September 30, 2018

ಆಶಾ ಜಾವೋರ್ ಮಾಝೆ - ಬಂಗಾಳಿ ಸಿನಿಮಾ

ಆಶಾ ಜಾವೋರ್  ಮಾಝೆ ( -labour of love) ) ನಾನು ಇತ್ತೀಚಿಗೆ ನೋಡಿದ ಚೆಂದದ ಸಿನಿಮಾ . ಒಂದು ಸುಂದರ ಪದ್ಯದ ಹಾಗಿದೆ. ಇಬ್ಬರ synchronised ನೃತ್ಯದ ಹಾಗೆ. ಕಷ್ಟಪಟ್ಟು ದುಡಿದು ಜೀವಿಸುವ ಗಂಡ ಹೆಂಡತಿ. ಹೆಂಡತಿಗೆ ಬೆಳಿಗ್ಗೆ ಹೋದರೆ ಸಂಜೆ ಮರಳುವ ಕೆಲಸ , ಆತನಿಗೆ ರಾತ್ರಿ ಶಿಫ್ಟ್ . ಅವಳು ಒಂದು ಹೆಂಗಸರ ಕೈಚೀಲ ತಯಾರಿಸುವ ಘಟಕದಲ್ಲಿ ಸೂಪ್ರವೈಸರ್ ಕೆಲಸ ಆದರೆ  ಅವನಿಗೆ ಪ್ರಿಂಟಿಂಗ್ ಪ್ರೆಸ್ ನಲ್ಲಿ.  ಅವಳು ಬೆಳಿಗ್ಗೆ ಎದ್ದು ಅಡಿಗೆ- ಡಬ್ಬಿಗೆ  ತಿಂಡಿ ತಯಾರಿಸಿ ಫ್ರಿಜ್ ನಲ್ಲಿ ಇತ್ತು ಹೋಗುತ್ತಾಳೆ. ಹಾಗೆ ಬಟ್ಟೆ ಒಗೆದು ಬಕೆಟ್ ನಲ್ಲಿ ಇಟ್ಟಿರುತ್ತಾಳೆ. ಅವನು ಬೆಳಿಗ್ಗೆ ಮನೆಗೆ ಬಂಡಿ ಟಿ ಕುಡಿದು ಸ್ನಾನ ಮಾಡಿ ಅವಳು ಒಗೆದ ಬಟ್ಟೆ ಒಣಗಿಸಲು ಹಾಕುತ್ತಾನೆ.( ಬಹುಶ: ಇಬ್ಬರಿಗೂ ದಿನದ ಕೂಲಿ ಕೊಡುತ್ತಾರೆ. ಯಾಕೆಂದರೆ ಯಾಕೆಂದರೆ ಇಬ್ಬರೂ ಮನೆಯ ಕಪಾಟಿನ ಡಬ್ಬಿಯಲ್ಲಿ ದುಡ್ಡು ಹಾಕುತ್ತಾರೆ. ) ನಂತರ ಬ್ಯಾಂಕ್ ಗೆ ಹೋಗಿ ದುಡ್ಡು ಡೆಪಾಸಿಟ್ ಮಾಡುತ್ತಾನೆ. ಹಾಗೆ ಬರುತ್ತಾ ಮೀನು ತಂದು ಫ್ರಿಜ್ ನಲ್ಲಿ ಹಾಕುತ್ತಾನೆ. ಅವಳು ಮಾಡಿಟ್ಟ ಊಟ ಮಾಡಿ ಮಲಗುತ್ತಾನೆ. ಸಂಜೆ ಅವಳು ಮನೆಗೆ ತಲುಪುವಷ್ಟರಲ್ಲಿ ಅವನು ಕೆಲಸಕ್ಕೆ ಹೋಗಿರುತ್ತಾನೆ. ಹೋಗ್ತಾ ಫ್ರಿಜ್ ನಲ್ಲಿಟ್ಟ  ಊಟದ ಡಬ್ಬಿ ತೆಗೆದುಕೊಂಡು ಹೋಗುತ್ತಾನೆ. ಅವಳು ಮನೆಗೆ ಬಂದು ಟಿ ಕುಡಿದು,  ಒಣಗಿದ ಬಟ್ಟೆ ತಂದು ಫೋಲ್ಡ್ ಮಾಡುತ್ತಾಳೆ . ಬಟ್ಟೆಗೆ ಇಸ್ತ್ರಿ ಹಾಕಿ ಊಟ ಮಾಡಿ ಮಲಗುತ್ತಾಳೆ. ಬೆಳಿಗ್ಗೆ ಅವಳು ಬೇಗ ಎದ್ದು ಫ್ರಿಜ್ ನಲ್ಲಿದ್ದ ಮಿನುಗಳನ್ನು ತೆಗೆದು ಹೊರಗಿಡುತ್ತಾಳೆ. ಅಡಿಗೆ -ಚಪ್ಪಾತಿ ಪಲ್ಯ , ಮೀನಿನ ಖಾದ್ಯಮಾಡಿಡುತ್ತಾಳೆ. ಬೆಳಿಗ್ಗೆ ಒಂದು ಗಳಿಗೆ ಇಬ್ಬರ   ಭೇಟಿ. ಅವಳು ಇಬ್ಬರಿಗೂ ಚಹಾ ಮಾಡಿಡುತ್ತಾಳೆ . ಅವಳು ಚಹಾ ಕುಡಿದಾದ ನಂತರ ಅವನು ಬಂದು ಟಿ ಕುಡಿತಾ ಇರುವಾಗಲೇ ಅವಳು ಚಪ್ಪಲಿ ಮೆಟ್ಟಿ ಕೆಳಸಕ್ಕೆ ಹೊರಡುತ್ತಾಳೆ. ಅವಳು ಮನೆಯ ಓಣಿ ದಾಟಿ ಅದ್ರಶ್ಯ  ಆಗುವ ತನಕ ಅವು ಕಿಟಕಿಯಿಂದ ನೋಡುತ್ತಾನೆ. 
ಈ ಸಿನಿಮಾದಲ್ಲಿ ಸಂಭಾಷಣೆ ಇಲ್ಲ. ಇದು ಯಾವುದೇ ಬಾಷೆಯ  ಸಿನಿಮಾ ಆಗಿರ ಬಹುದು ಬೆಂಗಾಲಿ ಶಾಸ್ತ್ರೀಯ ಸಂಗೀತ ಮತ್ತು ಬೆಂಗಾಲಿಯಲ್ಲಿ ಶ್ಲೋಗನ್  ಕೂಗುತ್ತ ಹೋಗುವ ಒಂದು ದೃಶ್ಯ  ಇದ್ದುದ್ದರಿಂದ ಇದು ಬೆಂಗಾಲಿ ಸಿನಿಮಾ  ಅಂತ ಗೊತ್ತಾಗುತ್ತದೆ.  :-)
ನಾನು ಯೂ ಟ್ಯೂಬ್  ನಲ್ಲಿ ನೋಡಿದ್ದು.  ಕಪ್ಪು ಬಿಳಿಪು ಸಿನಿಮಾ ಆಗಿತ್ತು. amazon  ಪ್ರೈಮ್  ನಲ್ಲಿ ಕಲರ್ ಸಿನಿಮಾ  ಸಿಗುತ್ತದೆ. ಯಾರೋ ಅಪ್ಲೋಡ್ ಮಾಡುವಾಗ ಸಿನಿಮಾ ಕಪ್ಪು ಬಿಳುಪಾಯಿತಾ ಗೊತ್ತಿಲ್ಲ, ಆದರೆ ನನಗಂತೂ ತುಂಬಾ ಇಷ್ಟ ಆಯ್ತು. :-)  ಯು ಟ್ಯೂಬ್ ಲಿಂಕ್ ಇಲ್ಲಿ ಹಾಕುತ್ತೇನೆ. ಇಷ್ಟ ಇದ್ದವರು ನೋಡ ಬಹುದು.  ನಾನಂತು ಈ ಸಿನಿಮಾದಲ್ಲಿ ಕಳೆದು ಹೋದೆ. ನೀವೇನಾದರೂ ನೋಡಿದ್ರೆ ನಿಮಗೇನನ್ನಿಸಿತು ಹೇಳಿ. ಸಿನಿಮಾ ಸ್ವಲ್ಪ ಸ್ಲೋ , ಬಟ್ i like such movies. 

