November 29, 2012

ಚಿಕ್ಕ ಚಿಕ್ಕು ಕತೆ

ಟೀ ಕುಡೀತಾ ಬಾಲ್ಕನಿ ಮೇಲೆ ಕೂತಾಗ ಹೊಳೆದ ಕತೆ>>>>(love you Brooke Bond Red Label chai)
ತೋಟದಿಂದ ಮನೆಗೆ ತಂದಿದ್ದ ದೊಡ್ಡ ಚಿಕ್ಕುಗಳನ್ನು ಮೃದುಲಾ ಹಣ್ಣಾ ಗಿಸಲು ಅವನ್ನು ಅಕ್ಕಿ ಡಬ್ಬಿಯಲ್ಲಿ ಹಾಕುತ್ತ ಇದ್ದಳು. ಅದರಲ್ಲಿ 5 ಕಾಯಿ ಚೆನ್ನಾಗಿ ಹಣ್ಣಾಗಿತ್ತು ಆಗಲೆ. ಅವನ್ನು ಬದಿಗಿಟ್ಟು, ಕೆಲಸದವಳು ಮೆನೆಕೆಲಸ ಮುಗಿಸಿ, ’ಹೋಗಿ ಬರ್ತೇನೆ ಅಕ್ಕ’ ಎಂದಾಗ...’ಈ ಚಿಕ್ಕುಗಳನ್ನು ಮನೆಗೆ ತೆಗೆದುಕೊಂಡು ಹೋಗು’ ಅಂತ ಅವಳ ಕೈಗೆ ಇತ್ತಳು. ಅವಳು ಹೋದ ಮೇಲೆ ಅಲ್ಲೆ ಇದ್ದ ಮೃದುಲಾಳ ತಂದೆ ಅವಳನ್ನು
 ತರಾಟೆಗೆ ತೆಗೆದುಕೊಂಡರು, ’ಅಷ್ಟು ಚೆನ್ನಾಗಿರೋ ರುಚಿಯಾಗಿರೋ ಹಣ್ಣನ್ನು ಆ ಕೆಲ್ಸದವಳಿಗೆ ಕೊಡ ಬೇಕಿತ್ತೆ? ಎದುರು ಮನೆಯ ಛಾಯಾಪತಿ ಮನೆಗೆ ಕಳಿಸಬಹುದಿತ್ತು.’
ಮೃದುಳಲಿಗೆ ಈಗ ಆಲೋಚನೆ, ಅಲ್ಲ ಆ ಛಾಯಾಪತಿಯವರ ಕುಟುಂಬ ಅಮೇರಿಕಾದಿಂದ ಬಂದವರ ತರಹ ಆಡ್ತಾರೆ, ಮಾತು ಮಾತಿಗೆ ರಾಂಬುಟಾನ್, ಸ್ಟ್ರಾಬೆರ್ರಿ, ರಾಸ್ಪಬೆರ್ರಿ ಅಂತಾರೆ ವಿನ ಭಾರತ ದೇಶದ ಹಣ್ಣಿನ ಹೆಸರು ಸುದ್ದಾ ಉಸುರಿಸಲ್ಲ. ಅವರಿಗೆ ಚಿಕ್ಕು ಕೊಟ್ಟರೂ ಅದೂ ಗ್ಯಾರಂಟಿ ಕಸದ ಬುಟ್ಟಿಗೆಸೇರುತ್ತೆ ಅಂತ ಅವಳಿಗೆ ಗೊತ್ತು, ಆದರೆ ಯಾರಿಗೂ ಎದುರು ಮಾತಾಡುವ ಸ್ವಭಾವ ಮೃದುಲಾಳದಲ್ಲ್ಲ. ’ಅಲ್ಲ ಅವರು ಉಳ್ಳವರು ಹಣ್ಣನ್ನು ಕಾಸುಕೊಟ್ಟು ತಂದುಕೊಂಡು ತರುತ್ತಾರೆ. ನೂರಾರು quantityಯಲ್ಲಿ ನಮ್ಮ ತೋಟದಲ್ಲಿ ಬೆಳೆದ ಐದು ಚಿಕ್ಕು ಹಣ್ಣನ್ನು ಕೆಲಸದವಳಿಗೆ ಕೊಟ್ಟ ಮಾತ್ರಕ್ಕೆ ಪ್ರಳಯ ಬರುತ್ತಾ??? ಮತ್ತೆ ಮೃದುಲಾ ಅವಳಿಗೆ ಸರಿ ಎನಿಸಿದ್ದನ್ನು ಮಾಡುವವಳೆ ಬಿಡಿ..
