November 30, 2010

ಕಡಲೆಕಾಯಿ ಪರಿಷೆ

ಕ್ಯಾಮರಾ ಚಾರ್ಜ್ ಆಗಿರಲಿಲ್ಲ. so sirph 4 photos.

ಮೈ beautiful daughter!!

ಕಡಲೆಕಾಯಿ ಪರೀಕ್ಷೆ by me???? no way.

ನಿಹಾರಿಕಾ


.

November 22, 2010

ಮಂಗಳೂರು special - ಬನ್ಸ್ ಮತ್ತು ತೊವ್ವೆ


2 ಗ್ಲಾಸ್ - ಮೈದಾ ಹಿಟ್ಟು
1 ಹಿಡಿ - ಕಡಲೆ ಹಿಟ್ಟು
2 ಟೇಬಲ್ ಸ್ಪೂನ್ - ಸಕ್ಕರೆ
1 ಟೀ. ಸ್ಪೂನ್ - ಅಡಿಗೆ ಸೋಡಾ
2 ಟೇ ಸ್ಪೂ - ಮೊಸರು
2 ಟೀ.ಸ್ಪೂ ಜೀರಿಗೆ, 4 ಹಸಿಮೆಣಸಿನ ಕಾಯಿ, ತುಂಬಾ ಹಣ್ಣಾದ 2 ಬಾಳೆ ಹಣ್ಣು (ಸಿಪ್ಪೆ ಕಪ್ಪಾಗಿದ್ದು), ರುಚಿಗೆ ಉಪ್ಪು ಮತ್ತು deep fry ಮಾಡಲು ಎಣ್ಣೆ.

ಮೊಸರಿಗೆ ಸೋಡಾ ಪುಡಿ, ಸಕ್ಕರೆ, ಉಪ್ಪು ಹಾಕಿಡಿ. ಮಿಕ್ಸಿಯಲ್ಲಿ ಜೀರಿಗೆ, ಹಸಿಮೆಣಸಿನಕಾಯಿ, ಬಾಳೆ ಹಣ್ಣು ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮೊಸರಿಗೆ ಹಾಕಿ. ಎರಡು ನಿಮಿಷ ಅಂದ್ರೆ ಸಕ್ಕರೆ ಕರಗುವ ತನಕ ಕೈಯಾಡಿಸಿ. ಇದಕ್ಕೆ ಮೈದಾ ಹಿಟ್ಟು + ಕಡಲೆ ಹಿಟ್ಟು ಬೆರೆಸಿ , ನೀರನ್ನು ಹಾಕಿ ತುಂಬಾSSSSSS ಮೆತ್ತಗಿನ dough ತಯಾರಿಸಿ. ಒದ್ದೆ ಬಟ್ಟೆಯಿಂದ 4-5 ಗಂಟೆಮುಚ್ಚಿಡಿ. ದೊಡ್ಡ ಲಿಂಬೆ ಹಣ್ಣಿನ ಗಾತ್ರದ ಹಿಟ್ಟಿನ ಉಂಡೆ ಮಾಡಿ,(ಪೂರಿ size ನಲ್ಲಿ )ಸ್ವಲ್ಪ ದಪ್ಪ ದಪ್ಪ ಲಟ್ಟಿಸಿ ಎಣ್ಣೆಯಲ್ಲಿ ಕರಿಯಿರಿ :-) ಇಬ್ಬರಿಗೆ ಸಾಕು.

for ತೊವ್ವೆ

ತೊಗರಿಬೆಳೆ ತೊಳೆದು, 2 ಹಸಿ ಮೆಣಸಿನಕಾಯಿ ಸೀಳಿ ಹಾಕಿ, ಸ್ವಲ್ಪ ಅರಿಶಿನ ಪುಡಿ ಬೆರೆಸಿ ನೀರು ಹಾಕಿ ಬೇಯಿಸಿ.. ಒಗ್ಗರಣೆಗೆ ಸಾಸಿವೆ, ಕರಿಬೇವು, ಹಿಂಗು ಮತ್ತು ಕೆಂಪು ಒಣ ಮೆಣಸು ಹಾಕಿ. ಉಪ್ಪು ಹಾಕಲು ಮರೆಯಬೇಡಿ.


ಈ ತಿನಿಸು ಸಂಜೆಗೆ ಅಥವಾ ರಜೆಯಿದ್ದಾಗ nice. ಬ್ರೇಕ್ ಫಾಸ್ಟ್ ಗೆ ಇದನ್ನು ಮಾಡಿ ತಿಂದು , ಆಫೀಸ್ ನಲ್ಲಿ ನಿದ್ದೆ ಹೋಗಿ ನನ್ನ ಬೈಯಬೇಡಿಯಪ್ಪ.

