March 26, 2013

ಮರಾಠಿ ಸಿನಿಮಾ 'ವಾಸ್ತುಪುರುಷ್'

ಸಮೂಹ -kvs ನಿಂದ ಪ್ರತೀ ಸಲ ಇ-ಮೈಲ್ ಬಂದಾಗ ಅಷ್ಟು ದೂರ ಯಾರು ಹೋಗ್ತಾರೆ ಅಂತಲೋ, ಅಯ್ಯೋ ಮಧ್ಯಾಹ್ನ ಊಟ ಆದ ಕೂಡಲೇ ಬಸ್ ನಲ್ಲಿ ಯಾರು ಹೋಗ್ತಾರೆ ಅಂತಲೋ ಏನಾದರೊಂದು ಸಬೂಬು ನಾನೆ ಸೃಷ್ಟಿಸಿ ಅಲ್ಲಿ ಹೋಗುವುದನ್ನೂ ಮುಂದೂಡುತ್ತಲೇ ಬಂದಿದ್ದ್ದೆ ಇಷ್ತರತನಕ. ಮೊನ್ನೆ ಭಾನುವಾರ ಮಾತ್ರ ಮರಾಠಿ ಸಿನಿಮಾ. ಇಲ್ಲಿ ಮರಾಠಿ ಸಿನಿಮಾ ನೋಡ ಸಿಗುವುದೇ ವಿರಳ. ಮತ್ತು ಇದೇ ಡರೈಕ್ಟರ್ ಅವರಿಂದ ಬೆಂಗಳೂರು ಅಂತರ್ ರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ 'ಸಂಹಿತಾ' ಅನ್ನುವ ಸಿನಿಮಾ ಪ್ರದರ್ಶನ ಗೊಂಡರೂ ನಾನು ನಿಹಾ ಬೇರೆ ಸಿನಿಮಾ ಸೆಲೆಕ್ಟ್ ಮಾಡಿದ್ದರಿಂದ ಅದು ಮಿಸ್ ಆಗಿ, ಅವಳ ಇತರ ಸ್ನೇಹಿತೆಯರು 'it was very nice.','touching' sensitive , 'everyone was crying' ಅನ್ನುವ ಕಮೆಂಟ್ ಕೇಳಿಸಿತ್ತು ನಾವು ನೋಡಿದ ಸಿನಿಮಾ ಕೂಡ ಚೆನ್ನಾಗಿತ್ತಾದ್ದರಿಂದ, ಆ ಸಿನಿಮಾದ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳಲಿಲ್ಲ. ಅಷ್ಟೆ ಅಲ್ಲ ಯಾವುದಾದರು ಒಳ್ಳೆಯ ಮರಾಠಿ ಸಿನಿಮಾ ಬಗ್ಗೆ ಕೇಳಿದ್ದರೆ, ಅದರ ಸಿಡಿ/ಡಿವಿಡಿ ನನ್ನ ತಮ್ಮನಿಗೆ ಮುಂಬೈನಿಂದ ಕಳಿಸಲು ಹೇಳುತ್ತಿದ್ದೆ. ಆದರೆ ಇತ್ತೀಚಿಗೆ ಅವನು ದುಬೈ ನಲ್ಲಿರೋದರಿಂದ ಅದು ನಿಂತು ಹೋಗಿದೆ. ಮರಾಠಿ ಬಾಂಧವರೊಂದಿಗೆ ಈ ಸಿನಿಮಾ ವೀಕ್ಷಣೆ, ಅಲ್ಲದೆ ಅದರ ಬಗ್ಗೆ ಸಂವಾದ ಕೂಡ ಇರುವುದರಿಂದ ನಾನು ಶನಿವಾರ ಈ ಸಿನಿಮಾಕ್ಕೆ ಹೋಗಿ ಬರುವುದೆಂದು ಶನಿವಾರ ಸಂಜೆ ನಿಹಾರಿಕ ಧಮಕಿ ಹಾಕಿದಮೇಲೆ ಡಿಸೈಡ್ ಮಾಡಿದೆ.
ಸರಿ ಭಾನುವಾರ ಬಂತು. ಅದರೊಂದಿಗೆ ಮನೆ ತುಂಬ ನೆಂಟರು. ಒಂದು 10 ಜನ ಬಂದಿದ್ದರು. ರೊಟ್ಟಿ ತಟ್ಟಿ, ಟೀ ಮಾಡಿ, ಪ್ರತೀ ಸಲ ಟೀ ಮಾಡುವಾಗ ನನಗೊಂದು ಗ್ಲಾಸ್ ಕುಡಿದು ಮಧ್ಯಾಹ್ನ ಪೊಗದಷ್ಟಾದ ಊಟ ಮಾಡಿ, ಇನ್ಯಾರು ಹೋಗುತ್ತಾರೆ? ಇವತ್ತು ಸುಸ್ತಾಗಿದೆ ಎನ್ನುವ ಸಬೂಬು ಮಾಡುವಷ್ಟರಲ್ಲೇ, ಕಾಲೇಜಿನಲ್ಲಿ ನಡೆಯುತ್ತಿರುವ ಥೀಯೇಟರ್ ವರ್ಕ್ ಶಾಪ್ ಗೆ ಹೋಗಿದ್ದ ನಿಹಾ, 'ಮೋಮ್ಮೀ ಹ್ಯಾವ್ ಯು ಕಾಲ್ಡ್ ಅಪ್ ದ ಸಮೂಹ ಟೀಮ್ ಟು ಫೈಂಡ್ ಅಔಟ್ ದ ಅಡ್ರೆಸ್ ಎಂಡ್ ಸ್ಟಫ್ಸ್' ಅಂದಾಗ ನನಗೆ ಹೋಗುವುದು ಬೇಡ ಅನ್ನುವ ಧೈರ್ಯ ಬರಲಿಲ್ಲ.
ಸರಿ ಇ-ಮೈಲ್ ನಲ್ಲಿರುವ ಗೋಪಿನಾಥ ಅವರಿಗೆ ಫೋನ್ ಮಾಡಿದೆ
'ಗುಡ್  ಆಫ್ಟರ್ನೂನ್ ನನ್ನ ಹೆಸರು ಮಾಲತಿಯಂತ'
'ನಮಸ್ತೆ  ಮೇಡಂ ಹೇಳಿ'
ನನಗೆ ವಾಸ್ತುಪುರುಷ ಸಿನಿಮಾ ಗೆ ಬರಬೇಕು. ಅದರ ಬಗ್ಗೆ ಡೀಟೈಲ್ಸ್ ಹೇಳ್ತೀರಾ
'ಬನ್ನಿ ಮೇಡಂ' 'ನೀವು ಇದರ ಬಗ್ಗೆ ಎಲ್ಲಿ ಓದಿದೀರಿ'
'ನನಗೆ ನಿಮ್ಮಿಂದ ಮೈಲ್ ಗಳು ಯಾವಗಲಿಂದೋ ಬರುತ್ತ ಇದೆ. ಆದರೆ ಇವತ್ತು ಮರಾಠಿ ಸಿನಿಮಾ ಅಂತ ಬರುವ ಅಂದಾಜಲ್ಲಿ ಇದ್ದೇನೆ'
'ಬನ್ನಿ ಮೇಡಂ ಚೆನ್ನಾಗಿರುತ್ತೆ. ಮಾಸ್ಟರ್ಸ್!, ಅಂದ್ರೆ ಯು ಆರ್ ಅನಂತ ಮೂರ್ತಿ, ಗಿರೀಶ ಕಾಸರವಳ್ಳಿ ಮುಂತಾದವರು ಸೆಲೆಕ್ಟ್ ಮಾಡಿದ ಸಿನಿಮಾ ತೋರಿಸಿ ಆಮೇಲೆ ಅದರ ಮೇಲೆ ಸಂವಾದ ನಡೆಸ್ತೀವಿ. ಇವತ್ತಿನ ಸಿನಿಮಾ ಆಯ್ಕೆ ಮಾಡಿದವರು ಮಾಸ್ಟರ್ ಕ್ರಿಟಿಕ್ ಮನು ಚಕ್ರವರ್ತಿ'.
"ಹೇಗೆ ಟಿಕೆಟ್ ಇದೆಯಾ? ನಮ್ಮ ಸೀಟ್ ಅನ್ನು ಮುಂಗಡವಾಗಿ ಕಾಯ್ದಿರಿಸಬಹುದಾ?'
'ನಮ್ಮದು ಚಿಕ್ಕ ಹಾಲ್ ಮ್ಯಾಡಂ, 60 ಸೀಟ್ ಮಾತ್ರ. ಬೇಗ ಬಂದವರಿಗೆ ಆದ್ಯತೆ. ನೀವು 10-15 ನಿಮಿಷ ಮುಂಚೆ ಬಂದ್ರೆ ಸಾಕು. ಟಿಕೆಟ್ ಗೆ 50 ರೂ. ಮೆಂಬರ್ ಶಿಪ್ ಫೀ ಆದರೆ 600 ರೂ. ಮೆಂಬರ್ ಆದ್ರೆ ನಿಮ್ಮ ಸೀಟ್ ನಾವು ಕಾಯ್ದಿರಿಸಬಹುದು.
'ಓಕೆ. ಎಲ್ಲಿ ಬರುತ್ತೆ ಇದು ಜಯನಗರ 2nd ಬ್ಲಾಕ್ ಆ?'
'ಹೇಳ್ತೀನಿ ಮ್ಯಾಡಂ. ಯಾರಿಗಾದ್ರು ದಯಾನಂದ ಸಾಗರ್ ಕಾಲೇಜ್ ಅಥವಾ ವಸುಧಾ ಭವನ್ ಕೇಳಿ ಅಲ್ಲಿ ಹತ್ತಿರದಲ್ಲೆ ಇದೆ KVS. ಹಾಗೆ ಗೊತ್ತಾಗದಿದ್ದಲ್ಲಿ ನನಗೆ ಫೋನ್ ಮಾಡಿ ನಾನು ನಿಮಗೆ ಡೈರೆಕ್ಷನ್ಸ್ ಹೇಳ್ತೇನೆ '
'ಆಯ್ತು ಹಾಗಾದ್ರೆ ಸಿಗುವಾ, ಥ್ಯಾಂಕ್ಯು'
(...ಸಿಗುವಾ ಅಂತೇನೋ ಹೇಳಿದೆ ಆದ್ರೆ ಅಲ್ಲಿ ಗೋಪಿನಾಥ ಅವರು ಯಾರು ಎಂದು ಕೇಳುವ ಧೈರ್ಯ ಬರಲಿಲ್ಲ.)
:-)
ನಿಹಾರಿಕಾ ಕಾಲೆಜ್ ನಿಂದ ಬಂದಮೇಲೆ ಬೇಗ ಬೇಗ ಊಟ ಮಾಡಿ, ಪಾತ್ರೆಗಳನ್ನೆಲ್ಲ ಹಾಗೆ ಬಿಟ್ಟು, ಶ್ರೀಕಾಂತ್ ಮೂರು ದಿನ ಹೈದರಾಬಾದ್ ಗೆ ಆಫಿಸ್ ಕೆಲಸದ ಮೇಲೆ ಹೊರಟಿದ್ದರಿಂದ ಅವರ ಲಗೇಜ್ ಎಲ್ಲ ಪ್ಯಾಕ್ ಮಾಡಿ. ಮನೆಗೆ ಬೀಗ ಹಾಕುವ ಮುಂಚಿನ ಎಲ್ಲ instructions ಅವರಿಗೆ ಕೊಟ್ಟು, ನಾವು ಹೊರಟ್ವಿ. ರಿಕ್ಷಾದವನಿಗೆ ಬನಶಂಕರಿ ಎಂದ್ವಿ. ಬನ್ನಿ ಅಂದ್ರು. ಅದರಲ್ಲಿ ವಿರಾಜಮಾನರಾದ ಮೇಲೆ ದಯಾನಂದ ಸಾಗರ್ ಕಾಲೇಜ್ ಅಂದ್ವಿ. ನಿಮಗೆ ದಾರಿ ಗೊತ್ತಾ ಅಂತ ಅವರು ಕೇಳಿದ್ರು. ಇಲ್ಲ ಬನಶಂಕರಿ ತಲುಪಿದ ಮೇಲೆ ಯಾರಿಗಾದ್ರೂ ಕೇಳುವ ಅಂದೆ. ಅವರು ಸರಿ ಅಂದ್ರು. ಅಬ್ಬಾ ಎಂತ ಬಿಸಿಲು. ನನ್ನ ಕಾಲು ಡೈರೆಕ್ಟ್ ಸನ್ ಲೈಟ್ ಗೆ ಇದ್ದುದರಿಂದ ಒಳ್ಳೆ ಬಿಸಿ ಬಿಸಿ ಆಯ್ತು. ರಸ್ತೆ ಯಲ್ಲಿ ರಶ್. ಟ್ರಾಫಿಕ್ ಸಿಗ್ನಲ್ ನಲ್ಲಿ ನಿಲ್ಲಿಸಿದಾಗಲೆಲ್ಲ ನನ್ನ ಮೊಣಕಾಲಿಗೆ ಬೆಂಕಿ ತಗಲುತ್ತೇನೋ ಅನ್ನುವಷ್ಟು ಬಿಸಿಲು. ನಾನು ಡೀಪ್ ಫ್ರೀಜ್ ಮಾಡಿದ ನೀರಿನ ಬಾಟಲಿ ಬಿಸಿಲಿಗೆ ಕರಗುವುದು ಬೇಡ ಅಂತ ನನ್ನ ಬ್ಯಾಗ್ ನ್ನು ನನ್ನ ನೀಹಾ ಮಧ್ಯೆ ಸೀಟಿನ ಮೇಲೆ ಇಟ್ಟು ಬಿಟ್ಟೆ. ಮುಕ್ಕಾಲು ಗಂಟೆ ನಂತರ ಯಾವುದೋ ಅಂಗಡಿ ಮೇಲೆ ಬನಶಂಕರಿ ಅಂದ ಬರೆದಿದ್ದು ನೋಡಿ, ಪ್ಲೀಸ್ ಎಲ್ಲಾದ್ರೂ ಕೇಳುವಾ ಅಂದೆ. ಅವರು ಒಂದು ಬೇಕರಿ ಬಳಿ ನಿಲ್ಲಿಸಿ ಸಾಗರ್ ಹೋಟಲ್ ಎಲ್ಲಿ ಅಂತ ಕೇಳಿದ್ರು, ನಾನು ಬೇಗ ಬೇಗ ಅಯ್ಯೋ ಹೋಟಲ್ ಅಲ್ಲ ದಯಾನಂದ ಸಾಗರ್ ಕಾಲೇಜ್ ಅಂದೆ. ಅವರು ಹೇಳಿದ್ರು. ಹೂಂ ಅಂತ ಡ್ರೈವರ್ ಹೊರಟರೂ ಎರಡು ಮೂರು ಕಡೆ ಕೇಳಿ ನಮಗೆ ದಯಾನಂದ ಕಾಲೇಜ್ ಎದುರಿಗೆ ಬಿಟ್ಟರು. ಅಲ್ಲೇ ಕಬ್ಬಿನ ಹಾಲು ಮಾರುವವನಿಗೆ ಕೇಳಿದ್ವಿ ಅವನು ಕರೆಕ್ಟ್ ಆಗಿ ಸುಬ್ಬಣ್ಣ ಆಪ್ತ ರಂಗಮಂದಿರ ಕ್ಕೆ ದಾರಿ ತಿಳಿಸಿದ. ಮುಂದೆ ನನಗೆ K V Subbanna Intimate Theatre ಬೋರ್ಡ್ ತೋರಿಸಿ ನಿಹಾ ಕಿಸಿ ಕಿಸಿ ನಗ್ತಾ ಇದ್ದಳು.  ಮನೆಯ ಮೇಲಿನ ಜಾಗವನ್ನು ಸಿನಿಮಾ   ಹಾಲ್ ಆಗಿ ಕನ್ವರ್ಟ್ ಮಾಡಿದ್ದಾರೆ.  ನಾವು ಒಳಗೆ ಹೋದಾಗ ಬೆರಳಣಿಕೆಯಷ್ಟು ಜನ ಮಾತ್ರ ಇದ್ದರು. ಎಲ್ಲರೂ ಮಾರಾಠಿ ಮಾತಾಡ್ತಾ ಇದ್ದರೆ ನಾನು ನನ್ನ ಮುಂಬೈ ಯನ್ನು ಮಿಸ್ ಮಾಡ್ಕೊಳ್ಳುತ್ತ ಅವರ ಮಾತನ್ನು ಕೇಳ್ತಾ ಇದ್ದೆ. ಯಾರೋ ಒಬ್ಬರು ಕಾಕಸ್ಪರ್ಶದ ಕತೆ ಹೇಳ್ತಾ ಇದ್ದರು. ತೀರ ನನ್ನ ಪಕ್ಕ ಕುಳಿತ ದಂಪತಿಗೆ ಕನ್ನಡ ಬರುತ್ತಿರಲಿಲ್ಲವಾದ್ದರಿಂದ, ಅನುವಾದ ಮಾಡುವ ಕೆಲಸ ನನ್ನ ಪಾಲಿಗೆ ಬಿತ್ತು.
ತುಂಬ ಇಕ್ಕಟ್ಟು. ಒಬ್ಬರು ಅಲ್ಲಾಡಿದರೆ ಆ ಸಾಲು ಪೂರ್ತಿ ಅಲ್ಲಾಡ್ತಾ ಇತ್ತು. ನನಗಂತು ಸುಮ್ಮನೆ ಕೂರಲು ಆಗುವುದಿಲ್ಲ. ಪ್ರತಿಸಲ ನನ್ನ ಕೈ ಯೋ ಕಾಲೋ ಬೇರೆ ಯವರ ಕುರ್ಚಿಗೆ ತಾಗಿ ಅವರು ಹಿಂದುರುತಿ ನೋಡುವುದೋ, ಕೆಂಗಣ್ಣು ಬಿಡುವುದೋ , ನಾನು ಸಾರಿ ಹೇಳುವುದು ನಡೀತಾ ಇತ್ತು. ಅದಕ್ಕೆ ನಿಹಾ 'ಇದಕ್ಕೆ ಇಂಟಿಮೇಟ್ ಅನ್ನೋದು ಅಂದಾಗ ಕಷ್ಟ ಪಟ್ಟು ನಗು ತಡೆಹಿಡಿದೆ.  i enjoyed. ಸಾಧಾರಣ ಸನ್ ಸೆಟ್ ಹೊತ್ತಿಗೆ ಆ ಹಾಲ್ ಎಷ್ಟು ಬಿಸಿಯಾಯ್ತೆಂದರೆ ನಾನೇದರೂ ಯೀಷ್ಟ್ (yeast) ತಿಂದಿದ್ದರೆ ಬ್ರೆಡ್ ಅಥವ ಕೇಕ್ ಆಗೋದು ಗ್ಯಾರಂಟಿ ಇತ್ತು.