ಆದರು ಆಲೋಚಿಸಿ: ನಾವು ಉಳ್ಳವರಿಗೆ ಕೊಡುತ್ತೇವಲ್ಲವೇ (for eg ಗೃಹ ಪವೇಶ, ಮದುವೆ, ಮುಂಜಿ, ಹುಟ್ಟುಹಬ್ಬ ಇತ್ಯಾದಿಗಳಿಗೆ...ಇಲ್ಲದ್ದವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ (ನಾವು= most cases)
ಮೊದಲೇ ಕಂಜೂಸ್ ಎಂದು ಖ್ಯಾತಿ ಪಡೆದ ನಾ ಇನ್ನು ಮುಂದೆ ಯಾರಿಗೂ ಗಿಫ್ಟ್ ಕೊಡಲ್ಲ..:-))))

November 17, 2012

................??ವಿಷಾಧಬಂಧ

ಪತ್ತೆದಾರರಿಗೆ ಜೆನೆಟ್ ಹೇಳಿ ಕಳಿಸಿದ್ದಳು. ಆಕೆಯ ಪತಿ 4 ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದನು. ಎಷ್ಟೆ ಆಲೋಚನೆ ಮಾಡಿದರೂ ಆತ ಯಾಕೆ ಹಾಗೆ ಮಾಡಿದ ಎಂಬುದೆ ಅವಳಿಗೆ ತಲೆ ತಿನ್ನುತ್ತಿತ್ತು. ಅವರಿಬ್ಬರೂ ಸೇನೆಯಲ್ಲಿದ್ದವರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಸೇವೆಯಿಂದ ನಿವೃತ್ತಿ ಹೊಂದಿದವರು. ಯಾವುದೋ ಒಂದು ಬಾಲ್ ಪಾರ್ಟಿ ಯಲ್ಲಿ ಸಿಕ್ಕಿ ಒಬ್ಬರಿಗೊಬ್ಬರ ಪರಿಚಯವಾಗಿತ್ತು. ಇಬ್ಬರೂ ಅನಾಥರು. ಹಾಗಾಗಿ ಸ್ವಲ್ಪ ವಯಸ್ಸಾಗಿದ್ದರೂ, ಒಬ್ಬರಿಗೂಬ್ಬರು ಕಂಪೆನಿಯಾಗಬಹುದೆಂದು ಮದುವೆಯಾಗಿದ್ದರು. ಮದುವೆಯಾಗಿ ಎರಡು ವರ್ಷಗಳ ಬಳಿಕ ಈ ದುರ್ಘಟನೆ. ಇಬ್ಬರಿಗೂ ಹೇಳಿಕೊಳ್ಳ್ಳುವಂತ ಆತ್ಮೀಯರು ಯಾರೂ ಇರಲಿಲ್ಲ. ಒಬ್ಬರಿಗೊಬ್ಬರಿದ್ದರು ಅಷ್ಟೆ.
ಪೋಲಿಸರಿಗೂ ಏನೂ ಹೊಳೆದಿರಲಿಲ್ಲ. ಅದಕ್ಕೆ ಅವಳು ಪತ್ತೆದಾರರನ್ನು ನೇಮಿಸಿದಳು. ಪತ್ತೆದಾರರು ಮನೆಯನ್ನು ಶೋಧಿಸುತ್ತಿದ್ದಾಗ ಅವರ ಕೈಗೆ ಒಂದು ಫೈಲ್ ಸಿಕ್ಕಿತು. ಆ ಫೈಲ್ ಫೋಲ್ಡರ್ ನಲ್ಲಿ ಕೆಲವು ಕಾಗದ ಪತ್ರಗಳ ಜತೆಗೆ ಒಂದು ಚೈನ್ ಹಾಗೂ ಅದಕ್ಕೆ ತಗುಲಿರುವ ಲಾಕೆಟ್ ಸಿಕ್ಕಿತು. ಅವರು ಲಾಕೆಟ್ ಅನ್ನು ಪರಿಶೀಲಿಸುವಾಗ ಅವಳೆ ಮುಂದಾಗಿ,
'ಆ ಚೈನ್ ನನ್ನದು. ಅದರ ಕೊಂಡಿ ತುಂಡಾಗಿದೆಯಂತ ಹಿಂದಿನ ವಾರ ನಾನು ಸೋಮನ್ ಕೈಲಿ ರಿಪೈರಿಗೆ ಅಂತ ಕಳಿಸಿದ್ದೆ. ಆದರೆ ಅದನ್ನು ಫೈಲ್ ನಲ್ಲೇ ಮರೆತಿದ್ದರು ಅನ್ನಿಸುತ್ತೆ'
ಪತ್ತೇದಾರ ಆ ಲಾಕೆಟ್ ಅನ್ನು ಆಚೀಚೆ ತಿರುಗಿಸುವಾಗ ಹೇಗೋ ಆ ಲಾಕೆಟ್ ತೆರೆದುಕೊಂಡಿತು. ಅದರಲ್ಲಿ ಒಂದು ಫೋಟೊ. ಆ ಫೋಟೊದಲ್ಲಿ ನಗುಮುಖದ ಇಬ್ಬರು ಮಕ್ಕಳು-ಡೊಡ್ಡವನು ಹುಡುಗ. ಪುನ: ಜೆನೆಟ್ ಲೇ ಮುಂದಾಗಿ,
'ನನಗೆ ಬುದ್ದಿ ಬಂದಾಗಿನಿಂದ ಅದು ನನ್ನ ಕೊರಳಿನಲ್ಲಿದೆ. ಬಹುಶ: ಅನಾಥಾಶ್ರಮಕ್ಕೆ ಸೇರಿಸುವಾಗ ನನ್ನ ತಂದೆಯೋ ತಾಯಿಯೋ ನನ್ನ ಕೊರಳಿಗೆ ಹಾಕಿರಬಹುದು'
