September 22, 2010

one day at the ನಂದಿ ಬೆಟ್ಟ

ದೇವನಹಳ್ಳಿ ಹೌಸಿಂಗ್ ಸೊಸೈಟಿಯ Annual General Body ಮೀಟಿಂಗ್ ಇತ್ತು. ಊಟ ಆದ ಮೇಲೆ ಸುಮ್ಮನೆ ನಂದಿ ಬೆಟ್ಟಕ್ಕೆ ಹೋಗಿದ್ವಿ. ಕೆಲವು ಚಿತ್ರಗಳು
ಬೆಟ್ಟಕ್ಕೆ ಹೋಗುವ ದಾರಿಯಲ್ಲಿ, ಕಾರ್ ನಿಂದ ತೆಗೆದ ಫೋಟೊ
just look at the view
ಬೆಟ್ಟದಲ್ಲಿ, ದೇವಸ್ಥಾನದಲ್ಲಿ ಸಾಕಷ್ಟು ಜನರಿದ್ದರೂ, ಸೋಜಿಗದ ವಿಷಯವೆಂದರೆ ಪುಷ್ಕರಣಿಯ ಬಳಿ ಯಾರೂ ಇರಲಿಲ್ಲ.
ಪುಷ್ಕರಣಿ ಮೆಟ್ಟಿಲಲ್ಲಿ ಅರಳಿದ ಪುಟ್ಟ ಪುಟ್ಟ ಹೂಗಳು
:-)
ಮೋಡ, ಜಿಟಿ ಜಿಟಿ ಮಳೆ, ಸ್ವಲ್ಪ ಗಾಳಿ..ಚೆನ್ನಗಿತ್ತು ವಾತಾವರಣ
ಇನ್ನಷ್ಟು ಮೋಡ...smile please
ದೂರದಲ್ಲಿ ಮಳೆ
ನಿಹಾರಿಕಾ ನಮ್ಮನ್ನೆಲ್ಲ ನಗಿಸಿ ಫೋಟೊ ತೆಗೆದದ್ದು
ತುಂಬ edge ನಲ್ಲಿ ನಿಂತಿದ್ದ ಈ ಹುಡುಗ
ಈ ಮಂಗವನ್ನು ಹುಡುಗರು ಕೆಣಕಿ ಸುಮಾರು ಜನರಿಗೆ ತೊಂದರೆಯಾಯಿತು.
ಪುಷ್ಕರಣಿ entrance
ಹೆ ಹೆ !! ನಾನು ತೆಗೆದದ್ದು ಅಂತ ಎಲ್ಲರಿಗೂ ಗೊತ್ತಾಯ್ತಲ್ಲ!!
ಛೋಟಾ ಬೆಟ್ಟ
just like that
ಬೆಟ್ಟದ ಬುಡದಲ್ಲಿ ಮನೆಗಳು
google map ತರಹ ಕಾಣುತಿತ್ತು
ಮೋಡ- ಮಳೆ
ಆ ಪರಿವಾರದವರು ತಮ್ಮ ಪಾಡಿಗೆ ಊಟ ಮಾಡ್ತಾ ಇದ್ದರು. ಮಂಗಗಳ ಕಾಟದಿಂದ ತಟ್ಟೆಗಳನ್ನು ಹಿಡಿದು ಈಚೆಗೆ ಬರುತ್ತ ಇರುವುದು.
ಅಕ್ಕ ತಂಗಿ ಜೋಡಿ

ವಾಪಸ್ ಬರುವಾಗ ದಾರಿಯಲ್ಲಿ..

We enjoyed the Sunday
:-)

