June 26, 2011

ಉಪ್ಪಿಟ್ಟು ಮತ್ತೊಂದಿಷ್ಟು potpourri



ನನ್ನ ’ladies only' ಪೋಸ್ಟ್ ನಲ್ಲಿ ನೈನಿತಾಲಗೆ ಹೋಗುತ್ತಿರುವುದನ್ನು ಬರೆದಿದ್ದೆನಷ್ಟೆ?? ಆದರೆ  ಮೂರು ಕಾರಣಗಳಿಂದ ಅದು ರದ್ದಾಯಿತು. ಒಂದು ತಂಗಿ ಹಾಗೂ ಮಕ್ಕಳ ಜೆಟ್ ಲ್ಯಾಗ್ ಹೋಗಿರಲಿಲ್ಲ, ನಿಹಾರಿಕ IIT-madras ನ entrance ಕ್ಲಿಯರ್ ಮಾಡದೆ ಇದ್ದರಿಂದ,ಅವಳ ಇನ್ನೊಂದು option ಆದ NMKRV ಕಾಲೇಜು ಸೇರಿದಳು. ಅದು ಜೂನ್ 6 ಕ್ಕೆ ಶುರು ಆಗುವುದರಲ್ಲಿತ್ತು ಮತ್ತು ಮಾಲವಿಕ 15 ನೇ ತಾರೀಕಿಗೆ ಕೆಲಸಕ್ಕೆ ಸೇರ ಬೇಕಾದವಳಿಗೆ 5 ನೇ ತಾರಿಕಿಗೆ ಜಾಯಿನ್ ಆಗಲು ತಿಳಿಸಿದ್ದರು. ಮಾಲವಿಕ ನಿಹಾರಿಕ ರನ್ನು ಬಿಟ್ಟು ನನಗೆ ತಂಗಿಗೆ ನೈನಿತಾಲ್ ಗೆ ಹೋಗುವ ಮನಸ್ಸು ಬರಲಿಲ್ಲ. ಹಾಗಾಗಿ ladies only ಗಳುweekend ನಲ್ಲಿ ಹತ್ತಿರದ ಕೆಲವು ಪ್ರೇಕ್ಷಣಿಯ ಸ್ಥಳಗಳು ಹಾಗು ವಂಡರ್ ಲಾ ಹಾಗೂ ಆದಷ್ಟು ಸುಮಾರು ಹೋಟಲ್ ಗಳಿಗೆ ಭೆಟ್ಟಿ  ನೀಡಿದೆವು. ಶ್ರೀಕಾಂತ ಹೈದರಾಬಾದ್, ಪಟ್ನಾ ಗೆ ಟೂರ್ ಹೋಗಿದ್ದರು. ತಂಗಿ ಆಗಷ್ಟ ಎರಡನೆ ವಾರ ವಾಪಸ್ ಯು ಎಸ್ ಗೆ ಹೋಗೋದು, ಮತ್ತು ನನ್ನ ತಮ್ಮ UAE ನಿಂದ ಜುಲೈ ಎರಡನೇ ವಾರ   ಬರುತ್ತಿದ್ದಾನೆ.ಇನ್ನಷ್ಟು ಚಿಕ್ಕ ಪುಟ್ಟ ಪ್ಲಾನ್ ಗಳಿವೆ ಸುತ್ತಾಡುವುದು. ಸೊ ಇನ್ನಷ್ಟು fun on its way :-)
*****************************************************************************************************************************************
ಇತ್ತೀಚೆಗೆ ನ್ಯು ಯಾರ್ಕ್ ನಲ್ಲಿ ನಡೆದ ಅಡಿಗೆ contest ನಲ್ಲಿ ಉಪ್ಪಿಟ್ಟಿಗೆ $ 100,000 ಬಂದಿದ್ದು ಓದಿದಿರಷ್ಟೆ.
ನಮ್ಮ ಮನೆಯಲ್ಲಿ ಶ್ರೀಕಾಂತ್ ಹಾಗೂ ಮಾಲವಿಕ ಉಪ್ಪಿಟ್ಟು ಪ್ರಿಯರು. ನನ್ನ ಆಸಕ್ತಿ ಅದನ್ನು ಮಾಡಿ ಬಡಿಸುವದರಲ್ಲಿ ಮಾತ್ರ ಸೀಮಿತ. ತಿಂದರೆ ತಿಂದೆ ಇಲ್ಲದಿದ್ದರೆ ಇಲ್ಲ. ಅದು ತಿನ್ನಲೂ ಬೇರೆ ಬೇರೆ style ಗಳಿವೆ. ನಮ್ಮ ಮನೆಯಲ್ಲಿ ಎಲ್ಲರೂ ಅಡಿಗೆ ಮನೆಯಲ್ಲಿ ವಿರಾಜಮಾನರಾದ ಮೇಲೆ ನೆ ನಾನು ಹುರಿದಿಟ್ಟ ಉಪ್ಪಿಟ್ಟಿಗೆ ನೀರು ಹಾಕಿ ರೆಡಿ ಮಾಡುವುದು. ಬಾಣಲೆ ಒಲೆಮೇಲಿಂದ ಇಳಿದ ಕೂಡಲೆ ಬಿಸಿ ಬಿಸಿಯಾದ ಉಪ್ಪಿಟ್ಟನ್ನು ತಿನ್ನಲು ಮಾಲವಿಕ ಇಷ್ಟ ಪಡುತ್ತಾಳೆ. ಕೆಲವೊಮ್ಮೆ ಹಬೆಯಾಡುವ ಉಪ್ಪಿಟ್ಟಿಗೆ ತುಪ್ಪಹಾಕಿ ತಿನ್ನುತ್ತಾಳೆ. ಇಲ್ಲದಿದ್ದಲಿ ಮಿಕ್ಸರ್(ಚೂಡಾ) ಜತೆ, ಇಲ್ಲದಿದ್ದರೆ ಕರಿಬೇವಿನ ಚಟ್ನೀ ಪುಡಿ ಮತ್ತು ಮೊಸರು. ನಾನು ಗೋಡಂಬಿ ಹಾಕಿದರೆ ಅದು deluxe ಅಥವ a-classಉಪ್ಪಿಟ್ಟ್ ಆಗಿ ರೂಪಾಂತರ ಗೊಳ್ಳುತ್ತೆ. ಶ್ರೀಕಾಂತ ಗೆ ಉಪ್ಪಿಟ್ಟಿನ ಜತೆ ಕಲಿಸಿದ ಅವಲಕ್ಕಿ ಇದ್ದರೆ ಸಂತೋಷ- ಅದನ್ನು ಸಿಮೆಂಟ್-ಕಾಂಕ್ರೀಟ್ ಅನ್ನುವ ಬಿರುದು ಬೇರೆ. ಉಪ್ಪಿಟ್ಟಿನ ಜತೆ ಅವಲಕ್ಕಿ ತಿಂದರೆ ಬೇಗ ಹಸಿವೆ ಯಾಗುವುದಿಲ್ಲ ಅಂತ ಅವರೇನೋ ಅನ್ನುತ್ತಾರೆ, ಆದರೆ ನನಗಂತೂ ಉಪ್ಪಿಟ್ಟು ಮಾಡಿದ ದಿನ ಜಾಸ್ತಿ ಹಸಿವು.  