ಚಿತ್ರ ಮಿನಿಯೇಚರ್ ಗಾತ್ರದ್ದು ಇದ್ದುದರಿಂದ ಅದರಲ್ಲಿನ ಮುಖ ಸರಿಯಾಗಿ ಕಾಣುತ್ತಿರಲಿಲ್ಲ. ಪತ್ತೆದಾರರು ಅವರ ಪರಿಚಯವಿರುವ ಛಾಯಾಗ್ರಾಹಕರ ಬಳಿ ಅದನ್ನು ಕೊಂಡೊಯ್ದು ಆ ಚಿತ್ರದ ಬ್ಲೊ ಅಪ್ ಒಂದನ್ನು ಮಾಡಿಸಿದರು.ಆ ಫೋಟೊದಲ್ಲಿನ ಹುಡುಗಿ ಮುಖಕ್ಕೂ ಜೆನೆಟ್ ಗೂ ಸಾಮ್ಯವಿತ್ತು  ಆ ಫೋಟೊದ ಕೆಳಗಡೆ ಸೂಕ್ಷ್ಮವಾಗಿ ನೋಡಿದರೆ ಒಂದು ಶಿಲುಬೆ ಆಕಾರ ಹಾಗೂ ಊರಿನ ಹೆಸರು ಕಾಣಸಿಕ್ಕಿತು. ನಮ್ಮ ಪತ್ತೆದಾರರ ಟೀಮ್ ಆ ಊರಿಗೆ ಹೋಯಿತು. ಅದೊಂದು ಪುಟ್ಟ ಊರು. ಹೆಚ್ಚಿನವರೆಲ್ಲ ಕ್ರಿಶ್ಚಿಯನ್ನರೆ. ಆ ಊರಿನ ಇಗರ್ಜಿಗೆ ತಾಗಿದ ಹಾಗೆ ಒಂದು ಅನಾಥಾಶ್ರಮ. ಅಲ್ಲಿಗೆ ಹೋದರು ಇವರೆಲ್ಲ. ತುಂಬ ಹಳೆಯ ರೆಕಾರ್ಡ್ ಗಳು ಅಲ್ಲಿ ಸಿಗುವುದು ಇವರಿಗೆ ಅನುಮಾನವಿತ್ತು. ಅಲ್ಲಿನ ಕಛೇರಿಯಲ್ಲಿ ಕೆಲಸ ಮಾಡುವವರೆಲ್ಲ ತರುಣರು. ಆದರೂ ಅವ್ರಿಗೆ ಕೇಳಿದರು. ಅವರಲ್ಲಿ ಒಬ್ಬರು, ತಡಿರೀ, ನಮ್ಮ ಅಂಟೋಣಿಯವರಿಗೆ ಕೇಳುವ. ಅವರು 90 ವರ್ಷ ವಯಸ್ಸಿನವರಾದರೂ ಬುದ್ದಿ ಮತ್ತು ನೆನಪು ತುಂಬ ಚುರುಕಾಗಿದೆ. ಸರಿ, ಅಂಟೋನಿಗೆ ಬುಲಾವ್ ಹೋಯಿತು. ಮುದುಕ ಅಂಟೋನಿ ನಿಧಾನವಾಗಿ ಕೋಲು ಹಿಡಿದು ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಬಂದ. ಅವನಿಗೆ ಲಾಕೆಟ್ ತೋರಿಸಲಾಯಿತು. ’ಅರೇ ಮೊನ್ನೆ ಭಾನುವಾರ ಅಷ್ಟೆ ಇನ್ನೊಬ್ಬ ವ್ಯಕ್ತಿ ಈ ಲಾಕೆಟ್ ಬಗ್ಗೆ ಕೇಳಿ ಹೋದರು. ಅವರಿಗೆ ಹೇಳಿದ ಹಾಗೆ ನಿಮಗೂ ಹೇಳುತ್ತೇನೆ. ’ಯುದ್ದದ ಸಮಯ ಆಗ ಏನು ಕಷ್ಟವೋ ಏನೋ ಆ ತಾಯಿ ಇಬ್ಬರು ಮಕ್ಕಳನ್ನು ಇಲ್ಲಿ ತಂದು ಬಿಡುವಾಗ ನಾನೇ ಇಲ್ಲಿದ್ದೆ. ಇಬ್ಬರ ಕುತ್ತಿಗೆಯಲ್ಲೂ ಸಮಾನಾದ ಚೈನೂ- ಲಾಕೆಟ್. ಹೆಣ್ಣು ಮಗು ತುಂಬ ಚಿಕ್ಕದು. ಇನ್ನೂ ತಾಯಿ ಹಾಲು ಕುಡಿಯುವ ಹಸುಳೆ.ಹಸಿವೆಯಿಂದಲೋ ಏನೋ ತುಂಬ ಅಳುತ್ತಿತ್ತು. ನಾನು ಹಾಗೂ ಫಾದರ್ ಆ ಮಗುವಿಗೆ ಹಾಲಿನ ಏರ್ಪಾಡು ಮಾಡಲು ಒಳಗೆ ಹೋದೆವು, ನಾವು ಬರುವಷ್ಟರಲ್ಲಿ ಆ ತಾಯಿ ಪರಾರಿ. ಸಾಧಾರಣ 5 ವರ್ಷದ ಹುಡುಗ ಮಾತ್ರ ಸುಮ್ಮನೆ ಎಲ್ಲ ಪಿಳಿ ಪಿಳಿ ಕಣ್ಣು ಬಿಟ್ಟು ನೋಡುತ್ತಿದ್ದ. ಕೊಂಕಣಿ ಭಾಷೆ ಮಾತನಾಡುತ್ತಿದ್ದ. ಆ ರಾತ್ರಿ ಭೀಕರ ಯುದ್ದ. ಒಂದಾದ ಮೇಲೆ ಒಂದು ಬಾಂಬ್ ಸ್ಪೋಟ. ನಮ್ಮ ಈ ಹಳೇ ಅನಾಥಾಶ್ರಮದಲ್ಲಿ ಒಂದು ನೆಲಮನೆಯಿತ್ತು. ಆಶ್ರಮದ ಇತರೇ ಮಕ್ಕಳನ್ನೆಲ್ಲ ಒಟ್ಟು ಮಾಡಿ ಎರಡು ರಾತ್ರಿ ಅಲ್ಲೇ ಕಳೆದೆವು. ಮೂರನೆ ದಿನ ನಾವೆಲ್ಲ ಹೊರಗೆ ಬಂದು ನೋಡಿದ್ದಾಗ ಊರಿಗೆ ಊರೆ ಧ್ವಂಸ. ಇಬ್ಬರಿಗೂ ಹೆಸರು ನಾವೇ ಇಟ್ಟಿದ್ದು ಜೆನೆಟ್ ಮತ್ತು ಜೇಜು.
