January 30, 2010

ಸಕ್ಕರೆ ಪೊಂಗಲ್/ ಸಿಹಿ ಕಿಚಡಿ


1/2 ಕಪ್ ಹೆಸರು ಬೇಳೆ

1 ಕಪ್ ಅಕ್ಕಿ

11/2 ಕಪ್ ಸಕ್ಕರೆ

1/2 ತೆಂಗಿನ ಕಾಯಿ ತುರಿ

3 ಏಲಕ್ಕಿ, 2 ಚ. ತುಪ್ಪ

ಅಲಂಕರಿಸಲು ತುಪ್ಪದಲ್ಲಿ ಹುರಿದ ಗೋಡಂಬಿ, ಚಕ್ರಾಕಾರದಲ್ಲಿ ಕಟ್ ಮಾಡಿದ ಬಾಳೆ ಹಣ್ಣಿನ pieces

ಹೆಸರು ಬೇಳೆಯನ್ನು ನಸು ಕಂದು ಬಣ್ಣ (ಪರಿಮಳ)ಬರುವ ತನಕ ಬಾಣಲೆಯಲ್ಲಿ ಹುರಿಯಿರಿ. ತಣ್ಣಗಾದ ಮೇಲೆ ಅಕ್ಕಿಯೊಂದಿಗೆ ತೊಳೆದು, 3 ಕಪ್ ನೀರು ಹಾಕಿ ಕುಕ್ಕರ್ ನಲ್ಲಿ ಬೇಯಿಸಿ.

ಕುಕ್ಕರ್ ತಣ್ಣಗಾದ ಮೇಲೆ, ಬೆಂದ ಅನ್ನ ಹಾಗೂ ಹೆಸರು ಬೇಳೆಯನ್ನು ಸಕ್ಕರೆ ಮತ್ತು ತೆಂಗಿನಕಾಯಿ ತುರಿಯೊಂದಿಗೆ ಬೆರೆಸಿ ಸಣ್ಣ ಉರಿ ಮೇಲಿಡಿ. ಗಟ್ಟಿಯಾಗುತ್ತ ಬಂದಂತೆ ಏಲಕ್ಕಿ ಪುಡಿ ಬೆರೆಸಿ. ತುಪ್ಪ ಹಚ್ಚಿದ ತಾಟಿಗೆ ವರ್ಗಾಯಿಸಿ ಸಟ್ಟುಗ(spatula)ದಿಂದ ಸಮಾನವಾಗಿ spread ಮಾಡಿ. ಸ್ವಲ್ಪ ತಣಿದ ಮೇಲೆ ಚೌಕಾಕಾರ ಅಥವ diamond ಆಕಾರದಲ್ಲಿ ಕತ್ತರಿಸಿ, ಬಾಳೆಹಣ್ಣು ಹಾಗೂ ಗೋಡಂಬಿಯೊಂದಿಗೆ ಅಲಂಕರಿಸಿ.(ಚಿತ್ರದಲ್ಲಿದ್ದ ಹಾಗೆ)
for pongal made with Jaggery : ಬೆಲ್ಲದ ಪೊಂಗಲ್ ಮಾಡಲು click on the link below

:-)

