Showing posts with label ತೀರ್ಥಹಳ್ಳಿ ತೋಟ. Show all posts
Showing posts with label ತೀರ್ಥಹಳ್ಳಿ ತೋಟ. Show all posts

April 16, 2020

ಹೊರಟು ಬಿಟ್ರು ಕೊಟ್ರಪ್ಪ

ತುಂಬಾ ಸಮಾಧಾನಿ ನಮ್ಮ ಕೊಟ್ರಪ್ಪ. ಬೈಕ್ ಬೇಕು ಅಂತ ತುಂಬಾ ಆಸೆ ಪಟ್ಟಿದ್ರು. ಶ್ರೀಕಾಂತ್ ಒಂದು ರಾಜದೂತ್ ಬೈಕ್ ಕೊಡಿಸಿದ್ರು.. ನಮ್ಮ ತೋಟಕ್ಕೆ ಹೋಗುವ ಸಮಾಯ ಬೆಳಿಗ್ಗೆ ೯. ೦೦ ರಿಂದ ಸಂಜೆ ೪ ರವರೆಗೆ. ಶ್ರೀಕಾಂತ್ ಕಸಿನ್ ಅವರದು ಭರ್ಜರಿ ತೋಟ. ಅದಕ್ಕೋಸ್ಕರ ಅವರು ತಮ್ಮ ತೋಟದ ಸಹಾಯಕರಿಗಾಗಿ ಪುಟ್ಟ ಪುಟ್ಟ ಹೆಂಚಿನ ಮನೆಗಳನ್ನು ಕಟ್ಟಿಸಿದ್ದಾರೆ. ಹಾಗೆ ಒಂದರಲ್ಲಿ ಕೊಟ್ರಪ್ಪ ಹಾಗು ಅವರ ದೂರದ ಸಂಬಂಧಿ ಬಿಡಾರ, ನಮ್ಮ ಕೊಟ್ರಪ್ಪನವರು ಲಿಂಗಾಯತ ಧರ್ಮದವರು...ಜೀವನದಲ್ಲಿ ಅಪಾರವಾದ ಕಟ್ಟು ನಿಟ್ಟು, ನೇಮ ನಿಯಮ. ಕೃಷ್ಣನ ಸಹಾಯಕ್ರಿಗೆ ಅಡಿಗೆ ಮಾಡುವವರೊಬ್ಬರಿದ್ದಾರೆ. ಆದರೆ ಕೊಟ್ರಪ್ಪ ಅವರ ಅಡಿಗೆ ಅವರೇ ಮಾಡಿಕೊಳ್ಳೋರು, ಊರಿನಿಂದ ಬರುವಾಗ ಜೋಳದ ಹಿಟ್ಟು ತರುತ್ತಿದ್ದರು. ಪ್ರತಿ ಸೋಮವಾರ ನಡೆಯುವ ತೀರ್ಥಹಳ್ಳಿ ಸಂತೆ ಹೋಗಿ ವಾರಕ್ಕೆ ಬೇಕಾಗುವಷ್ಟು ತರಕಾರಿ,,,ಇಲ್ಲದಿದ್ದರೆ ನೀರುಳ್ಳಿ, ಮೆಣಸಿನಕಾಯಿ ಇದ್ದಾರೆ ಆಯ್ತು. ಬೇರೆಯವರು ಮಾಡಿದ ಟಿ ಸಹಿತ ಕುಡಿಯುತ್ತಿರಲಿಲ್ಲ. ಅಂತದ್ದರಲ್ಲಿ ಅವರ ಸಂಭಂದಿ ಹುಡುಗನಿಗೆ ಕುಡಿತ, ಮಾಂಸಾಹಾರಿ ಅಭ್ಯಾಸ. ಗುಂಡು ತುಂಡು ಮಾಡಿದಾಗ ಅವರಿಗೆ ಮನೆಗೆ ಸೇರಿಸುತ್ತಿರಲಿಲ್ಲ ಕೊಟ್ರಪ್ಪ. ಕೊನೆಗೆ ಸಾಕಾಗಿ 'ತೋಟ ನಾನೇ ನೋಡಿಕೊಳ್ತೇನೆ....ಆತನಿಗೆ ಊರಿಗೆ ಕಳುಹಿಸಿಕೊಡಿ ಅಂತ ಒಂದೇ ವರಾತ.... ಹಾಗೆ ಮಾಡಿದ್ದೂ ಆಯಿತು. ಅವರು ಅಡಿಗೆ ಪಡಿಗೆ ಎಲ್ಲ ಮಾಡಿ ತೋಟಕ್ಕೆ ಬರುವಾಗ ೧೧,೦೦ ಗಂಟೆ ಕಳೆದು ಹೋಗುತ್ತಿದ್ದರೂ ನಾವು ಏನು ಅನ್ನಲಿಲ್ಲ. 
ಯುಗಾದಿಗೆ ಊರಿಗೆ ಹೋದ್ರೆ ಒಂದು ೧೫ ದಿನ ಠಿಕಾಣಿ . ಅದಕ್ಕೊಂದು ತುಂಬಾ ಕಾಯ್ತಿದ್ರು. ಆದರೆ ಹಿಂದಿನ ವರ್ಷ ಅವರ ಊರಲ್ಲಿ ಜೋರು  ಮಳೆಗೆ ಅವರ ಮಗ ಸೊಸೆ ಕೆಲಸ ಮಾಡುವ ಕಡೆ ತುಂಬಾ ನಷ್ಟವಾಗಿ ಫಾಕ್ಟರಿ ಬಂದ್ ಮಾಡಲಾಯಿತು, ಹಾಗಾಗಿ ಮಗ, ಸೊಸೆ, ಮೊಮ್ಮಗ ಕೃಷ್ಣನ ತೋಟಕ್ಕೆ ವಲಸೆ ಬಂದರು. ಸೊಸೆ ಅಡಿಗೆ ಮಾಡ್ತಿದ್ದರಿಂದ ಕೊಟ್ರಪ್ಪ ನಿರಾತಂಕ ವಾಗಿ ತೋಟಕ್ಕೆ ಹೋಗಿ ಬರೋದು ಮಾಡ್ತಿದ್ರು. ಈ ವರ್ಷ ಪಾಪ ಕೊರೋನಾ ವೈರಸ್ ಅಂತ ಯುಗಾದಿಗೆ ಹೋಗಲಾಗಲಿಲ್ಲ.
ನಾನು ತೋಟಕ್ಕೆ ಹೋಗಿ ಏನೇನೋ ಸಾಹಸ ಮಾಡಿದಾಗಲೆಲ್ಲ ಅವರ ಮುಖದಲ್ಲಿ ಕಿರಿದಾದ ಮಂದಹಾಸ. ಸೊಗದೆ ಬೇರು, ಅಮೃತ ಬಳ್ಳಿ ಎಲ್ಲ ಅವರು ಹೇಗೆ ಬಳಸುತ್ತಾರೆಂದು ನನಗೆ ಪಾಠ. 
ಕೆಳಗಿನ ಲೇಖ ಶ್ರೀಕಾಂತ ಬರೆದಿದ್ದು. ಉಳಿದಿದ್ದ ಮಾಯಿತಿ ಅದರಲ್ಲಿದೆ.  