ಸಿನಿಮಾ ವಾಸ್ತುಪುರುಷ, ಅದರ ಜಂಟಿ ನಿರ್ದೇಶಕರು ಸುಮಿತ್ರಾ ಭಾವೆ ಮತ್ತು ಅವರ ಶಿಷ್ಯ ಸುನಿಲ್ ಸುಂಕ್ಟಂಕರ್.
ವಯಸ್ಸಾದ ಡಾ.ಭಾಸ್ಕರ್ ದೇಶಪಾಂಡೆ ಗೆ ಮುಂಬೈ ನ ಸ್ಲಮ್ ಪ್ರದೇಶಗಳಲ್ಲಿ  ಉಚಿತ ವೈದ್ಯಕೀಯ ಸೇವೆ ಸಲ್ಲಿಸಿದಕ್ಕೆ ಮ್ಯಾಗಸೆಸೆ ಪುರಸ್ಕಾರ ನೀಡಲಾಗುತ್ತದೆ. ಅವರ ಮಗ ಮತ್ತು ಅಮೇರಿಕನ್ ಸೊಸೆ ಮುಂಬೈಗೆ ಬರುವವರಿದ್ದರು. ಅವರೆಲ್ಲ ಸೇರಿ   ಡಾಕ್ಟರ್ ಭಾಸ್ಕರ್ ಹುಟ್ಟಿದ ಅವರ ಮೂಲ ಊರಾದ ನಂದಗಾಂವ್ ಗೆ ಹೋಗುವ ಪ್ಲ್ಲ್ಯಾನ್ ಹಾಕುತ್ತಾರೆ. ಅಲ್ಲಿ ತಲುಪಿದ ನಂತರ  ಈಗ ಶಿಥೀಲ ಗೊಂಡ ಹಳೆ ಮನೆಯನ್ನು ನೋಡಿ, ಅವರು ಡಾಕ್ಟರ್ ಆಗಬೇಕಾದರೆ ಏನೆನೆಲ್ಲ ಘಟನೆಗಳು ಅವರ ಚಿಕ್ಕಂದಿನಲ್ಲಿ ನಡೆಯಿತು ಎಂದು ನೆನಸಿಕೊಳ್ಳುವುದು ಕಥೆಯ ಸಾರಾಂಶ. ಈ ಸಿನಿಮಾದಲ್ಲಿ ಫ್ಲಾಶ್ ಬ್ಯಾಕ್ ಟೆಕ್ನಿಕ್ ತುಂಬ ಹೊಸತರ ಆಗಿದೆ. ವಯಸ್ಸಾದ ಡಾಕ್ಟರ್ ಮತ್ತು ಅವರು ಹುಡುಗನಾಗಿದ್ದ ಘಟನೆಗಳನ್ನು ಕೆಲವೊಮ್ಮೆ ಮುಖಾಮುಖಿ ಅಂದರೆ ಒಂದೆ ಫ್ರೇಮ್ ನಲ್ಲಿ ಇಬ್ಬರೂ ಸಂಧಿಸುವುದು ತೋರಿಸಿದ್ದು ಸಿಕ್ಕಾಪಟ್ಟೆ ಇಷ್ಟ ಆಯ್ತು ನನಗೆ. ಜೀವನ ದಲ್ಲಿ ನಮಗೆಲ್ಲ ರಿಗ್ರೆಟ್ ಇದ್ದೆ ಇರುತ್ತದೆ ಈ ರಿಗ್ರೆಟ್ ಗಳನ್ನೆಲ್ಲ ಆ ಡಾಕ್ಟರ್ ಕೂಡ ಹೆಜ್ಜೆ ಹೆಜ್ಜೆ ಗೆ ಅನುಭವಿಸುತ್ತಾರೆ. ಆಗ ಅರ್ಥ ಆಗದಿದ್ದನ್ನು ಉತ್ತರಿಸಲಾಗದಿದ್ದನ್ನು ಪ್ರಶ್ನಿಸಲಾಗದಿದ್ದನ್ನು ಈಗ ಸ್ಪಂಧಿಸುವ  ಮೂಲಕ- ಅದನ್ನು ತೋರಿಸಿದ ರೀತಿ ಅನನ್ಯ.(ಇದನ್ನು ಇನ್ನೂ ಚೆನ್ನಾಗಿ explain ಮಾಡಲು ಬರ್ತಾ ಇಲ್ಲ) :-(
ಡಾ ಭಾಸ್ಕರ್ ಮನೆಯಲ್ಲಿ ಅವರ ಗಾಂಧಿ ತತ್ವ ಪರಿಪಾಲಿಸುವ ಸ್ವಾತಂತ್ರ್ಯ ಹೋರಾಟಗಾರ ತಂದೆ, ತಾಯಿ, ಭಾಸ್ಕರ್ ನ ಅಣ್ಣ ನಿಶಿಕಾಂತ್, ಚಿಕ್ಕಪ್ಪ, ಮನೆಯ ಆಳು ಗೋಟುರಾಮ್ ಮತ್ತು ಹೆಲ್ಥ್ ಸೆಂಟರ್ ನಡೆಸುವ ಕೃಷ್ಣಾ ತಾಯಿ, ಭಾಸ್ಕರ್ ನ ಸ್ನೇಹಿತ ಇವರೆಲ್ಲರ ಸುತ್ತು ತಿರುಗುತ್ತದೆ. ಚಿಕ್ಕಪ್ಪನ ಹೆಂಡತಿ ಮತ್ತು ಮಗಳು ತೀರಿಕೊಂಡಿದ್ದಾರೆ. ಅವರಿಗಿನ್ನೂ ಚಿಕ್ಕ ವಯಸ್ಸು. ಭಾಸ್ಕರ್ ನ ಅಣ್ಣ ನಿಶಿಕಾಂತ ಟಿ.ಬಿ ತಗುಲಿದ್ದು ಔಷಧಿಯಿಂದ ಗುಣಮುಖನಾದರೂ ಅವನ ಆತ್ಮ ವಿಶ್ವಾಸ ಕಳಕೊಂಡುಬಿಟ್ಟಿರುತ್ತಾನೆ. ಕವನಗಳನ್ನು ಬರೆದಿಡುತ್ತಾನೆ. ಕೃಷ್ಣಾತಾಯಿ ಯನ್ನು ಪ್ರೀತಿಸುತ್ತಾನೆ ಆದರೆ ಅವಳು ಅನ್ಯ ಜಾತಿಯವಳು, ತಂದೆ ಈ ಮದುವೆಯನ್ನು ತಪ್ಪಿಸುತ್ತಾರೆ, ಆದರೆ ಅವನಿಗೆ ಎಲ್ಲರನ್ನೂ ಧಿಕ್ಕರಿಸಿ ಮದುವಯಾಗುವ ಧೈರ್ಯ ಇರುವುದಿಲ್ಲ. ಊರಿನಲ್ಲಿ ನಡೆಯುವ ನಾಟಕ ಸಂಗೀತ ಅಂತ ಭಾಸ್ಕರ್ ನ ಅಣ್ಣ ಹಾಗೂ ಚಿಕ್ಕಪ್ಪ ಇಬ್ಬರೂ ಅಂಡೆಲೆಯುತ್ತಾರೆ. ಕಷ್ಟ ಪಟ್ಟು ಕೆಲಸ ಮಾಡದೆ ಇದ್ದ ಆಸ್ತಿ ಯನ್ನೇ ತಿಂದುಂಡು ಈಗ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದೆ. ಭಾಸ್ಕರ್ ನ ಅಮ್ಮನಿಗೆ ಒಂದೆ ಆಸೆ ಭಸ್ಕರ್ ನಿಗೆ ಡಾಕ್ಟರ್ ಓದಿಸಿ, ಅವರ ಊರಲ್ಲೆ ಬಡ ಬಗ್ಗರ ಸೇವೆ ಮಾಡಿಕೊಂಡಿದ್ದು, ಅವರ ಪೂರ್ವಜರು ಮಾಡಿದ ಒಳ್ಳೆ ಕೆಟ್ಟ ಕೆಲಸಗಳಿಗೆಲ್ಲ ವಾಸ್ತುಪುರುಶನಿಗೆ ಶಾಂತಿ ಮಾಡಿಸಿ ಮುಂದಿನ ಪೀಳಿಗೆಯವರ ಜೀವನವಾದರೂ ಸುಧಾರಿಸಬೇಕೆಂಬುದು.  ಚಿಕ್ಕಪ್ಪ ಮತ್ತು ನಿಶಿಕಾಂತ ಎಲ್ಲೋ ಓದಿದ್ದ ಪ್ರಕಾರ ಅವರ ಹಳೆಮನೆಯನ್ನು ಕಾಯುತ್ತಿರುವ ವಾಸ್ತುಪುರುಷ ಅವರಿಗೋಸ್ಕರ ನಿಧಿಯನ್ನು ಆ ಮನೆಯಲ್ಲೇ ಎಲ್ಲೋ ಬಚ್ಚಿಟ್ಟಿದ್ದಾನೆ. ಈ ನಿಧಿಯನ್ನು ಹುಡುಕಲೋಸುವ ಅವರಿಬ್ಬರೂ ರಾತ್ರಿ ಮನೆಯನ್ನು ಅಗೆಯಲು ಪ್ರಾರಂಭಿಸುತ್ತಾರೆ. ಆ ನಿಧಿಯಿಂದ ಬರುವ ಹಣದಿಂದ ಅವರು ಭಾಸ್ಕರ್ ನಿಗೆ ಡಾಕ್ಟರ್ ಓದಿಸಲು ಕಾತುರರಾಗಿರುತ್ತಾರೆ.
ಅವರ ತಂದೆ, ಬುದ್ಧಿವಂತ ಮಗನ ಯಾವ ಸಹಾಯಕೂ ಬರುವುದಿಲ್ಲ ಅನ್ನುತ್ತಾರೆ. 'ಅವನೆ ಕಷ್ಟ ಪಟ್ಟು ಓದಿ ಡಾಕ್ಟರ್ ಆಗಲಿ ನಾನಂತು ಲಂಚ ಕೊಡುವುದಿಲ್ಲ ಹಾಗೂ ಯಾರ ಕಾಲಿಗೆ ಬೀಳುವುದಿಲ್ಲ' ಎಂಬ ಧೋರಣೆ. ಅವರ ಧೋರಣೆಯನ್ನು ಹೆಂಡತಿ ಕಟುವಾಗಿ ಟೀಕಿಸಿದಕ್ಕೆ ಸಿಟ್ಟು  ಮಾಡಿಕೊಂಡು ಭಾಸ್ಕರ್ ನ ತಂದೆ (ಈ ಸೀನ್ ನ ಡಯಲೋಗ್ ಸಕತ್ ಇಷ್ಟ ಆಯ್ತು) ಮನೆ ಬಿಟ್ಟು ಹೋಗುತ್ತಾರೆ.  ಹನ್ನೆರಡನೆ ಇಯತ್ತೆಯಲ್ಲಿ ಭಾಸ್ಕರ್ ಒಳ್ಳೆಯ ಅಂಕಗಳನ್ನು ಪಡೆದು ಉತ್ತೀರ್ಣ ನಾಗಿ ಮುಂಬೈ ನ ಪ್ರತಿಷ್ಟಿತ ವೈದಕೀಯ ಕಾಲೇಜು-ಗ್ರಾಂಟ್ ಮೆಡಿಕಲ್ ಕಾಲೇಜ್ ನಲ್ಲಿ  ಪ್ರವೇಶಪಡೆಯಲು ಅರ್ಹನಾಗುತ್ತಾನೆ. ಎರಡೇ ದಿನದಲ್ಲಿ ಫೀಸ್ ಕೂಡ ತುಂಬ ಬೇಕೆಂಬ ಆದೇಶ ಕಾಲೇಜಿನಿಂದ ಬರುತ್ತೆ. ಅವನ ತಾಯಿ ಅವಳ ಬಳೆಗಳನ್ನು ಮಾರಲು ಕೃಷ್ಣಾತಾಯಿಯ ಜತೆ ಹೋಗಿರುತ್ತಾರೆ. ಆಗ ಮನೆಯಲ್ಲಿ ನಿಧಿಗಾಗಿ ಅಗೆಯುತ್ತಿದ್ದ ಅಣ್ಣ ಹಾಗೂ ಚಿಕ್ಕಪ್ಪನ ಗುದ್ದಲಿಗೆ ಏನೋ ತಾಗಿ 'ಝಣ್' ಅಂತ ಸದ್ದು ಬರುತ್ತೆ. ಏನೋ ಬೆಳಗುತ್ತಿರುವ ಸಾಮಾನು ಕಾಣುತ್ತಿರಲು ಅದು ನೆಲದಲ್ಲಿ ತುಂಬ ಹೂತು ಹೋಗಿದ್ದರಿಂದ ಚಿಕ್ಕಪ್ಪ ಡೈನಮೈಟ್ ತಂದು ಮನೆಯಲ್ಲಿ ಇಡುತ್ತಾನೆ. ಇತ್ತ ಬಂಗಾರ ಮಾರಿ ಮನೆಗೆ ಬರುವಾಗ ಜೋರು ಮಳೆಯಾಗುವ ಸಂಭಾವನೆ ಎದ್ದು ಕಾಣುತ್ತದೆ. ಭಾಸ್ಕರ್ ನ ಅಮ್ಮ ಅವನಿಗೆ ಸೀದ ಬಸ್ ಹಿಡಿಯಲು ಹೋಗಲು ಹೇಳುವಷ್ಟರಲ್ಲಿ ಅವರ ಮನೆಯಲ್ಲಿ  ಸ್ಫೋಟ ನಡೆದು ಬೆಂಕಿ ಜ್ವಾಲೆ ಮೇಲೇರುವುದು ಕಾಣಿಸುತ್ತದೆ. ಅವನ ಅಮ್ಮ ಭಾಸ್ಕರನಿಗೆ ಆಣೆ ಇಟ್ಟು ನೀನು ಮುಂದಕ್ಕೆ ಹೋಗು, ಡಾಕ್ಟರ್ ಆಗಿ ಈ ಊರಲ್ಲಿ ಸೇವೆ ಸಲ್ಲಿಸು ಈಗ ಬಸ್ ಹಿಡಿಯಲು ಹೋಗು ಹಿಂದುರುಗಿ ನೋಡಬೇಡ ಅನ್ನುವ ಆದೇಶ ಹೊರಡಿಸುತ್ತಾಳೆ. ಮುಂದೆ ಕೃಷ್ಣಾ ತಾಯಿ ಅವನಿಗೆ, ಅಕ್ಷರ ಜ್ಞಾನ ಇಲ್ಲದ ಅಮ್ಮನ ಪರವಾಗಿ ಪತ್ರಗಳನ್ನು, ಆಗಾಗ ತಿಂಡಿಗಳನ್ನು ಕಳುಹಿಸುವುದು, ಮಾಡುತ್ತ ಅಪರೂಪಕ್ಕೆ ಅವನನ್ನು ಭೇಟಿಯಾಗಲು ಮುಂಬೈಗೆ ಬರುತ್ತಾಳೆ. ಒಂದೊಮ್ಮೆ ಅವಳು ನಿಮ್ಮ ಮನೆಯಲ್ಲಿ ಎಲ್ಲರೂ ತೀರಿಕೊಂಡಿದ್ದಾರೆ, ನಾನೇ ನಿನ್ನ ಆತ್ಮ ವಿಶ್ವಾಸ ಕುಗ್ಗದಿರಲಿ ಅಂತ ಹಾಗೂ ನಿನ್ನ ಅಮ್ಮನ ಆಣೆಯ ನಿಮಿತ್ತ ನಿನಗೇನೂ ಹೇಳಲಿಲ್ಲ ಅಂದವಳೇ ಆ ದಿನ ಅವನ ಜೀವನ ದಿಂದ ಹೊರನಡೆಯುತ್ತಾಳೆ.
ಪ್ಲ್ಯಾಶ್ ಬ್ಯಾಕ್ ಮುಗಿಯುವ ಹಂತಕ್ಕೆ ಬಂದಾಗ ಡಾ ಭಾಸ್ಕರ್ ನ ಮಗ ಮತ್ತು ಅವರ ಹೆಂಡತಿಗೆ ಇಲ್ಲಿ ಬಂದು ನೆಲೆಸುವ ಆಸಕ್ತಿ ಇಲ್ಲದಿರುವುದು ವ್ಯಕ್ತಪಡಿಸುತ್ತಾರೆ. ಕೃಷ್ಣಾತಾಯಿಯ ಮೊಮ್ಮಗಳು ಇವರ ಜತೆ ಯಲ್ಲಿ, ಮೂಲಮನೆಯನ್ನು ಆಸ್ಪತ್ರೆಯಾಗಿಸಿ ಅವರ ಜತೆಯಲ್ಲಿ ಸಹಕರಿಸಲು ಆಶಯ ವ್ಯಕ್ತ ಪಡಿಸುತ್ತಾಳೆ.
ಸಿನಿಮಾದ ಪ್ರಾರಂಭ ಹಾಗೂ ಕೊನೆಯಲ್ಲಿ ಮನೆಯಲ್ಲಿ ವಾಸ್ತುಪುರುಷನ ರೂಪದಲ್ಲಿ ಹರಿಯುವ ಹಾವನ್ನು ತೋರಿಸುತ್ತಾರೆ.
ಇಷ್ಟು ವಾಸ್ತುಪುರುಷದ ಸಂಕ್ಷಿಪ್ತ ಕತೆ. 
ಎಲ್ಲರೂ ಒಳ್ಳೆಯ ಅಭಿನಯ ಕೊಟ್ಟಿದ್ದಾರೆ. ಉತ್ತರಾ ಬಾವ್ ಕರ್ ಅಂತೂ ಧೈರ್ಯವಂತೆ practical ಆಗಿ ಯೋಚಿಸುವ ತಾಯಿಯಾಗಿ ಎಲ್ಲರನ್ನೂ ಮೀರಿಸಿದ್ದಾರೆ. ಒಟ್ಟಾರೆ ಟೀಮ್ ವರ್ಕ್ ಇಲ್ಲಿ ಎದ್ದುಕಾಣುತ್ತದೆ. ಇಡಿ ಸಿನಿಮಾದಲ್ಲಿ ಬಾಂಸುರಿಯದೇ ಬ್ಯಾಕ್ ಗ್ರೌಂಡ್ ಸ್ಕೋರ್. ಯಾವುದೇ ಅಬ್ಬರವಿಲ್ಲದೆ ನಿಧಾನಕ್ಕೆ ನಿಮ್ಮ ಒಳಹೊಕ್ಕುವ ಸಿನಿಮಾ
ತಂದೆ ಯಾಗಿ ಸದಾಶಿವ್ ಅಮ್ರಾಪುರ್ ಕರ್, ಅಣ್ಣ ನಾಗಿ ನಿಶಿಕಾಂತ್ ಅತುಲ್ ಕುಲಕರ್ಣಿ, ಚಿಕ್ಕಪ್ಪನಾಗಿ ರವೀಂದ್ರ ಮನಕಣಿ, ಚಿಕ್ಕ ಭಾಸ್ಕರ್ ಆಗಿ ಸಿಧ್ಧಾರ್ಥ ದಫ್ತರ್ ದಾರ್, ವಯಸ್ಸಾದ ಡಾ ಭಾಸ್ಕರ್ ಮಹೇಶ ಎಳಕುಂಚವಾರ್ ಆಗಿ ಪಾತ್ರ ವಹಿಸಿದ್ದಾರೆ. ಒಂದು ಚೆಂದದ ಸಿನಿಮಾ ನೋಡುವ ಅವಕಾಶ.
ಇಲ್ಲಿದೆ ಸಿನಿಮಾದ ಟ್ರೈಲರ್


