October 27, 2017

ಗದ್ದೆ ನೆಟ್ಟಿ /ನೇಜಿ ಪ್ರವಾಸ

ಬೆಳಗಾವಿಗೆ ಹೋಗಿ ಬಂದಿದ್ದಷ್ಟೇ. ಶ್ರೀಕಾಂತ ಊರಿಗೆ (ಹರಳಿಮಠ - ತೀರ್ಥಹಳ್ಳಿ ) ಹೋಗುವ ಕೃಷ್ಣ ಗದ್ದೆನೆಟ್ಟಿ   ಇದೆಯಂತೆ. ಈಗಾಗಲೇ ಮೂರು ಸಲ ಹೇಳಿ ಕೊನೆ ಗಳಿಗೆಯಲ್ಲಿ ಪ್ರವಾಸ ರದ್ದು ಆಗಿದ್ದರಿಂದ ನಾನೇನು  ಉತ್ತರಿಸಲು ಹೋಗಲಿಲ್ಲ .  ಪರ ಊರಿನಿಂದ ಆಗಷ್ಟೇ ಬಂದ ನಿಹಾ ಗೂ ಹೇಳ್ತಾ ಇದ್ದರು. ಈಸಲ  ದೆಹಲಿಯ ಫ್ರೆಂಡ್ ಅನಂತಜೀತ್ ಕೌರ್  ಬೆಂಗಳೂರಿಗೆ ಬಂದಿದ್ದಳು. ಹೊ ಅವಳನ್ನು ಕರೆದು ಕೊಂಡು ಹೋಗ ಬಹುದು. ಆದರೆ ಈಗಲೇ ಹೇಳಬೇಡ.  ರದ್ದಾಗುವುದೇ ಹೆಚ್ಚು ಅಂದದ್ದಕ್ಕೆ , 'ಇಲ್ಲ ಈ ಸಲ ಗ್ಯಾರಂಟಿ .ಆಫಿಸ್   ನವರು ಕೂಡ ಬರುತ್ತಾರೆ. ಬೇಗ ಹೇಳಿ ಗಾಡಿ   ಮಾಡಬೇಕು ಅಂದ್ರು  ಶ್ರೀಕಾಂತ. ನನಗೆ ಇಷ್ಟ  ಇರಲಿಲ್ಲ.  ಆಗಷ್ಟೇ ನಾನು ಊರಿನಿಂದ ಬಂದಿದ್ದೆ , ಬಟ್ಟೆಗಳು  ಇನ್ನು ವಾಷ್ ಆಗಿರಲಿಲ್ಲ. ನಾ ಬರಲ್ಲ ಅಂದೆ. ಶ್ರೀಕಾಂತ ಹಮ್ ಅಂದ್ರು.
ಮರುದಿನ ನಿಹಾ 'ಅಮ್ಮನೀ ಬರಲೇ   ಬೇಕು , ವಾಷ್ ಇಲ್ಲದಿದ್ದರೆ ಅದನ್ನೇ   ಬೇಕಾದ್ರೆ  ಹಾಕ್ಕೋ,ಆದ್ರೆ ನೀನು ಬರ್ಬೇಕು ಅಷ್ಟೇ ಅಂತ ಫರ್ಮಾನು ಹೊರಿಡಿಸಿದಳು. ನಿಹಾ ಹೇಳಿದ ಮೇಲೆ ಮುಗೀತು . i am ready to go the end of this world . :-)   