Double role: ದಪ್ಪಗೆ ಲಟ್ಟಿಸಿ ಚಾಪಾತಿ ಕಾವಲಿಮೇಲೆ ಎಣ್ಣೆ ಹಾಕದೆ ಬೇಯಿಸಬಹುದು. ಇದಕ್ಕೆ ’ವಸ್ತಾದಿ ರೊಟ್ಟಿ” ಅನ್ನುತಾರೆ. ಬೆಣ್ಣೆ ಜತೆ ತಿನ್ನ ಬಹುದು ಅಥವಾ ತೊವ್ವೆ ಜತೆಗೂ!!
:-)

November 15, 2010

work is worship

ಕಾಯಕವೇ ಕೈಲಾಸ


ಈಗ ಮಧ್ಯಾಹ್ನ ನೆನಪಾಯಿತು. ಇವತ್ತು ನಮ್ಮ ಸಂಸ್ಥೆಯ 10 ನೆ ಹುಟ್ಟುಹಬ್ಬ (foundation day) .ಕೆಲಸದಲ್ಲಿ ಎಲ್ಲರೂ ಎಷ್ಟು ವ್ಯಸ್ತರಾಗಿದ್ದಾರೆಂದರೆ, celebration ಇರಲಿ, ನೆನಪಿಸಿಕೊಳ್ಳೋದಕ್ಕೂ ಯಾರಿಗೂ ಪುರುಸೊತ್ತಿಲ್ಲ. ಈ ವರ್ಷ ಒಂದು ದೊಡ್ಡ ಸಮಾರಂಭ ಏರ್ಪಡಿಸಿ ನಮಗೆ ಸಹಕಾರ ನೀಡಿ, ನಾವು ಈ ೧೦ ವರ್ಷಗಳಲ್ಲಿ ರಾಷ್ತ್ರೀಯ-ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಪ್ರತ್ಯಕ್ಷ, ಪರೋಕ್ಷವಾಗಿ ಬೆನ್ನು ತಟ್ಟಿದವರಿಗೆಲ್ಲ ಖಂಡಿತ ಧನ್ಯವಾದ ಅರ್ಪಿಸಬೇಕೆಂದು ನಿರ್ಧರಿಸಿದ್ದೇವೆ.
ಐದನೆ ವರ್ಷದ ಸಂಸ್ಥಾಪನಾ ದಿನಾಚರಣೆ ಸಂಭ್ರಮದಲ್ಲಿ ನಮ್ಮೊಂದಿಗೆ ಮ್ಯಾಗಸೆಸ್ಸೆ ಪ್ರಶಸ್ತಿ ವಿಜೇತರಾದ ಪದ್ಮಶ್ರೀ ಡಾ. ಎಚ್. ಸುದರ್ಶನ್ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ನ ವರಿಷ್ಠ ಅಧಿಕಾರಿ, ಶ್ರೀಮತಿ ಮಹಪರಾ ಅಲಿ ನಮ್ಮೊಂದಿಗಿದ್ದರು.


ಶ್ರೀಮತಿ ಮಹಪರಾ ಅಲಿ, ದೀಪ ಬೆಳಗಿಸುತ್ತಿರುವವರು ಡಾ. ಎಚ್. ಸುದರ್ಶನ್. ಇವರಿಬ್ಬರ ಮಧ್ಯದಲ್ಲಿರುವವರು ಡಾ. ಸೋಮಶೇಖರ್. ದುರದೃಷ್ಟವಶಾತ್ ಅವರು ಈಗ ನಮ್ಮೊಂದಿಗಿಲ್ಲ. ಐದು ವರ್ಷಗಳ ಕಾಲ ಧೈರ್ಯದಿಂದ ಕ್ಯಾನ್ಸರ್ ಕಾಹಿಲೆ ಎದುರು ಹೋರಾಡಿ,  ಮೂರು ತಿಂಗಳಹಿಂದೆ ಅವರು ದೈವಾಧೀನರಾದರು. ನಮ್ಮ well wisher , ನಮ್ಮ ಸಂಸ್ಥೆಯ ಬಗ್ಗೆ ತುಂಬಾ ಆಸ್ಥೆ ವಹಿಸುತ್ತಿದ್ದವರು ಇಲ್ಲದ್ದು ನಮಗೆ ತುಂಬಲಾರದ ನಷ್ಟ. 

