October 29, 2013

ಮನೆಯಲ್ಲಿ ಬೇಕ್ ಮಾಡಿದ ಪಾವ್ ಮತ್ತು ಭಾಜಿ

ತಂಗಿ ಅಮೇರಿಕಾದಿಂದ ಬಂದಾಗಲೆಲ್ಲ ಒಂದು ದಿನ ನಾವು ಬೇಕಿಂಗ್ ಗೆ ಅಂತಲೇ ಇಡುತ್ತೇವೆ. ಆ ದಿನ ತರಹವಾರಿ ಕೇಕ್, ಬ್ರೆಡ್, ಕುಕ್ಕೀಸ್, ಡೋ ನಟ್ಸ್ ಗೆ ಮೀಸಲು.
ನಾನು, ತಮ್ಮಂದಿರು & ತಂಗಿ ಸ್ಟುಡಿಯೋ ಗೆ ಹೋಗಿ ತೆಗೆದ ಫೋಟೊ

ಹಲವಾರು ವರ್ಷಗಳ ಹಿಂದೆ, ನಮ್ಮ ತಂದೆ ಕೆಲಸ ಮಾಡುತ್ತಿರುವ ಬ್ಯಾಂಕ್ ಇನ್ನೊಂದು ಲಾಸ್ ನಲ್ಲಿರುವ ಬ್ಯಾಂಕ್ ಒಂದನ್ನು ಟೇಕ್ ಓವರ್ ಮಾಡಿತ್ತು. ಅದು ಜೈಪುರ್-ರಾಜಸ್ಥಾನ್ ದಲ್ಲಿತ್ತು. ಮುಂಬೈ ನಲ್ಲಿರುವ ಕ್ವಾರ್ಟರ್ಸ್ ಮಾತ್ರವಲ್ಲದೇ ಜೈಪುರ್ ನಲ್ಲೂ ಒಂದು ಮನೆ ಮಾಡುವ ಸೌಲಭ್ಯವಿದ್ದುದರಿಂದ  ನಮ್ಮ ತಂದೆ ಆ option ನಿಂದ ಅಲ್ಲಿಗೆ ಹೋದರು. ಆಗ ಡಿಸೆಂಬರ್ ಜನವರಿ ತಿಂಗಳು. ಅಲ್ಲಿಗೆ  ಬಿಡಾರ ಶಿಫ್ಟ್ ಮಾಡಿದಿದ್ರೆ ನಮ್ಮ ಶಾಲೆ ಕಾಲೇಜ್ ಗೆ ತೊಂದರೆ ಆಗುತ್ತಿತ್ತು.
ಅಮ್ಮ ,ಅಪ್ಪನ ಜತೆ ಜೈಪುರ್ ನ ಮನೆ ಹೊಂದಿಸಿಕೊಡಲಿಕ್ಕೆ ಅಂತ ಒಂದು ವಾರದ ಕಾಲ ಹೋಗಿರುವುದು ಅಂತಾಯಿತು. ಮನೆ ಮತ್ತು ತಮ್ಮ, ತಂಗಿಯರ ಜವಾಬ್ದಾರಿ ನನ್ನ ಮೇಲೆ. ಆದರೆ ಅಲ್ಲಿ ಹೋದದ್ದೆ ಅಮ್ಮನಿಗೆ ಸ್ಕಿನ್ ಇನ್ಫೆಕ್ಷನ್ ಆಗಿ, ಜ್ವರ ಎಲ್ಲ ಬಂದು ಅಮ್ಮ ಬರುವಾಗ ಒಂದು ತಿಂಗಳು ಕಳೆದು ಹೋಗಿತ್ತು. ಈ ಮಧ್ಯೆ ನನ್ನ ತಂಗಿಯ ಹುಟ್ಟು ಹಬ್ಬ. ಅವಳು ಮುಖ ಚಿಕ್ಕದು ಮಾಡಿ ತಿರುಗುವಾಗ ನನಗೆ ಕೆಟ್ಟದೆನಿಸಿತು. ನನಗೆ ಬೆಳಿಗ್ಗೆ ಸ್ಕೂಲ್ ಆದ್ರೆ ಅವಳಿಗೆ ಮಧ್ಯಾಹ್ನದ ಶಿಫ್ಟ್. 
ನಾನು ಮತ್ತು ನನ್ನ ತಮ್ಮ ಕೃಷ್ಣ ಅವಳಿಗೋಸ್ಕರ ಸರ್ಪ್ರೈಸ್ ಬರ್ತಡೆ ಪಾರ್ಟಿ ಮಾಡುವ ಯೋಜನೆ ಹಾಕಿಕೊಂಡೆವು. ಅವಳ ಹುಟ್ಟುಹಬ್ಬದ ದಿನ ಅವಳಿಗೆ ಶಾಲೆಯಲ್ಲಿ ಡಿಸ್ಟ್ರೂಬ್ಯೂಟ್ ಮಾಡಲು ಚಾಕೋಲೇಟ್ ತೆಗೆಸಿಕೊಟ್ಟೆ. ನಾವು ಆದಷ್ಟು ತಿಂಡಿಗಳನ್ನು ಮನೆಯಲ್ಲೇ ಮಾಡುತ್ತಿದ್ದ ದಿನಗಳವು. ಅಮ್ಮ ಯಾವುದೇ ತಿಂಡಿ ಮಾಡುವಾಗ ಅಮ್ಮನಿಗೆ ಸಹಾಯ ಮಾಡುತ್ತಿದ್ದರಿಂದ ಅಡುಗೆ ತಿಂಡಿ ಮಾಡುವ ಸಾಧಾರಣ ಅಂದಾಜಿತ್ತು.
ಅವಳು ಶಾಲೆಗೆ ಹೋದ ಮೇಲೆ ನಾನು ತಮ್ಮ ಸೇರಿ ಕೇಕ್, ಅದೂ ತ್ರೀ ಕಲರ್ ಕೇಕ್ ಮಾಡಿ ಇಟ್ಟು, ಬಟಾಟಾ ವಡಾ, ಸ್ವಲ್ಪ ಅವಲಕ್ಕಿ ಚೂಡಾ ಎಲ್ಲ ಮಾಡಿದೆವು.ಬಿಲ್ಡಿಂಗ್ ನ ಮಕ್ಕಳಿಗೆಲ್ಲ ಹೋಗಿ ಆಹ್ವಾನ ನೀಡಿದ್ದು ನನ್ನ ಇನ್ನೊಬ್ಬ ತಮ್ಮ ಪಾಂಡು. ಸಂಜೆ ಅವಳ ಖುಶಿ ನೋಡಿ ನಾವು ಮಾಡಿದ್ದು ಸಾರ್ಥಕವೆನಿಸಿದ್ದು ಮಾತ್ರವಲ್ಲ ಕೇಕ್ perfect professional ತರಹಾನೆ ಆಗಿತ್ತು. ನಾನು ಐಸಿಂಗ್ ಶುಗರ್ ಎಲ್ಲ ಹಾಕಿ ಅವಳ ಹೆಸರು ಬರೆದಿದ್ದೆ. 
ಸುಮಾರು ದೊಡ್ಡವಳಾದ ಮೇಲೆ ಅವಳು ಹೇಳಿದ್ದು "ನನ್ನ ಹುಟ್ಟುಹಬ್ಬದ ಹಿಂದಿನ ರಾತ್ರಿಯೆಲ್ಲ ನಾನು ಅತ್ತಿದ್ದೆ. ನನ್ನ ಬರ್ಥ್ ಡೇ ಮಾಡಿ ಫ್ರೆಂಡ್ಸ್ ಗೆಲ್ಲ ಕರೀಬೇಕು ಅಂತ ಇತ್ತು. ಅಮ್ಮನನ್ನು ನೆನೆಸಿಕೊಂಡು ತುಂಬಾ ಅತ್ತಿದೆ. that is one day in my life that i will never forget ಅಂತ.
ಈಗ ಅವಳು ಭಾರತಕ್ಕೆ ಬಂದಾಗಲೆಲ್ಲ ಈ ಕತೆ ಎಷ್ಟೊಂದು ಸಲ ರಿಪೀಟ್ ಆಗಿದ್ರೂ ಮಕ್ಕಳಿಗೆ ಅದನ್ನು ಕೇಳುವುದರಲ್ಲಿ ಖುಶಿ. i am so glad i made her day all those years ago. :-)
ಮನೆಯಲ್ಲಿ ಕೇಕ್, ಬ್ರೆಡ್ ಎಲ್ಲ ತಯಾರಾಗುವಾಗ ಏನು ಘಮ ವಾವ್. ನನಗೆ ತುಂಬ ಇಷ್ಟ. ಮನೆಯಲ್ಲಿ ಮೈಕ್ರೋವೇವ್ ಬಂದ ಮೇಲೆ ನಮ್ಮ ಮನೆಯಲ್ಲಿ ಮೂಡ ಬಂದಾಗಲೆಲ್ಲ ಬ್ರೆಡ್ ಪಾವ್ ಮಾಡುತ್ತಿರುತ್ತೇವೆ. ಕೆಳಗಡೆ ಕೊಟ್ಟ ರೆಸಿಪಿಯಿಂದ ಬ್ರೆಡ್ ಅಥ್ವಾ ಪಾವ್ ಎರಡೂ ತಯಾರಿಸಬಹುದು. ಬ್ರೆಡ್ ತಯಾರಿಸಲು ಅದರ ಅಚ್ಚು (container or mould) ತರಬೇಕಾಗುತ್ತೆ. ಆ ಕಂಟೈನರ್ ನಲ್ಲಿ ಅರ್ಧದಷ್ಟೆ ತುಂಬಿಸಿ ಅದು ಬೇಕ್ ಆಗಿ ಆ ಕಂಟೈನರ್ ತುಂಬ ಉಬ್ಬುತ್ತೆ.

ಮೈದಾ ಹಿಟ್ಟು - 200 ಗ್ರಾಂ (ನಾವು ಅರ್ಧ ಮೈದ ಅರ್ಧ ಗೋದಿ ಹಿಟ್ಟು ಹಾಕುವುದು)
ಯೀಸ್ಟ್ - 6 ಗ್ರಾಂ  (ಫ್ರೆಶ್ ಇದ್ದಷ್ಟು  ಒಳ್ಳೇದು)
ಉಪ್ಪು - 4ಗ್ರಾಂ
ಸಕ್ಕರೆ - 10 ಗ್ರಾಂ
ಬೆಣ್ಣೆ - 10 ಗ್ರಾಂ
ಓಲಿವ್ ಎಣ್ಣೆ - 5 ಮಿ ಲಿ (ಅಥವಾ ರಿಫೈನ್ಡ್ ಎಣ್ಣೆ ಕೂಡ ಆಗುತ್ತೆ)
(ಮೆಶರಿಂಗ್ ಕಪ್ ಇದ್ದರೆ ಒಳ್ಳೆಯದು)

ಯೀಸ್ಟ್ ಅನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ. ಅದು ನೊರೆನೊರೆಯಾಗುತ್ತೆ. ಉಳಿದ ಎಲ್ಲ ಪದಾರ್ಥಗಳನ್ನು ಯೀಸ್ಟ್ ಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬೇಕಾದಷ್ಟು ನೀರು ಹಾಕಿ ಅತ್ಯಂತ ಮೃದುವಾದ ಕಣಕ ತಯಾರಿಸಿ. ಈ ಕಣಕಕ್ಕೆ ಎಣ್ಣೆ ಸವರಿ ಒಂದು ಗಂಟೆ ಇಡಿ. ಕಣಕ ಉಬ್ಬಿ ದುಪ್ಪಟ್ಟು ಆಗುತ್ತೆ.
ಇದು ದುಪ್ಪಟ್ಟು ಆಗಿರುವ ಹಿಟ್ಟು. ಕಲಸಿದ ಕೂಡಲೇ ಫೋಟಿ ತೆಗೀಲಿಕ್ಕೆ ಮರೆತು ಹೋಯಿತು.

 ಈಗ ನಿಮಗೆ ಬೇಕಾದ ಆಕಾರ ಸೈಜ್ ನ ಪಾವ್ ತಯಾರಿಸಿ.
ಹೀಗೆ ಒಮ್ದರ ಬಳಿ ಒಂದು ಹಿಟ್ಟಿನ ಉಂಡೆ ಇಡಿ. ಸ್ವಲ್ಪ ಹೊತ್ತಿನ ಬಳಿಕ ಅದು ಕೆಳಗಿನ ಚಿತ್ರದಲ್ಲಿದ್ದಂತೆ ಆಗುತ್ತೆ.

 ಈ ಪಾವ್ ಗಳು ಪುನ: ದುಪ್ಪಟ್ಟು ಸೈಜ್ ಆಗಿ ಉಬ್ಬುತ್ತವೆ. ಆಗ ಓವನ್ ನಲ್ಲಿ 250*C ಯಲ್ಲಿಟ್ಟು ಮೇಲಿನ ಪದರ ಹೊಂಬಣ್ಣಕ್ಕೆ ಬರುವ ತನಕ ಬೇಕ್ ಮಾಡಿ.

ಮನೆಯಲ್ಲಿ ಮೂರು ನಾಲ್ಕು ಬಾರಿ ಈ ಪಾವ್ ನ್ನು ಮಾಡಿ ಆಯ್ತು. ಮೇಲಿನ ಅಳತೆ ಪರ್ಫೆಕ್ಟ್ ಆಗಿದೆ. ಪಾವ್ ತಯಾರಾಗುವಾಗಿನ ಘಮ..ಆಆಆಆಹ್!!! :-)
ಪಾವ್ ಜತೆ ಭಾಜಿ ಮಾಡುವ ವಿಧಾನ ಕೂಡ ಹೇಳಿ ಬಿಡುತ್ತೇನೆ
ಬೇಯಿಸಿದ ತರಕಾರಿ = ಕ್ಯಾರೆಟ್, ಆಲೂಗಡ್ಡೆ, ಬಟಾಣಿ (ಫ್ರೆಶ್ ಬಟಾಣಿ ಇಲ್ಲದಿದ್ದಲ್ಲಿ , ಕಾಳುಗಳನ್ನು ರಾತ್ರಿ ನೆ ನೀರಲ್ಲಿ ನೆನೆಹಾಕಿ. ಬೆಳಿಗ್ಗೆ ಎಲ್ಲವನ್ನು ಚೆನ್ನಾಗಿ ಬೇಯಿಸಿ, ಮ್ಯಾಶ್ ಮಾಡಿಡಿ.
ನೀರುಳ್ಳಿ - ಹದ ಗಾತ್ರದ್ದು 4
ಬೆಳ್ಳುಳ್ಳಿ- 15
ಟೋಮೇಟೊ - ತುಂಬಾ ಮಾಗಿದ್ದು ಒಂದು
ಕೆಂಪು ಮೆಣಸಿನ ಪುಡಿ - 2 ಟೀ ಸ್ಫೂನ್
ಎವರೆಸ್ಟ್ ಪಾವ್ ಭಾಜಿ ಮಸಾಲಾ - ಎರಡು ದೊಡ್ಡ ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು, ಸಣ್ಣಕ್ಕೆ ಕತ್ತರಿಸಿದ ನೀರುಳ್ಳಿ, ಲಿಂಬೆ ಹಣ್ಣಿನ ಸ್ಲೈಸ್ ಮೇಲೆ ಉದುರಿಸಲು. ಸ್ವಲ್ಪ ಬೆಣ್ಣೆ.