ಈ ವರ್ಷದ ಪ್ರಜಾವಾಣಿ ಯುಗಾದಿ ವಿಶೇಷಾಂಕದಲ್ಲಿ ಈ ಸಿನಿಮಾದ ಡೈರಕ್ಟರ್ ಸುಮಿತ್ರಾ ಭಾವೆ ಹಾಗೂ ಸುನಿಲ್ ಸುಂಕ್ಟಂಕರ್ ಜತೆ ಪ್ರೋ. ಮನು ಚಕ್ರವರ್ತಿ ನಡೆಸಿದ  ಸಂದರ್ಶನ ಪ್ರಕಟಿಸಿದ್ದಾರೆ

ಮನು ಸರ್ - ನಿಹಾರಿಕಾಳ ಪ್ರೊಫೆಸರ್ - ಸಿನಿಮಾದ ಬಗ್ಗೆ ವಿವರವನ್ನು ತುಂಬ ಚೆನ್ನಾಗಿ ನೀಡಿದರು. ನಿಹಾ ಕೊನೆಗೆ 'ಎಷ್ಟು ಚೆನ್ನಾಗಿ ಹೇಳ್ತಾರಲ್ಲವಾ ನಮ್ಮ ಮನು ಸರ್' ಅಂದಾಗ ನಿಜಕ್ಕೂ ಒಪ್ಪಿದೆ ಮಾತ್ರವಲ್ಲ, you are lucky to have such a teacher ಅಂತ ಹೇಳಿದೆ. ಸಮೂಹದವರು ಆ ಕಾರ್ಯಕ್ರಮದ ಬಗ್ಗೆ ವರದಿ ಕಳುಹಿಸಿದರೆ ಮುಂದೆ ಅದನ್ನು ಇಲ್ಲೆ ಹಾಕುತ್ತೇನೆ.
ವಾಸ್ತುಪುರುಷ: ಮನೆಯನ್ನು ಕಾಯ್ವ ದೈವ
ಇನ್ನೇನಾದರು ನೆನಪು ಬಂದರೆ ಇಲ್ಲಿ add ಮಾಡ್ತೇನೆ. ಮರೆಯುವ ಮುನ್ನ ಸುಮ್ನೆ ಹೀಗೇ ಗೀಚಿದ್ದೇನೆ. ಇತ್ತಿಚಿಗಿನ ವರ್ಷಗಳಲ್ಲಿ ಹಲವಾರು ಒಳ್ಳೆಯ ಮರಾಠಿ ಸಿನಿಮಾಗಳು ಬರುತ್ತಿವೆ.
The story begins with the news saying that Dr. Bhaskar Deshpande has won the Magsaysay award for his contriubution in providing preventive medical care to the slum dwellers in Mumbai. The next day the Doctor is all set to go to the airport to receive his son and foreigner wife and visit his ancestral home in Nandagaon. He is visiting his house after a span of 40 years
Once he reaches the house which is falling apart he recalls his struggles and travails he had to face to become a doctor.
He decides to stay in his ancestral home and start a hospital there to appease the Vastupurush- family's guardian spirit as per his mothers wishes who feels and pounds into his head repeatedly during his childhood days that 'our fuedal Brahmin family has done a lot of injustice to the people residing in this village. you should become a doctor and serve the poor and the needy here. its the best way to undo our past wrongdoings and also to undo their curse that has fallen upon our vastupurush'
:-)

March 21, 2013

ಹರಟೆ ಮಲ್ಲಿ

ಗಿಂಗಿ ಫೋರ್ಟ್ ಪೋಸ್ಟ್ ಗೆ ಸ್ವಲ್ಪ ಕಾಯಬೇಕಾಗುತ್ತೆ. ಮಾಲವಿಕಾ ನ ಲ್ಯಾಪ್ ಟಾಪ್ ನನ್ನ ಕೈಗೆ ಸಿಗ್ತಾ ಇಲ್ಲ. :-) ಹಾಗಾಗಿ ಸುಮ್ನೆ ಒಂದು ಲಹರಿ....

