April 30, 2025

Porgai

 ಇದು ನನ್ನ 700 ನೆ ಪೋಸ್ಟ್. ನನ್ನ ಮೊದಲ ಬರಹ ಪ್ರಕಟಿಸಿದವವರು ಶ್ಯಾಮಣ್ಣ aka ಶಾಮ್ ಸುಂದರ್ S K ಅವರ thatskannada. com ಜಾಲತಾಣದಲ್ಲಿ. ಅವರು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ಸವಿನೆನಪುಗಳೊಂದಿಗೆ ವಿದಾಯ ಹೇಳುತ್ತಾ...ಅವರು ಎಲ್ಲಿದ್ದಾರೋ ಅಲ್ಲಿರುವವರನ್ನೆಲ್ಲ ನಗೆಗಡಲಲ್ಲಿ ಮಿಯಿಸಲಿ ಎನ್ನುತ್ತಾ 🙏🙏

ಮೊನ್ನೆ ಶನಿವಾರ 'ಸಭಾ' ಎಂಬ ಚೆಂದದ ತಾಣದಲ್ಲಿ, ಸಿತ್ತಲಿಂಗಿ ಲಂಬಾಣಿ ಕಸೂತಿ ಬಗ್ಗೆ ಒಂದು exhibition ಇತ್ತು. ಅವರ ಜಾಲತಾಣಕ್ಕೆ ಭೇಟಿ ನೀಡಿ ಅಂದದ ಕಲಾಕೃತಿಯನ್ನು ನೋಡಿ ಕಣ್ತುಂಬಿಸಿ. ಸಾಧ್ಯವಿದ್ದಲ್ಲಿ ಖರೀದಿಸಿ ಅವರನ್ನು ಪ್ರೋತ್ಸಾಹಿಸಿ. 

ನಾನು ತೆಗೆದ ಕೆಲ ಚಿತ್ರಗಳು. ಅಲ್ಲಿ ಸಮಯ ಹೋಗಿದ್ದೆ ಗೊತ್ತಾಗಲಿಲ್ಲ.




ಸಭಾ ಕಲಾ ಮಂದಿರ, commercial street.  




ಸಿರಿಧಾನ್ಯದ ಕಸೂತಿ ನೋಡಿ!! ನನಗಂತೂ ತುಂಬಾ ಇಷ್ಟವಾಯಿತು. 

www.porgai. org ಅವರ ಜಾಲತಾಣದ ಕೊಂಡಿ. ಖಂಡಿತ ಆ ಪ್ರದೇಶಕ್ಕೆ ಒಂದು ಭೇಟಿ ನೀಡಲೇ ಬೇಕು !!

www.porgai.org


April 23, 2025

Old books


"My favorite pastime when visiting my mom's house is browsing through my late father's vast collection of old books. It's a treasure trove of Hindi classics, including works by poets like Maithili Sharan Gupt (author of Saket and Priyapravas), Tulsidas, and Harivansh Rai Bachchan. The Sanskrit texts like Mrichchhakatika and Meghadoot are equally fascinating. The book in the picture is 'Bangal Ka Kaal' by Harivansh Rai Bachchan, written in response to the Bengal famine. It's remarkable that this poignant collection has seen numerous reprints."

Harivansha Rai Bachchan is #amitabhbachchan's father and my father has had rapport with Ajitabh Bachchan,.Amitabh'ss brother,during his banking days 👍❤️




will get these books treated and bound at the book binding and restoration shop at bengaluru.

