March 28, 2026

ಬಣ್ಣ -my ಬಣ್ಣ 😧

 i noticed those  girls while entering the hospital cafe. Both were very pretty..looked alike. Maybe sisters or even twins. Both were engrossed with their cell phones. Niha took turns sitting in the ward with Srikanth and she asked me go and have a leisurely tea. i ordered a tea and a veggie puff and sat in a toasty sunlit corner.  Found a discarded newspaper. opened the crossword part , found a pen in my bag and started solving. 'Auntie' someone called near my ear. i turned towards the voice and found one of the pretty girls. besides me.  'aunty i just wanted to compliment on your beautiful skin colouring', it is amazing. Me, i am not used to nor take easily to praise...arre what does this girl want,  i think..but sensibility/manners made me thank her...she must have seen the confusion/doubt in my face...'my sister thinks so too'....we haven't seen such colouring on anybody....i said this is the 'first time i am hearing of it...and turned to my crossword.....suddenly i realized i was sitting in the sunlight..i smiled at the girl who was still sitting beside me ...haha it is the sunlight...see 😁. she replied 'no aunty we observed you when you entered the cafe and wanted to.let you know...she smlled...i repeated my thank you  i was.a bit embarassed. she said bye and went back to her sibling....after i entered the ward i shared the incident with niha and said..i am so dumb..i forgot to say they were pretty themselves...


