ನನಗೆ ಮದುವೆ ಮಾಡಿ ಕೊಡುವ ಮನೆಯಲ್ಲಿ ಗೌರಿ-ಗಣಪತಿ ಆಚರಣೆಯಲ್ಲಿದೆ ಎಂದು ಅಮ್ಮನಿಗೆ ಸಂಭ್ರಮ....ನನಗೆ ಅದರಲ್ಲೆಲ್ಲ ಆಸಕ್ತಿನೆ ಇರಲಿಲ್ಲ. ಮನೆಯಲ್ಲಿ ದೀವಾನ್ ಮತ್ತು ಗೋಡೆ ಎಡೆಯಡಿಯ ಸಂಧಿ ನನ್ನ ಅರಮನೆ...ಅಲ್ಲೇ ನನ್ನ ಪುಸ್ತಕದ ಓದು, ಮೈಕ್ರೋ biologist ಆಗುವ ಕನಸು ಇಷ್ಟರಲ್ಲೇ ನನ್ನ ಖುಷಿ.
ಆದರೆ ತೀರ್ಥಹಳ್ಳಿಯಲ್ಲಿ ಚೌತಿಯ ಮುನ್ನಾ ದಿನದಿಂದಲೇ ಒಂದ್ರಾಶಿ ಕೆಲಸಗಳು. ಗೌರಿ ಪೂಜೆಗೆ ತೆಂಗಿನ ಕಾಯಿ ಒಪ್ಪ ಮಾಡಿ ಪೂಜೆಗೆ ಸಿಂಗರಿಸುವುದು...ರಾತ್ರಿ ಎಲ್ಲಾ ಅಂದ್ರೆ ಎಲ್ಲಾ ಪಾತ್ರೆಗಳನ್ನು ತೊಳೆದು ಹಾಕುವುದು. ಇತ್ತ ಕೂರುವುದು ಇಲ್ಲ, ಪೂರ್ತಾ ನಿಲ್ಲುವುದು ಇಲ್ಲ..ಆ ತರಹ ಬಗ್ಗಿ ದೊಡ್ಡ ಪಾತ್ರೆಗಳನ್ನು ತೊಳೆದು ಹಾಕುವುದು...ಅದರಲ್ಲೂ ಮಳೆ ಸಿಡಿಯುವ ಜಾಗ..ನಾಲ್ಕಂಕಣದ ಮನೆ....ಬಟ್ಟೆ ಎಲ್ಲ ತೊಯ್ದು ಹೋಗಿ...ಒದ್ದೆ ಬಟ್ಟೆಯಲ್ಲೇ ಮಲಗ್ತಿದ್ದೆ...ನನ್ನ ಬಳಿ ಇದ್ದುದ್ದೆ ನಾಲ್ಕು ಸೀರೆ..ಎರಡು ಮನೆಯಲ್ಲಿ ಉಡುವಂತದ್ದು. ಅಪ್ಪ ಕಷ್ಟ ಪಟ್ಟು ನನ್ನ ಮದುವೆ ಮಾಡಿಸಿದರು. ತುಂಬಾ ಹಣಕಾಸಿನ ತೊಂದರೆ ಇತ್ತು.
ಒಂದು ದಿನ ತಮ್ಮ ನನಗೆ ಪತ್ರ ಬರೆದಿದ್ದ..ನಿನ್ನ ಮದುವೆಯಾದ ಮೇಲೆ ಇಲ್ಲಿ ನಾವು ದಿನಾ ಗಂಜಿ ಮತ್ತು ಹುರಿದ ಹಪ್ಪಳ ತಿನ್ನೋದು ಅಂತ....ನಾನು ಎಷ್ಟು ಅಪ್ಸೆಟ್ ಆದೇ ಅಂದ್ರೆ ತಿನ್ನೋದೆ ಬಿಟ್ಟು ಬಿಟ್ಟು ಮೊದಲೇ ಕೋಲಿ ನಂತಿದ್ದವಳು ಕಡ್ಡಿಯಂತಾದೆ...ಎಷ್ಟೆಂದರೆ ಮದುವೆಯ ನಂತರದ ಮೊದಲ ಯುಗಾದಿಗೆ ಹೋದಾಗ ನನ್ನ ತಂಗಿ ನನ್ನನ್ನು ನೋಡಿ ಬಾತ್ಬ್ರೂಮ್ ಗೆ ಹೋಗಿ ಅತ್ತು ಬಿಟ್ಟಳಂತೆ...ಆಮೇಲೆ ತಮ್ಮ ತಮಾಷೆಗೆ ಹಾಗೆ ಬರೆದದ್ಫು ಅಂತ ಗೊತ್ತಾಯ್ತು...🤔😧 (ಆವಾಗ ಫೋನ್ ಎಲ್ಲ ಇರಲಿಲ್ಲ.. ಅವನಿಗೆ ಅವನ ತಮಾಷೆ ಮರೆತು ಹೋಗಿತ್ತು.
ಸರಿ ಸ್ವಲ್ಪ track change ಆಯ್ತು 😁.
ಸಧ್ಯ ಹುಷಾರು ತಪ್ಪಲಿಲ್ಲ. ಆದರೆ ವಯಸ್ದು ಆಗ್ತಿದ್ದ ಹಾಗೆ ಸೊಂಟ ನೋವು ಶುರು ಆಯ್ತು. ದೂರದ ಊರಿನಿಂದ ಎರಡು ಬಸ್ change ಮಾಡಿ, ಮಕ್ಕಳಿಬ್ಬರನ್ನೂ ಕರೆದು ಕೊಂಡು, ಅಲ್ಲಿ ತಲುಪುವಷ್ಟರಲ್ಲಿ ಹೈರಾಣಾಗ್ತಿದ್ದೆ. ನನ್ನ ಅಕ್ಕನಿಗೂ ನನಗೂ 20 ವರ್ಷದ ಅಂತರ. ಅವರಿಗೆಷ್ಟು ಸುಸ್ತಾಗಿತ್ತೋ ಪಾಪ...ಗೌರಿ ಗಣೇಶ ಎರಡನ್ನೂ ಗಣೇಶ ಚತುರ್ಥಿ ದಿನ ಆಚರಿಸುವ ಪರಿಪಾಠ.. ಆದ್ದರಿಂದ ಇನ್ನಷ್ಟು ಕೆಲಸಗಳು ಜಾಸ್ತಿ...
