ಕೆಲವೊಮ್ಮೆ  ಮಾಲವಿಕ ಅವಳ ಆಫ್ ದಿನ ಇದ್ದಾಗ ನನಗೆ ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾಗೆ ಕರೆದುಕೊಂಡು ಹೋಗ್ತಾಳೆ. ಥಿಯೇಟರ್ ಗಳಲ್ಲಿ ಸಿನಿಮಾಗಳನ್ನು ನೋಡುವುದೆಂದರೆ ನಾ ಕಳ್ಳಿ. ಯಾಕೆಂದರೆ ಕೆಟ್ಟ ಹಾಡುಗಳಿದ್ದರೆ ಅದನ್ನು ನೋಡೇ ತೀರಬೇಕು. ಮನೆಯಲ್ಲಾದರೆ ಹಾಡು ಇಷ್ಟ ಆಗದಿದ್ದರೆ ಅವನ್ನು ಮುಂದಕ್ಕೋಡಿಸಬಹುದು. ಮನೆಯಲ್ಲಿ ಅಂದ್ರೆ ಸಿಸ್ಟಮ್ ನಲ್ಲಿ ನೋಡೋದು ನಾ ಸಿನಿಮಾ. ಇತ್ತೀಚೆಗೆ ಅವಳು ನನ್ನನ್ನು ನಿಹಾಳನ್ನು (ನಿಹಾ ಗೆ ಆ ದಿನ ರಜೆ ಇತ್ತಾ ಅಥವ ಕಾಲೇಜ್ ಗೆ ಚಕ್ಕರ್ ಹಾಕಿದ್ದಳಾ ಗೊತ್ತಿಲ್ಲ) ಮಾಲವಿಕಾಳಿಗೆ ಮಧ್ಯಾಹ್ನದ ನಂತರ ಬೇರೆ ಕೆಲಸ ಇತ್ತು ಹಾಗೂ ಬೆಳಗ್ಗಿನ ಶೋ ಗೆ ಕಡಿಮೆ ರೇಟ್ ಅಂತಪ್ಪ, ಹಾಗಾಗಿ ಇಂಗ್ಲಿಶ್ ವಿಂಗ್ಲಿಶ್ ಸಿನಿಮಾಗೆ ಬೆಳಿಗ್ಗೆ 10.30 ಶೋ ಗೆ ಹೊರಟ್ವಿ. ಮಾಲವಿಕಾ ತಲೆ ಸ್ನಾನ ಎಲ್ಲ ಮಾಡಿ ಬಂದು ಸ್ವ್ಲಲ್ಪ ಲೇಟ್ ಆಯ್ತು. ನಾನು ಒಂದು ಚೂಡಿದಾರ ಹಾಕ್ಕೊಂಡಿದ್ದೆ. ಆದರೆ ಅದರ ಓಢನಿ ಸಿಗಲಿಲ್ಲ. ಬೇರೆ ಡ್ರೆಸ್ ಗಳಿಗೆ ಇಸ್ತ್ರಿ ಇರಲಿಲ್ಲ. ಸೀರೆ ಉಡುವ ಮೂಡ್ ಹಾಗೂ ವೇಳೆ ಕೂಡ ಇರಲಿಲ್ಲ. ಮತ್ತು ಈ ಫಿಲ್ಮ್ ದಿಢೀರ್ ಐಡಿಯಾ. ಹಾಗಾಗಿ ಟಿಕೆಟ್ ಕೂಡ ಮುಂಚಿತವಾಗಿ ಕಾಯ್ದಿರಿಸಿರಲಿಲ್ಲ. ನಾವು ಹೋಗುವಾಗ ಟ್ರಾಫಿಕ್ ಕೂಡ ಇತ್ತು. ಮಲ್ಲೆಶ್ವರಂ ನ ಮಂತ್ರಿ ಸ್ಕೇರ್ ನಲ್ಲಿ ಸಿನಿಮಾ. ಅಲ್ಲಿ ತಲುಪುವಾಗ ದೊಡ್ಡ ಲೈನ್. ಬೇರೆ ಎರಡು ಸಿನಿಮಾ ಸೋಲ್ಡ್ ಅಔಟ್ ಅಂತ ಹಾಕಿದ್ದರು. ಆ ದಿನ ಬುಧವಾರ. ನಾನಂತೂ ಅಷ್ಟು ರಶ್ expect ಮಾಡಿರಲಿಲ್ಲ, ಮಾಲವಿಕ ಸರತಿ ಸಾಲಿನಲ್ಲಿ ನಿಂತಳು. ನೋಡ ನೋಡುತ್ತಿದ್ದ ಹಾಗೆ ಅವಳು ಕೌಂಟರ್ ಬಳಿ ತಲುಪಿದಳು. ಆಗ ನಾನು ಆ ಹಿರಿಯ couple ಅನ್ನು ನೋಡಿದೆ. ಗಂಡ ಕಷ್ಟಪಟ್ಟು ಸೆಕ್ಯುರಿಟಿಯವರು ಹಾಕಿದ್ದ ರೋಪ್ barricade ಒಳಗೆ ನುಸುಳಿದರು. ಹೈಯರ್ ಪಿನ್ ಬೆಂಡ ನ ಮಾದರಿಯಲ್ಲಿ ಟಿಕೆಟ್ ಕೊಳ್ಳುವವರ ಲೈನ್ ಮೂರು ಸುತ್ತು ತಿರುಗಿ ಕೌಂಟರ್ ಬಳಿ ತಲುಪುತಿತ್ತು. ಆಗಲೇ ಸಿನಿಮಾ ಶುರು ಆಗುವ ಟೈಮ್ ಕೂಡ ಆಯ್ತು. ನಾನು ಆ ವಯಸ್ಸಾದವರ ಹೆಂಡತಿ ಬಳಿಗೆ ಹೋಗಿ 'ವ್ಹಿಚ್ ಪಿಕ್ಚರ್' ಅಂತ ಕೇಳಿದೆ. ಅವರು ಇಂಗ್ಲಿಶ್ ವಿಂಗ್ಲಿಶ್, ಆದರೆ ಟಿಕೆಟ್ ಸಿಗೋದು ಡೌಟ್ ಅಂತ ಬೇಸರದಿಂದ ಹೇಳಿದರು. ನಾವು ಅದನ್ನೆ ನೋಡಲಿಕ್ಕೆ ಬಂದಿರುವುದು. ನನ್ನ ಮಗಳು ಕೌಂಟರ್ ಬಳಿ ಇದ್ದಾಳೆ. ನಿಮಗೂ ಟಿಕೆಟ್ ತೆಗೆಸಲಾ ಅಂತ ಕೇಳಿದೆ. ಅವರು ಗಂಡನ ಒಟ್ಟಿಗೆ ಸಮಾಲೋಚಿಸಿದರು. ನಾನು ಅವರ ಬಳಿ ಹೋದೆ. ಅರೇ ಅವರು ಕೊಂಕಣಿ ಮಾತಾಡ್ತಾ ಇದ್ದರು. ನಾನು ಕೊಂಕಣಿ ಮಾತಾಡಲು ಶುರು ಮಾಡಿದೆ. ಆ ಹಿರಿಯರು ಕೂಡ ಓ ಕೆ ಅಂದರು. ನಾನು ನಿಂತಲ್ಲಿಂದಲೇ ಮಾಲವಿಕಾಳಿಗೆ ಕೂಗಿದೆ. ಅವಳು ತಿರುಗಿದಾಗ ಕೈ ಸನ್ನೆಯಲ್ಲೇ ಆ ಹಿರಿಯರನ್ನು ತೋರಿಸಿ 5 ಬೆರಳು ತೋರಿಸಿ 5 tickets ಅಂದೆ. ಅವಳು ಟಿಕೆಟ್ ತರುವ ಮುಂಚೆನೆ ಆ ಹಿರಿಯರು ನನಗೆ ಅದರ ಟಿಕೆಟ್ ನ ದುಡ್ಡು ಕೊಡಲು ಬಂದರು. ನಾನು 'ಮೊದಲು ಟಿಕೆಟ್ ಕೈ ಗೆ ಬರಲಿ , ಆ ಮೇಲೆ ಡುಡ್ಡು ಕೊಡುವಿರಂತೆ, ಅಷ್ಟರ ತನಕ ಅಲ್ಲಿ ಕೂತುಕೊಳ್ಳಿ ಅಂತ, ಆಗಷ್ಟೆ ತೆರವಾಗಿದ್ದ ಕೂತುಕೊಳ್ಳುವ ಜಾಗವನ್ನು ತೋರಿಸಿದೆ. ಅವರು ಕುಳಿತಿಕೊಂಡರು. ಮಾಲು ಟಿಕೆಟ್ ತಂದು ಅವರಿಗೆ ಕೊಟ್ಟು ದುಡ್ಡು ಇಸಕೊಂಡಳು. ಆ ಮೇಲೆ ಥೀಯೇಟರ್ ಒಳಗೆ ಹೋಗಲು ಸೆಕ್ಯುರಿಟಿ ಚೆಕ್ ಬಳಿ ಹೋದೆವು. ಅವರು ನಮ್ಮನ್ನು ಹಿಂಬಾಲಿಸಿದರು. ಹೇಗೂ ನಮ್ಮ ಬಳಿಯ ಸೀಟು. ನನ್ನ ಬಳಿ ನೀರಿನ ಬಾಟಲ್ ಇತ್ತು. ಅದಕ್ಕೆ ಲೇಬಲ್ ಕೂಡ ಇತ್ತು. ಚೆಕ್ ಮಾಡುವ ಹೆಂಗಸು ಆ ಲೇಬಲ್ ಅನ್ನು ಕಿತ್ತು ಬಾಟಲಿ ನನಗೆ ವಾಪಸ್ ಕೊಟ್ಟಳು. ಒಳಗಡೆ ತಿಂಡಿ ನೀರು ತೆಗೆದುಕೊಂಡು ಹೋಗುವ ಹಾಗಿರಲಿಲ್ಲ.