ಶ್ರೀಕಾಂತ್ ಹೋದ ಒಂದು ವಾರದ ಮೇಲೆ ಯಾಕೋ ಈ ಮೇಲಿನ ಘಟನೆ ನೆನಪಾಯ್ತು.
ಯಾಕೋ ಹೆದರಿದೆ
ಯಾಕೆಂದರೆ............
ಶ್ರೀಕಾಂತ್ ಗೆ ಲೀವರ್ transplant ಮಾಡಲೇ ಬೇಕಾಗುತ್ತದೆ ಎಂದ ಮೇಲೆ liver workup ಅಂತ ಮಾಡುತ್ತಾರೆ. ಬೇರೆ ಲೀವರ್ ಪಡೀಲಿಕ್ಕೆ ರಕ್ತದ ಗುಂಪು match ಆದ್ರೆ ಮಾತ್ರ ಸಾಕಾಗಲ್ಲ, kidney, heart, lungs ಎಲ್ಲ ಸರಿ ಕೆಲಸ ಮಾಡಿದ್ರೆ ಮಾತ್ರ transplant. ಇದನ್ನು airport ರೋಡ್ ನಲ್ಲಿರೋ Aster CMI ನಲ್ಲಿ ಮಾಡಿಸಿದ್ವಿ. ಎಷ್ಟು ದೂರ...ನಮ್ಮದೇ ವಾಹನ ಇದ್ರೂ it was too tiring..
ಅಲ್ಲಿ 4 ವರ್ಷದ ಮಗುವಿನಿಂದ 50+  ವರೆಗಿನ, ವಿವಿಧ ಸ್ಥರದ / ಹಂತದ/ಬಣ್ಣದ ಲೀವರ್ ಕಾಯಿಲೆ ಯ ಜನರನ್ನು ನೋಡಿದೆ. ಅದರಲ್ಲಿ ಒಬ್ಬ 28- 30 ವರ್ಷದ ಹಡುಗ ನ ಬಣ್ಣ ತುಂಬಾ ನೆ ವಿಚಿತ್ರವಾಗಿತ್ತು....ಲಕ ಲಕ ಹೊಳೆಯುವ ರಕ್ತ ಚಂದನದ ಬಣ್ಣ, ಹಳದಿ - ನೀರು ಭರಿತ ಕಣ್ಣು, ಮೂತ್ರದ ಚೀಲ ಕೈಯಲ್ಲಿ...ಮೂತ್ರದ ಚೀಲ ದ ಸಲುವಾಗಿ ಲುಂಗಿ ತೊಟ್ಟಿದ್ದ...i was fascinated by his colour.... ನಾನು ಕಣ್ಣು ಕೀಳಿಸದೆ ಅವನನ್ನು ನೋಡುತ್ತಿರಬೇಕಾದ್ರೆ ಅಕ್ಕ ನನಗೆ amma stop staring ಅಂತ ಗದರಿದಳು...ಅವನ  ಸಣ್ಣ ಪ್ರಾಯದ ಹೆಂಡತಿ ಕೂಡ ಅವನ ಜತೆ ಇದ್ದಳು....ಅವನೂ transplant ಗಾಗಿ ಕಾಯುತ್ತಿದ್ದ...
ಈ ಹುಡುಗಿಯರು  ಮತ್ತೆ ನೆನಪಾಗಿ , ಮೈ ನಡುಕ ಬಂದು, ನಾನು malathi manipal ನಲ್ಲಿ ಫುಲ್ body ಚೆಕ್ up ಮಾಡಿಸಿದೆ...low haemoglobin ಮತ್ತು pre diabetis ಪತ್ತೆಯಾಗಿದ್ರು ಬಿಟ್ರೆ ಎಲ್ಲ ಸರಿಯಾಗಿದೆ..
ಡೈಬೇಟಿಸ್ control ನಲ್ಲಿದೆ....stress ಇಂದ ಸಕ್ಕರೆ ಅಂಶ ಏರು ಪೇರಾಗ್ತದೆ ಮತ್ತು life style ಬಗ್ಗೆ ಕೇಳಿ...ಅದನ್ನೇ maintain ಮಾಡಿ..ಮೂರು ತಿಂಗಳ ನಂತರ ಪುನಃ ತಪಾಸಣೆ ಮಾಡುವಾ ಅಂದು ಔಷಧಿ ಏನೂ ಬರೆದು ಕೊಟ್ಟಿಲ್ಲ...
ಯಾಕೆ ನೆನಪಾಯ್ತು ಅಂದ್ರೆ ಮೊನ್ನೆ fort ಕೊಚ್ಚಿ ಯಲ್ಲಿ ಹೋಟೆಲ್ ನಲ್ಲಿ ಊಟಕ್ಕೆ ಕಾಯುತ್ತಿದ್ದಾಗ ನಿಹಾ 'ಅಮ್ಮ  you are glowing, let me take a pic ಅಂತ ಫೋಟೋ ತೆಗೆದ್ಲು...🤔🤔 ನಾನೂ ಚಿತ್ರ ನೋಡಿದೆ ನನಗೇನೂ glow ಆಗ್ತಿದ್ದೆನೆ ಅನ್ನಿಸಲಿಲ್ಲ..
ನಾನು ಮೊದಲಿನ ಧೈರ್ಯವಂತೆ ಮಾಲತಿ ಅಲ್ಲವೇ ಅಲ್ಲ...ಆಕ ನಿಂಪಿ ಗೆ ಸ್ವಲ್ಪ cold cough, ಆರೋಗ್ಯ ಏರು ಪೇರಾದ್ರೆ ತುಂಬಾನೇ tense ಆಗ್ತೀನಿ.  ಮೊದಲು ನನ್ನ panic attack ನಂತರ ಶ್ರೀಕಾಂತ್ ರ liver cirrhosis ಮತ್ತುdetect ಆದ 8 ತಿಂಗಳಿಗೆ ಸಾವು ನನ್ನನ್ನು ಕಂಗೆಡಿಸಿಬಿಟ್ಟಿದೆ 😭😭😏


