February 28, 2012

ABC , ದೇಶಕಾಲ ...ಮತ್ತಿನ್ನೆನೋ....

Tea and book any time!!

ನಾವು ತೀರ್ಥಹಳ್ಳಿ ಕೊಪ್ಪ ದಲ್ಲಿದ್ದಾಗ ತಪ್ಪದೆ ವಾರಾಂತ್ಯದಲ್ಲಿ ಬೈಕ್ ನಲ್ಲಿ ಎಲ್ಲಾದರೂ ಹೋಗುತ್ತಿದ್ದೆವು.. ಶ್ರೀಕಾಂತ್ ಶನಿವಾರ ಬೆಳಿಗ್ಗೆ ಅವರ ಬುಲೆಟ್ ಬೈಕ್ ನ್ನು ಸರ್ವಿಸಿಂಗ್ ಗೆ ಕೊಟ್ಟು ಬರುತ್ತಿದ್ದರು. ಶನಿವಾರ ಮಧ್ಯಾಹ್ನ (ಈಗಿನ ಹಾಗೆ ಕೆಲಸದ ಒತ್ತಡ ಇರುತ್ತಿರಲಿಲ್ಲ) ಬೈಕ್ ಇರುವ ಫ್ರೆಂಡ್ಸ್ ಎಲ್ಲ ಸೇರಿ ಬೈಕಿಂಕ್, ಹೈಕಿಂಗ್/ ಚಾರಣ ಅಂತೆಲ್ಲ ಹೋಗಿ ಬಿಡ್ತಿದ್ವಿ. ಶ್ರೀಕಾಂತ ಸ್ನೇಹಿತರ ವರ್ಗದಲ್ಲಿ ಮದುವೆಯಾದ ಜೋಡಿ ಅಂದ್ರೆ ನಾನು-ಶ್ರೀಕಾಂತ. ನಾವು ಒಟ್ಟಿಗೆ 8 ಮಂದಿ ಅಂದ್ರೆ ನಾಲ್ಕು ಬೈಕ್....
ಎಲ್ಲರ ತಿಂಡಿ/ಊಟದ ಜವಾಬ್ದಾರಿ ನಂದು. ಬೆಳಿಗ್ಗೆ ಎರಡು ಗಂಟೆಗೆಲ್ಲ ಎದ್ದು ನಾನು ಅಡಿಗೆ / ತಿಂಡಿ ಮಾಡುತ್ತಿದ್ದೆ. ಈಗಿನ ಹಾಗೆ ಮಿಕ್ಸಿ ಇರಲಿಲ್ಲ. ಎಲ್ಲದಕ್ಕೂ ರುಬ್ಬೋ ಕಲ್ಲೇ ಗತಿ. ಕೆಲ ಸಮಯದ ನಂತರ ಮಿಕ್ಸಿ ತೆಗೆದುಕೊಂಡೆ ಯಾದರೂ ಕರೆಂಟ್ ಇರುತ್ತಿರಲಿಲ್ಲ. ಇಲ್ಲಿ ಬೆಂಗಳೂರಿಗೂ ಬಂದಿದೆ ನನ್ನ ಸಾಥಿ ರುಬ್ಬುವ ಕಲ್ಲು. :-) ನಾನು ಹೆಚ್ಚಾಗಿ ಕೊಟ್ಟೆ ಕಡುಬು ಮಾಡುತ್ತಿದ್ದೆ. ಅದು ಬಿಟ್ಟರೆ ಬಾಳೆ ಎಲೆ ಕಡುಬು.( ಅಪರೂಪಕ್ಕೆ ಚಪಾತಿ, ಚಿತ್ರ್ರಾನ್ನ)...ಅದಕ್ಕೆ ಗಟ್ಟಿ ಚಟ್ನಿ., ಅದರ ಜತೆ ಬ್ರೆಡ್ ಜ್ಯಾಮ್, ಬಿಸ್ಕತ್- ಬೆಣ್ಣೆ..ಉಪ್ಪಿನಕಾಯಿ, ಸಾಕಷ್ಟು ಕುಡಿಯುವ ನೀರು...ಪ್ರಥಮ ಚಿಕಿತ್ಸಾಡಬ್ಬಿ ಟಾರ್ಚ್ ಗೆ ಸೆಲ್ಲ್ (ದೊಡ್ಡ hunting torch ಇತ್ತು. ಸಕಥ್ powerful..) , ಜಮಖಾನೆ, ಹಳೆಯ ವಾರ್ತಾಪತ್ರಿಕೆಗಳು..etc etc.ಮುಂತಾದವು ಎಲ್ಲ ನನ್ನ ಡಿಪಾರ್ಟ್ಮೆಂಟ್.  ದೊಡ್ಡದೊಂದು ಆರ್ಮಿ ರಕ್ ಸ್ಯಾಕ್ ಒಂದಿತ್ತು. bachelor ಹುಡುಗರೆಲ್ಲ ಆರಾಮಾಗಿ ಕೈ ಬೀಸಿ ಬರುತ್ತಾ ಇದ್ದರು.:-) 
ನನ್ನದಿನ್ನೂ ಡಿಗ್ರಿ ಪರೀಕ್ಷೆ ಮುಗಿದಿರಲಿಲ್ಲ. ಆದುದರಿಂದ ನನ್ನ ವಾರದ ದಿನಚರಿ ಹೀಗಿರುತ್ತಿತ್ತು. ಶ್ರೀಕಾಂತ್ ಬೆಳೆಗ್ಗೆ 10.00 ಗಂಟೆಗೆಲ್ಲ ಮನೆ ಬಿಟ್ಟರೆ ಬರುತ್ತಿದ್ದಿದ್ದೆ ರಾತ್ರಿ 9.00 ರ ನಂತರ, ಬ್ಯಾಂಕಿನ field officer ಹುದ್ದೆಯಲ್ಲಿದ್ದರಿಂದ ವಾರದಲ್ಲಿ ಮೂರು ದಿನ ಹಳ್ಳಿಗಳಿಗೆ visit. ಆಗ ಬರುವುದು ರಾತ್ರಿ ಎರಡು ಗಂಟೆ ಆಗಿದ್ದೂ ಇದೆ.
ನಾನೋ ಮುಂಬೈನಿಂದ direct ತೀರ್ಥಹಳ್ಳಿಗೆ ಬಂದಿದ್ದು. ಸ್ವಲ್ಪ ಸಮಯ ಕೂಡು ಕುಟುಂಬದ ಜತೆ ಇದ್ದುದರಿಂದ ನನಗೆ ಅಷ್ಟೊಂದು ಕಷ್ಟ ಅನಿಸಿರಲಿಲ್ಲ. ಆದರೆ ಕೊಪ್ಪಕ್ಕೆ ಹೋದ ಮೇಲೆ ನಾವಿಬ್ಬರೆ. ಮನೆ ಪೇಟೆಯಿಂದ ಸುಮಾರು ದೂರ. ಬೆಳಿಗ್ಗೆ ಶ್ರೀಕಾಂತ ಹೋದ ನಂತರ ಮನೆಯ ಸಾಫ್ ಸಫಾಯಾ...ಕನ್ನಡ ಬರುತ್ತಿರಲಿಲ್ಲವಾದ್ದರಿಂದ ನಾನು ಮನೆಯಿಂದ ಹೊರಗೂ ಹೋಗುತ್ತಿರಲಿಲ್ಲ. ಮಧ್ಯಾಹ್ನ ಅಡಿಗೆ ಮಾಡುತ್ತಿರಲಿಲ್ಲ. ರಾತ್ರಿನೆ  ಅಡುಗೆ.ಕ್ಯಾಸೆಟ್ ಪ್ಲೇಯರ್ ನಲ್ಲಿ ಹಳೆಯ ಹಿಂದಿ ಹಾಡುಗಳನ್ನು ಹಾಕಿಕೊಂಡು ನನ್ನ ಮನೆ ಕೆಲಸ ಎಲ್ಲ ಪೋರೈಸಿ, ನಾನು ಓದಲು ಕುಳಿತುಕೊಳ್ಳುತ್ತಿದೆ. ಆಗಾಗ ಕರೆಂಟ್ ಹೋಗುತ್ತಿತ್ತು. ಮಳೆಗಾಲದಲ್ಲಂತೂ ಒಂದು ಸಲ 15  ದಿನ ಕರೆಂಟ್ ಇರಲಿಲ್ಲ. ಆಗಲೇ ನಾನು ಬಾವಿಯಿಂದ ನೀರು ಸೇದಲು ಕಲಿತಿದ್ದು. ಮುಂಬೈ ನಲ್ಲಿ ರಾತ್ರಿ ಅನ್ನುವುದೇ ಇರುತ್ತಿರಲಿಲ್ಲ. ಎರಡು ಗಂಟೆ ತನಕ ವಾಹನಗಳು ಓಡಾಡುತ್ತಲೇ ಇರುತ್ತಿದವು , ಆಮೇಲೆ ಬಿಲ್ಡಿಂಗ್ ಕೆಳಗಡೆ ಇರುವ ಹೋಟಲ್ ನ ಸದ್ದು ಗದ್ದಲ್...ರಸ್ತೆಯ ಬೀದಿ ದೀಪ ಗಳಿಂದ ಮನೆಯೊಳಗೆ ರಾತ್ರಿಯೂ ಬೆಳಕು ಕಂಡು  ಬೆಳೆದಿದ್ದ ನಾನು,ಕೊಪ್ಪದ ಕತ್ತಲೆಗೆ  ಹೆದರಿದ್ದೆ. ಕರೆಂಟ್ ಹೋದರಂತೂ ಮುಗಿಯಿತು. ಮೊದಲು ಕೆಲವು ದಿನ ಬಾಗಿಲ ಬಳಿ ಕೂತು ಅತ್ತಿದ್ದೆ. ಕರೆಂಟ್ ಹೋದಾಗ ಕ್ಯಾಂಡಲ್ ಹಚ್ಚಿಟ್ಟು, ಟಾರ್ಚ್ ಬಗಲಲ್ಲಿಟ್ಟು ಒಂದು ಕೋಲು ಹಿಡಿದುಕೊಂಡು ರಾತ್ರಿಯ ಗವ್ ಎನ್ನುವ silence ಗೆ ಶ್ರೀಕಾಂತ ಬುಲೆಟ್ ಬೈಕ್ ನ ಡಗ್ ಡಗ್ ಸದ್ದಿಗೆ ನನ್ನ ಕಿವಿ tuned ಆಗಿರುತ್ತಿತ್ತು, ಅಷ್ಟರವರೆಗೆ ಕ್ರೀಮಿಕೀಟಗಳು ಹೊರಡಿಸುವ ಸದ್ದು, ನನ್ನ ಹೃದಯದ ಲಬ್ ಡಬ್ ಕೇಳುತ್ತ ಕೂರುತ್ತಿದ್ದೆ..ಅದರ ಮಧ್ಯೆ ಬಳಿಯಲ್ಲೆ ಇರುವ ಕಬ್ಬಿನ ತೋಟದಿಂದ ಊಳಿಡುವ ನರಿ ನನ್ನ ಅಳುವನ್ನು ಹೆಚ್ಚಿಸುತ್ತಿದ್ದುವು...ಕ್ರಮೇಣ ನನಗೆ ನಾನೆ ಸಮಾಧಾನ ಧೈರ್ಯ ಹೇಳಿಕೊಂಡೆ...ಹೆದರಿದರೆ ಏನೂ ಉಪಯೋಗವಿಲ್ಲ. ಏನಾಗುತ್ತೆ ಮಹಾ ಅಂತ...