ಹೊರಡುವ ದಿನ ಬಂತು. ೫ ಗಂಟೆಗೆ ಬರಬೇಕಿದ್ದ  ಬಸ್ ೭. ೩೦  ಬಂತು. ಅಷ್ಟರಲ್ಲಿ ನಮ್ಮ ಏರಿಯಾ ಗೆ ಹತ್ತಿರವಿರುವವರನ್ನು ನಮ ಬಿಲ್ಡಿಂಗ್  ಗೆ ಬರಲು ಹೇಳಿ ಆಗಿತ್ತು, ಅಷ್ಟಾದರೂ  ಸಮಯ ಉಳಿಸ ಲೆಂದು . ಆದರೂ ಬೇರೆ  ಕಡೆಯ ಪಿಕ್ ಅಪ್ ಮಾಡಿ , ತಿಂಡಿ ಮನೆಯಲ್ಲಿ ಬೆಳಗ್ಗಿನ ನಾಷ್ಟಾ ಮುಗಿಸಿ ಬೆಂಗಳೂರು ಬಿಡುವಾಗ ೮. ೪೫. ನಮ್ಮ ಕೆಲವು ಪ್ಲ್ಯಾನ್ ಗಳು ಫ್ಲಾಪ್ ಆಗುವ ಮುನ್ಸೂಚನೆ . ತುಮಕೂರಿನ ಆಫಿಸ್  ಪಿಕ್ ಅಪ್ ಇತ್ತು. ಆದರೆ ಆಫಿಸ್ನವರ ರಿಕ್ವೆಸ್ಟ್   ಮೇರೆಗೆ ನಾವೆಲ್ಲಾಅಲ್ಲಿ  ೧೯ ಜನ  ಕಾಫಿ ಸ್ನ್ಯಾಕ್ಸ್ ತೆಗೆದುಕೊಳ್ಳಲೇಬೇಕಾಯಿತು.
ಮಾರ್ಗ ಮಧ್ಯೆ ಹಣ್ಣು ಗಳ  ಖರೀದಿ ಕೂಡ ಆಯಿತು. ಸ್ವಲ್ಪ ದೂರ ಹೋದ ಮೇಲೆ ನಮ್ಮ ಬಾಯಿಯ  ಫ್ಯಾಕ್ಟರಿ ಶುರು. ಪೇರಳೆ  ಬಾಳೆ ಹಣ್ಣು, ಪಾಪ್ಕಾರ್ನ್ , ಚಾಕಲೇಟು ಇತ್ಯಾದಿ. ಹಿಂಡುಗಡೆಯಿಂದ ಕಿರಿಯರ ಕಲರವ  ಕೇಳಿಸುತ್ತಿತ್ತು. ನಾವು ಹಿರಿಯರು ಎಲ್ಲ   ಮುಂದಿನ ಸೀಟ್ ಮೇಲೆ ಪವಡಿಸಿದ್ದೆವು . :-)
ಮೂರೂ ಜನ ace photographers ಅದಕ್ಕಿಂತ ಜಾಸ್ತಿ advice koDuva creative ಜನಗಳು ಇದ್ದುದರಿಂದ ಫೋಟೋ ತೆಗೆಯುವ ಸ್ಟಾಪ್ ಗಳು. ಸಕ್ರೆಬೈಲ್ ನಲ್ಲಿ  ಸ್ವಲ್ಪ ಸಮಯ ಕಳೆಯುವ ಅಂದಾಜಿತ್ತು. ಆದರೆ ಶಿವಮೊಗ್ಗ  ಬಿಟ್ಟ ಮೇಲೆ ಧಾರಾಕಾರ  ಮಳೆ. ನಮ್ಮಎದುರಿಗಿನ ರಸ್ತೆ ಕಾಣಿಸದಷ್ಟು.
 ಹರಳಿಮಠ ತಲಪುವಾಗ ೭.೪೫.  ಉಭಯ ಕುಶಲೋಪರಿಯ ನಂತರ  ಬಾಳೆಯೆಲೆಯ ಸಿಂಪಲ್ ಆದರೂ ರುಚಿಕರವಾದ  ಊಟ. ಮರುದಿನ ಬೆಳಿಗ್ಗೆ ಬೇಗ ಏಳಬೇಕಿತ್ತರಿಂದ  ಮಲಗಿದೆವು. ಕೆಲವು ಜನ ಶ್ರೀಕಾಂತ   ಕಸಿನ್ ಕೃಷ್ಣನ ಮನೆಯಲ್ಲಿ ಕೆಲವರು ಹತ್ತಿರಲೇ ಇದ್ದ ಲಾಡ್ಜಿಂಗ್ ಗೆ.