ನನಗನ್ನಿಸಿದ್ದು : ಜಗಳ ಮಾಡಕ್ಕೆ ಪುರುಸೋತ್ತಿರಲ್ಲ. ಮತ್ತು ಭಾನುವಾರ ಏನು ಮಾಡುತ್ತಾರೆ ಅಂತ ಕುತೂಹಲ .  ಅಥವಾ ಇಬ್ಬರಿಗೂ ಒಟ್ಟಿಗೆ ರಾಜಾ ಇಲ್ಲವೇನೋ   

ಸಿನಿಮಾದ blurb  ಹೀಗಿದೆ. 
Set in the crumbling environs of Calcutta, LABOUR OF LOVE is a lyrical unfolding of two ordinary lives suspended in the duress of a spiraling recession. They are married to a cycle of work and domestic routine, and long stretches of waiting in the silence of an empty house. They share each other's solitude in pursuit of a distant dream that visits them briefly every morning. Incorporating poignant political undertones, director Aditya Vikram Sengupta creates a stylistically beautiful film that depicts the challenges of sustaining love in a fast transitioning world via a simultaneous sensation of breathlessness and space.
ಎಷ್ಟೊಂದು ಬೆಂಗಾಲಿ ಸಿನಿಮಾ ನೋಡಿದೆ ಅಂದ್ರೆ, ಹಿಂದಿನ ತಿಂಗಳು ಕೊಲ್ಕಾತಾ ಗೆ ಹೋದಾಗ ಸಲೀಸಾಗಿ ಓದಿದ್ದು ಮಾತ್ರವಲ್ಲ  ಅವರ ಭಾಷೆ ಕೂಡ  ಅರ್ಥ ಆಗ್ತಿತ್ತು. ಶ್ರೀಕಾಂತಗಂತೂ ಅಚ್ಚರಿ. :-) 

September 24, 2018

ಮಡಿವಾಳ ಕೆರೆ ಬಳಿ ಒಂದು ಸಂಜೆ

ಮಳೆ ಬಂದು ಬೆಂಗಳೂರು ಒಂದು ತರಹ ಚಂದ ಆಗಿದೆ.
ನಿಹಾರಿಕಾ ಇಲ್ಲಿ ಬಂದು ಚಿತ್ರ ಬರೀತಾ ಇದ್ರೆ ನಾನು ಕೆಲವು ಫೋಟೋ ತೆಗೆದೆ. ಕೆರೆಯ ಹೂಳೆತ್ತಿದ್ದರಿಂದ ಕೆರೆ ತುಂಬಿದೆ. ಕೆರೆಯ ಮಧ್ಯ ಇರುವ mangroves ನಲ್ಲಿ ಹಲವಾರು ವಲಸಿಗ ಹಕ್ಕಿಗಳು ಬಿಡುಬಿಟ್ಟಿವೆ. ರಿಪೇರಿ ಕೆಲಸ ನಡೆದಿದೆ. 












ಒಂದು ಬಸವನ ಹೂಳ 




ಅಸ್ತಮಿಸುವ ಸೂರ್ಯನ ಬೆಳಕಿನಿಂದ ಮನೆಯ ಕಿಟಕಿಗಾಜುಗಳಿಗೆ ಬೆಂಕಿ ಹತ್ತಿದಂತಹ feel. 