#worldbookday

April 21, 2025

ಚಟ್ನಿ/chutney


 ಅಮ್ಮನ ರೆಸಿಪಿ

ಹೀರೆ ಕಾಯಿ ಸಿಪ್ಪೆ ಚಟ್ನಿ
ತುಂಬಾ ಅಂದ್ರೆ ತುಂಬಾ ರುಚಿಯಾಗಿತ್ತು. ಇವತ್ತು ಬೆಳಿಗ್ಗೆ 'ಈ ಹೊಸ ರಿಸಿಪಿ ನಿನ್ನ ಬ್ಲಾಗ್ ಅಲ್ಲಿ ಹಾಕು' ಅಂದ್ರು. ಅದಕ್ಕೆ 🙂🙂
tender ಹೀರೆಕಾಯಿ ಸಿಪ್ಪೆ, ಬೆಳ್ಳುಳ್ಳಿ, ಜೀರಿಗೆ, ಉಪ್ಪು, ಬೆಲ್ಲ
ಸ್ವಲ್ಪ ಎಣ್ಣೆ ಬಿಸಿ ಮಾಡಿ. ಜೀರಿಗೆ ಸಿಡಿಸಿ, ಸಿಪ್ಪೆ ಹಾಕಿ ಬಿಸಿ ಮಾಡಿ, ಹಸಿ ಮೆಣಸಿನ ಕಾಯಿ ಹಾಕಿ ಎರಡು ನಿಮಿಷ ಕೈಯಾಡಿಸಿ. ಗ್ಯಾಸ್ ಆಫ್ ಮಾಡಿ. ಇದಕ್ಕೆ ಬೆಳ್ಳುಳ್ಳಿ ಬೆರೆಸಿ. ತಣ್ಣಗಾದ ಮೇಲೆ ಉಪ್ಪು, ಬೆಲ್ಲ ಸೇರಿಸಿ ಮಿಕ್ಸಿಯಲ್ಲಿ ಹಾಕಿ. ತುಂಬಾ ರುಚಿ ಎನಿಸಿ, ಬೆರಳು ತಿಂದು ಬಿಟ್ಟರೆ ನನ್ನನ್ನು blameಇಸ ಬೇಡಿ 😀😀

April 19, 2025

पॉट से पतीले तक

  


a simple no frills #home grown r#ed amaranth palya. heat oil. we use coconut oil. add crushed garlic and  red chilli flakes. add chopped greens(red ), salt (gokarna). simple  and tasty  and nutritious. hot rice, palya and dappa mosaru..a terrific combi 👍👌