ಮೊದಲಿಗೆ ನೀರುಳ್ಳಿ, ಬೆಳ್ಳುಳ್ಳಿಯನ್ನು ಯನ್ನು ಚಿಕ್ಕದಾಗಿ ಕತ್ತರಿಸಿಡಿ. ಸ್ವಲ್ಪ ಹೆಚ್ಚೆ ಎಣ್ಣೆ ಬಿಸಿಮಾಡಲು ಇಡಿ. ಎಣ್ಣೆ ಬಿಸಿಯಾದ ನಂತರ ಇದಾಕೆ ನೀರುಳ್ಳಿ ಬೆರೆಸಿ ಪಿಂಕ್ ಬಣ್ಣ ಆಗುವ ತನಕ ಹುರಿಯಿರಿ. ಇದಕ್ಕೆ ಬೆಳ್ಳುಳ್ಳು ಬೆರೆಸಿ. ಎರಡು ನಿಮಿಷ ಹುರಿದು ಕ್ರಮವಾಗಿ ಮೆಣಸಿನ ಪುಡಿ, ಪಾವ್ ಭಾಜಿ ಮಸಾಲಾ ನಂತರ ಟೋಮೇಟೋ ಬೆರೆಸಿ. ಎಣ್ಣೆ ಬಿಡುವ ಹಂತಕ್ಕೆ ಬಂದಾಗ ಮ್ಯಾಶ್ ಮಾಡಿಟ್ಟ ತರಕಾರಿ ಬೆರೆಸಿ. ಎಷ್ಟು ಬೇಕೋ ಅಷ್ಟು ನೀರು ಸೇರೆಸಿ. ಉಪ್ಪು ಚಿಟಿಕೆ ಸಕ್ಕರೆ ಬೆರೆಸಿ.  ಚೆನ್ನಾಗಿ ಕುದಿ ಬಂದ ನಂತರ ಒಂದು ಸ್ಪೂನ್ ಬೆಣ್ಣೆ, ಕೊತ್ತಂಬರಿ ಸೊಪ್ಪು ಮೇಲಿನಿಂದ ಭಾಜಿಗೆ ಹಾಕಿ.
ಸರ್ವ್ ಮಾಡುವ ಮುನ್ನ ಪಾವ್ ಅನ್ನು ಮಧ್ಯಕ್ಕೆ ಕತ್ತರಿಸಿ ಬೆಣ್ಣೆ ಹಚ್ಚಿ ಕಾವಲಿ ಮೇಲೆ ಬಿಸಿ ಮಾಡಿ, ಭಾಜಿ, ನೀರುಳ್ಳಿ ಕೊತ್ತಂಬರಿ ಸೊಪ್ಪು, ನಿಂಬೆ ಹಣ್ಣಿನ ಜತೆ ಬಡಿಸಿ.

ಮೊದಲ ಸಲ ಪಾವ್ ಮಾಡಿದಾಗ ಶ್ರೀಕಾಂತ್ ರ್ ಪ್ರೆಂಡ್ ಒಬ್ಬರು ಮಡಿಕೇರಿಯಿಂದ ಬಂದಿದ್ದರು. ಕಾಫಿ ಕುಡಿಯುವ ಅಂತ ಅವರು ಬಂದಿದ್ದು.. ಅದರೊಂದಿಗೆ ಬಿಸಿ ಪಾವ್ ಮತ್ತು ಅಮುಲ್ ಬಟರ್ ಕೂಡ ಸೆರ್ವ್ ಮಾಡಿದ್ದು ಅವರಿಗೆ ಸಿಕ್ಕಾಪಟ್ಟೆ ಖುಶಿ ಆಗಿತ್ತು. ಅದೂ ಮನೆಯಲ್ಲೇ ಮಾಡಿದ, ಮೊಟ್ಟೆಯಿಲ್ಲದ ಪಾವ್ ಅಂತ. ಈಗಲೂ ಸಿಕ್ಕಾಗಲೆಲ್ಲ ಅದರ ಬಗ್ಗೆ ಮೆನ್ಷನ್ ಮಾಡ್ತಾರೆ.
ನಮ್ಮ ಮುಂದಿನ ಪ್ರಯೋಗ ರಾಗಿಯಿಂದ ಬ್ರೆಡ್/ಪಾವ್ ತಾಯಾರಿಸುವುದು
:-)



Maida -  200 gms
Yeast - 6 gms
Salt - 4 gms
Sugar - 10 gms
Butter - 10 gms
Olive Oil - 5ml
Dissolve yeast in warm water. Mix all the ingredients and knead to form a soft dough. Cover with oil and let it rise, for one hour.
Divide into 8 portions and shaped into pavs. wait until it doubles and bake at 250 degree C till  the top is golden brown.
The above recipe can be used for both bread as well as pav.
This bread we experimented with whole wheat floor. 



Home made pav  & bhaji

October 24, 2013

'ಕೂರ್ಮಾವತಾರ' ಸ್ವಲ್ಪ ಲೇಟ್ ಆಗಿ


(ಮೊನ್ನೆ ಗಾಂಧಿ ಜಯಂತಿಯಂದು ಇದನ್ನು ಪೋಸ್ಟ್ ಮಾಡಬೇಕಿತ್ತು.. ಯಾಕೋ ಸೋಂಬೇರಿತನ. ಮತ್ತು ನಾವು ಆ ದಿನ ಇಡಿ ಮನೆಯಲ್ಲಿರಲಿಲ್ಲ. ಇನ್ನು ಎರಡೇ ತಿಂಗಳಿಗೆ ಪುನ: ಬೆಂಗಳೂರು ಅಂತರ್ ರಾಷ್ಟ್ಟ್ರೀಯ ಚಲನಚಿತ್ರೋತ್ಸ್ವ ಪ್ರಾರಂಭವಾಗುತ್ತೆ. ಈ ಸಿನಿಮಾ ಏನಾದರೂ ಪುನ: ಪ್ಲೇ ಮಾಡಿದ್ರೆ ನೀವೆಲ್ಲ ನೋಡಬಹುದು ಅಂತ ಬ್ಲಾಗ್ ನಲ್ಲಿ ಹಾಕುವ ಅಂದಾಜು ಮಾಡಿದೆ. anyways ನೆನಪಿನ ಸಂಚಿ ಅಂತ ಬ್ಲಾಗ್ ಹೆಸರು ಸಾರ್ಥಕವಾಯ್ತು ಬಿಡಿ :-) )
>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>
ನಾನು ಬೆಂಗಳೂರಿಗೆ ಬಂದು ಆಲ್ ಮೋಸ್ಟ್ 12 ವರ್ಷ ಆಗುತ್ತೆ. ಇಲ್ಲಿಗೆ ಬಂದ ಮೇಲೆ ನಾನು ನೋಡಿದ ಕನ್ನಡ ಸಿನಿಮಾಗಳು

1 ಮಾತಾಡ್ ಮಾತಾಡ್ ಮಲ್ಲಿಗೆ
2 ಎಕ್ಶಿಡೆಂಟ್
3 ನಾನೂ ನನ್ನ ಕನಸು
4 ಅಬಚೂರಿನ ಪೋಸ್ಟ್ ಆಫಿಸ್
5 ಕನಸೆಂಬ ಕುದುರೆಯನ್ನೇರಿ
6 ಗುಬ್ಬಿಗಳು
7 ಎದ್ದೇಳು ಮಂಜುನಾಥ
8 ಬೆಟ್ಟದ ಜೀವ
9 ಪುಟ್ಟಕ್ಕನ ಹೈ ವೇ
10 ಕೂರ್ಮಾವತಾರ

ನನ್ನ ಕನ್ನಡ ಪ್ರೀತಿ ಪುಸ್ತಕಗಳು ಹಾಗು ಕೆಲವು ಹಾಡುಗಳಿಗೆ ಮಾತ್ರ ಸೀಮಿತ. ಮೇಲಿನ ಪಟ್ಟಿಯಲ್ಲಿದ್ದ ಸಿನಿಮಾದಲ್ಲಿ ನಾನು ಪೂರ್ತಿಯಾಗಿ ನೋಡಿದ್ದು 1 ರಿಂದ 3  ಮತ್ತು 8 ರಿಂದ 10. ಉಳಿದ ಸಿನಿಮಾ ನನಗೆ concentrate ಮಾಡಕ್ಕೆ ಆಗಲಿಲ್ಲ. ನನ್ನ ಕೆಲವು ಮಿತ್ರರು ತುಂಬಾ ಆಪ್ತ ಎನಿಸಿದವರೂ ಈ ಚಿತ್ರ ನೋಡು ಅಂದ್ರೆ ನಾನು 5 ಜನರಲ್ಲಿ, ನಾಲ್ಕು ಜನ ಚೆನ್ನಾಗಿದೆ ಅಂದ್ರೆ ಮಾತ್ರ ಸಿನಿಮಾಗೆ ಹೋಗುತ್ತೇನೆ. ಆಗಲೂ ಅವರು ನೋಡಲು ಹೇಳಿದ ಸಿನಿಮಾ ನನಗೆ  ಇಷ್ಟವಾಗಿದ್ದು ಅತೀ ವಿರಳ ಎನ್ನಬಹುದು. ಮಿತ್ರ ರಘು ಅಪಾರ 'ಕೂರ್ಮಾವತಾರ' ಸಿನಿಮಾ ಬಗ್ಗೆ ಬರೆದಿದ್ದೀನಿ ಅಂದಿದ್ರೂ ಸಿನಿಮಾ ನೋಡದೆ ನಾನು ಯಾರದೇ ಸಿನಿಮಾ review ಓದೋದಿಲ್ಲ, ನೋಡಿದ ಮೇಲೆ ಓದ್ತೀನಿ ಅಂದಿದ್ದೆ. ಫಿಲ್ಮ್ ನೋಡಿಯಾದ ಮೇಲೆ ಅದರ ಬಗ್ಗೆ ಇಬ್ಬರೂ ಡಿಸ್ಕಸ್ ಮಾಡಿದ್ವಿ and iam glad ನಮ್ಮ 90% views ಮ್ಯಾಚ್ ಆದುವು. ಮೇಲಿನ ಪಟ್ಟಿಯಲ್ಲಿನ ಎಲ್ಲ ಸಿನಿಮಾಗಳಲ್ಲಿ ನನಗೆ ಕೂರ್ಮಾವತಾರ ಹೆಚ್ಚು ಇಷ್ಟ ಆಗಿದ್ದು.