ವಾರಾಂತ್ಯಕ್ಕೆ ಜೀವ ಹಾತೊರೆಯುತ್ತಿತ್ತು. ಕೊಪ್ಪದಲ್ಲ್ಲಿದ್ದ ಐದು ವರ್ಷ ಪ್ರತೀ ಶನಿವಾರ ಭಾನುವಾರ ನಾವು ಬೈಕ್ ನಲ್ಲಿ ಹೋಗುತ್ತಿದ್ದೆವು. ಹೀಗೆ ಒಂದುಸಲ ನ್ಯೂಸ್ ಪೇಪರ್ ನಲ್ಲಿ ಜಿ.ಎನ್. ಅಶೋಕವರ್ಧನ್ ಬರೆದ  ’ಚಕ್ರವರ್ತಿಗಳು’ ಅನ್ನುವ ಪುಸ್ತಕದ ವಿಮರ್ಶೆ ಬಂದಿತ್ತು. ನಾನು ಫೈನಲ್ ಯಿಯರ್ ಪದವಿ ಪರೀಕ್ಷೆ  ಕೊಟ್ಟು ಮುಂಬೈನಿಂದ ಬಂದಿದ್ದಷ್ಟೆ.. ಅರೇ ನಮ್ಮ ಹಾಗೆ ಬೈಕರ್ಸ್ ಈ ಪುಸ್ತಕ ನಾವು ಕೊಳ್ಳಲೇ ಬೇಕು. ಈ ಸಲ ಮಂಗಳೂರು-ಉಡುಪಿ ಪ್ರಯಾಣ ಎಂದು ಫಿಕ್ಸ್ ಆಯಿತು. ಸರಿ ನನ್ನ ಯಥಾ ಪ್ರಕಾರ ಟ್ರಾವೆಲ್ ಪ್ಲ್ಯಾನ್ಸ್ ಶುರು. 
ಬೆಳಿಗ್ಗೆ 6.00 ಗಂಟೆಗೆ ಮನೆ ಬಿಟ್ಟೆವು. ಟ್ರಾಫಿಕ್ ಅನ್ನುವುದೇ ಇರುತ್ತಿರಲಿಲ್ಲವಾದ್ದರಿಂದ ಸ್ವಲ್ಪ ವೇಗವಾಗೆ ಹೊರಟು ಬೇಗ ಮಂಗಳೂರು ತಲುಪಿದೆವು. ಮಧ್ಯದಲ್ಲಿ ಸ್ವಲ್ಪ ಹೊತ್ತು  ಆಗುಂಬೆಯಲ್ಲಿ ಬ್ರೇಕ್ ಕೂಡ ತೆಗೆದುಕೊಂಡೆವು. ಅತ್ರಿ ಬುಕ್ ಸೆಂಟರ್  (ABC)ಬಳಿ ಹೋದಾಗ ಅದು ಇನ್ನೂ ತೆರೆದಿರಲಿಲ್ಲ. ನಾವು ಅಲ್ಲೆ ಕಾಯುತ್ತ ನಿಂತುಕೊಂಡೆವು. ಪುಸ್ತಕದ ಅಂಗಡಿ ಓಪನ್ ಆದ ಕೂಡಲೆ ನಾವು ಅಷ್ಟೂ ಜನ ಒಳಗೆ. ನನಗೆ ಬೇಕಾದ ಪುಸ್ತಕಗಳನ್ನೆಲ್ಲ ನಾನು ಮುಂಬೈ ನ Strand ಬುಕ್ಸ್ ನಿಂದ ಹೊತ್ತು ತರುತ್ತಿದ್ದೆ. ಕನ್ನಡ ನನಗೆ ಬರುತ್ತಿರಲಿಲ್ಲವಾದ್ದರಿಂದ ನಾನು ಸುಮ್ಮನೆ ಕೈ ಗೆ ಸಿಕ್ಕ ಪುಸ್ತಕ ತಿರುವಿ ಹಾಕುತ್ತ ಇದ್ದೆ. ಹಸಿವೆ, ಪ್ರಯಾಣದ ಆಯಾಸ ಅಷ್ಟು ಮಾತ್ರವಲ್ಲ i was pregnant ಕೂಡ. ಅಷ್ಟರಲ್ಲಿ ಕೋಮಾರ್ ಎಂಬ ಮಿತ್ರರು...ಬಲು joker ಅವರು ನಾನು ಸುಮ್ಮನಿದ್ದುದನ್ನು ನೋಡಿ ಏನೊ ಜೋಕ್ ಮಾಡಿದರು.  ನನಗೆ ನಗು ಬಂದು ನಾನು ಜೋರಾಗಿ ನಕ್ಕಿದ್ದೆ. ಆಗ ಪುಸ್ತಕದ  ಅಂಗಡಿಯ ಮಾಲೀಕ ಸಿಡುಕಿ ಜೋರಾಗಿ serious ಇದ್ದರೆ ಮಾತ್ರ ಇಲ್ಲಿ ಬರಬೇಕು..ಅಂತ ಬೈದರು. ನಾನೋ ಕಕ್ಕಾಬಿಕ್ಕಿ. ನನ್ನ 19 ವರ್ಷದಲ್ಲಿ ಯಾರೂ ನನಗೆ ಗದರಿದವರೇ ಇಲ್ಲ. ಆಗಲೇ ಸರಿಯಾಗಿ ಅವರ ಮುಖ ನೋಡಿದ್ದು ನಾನು. ನಮ್ಮ ರಾಯರು ಎಲ್ಲೋ ಪುಸ್ತಕಗಳ ಮಧ್ಯ ಹುದುಗಿಹೋಗಿದ್ದರು. ಅವರು ಬೈದಿದಕ್ಕೆ ನನಗೆ ಸಿಟ್ಟು ಬಂದು ನಾನು ಹೊರಗೆ ಬಂದು ನಿಂತೆ. ಈ rude ಮೀಸೆ ಮಾಮನ ಹತ್ತಿರ ಯಾರು ಪುಸ್ತಕ ತೆಗೋತಾರೆ ಅಂತ ಅನ್ನಿಸಿತ್ತು. ಅಷ್ಟರಲ್ಲೇ ಶ್ರೀಕಾಂತ ಅವರು ಬರೆದಿದ್ದ ಪುಸ್ತಕ ಜತೆ ಇನ್ನೂ ಹಲವಾರು ಪುಸ್ತಕಗಳನ್ನು ಕೊಂಡು ಅವರ ಬಳಿ ಲೋಕಾಭಿರಾಮವಾಗಿ ಮಾತನಾಡುತ್ತ, ನಮ್ಮನ್ನು ಇನ್ನೂ ಸ್ವಲ್ಪ ಹೊತ್ತು ಕಾಯಿಸಿದರು. ನಾನು ಹೊರಗಡೆ ನಿಂತು ಇನ್ನು ಈ ಅಂಗಡಿಗೆ ಕಾಲಿಡಲ್ಲ ಅಂತ promise ಮಾಡಿದೆ. ಆ ಮೇಲೆ ನಾವು ಉಡುಪಿ, ದೇವಸ್ಥಾನ,St. Marys  ಸಮುದ್ರ ಅಂತೆಲ್ಲ ಹೋಗಿ ವಾಪಸ್ ಭಾನುವಾರ ಸಂಜೆ ಮನೆಗೆ ಬಂದ್ವಿ.
ಅಷ್ಟರಲ್ಲೇ ನಮಗೆ ಬೆಳ್ತಂಗಡಿಗೆ ವರ್ಗವಾಯಿತು. ಅಲ್ಲಿಂದ ನಾವು ಪ್ರತಿ ವಾರಾಂತ್ಯ ಮಂಗಳೂರಿಗೆ ಹೋಗಿ ಬರುವುದು ಶುರುವಾಯಿತು. ನಮ್ಮ ನೆಂಟರ ಮನೆಗೆ ಹೋಗುವಾಗಲೆಲ್ಲ ಅತ್ರಿ ಬುಕ್ ಸೆಂಟರ್ ಕಾಣಿಸುತ್ತಿತ್ತು. ಅದರಲ್ಲಿ ಪುಸ್ತಕದ ಅಟ್ಟಿ ಬೆಳೆಯುವುದು ಕಾಣಿಸುತ್ತಿತ್ತು. ನಾನು ಮಾತ್ರ ಪುನ: ಆ ಶಾಪ್ ಗೆ ಕಾಲಿಡಲಿಲ್ಲ.  ಈಗ childish ಅನ್ನಿಸಿ ನಗು ಬರುತ್ತಿದೆ. ಅದು ಮುಚ್ಚುತ್ತಿದೆ ಅಂದಾಗ ಎಲ್ಲ ನೆನಪು ಬಂತು. ಅಶೋಕವರ್ಧನ್ ಅವರ ತಂದೆಯವರು GTN ಅವರು ಬರೆದ ಎರಡು ಪುಸ್ತಕ ನನ್ನ ಬಳಿ ಇವೆ. ಅದರಲ್ಲಿ NCC ದಿನಗಳು ನನಗೆ ತುಂಬ ಇಷ್ಟ. ನನ್ನ ಲೈಬ್ರರಿಯಲ್ಲಿವೆ. ಮತ್ತು ಅಷೋಕವರ್ಧನ್ ಅವರು ಬರೆದ ’ಚಕ್ರವರ್ತಿಗಳು’ ಕಪಾಟಿನಲ್ಲಿ ಎದುರಿಗೇ ಇದೆ. ಹಾಗಾಗಿ ಯಾವತ್ತು ಅವರನ್ನ ಅವರ ಮುಖವನ್ನು ಮರೆತಿಲ್ಲ. :-)
ಪ್ಲಾಸ್ಟಿಕ್ ಚೀಲ ಬಳಸದೇ ಪೇಪರ್ ನಲ್ಲಿ ಪುಸ್ತಕ ಕಟ್ಟಿ ಕೊಡುತ್ತಿದ್ದಾರೆ ಅಂತ ಕೇಳಿದಾಗ ಅವರ ಬಗ್ಗೆ ಒಂದುತರಹ ಹೆಮ್ಮೆ ಎನಿಸಿದ್ದು ನಿಜ....ಅವರ ಬಗ್ಗೆ ಅವರ ಪುಸ್ತ್ಕಕ ದ collection ಬಗ್ಗೆ ಜನರು ಒಳ್ಳೆಯ ಮಾತನಾಡಿದ್ದಾಗಲೆಲ್ಲ...ಹೂಂ ಬಹುಶ: ಆ ದಿನ ನನ್ನ ಟೈಮ್ ಸರಿಯಿರಲಿಲ್ಲ ಅಂದುಕೊಳ್ಳುತ್ತಿದ್ದೆ. ಹಾಗೂ ಆಗುತ್ತೆಯಲ್ಲವಾ ಕೆಲವೊಮ್ಮೆ?  ಅಬ್ಬಾ ಎಷ್ಟೊಂದು ವರ್ಷಗಳೆ ಕಳೆದುಹೋದವು. ಈಗ ನನ್ನ 42 ವಯಸ್ಸಿನಲ್ಲಿ ಇದನ್ನೆಲ್ಲ ನೆನಪು ಮಾಡಿಕೊಳ್ತಾ ಶ್ರೀಕಾಂತ ಜತೆ  ನಿಮ್ಮ ಜತೆ ಶೇರ್ ಮಾಡಿಕೊಳ್ಳ್ಳುತ್ತ  ಇದ್ದೇನೆ.