September 18, 2018

ಕಲೆಬರಹ

ನಿಹಾರಿಕಾ ಹೊಸದೊಂದು ಬ್ಲಾಗ್ ಶುರು ಮಾಡಿದ್ದಾಳೆ. ಅವಳು ಬಿಡಿಸಿದ ಚಿತ್ರ ದ ಜೊತೆ ಪುಟ್ಟ ಬರಹ. ಆಸಕ್ತಿ ಉಳ್ಳವರು ಕೆಳಗಿನ ಕೊಂಡಿಯಲ್ಲಿ ಓದ ಬಹುದು
https://niharikashenoy.blogspot.com/
ಧನ್ಯವಾದಗಳು
😊😊

September 12, 2018

ಒಂದು ಆನೆಯ ಸುತ್ತ

ಸದ್ದು ಆಡಗಿ  ಸುಮಾರು ಹೊತ್ತಾದರೂ ಅದು ಇನ್ನೂ  ಗಾಳಿಯ್ಲಲಿ ತೇಲುತ್ತಿರುವ ಭಾಸ. ಎರಡು ಕಾಲಿನ ನರ  ಪ್ರಾಣಿಯ ದನಿ ಕಡಿಮೆಯಾಗುತ್ತಾ ಹೋಯಿತು ಹಾಗೆಯೇ ಅಡವಿಯ  ರಾತ್ರಿಯ ಸಮಾಧಾನಕರ  ಸದ್ದುಗಳು  ಶುರುವಾದವು. ಸ್ವಲ್ಪ ಹೊತ್ತು  ನಿಂತೆ. ಘಿಳಿಡುವ ಡುವ ಆಸೆಯನ್ನು ಅದುಮಿಕೊಂಡೆ. ಹಿರಿಯರು ಹೇಳಿದ ಮಾತು ನೆನಪಾಯಿತು. ಎರಡು ಕಾಲಿನ ಪ್ರಾಣಿ ಬಳಿಯಿದ್ದಾಗ ಸದ್ದು  ಮಾಡದೆ ಅಡಗಿಕೊಂಡಿರು . ನಿಧಾನವಾಗಿ ಭಯ ಕರಗಲು  ಆರಂಭವಾಯಿತು. ತಲೆಯಲ್ಲಿ ರಿಂಗಣಿಸುತ್ತಿರುವ  ಸದ್ದುಗಳನ್ನು ಕೊಡವಿಕೊಳ್ಳಲು ಕಿವಿಯನ್ನು ಅಲ್ಲಾಡಿಸಿದೆ. ದೀರ್ಘವಾಗಿ ಉಸಿರೆಳೆದುಕೊಂಡೆ. ಮನೆಗೆ ಹೋಗಬೇಕೆನಿಸಿತು. ತನ್ನ ಹೊಲದ ಸುತ್ತ ಮುಳ್ಳು ತಂತಿಯ ಬೇಲಿ ಹಾಕಿ ನಮ್ಮ ಚರ್ಮ ಸುಡುವಂತೆ ಮಾಡುವ ನರಪ್ರಾಣಿಯ ಸಹವಾಸವೇ ಬೇಡವೆನಿಸಿತು. ಆದರೆ ಅಡವಿಯೆಲ್ಲ ನಾಶವಾಗಿ  ನಮಗೆ ತಿನ್ನಲು ಏನೂ ಇಲ್ಲವಾಗಿದೆ.