ಶ್ರೀಕಾಂತ್ ಗೆ ಸಿಕ್ಕಾಪಟ್ಟೆ weight loss ಆಗಿ ಸರಿಯಾದ ಸೈಜ್ ಬಟ್ಟೆ ತೆಗೊಂಡ್ರೆ ಹೊಟ್ಟೆ ಮೇಲೆ ಟೈಟ್ ಆಗುತ್ತಿತ್ತು, ಲೂಸ್ ತೆಗೊಂಡ್ರೆ shoulder ಮೇಲಿಂದ ಇಳಿತಿತ್ತು...ಪ್ಲಸ್ ನಾವು ತಂದದ್ದು, online ಆರ್ಡರ್ ಮಾಡಿದ್ದು ಅವರಿಗೆ ಸರಿ ಆಗ್ತಿರಲಿಲ್ಲ..ಅಂತ ನಾನು ಅವರನ್ನು reliance ಗೆ ಕರೆದುಕೊಂಡು ಹೋದಾಗ, ನನಗೂ force ಮಾಡಿ ಮೇಲಿನ ಚಿತ್ರದಲ್ಲಿನ ಡ್ರೆಸ್ ತೆಗೆಸಿಕೊಟ್ರು...ನಮ್ಮ ಲಾಸ್ಟ್ ಶಾಪಿಂಗ್ outing. ತೆಗೆದುಕೊಂಡ ಬಟ್ಟೆ ಹಾಕಲೇ ಇಲ್ಲ, ಆರೋಗ್ಯ ಹದಗೆಡುತ್ತಾ ಹೋಯ್ತು...ಇತ್ತೀಚಿಗೆ ಒಂದು ದೊಡ್ಡ suitcase ತುಂಬಾ ಬಟ್ಟೆ ವೃದ್ಧಾಶ್ರಮಕ್ಕೆ ಕೊಟ್ಟೆ...
ನನ್ನ ಹೊಸ ಚಸ್ಮ ಹಾಕಿ ಚಿತ್ರ ತಮ್ಮ-ಅಮ್ಮ ನಿಗೆ ಕಳಿಸಿದ್ದು ನಿಮಗೂ....ಅವರೊ ಇಲ್ಲಿಗೆ ಬಾ ಬಾ ಅಂತ ಕರೀತಿರ್ತಾರೆ, ನನಗೆ ಎಲ್ಲೂ ಹೋಗಲೂ ಮನಸ್ಸಿಲ್ಲ 😏.

March 23, 2026

Fort Kochi. story in pictures

 ನಿಹಾ ಗೆ ಕೂಡಿಟ್ಟ ರಜೆಗಳಿದ್ವು...ಅದಕ್ಕೆ ಯುಗಾದಿ ರಾತ್ರಿ ಟ್ರೈನ್ ನಲ್ಲಿ ನಮ್ಮ ಸವಾರಿ ಫೋರ್ಟ್ ಕೊಚ್ಚಿ ಕಡೆಗೆ. ಇಲ್ಲಿಂದ ರೈಲು ಎರ್ನಾಕುಲಮ್..ಅಲ್ಲಿಂದ water ಮೆಟ್ರೋ ನಲ್ಲಿ ಫೋರ್ಟ್ kochi. ತಲಾ ಒಬ್ಬರಿಗೆ 50 ರೂ. ಮೊದಲಿ ವೈಪಿನ್ ಗೆ ಸ್ಟಾಪ್..ಅಲ್ಲಿ ಕೆಲವರು ಇಳಿದು ಹತ್ತಿ ಮಾಡಿ ನಾವು ಫೋರ್ಟ್ ಕೊಚ್ಚಿ ಯಲ್ಲಿ ಇಳಿದೆವು. ತಗುಲಿದ ಸಮಯ ಅರ್ಧ ಗಂಟೆ. 




                            water metro


ಅಲ್ಲಿಂದ ಹತ್ತು ನಿಮಿಶದ ನಡಿಗೆಯಲ್ಲಿ ನಾವು ರೂಮ್ ಕಾಯ್ದಿರಿಸಿದ fort house ಹೋಟೆಲ್ ಗೆ. ದಿನಕ್ಕೆ 3000 ರೂ...ನಾವು ಮೂರು ಜನ ಒಂದೇ ರೂಮ್. ಬೇಕಿದ್ದಲ್ಲಿ extra ಹಾಸಿಗೆ  ಕೊಡುತ್ತೇವೆ ಅಂದ್ರು...ಆದರೆ ಮಂಚ ಅಗಲವಿತ್ತು. ಸಾಕಷ್ಟು ಚೆನ್ನಾಗಿತ್ತು ರೂಮ್. ಸಿಬ್ಬಂಧಿ ಎಲ್ಲ ತುಂಬಾ helpful....








ನನಗೆ ಅಷ್ಟೇನೂ ಸೆಕೆ ಅನ್ನಿಸಲಿಲ್ಲ..