ಇನ್ನೂ ದೇಶಕಾಲ ಪುಸ್ತಕದ ಬಗ್ಗೆ ನನಗೆ ತಿಳಿದದ್ದೆ ಅದರ ಐದನೇ ವರ್ಷದ ಹುಟ್ಟಿದ ಹಬ್ಬ ಆಚರಿಸಿದಾಗ. ಮಿತ್ರ ಅಪಾರ (ರಘು) ನನಗೆ ಆ ಪುಸ್ತಕ ಕೊಟ್ಟಿದ್ದು. ಎಷ್ಟು ಇಷ್ಟ ಆಯಿತೆಂದರೆ ಹಳೆಯ ಕೆಲವು ಪ್ರತಿಗಳು ಸಪ್ನಾ ಹಾಗು ಅಂಕಿತದಲ್ಲಿ ಸಿಕ್ಕಿದ್ದು ಎಲ್ಲ ತೆಗೆದುಕೊಂಡು ಬಂದಿದ್ದೆ. ಉಳಿದದ್ದು  ನಾಗರಾಜ ರಾವ್ ಜವಳಿಯವರ ಬಳಿ borrow ಮಾಡಿ ಓದುವುದೆಂದು ಆಯಿತು. ಹೊಸ ಪುಸ್ತ್ಕಕ ತಂದಾಗಲೆಲ್ಲ ಮೊದಲು ನಾನು ಆ ಪುಸ್ತಕದ ಮುಖಪುಟ ನೇವರಿಸುತ್ತೇನೆ. ಆಮೇಲೆ ಹಿಂಬದಿ ಪುಟ ಓದುತ್ತೇನೆ. ಆ ಮೇಲೆ ಮೊದಲಿನಿಂದ ಕೊನೆಯ ತನಕ ಒಂದೂ ಅಕ್ಷ ರ ಬಿಡದೆ ಓದುತ್ತೇನೆ.  ವಿವೇಕ ಶಾನುಭಾಗ್ ಅವರ ಆಪ್ತ ಮುನ್ನುಡಿ ಓದಿಯೇ ನನಗೆ ಅವರು ಆತ್ಮೀಯ ರಾಗಿಬಿಟ್ಟಿದ್ದಾರೆ.ಅವರ ಪ್ರತೀ ಪುಸ್ತಕ ವಿಶೇಷವಾಗಿವೆ...ಮುಖಪುಟದಿಂದ ಹಿಡಿದು, ವಿಷಯದ ವೈವಿಧ್ಯತೆ, ಒಳಗಿನ illustrations, ಪುಟಗಳ (pages) quality...etc ಈಗ ಅವರು ಕೆಲ ಸಮಯದ ಬ್ರೇಕ್ ಅಂದಾಗ ಸಿಕ್ಕಾಪಟ್ಟೆ ಬೇಜಾರಾಗಿದೆ.:-(
ದೇಶಕಾಲ 28 ನೆ ಸಂಚಿಕೆಯಲ್ಲಿ ನನಗೆ ಇಷ್ಟವಾದ ಕತೆಗಳು in the order of my liking i have numbered them 1 to 8
1.ಮೋಹನ ಸ್ವಾಮಿ – ಷಣ್ಮುಖ ಎಸ್
2.ಫೋಟೋ ದೊಳಗೆ ಸಿಕ್ಕಿಹಾಕಿಕೊಂಡ ಮುಖ – ಮೌನೇಶ ಬಡಿಗೇರ್
3.ಒಳಾಂಗಣ – ಜಯಂತ ಕಾಯ್ಕಿಣಿ
4.ಮತ್ತೆ ಹರಿದ ದೇವರು – ಎಚ್ ಎಸ್ ನಾಗವೇಣಿ
5.ಬೆಳಗೂ ಅದೆ, ಕತ್ತಲೆಯೂ ಅದೆ – ಅಮರೇಶ ನುಗಡೋಣಿ
6.ಸಂಪೂರ್ಣ ಪಾರಿಜಾತ – ಅಬ್ದುಲ್ ರಶೀದ್
7.ವಿಚಿತ್ರಕತೆ – ವಿವೇಕ ಶಾನಭಾಗ
8.ಮುಂದುವರೆಯುವುದು – ಎಮ್. ಎಸ್. ಶ್ರೀರಾಮ್. 