ಕಣ್ಣು ಮುಚ್ಚಿ ಮುಳ್ಳು ತಂತಿಯನ್ನು ಎಳೆದು ಬಿಸಾಕಿದೆ. ನಿಧಾನವಾಗಿ ಬಿದ್ದ ತಂತಿ ದಾಟಿದೆ. ಒಳಗಡೆ ಅಡಗಿಕೊಳ್ಳಲು  ಪ್ರಶಸ್ತ ಜಾಗ ಸಿಕ್ಕಿತು ಮಾತ್ರವಲ್ಲದೆ ರುಚಿಕರವಾದ ಹಲಸಿನ ಗೆಲ್ಲು ಸಿಕ್ಕಿದೆ. ರಾತ್ರಿಯಾದುದರಿಂದ ನರಪ್ರಾಣಿಯೆಲ್ಲ ಮಲಗಿ ನನಗೆ ಅಷ್ಟು ಭಯ ಅನ್ನಿಸಲಿಲ್ಲ. ನನಗೆ ಬೇಕಾದಷ್ಟು ಹೊಟ್ಟೆ ತುಂಬಾ ತಿಂದೆ.
ಅದೇ ಹಳ್ಳಿಯಲ್ಲಿ ಕಾಂತನೆಂಬ ರೈತ ರಾತ್ರಿ ಇಡೀ ಎಚ್ಚರ ವಾಗಿದ್ದ. ಮುದಿ ತಂದೆಯ ಹದೆಗೆಡುತ್ತಿರುವ ಆರೋಗ್ಯ ಹಾಗು ಮಗಳ ಮದುವೆಗೆ  ದುಡ್ಡು ಒಟ್ಟುಗೊಳಿಸುವ  ಚಿಂತೆ  ಅವನನ್ನು ಬಾಧಿಸಿದೆ . ಮತ್ತು ಈ ಆನೆಗಳ ಕಾಟ. ಆನೆಗಳನ್ನು ನೆನ್ನೆಸಿ ಅವನಿಗೆ ಸಿಟ್ಟೇರಿತು. ಅವನ ಅಕ್ಕಪಕ್ಕದ ರೈತರ ಹೊಲಗಳನ್ನೆಲ್ಲ ಆನೆಗಳು ತಿಂದು ದ್ವ೦ವ್ಸ ಮಾಡಿದ್ದವು. ಇಷ್ಟು ದಿನ ಅವನು ರಾತ್ರಿ ಹೊಲ ಕಾಯುತ್ತಿದ್ದ. ಆನೆಗಳನ್ನು ಹೆದರಿಸಲು  ಆವಾಗಾವಾಗ ಸುಡುಮದ್ದುಗಳನ್ನು ಉರಿಸುತ್ತಿದ್ದ. ಅದಲ್ಲದೆ ಕರೆಂಟು ತಾಗುವ ಮುಳ್ಳು ತಂತಿ ಹಾಕಿದ ಹೊಲಗಳಲ್ಲಿ ಇವನದ್ದು ಒಂದಾಗಿತ್ತು. ಇಷ್ಟು ದಿನ ಅವನು ತನ್ನ ಹೊಲವನ್ನು ಆನೆಗಳಿಂದ ಉಳಿಸಲು ಸಾಧ್ಯವಾಗಿತ್ತು. ಚಿಂತೆ ಮತ್ತು ನಿದ್ದೆಗೆಟ್ಟಿದ್ದರಿಂದ ಅವನ ಮುಖವೆಲ್ಲ ಸುಕ್ಕುಗಟ್ಟಿದೆ.
ಇವತ್ತು ಕಾಂತ ಬೇಗನೆಎದ್ದಿದ್ದಾನೆ. ಹಾಲು ಕರೆಯುವ ಹುಡುಗ  ತನ್ನ ಕೆಲಸ ಮಾಡುವುದನ್ನು ನೋಡಲು ಉಪೇಕ್ಷಿಸುತ್ತಾನೆ. ಆದರೆ ಆ ಹುಡುಗ ಇನ್ನು ಬಂದಿಲ್ಲ. ಅವನು ಬರುವ ತನಕ ಕಾಯಲು ಕುಳಿತ.