 ಆದರೆ ಊಟ ತಿಂಡಿ ಆರ್ಡರ್ ಮಾಡಿದ್ರೆ. ಮೆನ್ಯು ನಲ್ಲಿ ಅದು ಇಲ್ಲ ಇದು ಇಲ್ಲ..ಗ್ಯಾಸ್ ಇಲ್ಲ ಅನ್ನುವ ಸಬೂಬು....ಮತ್ತು ತಿಂಡಿ ಊಟ ಆರ್ಡರ್ ಮಾಡಿದ minimum  45 ನಿಮಿಷ ತಗುಲು ತ್ತಿತ್ತು...ಅಲ್ಲಿ ಮಾತ್ರವಲ್ಲ..ಎಲ್ಲ ಕಡೆ...ನಿನ್ನೆ ಟೀ ಇಲ್ಲ ಅಂದಾಗ ಉರಿದು ಹೋಯ್ತು...ನನ್ನ ಅಸಹನೆ  ಗಮನಿಸಿ... ಇಲ್ಲ ಮ್ಯಾಡಮ್ ಹಾಲು ಬೇರೆ ಯದಾಗಿ  ಕೊಡುತ್ತೇವೆ..ನೀವೇ ಬೆರೆಸಿಕೊಳ್ಳಬೇಕು ಅಂದ ಹುಡುಗ...ಲಾಜಿಕ್ ಗೊತ್ತಾಗಲಿಲ್ಲ...

.


ಒಂದು ನಾಲ್ಕು ದಿನ ಬ್ರೇಕ್  ಬೇಕಿದ್ದಲ್ಲಿ (ನಾಲ್ಕು ದಿನ ಸಾಕಾಗಲ್ಲ) ನೀವು ಹೋಗಿ ಬನ್ನಿ... biennale art ಷೋ ಗಳ ಗಡಿಬಿಡಿ....ಹೊರದೇಶ ದ ಯಾತ್ರಿಕರು ಹೆಚ್ಚು.

ಕೊನೆಯ ದಿನ ಬೆಳಿಗ್ಗೆ ನಾವು ತೈಲ ಮಸಾಜ್ ಗೆ ಹೋದ್ರೆ,. ನಿಹಾ ಆರ್ಟ್ exhibition ಗಳನ್ನೆಲ್ಲಾ ನೋಡಿ ಬ0ದ್ಲು.  ಸಂಜೆ ರಿಕ್ಷಾ ಮಾಡಿಕೊಂಡು ಸ್ವಲ್ಪ ಪೇಟೆ ಕಡೆ ಹೋಗಿ ಬಂದೆವು. ಅಲ್ಲಿನ jew street/ market ತುಂಬಾ ಇಷ್ಟ ಆಯ್ತು...ಶ್ರೀಕಾಂತ್ ಇದ್ದಿದ್ರೆ ತರಕಾರಿ ಮಾರ್ಕೆಟ್ ಕಡ್ಡಾಯ ಇರ್ತಿತ್ತು...ನಾವಂತೂ 'ಅಪ್ಪ ಇದ್ದಿದ್ರೆ ಹೀಗೆ ಮಾಡ್ತಿದ್ರ್ಯ, ಹಾಗೆ ಮಾಡ್ತಿದ್ರು ಅಂತ ನೆನಪು ಮಾಡಿ ನಕಿದ್ದೆ ಹೆಚ್ಚು....1 ಒಂದು ವರ್ಷದ ಮೇಲೆ ಮೂರು ಜನ ಸೇರಿ ಪರ ಊರಿಗೆ outing ಹೋಗಿದ್ದು. ಎಂಜಾಯ್ ಮಾಡಿದ್ವಿ...



    synagogue was closed on account of jewish holiday









ಬರುವಾಗ  flight ನಲ್ಲಿ ಬಂದೆವು. ಕೊಚ್ಚಿ airport ತುಂಬಾನೇ ಚೆನ್ನಾಗಿದೆ.

cochin airport

*weekend ಹೋದ್ರೆ... ಶನಿವಾರ ಬೆಳಿಗ್ಗೆನೇ  ಎಲ್ಲ s8ght-sering  ಮುಗಿಸಿ...ಸಂಜೆ 4 ರ ನಂತರ ನಮಗೆ ಚರ್ಚ್, ಸಿನಾಗೋಗ್, dutch cemetary ಮುಂತಾದ್ದು ನೋಡಲು ಸಿಗಲಿಲ್ಲ. Jewish Market ನಲ್ಲಿ ತುಂಬಾ ಸಮಯ ಕಳೆಯಬಹುದು.