ಹರಿವೆ ಸೊಪ್ಪಿನ simple ಪಲ್ಯ






April 18, 2025

ಇಬ್ಬರ ಹೆಂಡಿರ ಮುದ್ದಿನ ಗಂಡ






ಇದರ ಬಗ್ಗೆ ಬರಯಲೇ ಬೇಕೆನಿಸಿತು. ಅಮ್ಮನ ಮನೆಯ ಮುಂದೆ ಇವರ ಮನೆ. ಆಕೆ ಹೆಸರಾಂತ ಆಸ್ಪತ್ರೆಯಲ್ಲಿ ಸಹಾಯಕಿ. ಬೆಳಿಗ್ಗೆ 8 ಕ್ಕೆ ಮನೆ ಬಿಟ್ಟರೆ ಸಂಜೆ 6.30 ಗೆ ಮನೆಗೆ ವಾಪಸ್.
ಆಕೆಯ ಗಂಡನಿಗೆ ಇನ್ನೊಂದು ಸಂಸಾರ ಇದೆ. 3 ತಿಂಗಳು ಅಲ್ಲಿ ಮೂರು ತಿಂಗಳು ಇಲ್ಲಿ. ಆಕೆಗಿಂತ ವಯಸ್ಸಿನಲ್ಲಿ ತುಂಬಾ ಹಿರಿಯರು. ಆಗಲೇ ದೊಡ್ಡ ಮಕ್ಕಳಿದ್ದಾರೆ. ಈ ಮನೆಗೆ ಅವರನ್ನು ಬಿಡಲು ಎಲ್ಲರೂ ಬರುತ್ತಾರೆ. ಊಟ ತಿಂಡಿ ಟಿ.ವಿ ಅಂತ ಗೌಜು ಗಮ್ಮತ್ತು. ಎಲ್ಲರೂ ಖುಷಿಯಿಂದ ಇರುತ್ತಾರೆ ಆತನಿಗೆ ನಡೆಯಲು walker ಬೇಕು. ಆಕೆ ಕೆಲಸಕ್ಕೆ ಹೊರಟ ಮೇಲೆ, ಇವ walker ಮೇಲೆ ಸಣ್ಣ ವಾಕ್ ಹೋಗುತ್ತ ಅಲ್ಲಲ್ಲೇ rest stop. ಒಂದು ಸಣ್ಣ ಮನೆ. ಮೊದಲೆಲ್ಲ ನಾನು ಇಲ್ಲಿ ಬಂದು ಇದ್ದಾಗ, ಮಳೆಗಾಲದಲ್ಲಿ ಅವರ ಮನೆ ಒಳಗೆ ನೀರು ತುಂಬುತ್ತಿತ್ತು. ಒಂದು ಸಣ್ಣ ತಂಬಿಗೆಯಿಂದ ನೀರು ಬಸಿದು ಹಾಕಿ ಹೈರಾಣಾಗುತ್ತಿದ್ದರು ಆಕೆ. ಈಗ BBMP ವತಿಯಿಂದ ಚರಂಡಿ ರಿಪೇರಿ, ಕುಡಿಯುವ ನೀರಿನ ಸೌಲಭ್ಯ ದಿಂದ ಆಕೆಯ ಕೆಲ ಕಷ್ಟಗಳು ದೂರವಾಗಿವೆ.
ಒಂದೇ ಕುಟುಂಬ ನಿರ್ವಹಿಸುವ ಈ ಸಮಯದಲ್ಲಿ, ಎರಡು ಕುಟುಂಬಗಳನ್ನು ಸಂತೋಷದಿಂದ ನಿಭಾಯಿಸುವ ಆತ ನೆ great. ಏನಂತೀರಾ??? 🙂👍
ಮಕ್ಕಳ ಪ್ರಶ್ನೆ : ಅಮ್ಮ ಯಾರನ್ನೂ ಮಾತನಾಡಿಸದೆ ಅವರ ಬಗ್ಗೆ ಹೇಗೆ ತಿಳಿದುಕೊಳ್ಳುತ್ತೀಯಾ?  ಬೇರೆಯವರು ಮಾತನಾಡಿಕೊಳ್ಳುವುದು, ಆ ಮನೆಯವರ ಕೆಲ ಸಂಭಾಷಣೆ, ಅಲ್ಲಿಯ ಆಗು ಹೋಗು ಗಳನ್ನು ನೋಡುತ್ತಲೇ ಇವೆಲ್ಲ grasp ಮಾಡುತ್ತೇನೆ. 👍🙏
ಪಾರ್ಕ್ ನಲ್ಲಿ ವಾಕ್ ಮುಗಿಸಿ ಕೂತಾಗ ಇದನ್ನು ಬರೆದೆ.

April 13, 2025

ಮೊಳಕೆ ತಂದ ಹೆಸರು ಕಾಳು ಉಸ್ಲಿ

 


ಮೊಳಕೆ ಬಂದ ಹೆಸರು ಕಾಳನ್ನು ಉಪ್ಪು ಹಾಕಿ ಬೇಯಿಸಿ. ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ, ಕರಿಬೇವು, ಜೀರಿಗೆ, ಹಸಿ ಮೆಣಸಿನಕಾಯಿ, ಹಿಂಗು ಹಾಕಿ. ಸ್ವಲ್ಪ ಕೈಯಾಡಿಸಿ. ಇದಕ್ಕೆ ಬೇಯಿಸಿದ ಕಾಳು ಬೆರೆಸಿ. ಕಾಯಿ, ಕೊತ್ತಂಬರಿ ಸೊಪ್ಪು ಉದುರಿಸಿ. ಸುಲಭ  ಹಾಗೂ ರುಚಿಕರ. 