ಈ ಕತೆಗಳು ಈ order ನಲ್ಲಿ ಯಾಕಿಷ್ಟ ವಾದವು ಎನ್ನುವ elaboration , ಮುಂದಿನ ಪೋಸ್ಟ್ ನಲ್ಲಿ.........
ಪ್ರತಿ ಸಲ ದೇಶಕಾಲದ ಬಗ್ಗೆ ಬ್ಲಾಗ್ ಅಥವ ಫೇಸ್ ಬುಕ್ ನಲ್ಲಿ ಹಾಕಿದ್ದಾಗಲೆಲ್ಲ ನನಗೆ ಕೆಲವು ಮೈಲ್ ಗಳು ,’ಏನು ನೀವು ದೇಶಕಾಲ advertisement ನ ಹೊಣೆ ಹೊತ್ತಿದ್ದೀರಾ’ ಅಂತ...ಇನ್ನೂ ಕೆಲವರು ಅವರು ಕೊಂಕಣಿಯವರು ಅಂತ ಅದಕ್ಕೆpartiality  ಎಂದು ಅಪಾದಿಸಿದವರು ಇದ್ದಾರೆ.
ಅವರಿಗೆ ನನ್ನ ಉತ್ತರ : ಪುಸ್ತಕ ಚೆನ್ನಾಗಿದ್ದರೆ ಅದರ advertisement ಮಾಡಲು ನನಗೆ ಎಲ್ಲ ಹಕ್ಕು ಇದೆ, ಮತ್ತು ಕೊಂಕಣಿಯವರು ಅಂದಿದಕ್ಕೆ, ಯು.ಆರ್ ಅನಂತಮೂರ್ತಿ, ಎಸ್. ಎಲ್ ಭೈರಪ್ಪ, ಶ್ರೀನಿವಾಸ ವೈದ್ಯ, ವಸುಧೇಂದ್ರ, ವೈದೇಹಿ ಅವರ ಬರಹ ಕೂಡ ಇಷ್ಟ ಆಗುತ್ತೆ ಅಂತ ಹಾಕಿದ್ದೇನಲ್ಲವಾ? ಅಂತಲೂ ಕೇಳಿದ್ದೇನೆ. -’ಅದು ನಿಜಕ್ಕೂ ನನ್ನ ತಲೆಗೆ ಹೊಳಿಲೇ ಇಲ್ಲ..:-( ಹಾಗೆ ನೋಡಿದ್ರೆ ಜಯಂತ ಕಾಯ್ಕಿಣಿ, ಯಶವಂತ ಚಿತ್ತಾಲರು ಹಾಗೂ ಇತ್ತಿಚಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಗೋಪಾಲಕೃಷ್ಣ ಪೈ ಯವರೆಲ್ಲ ಕೊಂಕಣಿಯವರು ಅಂತ ನೀವು ಹೇಳಿದ್ದ ಮೇಲೆ realise ಆಯ್ತು..ನನಗೆ ಹೆಮ್ಮೆ ಅಂತ ಉತ್ತರ ಕಳಿಸಿದ್ದೆ..:-) ನನ್ನ fav ಬರಹಗಾರರು ಎಸ್. ಎಲ್ ಭೈರಪ್ಪ ಮತ್ತು ಯಶವಂತ ಚಿತ್ತಾಲರು. ಅವರು ಬರೆದ ಎಲ್ಲ ಪುಸ್ತಕಗಳು ನನ್ನಲ್ಲಿವೆ ಮತ್ತು ಅವನ್ನು ಓದಿದ್ದೇನೆ.
ಅಂದ ಹಾಗೆ ಗೋಪಾಲಕೃಷ್ಣ ಪೈ ಮಾಮ ಮುಂಬೈನಲ್ಲಿ  ನಮ್ಮ ಬಿಲ್ಡಿಂಗ್ ನಲ್ಲೆ ಇದ್ದಿದ್ದು. ಅವರ ಬಗ್ಗೆ ನನಗೆಲ್ಲ ಗೊತ್ತು ಆದರೆ ಅವರಿಗೆ ನಾನು ಗೊತ್ತಿಲ್ಲ. ಅವರಿಗೆ ನನ್ನ ತಮ್ಮ ಕೃಷ್ಣಾನಂದ, ಪಾಂಡುರಂಗ ಮತ್ತು ತಂಗಿ ಜ್ಯೋತಿ ಖಂಡಿತ ಗೊತ್ತು..:-))) ಶ್ರೀಕಾಂತ ರಾತ್ರಿ ಬೆಳಗೂ ಕೂತು ಅವರ ಸ್ವಪ್ನ ಸಾರಸ್ವತ’ ಓದಿದಾಗ ನನಗೆ ಹೊಟ್ಟೆಕಿಚ್ಚಾಗಿತ್ತು. ಅವರು ಯಾವ ಪುಸ್ತಕ ಹೀಗೆ at a stretch ಓದಿದ್ದು ನಾನು ನೋಡೆ ಇರಲಿಲ್ಲ. ನಾನಿನ್ನು ಪುಸ್ತಕ ಓದಿಲ್ಲ. ಅದರ ಗಾತ್ರ ನೋಡಿ ನನಗೆ ಗಾಬರಿ ಮತ್ತೀಗ ಅದು ತೀರ್ಥಹಳ್ಳಿ ಯಲ್ಲಿ ನೆಂಟರಿಷ್ಟರಲ್ಲಿ rounds ಹಾಕ್ತಾ ಇದೆ. :-)
dont know why i prefer books to human beings...i feel safe with them.ತುಂಬ ಚಿಕ್ಕ ಪ್ರಾಯಕ್ಕೆ ಓದುವ habits ಬೆಳೆಸಿಕೊಂಡಿದ್ದೆ. ನನ್ನ 6 ನೆ ವರ್ಷದಿಂದಲೆ....ನನ್ನ ಅಜ್ಜ ನನಗಾಗಿ ತುಂಬ ಪುಸ್ತಕ ಖರೀದಿಸುತ್ತಿದ್ದರು. ನನ್ನ ಸುತ್ತ ಮುತ್ತಲೂ ಯಾವಾಗಲೂ ಪುಸ್ತಕ comics ಗಳು ಸುತ್ತುವರೆದಿರುತ್ತಿದ್ದವು. ಗೊಂಬೆ ಎಲ್ಲ ಇಟ್ಟುಕೊಂಡು ಆಡಿದ್ದು ನೆನಪೆ ಇಲ್ಲ. ಮಾಲವಿಕ ಹುಟ್ಟಿದ ಮೇಲೆ ಅಮ್ಮನ ಪತ್ರ ಹೀಗೆ ಇರುತ್ತಿದ್ದವು ’ನೀವು ಇಬ್ಬರೂ ಹಾಗೆ ಓದುತ್ತ ಕೂತರೆ ಮಾಲವಿಕ ಭಾಷೆ ಕಲಿಯುವುದು ಹೇಗೆ ’ ಅಂತ...ನಿಜ ಹೇಳಬೇಕೆಂದರೆ ಮಾಲವಿಕ ಮಾತು ಕಲಿತಿದ್ದು ಶ್ರೀಕಾಂತರ ಹಲವಾರು ಮಿತ್ರರಿಂದಲೆ. ದಿನ ಸಂಜೆ ಅವರು ಬಂದು ಮಾಲವಿಕ ಳನ್ನು ಮಾತನಾಡ್ಸಿ ಅವಳ ಜತೆ ಆಡುತ್ತಿದ್ದರು. ನಾನು ಅವರಿಗೋಸ್ಕರ ಅಡಿಗೆ ಮಾಡ್ತಿದ್ದೆ. :-) ಮಾಲವಿಕ ನಿಹಾರಿಕ  ಕೂಡ  ಓದುವ ಹವ್ಯಾಸ ಬೆಳಸಿಕೊಂಡಿದ್ದಾರೆ.  i do find Televisions a detriment to reading habits....ನಿಹಾ ಳ ಬರಹ ಕೂಡ ಚೆನ್ನಾಗಿದೆ. ಈಗ ಹಿಂದಿ ಕನ್ನಡದಲ್ಲಿ ಬರೆಯುವ  ಪ್ರಯತ್ನ ನಡೆಸಿದ್ದಾಳೆ. ಕಾಲೇಜಿನ ಸಹಪಾಠಿಗಳ ಜತೆ ಸೇರಿ ಒಂದು magazine ನನ್ನು revive ಮಾಡುತ್ತಿದ್ದಾಳೆ. ಶ್ರೀಕಾಂತ ಮತ್ತು ಮಾಲವಿಕ ಕೂಡ ಚೆನ್ನಾಗಿ ಬರೆಯುತ್ತಾರೆ ಆದರೆ ಅವರಿಗೆ ಪುರುಸೊತ್ತು ಇಲ್ಲ....:-)
 ನನ್ನ ಪುಸ್ತಕ ಓದುವ ಹವ್ಯಾಸ ತಿಳಿದಿರುವ ಆತ್ಮೀಯರೆಲ್ಲ e-ಬುಕ್, ಕಿಂಡಲ್ ಬಗ್ಗೆ ಎಲ್ಲ ಸಲಹೆ ಕೊಡುತ್ತಿರುತ್ತಾರೆ.ಎಲ್ಲ ಕ್ಲಾಸಿಕ್ಸ್ ನ ಪಿಡಿಎಫ್ ನನ್ನ ಸಿಸ್ಟಮ್ ನಲ್ಲಿದೆ . ಆದರೂ ಪುಸ್ತ್ಕಕ ಕೈಯಲ್ಲಿ ಹಿಡಿದು, feel ಮಾಡಿಕೊಂಡು , ಮಲಗಿ..ಒಂದು ಪ್ಲೇಟ್ ಕುರುಕುಲು ತಿಂಡಿ ಜತೆ ...ಓದುವುದೇ ಹೆಚ್ಚು ಇಷ್ಟ. ಅಥವ ನನ್ನ ಝೂಲಾದ ಮೇಲೆ ಕೂತು ಓದುವುದು, ಟೀ ಜತೆ ಓದುವುದು ಇವೆಲ್ಲ ತುಂಬಾ ಇಷ್ಟ....
ಶ್ರೀಕಾಂತ ಮೊದಲೆಲ್ಲ ಎಷ್ಟೊಂದು ಓದ್ತಿಯ..ಬರೀ ಬರೀ..ಅನ್ನುತ್ತಿದ್ದರು..ಈಗ ಅಲ್ಪ್ಸ ಸ್ವಲ್ಪ ಬರೆಯುತ್ತೇನಾದರು...ಬರಹದಲ್ಲಿ depth ಇಲ್ಲ ಅನ್ನುತ್ತಿರುತ್ತಾರೆ...its not necessary that everybody who read a  lot should also be able to write well...my blog is full of my idle jottings ಅಷ್ಟೆ writing is not my forte......:-( ಇದು ಶ್ರೀಕಾಂತ ಒಬ್ಬರ ಅಭಿಪ್ರಾಯ ಅಲ್ಲ. ಹಲವಾರು ಓದುಗರು ಇದನ್ನು ನನಗೆ ಹೇಳಿದಾರೆ. ನನ್ನ ಬ್ಲಾಗ್ ನಲ್ಲಿ ನನ್ನ ಕನ್ನಡದ practice ಮಾಡುತ್ತೇನೆಯೆ ಹೊರತು ನನ್ನ ಬರಹಗಳ ಬಗ್ಗೆ ನನಗೆ ಹೇಳಿಕೊಳ್ಳುವ ಅಭಿಮಾನವೇನು ಇಲ್ಲ. :-) ಆಗಲೇ ಇದು ನನ್ನ 150 ನೇ ಪೋಸ್ಟ್...not bad at all, all things considered!!
ಇನ್ನು ನನಗೆ ನಿಮಗೂ ಬ್ರೇಕ್..ನಮ್ಮ ಸಂಸ್ಥೆಯ 10 ನೆ ಹುಟ್ಟುಹಬ್ಬದ (ಅದು ಇದ್ದದ್ದು ನವೆಂಬರ್ 15 ರಂದು...ಯಾರಿಗೂ ಪುರುಸೊತ್ತಿರಲಿಲ್ಲ..ಈಗಲೂ ಸಡನ್ ಆಗಿ) ಸಮಾರಂಭಕ್ಕೆ ನಾವೆಲ್ಲ ರೆಡಿ ಯಾಗ್ತಿದ್ದೇವೆ .ಈ ವರ್ಷ ಕೂಡ ನಮಗೆ ನಬಾರ್ಡ್ ನಿಂದ best NGO ಪ್ರಶಸ್ತಿ ಸಿಕ್ಕಿದೆ.awards mean we have to work harder. ಕಾರ್ಯಕ್ರಮದ ನಂತರ ನನ್ನದು ಒಂದು ಚಿಕ್ಕ ಟೂರ್....yes as usual books are accompanying me.....ವ್ಯಾಸರಾಯ ಬಲ್ಲಾಳರ ಉತ್ತರಾಯಣ, The Crimson Throne by Sudhir Kakar ಮತ್ತು tales told by Mystics by Manoj Das....
ನಾನು ವಾಪಸ್ ಬರುವ ತನಕ... ತನಕ....ಬೈ ಬೈ....take care!!
:-)

February 25, 2012

The Great Indian Konkani Pizza

ನಮ್ಮ ಮನೆಯಲ್ಲಿ ಇಡ್ಲಿ ಹಿಟ್ಟು ಸ್ವಲ್ಪ ಜಾಸ್ತಿ ನೆ ಮಾಡಿ ಇಡ್ತೇನೆ.