ಡಾ. ಸುದರ್ಶನ್ ಅವರು , ಎಲ್ಲರಿಗೂ ಮಾದರಿಯಾಗುವಂತ ಕರುಣಾ ಟ್ರಸ್ಟ್ ಹಾಗೂ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರವನ್ನು ಕಳೆದ 25 ವರ್ಷಗಳಿಂದ ಬಿ.ಆರ್.ಹಿಲ್ಲ್ಸ್ ನಲ್ಲಿ ನಡೆಸ್ತಾ ಇದ್ದಾರೆ.

November 5, 2010

Death by Chocolate

ಇದೇನೋ ಸಸ್ಪೆನ್ಸ್ ಕತೆ ಅನ್ನಕೋಬೇಡಿ.

ನಮ್ಮಲ್ಲಿ ಊಟಕ್ಕೆ ಬಂದಾಗ ವಸುಧೇಂದ್ರ ಅವರು, ತಮ್ಮ ಚಿಕ್ಕಂದಿನಲ್ಲಿ ತಿನ್ನುತ್ತಿದ ಅವಲಕ್ಕಿ, ಮೊಸರು, ಮತ್ತು ಚಟ್ನಿ ಪುಡಿ ಯ terrific combination, ಆಲೂಗಡ್ಡೆ ಫ್ರೈ, ನೆನೆಸಿಕೊಂಡು, ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿ,ಅಯ್ಯೋssss, (ನೆನಪು ಮಾಡಕೊಂಡ್ರೆ )ಪ್ರಾಣಹೋಗುತ್ತೆ’ ಅಂತ ಹೇಳ್ತಿದ್ದ ಮಾತನ್ನು ನಾನು, ಮಕ್ಕಳು ಬಿಟ್ಟ ಕಣ್ಣಿಂದ, ತೆರೆದ ಬಾಯಿಯಿಂದ ಕೇಳ್ತಾ ಇದ್ವಿ.

ಇವತ್ತು ನಾನು ಹುಟ್ಟಿದ ದಿನ. ಆಂಗ್ಲ ಕ್ಯಾಲೆಂಡರ್ ಪ್ರಕಾರ ಅದು 31 ನೇ ಅಕ್ಟೋಬರ್. ಶ್ರೀಕಾಂತ್ ಆಫೀಸು ಕೆಲಸದ ಮೇಲೆ ಓರಿಸ್ಸಾ ಗೆ ಹೋಗಿದ್ದರಿಂದ, ಅದನ್ನು ಇವತ್ತು ಆಚರಿಸಿದ್ವಿ. ಮಾಲವಿಕ ನನಗೋಸ್ಕರ ಚಾಕೋಲೇಟ್ ಚೀಸ್ ಕೇಕ್ (chocolate cheese cake) ತಂದಿದ್ಲು. ಕೇಕ್ ಕಟ್ ಮಾಡಿ ಬಾಯೊಳಗಿಟ್ಟ ಕೂಡಲೆ, ನನ್ನ ಕಣ್ಣು ತನ್ನಷ್ಟಕ್ಕೆ ಮುಚ್ಚಿಕೊಂಡು, ಅದರ ಸ್ವಾದ ನಾಲಿಗೆ ಮೇಲೆ ಮೆಲ್ಟ್ ಆಗ್ತಾ, ನಾನು ಈ ಲೋಕದಲ್ಲಿರದೇ ತೇಲ್ತಾ, ಸಮಾಧಿ ಸ್ಥಿತಿ ಯಿಂದ, ಇನ್ನೇನು ನಿರ್ವಾಣ ಹೊಂದಬೇಕು.... ಅನ್ನುವಷ್ಟರಲ್ಲಿ, ನನ್ನ ತಮ್ಮ ಫೋನ್ ಮಾಡ್ದ. ಸಹಜ ಸ್ಥಿತಿಗೆ ಮರಳುವಂತೆ ಮಾಡಿದ ಅವನಿಗೆ ಥ್ಯಾಂಕ್ಸ್ ಅಂತೂ ಹೇಳಲಿಲ್ಲ.


ಮಮಮಮಮ್.....what a heavenly taste!!!!ಪ್ರ್ರಾಣ ಹಾಗೆ ಹೋಗಿ, ಹೀಗೆ ಬಂದು ಬಿಡ್ತು. ವಸುಧೇಂದ್ರರ ಮಾತಿನ ಅರ್ಥ ಈಗಾಯ್ತು.

ಅಂದ ಹಾಗೆ ಡೆಥ್ ಬೈ ಚಾಕೋಲೇಟ್ ಐಸ್ ಕ್ರೀಮ್ ಹೆಸರು.

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

:-)