ಹಿಂದಿನ ವರ್ಷ ಅಂತರ್ ರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ, ಹೇಗೂ ನಿಹಾ ಗೆ ರಜೆ ಇತ್ತು ನನಗೂ ಆಫಿಸ್ ನ ಹೇಳಿಕೊಳ್ಳುವ ಯಾವ ಕೆಲಸಗಳೂ ಇರಲಿಲ್ಲ. ಹಾಗಾಗಿ ನಾನು ನಿಹಾ ಜೋಡಿಯಾಗಿ ಹಲವಾರು ಸಿನಿಮಾ ಗಳನ್ನು ನೋಡಿದ್ವಿ. 'ಈ ವರ್ಷ ನೀನು ಚೂಸ್ ಮಾಡಿದ ಸಿನಿಮಾ' ಯಾವುದೇ ಆಗಿರಲಿ ನಾ ನೋಡುತ್ತೇನೆ ಅಂದೆ. ಅವಳಿಗೆ ಸಿನಿಮಾ ಬಗ್ಗೆ alert ಮಾಡುವ ಹಲವಾರು ಸ್ನೇಹಿತೆಯರು ಮಾತ್ರವಲ್ಲ ಅವಳ ಕಾಲೇಜಿನ ಲೆಕ್ಚರರ್ ಮನು ಚಕ್ರವರ್ತಿ ಸರ್ ಕೂಡ ಒಳ್ಳೆಯ ಸಿನಿಮಾ ದ ಲಿಸ್ಟ್ ಗಳನ್ನು ಕೊಡುತ್ತಿರುತ್ತಾರೆ. ನಾನು ಇಲ್ಲಿ ಒಳ್ಳೆಯ ಸಿನಿಮಾ ಅಂದಾಗ 'ಅವರು ಸೂಚಿಸಿದ ಎಲ್ಲ ಸಿನಿಮಾಗಳೂ ನನಗೆ ಇಷ್ಟವಾಗಿವೆ  ಹಾಗಾಗಿ ಇದು ಸಿರ್ಫ್ ಮೇರಾ ಅಭಿಪ್ರಾಯ. ಈವರೆಗೆ ಅವರು ಅವಳಿಗೆ ಯಾವ ಕನ್ನಡ ಸಿನಿಮಾನೂ ಸೂಚಿಸಿಲ್ಲ.
ಬೆಳಿಗ್ಗೆ ನಾವು ಹೊರಡುವಾಗ ನಿಹಾ ಅಮ್ಮ ಕನ್ನಡ ಸಿನಿಮಾ 'ಕೂರ್ಮಾವತಾರ' ಚೆನ್ನಾಗಿದೆ ಅಂತ ಸುಮಾರು ಜನ ನನಗೆ ಹೇಳಿದ್ದಾರೆ' ಅಲ್ಲಿ ಹೋಗಿ ನೋಡುವಾ otherwise my choice is Bengali movie' ಅಂದ್ಲು. ನಾನು ಹೂಂ ಅಂದೆ. ಅಲ್ಲಿ ನೋಡಿದ್ರೆ ಆಗಲೇ ಕೂರ್ಮಾವತಾರಕ್ಕೆ ದೋssssssಡ್ಡ ಲೈನ್. ನನಗಂತೂ ಖುಶಿ. ಗ್ಯಾರಂಟಿ ಕನ್ನಡ ಸಿನಿಮಾ ಸಿಗಲಿಕ್ಕಿಲ್ಲ. i was all for the Bengali movie'. ಸರತಿ ಸಾಲಿನಲ್ಲಿ ನಿಂತುಕೊಂಡೆವು. 10-10 ಜನರನ್ನು ಮಾತ್ರ ಒಳಗೆ ಬಿಡುತ್ತಿದ್ದರು. ನನ್ನ-ನಿಹಾ ಸರದಿ ಬಂದಾಗ ಸೆಕ್ಯುರಿಟಿ ಗಾರ್ಡ್ 'ಮ್ಯಾಡಂ ಫುಲ್  ಹೋಗಯಾ , ಸಾರಿ' ಅಂದ. ನಾನು ನಿಹಾ ಕಡೆ ತಿರುಗಿ ವಿಜಯದ ನಗೆ ನಕ್ಕೆ. ಹಾ ಇನ್ನು ಬೆಂಗಾಲಿ ಚಿತ್ರಕ್ಕೆ, ಅದು ಶುರು ಆಗಲು ಇನ್ನೂ 15 ನಿಮಿಷದ ಟೈಮ್ ಇತ್ತು. ಸೋ ನಾ ಹೊರಡಲು ಅನುವಾದಾಗ ಇನ್ನೊಬ್ಬರು ಯಾರೋ 'please wait madam' there might be a few seats' ಅಂದ. ನಿಂತೆ. ಕೆಲ ಕ್ಷಣಗಳ ನಂತರ only two more seats ,please enter ಅಂದ. ಸರಿ ಹ್ಯಾಪ್ ಮೋರೆ ಹಾಕ್ಕೊಂಡು ಎಂಟರ್ ಆde. ಅಲ್ಲಿ ನೋಡಿದ್ರೆ ನಮ್ಮನ್ನು ಸೀಟ್ ಗಳಿಗೆ ಎಸ್ಕೋರ್ಟ್ ಕೂಡ ಮಾಡಿದರು. ತುಂಬ ಎದುರಿನ ಸೀಟ್. ನನಗೂ ನಿಹಾಗೂ ಅಕ್ಕ ಪಕ್ಕದ ಸೀಟ್ ಎ ಸಿಕ್ಕಿದ್ದು. ಆ ಮೇಲೆ ಡೈರೆಕ್ಟರ್, ತಾರಾ ಅನುರಾಧ ಅವರೆಲ್ಲ ಎದುರಿಗೆ ಬಂದು ನಿಂತರು. ಕಾಸರವಳ್ಳಿಯವರ ಮಗ-ಮಗಳು ಎಲ್ಲ ಇದ್ದರು. ಗಿರೀಶ್ ಕಾಸರವಳ್ಳಿಯವರನ್ನು ನಾನು ಮಿತ್ರ ವಸುಧೇಂದ್ರರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನೋಡಿದ್ದರಿಂದ ಅವರನ್ನು ಐಡೆಂಟಿಫೈ ಮಾಡಿದೆ. ನನ್ನ ಪಕ್ಕದಲ್ಲಿ ಕೂತವರು ಯಾರೋ ದೊಡ್ಡ (ಗಾತ್ರದಲ್ಲೂ) ಜನ ಐ ಮೀನ್ ಫೇಮಸ್ personality ಇದ್ದರೋ ಏನೋ. ಫೋಟೊಗ್ರಾಫರ್ಸ್ ಬಂದು ಫೋಟೊ ತೆಗೆದದ್ದೆ ತೆಗೆದದ್ದು. ಅವರು ಯಾರು ಅಂತ ನನಗೆ ನಿಹಾಗೆ ತಿಳಿಯಲಿಲ್ಲ ಆದರೆ ಫೋಟೊಗಳ ಫ್ಲಾಶ್ ಕಣ್ಣುಗಳನ್ನು ಕೆಲವು ಕ್ಷ್ಣಣಗಳ ಕಾಲ ಕುರುಡಾಗಿಸಿದ್ದು ನಿಜ. ಸಿಕ್ಕಾಪಟ್ಟೆ ಮುಜುಗರ ಕೂಡ ಆಯ್ತು. :-(.( ಗಾಂಧೀಜಿಯವರನ್ನು ಶೂಟ್ ಮಾಡುವ ಸೀನ್ ಗೆ ಸಜ್ಜಾಗಿಸುತ್ತ ಅವರ co-actor ಗಳು ಅವರಿಗೆ get ready to be shot ಅಂದಾಗ ನಾನು ಎಲ್ಲಿದ್ದೇನೆ ಎಂಬ ಪರಿವೆಯಿಲ್ಲದೇ good one ಅಂದೆ ಗಟ್ಟಿಯಾಗಿ. ಪಕ್ಕದಲ್ಲಿದ್ದವರ ಬಿಳಿ ಹಲ್ಲು ಮಾತ್ರ ಕಾಣ್ಸಿತು ಅವರು ನನ್ನ ಉದ್ಘಾರ ಕೇಳಿ ನನ್ನ ಕಡೆ ಹೊರಳಿದಾಗ. :-))
ನಟಿ ತಾರಾ ಅವರು ಸಿನಿಮಾ ಉದ್ಘಾಟನೆ ಮಾಡಿ ಒಮ್ಮೆ ಸುತ್ತಲೂ ನೋಡಿ, 'ಸಿನಿಮಾ ಈ ಮೊದಲೇ ನೋಡಿದವರು ದಯವಿಟ್ಟು ಹೊರಗೆ ಬನ್ನಿ, ಹೊರಗಡೆ ಅಲ್ಲಿ ಎಷ್ಟೋ ಜನ ಕೂರ್ಮಾವತಾರ ನೋಡಲು ನಿಂತಿದ್ದಾರೆ ಪಾಪ' ಅಂದ್ರು. ಸಿನಿಮಾ ಶುರು ಆದ ಮೇಲೆ ಹೊರಗೆ ನಿಂತವರಿಗೆ ಒಳಗೆ ಬಿಟ್ಟಿದ್ದರಿಂದ ಅವರೆಲ್ಲ ಮೆಟ್ಟಿಲ ಮೇಲೆ ಕುಳಿತು ಸಿನಿಮಾ ನೋಡಿದರು. ನನಗೆ ನಿಹಾ ಕೆಲ ಅಂಶ ಬಿಟ್ಟರೆ ಈ ಸಿನಿಮಾ ನಿಜಕ್ಕೂ ಇಷ್ಟ ಆಯ್ತು.
ಗಾಂಧಿಜಿಯವರನ್ನು ಹೋಲುವ, ನಿವೃತ್ತಿಯ ಅಂಚಿನಲ್ಲಿರುವ ಆನಂದರಾವ್ ಅವರಿಗೆ ಆಕಸ್ಮಿಕವಾಗಿ ಟಿ.ವಿ. ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಗುತ್ತದೆ. ಅವರಿಗದು ಅಷ್ಟು ಇಷ್ಟವಿರುವುದಿಲ್ಲವಾದರೂ ಮಗ ಹಾಗು ಅವನ ಸಂಸಾರದ ಒತ್ತಾಯದ ಒತ್ತಡಕ್ಕೆ ಸಿಲುಕಿ ಒಪ್ಪಿಕೊಳ್ಳುತ್ತಾರೆ.
.ಚಿತ್ರದ ಮೊದಲ ಸೀನ್ ನಲ್ಲಿ ಭಾರತ ವಿಭಜನೆಗೊಳ್ಳುವುದು. ಅದರಲ್ಲಿ ಗಾಂಧೀಜಿಯವರನ್ನು ದು:ಖ ತಪ್ತರಾನ್ನಾಗಿಸಿ portray ಮಾಡುವಲ್ಲಿ  ಪಾತ್ರ ಮಾಡುತ್ತಿರುವ ಆನಂದ ರಾವ್ ವಿಫಲರಾಗುತ್ತಾರೆ. ಕೊನೆಗೆ ಡೈರ್ ಕ್ಟರ್ ನಿಮ್ಮ ಪತ್ನಿಯ ಸಾವನ್ನು ನೆನಪಿಸಿಕೊಳ್ಳಿ ಅಂತ ಸಲಹೆ ನೀಡುತ್ತಾನೆ. ಯಾವ ತರಹದ ಇಮೋಷನ್ಸ್ ತೋರಿಸಲಿಕ್ಕಾಗದಾದಾಗ ಡೈರೆಕ್ಟರ್ ಅವರಿಂದ' ಭಾವನೆಗಳಿಲ್ಲದನು ನಾಯಿಗಿಂತ ಕಡೆ' ಎಂದು ಛೀ ಮಾರಿ ಹಾಕಿಸಿಕೊಳ್ಳುತ್ತಾರೆ. ಆಗ ತಾನು ತನ್ನ ಪತ್ನಿಗೆ ಎಷ್ಟು ಅನ್ಯಾಯ ಮಾಡಿದೆ, ಕ್ಯಾನ್ಸರ್ ನಿಂದ ಆಕೆ ಸಾಯುವಾಗ ತಾನು ಮಾಡಿದ ಅಸಡ್ಡೆ ನೆನಪಿಸಿಕೊಂಡು,'ಛೆ ನಾನು ನಾಯಿಗಿಂತ ಕಡೆ' ಅಂತ  ದು:ಖ್ಹ ವಿಹ್ವಲರಾಗಿ ಅವರ ಜೀವನ ಹೊಸ ತಿರುವನ್ನು ಪಡೆಯುತ್ತದೆ.
ತನ್ನಿಂದ ಅಭಿನಯ ಸಾಧ್ಯವಾಗುತ್ತಿಲ್ಲ ಅಂದಾಗಲೆಲ್ಲ ಅವರನ್ನು ಪ್ರೇರೆಪಿಸುವ ಹಲವಾರು ಘಟಣೆಗಳು...ಹೀಗೆ ಸಾಗುತ್ತದೆ ಸಿನಿಮಾ. ಪಾತ್ರ ಮಾಡ್ತಾ, ಗಾಂಧಿಜಿಯವರ ಬಗ್ಗೆ ಪುಸ್ತಕ ಓದ್ತಾ ತಾವೇ ಗಾಂಧಿಜಿಯಾಗುವಷ್ಟು ಕೊನೆಗೆ ಪಾತ್ರದಲ್ಲಿ ತಲ್ಲೀನರಾಗುತ್ತಾರೆ. ಸೀರಿಯಲ್ ಜನಪ್ರಿಯವಾಗತೊಡಗಿದಂತೆ ಅವರ ಮಿತ್ರರು ಪರಿಚಯದವರು ಅಕ್ಕಪಕ್ಕದವರೆಲ್ಲ ರಾಯರಲ್ಲಿ ಗಾಂಧೀಜಿಯನ್ನು ಕಾಣ ಬಯಸಿ ಅವರಿಗೆ ಬೇಕಾದ ಬದಲಾವಣೆಗಳನ್ನು ಆನಂದ ರಾಯರಿಂದ ಮಾಡಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಕ್ರಮೇಣ ರಾಯರಿಗೆ ಗಾಂಧೀ ತತ್ವ ಪಾಲಿಸುವಲ್ಲಿ ತನ್ನ ಇತಿ ಮಿತಿಗಳೆಲ್ಲಾ ಅರಿವಾಗುತ್ತಾ ಹೋದಂತೆ ಅವರು ಹಲವು ರೀತಿಯ ತಲ್ಲಣ ಹತಾಶೆಗಳಿಗೆ ಒಳಗಾಗುತ್ತಾ ಸಾಗುತ್ತಾರೆ. ಮನೆಯ ಕಷ್ಟ ಕೋಟಲೆಗಳಿಂದ ಸಮಾಧಾನ ಹೊಂದಲು ಕಸ್ತೂರ್ಬಾ ಪಾತ್ರ ಮಾಡುತ್ತಿರುವವರ ಸುಶೀಲಾ ಅವರ ಸ್ನೇಹ ಬಯಸಿ ಅವರನ್ನು ಆಗಾಗ ಭೇಟಿ ಮಾಡುತ್ತಾರೆ. ಇದರಿಂದ ಮನೆಯಲ್ಲಿ ಇನ್ನಷ್ಟು ಗೊಂದಲ ಸೃಷ್ಟಿಯಾಗುತ್ತದೆ. ಕೊನೆಗೆ ಮಗ ದುಡ್ಡಿನ ಅವ್ಯವಹಾರದಲ್ಲಿ ಸಿಲುಕಿ ಜೈಲ್ ಸೇರುತ್ತಾನೆ. ಜೈಲ್ ನಿಂದ ಹೊರಬರಬೇಕಾದರೆ ಲಂಚ ಕೊಡಬೇಕಾಗುತ್ತದೆ. ಆಗ ಆನಂದ ರಾಯರು ಏನು ನಿರ್ಧಾರ ತಳೆಯುತ್ತಾರೆ? ಹ್ಯ್ವಾಯ್ ಪೂರ್ತಿ ಸಿನಿಮಾದ ಬಗ್ಗೆ ಇಲ್ಲೇ ಹೇಳಿ ಬಿಟ್ಟರೆ ನೀವು ನೋಡುವುದು ಯಾವಾಗ. ಒಳ್ಳೆಯ ಸಿನಿಮಾ ಬಂದಾಗ ಖಂಡಿತ ಮಿಸ್ ಮಾಡಬೇಡಿ.

ಕೂರ್ಮಾವತಾರ ಟೈಟಲ್ ಬಗ್ಗೆ ಗೊತ್ತಾಗಲಿಲ್ಲ. ಸಂಸ್ಕೃತದ ಕೂರ್ಮ ಅಂದರೆ ಆಮೆ. ಆನಂದರಾಯರ ಮೊಮ್ಮಗನ ಬಳಿ ಒಂದು ಆಮೆ ಇರುತ್ತೆ ನಿಜ. ಮತ್ತು ಕೂರ್ಮಾವಾತರ ವಿಷ್ಣುವಿನ ಎರಡನೆ ಅವತಾರ. ಸತ್ಯಯುಗದಲ್ಲಿ, ಸಮುದ್ರ ಮಥನದ ವೇಳೆ ಮಂದಾರ ಪರ್ವತ ಕಡೆಗೋಲಾದರೆ, ನಾಗ ವಾಸುಕಿ ಹಗ್ಗ ಆಗುತ್ತಾನೆ. ಆದರೆ  ಪರ್ವತ ಸುರ ಅಸುರರ  ಕಡೆಯುವ ವೇಗ ತಾಳಿಕೊಳ್ಳದೆ ಕುಸಿಯಲಾರಂಭಿಸುತ್ತದೆ ಆಗ ವಿಷ್ಣು  ಆಮೆಯ ಅವತಾರ ತಾಳಿ , ಮಂದಾರ ಪರ್ವತಕ್ಕೆ ಬೆನ್ನು ಕೊಡುತ್ತಾನೆ. ಅಂದರೆ ಗಾಂಧಿತತ್ವಗಳನ್ನು ಪರಿಪಾಲಿಸುವುದರಿಂದ ಕೆಟ್ಟು ಹೋಗುವ ಸಮಾಜವನ್ನು ಸ್ವಲ್ಪ ಮಟ್ಟಿಗೆ ಸುಧಾರಿಸಬಹುದೆಂದು ಇದರ ಅರ್ಥ ಅಂತ ಅಂದುಕೊಳ್ಳಬಹುದೇ?? ಕುಂಬಾರ ವೀರಭದ್ರಪ್ಪನವರು ಬರೆದ  ಕತೆ 'ಕೂರ್ಮಾವತಾರ'. ಅದೇ ಹೆಸರಿನ ಚಿತ್ರ. ಪುಸ್ತಕ ಇನ್ನೂ ಓದಿಲ್ಲ. ಓದಬೇಕೆನಿಸಿದೆ. ಮುಂದಿನ ಸಲ ಆಕೃತಿಗೆ ಹೋದಾಗ ಈ ಪುಸ್ತ್ಕಕದ ಹೆಸರು ನನ್ನ ಲಿಸ್ಟ್ ನಲ್ಲಿದೆ.
on a scale of 1 to 5 i give this movie 3.5 score. ಸ್ವಲ್ಪ ಎಡಿಟಿಂಗ್ ಬಿಗಿ ಮಾಡಿದಿದ್ರೆ ಈ ಸಿನಿಮಾಗೆ ನಾನು ಆಲ್ಮೋಸ್ಟ್ ಐದರಲ್ಲಿ ಐದು  ಕೊಡುತ್ತಿದ್ದೆ. :-) ;-)
ಐಸಾಕ್ ಥಾಮಸ್ ಕೊಟ್ಟುಕಾಪಳ್ಳಿಯವರ ಸಂಗೀತ ಹಿತವಾಗಿದೆ.
ಮನೆಗೆ ಬಂದ ಮೇಲೆ ಮಿತ್ರ ರಘು ಬರೆದ ಕೂರ್ಮಾವತಾರ ವಿಮರ್ಶೆ ಓದಿದೆ. ಅವರ ಪರ್ಮಿಶನ್ ತೆಗೊಂಡು ಅವರ ವಿಮರ್ಶೆಯ ಲಿಂಕ್ ಕೆಳಗೆ ಕೊಟ್ಟಿದ್ದೇನೆ.  ನೀವೂ ಓದಿ. ತುಂಬ ಚೆಂದ ಬರೀತಾರೆ ಅವರು. :-) ಥ್ಯಾಂಕ್ಸ್ ರಘು.

http://raghuapara.blogspot.in/2012/01/blog-post.html

ಎರಡು  ದಿನಗಳ ನಂತರ ಇನ್ನೊಂದು ಸಿನಿಮಾ ಹಾಲ್ ಪ್ರವೇಶಿಸುವ ಮುನ್ನ ನಮ್ಮ ಸಾಲಿನಲ್ಲಿ ನಿಂತಿದ್ದ ಹಿರಿಯರನ್ನು ಎಲ್ಲೋ ನೋಡಿದ್ದೇನೆ ಅನ್ನಿಸ್ತು. ನೆನಪಾಗಲಿಲ್ಲ. ನಿಹಾ ಬಳಿ 'ಥ್ಯಾಟ್ ಗ್ರಾಂಡ್ ಪಾ ಲುಕ್ಸ್ ಫಮಿಲಿಯರ್' ಅಂದೆ. ಅವಳೂ ಹೂಂ ಅಂದ್ರೂ ಯಾರು ಅಂತ ಗೊತ್ತಾಗಲಿಲ್ಲ. ಆಮೇಲೆ ಸಿನಿಮಾ ಹಾಲ್ ಒಳಗೆ ಹೋಗ್ತಾ ಥಟ್ ಅಂತ ಫ್ಲಾಶ್ ಆಗಿ 'hey it's Gandhiji'' ಅಂತ ಜೋರಾಗಿ ಕಿರುಚಿದೆ. :-) :-)