March 21, 2026

Simple Ugadi

 ಶ್ರೀಕಾಂತ್ ಇದ್ದಿಡ್ರೆ ಕೆಳಗಿನ ಎಲೆಯಲ್ಲಿ ಕೊಟ್ಟೆ ಕಡುಬು, ಚಟ್ನಿ, ಮೆಣಸಿನ ನೀರು, ಕಡ್ಲೆ ಬೇಳೆ ಪಾಯಸ ಮತ್ತು ಮೆಣಸಿನ ಕಾಯಿ ಬೋಂಡಾ,  ಸೌತೆಕಾಯಿ ಪಚ್ಚಡಿ ಇರುತ್ತಿತ್ತು. 

can't believe he is no more 😏😏


ಏನೇ ಅನ್ನಿ 'ಪರಾಭವ' ಹೆಸರು ಇಷ್ಟ ಆಗಲಿಲ್ಲ..ಹೌದೌದು ಅನೇಕ ರೀತಿಯ explanation ಬಂದಿವೆ  family whatsapp ಗ್ರೂಪ್ ಗಳಲ್ಲಿ...ಆದರೂ 

ರಾತ್ರಿ ಟ್ರಾವೆಲ್ ಪ್ಲ್ಯಾನ್ಸ್ ಇದ್ದುದರಿಂದ ಎಲ್ಲಾ ಸ್ವಲ್ಪ ಸ್ವಲ್ಪನೆ ಮಾಡಿದ್ದು. ಟ್ರೈನ್ ನಲ್ಲಿ ಊಟಕ್ಕೆ ಮೆಂತೆ ಸೊಪ್ಪಿನ ಚಪಾತಿ, ಮೊಸರನ್ನ ಮತ್ತು ಉಪ್ಪಿನಕಾಯಿ.

ಎಲ್ಲಿಗೆ ಹೋಗಿದ್ದು ಅಂತ ಮುಂದಿನ ಪೋಸ್ಟ್.....

ಉಗಾದಿ 2026


March 13, 2026

AI / ಕೃತ್ರಿಮ ಬುದ್ದಿಮತ್ತೆ!!!

 ವಸುಧೇಂದ್ರ ಅವರು ತಮ್ಮ whatsapp status ನಲ್ಲಿ ಒಂದು ಪುಸ್ತಕ ಬಿಡುಗಡೆಯ invite ಹಾಕಿದ್ದರು. ಸಂಪೂರ್ಣವಾಗಿ AI ಅನುವಾದ ಮಾಡಿದ ಒಂದು ಕೃತಿ.

ಶ್ರೀಕಾಂತ್ ಆಸ್ಪತ್ರೆಯಲ್ಲಿದ್ದಾಗ ಮೊಬೈಲ್ ನಲ್ಲಿ ಒಂದು ಕತೆ ಕುಟ್ಟಿದೆ. ಅರ್ಧಂಬರ್ಧ...ಮಧ್ಯ ಮಧ್ಯ ಅದಕ್ಕೆ addition, deletion, edition ಮಾಡ್ತಾ ಹೋಗ್ತಿದ್ದೆ. ಅವರು ದೈವಾಧೀನರಾದಮೇಲೆ ಅದು ನಿಂತು ಹೋಗಿತ್ತು. ಹೀಗೆ ಒಂದು ನಿದ್ದೆ ಬರದ ರಾತ್ರಿ ಆ ಕತೆಯನ್ನು copy paste ಮಾಡಿ ..Meta AI ಗೆ ಆಂಗ್ಲಕ್ಕೆ ಅನುವಾದ ಮಾಡಲು ನಿರ್ದೇಶಿಸಿದೆ....ಎರಡೇ ಸೆಕೆಂಡ್ ನಲ್ಲಿ ಮಾಡಿ ಬಿಟ್ಟಿತು. ನಿಜಕ್ಕೂ ಅನುವಾದ ಚೆನ್ನಾಗಿತ್ತು. ನಾನು ಕತೆ ಪೂರ್ಣ ಗೊಳಿಸಿರಲಿಲ್ಲ...ಅದರ ಅಂತ್ಯ ನನ್ನ ತಲೆಯೊಳಗಿತ್ತು ಆದರೆ ಯಾಕೋ ಬರೆಯಲು ಮನಸ್ಸೇ ಇಲ್ಲ...Meta ಕೇಳಿತು 'would you like me to  continue' ಅಂತ...yes ಕೊಟ್ಟೆ....ಕತೆಗೊಂದು ಚೆಂದದ ಕೊನೇನೂ ಕಾಣಿಸ್ತು....ನನ್ನ ಎಂಡಿಂಗ್ ಬೇರೇನೇ ಇದೆ....but i was damn impressed 🤔🤔
ಕತೆಯನ್ನು ಮನಸ್ಸಿದ್ದರೆ/ ಕೊನೆಗೊಳಿಸಿದರೆ  ದೀಪಾವಳಿಗೆ ಯಾವುದಾದರೂ ವಿಶೇಷಾಂಕಕ್ಕೆ ಕಳಿಸುವಾ ಅಂತಿದ್ದೇನೆ.....🙂🙏👍
ಸುಮ್ನೆ ಶೇರಿಂಗೂ, not that i am a great story teller or anything