ಕೆಲ ತಿಂಗಳ ನಂತರ ಒಂದು ಹಿಂದು ಕುಟುಂಬ ಆ ಹುಡುಗನನ್ನು ದತ್ತು ತೆಗೆದುಕೊಂಡು ಹೋದರು. ಅದರ ವಿವರಗಳೆಲ್ಲ ಕಡೆತದಲ್ಲಿದ್ದವು. ಮೊನ್ನೆ ಬಂದ ವ್ಯಕ್ತಿಗೋಸ್ಕರ ಮೇಲ್ಛಾವಣಿಯಲ್ಲಿದ್ದ ಧೂಳು ತುಂಬಿದ ಕಡತಗಳನ್ನೆಲ್ಲ ತೆಗೆದು ಅಂದಾಜಿನಲ್ಲಿ ನಾಲ್ಕೈದು ಕಡತ ಹುಡುಕುತ್ತಿದ್ದ ಹಾಗೆ ನಮಗೆ ಆ ದತ್ತು ತೆಗೆದುಕೊಂಡ ಹುಡುಗನ ಪರಿವಾರದವರ ಅಡ್ರೆಸ್ ಸಿಕ್ಕಿತು. ಬಂದ ವ್ಯಕ್ತಿ ಒಂದು ದೊಡ್ಡ ಮೊತ್ತದ ಸಹಾಯಧನದ ರೂಪದಲ್ಲಿ ಚೆಕ್ ಬರೆದುಕೊಟ್ಟು ಅ ವಿಳಾಸ ಬರೆದುಕೊಂಡು ಹೋದರು’ ಇಲ್ಲಿಗೆ ಮಾತು ನಿಲ್ಲಿಸಿದ ಅಂಟೋನಿ. ಪತ್ತೆದಾರರೂ ಆ ವಿಳಾಸವನ್ನು ನೋಟ್ ಮಾಡಿಕೊಂಡು
ಮತ್ತೆ ಆ ಹುಡುಗಿ ಅವನ ತಂಗಿ, ಅವಳ ವಿಚಾರ ಏನಾದರೂ ಗೊತ್ತೇ?? ’ಹಾಂ ಅವಳು ನಮ್ಮ ಇಗರ್ಜಿ ಶಾಲೆಯಲ್ಲೇ 5 ಕ್ಲಾಸ್ ತನಕ ಓದಿ, ಮತ್ತೆ ಒಂದು ರೆಸಿಡೆಂಶಿಲ್ ಶಾಲೆಗೆ ವರ್ಗಾಯಿಸಳಾದಳು. ಆ ಶಾಲೆಯ ವಿಳಾಸ ನಮ್ಮ ಕಛೇರಿಯವರು ನಿಮಗೆ ನೀಡುತ್ತಾರೆ”
ರೆಸಿಡೆಂಶಿಯಲ್ ಶಾಲೆಗೆ ಹೋಗಿ ವಿಚಾರಿಸಿದಾಗ ಅವರು ಹೀಗೆ ಹೇಳಿದರು’ಓದಿನಲ್ಲಿ ತುಂಬ ಚುರುಕು ಜೆನೆಟ್. ಮುಂದೆ ಅವಳು ವಾಯುಸೇನೆ ಯಲ್ಲಿ ಭರ್ತಿ ಯಾದಳು. ನಮ್ಮ ರೆಸಿಡೆಂಶಿಯಲ್ ಶಾಲೆಯ ಒಂದು ನಿಯಮವಿದೆ. ಕೆಲಸಕ್ಕೆ ಹೋಗುವವರು ಅವರ ಮದುವೆಯಾಗುವ ತನಕ ಅವರ ಸಂಬಳದಲ್ಲಿನ ಸ್ವಲ್ಪ ಮೊತ್ತ ಶಾಲೆಗೆ ನೀಡಬೇಕೆಂದು. ಇತ್ತಿಚಿನ ಎರಡು ವರ್ಷಗಳ ಹಿಂದೆ ಅವಳಿಗೆ ಮದುವೆಯಾಯಿತು. ಮೊನ್ನೆ ಕ್ರಿಸ್ ಮಸ್ ಗೆ ಒಂದು ಕಾರ್ಡ್ ಕಳಿಸಿದ್ದಳು. ಯಾಕೆ ಅವಳ ವಿಚಾರ ಕೇಳುತ್ತಿದ್ದೀರಿ? ಅವರಿಗೆ ಏನೋ ಒಂದು ಉತ್ತರ ಕೊಟ್ಟು ಪತ್ತೆದಾರರು ಮುಂದಿನ ವಿಳಾಸ ಹುಡುಕಿ ಹೊರಟರು.