September 15, 2010

Some assorted photos of ತೀರ್ಥಹಳ್ಳಿ -ತೋಟ, ಹಬ್ಬ ಇತ್ಯಾದಿ

ನಾವು ಗೌರಿ ಪೂಜೆಗೆ ಮೂರ್ತಿ ಅಥವಾ ಗೌರಿಯ ಮುಖವಾಡ ಬಳಸಲ್ಲ. ಜುಟ್ಟು ಇರುವ ತೆಂಗಿನಕಾಯಿಗೆ ಕಣ್ಣು ಮೂಗು ಬರೆದು ಅದನ್ನು ಕಲಶದ ಮೇಲೆ ಸ್ಥಾಪಿಸಿ ಪೂಜಿಸುತ್ತೇವೆ. ಗಣಪನನ್ನು ಪ್ರತಿಷ್ಟಾಪಿಸುವ ಮೊದಲು ಗೌರಿಯನ್ನು ಪೀಠದಲ್ಲಿ ಅಲಂಕರಿಸುತ್ತೇವೆ. ಕಲಶದ ಎಡ ಭಾಗದಲ್ಲಿ ಬೂದಿ ಮೆತ್ತಿಕೊಂಡಿರುವ ಮಹಾದೇವ again ತೆಂಗಿನಕಾಯಿಯ ರೂಪದಲ್ಲಿ.
ಪೂಜೆಗೆ ಅಣಿಯಾಗಿರುವ ಹೂ- ಹಣ್ಣು-ಹಂಪಲು
ಮನೆಯ ಒಳಗಿನ ಅಂಗಳ, ಅಂಗಳದಲ್ಲಿ ಪುಟ್ಟ ತುಲಸಿ ಕಟ್ಟೆ

ಗೆಜ್ಜೆವಸ್ತ್ರ ತಯಾರಿಸುವಲ್ಲಿ training ಮಾಲವಿಕಾಗೆ, ನನ್ನ ದೊಡ್ಡ ಭೈಯಾ ನವರಿಂದ. ನಾವು ಗೆಜ್ಜೆವಸ್ತ್ರವನ್ನು ಪೂಜೆಯ ದಿನವೇ ತಯಾರಿಸುವುದು.
ಈಗ  ಸುಶ್ರುತ ಬರೆದ ’ಗೆಜ್ವಸ್ತ್ರ’ ಸುಲಲಿತ ಪ್ರಬಂಧವನ್ನು ಓದಿ. ಎಷ್ಟು ಸೊಗಸಾಗಿ ಬರಿಯುತ್ತಾನೆ ಈ ಹುಡುಗ. ಇಗೋ ಇಲ್ಲಿದೆ ಲಿಂಕ್