ಕೆಲವೊಮ್ಮ ಉಪ್ಪಿಟ್ಟಿಗೆ side dish ಆಗೆ ಪೈನ್ ಆಪಲ್ ಪುಡ್ಡಿಂಗ್ ಅಥ್ವಾ ಶಿರಾ  ಮಾಡುತ್ತೇನೆ. ಅಂತೂ ನಮ್ಮ ಮನೆಯಲ್ಲಿ ವಾರಕ್ಕೆರಡು ದಿನ ಉಪ್ಪಿಟ್ಟು ಕಟ್ಟಿಟ್ಟ ಬುತ್ತಿ :-)
ಅಮ್ಮ ಕೆಲ ಸಮಯದ ಹಿಂದೆ 6 ತಿಂಗಳ ಮಟ್ಟಿಗೆ ನನ್ನ ತಂಗಿಯ ಬಳಿಗೆ ಅಮೆರಿಕ ಕ್ಕೆ ಹೋಗಿದ್ದರು. ಆಗ ತಂದೆಯವರನ್ನು ನಾನು ಬೆಂಗಳೂರಿಗೆ ಮತ್ತು ನನ್ನ ತಮ್ಮ ಮುಂಬೈಗೆ ಕರೆದರೂ ಅವರು ಎಲ್ಲೂ ಬರಲು ಒಪ್ಪಲಿಲ್ಲ. ನಮ್ಮ ತಂದೆಗಂತು ಅಡಿಗೆ ಮನೆಗೆ ಹೋಗಿ ಗೊತ್ತೇ ಇರಲಿಲ್ಲ. ಅಮ್ಮ ಕೆಲದಿನಗಳಿಗಾಗುವಷ್ಟು ಪಲ್ಯ ಸಾಂಬಾರ ರೆಡಿ ಮಾಡಿ ಫ್ರಿಜ್ ನಲ್ಲಿ ಹಾಕಿಟ್ಟಿದ್ದರೂ ಅದು ಎಷ್ಟು ದಿನ ನಡೆಯುತ್ತೆ. ಅವರಿರೋದು ಬೆಳಗಾವಿಯಲ್ಲಿ.  ಯಾವಾಗ ನೋಡಿದರೂ ಪವರ್ ಕಟ್. ಮನೆಯ ರೂಮು ಗಳಿಗೆ ಇನ್ವರ್ಟರ್  ಸೌಲಭ್ಯವಿದ್ದರು,  ಫ್ರೀಜ್ ಗೆ , ಮಿಕ್ಸಿಗೆ ಅದನ್ನು ಅಳವಡಿಸಿರಲಿಲ್ಲ.  ಅಮ್ಮ ಅವರಿಗೆ ಕುಕ್ಕರ್ ನಲ್ಲಿ ಅನ್ನ ಬೇಯಿಸುವುದನ್ನು ಕಲಿಸಿ ಕೊಟ್ಟರು. ಮೈಕ್ರೋ ವೇವ್ ನಲ್ಲಿ ಅಡಿಗೆ ಬಿಸಿ ಮಾಡುವುದನ್ನು ಹೇಳಿ ಕೊಟ್ಟರು. ಬೆಳಿಗ್ಗೆ ಅಪ್ಪ ದಿನಾ ಬ್ರೆಡ್ ತಿನ್ನುತ್ತಿದ್ದರು. ಅಮ್ಮನ ಪಲ್ಯ ಸಾಂಬಾರ್ ಮುಗಿದ ಮೇಲೆ ಅಪ್ಪ ಅನ್ನ ಬೇಯಿಸಿ ಅದಕ್ಕೆ ಹಾಲು ಹಾಕ್ಕೊಂಡು ಉಣ್ಣುತ್ತಿದ್ದರು. ಮದ್ಯ ಮಧ್ಯ ಪುರುಸೊತ್ತು ಮಾಡಿಕೊಂಡು ನಾನು ಹೋಗಿ ಬರುತಿದ್ದೆ. ಆಗ ನನಗೆ ಉಪ್ಪಿಟ್ಟಿನ ರಡಿ ಮಿಕ್ಸ್ ಮಾಡಿ ಕೊಡುವ idea ಹೋಳೀತು. ಎಣ್ಣೆಯಲ್ಲಿ ಸಾಸಿವೆ, ಕರಿಬೇವು, ಸಣ್ಣಕ್ಕೆ ಕತ್ತರಿಸಿದ ಹಸಿಮೆಣಸಿನಕಾಯಿ, ಗೋಡಂಬಿ ಚೂರು ಒಗ್ಗರಣೆಗಿಟ್ಟು, ಅದರಲ್ಲಿ ಬಾಂಬೆರವೆಯನ್ನು ಹಾಕಿ, ಸಣ್ಣ ಉರಿ ಮೇಲೆ ಹುರಿದು, ಅದು ಗಮ್ಮೆನ್ನುವ ಪರಿಮಳ ಬೀರಿದಾಗ ಉಪ್ಪು ಸಕ್ಕರೆ ಕೊತ್ತಂಬರಿ ಸೊಪ್ಪು ಹಾಕಿ ಇನ್ನೂ ಸ್ವಲ್ಪ ಹೊತ್ತು ಬಾಣಲೆಯಲ್ಲಿ ಹುರಿದೆ. ಪೂರ್ತಿ ತಣ್ಣಗಾದ ಮೇಲೆ ಅದನ್ನು ಡಬ್ಬಿಯೊಳಗೆ ಹಾಕಿಟ್ಟು. ಅಪ್ಪನಿಗೆ ಒಂದು ಗ್ಲಾಸ್ ಉಪ್ಪಿಟ್ಟಿನ ರೆಡಿ ಮಿಕ್ಸ್ ಗೆ ಮೂರು ಗ್ಲಾಸ್ ನೀರು ಕುದಿಸಿ ಹಾಕಲು ಹೇಳಿದೆ. ಅಪ್ಪನಿಗಂತೂ ತುಂಬ ಖುಶಿ. ಎರಡು ದಿನಕ್ಕೊಂದು ಸಲ ಅದನ್ನೆ ಮಾಡಿ ತಿನ್ನುತ್ತಿದ್ದರು. ನನಗೆ ಬೇಜಾರು ಬಂತು. ಅಮ್ಮ ಸೀಸನ್ ನಲ್ಲಿ ಬಟಾಣಿ ಕಾಳನ್ನು (green peas) ನ್ನು freeze ಮಾಡಿಡುತ್ತಾರೆ. ಸ್ವಲ್ಪ ನೀರುಳ್ಳಿ ಟೊಮೇಟೊ, ತುರಿದ ಕ್ಯಾರೆಟ್ ಹಾಕಿ vegetable ಉಪ್ಪಿಟ್ಟು ಹೇಳಿಕೊಟ್ಟೆ. ಅದಾದ ಮೇಲೆ ರೆಡಿ ಮಿಕ್ಸ್ ಗೆ ತರಕಾರಿ ಚೂರು ಬೆರೆಸಿ, ಮೊಸರನ್ನು ಬೆರೆಸಿ, ಒಂಚೂರು ಸೋಡಾ ಪುಡಿ ಬೆರೆಸಿ ರವಾ ಇಡ್ಲಿ ಮಾಡಲು ಕಲಿಸಿದೆ. ಮುಂದೊಮ್ಮೆ ಹೋದಾಗ ಉದ್ದು ಮೈದಾ ದೋಸೆ ಹಿಟ್ಟು ಮಾಡಿ ಕೊಂಡು ಹೋದೆ. ಆ ದೋಸೆ ಬಗ್ಗೆ ಅಂತೂ ಅಪ್ಪ totally mesmerized. ಪೇಪರ್ ತರಹ ತೆಳುವಾದ crisp ದೋಸೆ ಹುಯ್ಯಬಹುದು. ಹಿಂಗಿನ ಚಟ್ನಿ ಇದ್ದರಂತೂ........ಅಪ್ಪ ನನಗೆ ಫೋನ್ ಮಾಡಿ ಅದನ್ನು ಮಾಡುವ ವಿಧಾನದ ಬಗ್ಗೆ ಕೇಳಿ ತಿಳಿದುಕೊಂಡರು. (ಅದು ನನ್ನ top secret recipe) ಅದರ ರೆಸಿಪಿ ಇಲ್ಲಿ ಬರೆಯಲ್ಲ. ಮುಂದೊಮ್ಮೆ ನಾನು ಮಾಲವಿಕ ಸೇರಿ ಒಂದು restaurant ತೆರೆಯುವವರಿದ್ದೇವೆ. ಆಗ ನೀವೆಲ್ಲ ಬಂದು ಆ ದೋಸೆಯನ್ನು ಸವಿಯಬಹುದು.) ನನ್ನ ಅಮ್ಮ ಮಾಡುವುದಕ್ಕಿಂತ ಚೆನ್ನಾಗಾಗುತ್ತದೆಂದು ಅಪ್ಪನ ಶಿಫಾರಸ್ಸು ಬೇರೆ ಇದೆ ಈ ದೋಸೆಗೆ).ಹೀಗೆ ಆರು ತಿಂಗಳು ಅಪ್ಪನದು ಮಿಕ್ಸ್ ಅನ್ಡ್ ಮ್ಯಾಚ್ ಅಡುಗೆ.
ಅಕ್ಕನ (ಮಾಲವಿಕ) ಕಾಲೇಜು ಮೇಟ್ ಗಳು ಹೆಚ್ಚಾಗಿ northies. ಗೌರವ್ ಮತ್ತು ಹರ್ಷ್ ,  ಒಂದು ಸಂಜೆ ಹಸಿವೆಯಾದಾಗ ಹೋಟೆಲ್ ಗೆ ಹೋಗಿ ಮೆನ್ಯು ನಲ್ಲಿದ್ದ ಚೌ ಚೌ ಭಾತ್ ಗೆ ಆರ್ಡರ್ ಕೊಟ್ಟರಂತೆ. ನಂತರ ಮಾಲವಿಕನಿಗೆ ಫೋನ್ ಮಾಡಿ ’ಕ್ಯಾ ಯಾರ್! ಹಮ್ ನೆ ಸಮಝಾ ಚೌ ಚೌ ಭಾತ್ ಯಾನೆ ಕೊಯಿ ಚೈನೀಸ್ ಡಿಶ್ ಮಿಲೆಗಾ ಖಾನೆ ಕೆ ಲಿಯೆ, ಯೆ ಕ್ಯಾ ಯೆ ತೊ ಉಪ್ಮಾ, ಸುಜಿ ಕಾ ಸ್ವೀಟ್ ಔರ್ ಮಿಕ್ಸರ್ ದಿಯಾ ಹೈ...
*****************************************************************************************************************************************
ತಂಗಿಗೆ ಮನೆಯಲ್ಲಿದ್ದಾಗಲೆಲ್ಲ ಅವಳ ಇಷ್ಟವಾದ ಅಪರೂಪದ ಅಡುಗೆಗಳನ್ನು ಮಾಡಿ ಕೊಡುತ್ತಿದ್ದೆ.
ಅದರಲ್ಲಿ ,ಮಾವಿನಹಣ್ಣಿನ ಹುಮ್ಮಣ (a konkani Recipe) ಒಂದು. ಅದರ ಚಿತ್ರ ಕೆಳಗಿದೆ
ಸಿಪ್ಪೆ ಸುಲಿದ 4-5 ಸಿಹಿ ಹುಳಿ ಜಾತಿಯ ಚಿಕ್ಕ ಮಾವಿನ ಹಣ್ಣು, ಹಸಿ ಮೆಣಸು, ಬೇಯಿಸಲು ನೀರು , ಉಪ್ಪು , ಬೆಲ್ಲ. ಚೆನ್ನಾಗಿ ಕುದಿ ಬಂದ ನಂತರ ಅರ್ಧ ಟೀ ಸ್ಪೂನ್ ಮೈದಾವನ್ನುಕಾಲು ಗ್ಲಾಸ್ ನೀರಿನಲ್ಲಿ ಕದಡಿ, ಗುಳ್ಳೆಗಳಾಗದಂತೆ ತಯಾರಿಸಿ, ಕುದಿಯುತ್ತಿರುವ ಮಿಶ್ರಣಕ್ಕೆ ಹಾಕಿ. ಇನ್ನೊಂದು ಕುದಿ ಬಂದ ನಂತರ ಒಲೆಯಿಂದ ಕೆಳಗಿಳಿಸಿ, ಉದ್ದು ಸಾಸಿವೆ,ಕರಿಬೇವು, ಹಿಂಗು, ಒಣ ಮೆಣಸಿನ ಒಗ್ಗರಣೆ ಕೊಡಿ. ಈಗಂತೂ ಅದರ ಸೀಸನ್ ಮುಗೀತು. ಚಿತ್ರ ನೋಡಿ ಯೆಂಜಾಯ್ ಮಾಡಿ  :-)