ಆ ವಿಳಾಸ ಹುಡುಕಿಕೊಂಡು ಹೋದರು. ಅದು ಬೇರೆಯದೇ ಊರಾಗಿತ್ತು. ಅಲ್ಲಿ ತಲುಪಿದಾಗ ರಾತ್ರಿ. ಸರಿ ವಿದ್ಯುತ್ ವ್ಯವಸ್ಥೆ ಕೂಡ ಇರಲಿಲ್ಲ ಆ ಊರಲ್ಲಿ. ಆ ರಾತ್ರಿ ಅಲ್ಲಿನ ಚಿಕ್ಕ ಹೋಟಲ್ ನಲ್ಲಿ ತಂಗಿದ್ದು, ಬೆಳಿಗ್ಗೆ ಅವರ ಕಾರ್ಯ ಶುರು ಮಾಡಿದರು. ಮನೆ ಪತ್ತೆ ಹಚ್ಚಲು ತುಂಬ ಕಷ್ಟ ಪಡಬೇಕಾಗಲಿಲ್ಲ. ಹೋಟಲ್ ನ ಮಾಣಿಯೇ ಅವರಿಗೆ ಅಲ್ಲಿ ಕರೆದುಕೊಂಡು ಹೋಗಿ ಆ ಮನೆಯನ್ನು ತೋರಿಸಿದ್ದ. ಪಾಳು ಬಿದ್ದ ದೊಡ್ಡದಾದ ಬಂಗಲೆ. ಆದರು ಮನೆಯಂಗಳ ಗುಡಿಸಿ ನೀಟ್ ಆಗಿಟ್ಟಿದ್ದರಿಂದ ಅಲ್ಲಿ ಯಾರೋ ವಾಸಿಸ್ತಾ ಇರುವ ಕುರುಹು ಸಿಕ್ಕಿತು. ಮನೆಯ ಬಾಗಿಲಿಗೆ ಬಡಿದಾಗ, ಸುಮಾರು ಹೊತ್ತಾದ ಮೇಲೆ ಇಲ್ಲಿಯೂ ಕೂಡ ಓರ್ವ ಮುದುಕ ನಿಧಾನಕ್ಕೆ ಬಂದು ಬಾಗಿಲು ತೆಗೆದ. ದೃಷ್ಟಿ ಪೂರ್ತಿ ಮಂಜಾಗಿದ್ದು ಕಷ್ಟ ಪಟ್ಟು ಬಂದವರನ್ನು ನೋಡ ಹತ್ತಿದರು.ಅವರಿಗೆ ಲಾಕೆಟ್ ನಲ್ಲಿದ್ದ ಫೋಟೊ ಸರಿ ಕಾಣುತ್ತಿರಲಿಲ್ಲವಾಗಿ, ಬ್ಲೋ ಅಪ್ ಮಾಡಿದ ಫೋಟೊ ನೇ ತೋರಿಸಿದರು. ಅವರು ಏನೋ ಆಲೋಚಿಸುವವರಂತೆ ಪುನ: ಒಳಗೆ ಹೋಗಿ ಇವರ ಬಳಿಯಿದ್ದ ಲಾಕೆಟ್ ತರಹದ್ದೆ ಇನ್ನೊಂದು ಲಾಕೆಟ್ ತಂದು ಇವರ ಮುಂದೆ ಇರಿಸಿದರು. ಮಾತನಾಡುವಾಗ ದನಿ ಅದುರುತ್ತಿತ್ತು.
"ಸೋಮು ನಮ್ಮ ಮನೆಗೆ ಬಂದಾಗ ಈ ಲಾಕೆಟ್ ಚೈನ್ ಅವನ ಕುತ್ತಿಗೆಗಿತ್ತು. ಅವನನ್ನು ದತ್ತು ಪಡೆದ ಈ ಮನೆಯವರು ಅವನನ್ನು ಸ್ನಾನ ಮಾಡಿಸಿ ತರಲು ನನಗೆ ಹೇಳಿದರು. ಹಾಗೆ ಆ ಚೈನ್ ನ್ನೂ ತೆಗೆದಿಡಲು ಸೂಚಿಸಿದರು. ನಾನು ಆ ಚೈನ್ ಅನ್ನು ನನ್ನ ಬಳಿಯೇ ಇರಿಸಿಕೊಂಡೆ. ಇದಾದ ಕೆಲ ದಿನದ ನಂತರ ರಾತ್ರಿ ಎಲ್ಲಿಂದಲೋ ಕಾರ್ ನಲ್ಲಿ ಮರಳುತ್ತಿರುವಾಗ, ಕಾರ್ ಎಕ್ಸಿಡೆಂಟ್ ನಲ್ಲಿ ಇಬ್ಬರೂ ತೀರಿಕೊಂಡರು. ದತ್ತು ಪ್ರಕ್ರಿಯೆ ಇನ್ನೂ ಮುಗಿದಿರಲಿಲ್ಲ. ಎಲ್ಲಿ ಎಲ್ಲ ಆಸ್ತಿ ಆ ಹುಡುಗನಿಗೇ ಹೋಗುತ್ತೋ ಅಂತ ಅವರ ದಾಯಾದಿಗಳು ಈ ಪುಟ್ಟ ಹುಡುಗನಿಗೆ ಕಿರುಕುಳ ನೀಡಲು ಆರಂಭಿಸಿದರು. ಆ ಮೇಲೆ ಒಂದು ದಿನ ಸೋಮು ಕಾಣೆಯಾದ. ಕೆಲಸದವನಾದ ಏನು ಮಾಡಲು ಸಾಧ್ಯವಿತ್ತು?
ನಮ್ಮ ಪತ್ತೇದಾರರು ಒಂದಕ್ಕೊಂದು ತಾಳೆ ಹಾಕಿ ಸೋಮು ಯಾಕೆ ಆತ್ಮಹತ್ಯೆ ಮಾಡಿಕೊಂಡನು ಅಂತ ಅಂದಾಜಿಸಿದರು.
ಅವರು ಗೊತ್ತಿಲ್ಲದೆ ಘೋರ ಅಪರಾಧ ಮಾಡಿದ್ದರು. ತಮ್ಮ ತಂಗಿಯನ್ನೆ ಮದುವೆಯಾಗಿ ಅವಳ ಜತೆ ದೈಹಿಕ ಸಂಬಂಧ ಹೊಂದಿದ್ದರು. ಈ ಆಘಾತ ತಡೆಯಲಾಗದೆ ಜೆನೆಟ್ ಗೂ ಹೇಳಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದನು.
ಪತ್ತೆದಾದರು ಜೆನೆಟ್ ಬಳಿ ಹೋಗಿ’ನಮಗೂ ಕಾರಣ ತಿಳಿಯಲಾಗಲಿಲ್ಲ’ ನನ್ನನ್ನು ಕ್ಷಮಿಸಿ ಬಿಡಿ ಅಂತ ಕೇಳಿಕೊಂಡನು. ಇದನ್ನು ಕೇಳಿದ ಪತ್ತೇದಾರರ ಜ್ಯೂನಿಯರ್, ಯಾಕೆ ಸುಳ್ಳು ಹೇಳಿದ್ರಿ? ಅವರು ಯಾಕೆ ಆತ್ಮಹತ್ಯೆ ಮಾಡಿಕೊಂಡದ್ದು ಅಂತ ನಮಗೆ ತಿಳಿದಿದೆಯಲ್ಲ?’