ಹೋಗಿ ಬನ್ನಿ ಕೊಟ್ರಪ್ಪ 🙏


September 15, 2010

Some assorted photos of ತೀರ್ಥಹಳ್ಳಿ -ತೋಟ, ಹಬ್ಬ ಇತ್ಯಾದಿ

ನಾವು ಗೌರಿ ಪೂಜೆಗೆ ಮೂರ್ತಿ ಅಥವಾ ಗೌರಿಯ ಮುಖವಾಡ ಬಳಸಲ್ಲ. ಜುಟ್ಟು ಇರುವ ತೆಂಗಿನಕಾಯಿಗೆ ಕಣ್ಣು ಮೂಗು ಬರೆದು ಅದನ್ನು ಕಲಶದ ಮೇಲೆ ಸ್ಥಾಪಿಸಿ ಪೂಜಿಸುತ್ತೇವೆ. ಗಣಪನನ್ನು ಪ್ರತಿಷ್ಟಾಪಿಸುವ ಮೊದಲು ಗೌರಿಯನ್ನು ಪೀಠದಲ್ಲಿ ಅಲಂಕರಿಸುತ್ತೇವೆ. ಕಲಶದ ಎಡ ಭಾಗದಲ್ಲಿ ಬೂದಿ ಮೆತ್ತಿಕೊಂಡಿರುವ ಮಹಾದೇವ again ತೆಂಗಿನಕಾಯಿಯ ರೂಪದಲ್ಲಿ.
ಪೂಜೆಗೆ ಅಣಿಯಾಗಿರುವ ಹೂ- ಹಣ್ಣು-ಹಂಪಲು
ಮನೆಯ ಒಳಗಿನ ಅಂಗಳ, ಅಂಗಳದಲ್ಲಿ ಪುಟ್ಟ ತುಲಸಿ ಕಟ್ಟೆ

ಗೆಜ್ಜೆವಸ್ತ್ರ ತಯಾರಿಸುವಲ್ಲಿ training ಮಾಲವಿಕಾಗೆ, ನನ್ನ ದೊಡ್ಡ ಭೈಯಾ ನವರಿಂದ. ನಾವು ಗೆಜ್ಜೆವಸ್ತ್ರವನ್ನು ಪೂಜೆಯ ದಿನವೇ ತಯಾರಿಸುವುದು.
ಈಗ  ಸುಶ್ರುತ ಬರೆದ ’ಗೆಜ್ವಸ್ತ್ರ’ ಸುಲಲಿತ ಪ್ರಬಂಧವನ್ನು ಓದಿ. ಎಷ್ಟು ಸೊಗಸಾಗಿ ಬರಿಯುತ್ತಾನೆ ಈ ಹುಡುಗ. ಇಗೋ ಇಲ್ಲಿದೆ ಲಿಂಕ್