ಮೊದಲ ದಿನ ಇಡ್ಲಿ ಪಾತ್ರೆ ಯಲ್ಲಿ conservative ಇಡ್ಲಿ. ಹಿಂಗಿನ ಚಟ್ನಿ ಮತ್ತು  ಸಾಂಬಾರ್. 

ಎರಡನೆ ದಿನ ಅದರ ಹೆಸರು ಇಡ್ಲಿ part -2 ಬಾಳೆ ಎಲೆಯಲ್ಲಿ ಹಿಟ್ಟು ಹಾಕಿ ಬೇಯಿಸುವುದು. ಕೊಂಕಣಿಯಲ್ಲಿ ರಮ್ದಣ್ ಅನ್ತೇವೆ. ಇದನ್ನು ಖಾರ ಖಾರ ಕೆಂಪು ಮೆಣಸು ಶುಂಠಿ ಚಟ್ನಿ...:-) ಟೈಪ್ ಮಾಡಬೇಕಾದ್ರೆ ಬಾಯಲ್ಲಿ ನೀರೂರ್ತಾ ಇದೆ. 

ಮೂರನೆ ದಿನ part-3 ನಲ್ಲಿ ದೊಡ್ಡಕ್ . ದೊಡ್ಡಕ್ ಅಂದ್ರೆ nothing but ದಪ್ಪ ದೋಸೆ.ಮೊದಲಿಗೆ ಇಡ್ಲಿ ಹಿಟ್ಟಿಗೆ ಶುಂಠಿ+ ಹಸಿ ಮೆಣಸಿನಕಾಯಿ ಪೇಸ್ಟ್ ಬೆರೆಸಿ.  ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಉದ್ದಿನ ಬೇಳೆ, ಸಾಸಿವೆ, ಕರಿಬೇವು, ಕೆಂಪು ಮೆಣಸು, ಮೆಂತೆ ಹಾಕಿ ಒಗ್ಗರಣೆ ಕೊಡುವುದು ಅದರಲ್ಲಿ 5-6- ಸೌಟು (ಸೌಟು and ಸಟ್ಟುಗ words taught to me by ಮೇಲಿನ ಮನೆ ಪುಟ್ಟು ದಿಶಾಂತ್) ಇಡ್ಲಿ ಹಿಟ್ಟು ಹಾಕಿ, ಬಾವಡಿಯಿಂದ ಮುಚ್ಚಿ, ಎರಡು ಬದಿ ಕೆಂಪಾಗುವವರೆಗೆ ಬೇಯಿಸುವುದು. fresh ಬೆಣ್ಣೆಯೊಂದಿಗೆ ಗುಳುಂ ಮಾಡುವುದು :-))

ಹಾಂ ಪೇಟೆ ಯಲ್ಲಿ ಸಿಗುವ ಇಡ್ಲಿ ಹಿಟ್ಟಿಂದ ದೊಡ್ಡಕ್ ಮಾಡಿದ್ರೆ ಚೆನ್ನಾಗಿರಲ್ಲ..ಮನೆಯಲ್ಲೇ ಮಾಡಿ... ನನ್ನ ಇಡ್ಲಿ ಹಿಟ್ಟಿನ ಅಳತೆ ಒಂದು ಕಪ್ ಉದ್ದಿನಬೇಳೆ ಗೆ ಎರಡು ಕಪ್ ಬೆಳ್ತಿಗೆ ಅಕ್ಕಿ...ಕೆಂಪಕ್ಕಿ ಇದ್ರೆ ಇನ್ನೂ ಸೂಪರ್..in terms of.taste as well as texture...ಈ ದೊಡ್ಡಕ್ ಗೆ ಮಾಲವಿಕ ಇಟ್ಟ ಹೆಸರು the great Indian Konkani Pizza...ಬಿಸಿ ಬಿಸಿ ಇದ್ದಾಗಲೆ ಸ್ವಾಹಾ ಮಾಡಬೇಕು
ನಿಹಾಗೆ ಈಗ ಹೊಸ ಕ್ಯಾಮೆರ ಸಿಕ್ಕಿದೆ Nikon...ಅವಳದ್ದೆ ಕ್ಲಿಕ್



The flip side of thedoddak
:-)

February 20, 2012

W O R L D C I N E M A

Fancy title ಗು ನನ್ನ ಬರಹಕ್ಕೂ ಯಾವುದೇ ಸಂಬಂಧ ಇಲ್ಲ...
ಶ್ರೀನಿಧಿ ಡಿ ಏಸ್. world cinema ಎನ್ನುವ ಫೇಸ್ ಬುಕ್ ಪೇಜ್ ಒಂದನ್ನು ಮಾಡಿದ್ದಾರೆ. ಮತ್ತು ನನ್ನನ್ನು ಅದರಲ್ಲಿ ಸೇರಿಸಿದ್ದಾರೆ!!
ಅದಕ್ಕೆ ನನ್ನ ಮತ್ತು ಸಿನಿಮಾ ನಂಟಿನ ಬಗ್ಗೆ ಕೆಲವು  ನೆನಪುಗಳು. just some jottings. disjointed ಅನ್ನಿಸಬಹುದು..

ಮುಂಬಯಿನಲ್ಲಿ ನಮ್ಮ ಮನೆ ಇದ್ದಿದ್ದು (ಈಗಲೂ ತಮ್ಮ ಅಲ್ಲಿದ್ದಾನೆ ಅಥವ ಅವನ ಮನೆ ಅಲ್ಲಿದೆ ಬಟ್ ಅವನು ಈಗ ಕೆಲಸದ ಮೇಲೆ ಅನಿರ್ದಿಷ್ಟಿತ ಅವಧಿಗೆ UAE ನಲ್ಲಿದ್ದಾನೆ. ಮನೆಗೆ ಬೀಗ)..ಅಂಧೇರಿ - ವರ್ಸೋವ ಮಧ್ಯದಲ್ಲಿ ಬೀಚ್ ಬಳಿ. ಬೀಚ್ ಹತ್ತಿರ ಒಂದು ಪುಟ್ಟ ಬಂಗಲೆ. ಅಲ್ಲೇ ಹೆಚ್ಚು ಕಡಿಮೆ ಸಿನಿಮಾ ಶೂಟಿಂಗ್ ಆಗ್ತಿದ್ದವು. ಆದರೂ ನನಗೆ ಅದರಲ್ಲಿ ಏನೂ ಕುತೂಹಲ ಇರಲಿಲ್ಲ. ಜನರಿಂದ ಶೂಟಿಂಗ್ ಸ್ಥಳತುಂಬಿರುತ್ತಿತ್ತು. ಪ್ರತಿ ಎರಡು ನಿಮಿಶದ ಶಾಟ್ ಗೆ ವಾಹ್ ವಾಹ್ ಅಂತ ಚಪ್ಪಾಳೆ. it looked so silly. ಮೂಕಿ ಚಿತ್ರದ ತರಹ...ಫೈಂಟಿಂಗ್ ಸೀನ್ ಅಂತೂ ......ಏನೆ ಆಗಲೀ ಚಿತ್ರ ಪೂರ್ಣಗೊಂಡ ನಂತರ ನೋಡುವುದೇ ಮಜಾ!!
ಮನೆಯಲ್ಲಿ ನಮಗೆ ಸಿನಿಮಾಗೆ ಹೋಗುವ ಅನುಮತಿಯಿರಲಿಲ್ಲ. ಹೋದರೆ ಕುಟುಂಬದ ಜತೆ..ಅದೂ ಅಪ್ಪ ಅಜ್ಜ ನಿಗೆ ಫ್ರೀ ಪಾಸ್ ಇರುತ್ತಿತ್ತು..ಮತ್ತು ಉಳಿದ  ಜನರ ಜತೆ ಅಲ್ಲ screening room ನಲ್ಲಿ ಕುರ್ಚಿ ಹಾಕಿಕೊಡುತ್ತಿದ್ದರು.