ನಾನು ನನ್ನಷ್ಟಕ್ಕೆ ಮೊಬೈಲ್ ಆನ್ ಮಾಡಿಟ್ಟಿದ್ದೆ. ಅಡಿಗೆ ಮನೆಗೆ ಬಂದ ತಮ್ಮನ ಮಗಳು ಸ್ಯಾಮಿ 'ಮಾಲತಿ ಅಕ್ಕ ನಾನು ರೆಕಾರ್ಡ್ ಮಾಡ್ತೇನೆ ಅಂದಾಗ ಖುಷಿ ಆಯ್ತು.

https://youtube.com/shorts/cwmCTpaQq_I?si=XofM7LCRHcDi63uf

sprouted moong usli
lightly steam sprouts with salt. heat oil. add mustard, jeera, chopped green chillies, fresh curry leaves and asafoetida.
add the sprouts. chk for salt. saute for a bit. finsh off with a topping  of fresh grated coconut and chopped coriander leaves. yummy usli ready. 

April 11, 2025

ಬೆಳಗಾವಿ ದಿನಗಳು

 


ಅಮ್ಮನ ಜತೆ ಇರಲು ಬಂದಿದ್ದೇನೆ. ಇಬ್ಬರೂ ನಾಲ್ಕು ಗಂಟೆಗೆ ಏಳುತ್ತೇವೆ. ಅಮ್ಮ ಟೀ ಕುಡಿದು ಸ್ನಾನ ಮಾಡಿ ದೇವರ ಪೂಜೆಗೆ ತೊಡಗಿದರೆ ನಾನು ದೊಡ್ಡ ವಾಕ್ ಹೋಗಿ ಬರುತ್ತಾ ಹಾಲು ತರುತ್ತೇನೆ.. ಬೆಳಿಗ್ಗೆ ಇಲ್ಲಿ ವಾತಾವರಣ ತಂಪಾಗಿದೆ. ಕೆಲ ಚಿತ್ರಗಳು. ಬೆಳಿಗ್ಗೆ ನಾನೊಬ್ಬಳೇ ವಾಕ್ ಹೋದರೆ, ಸಂಜೆ ಅಮ್ಮ ಮತ್ತು ತಮ್ಮನ ಮಗಳು ಸ್ಯಾಮಿ ನಮ್ಮ ಜತೆಗೂಡುತ್ತಾಳೆ. ಅವಳು ಹತ್ತನೇ ತರಗತಿ ಪರೀಕ್ಷೆ ಮುಗಿಸಿದ್ದಾಳೆ.





















April 6, 2025

the ಗದಗ

 (ಈ ಪೋಸ್ಟ್ ನನಗೆ drafts ನಲ್ಲಿ ಸಿಕ್ಕಿತು. 2017 ನಲ್ಲಿ ಬರೆದಿದ್ಫು. ನನ್ನ ಪೋನ್ ಹಾಳಾಗಿ ಚಿತ್ರಗಳು ಇಲ್ಲ. ಗದಗ ಕ್ಕೆ ಹಿದಾಗ ನಮ್ಮ ಜತೆ ಬಂದಿದ್ದವರ ಬಳಿ photos ಬಗ್ಗೆ ಕೇಳಿದೆ. ಹಲವಾರು ವರ್ಷಗಳು ಕಳೆದಿವೆ.. ಅವರಲ್ಲಿ ಇಲ್ಲ. ಇನ್ನು ಶ್ರೀಕಾಂತ್ ದು ಹಳೆ disc ಗಳಲ್ಲಿ ಹುಡುಕ ಬೇಕಷ್ಠೆ.

ಒಂದು ಚಿತ್ರ ಬಿಟ್ರೆ ಉಳಿದವು net ನಿಂದ ತೆಗೆದವು. ಒಂದು ಚೆಂದದ ಚಿತ್ರ ಮಿಸ್ಸಿಂಗ್..ಅಂಬೇಡಕರ ಪುತ್ಥಳಿ ಮೇಲಿನಿಂದ ಒಂದು ಕಾಮನಬಿಲ್ಲು ಮೂಡಿದ್ದು. ಇನ್ನೊಂದು ದೇವರ ವಿಶ್ವರೂಪದರ್ಶನ)