photo courtesey : ಮಾಲವಿಕ ಶೆಣೈ

January 14, 2010

Happy ಸಂಕ್ರಾಂತಿ


ನಮ್ಮ ಕಿರಾಣಿ(grocery) ಅಂಗಡಿಯವನು- ಶ್ರಿ ವೆಂಕಟೇಶ್ವರ buy and save , ಸಂಕ್ರಾಂತಿ ಹಬ್ಬಕ್ಕೆ ಒಂದು ವಾರ ಇದೆ ಎನ್ನುವಾಗ ಎಳ್ಳು, ಬೆಲ್ಲ, ಸಕ್ಕರೆ ಅಚ್ಚು , ಪುಟ್ಟ ಪುಟ್ಟ ಪ್ಲ್ಯಾಸ್ಟಿಕ್ ಡಬ್ಬಿಗಳನ್ನು ಅಂಗಡಿಯ ಮೆಟ್ಟಿಲಿನ ಮೇಲೆ ಒಂದು ಮರದ ಚಚೌಕಾರದ ಟೇಬಲ್ ಇಟ್ಟು ಮಾರುತ್ತಾನೆ. ನಾನು ಯಾವತ್ತು ಹಬ್ಬದ ಮುನ್ನಾ ದಿನ ಸಂಜೆ ಹೋಗಿ ಎಳ್ಳು ಬೆಲ್ಲ ಖರೀದಿಸುತ್ತೇನೆ. ಹಿಂದಿನ ವರ್ಷ ಹೀಗೆ ರಶ್ ನಲ್ಲಿ ನನ್ನ ಸರದಿಗಾಗಿ ನಾನು ನಿಹಾರಿಕಾ ಕಾಯ್ತಾ ಇದ್ವಿ. ನನ್ನ ಎದುರಿಗೆ ವಯಸ್ಸಾದ ಹೆಂಗಸೊಬ್ಬರು ನಿಂತಿದ್ದರು. ಉಟ್ಟಿದ ಸಿಲ್ಕ್ ಸೀರೆ ಸುಮಾರು wash ಕಂಡಿದ್ದು ಅಲ್ಲಲ್ಲಿ ಬಣ್ಣ ಮಾಸಿತ್ತು. ಕಿವಿಯಲ್ಲಿನ ವಜ್ರದ ಬೆಂಡೋಲೆ ಫಳ ಫಳ ಹೊಳೆಯುತ್ತಿತ್ತು. ಒಂದಾನೊಂದು ಕಾಲದಲ್ಲಿ ಆರ್ಥಿಕವಾಗಿ ಚೆನ್ನಾಗಿದ್ದಿರಬೇಕು. ಅವರು ಒಂದು ಪ್ಯಾಕೆಟ್ ಎಳ್ಳು ಬೆಲ್ಲ ಕೊಂಡು ಅದರ ಕ್ರಯ ಕೇಳಿದರು. ಅಂಗಡಿಯ ಹುಡುಗಿ 25 ರೂ ಅಂತ ಹೇಳಿದಳು. ಅವರು ಪರ್ಸ್ ತೆರೆದಾಗ ಅದರಲ್ಲಿದ್ದುದೇ 20 ರೂ ನೋಟು. ಅಂಗಡಿಯವನು ಚಿಕ್ಕ ಪ್ಯಾಕೆಟ್ ಇಡುವುದಿಲ್ಲ. ಸ್ವಲ್ಪ ಹೊತ್ತು ಆ ಅಜ್ಜಿ ಸುಮ್ಮನೇ ನಿಂತರು. ಆಮೇಲೆ ಪ್ಯಾಕೆಟ್ 20 ರೂ ಗೆ ಕೊಡುತ್ತಿಯಾ ಅಂತ ಆ ಹುಡುಗಿಗೆ ತುಂಬ ದೀನರಾಗಿ ಕೇಳಿದಾಗ ನನಗೆ ಕುರುಳು ಚುರ್ ಅಂದಿತು. ನಾನು ಹುಡುಗಿ ಬಳಿ ಸಾರಿ, ಅಜ್ಜಿಗೆ ಕೇಳಿಸದಹಾಗೆ- ಕೊಟ್ಟು ಬಿಡಿ 5 ರೂ ನಾನು ಕೊಡುತ್ತೇನೆ ಅಂದೆ. ಹುಡುಗಿ ಆ ಪ್ಯಾಕೆಟ್ ಆ ಅಜ್ಜಿಗೆ ಕೊಟ್ಟರು, ಅಜ್ಜಿ ಸಂತಸದಿಂದ ಆ ಹುಡುಗಿಗೆ ’ನಿನ್ನ ಹೊಟ್ಟೆ ತಣ್ಣಗಿರಲವ್ವ’ ಅಂತ ಹರಸಿ ಹೊರಟುಹೋದರು. ನನಗಂತೂ ಸಂಕ್ರಾಂತಿ ಹಬ್ಬ ಆಗಲೇ ಮಾಡಿದಷ್ಟು ಸಂಭ್ರಮ. ನೀಹಾರಿಕಾ ನನಗೆ ಅಲ್ಲೆ ಒಂದು hug ಸಹ ಕೊಟ್ಟಳು. ನನ್ನ ಖರೀದಿ ಎಲ್ಲ ಮುಗಿಸಿ ನಾನು ಮನೆಗೆ ಬಂದೆ.