’ಸತ್ಯ ಗೊತ್ತಾಗಿ ಅವರೂ ಆತ್ಮಹತ್ಯೆ ಮಾಡಿಕೊಂಡ್ರೆ’ ಅವರದಲ್ಲದ ಪಾಪಕ್ಕೆ ಅವರನ್ನು ಯಾಕೆ ಹೊಣೆಮಾಡಿ ಅವರಲ್ಲೂ ಪಾಪಪ್ರಜ್ಝೆ ತುಂಬುವುದು. ಬದುಕಿಕೊಳ್ಳಲಿ ಬಿಡು.
(ಈ ಕತೆಗೆ ಸ್ಪೂರ್ತಿ ಕೆ.ಎನ್. ಗಣೇಶಯ್ಯನವರ ನೇಹಲ ಕಥಾಸಂಕಲದಲ್ಲಿನ ಕತೆ ’ನಿಷಿದ್ದಬಂಧ’ ಹಾಗೂ ಯಾವಾಗಲೋ ಚಿಕ್ಕಂದಿನಲ್ಲಿ ಅಂಗಡಿಯಿಂದ ಸಾಮಾನು ಕಟ್ಟಿಸಿ ಬಂದ ಮರಾಠಿ ಪೇಪರ್ ನಲ್ಲಿ ಬಂದ ಇಂತಹುದೊಂದು ಕತೆಯ ನೆನಪಿನ ಆಧಾರದ ಮೇಲೆ.)
:-)

November 7, 2012

ಹೀಗೂ ಉಂಟಂತೆ!!!

ಮೊನ್ನೆ ಬೆಂಗಳೂರಿನಿಂದ ಬೆಳಗಾವಿಗೆ ಬರುತ್ತಾ ಬಸ್ ನಲ್ಲಿ ಕೇಳಿಸಿಕೊಂಡಿದ್ದು.
ನನ್ನ ಪಕ್ಕದ ಸೀಟನಲ್ಲಿಬ್ಬರು ಗಟ್ಟಿಯಾಗೇ ಮಾತಾಡ್ತಾ ಇದ್ದರು. ಆದ್ದರಿಂದ ಕದ್ದು ಕೇಳಿದ್ದು ಅಂತ ಹೇಳಲಿಕ್ಕೆ ಆಗಲ್ಲ.
ಪಕ್ಕದ ಸೀಟ್ ಅಂದ್ರೆ ನಾನು ಹೋಗಿದ್ದು 2 + 1 ಬಸ್ ನಲ್ಲಿ
ಸೋ ಅವರ ಸಂಭಾಷಣೆ ಹೀಗೆ ಸಾಗಿತ್ತು. ಕಿಟಕಿ ಬಳಿ ಕೂತವರು ಒಬ್ಬ ಇಕೊನೋಮಿಕ್ ಕನ್ಸಲ್ಟೆಂಟ್ ಅಂತೆ. ಇತ್ತೀಚಿಗೆ ಮಧ್ಯಪದ್ರೇಶದ ಒಂದು ಊರಿಗೆ ದೊಡ್ಡ ಕಂಪೆನಿ ಒಂದಕ್ಕೆ ಕನ್ಸಲ್ಟೆಂಟ್ ಆಗಿ ಹೋಗಿದ್ದರಂತೆ. ಆಗ ಸೆಕೆ ಸಮಯ. ಒಂದು ಸಂಜೆ ತುಂಬ ಸೆಕೆ ಎನಿಸಿ, ಅವರು ಉಳಿದುಕೊಂಡಿದ್ದ ಗೆಸ್ಟ್ ಹೌಸ್ ಮೇಲ್ವಿಚಾರಕನಿಗೆ, ಒಂದು ಬೀಯರ್ ಹೊಡೆಯುವ ಅಂದಾಜಲ್ಲಿ, ’ಇಲ್ಲಿ ಡ್ರಿಂಕ್ಸ್ ಎಲ್ಲಿ ಸಿಗತ್ತೆ’ ಅಂತ ಕೇಳಿದನಂತೆ. ಗೆಸ್ಟ್ ಹೌಸ್ ಪಕ್ಕದ ರೋಡ್ ತೋರಿಸಿ ’ಯಾಹಾಂ ಸೆ ಏಕ್ ಹೀ ರಾಸ್ತಾ, ದೊ ಕಿಲೋಮಿಟರ್ ಕಿ ದೂರಿ ಪರ್ ಹೈ, ಕಾರ್ ಮಂಗವಾವೂಂ ಸಾಬ್?’ ಅಂತ ಕೇಳಿದನಂತೆ. ನಮ್ಮ ನೆರೇಟರ್ (narrator) ಸಾಹಬರಿಗೆ ಒಂದು ಬ್ರೇಕ್ ಬೇಕಿತ್ತಂತೆ ಹಾಗೂ ಎಕ್ಸರ್ಸೈಝ್ ಆದ ಹಾಗಾಗುತ್ತೆ ಅಂತ ’ಪೈದಲ್ ಚಲೂಂಗಾ, ಗಾಡಿ ಕಿ ಜರೂರತ್ ನಹೀಂ’ ಅಂತ ಹೇಳಿ ಸವಾರಿ ಆ ಕಡೆ ಹೆಜ್ಜೆ ಹಾಕಿತಂತೆ..:-) 
ಒಂದು ಕಿ.ಮಿ ನಡೆದ ನಂತರ ಒಂದು ಸೈನ್ ಬೋರ್ಡ್ ಸಿಕ್ಕಿತಂತೆ...