ವಂಡರ್ ಲಾ ಗೆ ಹೋದಾಗ ಒಂದು ದೊಡ್ಡ ಮುಸ್ಲಿಮ್ ಕುಟುಂಬ ಬಂದಿತ್ತು. ವೇವ್ ಪೂಲ್ ಅನ್ನುವ ಆಟ ಒಂದಿದೆ. ಅಲ್ಲಿ ಕೃತಕವಾಗಿ ಸಮುದ್ರ ದ ಅಲೆಗಳನ್ನು ನಿರ್ಮಿಸಲಾಗಿದೆ. ಎಲ್ಲ ಮುಸ್ಲಿಮ್ ಹೆಣ್ಣುಮಕ್ಕಳು, ಬುರ್ಖಾ ಹಾಕಿಕೊಂಡೆ enjoy ಮಾಡಿದರು. ನಾನು ನೀರಿಗಿಳಿದಿರಲಿಲ್ಲ. ಅವರನ್ನು ನೋಡಿ ನಾನೂ ಖುಶಿ ಪಟ್ಟೆ.

****************************************************************************************************************************************
ಶ್ರವಣಬೆಳಗೊಳ
ಕಷ್ಟಪಟ್ಟು ಹತ್ತುತ್ತಿರುವ ನಾನು

ಮೆಟ್ಟಿಲುಗಳನ್ನು ನೋಡಿ ನಾನಂತು ಹತ್ತಲು ತಯಾರಿರಲಿಲ್ಲ. ಶ್ರೀಕಾಂತ ಮತ್ತೆಲ್ಲರೂ ಗಾಳಿ ಹಾಕಿದ್ದೆ ಹಾಕಿದ್ದು. ’you can do it malathi’ . ಹತ್ತತ್ತೆ ಮೆಟ್ಟಿಲು ಹತ್ತು ಅಮೇಲೆ ರೆಸ್ಟ್, ಅಂಥೇಳಿ ಹತ್ತಿ ಗೊಮ್ಮಟ ಮೂರ್ತಿಯನ್ನು ನೋಡಿದೆ. ಇಳಿಯುವಾಗ ಮಾತ್ರ ಎರಡೆ ನಿಮಿಷಕ್ಕೆ ನಾನು ಕೆಳಗೆ. ಪುಟ್ಟ ಶ್ರೇಯ ತನ್ನ ಅಕ್ಕ ಹಾಗೂ ನಮ್ಮ ಮಾಲವಿಕನ ಜತೆ ಯಾರು ಮೊದಲು ಕೆಳಗೆ ಇಳಿಯುವುದು ಸ್ಪರ್ಧೆಯಲ್ಲಿ, ನನ್ನ ಕೈ ದರದರನೆ ಎಳೆದು ಇಳಿಸಿದಳು. ಇಳಿಯೋದೇನೋ ಮಾಡಿದೆ. ಆದರೆ ಕೆಳಗೆ ಕೂತ ಮೇಲೆ ಕಾಲು ತರತರನೆ ಕಂಪಿಸಿ ಹೊರಡಲು ಮುಷ್ಕರ ಬೀರಿದವು. ಈಗಲು ನನ್ನ ಬಲಗಾಲು ಹೆಜ್ಜೆ ಹಾಕುವಾಗ ಟಕಟಕ ಅನ್ನುತ್ತಿದೆ.

ಗೊಮ್ಮಟ ಮೂರ್ತಿ
ಅಲ್ಲಿಂದ ಬೇಲೂರು ಹಳೆಬೀಡು ಹೋಗಿದ್ದೆವು. ಅದರ ಬಗ್ಗೆ ಇನ್ನೊಮ್ಮೆ ಬರೆಬಹುದು ಅನ್ನಿಸುತ್ತೆ!!
***************************************************************************************************************************************
ಒಂದು ಗುಡ್ ನ್ಯೂಸ್ : ಪ್ಲ್ಯಾಸ್ಟಿಕ್ ಬಳಕೆ ನಿಜಕ್ಕೂ ಕಡಿಮೆಯಾಗಿದೆ. ತರಕಾರಿ ಅಂಗಡಿಯವರು ಪೇಪರ್ ಬ್ಯಾಗ್ ಗಳನ್ನು ಬಳಸುವಲ್ಲಿ ಬದ್ದರಾಗಿದ್ದಾರೆ. ಪ್ಲ್ಯಾಸ್ಟಿಕ್ ದರ ಜಾಸ್ತಿಯಾಗಿದೆ, ಅಲ್ಲದೆ ಬೇರೆ ಕಡಿಮೆ ದರದ ಪ್ಲ್ಯಾಸ್ಟಿಕ್ ಬಳಸಿದ ನಮ್ಮ ತರಕಾರಿ ಅಂಗಡಿಯವನಿಗೆ ಈಗಾಗಲೇ 1000 ರೂ ನ ದಂಡ ವಿಧಿಸಲಾಗಿದೆ. ನಾನು ಮೊದಲೆಲ್ಲ ಯಾಕ್ರಿ ಗಿರಾಕಿಗಳಿಗೆ ಪ್ಲ್ಯಾಸ್ಟಿಕ್ ಕೊಡ್ತೀರಿ, ಮನೆಯಿಂದ ಚೀಲ ತರಲಿಕ್ಕೆ ಹೇಳಿ ಅಂದರೆ, ಅವನು ಮ್ಯಾಡಂ ನಾನು ಹಾಗಂದ್ರೆ ನನಗೆ ವ್ಯಾಪಾರ ಆಗೋದು ಬೇಡ್ವಾ? ನಾನು ಕೋಡಲ್ಲ ಅಂದ್ರೆ ಅವರು ಬೇರೆ ಅಂಗಡಿಗೆ ಹೋಗ್ತಾರೆ ಅಷ್ಟೆ, ಅಂತ ನನಗೇ ಪ್ರಶ್ನೆ ಹಾಕುತ್ತಿದ್ದ. ಈಗ ನನಗೆ ’ನಿಮ್ಮ ಬಳಿ ಇರುವ ಚೀಲ ಎಲ್ಲಿ ಸಿಗುತ್ತೆ ಮ್ಯಾಡಂ? ನಾನು ಅದನ್ನೆ ಇಲ್ಲಿ ಮಾರುತ್ತೇನೆ ಅಂತಿದ್ದಾನೆ. ಅಂದ ಹಾಗೆ ನನ್ನ ಪುಟ್ಟ foldable ಬಟ್ಟೆ ಚೀಲ ಕೇವಲ 15 ರೂ. 5 ಕೆ.ಜಿಯಷ್ಟು ವಜನ್ ತಾಳುತ್ತದೆ. ಮುಂಬೈನಲ್ಲಿ ಸಿಗುತ್ತದೆ. ವಾಶ್ ಮಾಡಿದ್ರೆ ಬೇಗ ಒಣಗುತ್ತದೆ ಕೂಡ. ಈಗ ಆ ಬ್ಯಾಗ್ ಗೆ ತುಂಬ ಡಿಮಾಂಡ್ ಇದೆ. ಎಲ್ಲರೂ ನನಗೆ ಆ ತರಹ ಬ್ಯಾಗ್ ತಂದು ಕೊಡಿ ಮ್ಯಾಡಂ ಅನ್ನುತ್ತಾರೆ.
ನನಗೆ ವಸುಧೇಂದ್ರರ ಬಗ್ಗೆ ತುಂಬ ಹೆಮ್ಮೆ. ಅವರು ಪುಸ್ತಕ ಬಿಡುಗಡೆಯ ದಿನ ಅವರ ಪುಸ್ತಕಗಳನ್ನು ನೀಟಾಗಿ ಮುದ್ದಾದ, ಅವರ ಛಂದ ಪ್ರಕಾಶನದ ಲೋಗೊ ಇರುವ ಪೇಪರ್  ಬ್ಯಾಗ ನಲ್ಲಿ ಕೊಡುತ್ತಾರೆ. ಎಲ್ಲರೂ ನಮ್ಮ ಪರಿಸರ ಉಳಿಸುವುದಲ್ಲಿ ಚಿಕ್ಕ ಚಿಕ್ಕ ಪ್ರಯತ್ನ ಮಾಡಿದರೆ ನಮ್ಮ ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರವನ್ನು(environment) ಒದಗಿಸಬಹುದು. ಜನರು ಎಚ್ಚೆತ್ತುಕೊಳ್ಳಬೇಕಾದ ತುರ್ತು ಅವ್ಶ್ಯಕತೆ ಇದೆ. ಈಗಾಗಲೇ ಮಳೆ ಕಡಿಮೆಯಾಗಿದೆ. ನಾವು ಬೆಂಗಳೂರಿಗೆ ಬಂದ 11  ವರ್ಷದಲ್ಲಿ  ಮಳೆಯ ಪ್ರಮಾಣ ಕಡಿಮೆಯಾಗುತ್ತ ಬಂದಿದೆ. ಅಷ್ಟೆ ಅಲ್ಲ ಇತ್ತೀಚೆಗೆ ನಮಗೆ ಕುಡಿಯುವ ನೀರು ಎರಡು ದಿನಕ್ಕೊಮ್ಮೆ ಬರುತ್ತಿದೆ. ಇವೆಲ್ಲ ಆತಂಕಕಾರಿ ಬೆಳವಣಿಗೆಗಳು. ನಮ್ಮ ಪಕ್ಕದ ಮನೆಯವ environmental engineer ಅಂತೆ. ಆದರೆ ಅವರು ಬಳಸುವಷ್ಟು ಪ್ಲ್ಯಾಸ್ಟಿಕ್, ಅಥ್ವಾ ಕಾರು ತೊಳೆಯಲು ಬಳಸುವ ನೀರನ್ನು ಕಂಡು ಅಥವಾ ದೀಪವಾಳಿಗೆ ಅವನು ಸುಡುವ ಪಟಾಕಿಗಳನ್ನು ಕಂಡರೆ ನನಗೆ ನಿಜಕ್ಕೂ ಸೋಜಿಗ.
ಇಷ್ಟೆಲ್ಲದರ ನಡುವೆ ದೇಶಕಾಲ -25 ಓದಿ ಮುಗಿಸಿದೆ. V.S. Ramachandran ಅವರ ’ಟೆಲ್ ಟೇಲ್ ಬ್ರೈನ್’ ಇನ್ನು ಓದಲು ಶುರು ಮಾಡಬೇಕಷ್ಟೆ.
ಇಲ್ಲಿಗೆ ನನ್ನ potpourri ಪ್ರವರ ನಿಲ್ಲಿಸುತ್ತೇನೆ.