ಗದಗ ದಲ್ಲಿ ಆಫಿಸ್ ಕೆಲಸ ಇತ್ತು. ಗಾಡಿ  ಮಾಡಿದ್ದೀವಿ ಬಾ, ಅಲ್ಲಿಯ ದೇವಸ್ಥಾನಗಳು, ಹಾಗು ಹಳೆ ಪರಿಚಯದ ರೈತರ ಮನೆಗೆ ಹೋಗುವಾ , ಬರ್ತಿಯಾ ಅಂತ ಕೇಳಿದರು. ನಾನು ಹೊರಟೆ.
 ನಾವು ಬೆಳಿಗ್ಗೆ ೪ ಗೆ ಬೆಂಗಳೂರು ಬಿಡಬೇಕಾಗಿತ್ತು.





ಗದುಗಿನ ವೀರ ನಾರಾಯಣಸ್ವಾಮಿ ದೇವಾಲಯ. ಹೊಯ್ಸಳ ವಿಷ್ಣುವರ್ಧನ ನಿರ್ಮಿಸಿದ  ಪಂಚನಾರಾಯಣ ದೇವಾಲಯಗಳಲ್ಲೊಂದು. ಚಾಲುಕ್ಯ ಶೈಲಿಯಲ್ಲಿ ಗುಡಿಯನ್ನು ನಿರ್ಮಿಸಲಾಗಿದೆ. ಕೃತ ಮುನಿಯ ಗದುಗಿಗೆ ಹತ್ತಿರವಿರುವ ಕಪ್ಪತ್ತಗುಡ್ಡದಲ್ಲಿ  ತಪಸ್ಸಿಗೆ ಭಂಗ ಮಾಡುವ ರಾಕ್ಷಸರಿಂದ  ರಕ್ಷಿಸಲೋಸುಗ  ಬದರಿಯಿಂದ ನಾರಾಯಣನು ಇಲ್ಲಿಗೆ ಬಂದನೆಂದು ಕೃತಪುರಾಣ ಉಲ್ಲೇಖಿಸುತ್ತದೆ. ಗದಗಿಗೆ ಮೊದಲು ಕೃತಪುರ ವೆಂಬ ಹೆಸರಿತ್ತು. ಇಲ್ಲೇಈ ದೇವಸ್ಥಾನದ ಆವರದಲ್ಲೇ  ಕುಮಾರವ್ಯಾಸರು ಮಹಾಭಾರತ (ಗದುಗಿನ ಭಾರತ/ಕನ್ನಡಭಾರತವನ್ನು ) ಕುಳಿತು ರಚಿಸಿದರೆಂದು ಹೇಳಲಾಗಿದೆ.