ಹೊರಗಡೆ ಇನ್ನು ಕತ್ತಲಿತ್ತು .ಆದರೂ ಕಾಂತ ಯಾವುದೇ ತೊಡಕಿಲ್ಲದೆ ನಡೆದ. ಅವನ ಹೊಲದ ಏರಿಳಿತದ ಹಾದಿ ಅವನಿಗೆ ತನ್ನ ಕೈರೇಖೆಯಷ್ಟು ಪರಿಚಿತ. ಸ್ವಲ್ಪ ದೂರ ಹಾದಿ ಕ್ರಮಿಸಿದೊಡನೆ ಯಾಕೋ ಏನೋ ಸರಿಯಿಲ್ಲ ಎಂಬ ಭಾವನೆ ಶುರುವಾಯಿತು. .  ಹಾದಿಯಳ್ಳಿ ತುಂಡಾಗಿ ಬಿದ್ದ ಮುಳ್ಳು ತಂತಿ.  ಮತ್ತು ಹೊಲದ ಮದ್ಯೆ ಏನೋ ಕಪ್ಪನೆಯ ಆಕಾರ. ಕಾಂತ ನಿಧಾನಕ್ಕೆ ಹಿಮ್ಮಡಿಯಿಟ್ಟ, ಕಾಲ ಬುಡದಲ್ಲಿ ಒಣಗಿದ  ಮರದ ತುಂಡೊಂದು ಕಟಕ್ ಅಂತ ಸದ್ದು ಮಾಡಿತು. ಆನೆಗೆ ಕೇಳಿಸಿತೋ ಎಂಬಂತೆ ಕಾಂತ ಹೆದರಿದ , ಆದರೆ ಆನೆ ಸುಮ್ಮನೆ ನಿಂತಿತ್ತು. ನಿಧಾನಕ್ಕೆ ಕಾಂತ ಅಲ್ಲಿಂದ ಜಾಗ ಖಾಲಿ ಮಾಡಿದೆ. ದನದ ಹಟ್ಟಿಯ  ಬಳಿ ಹಾಲು ಕರೆಯುವವ ನಿದ್ದೆ ಗಣ್ಣಲ್ಲಿ  ಹಾಲಿನ ಬಕೀಟನ್ನು ನೀಟಾಗಿ ಜೋಡಿಸುತ್ತಿದ.
"ಬೇಗ ಹೊರಡು, ನೆರೆಹೊರೆಯ ರೈತರಿಗೆ ಹೊಲದಲ್ಲಿ ಆನೆ ಬಂದಿದೆಎಂದು ಹೇಳು" ಓಡು !!
ಕಾಂತ ಹೇಳಿದಂತೆ ಮಾಡಲು ಹಾಲುಕರೆಯುವವ ಓಡಿದ . ಸಿಟ್ಟಿಗೆದ್ದ ರೈತರು ಆನೆಯನ್ನು ಓಡಿಸಲು ಬೆಳಕಿನ ದೊಂದಿ ಹಾಗು ಸುಡುಮದ್ದುಗಳೊಂದಿಗೆ ಸಜ್ಜಾಗಿ ಬಂದರು.  ಹೆಣ್ಣು ಮಕ್ಕಳು  ಮತ್ತು ಮಕ್ಕಳು ತಮ್ಮ ತಂದೆ , ಗಂಡ ಎಲ್ಲ ಸುರಕ್ಷಿತವಾಗಿ ಮರಳಿ ಬರಲಿ ಎಂದು ಪ್ರಾರ್ಥನೆ ಮಾಡಿದರು.
ರೈತರೆಲ್ಲ ಮರಳುವಷ್ಟರಲ್ಲಿ  ಹೊತ್ತು ಕಂದಿತು.  ಎಷ್ಟು ನಷ್ಟವಾಗಿದೆ ಎಂದು ತಿಳಿದು ಕಾಂತ ಹಳಹಳಿಸಿದ. ಹಣದ  ಋಣ ತೀರಿಸುವ ಬಗ್ಗೆ ಚಿಂತಾಕ್ರಾಂತನಾದ. ಹೊಲದಲ್ಲಿ ಆನೆಯ ಸುಳಿವಿರಲಿಲ್ಲ. ಆದರೆ ತಂತಿಯಲ್ ಬಳಿ ಬಿದ್ದ ರಕ್ತದ ಕಲೆಯಿಂದಾಗಿ ಆನೆಗೆ   ಏಟಾಗಿದೆ ಎಂದು ತಿಳಿಯಿತು.