October 19, 2013

ಕಥೆ

ಅವಳು ಅವನಿಗೆ ತಾನು ತಾಯಾಗಲಿರುವ ಬಗ್ಗೆ ಹೇಳಿದಾಗ ಅವನು ಕೇಳಿದ ಪ್ರಶ್ನೆ 'ಅದು ಹೇಗೆ ಸಾಧ್ಯ?' ಅಂತ. ಅವಳೋ ಕಕ್ಕಾಬಿಕ್ಕಿ
ಪ್ರಿಯಂವದಾಳಿಗೆ ಐದು ಜನ ಅಕ್ಕಂದಿರು ಇಬ್ಬರು ತಂಗಿಯಂದಿರು. ಅಕ್ಕಂದಿರ ಮದುವೆ, ಬಾಣಂತನ, ಮಕ್ಕಳು ಅಂತ ನೋಡಿ ಅವಳಿಗೆ ರೇಜಿಗೆ ಅನ್ನಿಸಿ. ತಾನು ಯಾವತ್ತೂ ಮದುವೆಯಾಗಲಾರೆನೆಂದು ಪ್ರತಿಜ್ಞೆ ಮಾಡಿದ್ದಳು. ಹಾಗೆ ವಿಜ್ಞಾನದ ಉನ್ನತ ಪದವಿಧರೆಯಾದ ಅವಳು ವಿಜ್ಞಾನಿಯೊಬ್ಬರ ಬಳಿ ಎಸಿಸ್ಟೆಂಟ್ ಆಗಿ ಕ್ಯಾನ್ಸರ್ ರೋಗದ ಮೇಲೆ, ಅದನ್ನು ಗುಣಪಡಿಸುವತ್ತ  ಸಂಶೋಧಕಿಯಾಗಿ ಕೆಲಸಕ್ಕಿದ್ದಳು. ಹೀಗಿರುವಾಗ ಒಂದು ದಿನ ಅವಳ ತಂಗಿಗೆ ಒಬ್ಬನ ಜತೆ ಪ್ರೇಮವಾಗಿ ಮದುವೆಯಾಗಲು ತುದಿಗಾಲ ಮೇಲೆ ನಿಂತಿದ್ದಳು. ಆದರೆ ಅವಳಿಗಿಂತ ದೊಡ್ಡವಳಿಗೆ ಮದುವೆಯಾಗದೆ ಚಿಕ್ಕವಳಿಗೆ ಮದುವೆ ಮಾಡುವುದು ಮನೆಯ ಹಿರಿಯರಿಗೆ ಸರಿ ಬರಲಿಲ್ಲ. 38 ರ ಪ್ರಾಯದ ಪ್ರಿಯಂವದೆಗೆ ಗಿಣಿಗೆ ಹೇಳಿದ ಹಾಗೆ ಹೇಳಿದರೂ ಅವಳು ಸುತಾರಾಂ ಒಪ್ಪಲಿಲ್ಲ. ಸರಿ ಹಾಗಾದ್ರೆ ಚಿಕ್ಕವಳಿಗಾದ್ರು ಮದುವೆ ಮಾಡಿ ಮುಗಿಸುವ ಅಂದ್ರೆ ಅವಳ ಪ್ರಿಯಕರನ ಕುಟುಂಬಕ್ಕೆ  ಗುಮಾನಿ. ನೋಡಲು ಇಷ್ಟು ಚೆನ್ನಾಗಿದ್ದಾಳೆ ಅಕ್ಕ, ಸ್ವಂತ ದುಡಿಮೆಯಿದೆ ಆದರೆ ಯಾಕೆ ಮದುವೆಯಾಗುತ್ತಿಲ್ಲ ಅಂತ ಅವರಿಗೆ ತಲೆ ಬಿಸಿ. ಏನೋ ಊನವನ್ನು ಮುಚ್ಚಿಡುತ್ತಿದ್ದಾರೆ ಅಂತ. ಹೀಗೆ ಮದುವೆ ಮುಂದೂಡುತ್ತಲೆ ಇರುವಾಗ ತಂಗಿ ತಲೆ ಕೆಟ್ಟವರಹಾಗೆ ವರ್ತನೆ ಶುರು ಮಾಡಿದ್ಲು. ಆಗ ಕುಟುಂಬದ ಹಿರಿಯರೆಲ್ಲ ಸೇರಿ ಪ್ರಿಯಂವದೆಗೆ ಛಿಮಾರಿ ಹಾಕಿದರು - ನಿನ್ನಿಂದ ನಿನ್ನ ತಂಗಿಯ ಜೀವನ ಹಾಳಾಗುತ್ತಿದೆಯೆಂದು. ಅವಳು 'ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ, ನಾನು ಆಶ್ರಮ ಸೇರಿ ಸನ್ಯಾಸಿ ಆಗುತ್ತೇನೆ ಅಂತ ಗಲಾಟೆ ಮಾಡಲು ಶುರು ಮಾಡಿದಳು. ಆಗ ಸಿಕ್ಕಿದ ವರ ಸುಮತೀಂದ್ರ.
ಸುಮತೀಂದ್ರನಿಗೆ ಮೂವರು ಅಕ್ಕಂದಿರು. ತಂದೆ ಚಿಕ್ಕ ಪ್ರಾಯದಲ್ಲೇ ಕಾಲಾವಸಾನರಾಗಿದ್ದರು. ಕೈ ತುಂಬ ಸಂಬಳ ಮಾತ್ರವಲ್ಲ ಗದ್ದೆ ತೋಟಗಳಿಂದಲೂ ಸಾಕಷ್ಟು ಆದಾಯ  ಬರುವ ಸುಮತೀಂದ್ರನಿಗೆ ಮೂವರು ಅಕ್ಕಂದಿರ ಮದುವೆ ಮಾಡಿ ಮುಗಿಸಬೇಕಾದ್ರೆ ಸಾಕು ಬೇಕಾಯಿತು. ನೋಡಲು ಒಂದು ಚೂರು ಲಕ್ಷಣವಿಲ್ಲದ ಹುಡುಗಿಯರನ್ನು ದಂಡಿಯಾಗಿ ವರದಕ್ಷಿಣೆ ಕೊಟ್ಟು ಸಾಗ ಹಾಕಿದ. ಅಮ್ಮನೂ ತೀರಿಕೊಂಡ ಮೇಲೆ ಅವನು ದುಡಿಯುತ್ತ ಕುಡಿಯುತ್ತ ಇತ್ತೀಚಿನ ಐದು ವರ್ಷಗಳಲ್ಲಿ ಹಾಯಾಗಿದ್ದ.ಮದುವೆ ಮಾಡಿಕೊಳ್ಳುವ ಯೋಚನೆ ಅವನಿಗೆ ಖಂಡಿತ ಇರಲಿಲ್ಲ. ಪ್ರಿಯಂವದಾ ಹಾಗೂ ಸುಮತೀಂದ್ರ ಮದುವೆ ಮಾಡಿಸಿದವರು ಎರಡೂ ಕುಟುಂಬದ ನಿಕಟ ಪರಿಚಯದವರು ಮತ್ತು ಎರಡೂ ಕುಟುಂಬಕ್ಕೆ ಬೇಕಾದವರು. ಪ್ರಿಯಂವದಾ ಹಾಗೂ ಸುಮತೀಂದ್ರರಿಬ್ಬರನ್ನೂ ಒಂದು ಸಲ ಒಟ್ಟೊಟ್ಟಿಗೆ ಇನ್ನೊಂದು ಸಲ ಬೇರೆ ಬೇರೆಯಾಗಿ ಸಂಧಿಸಿ ಅವರಿಬ್ಬರೂ ಮದುವೆಯಾಗುವ ಹಾಗೆ ತಯಾರು ಮಾಡಿದರು. ಮ್ಯಾರೇಜ್ ಆಫ್ ಕನ್ವಿನೀಯನ್ಸ್ ಅಂತಾರಲ್ಲವಾ, ಹಾಗೆ!
ಸರಿ ಮದುವೆಯಾಯ್ತು. ಸುಮತೀಂದ್ರ ಅವಳ ಸುದ್ದಿಗೆ ಹೋಗುತ್ತಿರಲಿಲ್ಲ. ಅವರಿಬ್ಬರಿಗೂ ಬೇರೆ ಬೇರೆ ಕೊಠಡಿ. ಅವಳು ಮಾಡಿ ಹಾಕಿದ ರುಚಿರುಚಿಯಾದ ಅಡಿಗೆ ಬಾಯಿ ಚಪ್ಪರಿಸಿ ತಿಂದು ಅವನ ಸ್ನೇಹಿತರು, ಕುಡಿತ ಅಂತ ಆರಾಮಾಗಿದ್ದು ಬಿಟ್ಟಿದ್ದ. ಪ್ರಿಯಂವದೆ ತನ್ನ ಸಂಶೋಧನೆಯಲ್ಲಿ ಮಗ್ನ.ಯಾವಾಗಲೋ ಕುಡಿತದ ಅಮಲಿನಲ್ಲಿ ಅವಳನ್ನು ಕೂಡಿದ ಅವನು, ಅವಳು ರೇಜಿಗೆಯಿಂದ ಅವನಿಗೆ ಛಿ ಮಾರಿ ಹಾಕಿದ್ದು,  ಈ ಸಿಡಿಲಿನಂತಹ ಸುದ್ದಿ.
ಅವನು ಅದು ಹೇಗೆ ಅಂತ ಕೇಳಿದ್ದಕ್ಕೆ ಅವಳ ಬಳಿ ಉತ್ತರ ಏನೋ ಇತ್ತು ಆದರೆ ಅವನ ಶಾಕ್ ನಿಂದ ಕೂಡಿದ ಮುಖ ನೋಡಿ ಅವಳಿಗೆ ಉತ್ತರಿಸಬೇಕೆಂದನಿಸಲಿಲ್ಲ. ಅವನು ಯಾವಾಗಲೋ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಅವನಿಗೆ ಮಕ್ಕಳಾಗದಿರುವ ಬಗ್ಗೆ ರಿಪೋರ್ಟ್ ಬಂದಿದ್ದು ಅವನಿಗೆ ನಿಜಕ್ಕೂ ಶಾಕ್ ಆಗಿತ್ತು.ಆ ಮೇಲೆ ಅವರು ಬೇರೆ ಬೇರೆ ಆದರು. ಅವನಿಗೆ ಅವಳ ಬಗ್ಗೆ ಮರೆತು ಕೂಡ ಹೋಯಿತು. 
ಪ್ರಿಯಂವದಾ ಯಾವಾಗಲೋ ಹೊರ ದೇಶದ ಸಂಶೋಧನಾ ಫೆಲ್ಲೊಶಿಪ್ ಗೆ ಅರ್ಜಿ ಹಾಕಿದ್ದು ಅದು ಸ್ವೀಕೃತ ಆಗಿ ಆಕೆ ಸ್ವಿಜರ್ ಲ್ಯಾಂಡ್ ಗೆ ಹೋಗಿದ್ದಷ್ಟೆ ಅವನಿಗೆ ಅವರಿವರಿಂದ ಗೊತ್ತು. ಆಮೇಲೆ ಅವರಿಬ್ಬರೂ ಸಂಪರ್ಕದಲ್ಲಿರಲಿಲ್ಲ
ಮಧ್ಯೆ ಮಧ್ಯೆ ಸುಮತೀಂದ್ರನಿಗೆ ಅವನ ದೂರದ ಸಂಬಂಧಿ ಡಾಕ್ಟರ್ ಒಬ್ಬರು ಪತ್ರ ಕಳುಹಿಸುತ್ತಿದ್ದರು. ಅದರ ಒಕ್ಕಣೆ ಹೆಚ್ಚು ಕಡಿಮೆ ಹೀಗಿರುತ್ತಿತ್ತು, 'ಇಲ್ಲಿ ಥೇಟ್ ನಿನ್ನನ್ನು ಹೋಲುವ ನೇ ಒಬ್ಬ ಹುಡುಗನಿದ್ದಾನೆ ಅಂತಲೋ, ನೀನು ಆರನೆ ಈಯತ್ತೆಯಲ್ಲಿದ್ದಾಗ ಹೇಗೆ ಕಾಣುತ್ತಿದ್ದೆ ಹಾಗೆ ಕಾಣುತ್ತನೆಂದಲೋ, ನಕ್ಕರೆ ನೀನೆ ನಕ್ಕಹಾಗೆ ಕಾಣುತ್ತನೆಂತ್ಲೋ ಇರುತಿತ್ತು. ಆದರೆ ಮೊನ್ನೆ ಬಂದ ಪತ್ರ ಓದಿ ಅವನಿಗೆ ಯಾಕೋ ತಳಮಳ ಆಯ್ತು. ಈ ಪತ್ರದ ಒಕ್ಕಣೆ ಹೀಗಿತ್ತು, 'ಒಂದು ಸಲ ಇಲ್ಲಿ ಬಂದು ಆ ಹುಡುಗನ್ನ ನೋಡ್ತಿಯಾ? ದೂರದಿಂದಲೇ ನೋಡು. ಅವನ ತಾಯಿ ಇನ್ನೂ ಕೆಲವೆ ದಿನಗಳ ಅತಿಥಿ.'
ಸುಮತೀಂದ್ರ ಈಗ ಸ್ವಯಂ ನಿವೃತ್ತಿ ಹೊಂದಿದ್ದ. ದುಡ್ಡಿನ ಜತೆ ಅವನ ಬಳಿ ಸಮಯವೂ ಸಾಕಷ್ಟಿತ್ತು. ಈಗ ಗೆಳೆಯರೂ ಅವರವರ ಪರಿವಾರ ಅವರ ಜೀವನದಲ್ಲಿ ವ್ಯಸ್ತರಾಗಿದ್ದು ಇವನ ಬಳಿ ಮಾತಾಡುವಷ್ಟು ವ್ಯವಧಾನ ಅವರಿಗಿರಲಿಲ್ಲ. ಇತ್ತೀಚಿಗೆ ಯಾಕೋ ಅವನಿಗೆ ಪ್ರಿಯಂವದಾ ಅವಳ ಅಡಿಗೆ, ಅವಳು ಬಳಸುವ ಶ್ಯಾಂಪೂ ಪರಿಮಳ ಅವಳ ಉದ್ದ ಜಡೆ ಪದೇ ಪದೇ ನೆನಪಿಗೆ ಬರುತ್ತಿತ್ತು. ಹದಿನೈದು ವರ್ಷಗಳೇ ಕಳೆದು ಹೋಗಿದ್ದವು. ಅವಳಿಗೆ ನನ್ನ ನೆನಪು ಒಂದು ಸಲವೂ ಕಾಡಿಲ್ಲವೇ ಮುಂತಾದ ಪ್ರಶ್ನೆಗಳು ಅಸ್ವಸ್ಥ ಮಾಡುತ್ತಿದ್ದವು. ಆ ಸಂಬಂಧಿಕರಿರುವ ಊರಿಗೆ ಹೋಗಿ ಯಾಕೆ ಆ ಹುಡುಗನ್ನ ನೋಡ ಬಾರದು? ಅವನ ಶಿಕ್ಷಣಕ್ಕೆ ಏನಾದರೂ ದಾರಿಯಾದರೂ ಮಾಡುವ ಅಂತ ಹೊರಟ ಸುಮತೀಂದ್ರ.
ಹೌದು ಅಲ್ಲಿ ನೋಡಿದ್ರೆ ಆ ಹುಡುಗ ಸುಮತೀಂದ್ರ 9 ನೆ ತರಗತಿಯಲ್ಲಿ ಹೇಗೆ ಕಾಣಿಸುತ್ತಿದ್ದ ಹಾಗೇ ಇದ್ದ. ಅಷ್ಟೆ ಅಲ್ಲ ಸುಮತೀಂದ್ರನ ಹಾಗೆ ಸುಮ್ಮನೆ ಕೂತಾಗ ಒಂದು ಕಾಲನ್ನು ಅಲ್ಲಾಡಿಸುವ ಅಭ್ಯಾಸ ಕೂಡ ಇತ್ತು. ಸುಮತೀಂದ್ರ ಆ ಹುಡುಗನ ಅಮ್ಮನ ಬಳಿ ಮಾತನಾಡಲು ಹೋದ. ಅಮ್ಮನ ಪರಿಸ್ಥಿತಿ ತುಂಬ ಬಿಗಡಾಯಿಸಿತ್ತು. ಆಕೆ ಕಷ್ಟಪಟ್ಟು ಹುಡುಗನಿಗೆ ತಂದೆ ಇಲ್ಲ, ಹೇಳಿಕೊಳ್ಳುವಂತಹ ಬಂಧು ಬಳಗವಿಲ್ಲ, ನಾನು ನೋಡಿದರೆ ನಿತ್ಯ ರೋಗಿ, ನನ್ನ ನಂತರ ಆ ಹುಡುಗಂದು ಏನಾಗುತ್ತದೋ ಎಂದು ರೋಧಿಸಿದರು. ಅವನು ಊರಿನ ಮುನಿಸಿಪಾಲಿಟಿ ಆಫಿಸ್ ನಲ್ಲಿ ಸ್ವಲ್ಪ ಅವರಿವರ ಕೈ ಬೆಚ್ಚಗೆ ಮಾಡಿ ಆ ಹುಡುಗ ಹುಟ್ಟಿದ ದಿನಾಂಕ ಅವನ ಇತರೇ ಮಾಹಿತಿಗಳನ್ನು ಕಲೆ ಹಾಕಿದ. ತಾಯಿಯ ಹೆಸರು ಇತ್ತೆ ವಿನಹ ತಂದೆಯ ಹೆಸರನ್ನು ಅಲ್ಲಿ ನೋಂದಾಯಿಸಿರಲಿಲ್ಲ. ಈಗ ಅವನು ಪ್ರಿಯಂವದಾಳಿಗೆ ಸಂಪರ್ಕಿಸ ಬೇಕಾಯಿತು. ಹಾಗೆ ತಾನೂ ಡಾಕ್ಟರ್ ಬಳಿ ತಪಾಸಣೆ ಹೋದಾಗ ಅವನಲ್ಲಿ ತಂದೆಯಾಗುವ ಎಲ್ಲ ಯೋಗ್ಯತೆಗಳೂ ಇದ್ದವು. ಒಂದು ತರಹ ಸಂತಸ ಸಂಭ್ರಮ.
ಸರಿ ಗೂಗಲ್ ನಲ್ಲಿ ಅವಳ ಹೆಸರು ಪ್ರಿಯಂವದಾ ಅಂತ ಹಾಕಿದ್ರೆ ಏನೂ ಸಿಗಲಿಲ್ಲ. ಪುನ: ಅವನ ಊರಿಗೆ ವಾಪಸ್ ಬಂದು  ಮನೆಯ ಕಪಾಟುಗಳನ್ನೆಲ್ಲ ತಡಕಾಡಿದ ಪ್ರಿಯಂವದಾ ಬಗ್ಗೆ ಏನಾದರೂ ಸುಳಿವು ಸಿಗಬಹುದೇ ಅಂತ. ಕೊನೆಗೂ ಪುಸ್ತಕದ ಕಪಾಟಿನಲ್ಲಿ ಎರಡು ಪುಸ್ತಕದ ಮಧ್ಯೆ ಅಪಚ್ಚಿಯಾದ, ಹುಳು ತಿಂದ ಅರ್ಜಿಯ ಸ್ವಲ್ಪ ಭಾಗದಲ್ಲಿ ಅವಳ ಸಂಶೋಧನಾ ಸಂಸ್ಥೆಯ ಹೆಸರು ಸಿಕ್ಕಿತು. ಕೂಡಲೆ ಗೂಗಲಿಸಿ ನೋಡಿದರೆ ಪ್ರಿಯಂವಾದ ಈಗ ಪ್ರಿಯಾ ಆಗಿದ್ದು, ಅವಳಿಗೆ ಬಂದ ಹಲವಾರು ಪ್ರಶಸ್ತಿಗಳು, ಅವಳು ಮತ್ತು ಅವಳ ಸಹೋದ್ಯೋಗಿಗಳು ಜಂಟಿಯಾಗಿ ಮಂಡಿಸಿದ ಪ್ರಬಂಧಗಳ ಪಟ್ಟಿಯೇ ಕಣ್ಣೆದುರಿಗೆ ಸಾಲು ಸಾಲಾಗಿ ಬಂದು ನಿಂತಿತು. ಪುಟದ ಕೊನೆಯಲ್ಲಿ ಅವಳ ವೈಯಕ್ತಿಕ ಮಾಹಿತಿ ಮುಂತಾದನ್ನು ಹಾಕಿದ್ದರು. ಅವಳ ಇ ಮೈಲ್ ಫೋನ್ ನಂಬರ್ ಇತ್ಯಾದಿ.
ಕೂಡಲೆ ಒಂದು ಮೈಲ್ ಕಳುಹಿಸಿ ಒಂದು ವಾರದ ತನಕ ಬೆಳಿಗ್ಗೆ ಮಧ್ಯಾಹ್ನ , ರಾತ್ರಿ ಎಚ್ಚರವಾದಾಗಲೆಲ್ಲ ಅವಳ ಮೈಲ್ ಏನಾದರೂ ಬಂದಿದೆಯಾ ಅಂತ ಕಾಯೋದೆ ಆಯಿತು. ಇನ್ನೊಂದೆರಡು ದಿನ ಕಾದು ಅಲ್ಲಿ ಕೊಟ್ಟ ನಂಬರ್ ಗೆ ಸಂಪರ್ಕಿಸೋದು ಅಂತ ತನ್ನಷ್ಟಕ್ಕೆ ಅಂದು ಕೊಂಡ ಅಲ್ಲಿಂದ ಯಾವುದೇ ಸುದ್ದಿಯಿಲ್ಲ. ಕೊನೆಗೆ ಫೋನ್ ಮಾಡಿದರೆ, 'ದಯವಿಟ್ಟು ನಿಮ್ಮ ಹೆಸರು ನಂಬರ್ ಹೇಳಿ ಅಂತ ಆಟೋಮೇಟದ್ ದನಿಯೊಂದು ಕೇಳಿತು. ಹತಾಶನಾದ ಸುಮತೀಂದ್ರ. ಎಲ್ಲ ಆಸೆ ಕೈಬಿಟ್ಟ ಮೇಲೆ ಒಂದು ದಿನ ಅವಳ ಮೈಲ್ ನೋಡಿ ಅವನ ಎದೆ ಡವಗುಟ್ಟಿತು ಕಾತುರದಿಂದ.
ಮೈಲ್ ಪಕ್ಕದಲ್ಲೇ ಅವಳ ಫೋಟೊ ಮೊದಲಿಗೆ ನೋಡಿದ. ಬಿಳಿ ಕೂದಲಿನಿಂದ ಆವೃತ ಅವಳ ಮುಖ ಇನ್ನೂ ಆಕರ್ಷಕ ವಾಗಿತ್ತು, ಸ್ನಿಗ್ದ ಸುಂದರವಾಗಿತ್ತು. ಮಿಂಚಂಚೆಯಲ್ಲಿ ಅವಳು ಕೆಲ ದಿನಗಳ ಮಟ್ಟಿಗೆ ಕೆಲಸಕ್ಕೆ ಬ್ರೇಕ್ ತೆಗುದ್ಕೊಂಡು ಮಗನ ಜತೆ ಯೂರೋಪ್ ಟೂರ್ ಗೆ ಹೋಗಿದ್ದು ಹಾಗು ಅಲ್ಲಿನ ಚಿತ್ರಗಳನ್ನು ಕಳುಹಿಸಿದ್ದಳು. 'ಆಶ್ಚರ್ಯದಿಂದ ಮೂರು ನಾಲ್ಕು ಸಲ ನಿನ್ನ ಮೈಲ್ ಓದ ಬೇಕಾಯ್ತು. ಏನಪ್ಪ ದಿಢೀರ್ ನೆನಪು ಬಂತು ಅಂತ' ಆ ಹುಡುಗನ ಬಗ್ಗೆ ಓದಿ ಆಶ್ಚರ್ಯ ಆಯಿತು.ಡಾಕ್ಟರ್ ನನಗೆ ಅವಳಿ ಜವಳಿ ಮಕ್ಕಳಾಗುವ ಸಾಧ್ಯತೆಯಿದೆ ಎಂದಿದ್ದರು. ಆದರೆ ಒಂದು ಮಗು ಸತ್ತು ಹುಟ್ಟಿತ್ತು ಅಂತ ದಾಯಿ ಹೇಳಿದಾಗ ಅವಳನ್ನು ನಂಬಿದೆ. ಸಾಧ್ಯ ಆದರೆ ನನಗೆ ಅವನ ಫೋಟೊ ಕಳುಹಿಸಿ ಮತ್ತು ಆಟಾಂಚ್ ಮೆಂಟ್ ನಲ್ಲಿ ನಿನ್ನ ಮಗನ ಫೋಟೊ ಕೂಡ ನೋಡು. ಹೇಗಿದ್ದಿಯಾ? ನಾನು ನನ್ನ ಕೆಲಸದಲ್ಲಿ ತುಂಬ ಇನ್ವಾಲ್ವ್ ಆಗಿದ್ದೀನಿ. ನಾನೀಗ ಸೀನಿಯರ್ ರಿಸರ್ಚ್ ಸಯಂಟಿಸ್ಟ್. ವಾಸ ಮಾಡಲು ಮನೆ ಒಳ್ಳೆಯ ಸಂಬಳ ಇದೆ". ಅಂತೆಲ್ಲ ಹಾಕಿದ್ದಳು ಮೈಲ್ ನಲ್ಲಿ
ಮಗನ ಫೋಟೊ ನೋಡಿ ಇವನಿಗೆ ಶಾಕ್. ಥೇಟ್ ಆ ಹುಡುಗನ ತರಹ ಮುಖಚರ್ಯೆ. ಏನಿದು ಆಶ್ಚರ್ಯ ಅಂತ. ಕೂಡಲೆ ಅವಳಿಗೊಂಡು ಮೈಲ್ ಹಾಕಿ ಅವನು ಆ ರಾತ್ರಿಯೇ ಊರಿಗೆ ಹೊರಟ. ಆ ಹುಡುಗ ಹುಟ್ಟಿದ ಆಸ್ಪತ್ರೆಗೆ ಹೋಗಿ, ಸ್ವಲ್ಪ ಲಂಚ ಕೊಟ್ಟು ಹಳೆಯ ಫೈಲ್ ಗಳನ್ನೆಲ್ಲ ಎಡತಾಕಿದ. ಆಗ ಅಲ್ಲಿ ಕೆಲಸ ಮಾಡುತ್ತಿದ್ದ ದಾಯಿಯ ಹೆಸರು ಸಿಕ್ಕಿತು. ಆ ದಾಯಿಯ ವಿಳಾಸದ ಜಾಡನ್ನು ಹುಡುಕುತ್ತ ಹೊರಟ ಸುಮತೀಂದ್ರ. ಅವರಿವರನ್ನು ಕೇಳಿಕೊಂಡು ಕೊನೆಗೂ ಒಂದು ತಿಂಗಳ ನಂತರ ಅವಳನ್ನು ಪತ್ತೆ ಹಚ್ಚಿದ. ಈಗ ಅವಳು ಹಣ್ಣು ಹಣ್ಣು ಮುದುಕಿ. ಆದರು ಸರಿಯಾಗಿ ನೆನಪುಮಾಡಿಕೊಳ್ಳಲು ಹೇಳಿದಾಗ ಅವಳಿಂದ ಪಡೆದ ಮಾಹಿತಿ ಇಷ್ಟು.
ಪ್ರಿಯಂವದಾ ಅವಳ ಊರಿನವಳೇ ಆಗಿದ್ದು, ಗಂಡನನ್ನು ಬಿಟ್ಟು ಬಂದಿದ್ದು ಅವಳಿಗೆ ತಿಳಿದಿತ್ತು. ಅದೇ ಊರಿನ ಇನ್ನೊಂದು ಕುಟುಂಬದ ಹೆಂಗಸಿಗೆ ತುರ್ತಾಗಿ ಅವಳ ಜೀವ ಉಳಿಸಲು ಒಂದು ಮಗು ಬೇಕೆ ಬೇಕಿತ್ತು. ದಾಯಿ ಪ್ರಿಯಂವದಳಿಗೆ ಗೊತ್ತಾಗದಂತೆ ಅವಳ ಮಗುವನ್ನು ಕದ್ದು ಆ ಕುಟುಂಬಕ್ಕೆ ಕೊಡುವ ಹುನ್ನಾರದಲ್ಲಿದ್ದಳು. ಆದರೆ ಆಶ್ಚರ್ಯಕರ ಸಂಗತಿಯೆಂದರೆ ಪ್ರಿಯಂವದಳಿಗೆ ಅವಳಿಜವಳಿ ಗಂಡು ಮಕ್ಕಳು ಹುಟ್ಟಿದ್ದು ಅವಳಿಗೆ ಅನುಕೂಲವಾಯಿತು.ಡಾಕ್ಟರ್ ಕೂಡ ಇದರಲ್ಲಿ ಶಾಮೀಲಾಗಿದ್ದಿರ ಬಹುದು ಎಂದು ಅವನಿಗೆ ಸಂಶಯ ಬಂತು. ಅವಳು ಅದರಲ್ಲಿ ಒಂದು ಮಗುವನ್ನೆ ಎತ್ತಿಕೊಂಡು ಆ ಕುಟುಂಬಕ್ಕೆ ಕೊಟ್ಟಿದ್ದಳು. ಆ ಹೆಂಗಸಿಗೆ ಮೂರು ಮಕ್ಕಳಾಗಿ ಹೊಟ್ಟೆಯಲ್ಲಿ ಸತ್ತು ಹುಟ್ಟುತ್ತಿದ್ದರಿಂದ ಆಕೆ ಮಾನಸಿಕ ಕ್ಷೋಭೆಗೆ ತುತ್ತಾಗಿದ್ದಳು. ಈ ಮಗುವಿನಿಂದ ಆಕೆ ಸಮಾಧಾನ ಹೊಂದಿದ್ದಾಳೆ. ಆದರೆ ಈಗ ತೀರ ಕಾಯಿಲೆಯಿಂದ ಅವಳು ಇನ್ನು ಕೆಲವೇ ದಿನಗಳ ಅತಿಥಿ.
ಇದೆಲ್ಲವನ್ನೂ ಸುಮತೀಂದ್ರ ಪ್ರಿಯಂವದಾಳಿಗೆ ಮೈಲ್ ಮೂಲಕ ರವಾನಿಸಿದ.'ಮಗನನ್ನು ಇಲ್ಲಿಗೆ ಕರೆದುಕೊಂಡು ಬಾ. ನಿಮ್ಮಿಬ್ಬರನ್ನು ನೋಡಬೇಕೆನ್ನಿಸಿದೆ. ಇತ್ತೀಚಿಗೆ ನಿನ್ನ ನೆನಪು ತುಂಬ ಕಾಡುತ್ತಿದೆ'
ಮರು ಮೈಲ್ ನಲ್ಲಿ ಪ್ರಿಯಂವದಾಳ ಉತ್ತರ ಹೀಗಿತ್ತು. ಇನ್ನು ಎರಡು ತಿಂಗಳಿಗೆ ಮಗನ ರಜೆ ಶುರು ಆಗುತ್ತದೆ. ಆಗ ಅವನನ್ನು ನಿನ್ನ ಬಳಿ ಕಳುಹಿಸುತ್ತೇನೆ. ನೋಡು. ಬೇಕಾದ್ರೆ ನಿನ್ನ ಬಳಿ ಇಟ್ಟು ಕೋ. ನಾನು ಇನ್ನು ಆರು ತಿಂಗಳ ನಂತರ ಸ್ವಯಂ ನಿವೃತ್ತಿ ಪಡೆದು ಸ್ಯಾನ್ ಫ್ರಾನ್ಸಿಕೋ ದ ಆಶ್ರಮ ಸೇರುತ್ತ ಇದ್ದೀನಿ. ನಾವು ಒಂದು ಒಪ್ಪಂದದ ಮೇಲೆ ಮದುವೆಯಾಗಿದ್ದು. ಅದರ ಪ್ರಕಾರ ನೀನು ವರ್ತಿಸಲಿಲ್ಲ. ಮಗುವನ್ನು ನಾನು ಆಗಲೇ ತೆಗೆದು ಹಾಕಬಹುದಿತ್ತು ಆದರೆ ಹುಟ್ಟದೆ ಇರುವ ಮಗುವಿನ ಯಾವುದೇ ತಪ್ಪು ಇರಲಿಲ್ಲ ಅನ್ನುವ ಪಾಪಪ್ರಜ್ಞೆ ಕಾಡಿತ್ತು. ಮಗು ಹುಟ್ಟಿದ ಬಳಿಕ ನಾನು ಬದಲಾಗಬಹುದೆಂದು ಕೊಂಡಿದ್ದೆ. ಆದರ ನನಗೆ ಅವನಿಗೇ ಯಾವ ಇಮೋಷನಲ್ ಅಟ್ಯಾಚ್ ಮೆಂಟ್ ಇಲ್ಲ. ಹುಟ್ಟಿದಾರಭ್ಯ ಅವನು ನ್ಯಾನಿ ಬಳಿ ಬೆಳೆದ. ನೀನು ಬೇರೆ ಮದುವೆ ಮಾಡಿಕೊಳ್ಳುವಲ್ಲಿ ನನ್ನದೇನೂ ಅಭ್ಯಂತರವಿಲ್ಲ. ನಿನಗೆ ಕಾನೂನಿನ ತೊಡಕೂ ಆಗಲ್ಲ ಯಾಕಂದರೆ ನಾವು ಹಲವು ವರ್ಷಗಳು ಸಂಪರ್ಕದಲ್ಲಿರಲಿಲ್ಲ. ಮಗನ ಬಗ್ಗೆ ಬೇಗ ಯಾವುದಾದರೂ ನಿರ್ಧಾರ ತೆಗೆದುಕೊ. ಅವನ ಹೆಸರಿಗೆ ಸ್ವಲ್ಪ ಹಣಕಾಸು ಠೇವಣಿಯಾಗಿಟ್ಟಿದ್ದೇನೆ. ಮಗನನ್ನು ನಿನ್ನ ಬಳಿ ಇರಿಸಿಕೊಳ್ಳಲು ಇಷ್ಟ ಪಡದಿದ್ದರೆ ಅವನಿಗೆ ಬೇರೆ ವ್ಯವಸ್ಥೆ ಮಾಡಬೇಕು.
...................................................................... 
ಸುಮತೀಂದ್ರ ಈಗ ಅವನ ದೂರದ ಸಂಬಂಧದಲ್ಲಿ ವಯಸ್ಸಾದ ದೊಡ್ಡಮ್ಮನನ್ನು ಕರೆದುತಂದು, ಇಬ್ಬರು ಮಗಂದಿರ ಜತೆ ವಾಸವಾಗಿದ್ದಾನೆ.
(ಕಥೆಯೆಂದು ಗೀಚಿದ್ದು ಟೈಟಲ್ ಏನೂ ತೋಚಲಿಲ್ಲ....ಅದಕ್ಕೆ ಸುಮ್ನೆ ಕಥೆ ಅಂತ ಹಾಕಿದ್ದೀನಿ. ಚೆನ್ನಾಗಿದೆಯಾ ಇಲ್ಲವಾ?)