ಅನ್ನ ಅಂದರೆ ಪ್ಯಾಕೆಟ್ ಕಟ್  ಮಾಡುವುದು , ಕವರ್ ನ ಗಂಟು ಬಿಚ್ಚುವುದು , ಗೋಣಿ ಚೀಲ ಕಟ್ ಮಾಡಿ ಅಕ್ಕಿ  ಉಪಯೋಗಿಸುವುದು ಮಾತ್ರ ಗೊತ್ತಿದ್ದ ನಮಗೆ ,ಮರುದಿನ  ಅರ್ಧ ದಿನದಲ್ಲೇ  ಅದರ ಹಿಂದಿರುವ ಕಷ್ಟ , ಕೆಲಸ ಗೊತ್ತಾಗಿದ್ದು.
ಬೆಳಿಗ್ಗೆ ಕೋಳಿ/ಹುಂಜ  ಕೂಗಿದಾಗ ಎಚ್ಚರ. ಸಮಯ ನೋಡಿದಾಗ ಇನ್ನು ೨. ೪೫ :-) :-)  . ಒಂದು ಸಲ ಎಚ್ಚರ ಆದಮೇಲೆ ನನಗೆ  ನಿದ್ದೆ ಬರಲ್ಲ . ಫೇಸ್ ಬುಕ್ ನೋಡ್ತಾ  ಬೆಳಕಾಗುವ ತನಕ ಬಿದ್ದುಕೊಂಡೆ. ಆಮೇಲೆ ಹಕ್ಕಿಗಳ   ಕಲರವ,  ಕೃಷ್ಣ ಕಾಫಿ ಮಾಡುವ ಸದ್ದು  ಕೇಳಿಸಿದರಿಂದ ಎದ್ದೆ.  ಮೊದಲು ನಾನು ಟಾಯ್ಲೆಟ್ ಗೆ ಹೋಗಿ  ಬಂದು, ನಿಧಾನವಾಗಿ ಒಬ್ಬೊಬ್ಬರನ್ನೇ ಎಬ್ಬಿಸಿದೆ. ಗದ್ದೆ  ಕೆಸರು ತಾಗುತ್ತದೆಂದು ನಾವ್ಯಾರು ಸ್ನಾನ ಮಾಡಲಿಲ್ಲ. ಕಾಫಿ ಕುಡಿದು ಅಂಗಳದಲ್ಲಿ ಆ ಕಡೆ ಈ ಕಡೆ ನಡೆದಾಡುತ್ತಿದ್ದೆವು. ನಿಹಾಳ ಫ್ರೆ೦ಡ್  ಹಳೆ ಮನೆ ,  ಮಹಡಿ, ನಾಲ್ಕಂಕಣ  ಇವೆಲ್ಲ ಹೊಸದು.  ಅವಳಿಗೆ ಸ್ವಲ್ಪ explain ಮಾಡ್ತಾ   ಇದ್ದೆ.
ಗದ್ದೆಯಲ್ಲಿ ಸ್ವಲ್ಪ ಎಲ್ಲ ತಯ್ಯಾರಿ ಇದೆ. ಬರ್ತೀರಾ ಯಾರಾದ್ರೂ ಟ್ರ್ಯಾಕ್ಟರ್  ಮೇಲೆ ಹೋಗೋದು ಅಂದ್ರು    ಕೃಷ್ಣ. ನಾನು, ಶ್ರೀಕಾಂತ, ಸಾಲಿಮಠ ,ನಿಹಾ, ಮಾಲವಿಕ, ಅನಂತ್ ಜೀತ್ ಹೊರಟ್ವಿ. ಕೃಷ್ಣ ಅವರೇ ಟ್ರ್ಯಾಕ್ಟರ್ ಓಡಿಸಿದ್ದು 