ಕಾ೦ತಾನ  ಮನೆಯಲ್ಲಿ ಕೆಲವು ದಿನ ತುಂಬಾ ದುಃಖ ಮಡುಗಟ್ಟಿತ್ತು. ಕಾಂತ ತುಂಬಾ ಸೋತುಹೋಗಿದಂತೆ ಕಾಣುತ್ತಿದ್ದ. ಇದೆಲ್ಲವನ್ನು ಕೆಲವು ದಿನಗಳಿಂದ ಕಾಂತನ ಅಜ್ಜ   ಗಮನಿಸುತ್ತಿದ್ದ. ಒಂದು ದಿನ ಅವನನ್ನು ಬಳಿಗೆ  ಕರೆದು 'ನೋಡು ' ಅಂತ ಅಲ್ಲೇ ಬಿದ್ದ ಆನೆಯ ಒಣಗಿದ  ಲದ್ದಿಯ ಬಳಿ ಕೂತು ಬೆರಳು ತೋರಿಸಿದ. 'ಕಾಣಿಸುತ್ತಿದೆಯಾ?
ಕಾಂತ ಹತ್ತಿರಕ್ಕೆ ಹೋಗಿ ಗಮನಿಸಿದ. ಆನೆಯ ಲದ್ದಿಯಲ್ಲಿ ಅಂಜೂರದ ಬೀಜ ಮೊಳಕೆಯೊಡೆದಿತ್ತು. ಅವನ ಅಜ್ಜ ಅಲ್ಲಿಂದ ತೋಟದ ಕಡೆ  ಹೋರಡಲು ಅನುವಾದ.  'ಇಲ್ಲಿ ಬಾ ಅಂತ ಕ್ಷೀಣವಾದ ದನಿ ಹೊರಡಿಸಿದ. ಕಾಂತನಿಗೆ ತನ್ನ ತಾತನ ಆರೋಗ್ಯದ ಬಗ್ಗೆ ಕಾಳಜಿಯಾಯಿತು.  ಹೀಗೆ ಎಲ್ಲೆಂದರಲ್ಲೂ ನಡೆಯುವುದನ್ನು ಬಿಟ್ಟು ಮಲಗಿದೆಡೆಯಿರಬೇಕಿತ್ತು ಅಂದುಕೊಂಡ. ಅಜ್ಜನ ಕಡೆಗೆ ಸಾಗಿದ.  ಅಜ್ಜ ಈಗ ದಾಸವಾಳದ ಗಿಡ ಬಳಿಯಲ್ಲಿ ಬಗ್ಗಿ ಕುಳಿತಿಟ್ಟದ್ದ,  ಅಲ್ಲಿ ಆನೆಯ ಲದ್ದಿಯಿಂದ ಒಂದು ಹುಣಸೆಹುಳಿಯ ಗಿಡ ಬೆಳೆಯುತ್ತಿತ್ತು. ಅಜ್ಜ ಯಾಕಾಗಿ ಇದನ್ನೆಲ್ಲಾ ತೋರಿಸುತ್ತಿದ್ದಾನೆ ಅಂತ ಕಾಂತನಿಗೆ ಸಿಟ್ಟು ಬಂತು.
'ಈಗ ಅಲ್ಲಿ ನೋಡು " ಅಂತ ದೊಡ್ಡ ಮತ್ತುಊರಲೆಲ್ಲಾ  ಖ್ಯಾತ  ಹಲಸಿನ ಮರದ ಕಡೆ ಬೊಟ್ಟು ಮಾಡಿ ತೋರಿಸಿದ.  ಹತ್ತಿರ ಹಳ್ಳಿ ಮತ್ತು ಪಟ್ಟಣದಲ್ಲೆಲ್ಲ ಈ ಹಲಸಿನ ಮರದ ಹಣ್ಣು ತನ್ನ ಸಿಹಿಗಾಗಿ ಖ್ಯಾತ ವೆನಿಸಿತ್ತು.