-- 
:-)
malathi S

October 15, 2013

ಪೆಬ್ಬಲ್ ಗಾರ್ಡನ್ ಬಗ್ಗೆ

ಎಲ್ಲರೂ ದಸರಾ ಹಬ್ಬ ಎಂಜಾಯ್ ಮಾಡಿದ್ರಾ?
ಕೆಲ ತಿಂಗಳ ಹಿಂದೆ ನಾನು ಇಂಗ್ಲಿಷ್ ನಲ್ಲಿ ಪೋಸ್ಟ್ ಮಾಡಿದ ದೀಪಿಕಾ-ಬರ್ನಾಡ್ ರ ಪೆಬ್ಬಲ್ ಗಾರ್ಡನ್ ಬಗ್ಗೆ ಆನಂದ ತೀರ್ಥ ಪ್ಯಾಟಿಯವರ ಲೇಖನ  ಇಂದಿನ ಪ್ರಜಾವಾಣಿ ಕೃಷಿ ಪುರವಣಿಯಲ್ಲಿ. ಕೆಳಗಡೆ ಇದೆ ಕೊಂಡಿ. ಕೆಲದಿನಗಳ ಹಿಂದೆ ಹೆಬ್ಬಾಳ ಕೃಷಿ ವಿಶ್ವವಿದ್ಯಾಲಯದಲ್ಲಿ ಬೀಜ ಜಾತ್ರೆ ಹಮ್ಮಿ ಕೊಂಡಿದ್ದರು. ಅದರ ಉದ್ಘಾಟನೆ ದೀಪಿಕಾ ಅವರಿಂದ ಮಾಡಿಸಿದರು. ನಮಗೆ ದೀಪಿಕಾ ಮಾತಿಗೆ ಸಿಕ್ಕಿದಾಗ i sold all my seeds in just one hour ಅಂತ ಹೇಳಿದರು. ಬೀಜ ಜಾತ್ರೆ ಮೂರುದಿನಗಳ ಕಾಲ ನಡೆಯಿತು. ನಾವು ಹೋಗಿದ್ದು ಭಾನುವಾರದಂದು. ಕತ್ತಲೆಯಲ್ಲಿ ಮುಳುಗಿದ, ಗಾಳಿ ಬೆಳಕು ಸರಿಯಿಲ್ಲದ ಜಾತ್ರೆಯ ಸ್ಥಳದಲ್ಲಿ ಹಲವಾರು ಸಾವಯವ ಕೃಷಿ, ಬೀಜಗಳ ವಿತರಣೆ-ಸಂರಕ್ಷಣೆ, ಗುಡಿ ಕೈಗಾರಿಕೆ, ಗೃಹೋತ್ಪನ್ನಗಳನ್ನು ವೀಕ್ಷಿಸಲು, ಖರೀದಿಸಲು, ಮಾಹಿತಿ ವಿನಿಮಯ ಮಾಡುವ ಆಸಕ್ತರನ್ನು ನೋಡಿ ಖುಶಿಯಾಗಿತ್ತು. ದೀಪಿಕಾ ಅವರಿಂದ ಕೊಂಡುಕೊಂಡ ಬೀಜಗಳನ್ನು ಜನರು ಬಳಸಿ ಅದರ ಬಗ್ಗೆ ಫೀಡ್ ಬ್ಯಾಕ್ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು ಅನ್ನಿಸ್ತು.
ಮೊದಲಿಗೆ ನನ್ನ ಲೇಖನದ ಲಿಂಕ್:

http://malathisanchiyinda.blogspot.in/2013/04/pebble-garden-pondicherri-trip-4.html

http://www.prajavani.net/article/%E0%B2%B9%E0%B2%BF%E0%B2%A4%E0%B3%8D%E0%B2%A4%E0%B2%B2%E0%B3%8A%E0%B2%B3%E0%B3%81-%E0%B2%A4%E0%B2%B0%E0%B2%95%E0%B2%BE%E0%B2%B0%E0%B2%BF-%E0%B2%9A%E0%B2%BF%E0%B2%A4%E0%B3%8D%E0%B2%A4%E0%B2%BE%E0%B2%B0