ನಮ್ಮ ಮನೆಗೆ ಸಿನಿಮಾದ ಕೆಲ ಜನ ಬರುತ್ತಿದ್ದರು. ಅದರಲ್ಲಿ ನನಗೆ ತುಂಬ ಇಷ್ಟವಾದವರು ಮ್ಯಾಕ್ ಮೋಹನ್ . ನನ್ನ ತಂದೆ ಅವರನ್ನು ಪ್ರೀತಿಯಿಂದ ಮಾಕಿ ಜಾನಿ ಅಂತ ಕರೆಯೋದು. ನಮ್ಮ ತಂದೆ ಬ್ಯಾಂಕ್ ನಲ್ಲಿದ್ದುದರಿಂದ ಸಿನಿಮಾ ಫೈನಾಂಸಿಂಗ್ ವಿಭಾಗದಲ್ಲಿ ಸ್ವಲ್ಪ್ಸ್ ಸಮಯ ಇದ್ದರು. ಬ್ಯಾಂಕ್ ಗೆ ಫಿಲ್ಮ್ ಸ್ಟಾರ್ ಗಳು ಬಂದಾಗ ಕಿರಿಕಿರಿಯಾಗುತ್ತೆ ಅಂತ ಅವರಿಗೆ ಸಾಧಾರಣ ಮಧ್ಯಾಹ್ನ 2.30 ನಂತರ ಬ್ಯಾಂಕಿನ ಮುಖ್ಯ ದ್ವಾರ ಬಂದ್ ಆದ ಮೇಲೆ ಬರಲು ಹೇಳಲಾಗುತ್ತಿತ್ತು. ಮಾಕಿ ಜಾನಿ ಯನ್ನು ತಂದೆ ಊಟಕ್ಕೆ ಮನೆಗೆ ಕರೆದುಕೊಂಡು ಬರುತ್ತಿದ್ದರು. ನಾನಂತೂ ಹೊರಗೆ ಬರುತ್ತಿರಲಿಲ್ಲ. ನನ್ನ ತಮ್ಮ ಕೆಳಗೆ ಪ್ರೇಮ್ ಕಲ್ಪನ (ಇನ್ನೂ ಇದೆ ಆ ಹೋಟಲ್ ..ಈಗ ದೊಡ್ಡದು ಮಾಡಿಕೊಂಡಿದ್ದಾರೆ) ದಿಂದ ಮಟನ್ ಕರಿ ತರ್ತಿದ್ದ. ಮನೆಯಲ್ಲಿ ನಾವು ನಾನ್ ವೆಜ್ ಮಾಡ್ತಿರಲಿಲ್ಲ. ಅಮ್ಮ ಬಿಸಿ ಬಿಸಿ ಫುಲ್ಕ್ ಮಾಡಿಕೊಡುತ್ತಿದ್ದರು. ಅಮ್ಮನಿಗೆ ’ನಮಸ್ತೆ ಭಾಬಿ’ ಅಂತ ಮಾತನಾಡಿಸಿ ಸುಮ್ಮನಾಗುತ್ತಿದರು ಮಾಕಿ ಜಾನಿ. ಆಮೇಲೆ ಊಟ ಮಾಡ್ತ ಅಪ್ಪ. ಅವರು ಘುಸು ಪುಸು ಮಾತನಾಡುತ್ತ ಇರ್ತಿದ್ದರು. ರಾತ್ರಿ ನಾವೆಲ್ಲ ಒಟ್ಟಿಗೆ ಕೂತು ಊಟ ಮಾಡುವಾಗ ಅಪ್ಪ ಮಾಕಿ ಜಾನಿ ಜತೆ ನಡೆದ ಮಾತುಕತೆಗಳನ್ನೆಲ್ಲ ನಮಗೆ ರವಾನಿಸುತ್ತಿದ್ದರು ಸಿನಿಮಾ ದಲ್ಲಿ ವಿಲ್ಲನ್ ಪಾತ್ರ ಮಾಡುವ ಮಾಕಿ ಜಾನಿ ನಿಜ ಜೀವನದಲ್ಲಿ ತುಂಬ ಸಾಧು. ಆಗ ನಮ್ಮನೆಗೆ ಬರುತ್ತಿದ್ದಾಗೆ ಅವರಿಗಿನ್ನೂ ಮದುವೆಯಾಗಿರಲಿಲ್ಲ. ಅವರ ಅಣ್ಣನಿಗೆ ಹುಶಾರಿಲ್ಲದೆ, ಎರಡು ಕಿಡ್ನಿ ಫೈಲ್ ಆಗಿ ಆಗಿನ ಕಾಲದಲ್ಲಿ dialysis ಗೆ ಒಳಗಾಗುತ್ತಿದ್ದರು. ಅದರ ಖರ್ಚು ಹೆಚ್ಚು. ದುಡ್ಡಿಗೆ ಅವರಿಗೆ ಯಾವಾಗಲೂ ಅಡಚಣೆಯಿತ್ತು. ಅವರ ಕುಟುಂಬದ ಸುಖ ದುಃಖ, ಸಿನಿಮಾ ಜಗತ್ತಿನ exploitation ಬಗ್ಗೆ ಹೇಳುತ್ತಿದ್ದರು. ಅವರು ಜೀವನದಲ್ಲಿ ತುಂಬ ಲೇಟಾಗಿ ಮದುವೆ ಮಾಡಿಕೊಂಡಿದ್ದು ಸಂತೋಷವಾಗಿತ್ತು ತೀರಿಕೊಂಡಾಗ ತುಂಬ ಸಂಕಟ ಪಟ್ಟಿದ್ದೆ. ಮಕ್ಕಳಿನ್ನೂ ಚಿಕ್ಕವರು...atleast ಕೊನೆಯಲ್ಲಿ ದುಡ್ಡಿಗೆ ಅವರಿಗೆ ಏನೂ ತೊಂದರೆಯಾಗಿರಲಿಲ್ಲ. ಅದೇ ನೆಮ್ಮದಿ. he was gentle man villain

ಕ್ಲಾಸ್ ಮೇಟ್ ಗೆ ಒಂದೊಮ್ಮೆ ನನ್ನ ನೋಟ್ ಪುಸ್ತಕ ಮನೆಗೆ ಒಯ್ಯಲು ಕೊಟ್ಟಿದ್ದೆ. ಮರುದಿನ ಅವಳು ಅದನ್ನು ತರಲು ಮರೆತಿದ್ದಳು. ನಾನು ನೆನಪಿಸಿದಾಗ ’ಚಲ್ ಮೆರಾ ಘರ್ ಪಾಸ್ ಹಿ ಮೆ ಹೈ..ಸಾಥ ಚಲ ಕೆ ಲೇ ಆತೆ ಹೈಂ ಅಂದಾಗ ಅವಳ ಜತೆ ಹೊರಟೆ. ನಾನು ಅಜ್ಜನ ದೊಡ್ಡ ಮನೆ, ಅಪ್ಪನ ಸಾಕಷ್ಟು ದೊಡ್ಡ ಬ್ಯಾಂಕ್ ನ ಫ್ಲ್ಯಾಟ್ ನಲ್ಲಿದ್ದವಳು ಅವಳ ಮನೆಯನ್ನು ನೋಡಿ ದಂಗಾಗಿದ್ದೆ. ಅವಳಿದ್ದಿದ್ದು ಚಾಲ್ (chawl) ನಲ್ಲಿ. ನಮ್ಮ ಮನೆಯ ಬಾಥರೂಮ್ ಗಿಂತ ಕೊಂಚ ದೊಡ್ಡ ರೂಮ್...ಅದರಲ್ಲಿ ಒಂದು ಬದಿ ಬಟ್ಟೆಯಿಂದ ಮುಚ್ಚಿ ಅಡಿಗೆ ಮನೆ. ಮನೆಯ ಮಧ್ಯದಲ್ಲಿ ಒಂದು ನೈಲಾನ್ ದಾರ ಕಟ್ಟಿದ್ದು ಅದರ ಮೇಲೆ ಪೇರಿಸಿದ್ದ ಬಟ್ಟೆಗಳ ರಾಶಿ. ನಾವು ಹೋದಾಗ ಅವಳ ಅಪ್ಪ ಪಟ್ಟೆ ಪಟ್ಟೇ ಚಡ್ಡಿ ಹಾಕ್ಕೊಂಡು, ಕುಕ್ಕರುಗಾಲಲ್ಲಿ ಕೂತು ಬೀಡಿ ಸೇದ್ತಾ ಇದ್ದರು. ಅವರ ಸುತ್ತ ಮುತ್ತ ಕೆಲವು ಜನ. ಅಷ್ಟರಲ್ಲಿ ಒಬ್ಬ ಯೇ ಜರಾ matchbox ದೇನಾ ಅಂತ ಹೇಳಿ ಅದರ ಮೇಲೆ ಟಕ ಟಕ ಬಡಿದು..ಯೆ beats ಕೈಸಾ ರಹೇಗಾ...ಅಂದಾಗ ನನಗೂ ಇಷ್ಟ ಆಗಿತ್ತು,,,ಕೆಲವರು ಚಲೇಗಾ ಅಂದಿದಕ್ಕೆ ಇನ್ನೊಬ್ಬ ;ಚಲೇಗಾ ನಹಿ ದೌಡೇಗಾ..ಎಕ್ ದಮ್ ಮಸ್ತ್ ಹೈ ಅಂತ ಸಿನಿಮಾ ಮಾಡಿ ಆಗಲೇ ಗೆದ್ದವರ ತರಹ ಖುಶಿ ಮೂಡಿತ್ತು ಅವರ ಮುಖದಲ್ಲಿ. ಒಳಗಡೆ ನನ್ನ ಕ್ಲಾಸ್ ಮೇಟ್ ನ ಅಮ್ಮ ಸುಸ್ತಾದ, ಮುಖ ನಿಸ್ತೇಜ ಕಣ್ಣುಗಳ ಜತೆ ಬಿಸಿ ಬಿಸಿ ಟೀ ಮಾಡಿಕೊಂಡು ತಂದು ಕೊಟ್ಟಳು ಅಲ್ಲಿ ಜಮಾಯಿಸಿದ 5 ಮಂದಿಗೆ. ನನ್ನ ಮುಖದಲ್ಲಿನ ಕುತೂಹಲ ನೋಡಿ ಅವಳು ನನಗೆ ಹೇಳಿದ್ದು ..ಅವಳ ತಂದೆ ಸಿನಿಮಾ ನಿರ್ಮಾಪಕರೆಂದು...ಐದು ಚಿತ್ರ ಮಾಡಿ ಒಂದು ಗೆದ್ದು....ಗೆದ್ದಾಗ ಅವರೂ ದೊಡ್ಡ ಮನೆಯಲ್ಲಿದ್ದರಂತೆ...ಈಗ ತುಂಬ ಲಾಸ್ ಎಲ್ಲ ಮಾಡಿಕೊಂಡು ಈ ಚಾಳ್ ನಲ್ಲಿ ಬಂದಿದ್ದರಂತೆ. ನನಗಂತು ಅದು ಬೇರೆ ಲೋಕ ಕಂಡ ಹಾಗೆ ಆಗಿತ್ತು. 

ಟಿ.ವಿ. ಬಂದ ಮೇಲಂತು ನನಗಿಷ್ಟ ಆಗ್ತಿದ್ದಿದ್ದು ಸ್ಲೋ ಸಿನಿಮಾಗಳು. ನನ್ನದು ಮತ್ತು ಮನೆಯ ಉಳಿದ ಸದಸ್ಯರ ಟೇಸ್ಟ್ ನನ್ನ ಜತೆ ಮ್ಯಾಚ್ ಆಗ್ತಿರಲಿಲ್ಲ. ಅದಕ್ಕೆ ಹೆಚ್ಚಾಗಿ ನಾನು ಆಗ ಸಿನಿಮಾ ನೋಡ್ತಿರಲಿಲ್ಲ.