ಮರು ದಿನ ಬೇರೆ ಎನೋ ಸಾಮಾನು ಬೇಕಾದ್ದರಿಂದ ಪುನಃ buy & save ಗೆ ಹೋದೆ. ಅಂಗಡಿ ಮಾಲೀಕ ’ಮೇಡಂ, ನಿನ್ನೆ ನೀವು ಐದು ರೂಪಾಯಿ ಆ ಅಜ್ಜಿ ಪರವಾಗಿ ಕೊಟ್ಟಿದ್ದನ್ನು ನಾನು ನೋಡ್ದೆ. ನನಗೆ ರಾತ್ರಿ ಇಡೀ ನಿದ್ದೆ ಬರಲಿಲ್ಲ, ಈ ಕೆಲಸ ನಾನೇ ಮಾಡಬಹುದಿತ್ತು. 5 ರೂ ನಿಂದ ನಾನೇನೂ ಬಡವನಾಗ್ತಿರಲಿಲ್ಲ. ತೆಗೊಳ್ಳಿ ಈ 5 ರೂ., ತಪ್ಪಾಗಿ ಭಾವಿಸಬೇಡಿ. ನನಗೆ ಸಮಾಧಾನ ಆಗುತ್ತೆ’ ಅಂತ ಹೇಳಿದರು.
ಮಜವಾಗಿತ್ತಲ್ಲವ ನನ್ನ ಹಬ್ಬ???
:-)
ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಗಳು

January 12, 2010

ಬಾಲ ಗಂಗಾಧರ ತಿಲಕ್ (1856-1920)

’ಸ್ವರಾಜ್ಯ ಹಾ ಮಾಝಾ ಜನ್ಮ ಸಿದ್ಧ ಹಕ್ಕ ಆಹೆ ಆಣಿ ತೋ ಮಿ ಮಿಳವಣಾರಚ”- 'ಸ್ವರಾಜ್ಯ ನನ್ನ ಜನ್ಮ ಸಿದ್ದ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ' ಎಂಬ ಘೋಷಣೆ /ಘರ್ಜನೆ ಯಾರಿಗೆ ತಾನೆ ಗೊತ್ತಿಲ್ಲ?? ಇತಿಹಾಸ ಓದಿದ ಎಲ್ಲರಿಗೂ ಅವರು ಗೊತ್ತು ಹಾಗೂ ವೈಕೀಪಿಡಿಯಾದಲ್ಲೂ ಅವರ ಬಗ್ಗೆ ಸಾಕಷ್ಟು ಮಾಹಿತಿ ಸಿಗುತ್ತದೆ.
ಆದರೂ..................
ಮಕ್ಕಳ christmas vacation ಗೆ ನಾವು ಗಣಪತಿ ಪುಲೇ (ಮಹಾರಾಷ್ಟ್ರ) ಗೆ ಹೋಗಿದ್ದೆವು. ದಾರಿಯಲ್ಲಿ ನಮಗೆ ರತ್ನಾಗಿರಿಯಲ್ಲಿರುವ ಲೋಕಮಾನ್ಯ ಬಾಲಗಂಗಾಧರ ಟಿಳಕ್ ರ ಮನೆ ನೋಡುವ ಅವಕಾಶ ಒದಗಿ ಬಂತು. ಇಲ್ಲಿವೆ ಅವರು ಹುಟ್ಟಿ ಬೆಳೆದ ಮನೆಯ ಕೆಲವು ಚಿತ್ರಗಳು. 300 ವರ್ಷದ ಹಳೆಯ ಮನೆಯನ್ನು ಪುರಾತತ್ವ ಇಲಾಖೆಯವರು ಅದರ ಮೂಲ facade ಹಾಳು ಮಾಡದೆ ನವೀಕರಿಸಿದೆ.
ಮರಾಠಿಯಲ್ಲಿ -ಲೋಕಮಾನ್ಯ ಬಾಳ್ ಗಂಗಾಧರ್ ಟಿಳಕ್. ಬಾಳ್ ಅಂದ್ರೆ ಮಗು. ಲೋಕಮಾನ್ಯ ಅಂದರೆ ಜನರಿಂದ ಮನ್ನಣೆ ಪಡೆದವರು.

ನಿಮಗಿದು ಗೊತ್ತಾ?