ಆರತಿ ತಟ್ಟೆಗಳನ್ನು ಸಿಂಗರಿಸುತ್ತಿರುವ ಮಾಲವಿಕ

ಪಂಚಾಮೃತದ ಬಟ್ಟಲು
ಸೌತೆಕಾಯ್ ಪಚ್ಚಡಿ in the making. ಚೆನ್ನಾಗಿತ್ತು, ಖಾರ-ಲಿಂಬೆ ಹುಳಿ....:-)
ಸುಮ್ಮನೆ ನಂದೂ ಒಂದು ಫೋಟೊ ಇರಲಿ ಅಂತ....ಪೂಜೆ ಮಾಡುತ್ತಿರುವ ನನ್ನ ಕಾಂತ ಶ್ರೀಕಾಂತ :-)
ಅಲಂಕೃತಗೊಂಡ ಗಣಪ. ಗೌರಿಯ ಎಡಬದಿಗೆ ಒಂದು ಗೆಜ್ಜೆವಸ್ತ್ರ ಕಾಣ್ತಾ ಇದೆಯಲ್ಲ್ವಾ?? ಅಲ್ಲಿದ್ದಾನೆ ಮಹಾದೇವ!!
ವಿಸರ್ಜನಾ ಪೂಜೆಗೆ ರೆಡಿ!!! ಮಂಗಳಮೂರ್ತಿ ಮೋರಯಾ..ಪುಡ್ಚಾ ವರ್ಷಿ ಲೌಕರ್ ಯಾ!!!
***********************************************************************************************
ತೋಟದ ಬಳಿ ತೆಗೆದ ಕೆಲವು ಚಿತ್ರಗಳು
ತೀರ್ಥಹಳ್ಳಿಯಲ್ಲಿ ನಾವಿದ್ದ ಮೂರು ದಿನವು ಮಳೆ. ಸಂಜೆ ತೋಟದಲ್ಲಿ...
ಅಂಬಾssssssssssssss
ಅಡಿಕೆ ಹಾಳೆ ಟೊಪ್ಪಿ ಹಾಕದೆ ನಮ್ಮ ಸೀನಣ್ಣ ಹೊರ ಬರುವುದೇ ಇಲ್ಲ.
ಮಳೆಗೆ ಅರಳಿದ ಹೂ - ipomea
Lichen which caught Niharika's fancy
:-)
ಶ್ರೀಕಾಂತ್ ಯಾವುದೋ ಹೆಸರು ಹೇಳಿದ್ರು...ನೆನಪಿಗೆ ಬರುತ್ತಾ ಇಲ್ಲ. :-(
ಯಾವುದೋ ಹಳದಿ ಬಣ್ಣದ ಹೂವಾ
ಪುಟ್ಟ farmer ನಿಹಾರಿಕಾ...ನುಗ್ಗೆ ಬೀಜ ಹಾಕುವ ಮುನ್ನ...:-)
Sheep pen..ನಮ್ಮ ತೋಟದ ಉಸ್ತುವಾರಿ ನೋಡುವ ಕೇದಾರಿ (left side of pic in striped T-Shirt) ಇಲ್ಲಿ ಕುರಿ ಸಾಕ್ತಾನಂತೆ
ರಭಸವಾಗಿ ಹರಿಯುವ ಝರಿಗೆ ಮಣ್ಣು ಕೊಚ್ಚಿಕೊಂಡು ಹೋಗದಿರಲು ಅಡ್ಡ ಹಾಕಿದ sand bag.
ಕೆಳಗೆ ಹರಿದು ಬಂದ ನೀರಲ್ಲಿ ಪುಟ್ಟ ಪುಟ್ಟ ಮೀನು. ಎಂಟು ಮೀನು ನಾನು ತಂದು ಇಲ್ಲಿ ಇಟ್ಟುಕೊಂಡಿದ್ದೇನೆ.
silver ಕಲರ್ ನ ಮೀನು ತೋಟದ ಹಳ್ಳದಿಂದ. ಅವಕ್ಕೂ travel ಮಾಡುವ ಯೋಗ. ತೀರ್ಥಹಳ್ಳಿಯಿಂದ taxiನಲ್ಲಿ ಶಿವಮೊಗ್ಗ ತನಕ, ಆಮೇಲೆ ಟ್ರೈನ್ ನಲ್ಲಿ ಬೆಂಗಳೂರು, ಅಲ್ಲಿಂದ ರಿಕ್ಷದಲ್ಲಿ ಮನೆಗೆ. ಅವಕ್ಕೆ ಬೇಸರ ಬರಬಾರದೆಂದು petbonding ಅಂಗಡಿಯಿಂದ ಎರಡು swordtail fish ನಾನು ತಂದು ಹಾಕಿದ್ದು
ಈ ಪುಟ್ಟ ಮೀನುಗಳ ಆಟ ನೋಡುತ್ತ ಸುಮಾರು ಹೊತ್ತು ಕಳೆಯಬಹುದು. therapeutic. ಈಗಷ್ಟೆ ಡಾಕ್ಟರ್ ಮಿತ್ರರೊಬ್ಬರ ಫೋನ್ ಬಂದಿತ್ತು. ನನ್ನ ಮೀನ್ ಕತೆ ಹೇಳಿದಾಗ ಅವರೇನಂದ್ರು ಗೊತ್ತಾ?? ಮೀನಿನ ಓಡಾಟ ನೋಡ್ತಾ ಇದ್ರೆ ಕಣ್ಣಿನ / ದೃಷ್ಟಿದೋಷ ನಿವಾರಣೆಯಾಗುತ್ತದಂತೆ.
Fish bowl pictures by me ಉಳಿದ ಫೋಟೊಗಳು triggerhappy Niha...
:-)

September 9, 2010

ಹಬ್ಬದ ಶುಭಾಶಯಗಳು

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.
ನಮ್ಮ eco-friendly ಗಣಪ...travels with us to ತೀರ್ಥಹಳ್ಳಿ. ನಾವು ತೀರ್ಥಹಳ್ಳಿಯಲ್ಲಿ ಹಬ್ಬ ಆಚರಿಸುವುದು. ಬಂದ ಮೇಲೆ ಸಿಂಗರಿಸಿದ ಗೌರಿ-ಗಣಪರ ಚಿತ್ರಗಳನ್ನು ಹಾಕುತ್ತೇನೆ.
ಎಲ್ಲರೂ ಈ long weekend ಎಂಜಾಯ್ ಮಾಡಿ


:-)

September 2, 2010

a nano sequel to Sushrutha's poem

ಆಗಸ್ಟ್ ತಿಂಗಳೆಂದರೆ , ಕವಿ ಸುಶ್ರುತ ದೊಡ್ಡೇರಿಯವರಿಗೆ ಹೀಗನ್ನಿಸುತ್ತೆ .
ಮೊದಲು ಓದಿ.

http://hisushrutha.blogspot.com/2010/08/blog-post_30.html

ಆಗಸ್ಟ್ ತಿಂಗಳು ಒಂದು ತರಹ ಗಡಿಬಿಡಿಯಲ್ಲೇ ಮುಗಿಯುತ್ತೆ. ನಮ್ಮ ಕುಟುಂಬದಲ್ಲಿ ಈ ತಿಂಗಳು maximum ಹುಟ್ಟಿದಹಬ್ಬ, ಮತ್ತು ಎರಡು wedding anniversay. ಈ ತಿಂಗಳು ಶ್ರಾವಣ ಮಾಸದ ಚೂಡಿ ಪೂಜೆ, ನಾಗರ ಪಂಚಮಿ, ನೂಲು ಹುಣ್ಣಿಮೆ etc..etc...