ಸಿನಿಮಾ ತಕ್ಕ ಮಟ್ಟಿಗೆ ಚೆನ್ನಾಗಿತ್ತು. ಅಂದರೆ 10 ರಲ್ಲಿ 7.5 ಕೊಟ್ಟೆ ನಾನು. ಇಂಟರ್ ವೆಲ್ ನಲ್ಲಿ ನನ್ನ ಪಕ್ಕದಲ್ಲಿ ಕೂತ ಮಾಮಾ   ನೊಂದಿಗೆ ಮಾಲವಿಕ ತಂದ ಬಿಸಿ ಬಿಸಿ ಚೀಸಿ popcorn ಶೇರ್ ಮಾಡ್ತಾ-(ಕೊಂಕಣಿಯವರು ತುಂಬ easily ಮಾಮು ಮಾಯಿ ಸಂಬೋಧನೆಗೆ ಇಳಿದುಬಿಡ್ತೀವಿ)ನೀರು ಬೇಕಾ ಅಂತ ಕೇಳಿದೆ? ಹೌದು ಗಡಿಬಿಡಿಯಲ್ಲಿ ನೀರು ತರಲು ಮರೆತು ಹೋಯ್ತು. ಮತ್ತೆ ಹೊರಗಡೆ ಹೇಗೂ ನೀರು ಸಿಗುತ್ತಲ್ಲವ ಅಂತ ಅದರ ಬಗ್ಗೆ ತಲೆ ಕೆಡಸಿಕೊಳ್ಳಲಿಲ್ಲ.  ನನಗೆ ಈ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವುದೆಂದರೆ ಆಗುವುದಿಲ್ಲ. ಇವಳ ಪಿರಿಪಿರಿಗೆ ಬಂದೆ' ಅವಳು ಅವಳ ಮಹಿಳಾ ಮಂಡಲಿ ಮಹಿಳೆಯರ ಜತೆ ಸಿನಿಮಾಗೆ ಹೋಗ್ತಿರುತ್ತಾಳೆ. ನಮಗೆ ಬರುವಾಗ ದಾರಿ ತಪ್ಪಿತು ಹಾಗಾಗಿ ತಲುಪಲು ವಿಳಂಬ ವಾಯ್ತು' "ನನಗೂ ಥಿಯೇಟರ್ ನಲ್ಲಿ ಸಿನಿಮಾ ನೋದುವುದೆಂದರೆ ಸ್ವಲ್ಪ ಕಿರಿಕಿರಿನೇ. ಆದರೆ ಈ ಸಿನಿಮಾದ ಟ್ರೈಲರ್ ನೋಡಿ ಚೆನ್ನಾಗಿರಬಹುದೆಂದು ಬಂದೆ' ಅಂತಂದೆ.. ಹಾಗೆ......
"ಹೇಗೆ ಬಂದ್ರಿ?"
"ಸ್ಕೂಟರ್ ನಲ್ಲಿ'
"ಎಲ್ಲಿ ಮನೆ"
"ಮಹಾಲಕ್ಷ್ಮೀಪುರಂ"
"ಅರೇ, ನಾವು ಕೂಡ ಅಲ್ಲಿಂದಲೇ ಬಂದಿದ್ದು "
ಹೀಗೆ ಮಾತಾಡ್ತಾ ಮಾತಾಡ್ತಾ ಅವರು ನಮ್ಮ ಮಹಾಲಕ್ಷ್ಮಿಪುರಂ ಆಫಿಸ್ ನ ಬಳಿಯಲ್ಲಿ ಇರುವುದು, ನಮ್ಮ ಆಫಿಸ್ ಬೋರ್ಡ್ ನೋಡುತ್ತಿರೋದು' ನಾನು ನಮ್ಮ ಆಫಿಸ್ ಶುರು ಮಾಡಿದ ಸಾಹಸಗಳು, ಬೆಂಗಳೂರಿಗೆ 11 ವರ್ಷದ ಹಿಂದೆ ಬಂದಿದ್ದು ಎಲ್ಲ ವಿನಿಮಯ ಮಾಡಿಕೊಂಡ್ವಿ. ಅಷ್ಟೆ ಅಲ್ಲ' ನಿಮ್ಮ ಮಗಳಿಗೆ ಥ್ಯಾಂಕ್ಸ್ ಹೇಳಿ' ಎಷ್ಟು ಒಳ್ಳೆ ಮಕ್ಕಳು ನಿಮ್ಮನ್ನು ನೋಡಿತ್ತಿದ್ದರೆ ಖುಶಿ ಆಗ್ತದೆ. ಫ್ರೆಂಡ್ಸ್ ತರಹ ಇದ್ದೀರಿ ಮೂರು ಜನ ಅಂದರು. 
ನಾನು ಮುಂಬೈ ನಲ್ಲಿ ಹುಟ್ಟಿ ಬೆಳೆದದ್ದು, ಶ್ರೀಕಾಂತ ತೀರ್ಥಹಳ್ಳಿಯವರು ಅಂತೆಲ್ಲ ಅಂದಾಗ ಹಿರಿಯರು full alert
'ತೀರ್ಥಹಳ್ಳಿಯಲ್ಲಿ ಯಾರ ಮನೆ"
ನಾನು ಹೇಳಿದೆ
ನೋಡಿದ್ರೆ ನನ್ನ ಎರಡನೆ ಓರಗಿತ್ತಿಯ ಹತ್ತಿರದ ಸಂಬಂಧಿಕರು ಆಗಿದ್ದರವರು. ಖ್ಯಾತ ಉದಯೋನ್ಮುಖ ಹಾಡುಗಾರ್ತಿ ಮಾಹಾಲಕ್ಶ್ಮಿ ಶಣೈ ಅವರ ತಂದೆಯ ಸೋದರ ಅಂತ ತಿಳಿಯಿತು. ಆ ಮೇಲೆ ಶುರು ಆಯ್ತು ಅವರು ಗೊತ್ತಾ ಇವರು ಗೊತ್ತಾ...ಈ ಸಂಬಂಧಗಳನ್ನು ವಿವರಿಸುವುದಲ್ಲಿ ನಾನು ದೊಡ್ಡ faliure.ಮತ್ತೆ inevitably we end up being related to each other in some ಬಾದರಾಯಣ way. :-)  ಮತ್ತೆ ದೊಡ್ಡ ಮಗಳಿಗೆ ಮದುವೆ ಮಾಡ್ತೀರಾ ಅಂತ ಕೇಳಿದರು. ಇಲ್ಲ ಮುಂದಿನ ವರ್ಷ ಅದರ ಬಗ್ಗೆ ಡಿಸೈಡ್ ಮಾಡ್ತೀವಿ ಅಂದೆ. ಅವರ ಮಗ ಹೊರ ದೇಶದಲ್ಲಿರೋದು ಹೇಳಿದರು. ಕಂಪ್ಯೂಟರ್ ಇ-ಮೈಲ್ , ಸ್ಕೈಪ್ ಎಲ್ಲ ಕಲಿತು ಕೊಂಡಿದ್ದರು. ಬನ್ನಿ ಮಾಮಾ ಮನೆಗೆ ಆಫಿಸ್ ಹತ್ತಿರನೇ ಮನೆ ಅಂದೆ. ಸಿನಿಮಾ ಮುಗಿದ ಮೇಲೆ, ಬನ್ನಿ ನಮ್ಮ ಜತೆ ಇಲ್ಲೆ ಊಟ ಮಾಡಿ ಅಂತ ಅಹ್ವಾನಿಸಿದೆ. ಬೇಡ ಅಂತ ನಯವಾಗಿ ನಿರಾಕರಿಸಿ ಅವರು ಹೊರಟು ಬಿಟ್ಟರು. 
ಇವತ್ತು ಹಾಲು ತರಲು ಹೋದಾಗ ಅವರನ್ನು ನೋಡಿದೆ.
ಅರೆ ಮಾಮಾ ಏನು ನೀವಿಲ್ಲಿ ಅವರಿಗೆ ನನ್ನ ನೆನಪು ಇರಲಿಕ್ಕಿಲ್ಲ ಅಂತ ತಿಳಿದುಕೊಂಡಿದ್ದೆ
ಅರೆ ಮಗು ನೀನು ಇಲ್ಲಿ ಅಂತ ಕೇಳಿದರು. ನನ್ನ ಮನೆ ಇಲ್ಲೇ ಈ ದೇವಸ್ಥಾನದ ಹಿಂದೆ ಅಂತ ಹೇಳಿದೆ, ಹಾಗೇ 'ಅಲ್ಲ ನಿಮ್ಮ ಮನೆ ಬಳಿಯೇ ನಂದಿನಿ ಹಾಲಿನ ಬೂತ್ ಇದೆಯಲ್ಲ' ಇಷ್ಟು ದೂ ರ ಯಾಕೆ ಬಂದ್ರಿ" (ನಮ್ಮ ಮನೆ ಕಡೆ ಬರಬೇಕಾದ್ರೆ ರಸ್ತೆ ಸ್ವಲ್ಪ uphill ಇದೆ
ಒಂದು ವಾಕ್ ಆಗುತ್ತಲ್ಲವ ಮಗು. ಹಾಗೆ ಸ್ವಲ್ಪ ತರಕಾರಿ ಒಯ್ಯುವ ಅಂತ ಬಂದೆ' ಹೌದು ನಮ್ಮ ಮನೆ ಬಳಿ costly but ತಾಜಾ ತರಕಾರಿ, ಮಂಗಳೂರಿನ ಸ್ಪೆಷಲ್ ತರಕಾರಿ/ ದಿನಸಿ/ತಿಂಡಿಗಳನ್ನು ಮಾರುವ 'ಮಂಗಳೂರು ಸ್ಟೋರ್ಸ್' ಇದೆ
ಬನ್ನಿ ಮಾಮಾ ಮಾಯಿಯನ್ನು ಕರೆದುಕೊಂಡು ಅಂತ ಆಹ್ವಾನ ನೀಡಿದೆ. ಆಯ್ತು ಮಗು ಮನೆ ಗೊತ್ತಾಯ್ತಲ್ಲ ಬರ್ತೇನೆ ಅಂದ್ರು
ಹೆಂಗೆ???

:-) :-)

March 16, 2013

ಹಾಗಲಕಾಯಿ ಮಾವಿನಕಾಯಿ ಮೆಣ್ಸಗಾಯ್

ಹಿಂದಿನವಾರ ಅಮ್ಮ ತಮ್ಮಂದಿರ ಬಳಿ ಎರಡು ದಿನ ಇದ್ದು ಬರುವಾ ಅಂತ ಹೋಗಿದ್ದೆ. ಅಲ್ಲಿನ ಮೈನ್ attraction ನನ್ನ ಎರಡನೇ ತಮ್ಮನ ಮಗಳು ಸ್ಯಾಮಿ. ನನ್ನ ಪ್ರೀತಿಯ ಸ್ಯಾಮ್, ಸ್ಯಾಮಸಂಗ್, ಸ್ಯಮೋ, ಮೋಗ್ ಬಾಬು etc etc. ನಾ ಯಾವುದೇ ಹೆಸರಿನಿಂದ ಕರೆದ್ರೂ 'ಓ ಮಾಲತಿಯಕ್ಕ' ಅನ್ನುತ್ತಾಳೆ. ಈಗ ಅವಳ ಮನೆಯಲ್ಲಿ ಇನ್ನೊಂದು ಪುಟ್ಟ ಪಾಪು ಬರಲಿದೆ ಆಗಸ್ಟ್ ಸುಮಾರಿಗೆ.

ನಾನು ಅಕ್ಕ ಅವಳನ್ನು ಮಿಲಿಟರಿ ಮಹಾದೇವಕ್ಕೆ ಕರೆದುಕೊಂಡು ಹೋಗಿದ್ವಿ. ಅಲ್ಲಿ ಮಾಲತಿಯಕ್ಕ ಪಾಪ್ ಕಾರ್ನ್ ತಗೊಳುವ? ಅಂತ ಕೇಳಿದಳು. ನಾನು ಹೂಂ ಅಂದೆ. ಅವಳೇ ನಮ್ಗೆ ಪೋಪ್ ಕಾರ್ನ್ ಕೊಡಿಸ್ತಿದ್ದಾಳೋ ಎಂಬ ಠೀವಿ. ಎಷ್ಟು innocent carefree and honest ಅಲ್ವಾ ಆ ವಯಸ್ಸು. ಮೊನ್ನೆ ಡಿಸೆಂಬರ್ ನಲ್ಲಿ ಅವಳು ನಾಲ್ಕನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡ್ಲು. ಹಾಗೆ ರಿಕ್ಷಾದಲ್ಲಿ ಮನೆಗೆ ವಾಪಸ್ ಆಗುವಾಗ, ಮಾಲತಿಯಕ್ಕ ನಾಳೆ raw mango ತಿನ್ನುವ? ಅಂತ ಕೇಳಿದಳು. ನಾನು ಓಕೆ ಅಂದೆ.
ನಾನು ನಿನಗೆ ಕಟ್ ಮಾಡಿ ಕೊಡ್ತೇನೆ ಆಯ್ತಾ ಅಂದ್ಲು...cho chweet. love you love you and love you ಸ್ಯಾಮಿ. ಚೆಂದದ ದನಿ ಇದೆ ಅವಳಿಗೆ.  ಹಿಂದುಸ್ಥಾನಿ vocal ಕಲಿತಿದ್ದಾಳೆ. ಹಿಂದಿ, ಇಂಗ್ಲಿಶ, ಕೊಂಕಣಿ, ಮರಾಠಿ ಮತ್ತು ಕನ್ನಡ ಮಾತಾಡ್ತಾಳೆ.
ಮಾವಿನಕಾಯಿ ಕಟ್ ಮಾಡ್ತಿದ್ದಹಾಗೆ ಅವಳ ನೆನಪಾಯ್ತು. ಅದಕ್ಕೆ ನಿಮ್ಮೊಂದಿಗಿಷ್ಟು ಶೇರ್ ಮಾಡಿದೆ.
ಸ್ಯಾಮಿಯ ಹೆಸರು ಸಮಿಧಾ

ಈಗ ಮೆಣ್ಸಗಾಯ್ ಬಗ್ಗೆ ಬರೀತೀನಿ
1 ಒಂದು ಹದ ಗಾತ್ರದ ಮಾವಿನಕಾಯಿ
2 ಹಾಗಲಕಾಯಿ
1/2 ಟೀ ಚಮಚ ಉದ್ದಿನ ಬೇಳೆ
1/2 ಟೀ ಚಮಚ ಕಡಲೆ ಬೇಳೆ
1/2 ಟೀ ಚಮಚ ಮೆಂತೆ
1 ಚಮಚ ಕೊತ್ತಂಬರಿ
1/4 ಟೀ ಚಮಚ ಜೀರಿಗೆ
1 ಟೇಬಲ್ ಸ್ಪೂನ್ ಕಾಯಿ ತುರಿ
ಸಣ್ಣ ಹಿಂಗಿನ ತುಂಡು
ಹುರಿದ ಕೆಂಪು ಮೆಣಸು 5-6
ಎರಡು ಹಸಿಮೆಣಸಿನಕಾಯಿ
ದೊಡ್ಡ ಚೂರು ಬೆಲ್ಲ, ರುಚಿಗೆ ಉಪ್ಪು, ಸ್ವಲ್ಪ ಹುಣಸೆ ಹುಳಿ






ಮಾವಿನ ಕಾಯಿ ಹೋಳು ಮಾಡಿಡಿ. ಹಾಗಳಕಾಯಿಯ ಹೋಳಿ ಗೆ ಉಪ್ಪು ಹಚ್ಚಿಡಿ. ಅರ್ಧ ಗಂಟೆ ಬಿಟ್ಟು ನೀರಲ್ಲಿ ಹಾಕಿ. ಮೇಲಿನ ಪಟ್ಟಿಯಲ್ಲಿದ್ದ ಸಾಂಬಾರು ಪದಾರ್ಥಗಳನ್ನು ಒಂದೊಂದಾಗಿ ಎಣ್ಣೆಯಲ್ಲಿ ಕೆಂಪಗೆ ಹುರಿಯಿರಿ. ಕೊನೆಯಲ್ಲಿ ಕಾಯಿ ತುರಿ ಹಾಕಿ ಕೆಂಪಗೆ ಹುರಿಯಿರಿ. ಹುಣಸೆ ಹುಳಿ ಕೆಂಪು ಮೆಣಸಿನ ಒಟ್ಟಿಗೆ ತರಿತರಿಯಾಗಿ ರುಬ್ಬಿ. ಎಣ್ಣೆ ಯಲ್ಲಿ ಸಾಸಿವೆ ಕರಿಬೇವಿನಿಂದ ಒಗ್ಗರಣೆ ಹಾಕಿ. ಅದಕ್ಕೆ ಉದ್ದಕ್ಕೆ ಸೀಳಿದ ಎರಡು ಹಸಿಮೆಣಸಿನಕಾಯಿ ಹಾಕಿ ಕೈಯಾಡಿಸಿ. ಇದಕ್ಕೆ ಹೋಳುಮಾಡಿಟ್ಟುಕೊಂಡ ಮಾವಿನಕಾಯಿ + ಹಾಗಲಕಾಯಿ ಹಾಕಿ ನೀರು ಹಾಕಿ ಬೇಯಿಸಿ.ರುಬ್ಬಿಟ್ಟ ಮಸಾಲೆ ಬೆರೆಸಿ. ಕುದಿ ಬರುವಾಗ ಉಪ್ಪು ಬೆಲ್ಲ ಬೆರೆಸಿ.