:-)

June 20, 2011

ತೀರ್ಥಹಳ್ಳಿ Reloaded

Road expansion work is going on full steam at Teerthahalli- Azad Road. Azad Road would be widened up to 12 meters on either sides from the middle. 

we are completely razing the structure to the ground.
A few pictures of our old house. Our house and general store is located very near to the koppa circle. 


The road will be widened up to the  yellow arrow mark. that means our shop, five rooms above it and portion of the steps leading to the attic -my favorite place of all times- will be demolished. Since it is a 100 year old house and not very strong we are razing the entire structure and building something new in that place. Meanwhile new home will be constructed in the farmland, 5 miles away from town.
When i married and came to teerthahalli 25 years a go it was nothing but a simple sleepy temple town, but with sudden shoot in prices of areca and then Vanilla quite a number of farmers became economically sound  leading to related commercial growth like banks etc and rise in advanced economic acitivity and hence a  floating population.


some materials in the attic
a few old trunks. found lot many black & white photographs
attic




An old basket i found in the attic. It used to hold coins for choukabaara!!

Of course it is saddening, but a good road is the necessity of the time since it connects Mangalore to Shimoga. why just during my last visit a bus rammed into the rear of an auto. though there were no injury to passengers..in the process it  held up the traffic for quite a bit.  my favorite place the attic will no more be there!!!!

Last week of May we spent some time at Teerthahalli. here are some pictures of the tunga river. The time is between 4.30 pm and 6.00 pm
the Ram mantapa is visible in the distance. When there is a heavy rainfall the the mantapa dissappears into the water. many a people come by to watch this spectacle.
the soft golden sands on the bank of the river
delightfully warm and toasty feel to the sand at 4.30 in the evening.
part of the bridge built by Sir M. Vishweshwariah, can be seen in this pic
Rock pathway
natural slide (jaarubanDe)
Kids love playing here
When Ram is in the vicinity can  Hanuman/anjaneya be far behind??This section of the river near the etching is considered holy!
A fine way to unravel after a hard days work

Sand castles anyone??!!may 31st end of school vacations for these tiny tots.
cool and warm at the same time. Kids cooling off 


and suddenly it is dusk
Time for the sun to say alvidaa


the lovely burst of colour at the fag end of the day

Some pictures of our farm follows:
our banana plants - 600 in all. thriving!!

The tender Areca flower covering.  makes for a nice hat
Makes for a nice plate too! Srikanth said he enjoyed when he was once served hot rice ,saar and ghee on this haaLe and it made my mouth water.
The lotus pond. but only white ones this time !!
The bamboo with flowers and tiny bird perched on its branch

the bamboo flowers
dawn
A few birds relaxing by the pond
Its just a log, not an alligator :-)

June 8, 2011

ನಿಮ್ಗೂ ಹಿಂಗೆ ಆಗೈತಾ??

ಕೆಲವೊಮ್ಮೆ ಇಂತಹ ಘಟನೆಗಳು ನಡೆಯುತ್ತವೆ ಅಲ್ಲವಾ?

ನಾವು ಬೆಂಗಳೂರಿಗೆ ಬಂದು 6 ತಿಂಗಳು ಆಗಿತ್ತಷ್ಟೆ. ನಮ್ಮ ಮೊದಲ ಪ್ರಾಜೆಕ್ಟ್, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ consultants ಆಗಿ. ಅದಕ್ಕೆ ಅವರು ನಮಗೆ ಕಛೇರಿ ನಡೆಸಲು ಜಯನಗರ 4th ಬ್ಲಾಕ್ ಶಾಪ್ಪಿಂಗ್ ಸಂಕೀರ್ಣದಲ್ಲಿ 7ನೇ ಮಹಡಿಯಲ್ಲಿ ಸ್ಥಳ ನೀಡಿದ್ದರು. . ನಮ್ಮ ಸೀನಿಯರ್ ಹೆಬ್ಬಾಳರ yezdi ಬೈಕ್ shopping complex ಪಾರ್ಕಿಂಗ್ ಸ್ಥಳದಿಂದ ಕಳುವಾಯಿತು. ಪಾಪ ಒಂದು ತಿಂಗಳು ಕಾದು, ಅದರ insurance ಹಣ ಬಂದ ಮೇಲೆ ಇನ್ನೊಂದು ಹೊಸ ಬೈಕ್ ’rajdoot; ಖರೀದಿ ಮಾಡಿದ್ರು