:-) :-) ಪ್ರಯಾಣಕ್ಕೆ ಮುನ್ನ  ಸೆಲ್ಫಿಯತ್ನ 


we were standing stark in the middle of a curving road and i was damn scared of the fast vehicles especially the modified honda bikes :-( hence this pic where i am turned away from the camera PC : Sujay Ramsagar

 love clicking such pics. :-)

creative ಭಾವಜೀವಿ ಮನಸುಗಳು ಅವರದ್ದೇ ಆದ ಲೋಕದಲ್ಲಿ 

ನಮ್ಮ ಆಫಿಸ್ ಸ್ಟಾಫ್ ಜತೆ 
ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೋಗುವ ದಾರಿಯಲ್ಲಿ  ಕೆಲವು ಸುಂದರ
ತಾಣಗಳು 

ಟ್ರ್ಯಾಕ್ಟರ್ ಪ್ರಯಾಣ 
 Salimath taking a shot with camera
 early in the morning
 saplings all bunched up and ready to go
 misty mountain in the background
 Shenoy maam trying his hand at the tiller
 field getting reay for the transplant
 some last minute instructions by Krishna to the field hands
please take a pic for fb :-)


ಕೆಲಸ ಪ್ರಾರಂಭ ಮಾಡುವ ಮುನ್ನ ಕೆಲಸಗಾರರಿಗೆ ಬೆಳಗ್ಗಿನ ನಾಷ್ಟಾ. , ಆಂಬೊಡೆ, ಕೊಟ್ಟೆ ಕಡಬು ,  ಚಟ್ನಿ,ಸಾಂಬಾರ , ಕಾಶಿ ಹಲ್ವಾ. PC Anantjeet Kaur. ಬಿಸಿ ಬಿಸಿ  ಕಾಶಿ ಹಲ್ವಾ ದ ರುಚಿ ಇನ್ನೂ ಬಾಯಲ್ಲಿ ಉಳಿದಿದೆ :-) 


ನೆಟ್ಟಿ ಅಥವಾ ನೇಜಿ ಮಾಡುವ ಮುನ್ನ 

ನರ್ಸರಿಯಿಂದ  ಬತ್ತದ ಸಸಿ ತಂದಿಟ್ಟಿರಬೇಕು 
 ಗದ್ದೆಯಿಂದ ಕಳೆ ಗಳನ್ನು ಕೀಳಿ ಸ್ವಚ್ಛಮಾಡಬೇಕು 
 ಗದ್ದೆಯಲ್ಲಿ ನೀರು ನಿಂತಿರಬೇಕು. 
 ಟಿಲ್ಲರ್ ಹಾಗು ಎತ್ತುಗಳ  ಮೂಲಕ ನಮ್ಮ ಮೊಣಕಾಲು ಹೂತುಹೋಗುವಷ್ಟು ಆಳ ಹೂLu ಹೊಡೀ ಬೇಕು 


ಕೆಲಸ ಪ್ರಾರಂಭವಾಗುವ ಮುಂಚೆ ಕೆಲವು ಪೋಸ್ ಗಳು :-)

   watching their synchronized movements is a delight to the eye


our staff members

Sujay Niha and Anantjeet 

ಕೈ ಕಾಲು ಕೆಸರಾದರೆ ಬಾಯಿ ಮೊಸರು 

ಗದ್ದೆಯಿಂದ ಗದ್ದೆಗೆ  ಸಾಗುತ್ತಾ 

expert experienced hands. ಕೈ ಜತೆ ಬಾಯಿ ಕೂಡ ಚುರುಕಾಗಿ   ಕೆಲಸ ಮಾಡ್ತಿದ್ವು :-)
ಮಮತಾ ಮತ್ತು ಭಾರತಿ 

ಗೋವಿಂದರಾಜನ್ ಸರ್ 

 ದಾರಿಹೋಕರಿಗೆ,ಕೃಷ್ಣ ಅವರ  ಪರಿಚಿತರೆಲ್ಲರಿಗೂ ಅಚ್ಚರಿ .ನಾ ಕೇಳಿದ ಕೆಲ ಸಂಭಾಷಣೆಗಳು 

೧.  ಸಾವುಕಾರರು ಇಲ್ಲಿ ಗದ್ದೆ ಕೆಲಸಕ್ಕೆ ಜನ ಸಿಗಲ್ಲ ಅಂತ ಬೆಂಗಳೂರಿನಿಂದ ಕರೆಸಿಕೊಂಡಿರಾ ಹೇಗೆ?

೨. ಕೊಪ್ಪ ತೀರ್ಥಹಳ್ಳಿ ಬಸ್ ನಿಲ್ಲಿಸಿ: ಹ್ವಾಯ್ , ಬೇರೆ ಊರಿನಿಂದ ಬಂದಿದ್ದಾರೆ ಕಾಂತೆ. ಇಲ್ಲಿ ಜನರು  ಕೆಲಸ ಮಾಡಲ್ಲಲ್ಲ್ವಾ? ಇರಲಿ  ಏನೋ ಉಮ್ಮೇದು ಒಂದು ದಿನ ಮಾಡ್ತಾರೆ ಹೋಗ್ತಾರೆ. 