ಬಿಸಿ ಬಿಸಿ ಅನ್ನದೊಂದಿಗೆ ಚೆನ್ನಾಗಿರುತ್ತೆ.
(This post is for Sakhee : Sowmya Kalyankar)
:-)
ಮುಂದಿನ ಪೋಸ್ಟ್ ನಲ್ಲಿ ಗಿಂಗಿ ಫೋರ್ಟ್...

March 11, 2013

ತಿರುವಣ್ಣಾಮಲಾಯ್- ರಮಣಮಹರ್ಷಿ ಆಶ್ರಮ

ಹಿಂದಿನ ಪೋಸ್ಟ್ ನಲ್ಲಿ ನಿಹಾರಿಕಾಳ ನಾಟಕ ಪ್ರದರ್ಶನ ದ ನಂತರ ನನ್ನ ಟೂರ್ ಅಂತ ಬರೆದಿದ್ದೆ. ಹೌದು ನಾನು ಅಕ್ಕ ಒಂದು ಚಿಕ್ಕ ಬ್ರೇಕ್ ತೆಗೆದುಕೊಂಡ್ವಿ. ನಾವು ಊರಲ್ಲಿದ್ದಾಗಲೇ ನಿಹಾ ನ ಫೋನ್ ಬಂತು, ಅವರ ನಾಟಕಕ್ಕೆ ಮೊದಲನೇಯ ಬಹುಮಾನ ಬಂದಿದ್ದು. ಸ್ಕ್ರಿಪ್ಟ್. ಮ್ಯೂಸಿಕ್, ಸೆಟ್ಟಿಂಗ್ ಮತ್ತು ರಾಶೋಮೊನ್ ನ woodcutter ನ ಪಾತ್ರ ನಿಹಾರಿಕಾ ವಹಿಸಿದ್ಲು. ಅವರೆಲ್ಲರಿಗೂ ಮೇಕ್ ಅಪ್ ಮಾಡಲು ಒಬ್ಬರು ಬಂದಿದ್ದರಂತೆ. ತುಂಬಾ ಚೆನ್ನಾಗಿ ಮಾಡಿದ್ದರು. ಒಂದು ಬೇಸರದ ಸಂಗತಿಯೆಂದರೆ ನನ್ನಿಂದ ಒಂದು ಫೋಟೊ ಕೂಡ ನೆಟ್ಟಗೆ ತೆಗೆಯಲಾಗಲಿಲ್ಲ. :-(. ನಿಹಾ ಮತ್ತು ಟೀಮ್ ಗೆ ಒಂದು congrats ಹೇಳುವಾ?? ಹಿಂದಿನ ಪೋಸ್ಟ್ ನಲ್ಲಿ ಶುಭ ಹಾರೈಸಿದ ಶ್ರೀಕಾಂತ ಮಂಜುನಾಥ ಹಾಗೂ ರಾಧಿಕ ಇವರಿಗೆ ಧನ್ಯವಾದಗಳು. ಹಾಗೂ ನನ್ನ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಪ್ರೀತಿಸುವ ಜ್ಯೋತಿ, ವೇದಾ, ಸಂಧ್ಯಾ ಹಾಗೂ ನಾಗಮಣಿ ಇವರಿಗೂ ತುಂಬು ಹೃದಯದ ಧನ್ಯವಾದಗಳು
ರಾಶೊಮೋನ್ ನಾಟಕದ ಕೆಲ ದೃಶ್ಯಗಳು



ಕಾರ್ಡ್ ಬೋರ್ಡ್ ಬೆಂಕಿ ಮತ್ತು Rashomon baraha ಸಕತ್ ಇಷ್ಟ ಆಯ್ತು


the team:  ಈ ಫೋಟೊ ತೆಗೀ ಬೇಕಾದ್ರೆ ನಿಹಾ ನ ಮಿಸ್ ಬಂದು 'everybody is talking about your play' ಅಂತ ಹೇಳಿ ನನ್ನನ್ನು ನೋಡಿ, 'Are you Niharika's mother? She resembles you a lot ಅಂದ್ರು

ಈ ಸಂತೋಷದ ಸುದ್ದಿಯ ಬೆನ್ನಿಗೇ ಬಂದ ಇನ್ನೊಂದು ಸಂತಸದ ಸಂಗತಿಯೆಂದರೆ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಪುಸ್ತಕ ಸೊಗಸು ಬಹುಮಾನದಡಿ ಬಹುಮಾನ ಗೆದ್ದ ಮೂರು ಪುಸ್ತಕಗಳಲ್ಲಿ ಎರಡರ ಮುಖಪುಟ ಮಿತ್ರ ರಘು ಅಪಾರ ಮಾಡಿದ್ದು. ಮುಂದಿನ ವರ್ಷ ಮೂರು ಪುಸ್ತಕದ ಕವರ್ ಪೇಜ್ ನಿಮ್ಮದೇ ಆಗಿರುತ್ತೆ ಅಂತ ಅವರಿಗೆ ಕಣಿ ಹೇಳಿದ್ದೀನಿ. ರಘು ಮತ್ತು ನನ್ನ ಪರಿಚಯ ಆಗಿದ್ದು ಅವರು ವಿನ್ಯಾಸ ಮಾಡಿದ ಸುರೇಂದ್ರನಾಥರ 'ಎನ್ನ ಭವದ ಕೇಡು' ಪುಸ್ತಕದ ಮುಖಪುಟದ ಮೂಲಕ. ಈ ಪುಸ್ತಕ ಹೊರತಂದಿದ್ದು ಛಂದ ಪ್ರಕಾಶನ. ಹೀಗೆ ವಸುಧೇಂದ್ರ ಹಾಗು ಅವರ ಮೂಲಕ ರಘು ಅವರ ಪರಿಚಯ. ಈಗ ಅವರು ನನ್ನ ಕುಟುಂಬದ ಸದಸ್ಯರು ಎನ್ನುವಷ್ಟು ಆತ್ಮೀಯರು. ಅವರಿಗೊಂದು congrats.
ಪೊಂಡಿ ಟೂರ್ ನ ಹಿಂದಿನ ಭಾಗ
ಕೃಷ್ಣಾಗಿರಿಯಲ್ಲಿ ಎಳನೀರು ಕುಡಿದು ನಮ್ಮ ಮುಂದಿನ ಸ್ಟಾಪ್ ತಿರುವಣ್ಣಾಮಲಾಯ್ ನ ರಮಣಮಹರ್ಷಿ ಆಶ್ರಮಕ್ಕೆ.  ಆಶ್ರಮ ಅಲ್ಲಿರುವುದು ನಾವು ನೋಡಿದ್ದು ಆಕಸ್ಮಿಕ. ನಮ್ಮ ಕಾರ್ ಮುಂದೆ ಹೋಗುತ್ತಿದ ಬೈಕ್ ನಲ್ಲಿ ಹೊರದೇಶದ ಇಬ್ಬರು ಸಡನ್ ತಿರುವು ತೆಗೆದುಕೊಂಡು ಗೇಟ್ ಒಳಗಡೆ ಹೋದಾಗ ನನ್ನ ಕಣ್ಣು ಗೇಟ್ ಮೇಲಿನ ಬರಹವನ್ನು ಓದಿ, ಪೆರುಮಾಳ್ ಗೆ  ಅಲ್ಲಿ ನಿಲ್ಲಿಸುವಂತೆ ಕೇಳಿಕೊಂಡೆವು.
ಅರುಣಾಚಲ ಬೆಟ್ಟದ ಬುಡದಲ್ಲಿ ಬೆಚ್ಚಗೆ ಕುಳಿತಿದೆ ಈ ಆಶ್ರಮ. ವಿದೇಶಿಯರೂ ತುಂಬ ಹೆಚ್ಚಿನ ಸಂಖ್ಯೆಯಲ್ಲಿದ್ದರು. ರಮಣ ಮಹರ್ಷಿಯ ಬಗ್ಗೆ ಗೂಗಲಿಸಿದರೆ ಎಲ್ಲ ಡೀಟೈಲ್ಸ್ ಲಭ್ಯ. ಹಾಗಾಗಿ ನಾನು ನಾವು ತೆಗೆದ ಫೋಟೊಗಳನ್ನು ಹಾಕುತ್ತೇನೆ.
ಯಾವ ತರಹ ಹಸಿರಿದೆ ನೋಡಿ. ದಾರಿಯಲ್ಲಿ ಕಂಡುಬಂದ ಒಂದು ಹೊಲ

ಇದು ನಾನು ತೆಗೆದ ಚಿತ್ರ

ಸುಮ್ನೆ ಒಂದು
random shot

ಅಂತೂ ಚಲಿಸುವ ಗಾಡಿಯಿಂದ ತೆಗೆದ ಚಿತ್ರ ಒಂಚೂರು ಶೇಕ್ ಆಗದೆ ತೆಗೆದದ್ದು ನನ್ನ ಪ್ರಕಾರ ಸಾಹಸವೇ ಸೈ. :-)
ಆಹ್ ಎಷ್ಟು ಚೆನ್ನಾಗಿದೆಯಲ್ಲವೇ? ನಿಹಾ ತೆಗೆದಿದ್ದು
ಸಾಪಾಟ್ ರೆಡ್ಡೀssss..:-)
tree lined roads

ಇವೆಲ್ಲ ಆಶ್ರಮ ತಲುಪುವ ಮುಂಚಿನ ಚಿತ್ರಗಳು. ಇಲ್ಲಿಂದ ಆಶ್ರಮದ ಚಿತ್ರಗಳು:
ರಾಯರು ತೆಗೆದ ಚಿತ್ರ. ಆ ಮರ ನೋಡಿ ಗಂಟುಗಂಟಾಗಿ ಒಂತರಹ ಚೆನ್ನಾಗಿದೆ
ವೇದಾಧ್ಯಯನ ಶಾಲೆ
ರಮಣಮಹರ್ಷಿಯವರ ಸಮಾಧಿ ಸ್ಥಳ. ಇಲ್ಲಿ ಹಲವಾರು ಭಕ್ತರು ಧ್ಯಾನಕ್ಕೆ ಕುಳಿತಿದ್ದರು. ತುಂಬ ಪ್ರಶಾಂತ ವಾತಾವರಣ

ಬಾಲಕ ರಮಣನಿಗೆ ದಿವ್ಯಾನುಭೂತಿಯಾಗಿ ಉಟ್ಟ ಬಟ್ಟೆಯಲ್ಲಿ ತಿರುವಣ್ಣಾಮಲಾಯ್ ಗೆ ಹೊರಟು ಬಂದು ಆಶ್ರಮ ಸ್ಥಾಪಿಸಿದ್ದರ ಬಗ್ಗೆ

ಯಾವುದೇ ಅಡ್ಡಿ ಆತಂಕಗಳಿಲ್ಲದೇ ನಲಿದಾಡುವ ನವಿಲುಗಳು. ಅನತಿ ದೂರದಲ್ಲಿ ಕಾಣುತ್ತಿರುವ ಬೆಟ್ಟ
ಕಾಳು ಕುಕ್ಕುತ್ತಿರುವ ನವಿಲುಗಳು
family time

peahen/peafowl
ಆಶ್ರಮದ ಗೋಬರ್ ಗ್ಯಾಸ್ ಘಟಕ

ಗುಡ್ಡ ಹಾಗೂ ಗೋಶಾಲೆಯ ಒಂದು ಚಿತ್ರ. ಹಲವಾರು ಗೋ ತಳಿಗಳನ್ನು ಇಲ್ಲಿ ಸಂರಕ್ಷಿಸಲಾಗಿದೆ






ದನದ ಕೊಂಬನ್ನು admire ಮಾಡುತ್ತಿರುವ ಶ್ರೀಕಾಂತ

ಮಧ್ಯಾಹ್ನದ ಊಟದ ವ್ಯವಸ್ಥೆ ಕೂಡ ಇತ್ತು. ಆದರೆ ನಾವು ಪಟ್ಟಾಗಿ ಬ್ರೇಕ್ ಫಾಸ್ಟ್ ಮಾಡಿದ್ದು ಮಾತ್ರವಲ್ಲ, ನಾನು ಕಟ್ಟಿಕೊಂಡು ಬಂದ ಮೈಕ್ರೋವೇವಿಸಿದ ಶೆಂಗಾ, orange ಆಪ್ಪಲ್ ಅಂತ ಬಾಯಿ ಆಡಿಸ್ತಾ ಬಂದಿದ್ದಲ್ಲದೇ ಊಟಕ್ಕೆ ಇನ್ನೂ ಒಂದು ಗಂಟೆ ಇದ್ದುದ್ದರಿಂದ ನಾವು ಆಶ್ರಮದಿಂದ ಗಿಂಗಿ ಫೋರ್ಟ್ ಕಡೆ ಹೊರಟ್ವಿ. ಮೇಲಿರುವ ನವಿಲಿನ ಚಿತ್ರಗಳೆಲ್ಲ ಮಾಲವಿಕ ತೆಗೆದದ್ದು. ಯಾಕೋ ನಿಹಾ ಗೆ ಫೋಟೊ ತೆಗೆಯುವ ಮೂಡ್ ಇರಲಿಲ್ಲ. ಎಲ್ಲ ನವಿಲುಗಳನ್ನು ನೋಡ್ತ ನಾನು ಮಾಲು-ನಿಹಾ ಗೆ have u seen the dance of a peacock ಅನ್ನುತ್ತಿದ್ದಹಾಗೆ ಅಲ್ಲೇ ಆವರಣದಲ್ಲಿರುವ ಗೆಸ್ಟ್ ಹೌಸ್ ಮೇಲಿನ ಟೆರೆಸ್ ಮೇಲೆ ಒಂದು  ನವಿಲು ಕುಣಿದಾಡೇ ತೋರಿಸಿತು ಎಂದು ಫೋಟೊ ನೋಡಿ ನೀವೂ ನಂಬಲೇಬೇಕು. :-)

ನಾವು ಹೊರಡುವ ಮುಂಚಿನ ಒಂದು ದೃಷ್ಯ
ಗಣಪ ಮತ್ತು ನವಿಲು. malu clicks

ನಾವು ಪಾಂಡಿಚೆರ್ರಿಯಿಂದ ವಾಪಸ್ ಬರ್ತಾ ತಿರುವಣ್ಣಮಲಾಯ್ ನಲ್ಲಿ ಜಾತ್ರೆ. ಜಾತ್ರೆಯ ದಿನ ಏಳು ಗೋಪುರಗಳಲ್ಲಿ ಮೂರನ್ನಾದರೂ ನೋಡಿದರೆ ಅದು ಪುಣ್ಯ ಅಂತ ಪೆರುಮಾಳ್ ಹೇಳುತ್ತಿದ್ದ. ಉಳಿದ ಭಾಗ ಮುಂದೆ
:-)

March 1, 2013

ನಮ್ಮ ಪೊಂಡಿ ಟ್ರಿಪ್ಪು- Pondicherry Ahoy!