              book from my collection
ನಮಗೆ ವೀರನಾರಾಯಣ ಸ್ವಾಮೀ ವಿಶ್ವರೂಪ ದರ್ಶನ ಸಿಕ್ಕಿತು. ಅಂದರೆ ಯಾವುದೇ ಅಲಂಕಾರ ಮಾಡಿರದ ಮೂರ್ತಿ. ಮೂರ್ತಿಯ ಬಲಗೈಯಲ್ಲಿ ಚಕ್ರ, ಎಡಗೈಯಲ್ಲಿ ಶಂಖ, ಮತ್ತೊಂದು ಅಭಯ  ಹಸ್ತ ಮತ್ತು ಎಡಗೈಯಲ್ಲಿ ಬೆಂಡು  ಇವೆ. ಈ ದೇವಸ್ಥಾನಕ್ಕೆ ಎಲ್ಲ ಜಾತಿ ಮತ ಭಕ್ತರು ಭೇಟಿ ನೀಡುತ್ತಾರೆ ಅಲ್ಲದೆ ಆಡಳಿತ ವರ್ಗದಲ್ಲಿ ಮುಸ್ಲಿಂ ಬಾಂಧವರು ಇದ್ದಾರೆ.
ಈ ಫೋಟೋ ತೆಗೆದಿದ್ದು ವಿಜಯ ಗುಡಿ!ಗದಗ ದವರೇ ಆದ  ಇವರು ವಾರ್ಯಾ೦ತದಲ್ಲಿ  ದೇವಸ್ಥಾದಲ್ಲಿ ಸೇವೆ ಸಲ್ಲಿಸುತ್ತಾರೆ. during the week he works for a company in BengaLuru. interesting ಅಲ್ವಾ ?? Srikanth's nephew is a lecturer during the week and at the weekends we find him partnering in catering business or  helping his father in carrying out his priestly duties. My father's friend after his retirement from bank is a full time priest in one of the temples in Kerala. I find such things very impressive and interesting!!
ಗದುಗಿಗೆ ಹೋಗಿ ಎರಡು ವಾರಗಳು ಕಳೆದಿದೆ. ಕಂಪ್ಯೂಟರ್ ಇವತ್ತು ಕೈಗೆ ಸಿಕ್ತು, ಹಾಗಾಗಿ ಬೇಗ ಬೇಗ ಇಷ್ಟನ್ನು ಕುಟ್ಟಿ ಹಾಕಿದೆ. ಬಹುಷ್ಯ: ಯಾರೇ ದೇವರನ್ನು ಈ ರೂಪದಲ್ಲಿ ನೋಡಿರಲಾರರು ಅಂತ ಅಷ್ಟೇ,


ಪಂಡಿತ್ ಪುಟ್ಟರಾಜ್ ಗವಾಯಿಗಳ ವೀರೇಶ್ವರ ಪುಣ್ಯಾಶ್ರಮ  ಮಠಕ್ಕೂ ಭೇಟಿನೀಡಿದೆವು. . ಅಲ್ಲೊಂದು ಮದುವೆಯ ಗದ್ದಲ, ಓಲಗ ಪಕ್ಕವಾದ್ಯಗಳ ಸದ್ದಿನ ಮದ್ಯ ಒಂದು ಸುಶ್ರಾವ್ಯ ಕಂಠ ಕೇಳಿಸಿ ಅದರ ಜಾಡು ಹಿಡಿದು ನಡೆದೆವು ನಾನು ಮತ್ತು ಸುಜಯ್ . ಅಲ್ಲೊಂದು ಪುಟ್ಟ ಮಗು ತಾನು ಕಲಿತ ರಾಗಗಳನ್ನು ಸ್ವಾಮೀಜಿಯವರಿಗೆ ಒಪ್ಪಿಸುತ್ತಿದ್ದ. ವಯಸ್ಸು 7-8 ಇರಬಬಹುದು. ಅಲ್ಲಿ ಆಯ್ಕೆಯಾದರೆ  ಮುಂದಿನ ಶಿಕ್ಷಣ /ಸಂಗೀತ ಶಿಕ್ಷಣ ಯಾವುದೇ ವೆಚ್ಚವಿಲ್ಲದೆ ನಡೆಯುತ್ತದೆ. ತನ್ನ ಪಾಠ ಒಪ್ಪಿಸಿ ತನ್ನ ತಾಯಿಯ ಜತೆಗೆ ಬಂದ ಈ ಪುಟ್ಟ ಹುಡುಗ ತನ್ನ ತಾಯಿಯ  ಕಡೆ ನೋಡಿ ನಕ್ಕ ನಗು priceless . 