ಅದು ಎರಡೇ ದಿನಕ್ಕೆ ಅದೇ ಜಾಗದಿಂದ ಪುನ: ಕಳುವಾಯ್ತು. ಪೋಲಿಸ್ complaint ಕೊಟ್ರೆ ಪೋಲಿಸರು ಬೇಡದಿದ್ದ ಪ್ರಶ್ನೆಗಳನ್ನೆಲ್ಲ ಕೇಳಿ ಹೆಬ್ಬಾಳರು ಮನಸ್ಸಿಗೆ ತುಂಬ ಬೇಜಾರು ಮಾಡಿಕೊಂಡಿದ್ರು. ಯಾಕೋ ನನ್ನ ಬಾಯಿಯಿಂದ,tension ಮಾಡ್ಕೋಬೇಡಿ ಹೆಬ್ಬಾಳ ಅವರೆ, ಕಳೆದು ಹೋದ ಬೈಕ್ ಸಿಗುತ್ತೆ ಅಂದಿದ್ದೆ.:ಅದಕ್ಕೆ ಅವರು ಇನ್ನಷ್ಟು ಬೇಜಾರಿನಿಂದ, ಹಳೆ ಬೈಕೆ ಸಿಗಲಿಲ್ಲ, ಇನ್ನು ಹೊಸ ಬೈಕ್ ಸಿಗುತ್ತ? ಅಂದಿದ್ದರು.ನನ್ನ ಬಾಯಿಯಿಂದ ಹಾಗ್ಯಾಕೆ ಬಂತು ಅಂತ ನನಗೂ ಸ್ವಲ್ಪ ಇರುಸುಮುರುಸಾಯ್ತು.ಅದರೆ ಮರುದಿನ ಪೋಲಿಸ್ ಸ್ಟೇಶನ್ ನಿಂದ ಫೋನ್ ಬಂದಿತ್ತು. ಬೈಕ್ ಸಿಕ್ಕಿದೆ, formalities complete ಮಾಡಿ ಅದನ್ನು ತೆಗೊಂಡು ಹೋಗಿ ಅಂತ.

episode - 2

ಅನಂತ ವ್ರತದ ದಿನ. ಬೆಳಿಗ್ಗೆ ಉಪ್ಪಿಟ್ಟಿನ ಬ್ರೆಕ್ ಫಾಸ್ಟ್ ಆದಮೇಲೆ, ಮನೆ ಕೆಲಸ ಎಲ್ಲ ಬೇಗ ಮುಗಿಸಿದ್ದೆ. ಮಧ್ಯಾನ್ಹ ಮಲ್ಲೆಶ್ವರಂ ನಲ್ಲಿರುವ ಕಾಶೀ ಮಠದಲ್ಲಿ ಊಟ ಇತ್ತು, ಹಾಗೇ ಸಂಜೆ ಪರಿಚಯದವರೊಬ್ಬರ ಮದುವೆ ರಿಸೆಪ್ಷನ್ ಇತ್ತು, ಹಾಗಾಗಿ ನನಗೆ ಅಡಿಗೆ ಕೆಲಸ ಇರಲಿಲ್ಲ. ಅದಕ್ಕೆ showcase ನಾದ್ರೂ ಕ್ಲೀನ್ ಮಾಡುವ ಅಂತ world space ನಲ್ಲಿ ಹಾಡು ಹಾಕ್ಕೊಂಡು. ಹಿಂದಿ ಹಾಡಿನ ಜತೆ ನಾನು ಗುಣುಗುಣಿಸ್ತಾ ನನ್ನ ಕೆಲಸ ಮಾಡ್ತಾ ಇದ್ದೆ. ಆಗ ಸೊಪ್ಪು ಮಾರುವವನು ಅಲ್ಲಿಂದ ಹೋಗ್ತಾ ಇದ್ದ. ಮಕ್ಕಳಿಗೆ ರಜೆ ಇತ್ತು.ಅವರು ಒಳಗಡೆ ಏನೋ ಮಾಡ್ತಾ ಇದ್ದರು. ಶ್ರೀಕಾಂತ್ ಜ್ಝೂಲಾ ಮೇಲೆ ಕೂತು ಪೇಪರ್ ಓದ್ತಾ ಇದ್ದರು. ಆ ಸೊಪ್ಪು ಮಾರುವವನ ಹತ್ತಿರ ನಾವು ಯಾವತ್ತೂ ಸೊಪ್ಪು ತೆಗೊಂಡಿರಲಿಲ್ಲ, ಯಾಕಂದ್ರೆ ನಮ್ಮನೆ ತರಕಾರಿ ಡಿಪಾರ್ಟಮೆಂಟ್ ಶ್ರೀಕಾಂತ್ ದ್ದು. ಅವರು ಬೆಳಿಗ್ಗೆ ಬೆಳಿಗ್ಗೆ ಶಂಕರನಗರ-APMC ಯಾರ್ಡ್ ನ ತರಕಾರಿ ಮಾರುಕಟ್ಟೆಯಿಂದ ಎರಡು ಮೂರು ದಿನಕ್ಕೊಂದು ಸಲ ವಾಕ್ ಹೋಗುವ ನೆಪದಲ್ಲಿ ತರಕಾರಿ ತರುತ್ತಾರೆ.

ಸೊಪ್ಪು ಮಾರುವವ ಅಜ್ಜನಿಗೆ ತುಂಬ ವಯಸ್ಸಾಗಿತ್ತು, ಸ್ವಲ್ಪ ಮುಂಗೋಪಿ ಕೂಡ. ಮನೆ ಮುಂದೆ ನಿಂತು, ಸರ್, ’ನಗ್ತಾ ಇರ್ತಾರಲ್ಲವಾ ಆ ಹೆಣ್ಣು ಮಗಳನ್ನ ಕರೀರಿ ಸರ್ ಅಂದ. ಹೊರಗಿನ ರೂಮ್ ನಲ್ಲಿರುವ ನನಗೆ ಕೇಳಿಸಿ ನಾನು ನಿಹಾನ್ನ ಕೂಗಿದೆ. ಯಾಕಂದ್ರೆ ಅವಳು ನಮ್ಮ ಏರಿಯಾನಲ್ಲೆಲ್ಲ ever smiling ಹುಡುಗಿ ಅಂತ famous. ನಿಹಾ ಹೊರಗಡೆ ಬಂದ್ಲು. ಅದಕ್ಕೆ ಅಜ್ಜ ಇವರಲ್ಲ, ಇನ್ನೊಬ್ಬರು ಅಂದ್ರು. ನನಗೆ ಆಶ್ಚರ್ಯ ನಾನು - ಅಕ್ಕ (ಮಾಲವಿಕ) ಮನೆಯಲ್ಲಿ ಜೋಕ್ಸ್ ಎಲ್ಲ ಮಾಡಿ ನಗ್ತಿರ್ತೇವೆ, ಆದರೆ ಮನೆ ಹೊರಗಡೆ ಘನ ಗಾಂಭೀರ್ಯ. :-) ಆದರೂ ಮಾಲವಿಕಳನ್ನು ಕರೆದೆ. ಇವರೂ ಅಲ್ಲ ಅಂದು ಬಿಟ್ಟ ಅಜ್ಜ. ನಾನೇ ಎನು ವಿಷಯ ಅಂತ ಕೇಳಲು ಹೋದ್ರೆ, ನನ್ನ ಮುಖ ನೋಡಿದ್ದೆ ಅಳಲಿಕ್ಕೆ ಶುರು ಮಾಡ್ಕೊಂಡು ಬಿಟ್ರು.ನನಗಂತೂ ಆ ಹಿರಿಯ ಜೀವ ಅಳುವುದು ನೋಡಿ ಒಂತರಹ ಆಯ್ತು.

