲೆ ನನ್ನ ಪಕ್ಕದಲ್ಲಿ ಕೂತ ಮಹಿಳೆಯ ಹೆಸರು ಅಲಮೇಲಮ್ಮ. ಅವರು ಮೈಸೂರಿನವರಂತೆ.ಅವರಿಗೆ 65 ವರ್ಷ ವಯಸ್ಸಂತೆ. ಒಂದೂ ದಸರಾ ಮೆರವಣಿಗೆಯನ್ನು ಬಿಡದೆ ನೋಡಿದಂತವರು. ಕೆನ್ನೆಗೆ ಅರಿಶಿನ, ಹಾಗೂ ಹಣೆಯಲ್ಲಿನ ದೊಡ್ಡ ಕುಂಕುಮದ ಬೊಟ್ಟಿನಿಂದ ತುಂಬ ಲಕ್ಷಣವಾಗಿತ್ತು ಅವರ ಮುಖ. ಅವರು ನೋಡಿದ ಹಳೆಯ ದಸರಾ ವೈಭವಗಳನ್ನೆಲ್ಲ ತುಂಬ ರಸವತ್ತಾಗಿ ವರ್ಣಿಸಿದರು. ಹಾಗೂ ರಾಜರ ಕಾಲದಲ್ಲಿ ದಸರಾ ರೇಷನ್ ಅಂತನೂ ಕೊಡುತ್ತಿದ್ದರಂತೆ. ದಸರೆಗೆ ಬಂದ ಬಂಧು, ಮಿತ್ರ ರ ಸತ್ಕಾರದಲ್ಲಿ ಲೋಪವಾಗದಿರುವುದು ಹಾಗೂ ಅತೀಥೇಯರಿಗೂ ಇದರಿಂದ ಅನುಕೂಲವಾಗಲೀ ಎನ್ನುವ ಉದ್ದೇಶ.

ಅಷ್ಟರಲ್ಲಿ ನನ್ನ ಎದುರಿಗೆ ಕೂತಿದ್ದ ಪುಟ್ಟ ಬಾಲಕಿ ’aunty, iam seeing you and seeing you from that time. I think i seen you many times. do you sing in Wilsons orchestra?' ಅಂತ ಕೇಳಿದಳು. ಅದಕ್ಕೆ ನಾನು ಅವಳ ಗಲ್ಲ ನೇವರಿಸುತ್ತ ’no baby, i cannot sing to save the the life of me' ಅಂದಾಗ ಮುದ್ದಾಗಿ ಮುಗುಳ್ನಕ್ಕಳು.

ಎರಡು ಕಾಲು ಗಂಟೆಯ ಸುಮಾರಿಗೆ ಮೆರವಣಿಗೆ ಶುರುವಾಯಿತು. ಮೊದಲು ಆನೆ ಅಶ್ವಗಳು followed by ಒಂದೊಂದೆ ಸ್ಥಿರ ಚಿತ್ರಗಳು. ನಡು ನಡುವೆ ನಮ್ಮ ರಾಜ್ಯದ ವೈವಿದ್ಯಮಯ ಪರಂಪರೆಯನ್ನು ಸಂಕೇತಿಸುವ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರಗು ಕೊಟ್ಟವು. ಆಟ, ನೃತ್ಯ, ಕೋಲಾಟ, ಕವಾಯತು, ರೊಲರ್ ಸ್ಕೇಟ್ ಶೋ ಮುಂತಾದವುಗಳು ಒಂದರ ಹಿಂದೆ ಒಂದರಂತೆ ಬರುತ್ತಿದ್ದವು. ನಮ್ಮ ಅಕ್ಕ ಪಕ್ಕ ಸೇರಿದ ಜನರೆಲ್ಲ ಮರೆವಣಿಗೆಯಲ್ಲಿ ಪಾಲ್ಗೊಂಡವರನ್ನು ಚಪ್ಪಾಳೆ/ಉತ್ಸಾಹದ / ಹೋ ಎನ್ನುವ ಕೂಗುಗಳಿಂದ ಪ್ರೋತ್ಸಾಹಿಸುತಿತ್ತು.


ಕಡೆಗೆ ರಾಜಠೀವಿಯಲ್ಲಿ ಹೆಜ್ಜೆ ಹಾಕುತ್ತ ಬರುವ ಗಜರಾಜ ಬಲರಾಮ ಕಾಣಿಸಿದನು. 750 ಕೆ.ಜಿ ತೂಕದ ಚಾಮುಂಡಿ ವಿಗ್ರಹವನ್ನು ಅಂಬಾರಿಯಲ್ಲಿ ಹೊತ್ತ ಬಲರಾಮ ಹಾಗೂ ಅಕ್ಕ ಪಕ್ಕದಲ್ಲಿ ಬರುವ ಅಲಂಕೃತ ಹೆಣ್ಣಾನೆಗಳನ್ನು ನೋಡಲು ಎರಡು ಕಣ್ಣು ಸಾಲದಾಯಿತು. ನೆರೆದಿದ್ದ ಜನ ಸಮೂಹ ನಿಂತಲ್ಲಿ/ಕೂತಲ್ಲಿ ದೇವಿಗೆ ನಮಸ್ಕಾರ ಮಾಡುತ್ತಿದ್ದರು.