ನಾನು ಫೇಸ್ ಬುಕ್  ನಲ್ಲಿ ಈ ಚಿತ್ರಗಳನ್ನು ಶೇರ್ ಮಾಡಿದ್ದಾಗ ತೀರ್ಥಹಳ್ಳಿಯವರೇ ಆದ ನಿಲೇಶ ಜವಳಿ ' ಮುಂದಿನ ವಾರ ನಮ್ಮ ಗದ್ದೆಯಲ್ಲಿ ನೆಟ್ಟಿ , ಬರ್ತೀರಾ ' ಅಂತ ಕಾಮೆ೦ಟ ಮಾಡಿದ್ದರು :-)

ತೀರ್ಥಹಳ್ಳಿಯ ಉದಯೋನ್ಮುಖ ಬರಹಗಾರರು ಶ್ರೀ ನೆಂಪೆ ದೇವರಾಜ್ . ಇವರ ಬರಹದ ನಿಮಿತ್ತ  ಕೃಷ್ಣ ಅವರಿಗೆ ಅತ್ಯ್ತುತ್ತಮ ರೈತ ಪ್ರಶಸ್ತಿ ಸಿಕ್ಕಿತು. ಬತ್ತ ಬೆಳೆಯುವವರು ಈಗ ಕಡಿಮೆಯಾಗಿದ್ದಾರೆ. ಕೆಲಸಕ್ಕೆ ಜನ ಸಿಗಲ್ಲ ಅಂತ ನೆವ. ಎಲ್ಲರೂ ಬತ್ತದ ಗದ್ದೆಯನ್ನು ಈಗ ಅಡಿಕೆ ತೋಟ  ಮಾಡಿ ಆರಾಮ್ ಆಗಿದ್ದಾರೆ. ಹೀಗೆ ನಡೆದರೆ ಮುಂದೆ ಬತ್ತ  ಅಥವಾ ಅಕ್ಕಿಯನ್ನು ನಾವು ಮ್ಯೂಸಿಯಂ  ನಲ್ಲಿ ಕಾಣಬೇಕಾದೀತು' ಎನ್ನುವುದು ಅವರ ಕಳಕಳಿ . ಕೃಷ್ಣ ಅವರಿಗೆ ಈ ಪ್ರಶಸ್ತಿ ಗಿಶಸ್ತಿಯಲ್ಲಿ ಇಂಟರೆಸ್ಟ್ ಇಲ್ಲ. ಅವರ ಕೆಲಸ ಅವರು ನಿಷ್ಠೆಯಿಂದ ಮಾಡಿಕೊಂಡು ಹೋಗುತ್ತಿದ್ದಾರೆ. ಅವರ ತೋಟ ನೋಡಿದರೆ ಗೊತ್ತಾಗುತ್ತದೆ. ಅವರ ಪ್ರೀತಿ ಕಾಳಜಿಯಿಂದ ಅವು ನಳನಳಿಸುತ್ತಿವೆ. ಅವರ ಒಂದು ಮಾತು  ಹೇಳುತ್ತಾರೆ ಯಾವಾಗಲೂ ಶ್ರೀಕಾಂತ ಗೆ 'ನನ್ನ ಕೈಯಲ್ಲಿ ಆಗುವಷ್ಟು ದಿನ ನಾನು ನೋಡಿಕೊಳ್ಳುತ್ತೇನೆ, ಮುಂದೆ ಇವನ್ನೆಲ್ಲಾ ಯಾರು ನೋಡಿಕೊಂಡು  ಹೋಗುತ್ತಾರೆ ಅಂತ ನಾನಂತು ಯೋಚಿಸಲ್ಲ' ಅಂತ 



ಮಧ್ಯಾಹ್ನ ಊಟಕ್ಕೆ ದಪ್ಪಕ್ಕಿ  ,ಸಾಂಬಾರ್ ,   ಉಪ್ಪಿನಕಾಯಿ , ಹಪ್ಪಳ ಮತ್ತು ಕೊಂಕಣಿ ಸ್ಪೆಷಲ್ ಅಡುಗೆ ' ವಾಗು' ದೆಹಲಿಯ  ಅನನ್ತಜೀತ್ ಗೆ ಇದು ತುಂಬಾ ಇಷ್ಟವಾಗಿ ಎರಡೆರಡು ಸಲ   ಹಾಕಿಸಿಕೊಂಡು ತಿಂದ್ಲು :-)  ಜಹಾಂಗೀರ್ ಸ್ವೀಟು 
 seetaram shetty and Krishna Kumar on the right. we had to request/force him for a picture