"ಏನಾಯ್ತು ಅಜ್ಜ’?? ಅಂತ ಕೇಳಿದೆ.

’ನನ್ನ ಮಗಳಿಗೆ ಜೋರು ಹುಷಾರಿಲ್ಲ ಕಣಮ್ಮ, ಅಸ್ಪತ್ರೆಗೆ ಸೇರಿಸವ್ರೆ’ ನನಗೆ ಒಬ್ಬಳೆ ಮಗಳು ಕಣಮ್ಮ’

’ನಾನು- ದುಡ್ಡು ಗಿಡ್ಡು ಬೇಕಾಗಿತ್ತ ಅಜ್ಜ’??

ಇಲ್ಲ ನಿಮ್ಮ ಮುಖ ನೋಡಿ ಹೋಗೋಣ ಅಂತ ಬಂದೆ. ಈಗ ಸಮಾಧಾನ ಆಯ್ತು ಅಂತ ಹೊರಟೆ ಬಿಟ್ಟ ಅಜ್ಜ.

ಶ್ರೀಕಾಂತ್ ನಾನು ಮುಖ ಮುಖ ನೋಡ್ಕೊಂಡ್ವಿ.

ಶ್ರೀಕಾಂತ : ’ಏನೋ ಪ್ಲಾನ್ ಇದೆ ಅಜ್ಜಂದು’ ಇಲ್ಲದಿದ್ದರೆ ಹಾಗೆಲ್ಲ ಯಾರು ಅನ್ನಲ್ಲ ಅಂದ್ರು. ನನಗೂ ಸ್ವಲ್ಪ ವಿಚಿತ್ರ ಅನ್ನಿಸಿತ್ತು.

ಅದಾದ ಎರಡು ದಿನ ಬಿಟ್ಟು ಬೆಳಿಗ್ಗೆ ಬಾಗಿಲ ಬಳಿ ಸದ್ದು ಆಯ್ತು.ಬಾಗಿಲು ತೆಗೆದು ನೋಡಿದ್ರೆ, ಸೊಪ್ಪು ಮಾರುವ ಅಜ್ಜ ಒಂದು ಪ್ಲಾಸ್ಟಿಕ್ ಬ್ಯಾಗ್ ತುಂಬ ಸೊಪ್ಪು ಬಾಗಿಲ ಬಳಿ ಇಟ್ಟು ಏನೂ ಹೇಳದೆ ಪರಾರಿಯಾಗುವ ಅಂದಾಜಿನಲ್ಲಿದ್ದರು. ನಾನು ಅವರನ್ನು ನಿಲ್ಲಿಸಿ’ಅಜ್ಜ, ಏನಿದೆಲ್ಲ’ ಅಂತ ಕೇಳಿದೆ.’ ’ಏನಿಲ್ಲ ಮಗಳಿಗೆ ಹುಷಾರಾಯ್ತು. ಸ್ವಲ್ಪ ಸೊಪ್ಪು, ಮೆಣಸಿನಕಾಯಿ, ನಿಂಬೆ ಹಣ್ಣಿವೆ ಅಷ್ಟೆ’

ನನಗೆ ಸರಿಯನಿಸಲ್ಲ, ನೀವು ದುಡ್ಡು ತೆಗೊಳ್ಳಿ ಇಲ್ಲದಿದ್ದರೆ ಸೊಪ್ಪು ವಾಪಸ್ ತೆಗೆದುಕೊಂಡು ಹೋಗಿ ಅಂದೆ. ಸುಮಾರು ೩೦-೪೦ ರೂ ಮೌಲ್ಯದ ತರಕಾರಿಯಿತ್ತು. ಹಾಗಾದ್ರೆ ಸೊಪ್ಪಿನ 10 ರೂ ಮಾತ್ರ ಕೊಡಿ, ಅಂತ ಪಟ್ಟು ಹಿಡಿದರು. ನಾನು 25 ರೂ ಕೊಟ್ರೂ ಅದರಿಂದ ಕೇವಲ ಹತ್ತೆ ರೂಪಾಯಿ ತೆಗೆದುಕೊಂಡು ಹೋದರು.

ನಾವು ಆ ಮನೆಯಲ್ಲಿ ಇರುವ ತನಕ ಅವನು ದಿನಾ ಸೊಪ್ಪು ಮಾರಲಿಕ್ಕೆ ಬರುತ್ತಿದ್ದ. ಆದರೂ ಆಮೇಲೆ ಯಾವತ್ತೂ ನಮ್ಮ ಮನೆಕಡೆ ಬರುತ್ತಿರಲಿಲ್ಲ. ಅಶ್ಚರ್ಯ ಅನಿಸುತ್ತೆ ಅಲ್ಲವಾ??

ನಿಮಗೂ ಇಂತಹ ಅನುಭವ ಆಗಿರಬಹುದಲ್ಲವಾ??

ಸಂಜೆ ತಮ್ಮ ಫೋನ್ ಮಾಡಿದಾಗ (ಅವನು ದಿನಾ ಫೋನ್ ಮಾಡ್ತಾನೆ) ಶ್ರೀಕಾಂತ್ - ಬೆಳಿಗ್ಗೆ ಹೀಗೆಲ್ಲ ಆಯ್ತು ಅಂದಾಗ ಅವನು ’ಮಾಲತಿಆನಂದಮಯಿ ಆಶ್ರಮ’ ಶುರುಮಾಡುವ. ಮಾಲತಿ ಹಣೆಗೆ ದೊಡ್ಡ ಬಟ್ಟು ಇಟ್ಕೊಂಡು ನಗುತ್ತ ಎಲ್ಲರನ್ನೂ ತಬ್ಬಿಕೊಂಡು ಮುತ್ತು ಕೊಡಲಿ, ದುಡ್ಡಿನ ಮ್ಯಾನೆಜ್ ಮೆಂಟ್ ಮಾತ್ರನಂದು ಅಂದ್ಬಿಟ್ಟ :-)