*ಆಸ್ಪತ್ರೆ ವಾಸದಿಂದ ಅಲ್ಲಿನ ದಿಂಬನ್ನು ಉಪಯೋಗುಸಿದ ನಂತರ ತಲೆಗೇನೋ ಅಲರ್ಜಿಯಾಗಿದೆ...ಔಷಧಿ ಉಪಚಾರದಿಂದ ಕೆರೆತ ನಿಂತಿಲ್ಲ  ತಲೆಗೂದಲು ಸಿಕ್ಕಾಪಟ್ಟೆ ಹೋಗ್ತಿದೆ....ಅದಕ್ಕೆ AI ಉಪಯೋಗಿಸಿ ತಲೆಗೂದಲು ಕತ್ತರಿಸಿದರೆ ಯಾವ ಮಾದರಿ ಕಟ್ ನನಗೆ suit ಆಗಬಹುದು ನೋಡಿದೆ 😁
ಹಾಗೆ ಪೂರ್ತಿ ಕೂದಲು ಹೋದ್ರೆ ಯಾವ ಬಣ್ಣ ಮತ್ತು ಮಾದರಿಯ ವಿಗ್/ wig ನನ್ನ ಮುಖಕ್ಕೆ ಸರಿಹೊಂಡಬಹುದು ಅಂತ ಚೆಕ್ ಮಾಡಿದೆ....
*reading glasses ಬಂದಿದೆ.....ನನ್ನ ಕಣ್ಣಿಗೆ ಯಾವ ಮಾದರಿ ಫ್ರೇಮ್ ಮತ್ತು ಬಣ್ಣ ಸರಿ ಕಾಣಬಹುದು ಅಂತ ನೋಡಿದೆ.....😁
ಎಂಜಾಯ್ ಮಾಡಿದೆ....
Interesting!!!!

March 10, 2026

ಠನಕಪುರ್ thanakpur

 

