ಒಬ್ಬನಿದ್ದ ಬಡವ. ಬೆಣ್ಣೆ ಮಾರಿ ಜೀವನ ನಡೆಸುತ್ತಿದ್ದ. ಅವನು ಒಂದು ಅಂಗಡಿಗೆ ಮಾತ್ರ ಬೆಣ್ಣೆ ಮಾರುತ್ತಿದ್ದ. ಒಂದು ಕೆ ಜಿ ಬೆಣ್ಣೆ ಮಾರಿ ಅದರ ದುಡ್ಡು ಇಸಕೊಂಡು ಮನೆಗೆ ಹೋಗುವುದು. ಇದು ಅವನ ದಿನಚರಿ ಒಂದು ಸಲ ಆ ಬೆಣ್ಣೆ ಕೊಂಡುಕೊಳ್ಳುವ ಧಣಿ ಗೆ ಬೆಣ್ಣೆ ಯನ್ನು ತೂಕ ಮಾಡುವ ಹುಕ್ಕಿ ಬಂತು. ಅರೆ ಇದೇನು ೯೦೦ ಗ್ರಾಮ್ ಮಾತ್ರ ಇದೆ. ಬರಲಿ ಅಂವ ಮಾಡ್ತೀನಿ ಇವತ್ತು ಅಂತ ಅವನಿಗೆ ಕಾಯ್ತಾ ಇದ್ದ.
ಬೆಣ್ಣೆ ಮಾರುವವ ಬಂದೊಡನೆ "ಏನಂತ ತಿಳಕಂಡಿದ್ದೀಯಾ. ಇಷ್ಟು ದಿನ ಮೋಸ ಮಾಡಿದೀಯಾ. ಇನ್ನೇ೦ದು ನನ್ನ ಅಂಗಡಿಗೆ ಬೆಣ್ಣೆ ಮಾರಲು ಬರಬೇಡಾ"ಅಂತ ಆವಾಜ್ ಹಾಕಿದ.
ಬೆಣ್ಣೆ ಮಾರುವವ: ಧಣಿಗಳೇ ಹಾಗೆ ಮಾಡ ಬೇಡಿ. ಈ ಬಡವನ ಹೊಟ್ಟೆ ಮೇಲೆ ಹೊಡಿಬೇಡಿ. ನೀವು ಪ್ರತಿ ದಿನ ಕೊಡುವ ದುಡ್ಡಿನಿಂದಲೇ ನನ್ನ ಜೀವನ. ಎಷ್ಟು ಬಡವನೆಂದರೆ ಬೆಣ್ಣೆ ತೂಕ ಮಾಡಲು ನನ್ನ ಬಳಿ ಒಂದು ಕೆ ಜಿ ತೂಕದ ತಕ್ಕಡಿ ಕಲ್ಲೇ ಇಲ್ಲ. ನೀವು ಕೊಟ್ಟ ಒಂದು ಕೆ ಜಿ ಸಕ್ಕರೆ ಗೆ ಸಮ ಪ್ರಮಾಣದಲ್ಲಿ ಬೆಣ್ಣೆ ತೂಕ ಮಾಡಿ ಕೊಡುವವ ನಾನು .....
ಧಣಿ = ಇಂಗು ತಿಂದ ಮಂಗ
ವಾಟ್ಸ್ಯಾಪ್ ನಲ್ಲಿ ಬಂದಿದ್ದು.