***** ಕ್ಲಬ್ -1 km ಅಂತ. ಇನ್ನಷ್ಟು ನಡೆದುಕೊಂಡ ಹೋದ ಮೇಲೆ ಕ್ಲಬ್ ನ ಗೇಟ್ ಸಿಕ್ಕಿತಂತೆ. ಗೇಟ್ ನಿಂದ ಕ್ಲಬ್ ಒಂದು ಫರ್ಲಾಂಗ್ ಇತ್ತಂತೆ. ಒಳಗೆ ನಡೆದು ರಿ ರಿಸೆಪ್ಷನ್ ಬಳಿ ಹೋಗುವಷ್ಟರಲ್ಲಿ ಅಲ್ಲಿನ ವಾಚ್ ಮನ್ ’ಆಪ್ ಅಂದರ್ ನಹೀಂ ಜಾ ಸಕ್ತೆ’ ಅಂತ ದಾರಿಗೆ ಅಡ್ಡ ನಿಂತನಂತೆ. ಯಾಕಪ್ಪ ಅಂತ ಕೇಳಿದ್ರೆ, ’ನೀವು ಶೂ ಹಾಕಿಕೊಂಡಿಲ್ಲ’ ಅಂತ ಹೇಳಿದ್ನಂತೆ. ದಿನ ಇಡೀ ಶೂ ಹಾಕಿದ್ದು, ಸಾಕ್ಸ್ ಗೆ ವಾಸನೆ ಹೊಡೆಯುತ್ತೆ ಅಂತ ಹಾವಾಯಿ ಚಪ್ಪಲ್ ಹಾಕಿಕೊಂಡು ಬಂದಿದ್ದರಿವರು. ’ದೂರದಿಂದ ನಡೆದುಕೊಂಡು ಬಂದಿದ್ದೇನೆ, ****** ಕಂಪೆನಿ ಕೆಲ್ಸದ ಮೇಲೆ ಬಂದಿದ್ದೆ ಅಂದರೂ ಅವನದ್ದು ಒಂದೇ ವರಾತ ವಂತೆ no shoe no entry..ಸರಿ ಇನ್ನು ಇವನ ಜತೆ ಏಗಿ ಪ್ರಯೋಜನವಿಲ್ಲ, ಬಂದ ದಾರಿಗೆ ಸುಂಕವಿಲ್ಲ ಅಂತ ನಮ್ಮ ನೆರೇಟರ್ ಮಹಾಶಯರು ಇನ್ನೇನು ಗೇಟ್ ಬಳಿ ತಲುಪುವಷ್ಟರಲ್ಲಿ, ಒಂದು ಕಾರ್ ಬಂದು ಅವರ ಬಳಿ ನಿಂತು, ಅವರ *****ಕಂಪಿನಿಯ ಹಿರಿಯ ಅಧಿಕಾರಿ ಇಳಿದು, ’ಇದೇನಿದು ಇಷ್ಟು ಬೇಗ ಹೊರಟಾಯಿತೆ? ಇವತ್ತು ಒಂದೊಳ್ಳೆ ಗಜಲ್ ಕಾರ್ಯಕ್ರಮ ಇದೆ, ಕೇಳಿಕೊಂಡು ಹೋಗಬಹುದಿತ್ತು’. ’ಇಲ್ಲ ಶೂ ಇಲ್ಲದ ಕಾರಣ ಒಳಗೆ ಬಿಡಲಿಲ್ಲ.’ ಅರೇ ಬನ್ನಿ ನನ್ನ ಜತೆ, ಅಂತ ರೆಸೆಪ್ಪ್ಷನ್ ಬಳಿ ಹೋಗಿ ಅಲ್ಲಿ ಸಹಿ ಹಾಕಿ (ಅವರು ಅಲ್ಲಿನ ಮೆಂಬರ್ ಅಂತೆ, ವರ್ಷಕ್ಕೆ ಒಂದು ಲಕ್ಷ ಮೆಂಬರ್ ಶಿಪ್ ಫೀ ಅಂತೆ). ರಿಸೆಪ್ಷನಿಷ್ಟ್ ಬಳಿ ಹಿರಿಯ ಅಧಿಕಾರಿ ಗುಸು ಪುಸು ಏನೋ ಮಾತಾಡಿದರಂತೆ. ನಮ್ಮ ನೆರೇಟರ್ ಮಹಾಶಯರು ’ಓ ಇವರ interference ಇಂದ ನನಗೆ ಒಳಬಿಡುತ್ತಿದ್ದಾರೆ ಅಂದುಕೊಳ್ಳುವಷ್ಟರಲ್ಲಿ , ರಿಸೆಪ್ಷನಿಷ್ಟ್, ’ಸಾಬ್ ಆಪ್ ಹಮಾರೆ ಸಾಥ್ ಚಲಿಯೆ’ ಅಂತ ಒಂದು ದೊಡ್ಡ ಕೋಣೆಗೆ ಕರೆದುಕೊಂಡು ಹೋದನಂತೆ. ಅಲ್ಲಿ ನೋಡಿದರೆ rack ಮೇಲೆ rack....ಅಲ್ಲಿ ಎಲ್ಲಾ ಸೈಜ್ ನ ಶೂ ಗಳು. ’ಆಪ್ ಕಾ ಸೈಜ್’ ಅಂತ ಕೇಳಿ ಇವರು ಹಾಕಿಕೊಂಡ ಬಟ್ಟೆಗೆ ಸ್ಯೂಟ್ ಆಗುವ ಒಂದು ಜತೆ ಶೂ ಕೊಟ್ಟನಂತೆ. ಶೂ ಕ್ಲೀನ್ ಆಗಿದ್ದು ಅದರಲ್ಲಿ ಸಿಲಿಕಾ ಜೆಲ್ ಪ್ಯಾಕೆಟ್ ಗಳನ್ನು ತುಂಬಿಟ್ಟಿದ್ದರಂತೆ. ಒಂದು ಜತೆ ಸಾಕ್ಸ್ ಗೆ ಇವರು ದುಪ್ಪಟ್ಟು ದುಡ್ಡು ಕೊಟ್ಟು ಕೊಳ್ಳಬೇಕಾಗಿ ಬಂದದ್ದು ಮಾತ್ರವಲ್ಲ ಶೂ ಬಾಡಿಗೆ ಮತ್ತು maintenance ಅಂತ ಸಣ್ಣ ಮೊತ್ತ ಕೊಡಬೇಕಾಯಿತಂತೆ. ಉಳಿದಂತೆ ಒಳಗಡೆ ಹೋದ ಮೇಲೆ ಅನ್ ಲಿಮಿಟಡ್ ಡ್ರಿಂಕ್ಸ್, ಸ್ನ್ಯಾಕ್ಸ್ ಊಟ ಇತ್ಯಾದಿ ಅಂತೆ, ಯಾಕೆಂದರೆ ಇವರು ಹಿರಿಯ ಅಧಿಕಾರಿ ಜತೆ ಇದ್ದರಲ್ಲವೇ?