October 8, 2013

ಟಾಯ್ಲೆಟ್ ಪ್ರವರ

(ನಿನ್ನೆ ರಾಯರು ಗಟ್ಟಿ ಆವಾಜ್ ಹಾಕಿದರು: ನಿನ್ನಿಂದ ಸಿಸ್ಟಮ್ ಸ್ಲೋ ಆಗಿದೆ. ನಿನಗೆ ಬೇಡದಿದ್ದ ಫೈಲ್, ಫೋಟೊ, ಸಿನಿಮಾಗಳನೆಲ್ಲ ತೆಗೆದು ಹಾಕಿ, defrag ಮಾಡು ಅಂತ. ಸರಿ ಒಂದೊಂದಾಗಿ ನನ್ನ ಫೋಲ್ಡರ್ ಕ್ಲಿಯರ್ ಮಾಡಬೇಕಾದ್ರೆ ಈ ಹಳೆ ಬರಹ ಸಿಕ್ಕಿತು. ನಿಮಗೆ ಇಷ್ಟ ಆಗುತ್ತೋ ಇಲ್ಲವೋ ಇಲ್ಲಿ ಹಾಕ್ತಾ ಇದ್ದೀನಿ. ಯಾಕಂದರೆ ಆಗ ಈಗಿನಷ್ಟು ಸಲೀಸಾಗಿ ನನಗೆ ಕನ್ನಡದಲ್ಲಿ ಬರೀಲಿಕ್ಕೆ ಬರುತ್ತಿರಲಿಲ್ಲ.
ವಸುಧೇಂದ್ರರ ಬರಹ ಓದಿ ಅವರಿಗೆ ಎಸ್ ಎಮ್ ಎಸ್ ಮಾಡಿದ್ದು ನೆನಪಿದೆ, ಈ ಬರಹ ಕಳಿಸಿದ್ದು ನೆನಪಿಲ್ಲ. ಹಾಗೂ ಇದು Ansi format ನಲ್ಲಿದ್ದದ್ದು ನಾನೇ ಟ್ರೈ ಮಾಡಿ ಮಾಡಿ Unicode ಗೆ ಬದಲಾಯಿಸಿ ಪೋಸ್ಟಿಸಿದ್ದೇನೆ. of course i am proud of myself for figuring it out :-)ಈ ಕತೆ 'ರಕ್ಷಕ ಅನಾಥ' ಕತಾ ಸಂಕಲನದಲ್ಲಿ ಇದೆ ಅನ್ನಿಸುತ್ತೆ....ಫೈಂಡ್ ಔಟ್ ಮಾಡಿ ಹೇಳ್ತೇನೆ........  )
...................................................................................................................
ವಸುಧೇಂದ್ರರ ಸಣ್ಣ ಕತೆ ಮನೆ -’ಮಾರು’ ಓದ್ತಾ ಇರಬೇಕಾದ್ರೆ ನಮ್ಮಲ್ಲಿ ಶ್ರೀಕಾಂತ್ ಗೂ ಮಾಲವಿಕಾ ಗೂ toilet ಬಳಸಲು ಗಲಾಟೆ ನಡೀತಾ ಇತ್ತು
’ಅಪ್ಪ’ 20 ಕೌಂಟ್ ಮಾಡ್ತೇನೆ, ನೋಡು ಹೊರಗೆ ಬರಬೇಕು ಅಂತ ಬೇಗ ಬೇಗ 1 ರಿಂದ ಎಣಿಸಲು ಶುರು ಮಾಡಿದಳು.
ಅದಕ್ಕೆ ಇವರು ’ಹಾ ಹಾ ಅಷ್ಟು ಬೇಗ ಬೇಗ ಎಣಿಸಲಿಕ್ಕೆ ಇಲ್ಲ ಪ್ರತಿ ಸಂಖ್ಯೆ ಆದಮೇಲೂ ೨ ನಿಮಿಷದ ಗ್ಯಾಪ್ ಇರಬೇಕು’
ಕೂಡಲೇ ಅಮ್ಮ ಅಮ್ಮ ನೋಡಮ್ಮ ಅಪ್ಪನ್ನ್ ಅಂತ ನನ್ನ ಬಳಿ ಕಂಪ್ಲೈಂಟ್
ನಾನಂತು ಸುಮ್ಮನೆ ನಗ್ತಿರ್ತೇನೆ, ಅವರದ್ದು ಕೋಳಿ ಜಗಳ ಕೇಳ್ತಾ.
ಕೂಡಲೇ ವಸುಧೇಂದ್ರ ಅವರಿಗೆ ಎಸ್.ಎಮ್.ಎಸ್ ಮಾಡಿದೆ ’hopefully the tundu mane has equal number of toilets’ ಅಂತ.
(ವಿಜಯ ಕರ್ನಾಟಕ ಸಾಪ್ತಾಹಿಕ ಪುರವಣಿ ಪುಟ: 6 , 20 ಸೆಪ್ಟೆಂಬರ್ 09)
ಅರ್ಜೆಂಟ್ ನಲ್ಲಿ ಈ ಮನೆ ಹುಡುಕಿದಾಗ ಇದರಲ್ಲಿರೋದೆ ಒಂದೇ toilet ಅಂತ ನಾವು ಅಷ್ಟು ಗಮನಿಸಿರಲಿಲ್ಲ. ಹೆಚ್ಚಿನಂಶ ಈಗೀನ ಎರಡು ಬೆಡ್ ರೂಮ್ ಬಾಡಿಗೆ ಮನೆಯಲ್ಲಿ ಒಂದು ಬೆಡ್ ರೂಮ್ ಗೆ ಒಂದು ಎಟ್ಯಾಚ್ಡ್ ಬಾತ್/toilet ಇರುತ್ತೆ. ನಾವಿರುವ ಬಾಡಿಗೆ ಮನೆ ೧೫ ವರ್ಷ ಹಳೆಯದು.
ಮುಂಬಯಿನಲ್ಲಿ ನಾನು ಚಿಕ್ಕವಳಿದ್ದಾಗ ನಮ್ಮ ಮನೆ ಇದ್ದಿದ್ದು ಮೂರನೆ ಮಹಡಿಯಲ್ಲಿ. ಲಿಫ್ಟ್ ಇರಲಿಲ್ಲ. ಒಳ ಹೊಕ್ಕ ಕೂಡಲೇ ಒಂದು ದೊಡ್ಡ ಹಾಲ್ ಆಮೇಲೆ ಇನ್ನೂ ಒಳಗೆ ಇನ್ನೊಂದು ರೂಮ್. ಅದಕ್ಕೆ ಬಾಗಿಲು. ಅದು ಅಡಿಗೆ ಮನೆ cum ಬಾತ್ರೂಮ್
ಒಂದು floor  ನಲ್ಲಿ ಒಟ್ಟು ಆರು ಮನೆಗಳಿದ್ದವು. ಎರಡು ಮನೆಗೆ ಒಂದರಂತೆ staircase ಹತ್ತಿರ toilet . ನಾವೆಲ್ಲ ಆಗ ಸರದಿಯಲ್ಲಿ ನಿಲ್ಲ ಬೇಕಾಗುತ್ತಿತ್ತು. ಕೆಟ್ಟ ವಾಸನೆ ಬೇರೆ. ಫೆನಾಯಿಲ್ ಮುಂತಾದವುಗಳ ಬಳಕೆ almost nil . ಈಗೀಗ ಪರಿಸ್ಥಿತಿ improve ಆಗಿದೆ :-)
ತೀರ್ಥಹಳ್ಳಿಯಲ್ಲಿ ನಾವು ಮೂವತ್ತು ಮಂದಿಗೆ ಇದ್ದದ್ದು ಮೂರು toilet, ಅಲ್ಲೂ ಸರದಿ ಸಾಲು, ಶಾಲೆಗೆ ಹೋಗುವ ಮಕ್ಕಳಿಗೆಲ್ಲ ಅರ್ಜೆಂಟ್. ಇನ್ನೊಂದು ಗಮ್ಮತ್ತಿನ ವಿಷಯ ಅಂದ್ರೆ ನಾವು ಹೆಣ್ಣು ಮಕ್ಕಳು toilet ಉಪಯೋಗಿಸುವಾಗ ನಮ್ಮ ಮಾತುಗಳು
ಶ್ರೀಕಾಂತ್ ಗೆ toilet ಗೆ ಹೋಗುವಾಗ ಪತ್ರಿಕೆ ಇರಲೇ ಬೇಕು. ಮದುವೆಯಾದ ಹೊಸದರಲ್ಲಿ ಯುಗಾದಿಗೆ ಮುಂಬೈ ಗೆ ಹೋದಾಗ, ಇವರು ಆಂಗ್ಲ ಪತ್ರಿಕೆ ಯೊಂದನ್ನು ಒಯ್ದು toilet ಗೆ ಹೋದರು. ಸುಮಾರು ಹೊತ್ತಾದರೂ ಹೊರಗೆ ಬರಲೆ ಇಲ್ಲ. ನನ್ನ ತಮ್ಮ ಅಂತೂ ’ಜಿಜಾಜಿ ಗೆ ಅಷ್ಟು ಹೊತ್ತು ಬೇಕಾ, ಏನು ಕಬ್ಬಿಣ ಬೀಳಿಸ್ತಾರಾ?’ ಅಂತ ಕೇಳಿದಾಗ ನನಗಂತೂ ಮುಜುಗರ. ಆಮೇಲೆ ನಿಧಾನಕ್ಕೆ ’ಅವರು ಪೇಪರ್ ತೆಗೆದು ಕೊಂಡು ಹೋಗಿದಾರೆ ಅಂದೆ’, ಅದಕ್ಕೆ ಅವನು ಗಟ್ಟಿಯಾಗಿ ಜೀಜಾಜಿ ನಮ್ಮಲ್ಲಿ ನೀರು ಸಾಕಷ್ಟು ಬರ್ತದೆ, ಪೇಪರ್ ಬಳಸುವ ಅಗತ್ಯವಿಲ್ಲ, ಅಷ್ಟೆ ಅಲ್ಲ ಸಮುದ್ರ ತುಂಬ ಹತ್ತಿರದಲ್ಲೇ ಇದೆ, ಎಂದಾಗ ಅವರಿಗೆಲ್ಲ ನಗು.್, ನನಗೋ ಮುಜುಗರ. :-(
ಇತ್ತೀಚಿಗಂತೂ ವಿಜಯ ಕರ್ನಾಟಕ ಪತ್ರಿಕೆ ಇಲ್ಲದಿದ್ದರೆ ಅವರಿಗೆ toilet ಗೆ ಹೋಗಲು ಕಷ್ಟವಾಗುತ್ತದೆ. ಆಕಸ್ಮಾತ್ ಆ ದಿನ ವಿ.ಕ ಬಂದಿರದಿದ್ದರೆ ಪೇಟೆಗೆ ಹೋಗಿ ಅದನ್ನು ಖರಿದಿ ಮಾಡಿ ಆಮೇಲೆ toilet ಗೆ ಎಂಟ್ರಿ.
ರಜೆ ಗಿಜೆ ಬಂದು ಆ ದಿನ ಪೇಪರ್ ಬಂದಿರದಿದ್ದರೆ ’ಛೆ! ಇವತ್ತು toilet ಸರಿ ಆಗ್ಲೆ ಇಲ್ಲ ಅಂತ’ ಕಾಲು ಸುಟ್ಟ ಬೆಕ್ಕಿನಂತೆ ಆ ಕಡೆ ಈ ಕಡೆ ಹೋಗ್ತಿರುತ್ತಾರೆ.
ಹ್ಮ್ ಈ ಪೋಸ್ಟ್ ಓದಿ ಮೂಗು ಮುರಿಯಬೇಡಿ. ಅಲ್ಲ ಮೂಗು ಏನಾದರೂ ನಿಜಕ್ಕೂ ಮುರಿದರೆ ಅದಕ್ಕೆ ಪ್ಲಾಸ್ಟರ್ ಹೇಗೆ ಹಾಕುತ್ತಾರೆ??ಗೂಗಲಿಸಿ ನೋಡುವಾ??

:-)


.

October 3, 2013

ಕೊಬ್ಬರಿ ಬರ್ಫಿ/ ಕೊಬ್ಬರಿ ಮಿಠಾಯಿ/ಸೊಯ್ಯೆ ಖಡಿ

ನಿನ್ನೆ ಗಾಂಧಿ ಜಯಂತಿಯಂದು ಹಾಗೂ ನನ್ನ ಬ್ಲಾಗ್ ಗೆ ಭೇಟಿ ನೀಡಿದವರ ಸಂಖ್ಯೆ 65000 ದಾಟಿದ್ದಕ್ಕೆ ಈ ಸ್ವೀಟ್ ಬ್ಲಾಗ್ ನಲ್ಲಿ  ಹಾಕುವಾ ಅಂತ ಇದ್ದೆ."ಸ್ವೀಟ್ ಕೆ ಲಿಯೆ ಕೊಯೀ ಭಿ ಬಹಾನಾ ಚಲೇಗಾ"  ಆದರೆ ಬೆಳಿಗ್ಗೆ ಮನೆಯಿಂದ ಹೊರಟಿದ್ದು ಬಂದಾಗ ರಾತ್ರಿ 10.00 ಗಂಟೆ ಆಗಿತ್ತು. ಬೆಳಿಗ್ಗೆ ನಾವು ಸರ್ಜಾಪುರ ರಸ್ತೆಯಲ್ಲಿರುವ ಭೂಮಿ ಸ್ಕೂಲ್ ಗೆ ಹೋಗಿದ್ವಿ. ಅಲ್ಲಿ ಆಯೋಜಿಸಲಾದ ಭೂಮಿ ಉತ್ಸವ ತುಂಬಾ ಚೆನ್ನಾಗಿತ್ತು. 300 ಹೆಚ್ಚು ಜನರು ಅಲ್ಲಿದ್ದರು. ಸಾವಯವ ಮಾದರಿಯಲ್ಲಿ ತಯಾರಿಸಿದ ಬಟ್ಟೆ ಬರೆ, ತಿಂಡಿ-ತಿನಿಸುಗಳು, ಹೂ ತರಕಾರಿಗಳ ಬೀಜ, ಮಳೆನೀರು ಸಂಗ್ರಹಣಾ ಪ್ರಾತ್ಯಕ್ಷಿಕೆ, ಗಾಂಧಿ ಜಯಂತಿ  ಪ್ರಯುಕ್ತ  ಖಾದಿ ಬಟ್ಟೆ/ಸಿದ್ದ ಉಡುಪುಗಳ ವೀಕ್ಷಣೆ ಮತ್ತು ಮಾರಾಟ, ಜಾನಪದ ಗೀತೆ, ಕುಂಬಾರಿಕೆ, ಪುಟ್ಟ ಮಕ್ಕಳಿಗೆ ಬಣ್ಣದ ಆಟ, ಬಿದಿರಿನ ವಾದ್ಯಗಳ orchestra. ಸಮಯ ಹೇಗೆ ಸರಿಯಿತು ಗೊತ್ತಾಗಲಿಲ್ಲ.
ಸಂಜೆ , ದು. ಸರಸ್ವತಿಯಯವರ ಆಹ್ವಾನದ ಮೇರೆಗೆ ಅವರ ನಾಟಕ 'ಮೆಕ್ಕಾ ದಾರಿ' ಯ ವೀಕ್ಷಣೆ. ಅದಕ್ಕಿಂತ ಮೊದಲು ದೇಸಿ ಕೊಡಮಾಡುವ ಕೈಮಗ್ಗ ಪ್ರಶಸ್ತಿ ಪ್ರಧಾನ ಸಮಾರಂಭ ಹೊಮ್ಮಿಕೊಂಡಿದ್ದರು. ಸಮಾರಂಭದ ಬ್ಯಾನರ್ ನನಗಿಷ್ಟ ವಾಗಿ ಅದರ ಒಂದು ಚಿತ್ರ ನಿಮಗಾಗಿ.ಚಾಪೆ ಯಿಂದ ಮಾಡಿದ ಬ್ಯಾನರ್. ದೇಸಿ ಸಂಸ್ಥೆಯ ಪ್ರಸನ್ನ ಅವರು ಭಾವಾನುವಾದ ಮಾಡಿದ ಕತೆ 'ಮೆಕ್ಕಾ ದಾರಿ'