ಆರತಿ ತಟ್ಟೆಗಳನ್ನು ಸಿಂಗರಿಸುತ್ತಿರುವ ಮಾಲವಿಕ

ಪಂಚಾಮೃತದ ಬಟ್ಟಲು
ಸೌತೆಕಾಯ್ ಪಚ್ಚಡಿ in the making. ಚೆನ್ನಾಗಿತ್ತು, ಖಾರ-ಲಿಂಬೆ ಹುಳಿ....:-)
ಸುಮ್ಮನೆ ನಂದೂ ಒಂದು ಫೋಟೊ ಇರಲಿ ಅಂತ....ಪೂಜೆ ಮಾಡುತ್ತಿರುವ ನನ್ನ ಕಾಂತ ಶ್ರೀಕಾಂತ :-)
ಅಲಂಕೃತಗೊಂಡ ಗಣಪ. ಗೌರಿಯ ಎಡಬದಿಗೆ ಒಂದು ಗೆಜ್ಜೆವಸ್ತ್ರ ಕಾಣ್ತಾ ಇದೆಯಲ್ಲ್ವಾ?? ಅಲ್ಲಿದ್ದಾನೆ ಮಹಾದೇವ!!
ವಿಸರ್ಜನಾ ಪೂಜೆಗೆ ರೆಡಿ!!! ಮಂಗಳಮೂರ್ತಿ ಮೋರಯಾ..ಪುಡ್ಚಾ ವರ್ಷಿ ಲೌಕರ್ ಯಾ!!!
***********************************************************************************************
ತೋಟದ ಬಳಿ ತೆಗೆದ ಕೆಲವು ಚಿತ್ರಗಳು
ತೀರ್ಥಹಳ್ಳಿಯಲ್ಲಿ ನಾವಿದ್ದ ಮೂರು ದಿನವು ಮಳೆ. ಸಂಜೆ ತೋಟದಲ್ಲಿ...
ಅಂಬಾssssssssssssss
ಅಡಿಕೆ ಹಾಳೆ ಟೊಪ್ಪಿ ಹಾಕದೆ ನಮ್ಮ ಸೀನಣ್ಣ ಹೊರ ಬರುವುದೇ ಇಲ್ಲ.
ಮಳೆಗೆ ಅರಳಿದ ಹೂ - ipomea
Lichen which caught Niharika's fancy
:-)
ಶ್ರೀಕಾಂತ್ ಯಾವುದೋ ಹೆಸರು ಹೇಳಿದ್ರು...ನೆನಪಿಗೆ ಬರುತ್ತಾ ಇಲ್ಲ. :-(
ಯಾವುದೋ ಹಳದಿ ಬಣ್ಣದ ಹೂವಾ
ಪುಟ್ಟ farmer ನಿಹಾರಿಕಾ...ನುಗ್ಗೆ ಬೀಜ ಹಾಕುವ ಮುನ್ನ...:-)
Sheep pen..ನಮ್ಮ ತೋಟದ ಉಸ್ತುವಾರಿ ನೋಡುವ ಕೇದಾರಿ (left side of pic in striped T-Shirt) ಇಲ್ಲಿ ಕುರಿ ಸಾಕ್ತಾನಂತೆ
ರಭಸವಾಗಿ ಹರಿಯುವ ಝರಿಗೆ ಮಣ್ಣು ಕೊಚ್ಚಿಕೊಂಡು ಹೋಗದಿರಲು ಅಡ್ಡ ಹಾಕಿದ sand bag.
ಕೆಳಗೆ ಹರಿದು ಬಂದ ನೀರಲ್ಲಿ ಪುಟ್ಟ ಪುಟ್ಟ ಮೀನು. ಎಂಟು ಮೀನು ನಾನು ತಂದು ಇಲ್ಲಿ ಇಟ್ಟುಕೊಂಡಿದ್ದೇನೆ.
silver ಕಲರ್ ನ ಮೀನು ತೋಟದ ಹಳ್ಳದಿಂದ. ಅವಕ್ಕೂ travel ಮಾಡುವ ಯೋಗ. ತೀರ್ಥಹಳ್ಳಿಯಿಂದ taxiನಲ್ಲಿ ಶಿವಮೊಗ್ಗ ತನಕ, ಆಮೇಲೆ ಟ್ರೈನ್ ನಲ್ಲಿ ಬೆಂಗಳೂರು, ಅಲ್ಲಿಂದ ರಿಕ್ಷದಲ್ಲಿ ಮನೆಗೆ. ಅವಕ್ಕೆ ಬೇಸರ ಬರಬಾರದೆಂದು petbonding ಅಂಗಡಿಯಿಂದ ಎರಡು swordtail fish ನಾನು ತಂದು ಹಾಕಿದ್ದು
ಈ ಪುಟ್ಟ ಮೀನುಗಳ ಆಟ ನೋಡುತ್ತ ಸುಮಾರು ಹೊತ್ತು ಕಳೆಯಬಹುದು. therapeutic. ಈಗಷ್ಟೆ ಡಾಕ್ಟರ್ ಮಿತ್ರರೊಬ್ಬರ ಫೋನ್ ಬಂದಿತ್ತು. ನನ್ನ ಮೀನ್ ಕತೆ ಹೇಳಿದಾಗ ಅವರೇನಂದ್ರು ಗೊತ್ತಾ?? ಮೀನಿನ ಓಡಾಟ ನೋಡ್ತಾ ಇದ್ರೆ ಕಣ್ಣಿನ / ದೃಷ್ಟಿದೋಷ ನಿವಾರಣೆಯಾಗುತ್ತದಂತೆ.
Fish bowl pictures by me ಉಳಿದ ಫೋಟೊಗಳು triggerhappy Niha...
:-)