ಸಂಜೆ ಕಂಬಳಿ ಕುಪ್ಪೆ , ಮುಟ್ಟಾಳೆ ಟೊಪ್ಪಿ ಹಾಕಿಕೊಂಡು ಕೆಲವು ಫೋಟೋಗಳು 
 ನನ್ನ ಇಷ್ಟದ ಫೋಟೋ Vivekanand and Shobha Salimath
 ಬೆಲ್ಬೆಳಗ್ಗೆ ಹಲ್ಲು   ಉಜ್ಜಿ ಗದ್ದೆಗೆ ಹಾಜರಾಗಿದ್ದು ಹೀಗೆ. ಬ್ಲಾಕ್ ಕ್ಯಾಟ್ ಅಂತ ಫೋಟೋ   ತೆಗೆದಿದ್ದು ಮಲ್ಲಿಕಾರ್ಜುನ  ಹೊಸಪಾಳ್ಯ Me with mamatha and Prema 
sujay in kamblikuppe 

ಮತ್ತೆ ನನ್ನ ಕೆಲಸ ಫೋಟೋ ತೆಗೆದು FaceBook ಗೆ ಅಪ್ಲೋಡ್ ಮಾಡೋದು, ಪಟ್ಟಾಗಿ ಊಟ   ಮಾಡಿದ್ದು ಅಷ್ಟೇ. 
ಎಲ್ಲರಿಗೂ ಖುಷಿ ಆಗಿದ್ದು ಗದ್ದೆ ಕೆಲಸದವರಿಂದ ಶಹಭಾಸ್ಗಿರಿ ' ಅಡ್ಡಿಯಿಲ್ಲ ಪೇಟೆ ಜನ ಚೆನ್ನಾಗಿ ಕೆಲಸ ಮಾಡಿದ್ದೀರಾ ' ಅಂದಾಗ
ನಡುಬಗ್ಗಿ ಕೆಲಸ ಮಾಡಿದವರಿಗೆ ನೆಕ್ಸ್ಟ್ ದಿನ ಕೈ ಕಾಲು  ಸೆಳಕು ನೋವು ..ಮಧುರ ಯಾತನೆ( word c/o Jayanth Kaikini) :-) :-)
ಮುಂದಿನ ತಿಂಗಳು ಬತ್ತದ ಕೊಯ್ಲು. ಯಾರೆಲ್ಲ  ಬರ್ತೀರಿ ಬೇಗ   ಕಾಮೆ೦ಟ ನಲ್ಲಿ ತಿಳಿಸಿ.  ಗಾಡಿ, ಉಳಿದುಕೊಳ್ಳುವ ವ್ಯವಸ್ಥೆ  ಎಲ್ಲ ಮಾಡಬೇಕು. :-) :-)
ಇದೊಂದು   ಹೊಸ ಬಗೆಯ ಪ್ರವಾಸ. ನಮ್ಮ  ಇನ್ನೂ ಇದರ ಇದರ ಗುಂಗಲ್ಲಿ ಇದ್ದಾರೆ. 

October 18, 2017

ಗಾದೆ ನಿಜಾಕಣ್ರೀ

ಇವತ್ತು ಬೆಳಿಗ್ಗೆ  ಬಾಲ್ಕನಿ ಮೇಲೆ ಕೂತು ಚಹಾ ಕುಡಿತಿದ್ದೆ. ಒಂದು ಹದ್ದು . ಅದರ ಬಾಯಲ್ಲಿ ಅರೆ ಜೀವವಾಗಿ , ಕರುಳು ಹೊರಗೆ ನೇತಾಡುತ್ತಿದ್ದರೂ ಮರಿ ಅಳಿಲು  ಚೀ೦sssವ್ ಚೀ೦ssವ್ ಅನ್ನುತಿತ್ತು. ಈ ಹದ್ದನ್ನು ಅಟ್ಟಿಸಿಕೊಂಡು ಇನ್ನೊಂದು  ಹದ್ದು. ಅವರ ಜಗಳಕ್ಕೆ ಬಾಯಲ್ಲಿದ್ದ ಬೇಟೆ ತಪ್ಪಿ ತೊಪ್ಪೆಂದು ಪೆಟ್ರೋಲ್ ಪಂಪ್ ನ ಶೀಟ್ ಮಾಡಿನ ಮೇಲೆ ಬಿತ್ತು . ಅದೆಲ್ಲಿ ಹೊಂಚುಹಾಕುತ್ತಿದವೋ ಕಾಗೆಗಳು , ಬೇಟೆಯ ಮೇಲೆ ಎರಗಿ ಎರಡೇ ಕ್ಷಣದಲ್ಲಿ  ಅಳಿಲಿನ ಕಳೇಬರ ಮಾಯ. 