episode -3

ಆ ದಿನ ಪೆಟ್ರೊಲ್ ಹಾಕಿಸಿಕೊಳ್ಳಲು ದೊಡ್ಡ ರಶ್. ನಾನು ನಮ್ಮ ಮುಂದಿರುವ ಬೈಕ್ ಗಳನ್ನೆಲ್ಲ ಲೆಕ್ಕ ಮಾಡಿದಾಗ ನಮ್ಮದು 21 ನೇ ಸರದಿ. ನೋಡ್ತಾ ನೋಡ್ತಾ ಟೂ-ವ್ಹೀಲರ್ ಸಾಲು ತುಂಬ ಉದ್ದವಾಗಿ, ಪೆಟ್ರೋಲ್ ಬಂಕಿಂದ ಕಣ್ಮರೆಯಾಗಿ ಆಚೆಗೆಲ್ಲೋ ಹೋಯ್ತು.ಇನ್ನೊಂದು ಬದಿಯಲ್ಲಿ ಪೆಟ್ರೊಲ್ ತುಂಬಿಸಲು ರಿಕ್ಷಾಗಳು queueನಲ್ಲಿ ನಿಂತಿದ್ದವು. ರಸ್ತೆ ಬದಿ ನೋಡ್ತಾ ನಿಂತಾಗ ಒಂದು ಸ್ಕೂಟರ್ ನಮ್ಮನ್ನು ಹಾಯ್ದು ಹೋಯ್ತು. ಸ್ಕೂಟರ್ ಹಿಂಬದಿ ವಯಸ್ಸಾದ ಹೆಂಗಸು ಕೂತಿದ್ದರು. ಅವರ ಕೈನಲ್ಲಿ ಒಂದು transparent ಪ್ಲಾಸ್ಟಿಕ್ ಡಬ್ಬಿ ಇತ್ತು. ಆ ಡಬ್ಬಿಯಲ್ಲಿ ಕೆಂಡಸಂಪಿಗೆ ಹೂಗಳು ಇದ್ದವು. ನನಗೆ ಕೆಂಡಸಂಪಿಗೆ ಹೂ ಅಂದರೆ ತುಂಬ ಇಷ್ಟ. ಶ್ರೀಕಾಂತ ಗೆ ತೋರಿಸುವಷ್ಟರಲ್ಲಿ ಆ ಸ್ಕೂಟರ್ ನಮ್ಮನ್ನು ಹಾದು ಹೋಗಿಯಾಗಿತ್ತು. ನಾನು ಕಣ್ಣು ಮುಚ್ಚಿ ಸ್ವಲ್ಪ flashback ಮೋಡ್ ಗೆ ಹೋದೆ. ಅಮ್ಮ ಅಂಧೇರಿ ಮಾರ್ಕೆಟ್ (ಮುಂಬೈ)ಗೆ ಹೋದಾಗಲೆಲ್ಲ ನನಗೋಸ್ಕರ ಕೆಂಡಸಂಪಿಗೆ ಹೂ ತರುತ್ತಿದ್ದರು. ಅದನ್ನು ನಾನು ತಲೆಗೆ ಮುಡಿದುಕೊಳ್ಳುತ್ತಿರಲಿಲ್ಲ. ಅದು ಒಣಗಿದ ಮೇಲೆ ಅದನ್ನು ಪುಸ್ತಕದಲ್ಲಿಡುತ್ತಿದ್ದೆ. ಅಂಧೇರಿ ಮಾರ್ಕೆಟ್ ನಲ್ಲಿ ಬೆಳಗಿನ ಹೊತ್ತು ,ಅದು ಕೆಲವೊಮ್ಮೆ ಮಾತ್ರ ಸಿಗುತ್ತಿತ್ತು. ಸಿಕ್ಕಿದಾಗಲೆಲ್ಲ ಅಮ್ಮ ತರುತ್ತಿದ್ದರು. ಶ್ರೀಕಾಂತ ಗೆ ಹೇಳಿದೆ’ಎಷ್ಟು ವರ್ಷ ಆಗಿ ಹೋಯ್ತು ನಾನು ಕೆಂಡಸಂಪಿಗೆ ಸುವಾಸನೆ ನೋಡದೆ’ ಅಂತ ಅಷ್ಟರೊಳಗೆ ನನಗೆ ಆ ಹೆಂಗಸು ಕಂಡರು. ರಿಕ್ಷಾ, ಸ್ಕೂಟರ್ ರಶನಲ್ಲಿ , ಅಷ್ಟು ದೂರದಿಂದ ದಾರಿ ಮಾಡಿಕೊಂಡು ನನ್ನ ಬಳಿಗೆ ಬಂದು ಅವರ ಬಳಿಯಿದ್ದ ಡಬ್ಬಿ ಮುಚ್ಚಳ ತೆರೆದು, ’ತೆಗೊಳಮ್ಮ ಸ್ವಲ್ಪ ಹೂ’ ಅಂದು ಬಿಟ್ಟರು. ನಾನು ಎರಡು ಹೂ ತೆಗೊಂಡೆ. ಮತ್ತು ಅವರೇ ಮುಂದುವರೆಸಿದರು ’ನಮ್ಮ ಮನೆ ಮುಂದೆ ಕೆಂಡಸಂಪಿಗೆ ಮರ ಇದೆ. ಇವತ್ತು ಮಗನಿಗೆ ರಜೆ, ಅದಕ್ಕೆ ಅವನಿಂದ ಹೂ ಕೊಯ್ಯಿಸಿಕೊಂಡೆ. ಈಗ ಶಿವ ಮಂದಿರಕ್ಕೆ ಹೋಗುತ್ತಿದ್ದೇವೆ. ಪೆಟ್ರೋಲ್ ತುಂಬಿಸಲು ನಿಂತಿದ್ದಾನೆ ಅವನು.ಯಾಕೋ ನಿಮಗೆ ಹೂ ಕೊಡಬೇಕು ಅನ್ನಿಸಿತು’

ಶ್ರೀಕಾಂತ ರಾಯರು ಫುಲ್ tense. ಸ್ವಲ್ಪ ಹೊತ್ತು ಬಿಟ್ಟು ’ಈಗ ನಡೆದಿದ್ದು ನಿಜಾನಾ’? ಅಂತ ಕೇಳಿದರು. ನಾನು ಉತ್ತರವಾಗಿ ಹೂ ಗಳನ್ನು ಅವರ ಮೂಗಿಗೆ ಹಿಡಿದೆ.

ಮಜಾ ಅಲ್ಲವಾ??ನೀವು ಇದನ್ನು ಓದುವಷ್ಟರಲ್ಲಿ ನಾವೆಲ್ಲ ladies only ಗಳು wonder la ಗೆ ಹೋಗಿ ಗಮ್ಮತ್ತು ಮಾಡಿ ಬರ್ತೇವೆ!!!ಏನಂತೀರಾ?????

ನನ್ನ ತಂಗಿ ಅಮೇರಿಕದಿಂದ ಬಂದಿಳಿದಿದ್ದಾಳೆ. ಅವಳಿಗೆ ಇದನ್ನೆಲ್ಲ ಹೇಳ್ತಾ ಇದ್ದೆ. ಹಾಗೆ ನಿಮ್ಮ ಜತೆನೂ ಹಂಚಿ ಕೊಳ್ಳೋಣ ಅನಿಸಿತು. ಅದಕ್ಕೆ.........

:-)