ಒಂದು ಸಲ ಮೇಸ್ಟ್ರು ತರಗತಿಗೆ ಬರಲು ವಿಳಂಬವಾಯಿತು. ಮಕ್ಕಳೆಲ್ಲ ಕಡಲೆಕಾಯಿ ತಿಂದು ಅದರ ಸಿಪ್ಪೆಯನ್ನು, ತರಗತಿ ತುಂಬ ಅಲ್ಲಲ್ಲಿ ಹಾಕಿದರು. ಮೇಸ್ಟ್ರು ತರಗತಿಗೆ ಬರಲು ಸಹಜವಾಗಿ ಅವರಿಗೆ ಸಿಟ್ಟು ಬಂದಿತು. ಯಾವೊಬ್ಬ ವಿದ್ಯಾರ್ಥಿ ಶೇಂಗಾ ಸಿಪ್ಪೆಯನ್ನು ತಾನು ಹಾಕಿದ್ದು ಎಂದು ಒಪ್ಪಿಕೊಳ್ಳಲು ಸಿದ್ದರಿರಲಿಲ್ಲ. ಮೇಸ್ಟ್ರು ಎಲ್ಲರಿಗೂ ಛಡಿ ಏಟು ಕೊಡುತ್ತ ಬಂದರು. ತಿಲಕ ರ ಬಳಿ ಬಂದಾಗ ಅವರು ತಮ್ಮ ಕೈ ಮುಂದೆ ಮಾಡಲು ನಿರಾಕರಿಸಿದರು. ತಾನು ತಪ್ಪು ಮಾಡಿಲ್ಲ ಅದಕ್ಕೆ ನಾನು ಏಟಿಗೆ ಅರ್ಹನಲ್ಲವೆಂಬುದೆ ಅವರ ವಾದ. ಹೋಗಲಿ ಬಿಡು, ತರಗತಿಯನ್ನು ಗಲೀಜು ಮಾಡಿದ ಹುಡುಗರ ಹೆಸರಾದರೂ ಹೇಳು ಅಂತ ಗುರುಗಳು ಹೇಳಿದಾಗ ಅದನ್ನೂ ಒಪ್ಪಲಿಲ್ಲ.........


16 ವರ್ಷ ವಯಸ್ಸಿನ ತಿಲಕ್ ರಿಗೆ 10 ವರ್ಷದ ತಾಪೀಬಾಯಿ ಜತೆ ವಿವಾಹವಾಯಿತು. ತಿಲಕರು ಸಣಕಲಾದರೆ ಅವರ ಪತ್ನಿ ಮೈ ಕೈ ತುಂಬಿ ದುಂಡಗಿದ್ದರು. ಅವರ ಮಿತ್ರರೆಲ್ಲ ಅವರನ್ನು ಗೇಲಿ ಮಾಡುತ್ತಿದ್ದರು. ಇದರಿಂದ ಬೇಸತ್ತ ತಿಲಕ್ , ಗರಡಿ ಮನೆಗೆ ಹೋಗಲಾರಂಭಿಸಿದರು. ಕುಸ್ತಿ, ಮಲ್ಲಕಂಭ, ಈಜು,rowing, ಊಟ ತಿಂಡಿಯ ಕಡೆ ವಿಶೇಷ ಗಮನಕೊಟ್ಟು ಒಂದೇ ವರ್ಷದಲ್ಲಿ ದೃಢಕಾಯರಾದರು. ಆದರೆ ಇದರಿಂದ ಓದಿನ ಕಡೆ ಅವರ ಲಕ್ಷ್ಯ ಕಡಿಮೆಯಾಗಿ ಒಂದು ವರ್ಷ ನಪಾಸಾದರು. ಅವರ ವಾದ: ಒಂದು ವರ್ಷ ಹೋದರೇನಾಯಿತು, ಮುಂದಿನ ವರ್ಷಗಳಲ್ಲಿ ನನ್ನ ಅರೋಗ್ಯ ಕಾಪಾಡುವಲ್ಲಿ ಇದು ನನಗೆ ಸಹಾಯಕವಾಯಿತು.
ಲಾಲಾ ಲಜಪತ್ ರಯ್ ,ಬಾಲ ಗಂಗಾಧರ್ ತಿಲಕ್, ಬಿಪಿನ್ ಚಂದ್ರ ಪಾಲ್ - ಇವರು ಮೂವರು ’ಸ್ವದೇಶಿ” ಚಳುವಳಿಯ ವಕ್ತಾರರು. ಇವರನ್ನು ’ಲಾಲ್-ಬಾಲ್-ಪಾಲ್’ ಎಂದೇ ಸಂಭೋದಿಸಲಾಗುತಿತ್ತು
ಮನೆಯ ಒಳಗಡೆ ಫೋಟೊ ತೆಗೆಯುವುದು ನಿಶೇಧಿಸ ಲಾಗಿತ್ತು.

:-)