ಇಬ್ಬರ ಜಗಳ ಮೂರನೆಯವರಿಗೆ ಲಾಭ ..ಅಲ್ವಾ??ಗಾದೆ ಮಾತು ನಿಜ ಆಗಿದ್ದನ್ನು ನೋಡಿದೆ. 

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

ಹಾಗೆಯೇ ಕಿರಿಯ ಮಿತ್ರ ಸ್ವಪ್ನೀಲ್  ಪ್ರಭು ಒಂದು ಅತ್ಯುತ್ತಮ ಫುಡ್ ಬ್ಲಾಗ್ ಪ್ರಾರಂಭ ಮಾಡಿದ್ದಾರೆ.
ಇಲ್ಲಿದೆ ಅದರಕೊಂಡಿ. 

The Missing Drumstick

October 12, 2017

ಗದ್ದೆ ನೆಟ್ಟಿ ಪ್ರವಾಸ

ಇವತ್ತಿನ ಪ್ರಜಾವಾಣಿ -ಕಾಮನಬಿಲ್ಲು ಪುರವಣಿಯಲ್ಲಿ- ನಾವು ಹಿಂದಿನ ತಿಂಗಳು ತೀರ್ಥಹಳ್ಳಿಗೆ, ನೆಟ್ಟಿ ಪ್ರ್ಯಾತ್ಯಕ್ಷಿಕೆ  ಪ್ರವಾಸ ಹಿಮ್ಮಿಕೊಂಡಿದ್ದೆವು. ನಮ್ಮ ತಂಡದ ಮಲ್ಲಿಕಾರ್ಜುನ ಹೊಸಪಾಳ್ಯ  ಅವರ ಲೇಖನ ಕೆಳಗಿನ ಕೊಂಡಿಯಲ್ಲಿ ಓದಿ.

ಗದ್ದೆ ನೆಟ್ಟಿ ಪ್ರವಾಸ
ಇದರ ಬಗ್ಗೆ ನನ್ನ ಬರಹ ಬ್ಲಾಗ್ ನಲ್ಲಿ ಶೀಘ್ರದಲ್ಲೇ ನಿರೀಕ್ಷಿಸಿ

:-)

October 10, 2017

birds of BTM

There is this tree in udupi garden signal . In the day time it is an ordinary tree standing tall against noise and smoke pollution. But with sundown hundreds of tiny birds emerge out of its hiding place in the trees. They remind me of tiny kids who come out of the school gates at the end of the day. Free from the constraints of the school. These birds make sounds like cheep chinv and swing on the cable that connects two high-rise buildings or rest atop the asbestos sheet covering the petrol bunk. They are ashy prinia. Just love to watch them. To the naked eye they are just chirping tiny birds. But through the binoculars you can make out their long tails and Light yellow underbelly. They are so full of activity.
 my juvenile attempt at capturing them on the ipad

from the net

Sad thing is metro construction is happening and these trees will be cut down. Where will these birds go? I was happy that my flat is surrounded by greenery with all these huge green
 trees. I spot birds like the bhraminy kite- oh so regal in its flight, which roost on the trees behind our swimming pool, hundreds of parrots streaking the morning and evening skies with their green plumage and red beaks creating a din to and fro from their nest, the  brown breasted barbets- that
fly from tree to tree making one think a leaf has flown out of one tree and attached itself to another, :-), occasional green fly catcher, white owls, pigeons- i know most people hate them but i adore them in flight, they have the most beautiful wings, thousands of butterflies,dragon flies, damsel flies etc. Along with the crows mynahs. There is an increase in the number of crows and mynahs this year in this area. This year i have even spotted the black eyed orioles much to my delight

There is this tiny black bird just about the size of butterflies, i have yet to identify. they r too fast for me to concentrate on it.
typed on ipad.