ನಕ್ಪುರ್/ tanakpur

ಲೋಹಾಘಟ್ ನಿಂದ ವಾಪಸ್ ಲಕ್ನೋ ಗೆ ಬರುವಾಗ ಪುನಃ ತನಕ್ಪುರ್ ಮಾರ್ಗವಾಗಿ ಬರಬೇಕಿತ್ತು. ನಮ್ಮ ಬಳಿ ಸ್ವಲ್ಪ ಸಮಯ ಇತ್ತು. ಸಂಜೆ 4 ಗಂಟೆಗೆ ಹೋಟಲ್ ಸಿದ್ಧಾರ್ಥ್ ತಲುಪಿದ್ವಿ. ನಾನು ಆನ್ ಲೈನ್ ನಲ್ಲಿ ರೂಮ್ ಬುಕ್ ಮಾಡಿದ್ದೆ. ಹೊರಗಿನಿಂದ ನೋಡಲು ಹೋಟಲ್ ಚೆನ್ನಾಗಿತ್ತು. ಒಳಗಡೆ ಗಬ್ಬು. ನಮಗೆ ಕೊಟ್ಟ ಕೊಠಡಿ ತೆರೆದರೆ ಅಲ್ಲಿ ಪಬ್ಲಿಕ್ ಲೆವೆಟರಿ ವಾಸನೆ ಮಾತ್ರವಲ್ಲ ಜೋಂಪು ಜೋಂಪು ಸೊಳ್ಳೆಗಳು. ನಮ್ಮ ದುಡ್ಡು ವಾಪಸ್ ತೆಗೊಂಡು, ಶ್ರೀಕಾಂತ್ ವಾಕ್ ಹೋಗಿ ಇನ್ನೊಂದು ಹೋಟಲ್ ಹುಡುಕಿದ್ರು. ಹೊಸದಾಗಿ ಕಟ್ಟಿಸಿದ್ದ. ಈ ಹೋಟೆಲ್ ಚೆನ್ನಾಗಿತ್ತು. ಇಷ್ಟರೊಳಗೆ 5 ಗಂಟೆ ಆಗಿತ್ಯು. ಹೋಟಲ್ ನವ ಅಲ್ಲಿನ  ಹೆಸರಾಂತ ಪೂರ್ಣಾದೇವಿ ಮಂದಿರ ಈಗ ಬಂದ್ ಆಗಿರುತ್ತೆ, ಆದ್ದರಿಂದ ನಮಗೆ ಶಾರದಾ ನದಿಗೆ ಹೋಗಲು ಹೇಳಿದರು. ಅಲ್ಲಿ ಪ್ರತಿ ಸಂಜೆ ಆರತಿ ಆಗುತ್ತೆ... ಕೆಳಗಿನ ಚಿತ್ರದಂತೆ ಊರು ತುಂಬ ಇಂತಹ ಚಿಕ್ಕ ದೊಡ್ಡ ಊರೂಟು ಕಲ್ಲುಗಳು. ಶ್ರೀಕಾಂತ್ ಪುರೋಹಿತರನ್ನು ಮಾತಾಡಿಸುತ್ತಿದ್ರೆ,  ನಾನು ಸಣ್ಣಕ್ಕೆ ಸದ್ದು ಮಾಡುತ್ತಿರುವ ನದಿ ಯ ಸದ್ದು ಆಲಿಸುವುದರಲ್ಲಿ ತನ್ಮಯಳಾದೆ. ವಾಪಸ್ ಬರ್ತಾ ಪೇಟೆಯೊಳಗೆ ಒಂದು ರೌಂಡ್ ಹಾಕಿದ್ವಿ.




ಇದು ನಮ್ಮ ಕೊನೆಯ ಹೊರ ರಾಜ್ಯದ ಪಯಣ...ಇನ್ನೂ ಓರಿಸ್ಸಾ, ಗುಜರಾತ್ ಪ್ಲ್ಯಾನ್ ಮಾಡಿದ್ದೆ ಬಂತು...ತುಂಬಾ ಬೇಜಾರಾಗುತ್ತೆ ಕಣ್ರೀ...😏😏

March 3, 2026

thandayi ನನ್ನ ರೆಸಿಪಿ

why should people with sugar complaints be left out.of the fun?~..have fun snd enjoy with my 'no added sugar' thandai recipe

Ingredients:

- Handful of fox nuts (makhana), lightly fried

- 4-5 cashew nuts

- 10 raisins

- 1/2 tsp  poppy seeds

- Cardamoms (a few)

- Milk

- Pistachios and rose petals for garnish


Instructions:

1. Blend fried fox nuts, cashews, raisins, khuskhus, and cardamoms into a fine powder.

2. Heat milk and add the blended mixture.

3. Boil until it thickens.

4. Garnish with pistachios and rose petals.

5. Serve warm or chilled.

Enjoy! 😊 Happy birthday, Srikanth!



ಕಾವಲಿಯಲ್ಲಿ ಮಖಾನಾ, 4-5 ಗೇರು ಬೀಜ, 10 ಒಣ ದ್ರಾಕ್ಷಿ, 1/2 ಟಿ ಚಮಚೆ ಗಸ್ ಗಸೆ  ಯನ್ನು ಹುರಿಯಿರಿ. ತಣಿದ ನಂತರ ಎಲಕ್ಕಿಯೊಂದಿಗೆ ಮಿಕ್ಸಿ ಯಲ್ಲಿ ನುಣ್ಣಗೆ ಪುಡಿ ಮಾಡಿ. 