ಸಿನಿಮಾ ಅಂತೂ ಇತ್ತೀಚಿಗೆ ನನ್ನ ಮಕ್ಕಳು ದೊಡ್ಡವರಾದ ಮೇಲೆ Computer ನಲ್ಲಿ ನೋಡಲು ಶುರುಮಾಡಿದ್ದೇನೆ. (ನಮ್ಮ ಮನೆಯಲ್ಲಿ ಟಿ.ವಿ. ಇಲ್ಲ ನನ್ನ initials ನಲ್ಲ್ಲಿ ಮಾತ್ರ) ಅದಕ್ಕೆ ಮಾಲತಿ ಅಕ್ಕನ ಸಿನಿಮಾ ಯಾನ ಇತ್ತೀಚಿಗೆ ಶುರು ಆಗಿದೆ ಮಾತ್ರವಲ್ಲ ಮಕ್ಕಳ, ಶ್ರೀಕಾಂತ ಟೇಸ್ಟ್ perfect match...ಅಪರೂಪಕ್ಕೆ ಕೆಲವೊಂದು ಬಿಟ್ಟು....
ಸುಮಾರು ವಷಗಳ ಹಿಂದೆ ಅಂದರೆ 22 ವರ್ಷಗಳೆ ಕಳೆದು ಹೋಗಿದ್ದವು ನಾನು ದೊಡ್ಡ ಪರದೆಯಲ್ಲಿ ಸಿನಿಮಾ ನೋಡಿ. ನೋಡಿದ್ದು titanic....ಬೆಂಗಳೂರಿಗೆ ಬಂದು ಐದು ವರ್ಷದ ನಂತರ ’ಮಾತಾಡ್ ಮಾತಾಡ್ ಮಲ್ಲಿಗೆ’ ಚಲನ ಚಿತ್ರ ನಮ್ಮ ಮನೆ ಬಳಿಯಿರುವ ನಂದಿನಿ ಟಾಕೀಸ್ ಗೆ ಬಂದಿತ್ತು. ಅದರ review ಶ್ರೀಕಾಂತ ಓದಿ, ’ಬಾ ಹೋಗಿ ಬರುವ’ ಅಂದ್ರು...ಮಕ್ಕಳು ಕನ್ನಡ ಸಿನಿಮಾ ನಾವು ಬರಲ್ಲ ಅಂದ್ರು..ನಾನು- ಬೇಡ ಹಾಡುಗಳಿರುತ್ತವೆ ಬರಲ್ಲ ಅಂದ್ರೂ ನನಗೆ ಚಾಕಲೇಟ್, ಶೇಂಗಾದ ಆಮಿಷ ತೋರಿಸಿ ಕರೆದುಕೊಂಡು ಹೋದ್ರು. ಬಾಲ್ಕನಿ ಟಿಕಿಟ್....ನೋಡಿದ್ರೆ ಬಾಲ್ಕನಿಯಲ್ಲಿ ನಾವೇ ಇಬ್ರೂ...ಹಾಹಾಹಾ....ನಾನು ಆರಾಮಾಗಿ ಕೈಚೀಲ ಪಕ್ಕದಲ್ಲಿಟ್ಟು, ಎರಡು ಕಾಲನ್ನು ಚಕ್ಕ ಮಕ್ಕಳ ಹಾಕ್ಕೊಂಡು ಕೂತು ಬಿಟ್ಟೆ. ಸಿನಿಮ ಒಂದು ತರಹ ಚೆನ್ನಾಗಿತ್ತು..of course i didnot like the songs...ಇಂಟರ್ ವೆಲ್ ನಂತರ ಸುಮಾರು ಜೋಡಿಗಳು ಮೇಲೆ ಬಾಲ್ಕನಿ ಗೆ ಬಂದರು ನನಗೆ ಆಶ್ಚರ್ಯ...ನೋಡಿದ್ರೆ ಯಾರೂ ಸಿನಿಮಾ ನೋಡಲಿಕ್ಕೆ ಬಂದಿರಲಿಲ್ಲ. yucks it was so irritating...ನಮ್ಮ ರಾಯರಿಗಂತೂ ಡಬಲ್ ಸಿನಿಮಾ..ನಾನೆ ಚಿವುಟಿ ಅಕ್ಕ ಪಕ್ಕ ನೋಡ ಬೇಡಿ ಸುಮ್ಮನೆ ಪರದೆ ಮಾತ್ರ ನೋಡಿದ್ರೆ ಸಾಕು ಅಂದೆ. :-) ಸಿನಿಮಾ ದ ಅಂತ್ಯ ಮಾತ್ರ ಚೂರು ಚೆನ್ನಾಗಿರಲಿಲ್ಲ...ಬರೀ melodramatic...
ಆ ಮೇಲೆ ಇದೇ ಚಿತ್ರಮಂದಿರ ಕಿಕ್ಕಿರಿದು ತುಂಬಿದ್ದು ನಾವು ಎದ್ದೇಳು ಮಂಜುನಾಥ ನೋಡಿದಾಗ. ಸುಧನ್ವಾ ದೇರಾಜೆಯವರು ಆ ಸಿನಿಮಾ ಬಗ್ಗೆ ಬರೆದ ಬ್ಲಾಗ್ ಪೋಸ್ಟ್  ಓದಿದ ನಂತರ ನಾನು minimize ಮಾಡಿಟ್ಟಿದ್ದೆ. ಅದನ್ನು ಶ್ರೀಕಾಂತ ಓದಿ ಬಿಟ್ರು. ಜಗ್ಗೇಶ ಶ್ರೀಕಾಂತ ರ fav ಸ್ಟಾರ್...ಸರಿ ಪುನ: ಪೂಸಿ ಹೊಡೆದು...ಕರಕೊಂಡು ಹೋದ್ರು...ಅಬ್ಬಬ್ಬಾ ಆ ಸಿನಿಮ ಎಷ್ಟೊಂದು cacophonous ಇತ್ತಂದ್ರೆ (sorry Raghu Apara)*....ಸಿನಿಮಾ ಶುರು ಆದ ಹತ್ತೇ ನಿಮಿಷಕ್ಕೆ ತಲೆ ಸಿಡಿಯುತ್ತಿತ್ತು...ಯಾವಾಗ ಮುಗಿಯುತ್ತೆ ಅಂತ ಕಾಯ್ತಾ ಇದ್ದೆ.. ಆ ಮೇಲೆ ಅದೇ ಥಿಯೇಟರ್ ನಲ್ಲಿ ನೋಡಿದ್ದು ’ರಮೇಶ ನಟಿಸಿದ್ದ Accident' ಕೊಲೆಮಾಡಿದವರು ಯಾರೆಂದು ಗೊತ್ತಾದ ತಕ್ಷಣ...ನನ್ನ ಮೂಡ್ ಆಫ್ ಆಗಿ ಹೋಯ್ತು...otherwise that was a sufficiently good movie.. ಆ ಮೇಲೆ ರಮೇಶ ನಟಿಸಿರುವ ಕಾಮೆಡಿ ಸಿನಿಮಾ ಅಂತೆ ’ಒಂದು ಸುಳ್ಳು ಮೂರು ನಿಜ’ or something like that..ಹೆಸರೂ ಸರಿ ನೆನಪಿಲ್ಲ..ಯಪ್ಪ what a kachaDa movie...ಹತ್ತೆ ನಿಮಿಷ ನಾನು ವಾಪಸ್ ಮನೆಗೆ...ಇನ್ನು ದೊಡ್ಡ ಪರದೆಯಲ್ಲು ಸಿನಿಮಾ ನೋಡಲ್ಲ ಅಂತ ಅಂದುಕೊಂಡಿದ್ದರೂ ಅದೇ ಸಿನಿಮ ಹಾಲ್ ನಲ್ಲಿ three idiots ಮಕ್ಕಳ ಜತೆ enjoy ಮಾಡ್ದೆ. ಆಮೇಲೆ ಮಾಲವಿಕ ಕೆಲಸಕ್ಕೆ ಸೇರಿದ ಮೇಲೆ ಮೂರು ತಿಂಗಳ ಹಿಂದೆ for the first time multiplex ನಲ್ಲಿ dirty picture ನೋಡಿದೆ. ನನಗದೂ ಇಷ್ಟ ಆಯ್ತು...especially dialogues....
ನಾವು ನಾಲ್ಕು ಜನ ಸೇರಿ ದೊಡ್ಡ ಪರದೆಯ ಮೇಲೆ  ನೋಡಿದ ಒಂದೇ ಒಂದು ಕನ್ನಡ ಸಿನಿಮಾ ’ನಾನು ನನ್ನ ಕನಸು’.almost .ಚೆನ್ನಾಗಿತ್ತು  
ಸುಮ್ನೆ ತೋಚಿದ್ದು ಗೀಚಿದ್ದೇನೆ ಅಷ್ಟೆ
ಹಾಂ ಮರೆಯುವ ಮುನ್ನ:
ಮತ್ತೆ ನನ್ನ ಕ್ಲಾಸ್ ಮೇಟ್ ತಬಸ್ಸುಮ್ ಹಾಷ್ಮಿ..ನಿಮಗೆಲ್ಲ ತಬ್ಬೂ (tabu) ಅಂತ ಹೆಚ್ಚಿನ ಎಲ್ಲರಿಗೂ ಗೊತ್ತಲ್ಲವಾ?ನನಗೂ ಅವಳಿಗೆ ಎಣ್ಣೆ ಸೀಗೆಕಾಯಿ....
ನನಗೆ puc ಆದಕೂಡಲೆ ಮದುವೆಯಾಗಿ ತೀರ್ಥಹಳ್ಳಿಗೆ ಬಂದೆ. ಆದರೆ ನನ್ನ graduation ನ್ನು ನಾನು ಬಾಂಬೆ ಯುನಿವರ್ಸಿಟಿಯ distance education ಮೂಲಕ ಪೋರೈಸಿದೆ. ಆಗ ಫೈನಲ್ ಡಿಗ್ರೀ ಪರೀಕ್ಷೆಗೆ ನನ್ನ ಜತೆ  ಪರೀಕ್ಷಾ ಕೊಟಡಿ ಶೇರ್ ಮಾಡಿಕೊಂಡವರು ಭಾಗ್ಯಶ್ರೀ ಪಟವರ್ಧನ್ (ಮೈನೆ ಪ್ಯಾರ್ ಕಿಯಾ ನೆನಪಿದೆಯಾ ಯಾರಿಗೂ), ಜೂಹಿ ಚಾವ್ಲಾ( ಪರೀಕ್ಷೆ ಬರೆಯೋದಕ್ಕಿಂತ ನಕ್ಕಿದ್ದೆ ಹೆಚ್ಚು ಆಕೆ........
ನಮ್ಮ ಬಚ್ ಪನ್ ಶೇರ್ ಮಾಡಿಕೊಂಡಿದ್ದು ಸಾಜಿದ್ ಖಾನ್ -ನನ್ನ ತಮ್ಮನ ಫ್ರೆಂಡ್, ಲೇಟ್ ದಿವ್ಯಾ ಭಾರತಿ , ಆಯೇಶ ಝುಲ್ಕ್ (ನನಗೆ ತುಂಬ ಇಷ್ಟ ಅವಳು) ನಮ್ಮ ಮನೆಯ ಹಿಂಬದಿ ವಾಸಿಸುತ್ತಿದ್ದ ಮಂದಾಕಿನಿ (ಖಂಡಿತ ಎಲ್ಲರಿಗೂ ಗೊತ್ತು 100%),,but ನಾನು ಫ್ರೆಂಡ್ ಆಗಿದ್ದು ಅವಳ downs syndrome ನಿಂದ ಬಳಲುತ್ತಿದ್ದ ತಮ್ಮನೊಂದಿಗೆ...ಸ್ಕೂಲ್ ಗೆ ಹೋಗುವಾಗ ಬರುವಾಗ ಅವನು ಬಾಲ್ಕನಿಯಲ್ಲಿ ನಿಂತು ಕೈ ಯಾಡಿಸುತ್ತಿದ್ದ....ಮತ್ತೆ ನಮ್ಮ ಬಿಲ್ಡಿಂಗ್ ಹತ್ತಿರ ಇದ್ದವರು ದೀಪ್ತಿ ನವಲ್, ಸಾಯಿ ಪರಾಂಜಪೆ, ಶಾಹೀನ್ (ಸಾಯಿರಾ ಬಾನು neice),ಅರ್ಚನಾ ಪೂರನಸಿಂಗ್, ಬಿಸ್ವಜೀತ್ (ಹಳೆ ಸಿನಿಮಾ)......
ಆದ್ರೂ ಮಾಲತಿ ಮೇಡಂ ಸಿನಿಮಾ ಪ್ರಪಂಚಕ್ಕೆ (  ನೋಡೊದ್ರಲ್ಲಿ ಮಾತ್ರ) ಕಾಲಿಟ್ಟಿದ್ದು ಲೇಟ್ almost at the age of 35....
ಎಂಜಾಯ್ ಮಾಡಿದ್ರಾ??
Sorry Raghu Apara* = ನಾನು ಸಿನಿಮಾ ಒಂಚೂರು ಚೆನ್ನಾಗಿರಲಿಲ್ಲ ಅಂದಿದಕ್ಕೆ ಅದರ plus point ಬಗ್ಗೆ ದೋssssssಡ್ಡ ಲೆಕ್ಚರ್ ಕೇಳಿಸಿಕೊಂಡಿದ್ದೆ :-)
 ಹಲವಾರು ಮಿತ್ರರು ನನಗೆ ಒಳ್ಳೆಯ ಸಿನಿಮಾಗಳ ಬಗ್ಗೆ ಟಿಪ್ಸ್ ಕೊಡುತ್ತಿದ್ದಾರೆ. ಒಟ್ಟಾರೆ ಎಂಜಾಯಿಂಗ್...
;-)