ಸಾಧಾರಣ ೧೦೦೦ ಸಾವಿರ ಮಕ್ಕಳಿಗೆ ಈ ಮಠ ಊಟ ವಸತಿ ಸಂಗೀತ, ಶಿಕ್ಷಣ ವನ್ನು ಯಾವುದೇ ಜಾತಿ ಭೇದವಿಲ್ಲದೆ ಉಚಿತವಾಗಿ ನೀಡುತ್ತಿದೆ, ಭಕ್ತಾದಿ ಗಳು ನೀಡಿದ ದಾನದಿಂದಲೇ ಅವರು ಹತ್ತಾರು ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಾರೆ. ಬೆಳಿಗ್ಗೆ ಬೇಗ ಹೋಗಿ  ಅಲ್ಲಿ ಸಂಗೀತದ ತಾಲೀಮು ನಡೆಸುವುದನ್ನು  ಕೇಳಬೇಕೆಂದು ಕೊಂಡಿದ್ದೆವು .  ಆದರೆ ವೀರನಾರಾಯಣ ಸ್ವಾಮೀ ದೇವಸ್ಥಾನದ ಆವರಣದಲ್ಲಿ ಹೆಚ್ಚು ಸಮಯ ಕಳೆದುದರಿಂದ, ಮಠ ತಲಪುವಾಗ ಆಗಲೇ ಹೊತ್ತು ನೆತ್ತಿಗೇರಿತ್ತು. 

ಕಳ್ಳತನದಿಂದ ತೆಗೆದ ಚಿತ್ರ. ಅಲ್ಲಿ ಮಂಚದ ಮೇಲೆ ಈಗಿನ ಉಸ್ತುವಾರರು ಕುಳಿತಿದ್ದಾರೆ , ಕೆಳಗಡೆ ಈ ಹುಡುಗ, ಪಕ್ಕದಲ್ಲಿ ತಾಯಿ, ಎದುರಿಗೆ ಆ ಸಂಸ್ಥೆಯ ಒಬ್ಬ ಬಾಲಕ . 

ಹಾರ್ಮೋನಿಯಂ ನುಡಿಸುತ್ತಿದ್ದಾನೆ 

ಇನ್ನೊಂದು ಚಿತ್ರ: ಬಸವ ಜಯಂತಿಯಂದು, ಬಸವೇಶ್ವರರ ಪುತ್ಥಳಿಯ  ಹಿಂಬದಿ ಕಂಡ ಕಾಮನಬಿಲ್ಲು.
ಕುಮಾರವ್ಯಾಸ ಕಂಬ : ಕುಮಾರವ್ಯಾಸ ಇಲ್ಲಿ ಕುಳಿತು ವೀರನಾರಾಯಣನಿಂದ ಸ್ಪೂರ್ತಿ ಪಡೆದು ಕನ್ನಡಭಾರತವನ್ನು ರಚಿಸಿದ್ನೆಂದು ಹೇಳಲಾಗಿದೆ
ತಾಲ್ಲೂಕಿನ ಹೆಚ್ಚಿನ ಭಾಗ ಎರೆಮಣ್ಣಿನ ಪ್ರದೇಶ. ಸರಾಸರಿ ೬೩೫ಮಿಮಿ ವಾರ್ಷಿಕ ಮಳೆ. ಹೆಚ್ಚಿನ ವ್ಯವಸಾಯ ಮಳೆಯಾಧಾರಿತ. . ಹತ್ತಿ ಜೋಳ ಗೋದಿ ಮುಖ್ಯ ಬೆಳೆಗಳು. ಮೆಣಸಿನಕಾಯಿ, ಶೇಂಗಾ ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಸುತ್ತಾರೆ.


ತ್ರಿಕೂಟೇಶ್ವರ : ಸರಸ್ವತಿ ಗುಡಿ ಚಿಕ್ಕದು. ಸರಸ್ವತಿ ವಿಗ್ರಹ ಮುರಿದಿದ್ದರು ಅದರಲ್ಲಿನ ಸಹಜ ಸುಂದರ ಪ್ರಮಾಣ, ಭಾವಲಾಲಿತ್ಯ, ವಸ್ತ್ರ ಆಭರಣಗಳಲ್ಲಿನ ನವಿರು ಕೆಲಸ ಮನಮೋಹಕವಾಗಿವೆ. ಚಾಲುಕ್ಯ ಸಂಪ್ರದಾಯದಲ್ಲಿ ಅತಿ ಸೂಕ್ಷ್ಮವಾಗಿ  ಕೆತ್ತಿರುವ ಕಂಬಗಳು ಬಹು ಸುಂದರ ರಚನೆಗಳು. 
2017