ಗಾಂಧಿ ಜಯಂತಿ special doodles by Malavika and Niharika

ಈಗ ಕೊಬ್ಬರಿ ಮಿಠಾಯಿ ಮಾಡುವ ಬಗ್ಗೆ. ತುಂಬ ಸುಲಭದಲ್ಲಿ ಮಕ್ಕಳೂ ಕೂಡ ಇದನ್ನು ತಯಾರು ಮಾಡಬಹುದು. ಕೊಬ್ಬರಿ ತುರಿ ಅದರ ಸರಿಸಮಾನ ಅಳತೆಯ ಸಕ್ಕರೆ, ಅಂದರೆ ಒಂದು ಕಪ್ ಕಾಯಿ ತುರಿ ಗೆ ಒಂದು ಕಪ್ ಸಕ್ಕರೆಯ ಲೆಕ್ಕ, 8-10 ಗೇರುಬೀಜ. ಇವನ್ನು ಮಿಕ್ಸಿಯಲ್ಲಿ ಹಾಕಿ ತರಿತರಿಯಾಗಿ ರುಬ್ಬಿ.ಈ ಮಿಶ್ರಣವನ್ನು ದಪ್ಪ ತಳದ ಪಾತ್ರೆಯಲ್ಲಿ ಹಾಕಿ ಒಲೆ ಮೇಲಿಡಿ. ಮೊದಲಿಗೆ ಮಿಶ್ರಣ ಮೆಲ್ಟ್ ಆಗುತ್ತೆ, ಸ್ವಲ್ಪ ಹೊತ್ತಿನಲ್ಲಿ ಗಟ್ಟಿಯಾಗುತ್ತ ತಳ ಬಿಡುತ್ತ ಹೋಗುತ್ತೆ. ಆಗ ಏಲಕ್ಕಿ ಪುಡಿ ಬೆರೆಸಿ ತುಪ್ಪ ಹಚ್ಚಿದ ತಾಟಿಗೆ ಕೂಡಲೆ ಹಾಕಿ ಸುಟ್ಟುಗದಿಂದ ಸಮತಟ್ಟಾಗಿ ಹರಡಿ. ಸ್ವಲ್ಪ ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರಕ್ಕೆ ಕಟ್ ಮಾಡಿಡಿ. 


ಗೀತಾ ಶೆಣೈ ಸಂಪಾದಕತ್ವದಲ್ಲಿ ಹೊರ ತಂದ 'ಆಧುನಿಕ ಕೊಂಕಣಿ ಕತೆಗಳು' ಕೆಲವು ತುಂಬಾ ಚೆನ್ನಾಗಿವೆ.


ನನಗಿಷ್ಟವಾದ ಕೆಲ food related ಎಸ್ ಎಮ್ ಎಸ್ ಗಳು:
1  in life so many incidents cud happen dat wud make you weak. Bt, still thr r 3 things that make U stronger
Breakfast, Lunch and Dinner
No sentiments da!!Just facts
(by Ranjith Sathyaraj)

2  Cup ko honton sey lagakar thoda sa pee lena, cheeni kam hai iss coffee mein Zaykaa zaraa badaa dena: (wah 'Saahil' ji kya baat hai!!!)

ಸುಮ್ನೆ ಒಂದು potpourri post
:-)

October 1, 2013

ಕವನಗಳು ನೆವನಗಳು

ಮೊನ್ನೆ ನನ್ನ ಕಿರಿಯ ಮಿತ್ರರೊಬ್ಬರು ಮೈಲ್ ನಲ್ಲಿ ಕಳುಹಿಸಿದ ಪದ್ಯವನ್ನು ಓದುತ್ತಿರಬೇಕಾದ್ರೆ, ಇನ್ನೋರ್ವ ಮಿತ್ರರು ಫೋನ್ ಮಾಡಿದರು. ಅವರು ನನಗೆ ಕವನಗಳನ್ನು ಓದಿ ಹೇಳಿದರು. ಅವರು ಫೋನ್ ಇಟ್ಟ ಮೇಲೆ ಅನ್ನಿಸ್ತು ಛೆ! ಅವರು ಕವನ ಓದುತ್ತಿರುವಾಗ ಮಧ್ಯ ಮಧ್ಯ ನಾನು ಎಷ್ಟು ಮಾತಾಡ್ತೀನಿ ಅಂತ. ಯಾಕೋ ಇತ್ತೀಚಿಗೆ ತುಂಬ ಜನ ಕವನಗಳನ್ನು ಕಳಿಸೋರು. ಒಬ್ಬಮಹಾನುಭಾವರಂತು ಒಂದು ಹೆಜ್ಜೆ ಮುಂದೆ, ಯಾರಯಾರದ್ದೋ ಕವನಗಳನ್ನು copy paste ಮಾಡಿ ಕಳಿಸ್ತಾರೆ ಆದರೆ ಬರೆದವರ ಹೆಸರು ಹಾಕಲ್ಲ. ಅವರಿಗೆ ಹೇಳಿ ಹೇಳಿ ಸಾಕಾಯ್ತು 'credit should go to the writer/poet please mention his name' ಅಂತ. ನನ್ನ ಬೆಸ್ಟ್ ಫ್ರೆಂಡ್ ಒಬ್ಬರ ಕವನ ಅಂತ ಹೇಳಿ ಅವರು ಈಗಲೂ ಕವನಗಳನ್ನು ಹೆಸರಿಲ್ಲದೇ ಕಳುಹಿಸುತ್ತಿದ್ದಾರೆ. ಈಗ ನಾನು ಪ್ರತಿಕ್ರಯಿಸಲು ಹೋಗಲ್ಲ.

ಮೊದಲೆಲ್ಲ rhyming ಇದ್ರೆ ಮಾತ್ರ ಕವನ ಅಂದುಕೊಂಡಿದ್ದೆ.  ಈಗಂತೂ ಗದ್ಯವನ್ನು ಒಂದರಕೆಳಗೆ ಒಂದು ಸಾಲಾಗಿ ಬರೆದರೆ ಅದೇ ಪದ್ಯ. ಕೆಲವು ಪದ್ಯ/ಕವನಗಳ ತಲೆ ಬುಡ ಅರ್ಥ ಆಗಲ್ಲ. ಆಗ ನಾನು very interesting ಅಂತ ಅವರ ಇ ಮೈಲ್ ಗಳಿಗೆ ಉತ್ತರ ಕಳಿಸಿಬಿಡುವುದು. ಬಹುಶ: ಈ ಪೋಸ್ಟ್ ಓದಿದ ಮೇಲೆ ಕೆಲವರು ಕವನಗಳನ್ನು ಕಳುಹಿಸಲಿಕ್ಕೆ ಇಲ್ಲ ಅನ್ನಿಸುತ್ತೆ.

ನಾನು ಒಂದು ಕೈ ನೋಡಿಯೇ ಬಿಡ್ತೀನಿ ಅಂತ ಈ ಕೆಲವು ಕೀಟಲೆ ಗದ್ಯದಂತಾ ಪದ್ಯ ಬರೆದಿದ್ದೇನೆ.. ನಿಹಾ ಓದಿ ನಗ್ತಾ ಇದ್ದಳು. ಈಗ ನೀವು ಓದಿ.

ಎಚ್ಚರಿಕೆ: ಓದಿ ಮೈ ಮೇಲಿನ್ ಸ್ಥಿಮಿತ ಕಳೆದುಕೊಳ್ಳುವ ಸಾಧ್ಯತೆಯಿರುವುದರಿಂದ ದಯವಿಟ್ಟು ಕಂಪ್ಯೂಟರ್ ಸ್ಕ್ರೀನ್ ಬಳಿ ಯಾವುದೇ ಗಟ್ಟಿ ಸಾಮಾನನ್ನು ಇಡಬೇಡಿ. ಸಿಟ್ಟಿನಿಂದ ಸ್ಕ್ರೀನ್ ಗೆ ಬೀಸಿ ಒಗೆದು ಗ್ಲಾಸ್ ಚಿಂದಿ ಚೂರಾದರೆ ನಾನು ಜವಾಬ್ದಾರಳಲ್ಲಾ:

........೧...............
ಅದೇ ದಾರಿ, ಮರ ಆಕಾಶ
ನಿನ್ನ ಪರಿಚಯ ಆದ ಮೇಲೆ
ಈಗ ಮರಗಳಲ್ಲಿ ಹೂ, ಅದರ ಬಣ್ಣ, ಅದಕ್ಕೆ ತುಂಬಿರುವ ದುಂಬಿ
ದಾರಿಯೊಳಗಣ ಕಲ್ಲು ಮುಳ್ಳು ಸೂಕ್ಷ್ಮ ಜೀವ- ಜಂತುಗಳು
ಸೂರ್ಯೋದಯ, ಸೂರ್ಯಾಸ್ಥ, ಮಳೆಗೆ ತೊಯ್ದ ದಾರಿ ಮಣ್ಣು 
ಎಲ್ಲ ಸ್ಪುಟವಾಗಿ ಗೋಚರಿಸುತ್ತಿವೆಯಲ್ಲ
ಥ್ಯಾಂಕ್ಸ್ ಕಣೊ
ಆ ಕಣ್ಣಿನ ವೈದ್ಯರನ್ನು suggest ಮಾಡಿದ್ದಕ್ಕೆ

..........೨...................
ಮರುಭೂಮಿಯಂತೆ ಇದ್ದ ನನ್ನ ಜೀವನದಲ್ಲಿ
ಧುಮ್ಮಿಕ್ಕುವ ಜಲಧಾರೆಯಂತೆ ನೀನು ಬಂದೆ 
ಈಗ ನೀನು ನನ್ನ ಬಿಟ್ಟು ಹೊರಟಿರುವಿ
ನಾ ಏನೂ ನಿನ್ನ
ಬಿಟ್ಟು ಹೋಗಬೇಡ ನನ್ನ
ಹೇಳುತ್ತೇನೆ ಅಂತ ಭ್ರಮೆಯಲ್ಲಿರಬೇಡ
ನಾಳೆ ಬಾವಿ ತೋಡಿಸುವವಳಿದ್ದೇನೆ

..............೩................
ನಿನ್ನ ಬಿಸಿ ಉಸಿರು ಸೋಕಿ
ನನ್ನ ದಿನ ರಾತ್ರಿಗಳು ಪರಿಮಳಯುಕ್ತವಾಗಿವೆ
ನಿನ್ನ ನವಿರಾದ ಉಸಿರು ತಾಕಿ
ನನ್ನ ಕಾಲಕೆಳಗಿಂದ ಭುವಿ ಜಾರುತ್ತಿದೆ
ನಿನ್ನ ಟೂಥ್ ಪೇಸ್ಟ್ ಯಾವುದು ಚಿನ್ನಾ??
ನನ್ನ ಹೆಂಡತಿಗೂ ಅದನ್ನೆ ತರ್ತೀನಿ

............೪..................
ಇದು ಸ್ವಲ್ಪ ಸೀರಿಯಸ್ ಆಗಿದೆ) :-)
kaise bayaan kare hum per kya gujarti hai..aapka najm padhke
saas lete rehte hai per marne ka ehsaas  hota hai

(ಇಲ್ಲಿಗೆ ನನ್ನ ಕವನಗಳ ಪ್ರವರ ಮುಕ್ತಾಯವಾಯಿತು)

ಹಿಂದೆ ಒಂದೆರಡು ಬಾರಿ ಕವನ ಬರೆಯಲು ಪ್ರಯತ್ನಿಸಿದ್ದೇನೆ. ಅದರ ಕೊಂಡಿ ನನ್ನ ಹೊಸ ಓದುಗರಿಗೆ

1. ಹೂವಿನ ಅಭಿಲಾಷೆ

 2. ಅನನ್ಯಳಿಗೆ ಪ್ರೀಯಿಂದ

 3. ಗೀಚಿದ್ದು ಸುಮ್ಮ ಸುಮ್ಮನೆ 
**********************************************************************************************************************************
ಇದು ನಿಹಾರಿಕಾ ಬರೆದ ಕವನ (ನಮ್ಮ ಕಣ್ಣಿನ ಡಾಕ್ಟರ್ ಒಬ್ಬರಿಗೆ ಡಾಕ್ಟರ್ ಆಗಲಿಕ್ಕೆ ಇಷ್ಟ ಇರಲಿಲ್ಲ ಅಂತ ಅವರ ಕತೆ ಎಲ್ಲ ನಮ್ಮ ಶೇರ್ ಮಾಡಿಕೊಂಡಿದ್ರು. ಅದನ್ನು ಕೇಳಿ ನಿಹಾ ಹೀಗೆ ಬರೆದಿದ್ದಾಳೆ.)
Ah,what can I say,
Of my ordeals
My fate was sealed right the day,
I was born.

Never asking what I wanted to be,
Father dumped all his dreams and hopes on me
Not knowing that I didn’t want the power and prestige
That he so craved and lusted for.

I tried to be bold,really,I tried to speak,
However,all that emerged was a measly squeak!
Ah !what can I say,
My fate was sealed,right that day.

Got a seat with lady luck smiling
Slogging all day,no music no leisure
With teachers adding to good measure
“study,study and study,
Your book is your only buddy”
Goodness!how  had I fallen to such a rut,
With no time even to scratch my butt?

To cut a long story short,I’m finally a doctor
My parents say they’re proud
They proclaim it clear and loud
In front of guests,relatives and
   Even complete strangers,
That their son has finally become a doctor.

A lesson be learnt,my friend
To never succumb to your parents’ wishes,
If they are against your own
Lest you rot in a clinic like me
being someone,u don’t really want to be.
Trying to hide your frown
And replace it with an ingratiating smile
Because,after all,it is my job
To cure the weak and the terminally ill!
:-)