February 15, 2012

Art Fest part -2

ಈಗ ರೌಂಡ್ 2 ಹೋಗುವ ಚಿತ್ರ ಸಂತೆಗೆ.  ಲೇಟ್ ಆಯ್ತು ಭಾಗ ಎರಡು ಹಾಕುವುದಕ್ಕೆ. underground wiring ಅಂತ ನೆಟ್ ಕಣ್ಣುಮುಚ್ಚಾಲೆ ಆಟ ಆಡ್ತಾ ಇತ್ತು
 ಯಾವುದೋ ಲೋಕದಲ್ಲಿ ಖೊಯಾ ಹುವಾ ಹೈ
 ಬುದ್ದ
 ಬುದ್ದ/ ಕೃಷ್ಣ??




 ಇಲ್ಲಿ ರಶ್ ಅಂದ್ರೆ ರಶ್
 ಸ್ನಾನ ಮಾಡೋ ಸೀನ್ ಸಖತ್ ಬಂದಿದೆ!!
 ಸುಮಾರು ಕಲಾವಿದರು ಇದನ್ನು replicate ಮಾಡಿದ್ದಾರೆ ಈ ಸಲ



 ಮಾರಿಯೋ ಅವರ ನೆನಪು ಬಂದಿತ್ತು ಇದನ್ನು ನೋಡಿ

 ಕಣ್ಣಿನ ಬಿಳಿಪೊರೆ ಸಮೇತ...excellent ಅಲ್ವಾ?


 ಇದರ contour ತುಂಬ ಇಷ್ಟ ಆಯ್ತು..ನಿಮಗೆ?

 ತುಂಬ ಬಿಸಿಲು. ಮುಂದಿನ ಸಲ ನಮ್ಮ ಸಂಸ್ಥೆಯಿಂದ ಇವರಿಗೆಲ್ಲ ಒಂದು cap ಕೊಡಿಸುವ ಪ್ಲ್ಯಾನ್ ಹಾಕ್ತಾ ಇದ್ದೇನೆ!! ಅಂತಿಂಥ ಟೊಪ್ಪಿಯಲ್ಲ..ವೆಟ್ಟಿವೇರ್/ಲಾವಂಚದ ಟೊಪ್ಪಿ..ಪರಿಮಳಯುಕ್ತ ಹಾಗೂ cool!!




 ನಿಹಾ ಅಂತ ಕರೆದು..ಅವಳು ತಿರುಗಿದಾಗ ಕೈ ನಡುಗಿ ಚಿತ್ರ out of focus...:-)

 defiant expression ಇಷ್ಟ ಆಯ್ತು
 ಹೂಂಂಂಂ ಯಾವುದು ತೆಗೊಳ್ಲಿ?? ’ಎರಡೂ ತೆಗೊಳ್ಳಿಯಪ್ಪ’ :-)
 ನನ್ನ ಮನೆಗೆ ನಾನು ಇಂತಹ ಚಿತ್ರ ತೆಗೊಳ್ಳೋದು
 ಇವರ ಚಿತ್ರವನ್ನು ನೋಡಲು ಬಗ್ಗಿದಂತಹ ಮರ...
 ಒಳ್ಳೆ ಪಂಚಾಯ್ತಿಕೆಯಲ್ಲಿದ್ದರು. ನಿಹಾ ಫೋಟೊ ತೆಗೀತಿದ್ದಾಳೆ ಅಮ್ಟ ಗಂಭೀರವಾಗಿ ಕೂತಿದ್ದಾರೆ ಅಷ್ಟೆ!! :-)
 ಅಡಿಕೆ ಹಾಳೆ ಮೇಲೆ coffee powder ಅರ್ಟ್. ಈ ವರ್ಷ ಸುಮಾರು ಜನ ಇದನ್ನು ಟ್ರೈ ಮಾಡಿದ್ದಾರೆ...and i thought it was Niha's idea originally...i have added her art in one of the older post


 ಯಪ್ಪಾ ಇದನ್ನು ನೋಡಿ...awesomest sketch ever....
 ರಸ್ತೆಯ ಆ ಬದಿ..niha not happy with her camera





 ನಂಗೂ ಗೊತ್ತು art aprreciation!! ನಿದ್ದೆಗಣ್ಣಲ್ಲಿದ್ದರೇನಂತೆ?
 ಅರೇ?? ಅಮ್ಮ ಯಾಕೆ ಬಯ್ಯೋದು?



 ಚೌಕಾಸಿ ಮಾಡಿ ಮಾಡಿ Frame ಚೆನ್ನಾಗಿಲ್ಲ ಅಂತ ಬಿಟ್ಟು ಹೋದಾಗ ಇವರ expression. ಅವರಿಗಿಂತ ನನಗೆ ಬೇಜಾರಾಗಿದ್ದು ಜಾಸ್ತಿ :-(





 ಹಾರಬಾರದೆಂದು ಇಟ್ಟಿರುವ ಕಲ್ಲು ಕೂಡ ಕಲಾತ್ಮಕವಾಗಿ ಕಾಣ್ತಾ ಇತ್ತು!!







 ಇದು ಯಾಕೋ ಒಂತರಹ ಇಷ್ಟ ಆಯ್ತು. suspence ಕತೆಗೆ ಮುಖಪುಟವಾಗಿಸಬಹುದು!!
 :-)







ಈ ಚಿತ್ರ ನನ್ನ ಹೊಸ FB ಸ್ನೇಹಿತೆ ಅಂಜಲಿ ರಾಮಣ್ಣ ಚಿಕ್ಕವರಿರುವಾಗಿನ ಫೋಟೊ ತರಹ ಇದೆ. ಇದೂ ನನ್ನ ಮತ್ತು ನಿಹಾ ನ favorite pic. ಎದುರಿನ ಮರ reflect ಆಗಿದ್ದರಿಂದ ಈ ಚಿತ್ರ ನಿಮಗೆ ಸರಿ ಕಾಣಲ್ಲ...
simple yet beautiful..Kolkata ದ Narendra Dar - Artist

 entrance ನ ಕಮಾನಿನ decoration
Brown colour na ಚಿತ್ರಗಳೆಲ್ಲ coffee art!!
ಸುಸ್ತಾಯತಾ?? 71 ಚಿತ್ರಗಳನ್ನು ನೋಡಿ??
:-)