ಈ ಪೋಸ್ಟ್ ನನ್ನ ಆತ್ಮೀಯ ಗೆಳತಿ/ಮಗಳು ದಿವ್ಯಾ ಮಲ್ಯಾಗೆ...:-) ಪ್ರೀತಿಯಿಂದ....

November 2, 2012

ಭವಿಷ್ಯ: ಬೆಸ್ತು



ನನ್ನ ತಂದೆಯವರು ಬೆಳಿಗ್ಗೆ ಜ್ಯೋತಿಷ್ಯ ಕಾರ್ಯಕ್ರಮ ನೋಡುತ್ತಿದ್ದಾಗ ಹೊಳೆದಿದ್ದು:
ಅದೊಂದು ಫೋನ್ ಇನ್ ಕಾರ್ಯಕರಮ.
ತಾಯಿ: ಗುರೂಜಿ ನನ್ನ ಮಗನ ಭವಿಷ್ಯ ಹೇಗಿದೆ?
ಗುರೂಜಿ: ಓದಲ್ಲಿ ಸ್ವಲ್ಪ ಹಿಂದಿದ್ದಾನೆ ಆದರೂ ಏನಡ್ಡಿಯಿಲ್ಲ.
ಕೆಲದಿನಗಳ ನಂತರ
ಗುರೂಜಿ ನಿಮ್ಮನ್ನ ಕಾಣಲು ಒಬ್ಬ ಯುವಕ ಬಂದಿದ್ದಾನೆ
ಗುರೂಜಿ: ಒಳಗೆ ಕಳಿಸಿ ಅವನ್ನನ್ನ
ಯುವಕ: ಗುರೂಜಿ ನೀವು ಟಿವಿ. ಕಾರ್ಯಕ್ರಮದಲ್ಲಿ ಭವಿಷ್ಯ ಹೇಳಿ ಸಕತ್ತ್ ದುಡ್ಡು ಮಾಡ್ತಿರಬೇಕಲ್ಲವಾ??
ಗುರೂಜಿ: ಹಾಂ ಬರುತ್ತೆ ಆದಾಯ. ಯಾಕೇ?
ಯುವಕ್: ನೀವು ನಿಮಗೆ ಬರುವ ಆದಾಯದಲ್ಲಿ ನನಗೆ 20% ಕೊಡಬೇಕು
ಗುರೂಜಿ: ಯಾಕೆ?
ಯುವಕ: ಇಷ್ಟರ ತನಕ ನಾನು ಚೆನ್ನಾಗಿ ಓದಿ ಚೆನ್ನಾಗಿ ಅಂಕಗಳನ್ನು ಪಡೆಯುತ್ತ ಬಂದಿದ್ದೇನೆ. ಆದರೆ ನಿನ್ನೆ ಅಮ್ಮನ ನಿಮ್ಮ ಸಂಭಾಷಣೆ ಕೇಳಿಸ್ಕೊಂಡೆ..ಇನ್ಮುಂದೆ ಓದದೆ ಇರಬೇಕೆಂದು ಕೊಂಡಿದ್ದೇನೆ.
ಗುರೂಜಿ; ಅದಕ್ಕೂ ಇದಕ್ಕೂ ಏನು ಸಂಬಂಧ?
ಯುವ್ಕ: ಅಮ್ಮನಿಗೆ ನನ್ನ ಮೇಲೆ ನಂಬಿಕೆಯಿಲ್ಲ. ಈಗ ನಾನು ಅಂಕ ತೆಗೆದುಕೊಳ್ಳದೇ ಇದ್ದರೆ ಅಮ್ಮನಿಗೆ ನಿಮ್ಮ ಮೇಲೆ ನಂಬಿಕೆ ಇನ್ನೂ ಹೆಚ್ಚಾಗುತ್ತೆ. ಆದ್ದರಿಂದ ನಿಮಗೆ  ಇದರಿಂದ ಆದಾಯ ಹೆಚ್ಚುತ್ತದೆ.ಅಮ್ಮ ಅವರ ಸ್ನೇಹಿತೆಯರಿಗೆ ಆಪ್ತೇಷ್ಟರಿಗೆ ಈ  ವಿಷಯ ಹೇಳುತ್ತಾರೆ. ನಿಮಗೆ free advertisement ಆಗುತ್ತೆ, ಹಾಗಾಗಿ.ನೀವು ನನ್ನ ಜತೆ 20% ಶೇರ್ ಮಾಡಲೇಬೇಕು..
(ಸುಮ್ನೆ, ನಾನು ಟೂರ್ ಮೇಲಿದ್ದೀನಿ. ಚಿಕ್ಕ ಲ್ಯಾಪ್ ಟಾಪ್ ನಲ್ಲಿ ಟೈಪ್ ಮಾಡೋದು ಕಿರಿಕಿರಿ..ಇದರಲ್ಲಿ ಕಾಗುಣಿತದ ತಪ್ಪಿದ್ದಲ್ಲಿ ಮುಂದಿನ ತಿಂಗಳು ಸರಿಮಾಡೋದು...ಅಲ್ಲಿ ತನಕ...Sayonara...)