ಶ್ರೀಕಾಂತ ಆಫಿಸ್ ನಿಂದ ಬರ್ತಾ ಇತ್ತೀಚಿಗೆ ಸುಮಾರು ಸಲ ನಾನು ಫೇಸ್ ಬುಕ್ ನಲ್ಲಿರೋದು ನೋಡ್ತಿದ್ದಾರೆ. ಮೊನ್ನೆ ಅವರು 'ಎಷ್ಟು ದಿನ ಆಯ್ತು ಬ್ಲಾಗ್ ಅಪ್ ಡೇಟ್ ಮಾಡ್ದೆ? ಅಂತ ಕೇಳಿದರು. ಅರೇ ನಾನು ವಾರಕ್ಕೊಂದು ಪೋಸ್ಟ್ ಹಾಕ್ತೀನಲ್ಲ್ವಾ? ಐ ಯಾಮ್ ನಾಟ್ ಎಡಿಕ್ಟಡ್ ಟು ಫೇಸ್ ಬುಕ್ ಅಂದೆ. ಸರಿ ಬಿಡು ನಾನು ನಿನ್ನ ಬ್ಲಾಗ್ ಗೆ ಇತ್ತೀಚಿಗೆ ಹೋಗಿಲ್ಲ ,ಯಾಕೋ ಪುರುಸೊತ್ತೆ ಆಗ್ಲಿಲ್ಲ. ಹೂಂ ರಾಯರು ನಿನ್ನ ಬರಹ ಚೆನ್ನಾಗಿಲ್ಲ ಅಂತ ಹೇಳ್ತಾ ಆಫಿಸ್ ನಲ್ಲಿ ನನ್ನ ಬ್ಲಾಗ್ ಓದ್ತಾರಂತಾಯ್ತು. ಅವರಿಗೊಂದು ಗರ್ ರ್ ರ್ ರ್..

ಈಗಂತು ವಸುಧೇಂದ್ರರ ವರ್ಣಮಯ ಓದಿ ಇನ್ನಷ್ಟು ಸರಕು ಸಿಕ್ಕಿವೆ ನನ್ನ ಬ್ಲಾಗ್ ನ್ನು ತುಂಬಿಸಲು. ಅವರಿಗೊಂದು ಥ್ಯಾಂಕ್ಸ್. ಅವರ ಬರಹವೇ ಹಾಗೆ. ಅವರು ಪರಿಚಯ ಮಾಡಿಸಿರುವ ಪಾತ್ರಗಳೆಲ್ಲವೂ ಒಂದಲ್ಲ ಒಂದ್ಸಲ ನಮ್ಮೆಲ್ಲರ ಅನುಭವಕ್ಕೆ ಅನುಭಾವಕ್ಕೆ ಬಂದು ಹೋಗಿರ್ತಾರೆ. ಎಲ್ಲರಿಂದಲೂ ಏನಾದರೂ ಕಲಿಯಲಿಕ್ಕೆ ಇರುತ್ವೆ. ಡ್ರೈವರ್ ಆಗ್ಲೀ ಅಡಿಗೆಮಾಡುವ ಗೌರಮ್ಮನೇ ಆಗಲಿ,ಹೈರ್ ಕಟಿಂಗ್ ಸೇಲೂನ್ ನವನೇ ಆಗಲಿ ಅಲ್ವಾ? ಅವರ ದೃಷ್ಟಿಕೋನದ ಪರಿಚಯ, ಒಂದೆ ವಿಷಯ ಅಥವ ಸಂದರ್ಭಗಳನ್ನು ಅವರುಗಳು ನೋಡುವ ಪರಿ etc.. ವಸುಧೇಂದ್ರ ಇಂತಹ ಜೀವನ ಪ್ರೀತಿಯ ವಿಷಯದ ಆಯ್ಕೆಯಲ್ಲಿ ನಿಸ್ಸೀಮರು.ಕತೆಯನ್ನು ಶಬ್ಧಗಳಲ್ಲಿ ಕಟ್ಟಿಕೊಡುವ ಸಿದ್ದಿ ಅವರಿಗೆ ಸಾಧಿಸಿದೆ. ಪುಸ್ತಕ ಒಂದು ಸಲ ಕೈಗೆ ಬಂತೆಂದರೆ ಅದನ್ನು ಓದಿ ಮುಗಿಸಿದರೆ ಮನಸ್ಸಿಗೆ ನೆಮ್ಮದಿ.ಅವರ ಬರಹಗಳ ಮೂಲಕ ಯಾಕೋ ಹೆಚ್ಚು ಹೆಚ್ಚು ಇಷ್ಟ ಆಗ್ತಾರೆ ವಸುಧೇಂದ್ರ...ಒಂದು ಸಮಾಧಾನದ ಸಂಗತಿಯೆಂದರೆ ಈ ಸಲ ಅಡಿಗೆಮನೆಯಲ್ಲಿ ಯಾವುದೇ ಪಾತ್ರೆ ಸುಡದೆ ಓದಿದ್ದು. :-)



ಯಾವುದು ಹೆಚ್ಚು ವರ್ಣಮಯ? ಪುಸ್ತಕದ ಮುಖಪುಟ, ನಿಹಾಳ ಬುಕ್ ಮಾರ್ಕ್ ಅಥವಾ ನಾ ಮಾಡಿದ ಡೀಲಕ್ಸ್ ಉಪ್ಪಿಟ್ಟು? ನಮ್ಮಲ್ಲಿ ಮೂರು ತರಹದ ಉಪ್ಪಿಟ್ಟು. ಒಂದು plain-jane ಉಪ್ಪಿಟ್ಟು ಅಂದ್ರೆ ಸೀದಾ ಸಾದ, ಇನ್ನೊಂದು A-1 ಉಪ್ಪಿಟ್ಟು ತರಕಾರಿ ಹಾಕಿ. ಗೇರುಬೀಜ ಹಾಕಿದ್ರೆ ಅದು ಡೀಲಕ್ಸ್ ಉಪ್ಪಿಟ್ (ಚಿತ್ರದಲ್ಲಿರೋದು)


ಪಾಂಡಿಚೆರ್ರಿ ಟ್ರಿಪ್ ಅಂತ ವಸುಧೇಂದ್ರರ ಬಗ್ಗೆ ಯಾಕೆ ಬರಿತಿದ್ದೀನಿ ಅಂದುಕೊಂಡ್ರಾ?? ಅದಕ್ಕೆ ಕಾರಣ ಇದೆ. ನಾವು ಗಾಯತ್ರಿ ಟ್ರಾವಲ್ಸ್ ನ ಗಾಡಿ ಬುಕ್ ಮಾಡುವಾಗ ಅವರಲ್ಲಿ ಮೊದಲು ಕೇಳುವ ಪ್ರಶ್ನೆ ರವಿ ಯಿದ್ದಾರಾ ಅಂತ. ನಮ್ಮ ರವಿ ಈ ಮೊದಲು ಒಂದು ಸಲ ಬ್ಲಾಗ್ ನಲ್ಲಿ ನಮೂದಿಸಿದ ಹಾಗೆ warehouse of information. ಅವರು ಗಾಡಿ ನಡೆಸುತ್ತಾರೆಂದರೆ ಏನೋ ನೆಮ್ಮದಿ. ನಾವು ನಮ್ಮ ಸಂಸ್ಥೆ ಪ್ರಾರಂಭವಾಗಿದ್ದಾಗಿನಿಂದ ಗಾಯತ್ರಿ ಟ್ರಾವೆಲ್ಸ್ ನಮ್ಮ official carriers. :-) ಇನ್ನೊಂದು ಖುಶಿಯ ವಿಚಾರ ಅಂದ್ರೆ ಗಾಯತ್ರಿ ಟ್ರಾವೆಲ್ಸ್ ನ ಮಾಲೀಕರು ಈಶ್ವರ್, ಅವರು ತೀರ್ಥಹಳ್ಳಿಯವರು. 'ನಿಮ್ಮದೇ ಗಾಡಿ ಸರ್ ಯಾವಾಗ ಬೇಕಾದ್ರೂ ತೆಗೆದುಕೊಂಡು ಹೋಗಬಹುದು' ಎಂಬುದು ಅವರ ಟ್ಯಾಗ್ ಲೈನ್ ಬೇರೆ. ರವಿಗೆ ನಮ್ಮ ಹಳ್ಳಿ ಪ್ರಾಜೆಕ್ಟ್ ಕೆಲಸ ಗಳಲ್ಲಿ ತುಂಬ ಮುತುವರ್ಜಿ. ಮತ್ತು ನಮ್ಮನ್ನು esp family ಯನ್ನು ಎಲ್ಲಾದರೂ ಕರೆದುಕೊಂಡು ಹೋಗುವುದಾದರೆ ನಮಗಿಂತ ಅವರಿಗೆ ನಮ್ಮ ಬಗ್ಗೆ ಹೆಚ್ಹಿನ ಕಾಳಜಿ.
ರವಿ ಚೆನೈ ನ ಜಯಲಲಿತಾ ಅವರ ನಿಕಟವರ್ಗ, ಬೆಂಗಳೂರಿನ ಸಿನಿಮಾದವರಿಂದ ಹಿಡಿದು ರೋರಿಕ್ ಎಸ್ಟೇಟ್ ವರೆಗೂ ಡ್ರೈವರ್ ಆಗಿ ಕೆಲಸ ಮಾಡಿದ ಅನುಭವವುಳ್ಳವರು. ಅವರ ಮಾತು ಕೇಳುವುದು ಹಿತವಾಗಿರುತ್ತೆ. ತೀರಾ ಇತ್ತೀಚಿಗಿನ ನಮ್ಮ ಟೂರ್ ಟ್ರಾವೆಲ್ ನಲ್ಲಿ ಮಾಲವಿಕ ನಮ್ಮ ಜತೆ ಇಲ್ಲದ್ದು ಅವರಿಗೆ ತುಂಬ ಚಿಂತೆ. ಶನಿವಾರ ಭಾನುವರ ಕೂಡ ಅಕ್ಕನಿಗೆ ಕೆಲಸ ಇರುತ್ತಾ?' ಅದಕ್ಕೆ ನಾನು 'ನೀವು ಭಾನುವರ ಬರುತ್ತೀರಲ್ಲವಾ ಹಾಗೆ? ಅವಳದ್ದು ಚಾಕಲೇಟ್ ಫ್ಯಾಕ್ಟರಿ ಅವಳಿಗೆ ವಾರದ ಮಧ್ಯ ರಜೆ, ವಾರಾಂತ್ಯದಲ್ಲಿಲ್ಲ ಅಂದರೆ, ನಮ್ಮ ಹೆಂಡರು ನಮಗೆ ಯಾವಾಗ ರಜೆ ತೆಗೆದುಕೋ ಬೇಕು ಅನ್ನುತ್ತಾರೋ ಆವಾಗ ನಾವು ರಜೆ ಹಾಕ್ಕೊಂಡು ಬಿಡೋದು ಮ್ಯಾಡಂ. ಮೊನ್ನೆ ದೇವಸ್ಥಾನಕ್ಕೆ ಕರಕೊಂಡು ಹೋಗಿ ಅಂದ್ಲು, ಕರಕೊಂಡು ಹೋದೆ ಅದಕ್ಕೆ ಇವತ್ತು ಭಾನುವಾರ ಆದ್ರೂ ಸುಮ್ಮಕಿದ್ದಾಳೆ ಅಂತ ಹೇಳಿ ನನ್ನನ್ನು ನಗಿಸ್ತಾರೆ.ಒಂಚೂರು ರೋಡ್ ರೇಜ್ಲ್ಲ ಇಲ್ಲ, ಸಾವಧಾನವಾಗಿ ಗಾಡಿ ಚಲಾಯಿಸುತ್ತಾರೆ. ಅಷ್ಟಲ್ಲದೇ ರಾತ್ರಿ ನೂ ತುಂಬ ಸೇಫ್ ಆಗಿ ಡ್ರೈವ್ ಮಾದುತ್ತಾರಾದ್ದರಿಂದ ರವಿ ನಮ್ಮೆಲ್ಲರ ಫೇವರಿಟ್
ಮೊದಲೆಲ್ಲ ನಮಗೆ ದೊಡ್ಡ ದೊಡ್ಡ ಹೋಟಲ್ ಗೆಲ್ಲ ಕರೆದುಕೊಂಡು ಹೋಗೋವ್ರು. ಅದಕ್ಕೆ ನಾವು ಬೇಡ ರವಿ ನಾವು ಸಾಮಾನ್ಯ ಜನರು ಸ್ವಲ್ಪ ಕ್ಲೀನ್ ಇದ್ರೆ ಆಯ್ತು. ಹಳ್ಳಿಗಳ ಚಿಕ್ಕ ಹೋಟಲ್ ನಲ್ಲೇ ಹೆಚ್ಚು ರುಚಿ ಹಾಗೂ ಕಾಸಿಗೆ ತಕ್ಕ ಹೊಟ್ಟೆ ತುಂಬ ತಿನ್ನ ಬಹುದು ಅಂತ ಗೊತ್ತಾದದ್ದೆ, ತನಗೆ ಗೊತ್ತಿರುವ ಹೋಟಲ್.ಖಾನಾವಳಿ ಇಲ್ಲದಿದ್ದರೆ ಯಾರನ್ನಾದರೂ ಕೇಳಿ ನಮಗೆ ಒಳ್ಳೆಯ ಹೋಟಲ್ ಗಳಿಗೆ ಕರೆದುಕೊಂಡು ಹೋಗುತ್ತಾರೆ. ಮಾಹಿತಿ ಕಲೆ ಹಾಕುವುದನ್ನು ಅವರ ಬಳಿ ಕಲಿಯಬೇಕು.
ಪಾಂಡಿಚೆರ್ರಿ ಗೆ ಹೋಗುವ ಕನಸು ನಾನು ಹಿಂದಿನ 5-6 ವರ್ಷದಿಂದ ಕಾಣುತ್ತಿದ್ದೇನೆ. ಏನಾದರೂ ಕಾರಣದಿಂದ ಮುಂದೂಡತ್ತ ಬಂದಿದ್ದೇವೆ. ಮತ್ತು ಪ್ರತೀ ಸಲ ರವಿ ಗೆ ನಾನು 'ನಮ್ಮ ಪಾಂಡಿಚೆರ್ರಿ ಟ್ರಿಪ್ ಹಾಗೆ ಉಳೀತು' ಅಂತ ಹೇಳಿದಾಗ ಹೋಗುವ ಮ್ಯಾಡಂ ನಾನೇ ಕರೆದುಕೊಂಡು ಹೋಗುತ್ತೇನೆ' ಅನ್ನುತ್ತಿದ್ದರು.
ಹಾಗೆ ಏನದರಾಗಲೀ ಅಂತ ಮಾಲವಿಕನಿಗೆ ರಜೆ ಹಾಕಲು ಹೇಳಿದೆ ನಿಹಾ ಗೆ ಹೇಗೂ ರಜೆ ಇತ್ತು.ಆ ದಿನ ಶುಕ್ರವಾರ ಶ್ರೀಕಾಂತ್ ಗೆ ವಾರ್ನಿಂಗ್ ಕೊಟ್ಟೆ, ನೀವು ಬರುವುದಿಲ್ಲವಾದ್ರೂ ನಾನಂತೂ ಹೋಗೋದೆ ಅಂತ. ಶ್ರೀಕಾಂತ ತುಂಬ ಕೆಲಸದ ಒತ್ತಡ ಇದ್ದರೂ ಹೊರಟರು. ಆದರೆ ರವಿ ಬೇರೆ ಟ್ರಿಪ್ ಗೆ ಹೋಗಿದ್ದು ಬರುವುದು ಇನ್ನೂ ನಾಲ್ಕು ದಿನ ಆಗುತ್ತೆ ಅಂದಾಗ ನನ್ನ ಮೂಡ್ ಆಫ್ ಆಗಿದ್ದು ಹೌದು. ಆದರೆ ರವಿ ಅವರೆ 'ಪೆರುಮಾಳ್' ಅವರನ್ನು ನಮ್ಮಲ್ಲಿಗೆ ಕಳುಹಿಸಿದರು. ನನಗ್ಯಾಕೋ ಕಿರಿ ಕಿರಿ ಆಲ್ಮೋಸ್ಟ್ ಕ್ಯಾನ್ಸೆಲ್ ಕೂಡ ಮಾಡಿದೆ. ಆದರೆ ಈ ಸಲ ಯಾಕೋ ಪಾಂಡಿಚೆರ್ರಿ ಗೆ ಹೋಗಲೇ ಬೇಕೆಂಬ ಹಠ ನೇ ಗೆದ್ದಿತು.
ನಮ್ಮ ತಯಾರಿ ಶುರು. ನಾಲ್ಕು ದೊಡ್ಡ ದೊಡ್ಡ ಪೆಪ್ಸಿ ಬಾಟಲ್ ನಲ್ಲಿ ನೀರು, ಎರಡು ಗ್ಲಾಸ್, ಮೂರು ನಾಲ್ಕು ಅಡಿಕೆ ಹಾಳೆ ತಟ್ಟೆ, ಮಕ್ಕಳ ಕ್ಯಾಪ್, ನನ್ನ ಚಿವೀಂಗ್ ಗಮ್, ಬಿಸ್ಕಟ್, ಚಾಕೋಲೇಟ್, ಬಾಳೆ ಹಣ್ಣು, ಕಿತ್ತಳೆ, ನನ್ನ ಫರ್ಸ್ಟ್ ಏಇಡ್ ಕಿಟ್,  ಚಾಕು, ಬಟ್ಟೆ ಬರೆ ಮುಂತಾದವುಗಳನ್ನೆಲ್ಲ ಅರ್ಧದಿನಕ್ಕೆ ಪ್ಯಾಕಿಂಗ್ ಮುಗಿಸಿ, ಶನಿವಾರ ಬೆಳಿಗ್ಗೆ 6.00 ಗಂಟೆ ಹೊರಟಿತು ನಮ್ಮ ಸವಾರಿ ಮಾರುತಿ ಇಂಡಿಕಾ ದಲ್ಲಿ.
ನಾವು ಆಯ್ದುಕೊಂಡ ಮಾರ್ಗ ಬೆಂಗಳೂರು-ಕೃಷ್ಣಗಿರಿ-ಗಿಂಗಿ-ಪಾಂಡಿಚೆರ್ರಿ ರೂಟ್
ನಿಧಾನಕ್ಕೆ ಪೆರುಮಾಳ್ ಕೂಡ ಇಷ್ಟ ಆದ್ರು. ವಯಸ್ಸಾದವರಾದ್ದರಿಂದ ರಾಯರಿಂದ ಹಿಡಿದು ನಮ್ಮನ್ನೆಲ್ಲ ಪುಟ್ಟ ಮಕ್ಕಳಂತೆ ನೋಡಿಕೊಂಡರು
ಈ ಚಿತ್ರಗಳೆಲ್ಲ ಚಲಿಸುವ ಗಾಡಿಯಿಂದ ನಾನೇ ತೆಗೆದದ್ದು. ಪರ್ಮಿಟ್ ಎಲ್ಲ ಚೆಕ್ಕಿಂಗ್ ಆದ ನಂತರ ನಾವು ಕೃಷ್ಣಾಗಿರಿಯ ಸರವಣ ಭವನದಲ್ಲಿ ಪೊಂಗಲ್/ದೋಸೆ ಹೊಡೆದು ನನಗೆ ಫೋಟೊ ತೆಗೆಯುವ ಹುಮ್ಮಸ್ಸು ಬಂತು.