ನಮ್ಮ ಆಫೀಸ್ ನಲ್ಲಿ ಕೂಡ ತುಂಬ ಜನರ ಹುಟ್ಟು ಹಬ್ಬಈ ತಿಂಗಳಲ್ಲೆ ಬರುತ್ತದೆ. ಮೊದಲೆಲ್ಲ ಆಫೀಸ್ ನಲ್ಲಿ, ನಾನು ಕೇಕ್ ತಂದು, ಅದನ್ನು cut ಮಾಡುವ ಪರಿಪಾಠ ಪ್ರತಿ ಜನರ ಹುಟ್ಟಿದ ಹಬ್ಬದ ದಿನ ದಂದು ಮಾಡುತ್ತಿದ್ದೆ. ashoka bakery (ರಾಜಾಜಿನಗರ, ನವರಂಗ talkies ಬಳಿ)ಯವನಿಗೆ ರಿಯಾಯತಿ ಕೂಡ ಕೇಳಿದ್ದೆ. ಅವನು ನಕ್ಕು ಬಿಟ್ಟ ವಿನಃ discount ಏನೂ ಕೊಡಲಿಲ್ಲ. ಇತ್ತೀಚಿಗೆ ಕೆಲಸದ ಒತ್ತಡ ಜಾಸ್ತಿ, ಹಾಗೂ ದಿನ ಬಿಟ್ಟು ದಿನ ಕೇಕ್/ಪಫ್ ತಿನ್ನಲು ವಾಕರಿಕೆ. ಆದ್ದರಿಂದ ನನ್ನ ಹೊಸ ಐಡಿಯ ರೂಪು ಗೊಂಡಿತು. ತಿಂಗಳ ಕೊನೆಯಲ್ಲಿ ದೊಡ್ಡ ಕೇಕ್ ತಂದು ಆ ತಿಂಗಳಲ್ಲಿ ಹುಟ್ಟು ಹಬ್ಬ ಆಚರಿಸುವ ಎಲ್ಲರಿಂದ ಕೇಕ್ ಕತ್ತರಿಸುವುದು. ಹಣ ಹಾಗೂ ಸಮಯದ ಉಳಿತಾಯ. ಹೇಗಿದೆ ನನ್ನ ಉಪಾಯ??

************************************

ಈ ಆಗಸ್ಟ್ ನಲ್ಲಿ ಬೇಜಾರಿನ ಸಂಗತಿ, ನಮ್ಮ ಸಂಸ್ಥೆಯ honorary ಬೋರ್ಡ್ member ಶ್ರೀ ಸೋಮಶೇಖರ, (ಫ್ರೊಫೆಸರ್, University of Agricultural Sciences, GKVK,Bangalore)ಐದು ವರ್ಷಗಳ ತರುವಾಯ pancreatic cancer ನ ವಿರುದ್ಧ ಧೈರ್ಯವಾಗಿ ಹೋರಾಡಿ, 19.08.2010 ರಂದು ದೈವಾಧೀನರಾದರು. ಹತ್ತು ವರ್ಷದ ಹಿಂದೆ ನಾವು ಬೆಂಗಳೂರಿಗೆ ಬಂದು ನಮ್ಮ ಸಂಸ್ಥೆಗಳನ್ನು ಸ್ಥಾಪಿಸುವಾಗ ಅವರು ನಮಲ್ಲಿ ಅಪಾರವಾದ ಧೈರ್ಯ/ಸ್ಥೈರ್ಯ ತುಂಬಿದ್ದರು. ಅವರ ಅಗಲಿಕೆ ನಮಗೆ ಖಂಡಿತ ತುಂಬಲಾರದ ನಷ್ಟ.

ಹುಟ್ಟು ಸಾವು two sides of the same coin ಅಲ್ಲವಾ? ಅವರ ಆತ್ಮಕ್ಕೆ ಶಾಂತಿ ಕೋರುತ್ತ...........................