"ನೆನಪಿದೆಯಾ ನಿನಗೆ, ಊರಲಿ ಕ್ಷಾಮವಾದಾಗ ಈ ಮರ ನಮ್ಮೆಲ್ಲರ ಹಸಿವೆ ನೀಗಿಸಿತ್ತು.  ಎಲ್ಲ ಬೆಳೆಗಳು ಒಣಗೆ, ಹಸುಗಳು ಹೊಟ್ಟೆಗಿಲ್ಲಕ್ಕಿದೆ ಇದ್ದಾಗ ಈ ಹಲಸಿನ ಮರ ಮಾತ್ರ ನಳನಳಿಸಿತ್ತಾ ಇತ್ತು. ನೀನು ಆಗ ಚಿಕ್ಕ ಹುಡುಗ.
ಕಾಂತನಿಗೆ ನೆನಪಾಯಿತು. ಊರಿನ ಉಗ್ರಾಣದಲ್ಲಿ ಒಂದು ಹಿಡಿ ಸಿರಿಧಾನ್ಯ , ಅದೂ ಕೆಲವು ದಿನಗಳಲ್ಲಿ ಖಾಲಿಯಾದಾಗ ಈ ಹಲಸಿನ ಮರದಲ್ಲೆಲ್ಲ ತುಂಬಾ ಹಣ್ಣುಗಳು ಕಾಣಸಿಕ್ಕಿದವು. ಕೆಂಪು ಜಾತಿಯ ಅಪರೂಪದ  ತಳಿಯ  ರುಚಿಕರವಾದ ಹಲಸಿನ ಹಣ್ಣು. 'ಈ ಹಲಸಿನ ಮರವನ್ನು ಆನೆ ನೆಟ್ಟಿದ್ದು ' ಪ್ರೀತಿಯಿಂದ ಹೇಳಿದರು ಅಜ್ಜ.
ಎಲ್ಲ ಮರಗಿಡಗಳು ಕ್ಷಾಮದಲ್ಲಿ ಒಣಗಿದಾಗ ಈ ಮರ ಮಾತ್ರ ಗಟ್ಟಿಮುಟ್ಟಾಗಿತ್ತು. ಈಗ ಅದನ್ನು ನೋಡು , ನನ್ನಷ್ಟೇ ವಯಸ್ಸು ಆದರೂ ಈಗಲೂ ಹೇಗೆ ನಳಿನಳಿಸುತ್ತಾ ಇದೆ   ಎಂದು ನಕ್ಕರು.
ಕಾಂತನ ಹೆಗಲ ಮೇಲೆ ಕೈಯಿಟ್ಟು " ಆನೆ ನಮ್ಮಿಂದ ಪಡೆಯುವುದು ಮಾತ್ರವಲ್ಲ , ನಮಗೇನಾದ್ರು ಕೊಟ್ಟೆ ಹೋಗುತ್ತೆ.  ನಾವು ಅದಕ್ಕೆ ಬೇಕಾದ ಅರಣ್ಯವನ್ನೆಲ್ಲಾ ಹೊಲಗಳನ್ನು ಮಾಡಿ ಜೀವನ ನಡೆಸುತ್ತೇವೆ , ಒಂದಷ್ಟು ಕಬ್ಬು ತಿಂದು ಹೋದರೆ ನಾವು ಅದಕ್ಕೆ ಆಕ್ಷೇಪ ಎತ್ತಬಾರದು.
ಕಾಂತ  ತನ್ನ ಅಜ್ಜನ ಕಡೆ ನೋಡಿ ಹೌದೆಂಬಂತೆ ತಲೆಯಲ್ಲಾಡಿಸಿದ. ತಿಳಿವಳಿಕೆ ಮತ್ತು ಭರವಸೆಯಿಂದ ಅವನ ಮುಖ ಅರಳಿತು.
ಡೌನ್ ಟು ಅರ್ಥ್ ನ ಗೋಬರ್ ಟೈಮ್ಸ ಪುರವಣಿಯಲ್ಲಿ   ಪ್ರಕಟವಾದ ನಿಹಾರಿಕಾ ಬರೆದ ಸಣ್ಣ ಕತೆಯ ತರ್ಜುಮೆ.