ಕ್ಯಾಮರ ನನ್ನ ಬಳಿ ಇತ್ತು. ಝೂಮ್ ನಲ್ಲಿ ಫೋಟೊ ತೇಗಿ ಬೇಕಾದ್ರೆ ಒಂದು ಕ್ಷಣ ನನ್ನ ಕಣ್ಣು, ಬಲರಾಮನ ಕಣ್ಣೊಂದಿಗೆ ಕೂಡಿತ್ತು. ಒಂದು ಕ್ಷಣ ಎಲ್ಲ ಸ್ಥಬ್ದವಾದಂತೆ, ಅಲ್ಲಿರುವುದು ನಾನು ಮತ್ತು ಬಲರಾಮ ಮಾತ್ರ ಅನ್ನಿಸಿ, ಅದರ ಕಣ್ಣಿನಲ್ಲಿರುವ ನೋವು ನನಗೆ ರವಾನಿಸಿದಂತಾಗಿ, ಸುಮ್ಮನೆ ಅದನ್ನೆ ನೋಡ್ತಾ ಕೂತೆ. ದೇವಿಯನ್ನು ಹೊತ್ತ ಅಂಬಾರಿ ಸ್ವಲ್ಪ ಬಲಕ್ಕೆ ವಾಲಿ ಬಲರಾಮನಿಗೆ ತುಂಬಾ ತೊಂದರೆಯಾಗಿದೆ ಅನ್ನಿಸಿತು. ತನ್ಮಯಳಾಗಿ ಹಾಗೇ ನೋಡ್ತಾ ಫೋಟೊ ತೆಗೆಯುವುದನ್ನು ಮರೆತುಹೋದೆ. ನನ್ನ ಮಗಳಿಗೂ ಹೀಗೆ ಅನುಭವ ಆಗಿ ತುಂಬ ಬೇಸರವಾಯಿತಂತೆ.
ಕಾರ್ ನಲ್ಲಿ ಹೋಗ್ತಾ ಬರ್ತಾ Lays potato wafers ನ ಎಲ್ಲ flavor ನ 20 ಪ್ಯಾಕೆಟ್ ಗಳನ್ನು ದ್ವಂಸ ಮಾಡಿದ್ದೆ. ಅದಕ್ಕೆ ಶ್ರೀಕಾಂತ್ ಮುಂದಿನ ವರ್ಷ ಬಲರಾಮನ ಬದಲಿಗೆ ನನ್ನನ್ನು ಕಳಿಸುತ್ತಾರಂತೆ. though i dont think it will be as spectacular :-)

ಇನ್ನೊಂದು ಬೇಜಾರಿನ ವಿಷಯವೆಂದರೆ ಜನರು ಅವರು ತಿಂದ,ಕುಳಿತುಕೊಳ್ಳಲು ತಂದ ಪ್ಲಾಸ್ಟಿಕ್ ಚೀಲ ಹಾಗೂ ವೃತ್ತಪತ್ರಿಕೆಗಳನ್ನು ಅಲ್ಲಲ್ಲೇ ಬಿಸುಟು ಹೋಗಿದ್ದು. ಜೋರಾಗಿ ಬೀಸಿದ ಗಾಳಿಗೆ ಅವೆಲ್ಲ ಎರ್ರಾ ಬಿರ್ರಿ ಯಾಗಿ ಹಾರಾಡ್ತಾ ಇದ್ದವು. ನಡೆದುಕೊಂಡು ಹೊರಟ ಜನರ ಮುಖಕ್ಕೆ ಬಡಿಯುತ್ತಿತ್ತು. ಹೋಟಲ್ ದಾಸ್ ಪ್ರಕಾಶ ದಲ್ಲಿ ಬಿಸಿ ಬಿಸಿ ಮಸಾಲೆ ದೋಸೆ, ಟೀ ಕುಡಿದು, ಕೃಷ್ಣರಾಜಸಾಗರ್ ಡ್ಯಾಮ್ ಗೆ ಭೇಟಿ ಕೊಟ್ಟು, ಪಂಜಿನ ಕವಾಯತನ್ನು ಮಿಸ್ ಮಾಡಿ ರಾತ್ರಿ 10.30 ಗೆ ಬೆಂಗಳೂರು ತಲುಪಿದೆವು.

at last ನಾವೂ ದಸರಾ ಮೆರವಣಿಗೆ ನೋಡಿದಂತಾಯಿತು.


ಚಿತ್ರಗಳನ್ನು ನಾನೇ ತೆಗೆದದ್ದು. ನಾಜೂಕಿನ ಕೆಲಸಗಳು ನನ್ನ ಕೈಲಾಗುವುದಿಲ್ಲವೆನ್ನುವುದಕ್ಕೆ ಸಾಕ್ಷಿ. ಹಾ ಹಾ ಹಾ