ಬಿಡಿ ಹಾಳಲ್ಲಿ ಬೆರೆಸಿ, ಕುಡಿಬಂದು ದಪ್ಪ ಆಗುವವರೆಗೆ ಓಲೆ ಮೇಲೆ 8ಡಿ.  ಗುಲಾಬಿ ಪಕಳೆ, ಪಿಸ್ತಾ ಒಂದಿಗೆ decorate ಮಾಡಿ ಬಿಸಿ ಅಥವಾ ತಣ್ಣಗೆ ಸರ್ವ್ ಮಾಡಿ



March 2, 2026

HBD Shenoy maam

 


ನಮ್ಮ ಅತ್ತೆ ಯಾವಾಗಲೂ ಹೇಳೋರು. 'ಕಾಂತು ಹೋಳಿ ಹಬ್ಬದ ದಿನ ಹುಟ್ಟಿದ್ದು  ಅಂತ. ನಾಳೆ ಹೋಳಿ...ಆಂಗ್ಲ calender ಪ್ರಕಾರ ಇವತ್ತು ಶ್ರೀಕಾಂತ್ ಹುಟ್ಟಿದ ದಿನ.  ಎರಡು ದಿನ celebration

ಅದಕ್ಕೆ ಮುಂಚೆ ಮನೆಯೆಲ್ಲ ಸುಣ್ಣ ಬಡಿದಿದ್ಫು ಆಯ್ತು. ಮೆಟ್ರೋ  construction ಮುಗಿದ ಮೇಲೆ ಮಾಡೋದು ಮಾಡೋದು ಅಂತ ಪ್ಲಾನ್ ಮಾಡಿ...ಆಮೇಲೆ ಶ್ರೀಕಾಂತ್ ಗೆ ಹುಷಾರು ತಪ್ಪಿ ಮುಂದೂಡುತ್ತ ಕೊನೆಗೆ ಮೊನ್ನೆಗೆ ಮನೆ ಫ್ಹುಲ್ ಲಕಲಕ ಅಂತಿದೆ....ಪೈಂಟಿಂಗ್ ಜತೆ chimney, ಗ್ಲಾಸ್ ಬಾಗಿಲು, ನಳ, ಬಾತ್ ರೂಮ್ ಟೈಲ್ಸ್ ಎಲ್ಲ ಸ್ವಚ್ಛ...ಆಶ್ಚರ್ಯ ಅಂದರೆ ಕೆಲಸಕ್ಕಿದ್ದವರೆಲ್ಲ ವಯಸ್ಸಾದವರು. ಸರಿಯಾಗಿ ಒಂಬತ್ತಕ್ಕೆ ಬಂದು ಸಂಜೆ 5 ಕ್ಕೆ ಕ್ಲೋಸ್. ಹೆಚ್ಚು  / ಅನಾವಶ್ಯಕ ಮಾತಿಲ್ಲ, ಕತೆಯಿಲ್ಲ, ಮೊಬೈಲ್ ಬಳಿಸಿಲ್ಲ.... ಟಿ ಕಾಫಿ ಗೆ ಒಂದು 10 ನಿಮಿಷ ,  ಮಧ್ಯಾಹ್ನ ಊಟಕ್ಕೆ ಅರ್ಧ ಗಂಟೆ ಬ್ರೇಕ್ ಅಷ್ಟೇ. ಸೋಮವಾರ ಶುರು ಮಾಡಿ ಶನಿವಾರ ಸಂಜೆ.complete. ಮೂರು ಜನ ಇದ್ರು ಎಲ್ಲ ಸಾಮಾನು ಎಲ್ಲೆಲ್ಲಿತ್ತೋ  ಅಲ್ಲಿ ನೀಟಾಗಿ ಜೋಡಿಸಿ ಕೊಟ್ರು...ನಾನಂತು ಫುಲ್ ಖುಶ್...

ನನ್ನ ತಮ್ಮನ ಮಗಳು ಸ್ಯಾಮಿ ಪೈ ಶ್ರೀಕಾಂತ್ ಗೋಸ್ಕರ ಅವಳೇ compose ಮಾಡಿ, ಹಾಡಿದ ಹುಟ್ಟು ಹಬ್ಬದ ಹಾಡು...ಮತ್ತು ನನ್ನ ತಮ್ಮ ಪಾಂಡು ಈ ದಿನವನ್ನು ಶ್ರೀಕಾಂತ್ ಡೇ ಅಂತ ಹೆಸರಿಸಿದ್ದಾನೆ 🙂❤️🙏🙏



msgs about the  delicacies he taught us 👆👆