ಬೈ ಬೈ ಬೆಂಗಳೂರು dashboard ಮೇಲೆ ಪುಟ್ಟ ಗಣಪ

ಲತಾ ಮಂಗೇಶಕರ್ ಹಾಡಿದ ಬೆಳ್ಳನೆ ಬೆಳಕಾಯಿತು ಹಾಡು ನೆನಪಾಯಿತು

ಮೋಡದಿಂದ ಕೂಡಿದ ಆಕಾಶದ ಚಿತ್ರ

ಗುಡ್ಡಕ್ಕೆ ನೈದಿಲೆ ಬಂದಿದೆ ಅಂತ ತಿಳ್ಕೋಬೇಡಿ, ಎದುರಿನ ಗಾಜಲ್ಲಿ ಏನೋ ನೀರು ಇಳಿತಾ ಇತ್ತು. :-)

took a pot shot at everything that caught my fancy

ಇದು ನನ್ನ ಫೇವರಿಟ್ ಚಿತ್ರ. ದೂರದಿಂದಲೇ ಇದನ್ನು ಸೆರೆಹಿಡಿಯುವ ಸ್ಕೆಚ್ ಹಾಕಿ,am glad i could manage it.

ಮೇಲಿನದೇ ಗುಡ್ಡ but ಸ್ವಲ್ಪ ದೂರ ಕ್ರಯಿಸಿದ ಮೇಲೆ

ಇದೊಂದು fluke ಶಾಟ್, ಶ್ರೀಕಾಂತ ಗೆ ಕಡಿದು ಹಾಕಿದ ಮರಗಳ ಚಿತ್ರ ಬೇಕಿತ್ತು, ಆದರೆ ಹಿಂದಗಡೆ ಚೆಂದದ ಬೆಟ್ಟಕೂಡ ಬಂದಿದ್ದು ಬೈ fault :-) am happy with this pic

ಕಿಟಕಿ ಗಾಜು ಮೂಲಕ ಹಾಯ್ದು ಬಂದ ಚಿತ್ರ :-)
ಆ ಮೋಡವನ್ನಷ್ಟೆ crop ಮಾದಿ ತೆಗೆದು ನನ್ನ ಬ್ಲಾಗ್ ಗೆ ಮಾಸ್ಟ್ ಹೆಡ್ ಮಾಡುವ ಅಂದಾಜಲ್ಲಿ ತೆಗೆದದ್ದು. ಆದರೆ ನಿಹಾ ಇದು ಚೆನ್ನಾಗಿಲ್ಲ ನಾನು ಫೋಟೋ ತೆಗೆದು ನಿನಗೆ ಮಾಸ್ಟ್ ಹೆಡ್ ಮಾಡಿಕೊಡ್ತೀನಿ ಅಂದಾಗ ನಾ ಖುಶ್ :-)

ಕೃಷ್ಣಾಗಿರಿ ತಲುಪುವ ತನಕ ಈ ರೀತಿ ಹುಣಸೆ ಮರಗಳನ್ನು ಬುಡ ಸಮೇತ ಕತ್ತರಸಿ ಹಾಕಿದ್ದರು. ನಮ್ಮ ರಾಯರಿಗಂತು ಕಸಿವಿಸಿ. ಒಂತರಹ ಹಸಿ ಹಸಿ ವಾಸನೆ ಮರ ಕಡಿದ ಜಾಗದಲ್ಲಿ. ಇಲ್ಲಿ ನನ್ನ aim ತಪ್ಪಿ ಕೆಲವೇ ಮರದ ಬೊಡ್ಡೆಗಳನ್ನು ಕಾಣಬಹುದು


 ನಮ್ಮ ರಾಯರ ಇಷ್ಟದ ಪಾನೀಯ ಎಳನೀರು. 

 ತಿರುಳನ್ನು ನಾ ತಿಂದೆ ಸಕತ್ ಟೇಸ್ಟಿ ಯಾಗಿತ್ತು


ಅಲ್ಲೇ ಪಕ್ಕದಲ್ಲಿ ಯಾರದೋ ತೋಟಕ್ಕೆ ನುಗ್ಗಿ ನಾ ತೆಗೆದ ಚಿತ್ರ

ಬಿಸಿಲಿನಿಂದ ರಕ್ಷಿಸಲೋಸುಗ ನೇಯ್ದ ತೆಂಗಿನ ಗರಿ. ನನ್ನ ಇಂಟರೆಸ್ಟ್ ನೋಡಿ ತಾತಂಗೆ explain ಮಾಡೋ ಖುಶಿ

up close

ಈ ಫೋಟೋ ಫೇಸ್ ಬುಕ್ ನಲ್ಲಿ ಹಾಕಲಿಕ್ಕೆ...ನಿಹಾ ತೆಗೆದದ್ದು. :-)

ರಾಯರು & ಪೆರುಮಾಳ್

ಇವಿಷ್ಟು ನಾವು ಗಿಂಗಿ ತಲುಪುವ ಮುನ್ನ. ಇನ್ನು ಬಹುಶ: ಎರಡು ಮೂರು ಪಾರ್ಟ್ ಸ್ ನಲ್ಲಿ ಪೋಸ್ಟ್ ಮಾಡ್ತೇನೆ. ಮುಂದಿನ ಪೋಸ್ಟ್ ಗೆ ಸ್ವಲ್ಪ ವಿಳಂಬ. ನಿಹಾ ಮತ್ತು ಫ್ರೆಂಡ್ಸ್ ಕಾಲೇಜ್ ನಲ್ಲಿ 'ರೊಶೊಮೋನ್' ನಾಟಕ ಆಡುತ್ತಿದ್ದಾರೆ. ಅದಕ್ಕೆ ತಯಾರಿ ನಡೆಸಲು ನಾನು ಕೂಡ ಅವಳಿಗೆ assist ಮಾಡ್ತಿದ್ದೇನೆ.ಹಾಗಾಗಿ ನನ್ನ ಅಕ್ಕನ ಬೆಳಗಾಂ ಟೂರ್ ಕ್ಯಾನ್ಸಲ್. ಒಂದು ಖುಶಿಯ ವಿಷಯ ಅಂದ್ರೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೂ ಅವಳು ಓದಲ್ಲಿ ಮುಂದಿದ್ದಾಳೆ. ನನಗೆ ಸಮಾಧಾನ. ಅವಳ ನಾಟಕ ಚೆನ್ನಾಗಾಗಲಿ ಅಂತ ನೀವು ಕೂಡ ತುಂಬು ಮನಸ್ಸಿನಿಂದ ಹಾರೈಸ ಬೇಕು.
ಓಹ್ ಆಗಲೇ ಮಾರ್ಚ್ ಒಂದನೆ ತಾರೀಕು ಕೂಡ ಬಂತು. ಶ್ರೀಕಾಂತ ಓರ್ವ ತಂಗಿಯ ಹುಟ್ಟುಹಬ್ಬ, ಇನ್ನೊಬ್ಬ ತಂಗಿಯ ಮಗ muscular dystrophy ಯಿಂದ ತೀರಿಕೊಂಡ ದಿನ, ನನ್ನ ಮೊಮ್ಮಗಳ ಹುಟ್ಟಿದ ಹಬ್ಬ..ಆ ಮೊಮ್ಮಳಿಗೆ ಒಂದು ಮಗ ಕೂಡ ಹುಟ್ಟಿದ್ದಾನೆ. ಶ್ರೀಕಾಂತ ಮತ್ತು ಸ್ನೇಹಿತರು ಬ್ಯಾಂಕ್ ಕೆಲಸ ಬಿಟ್ಟು ಜನಪರ ಕಾರ್ಯಗೋಸ್ಕರ ಸಂಸ್ಥೆ ಪ್ರಾರಂಭ ಮಾಡಲು ನಿರ್ಧಾರ ಮಾಡಿದ ದಿನ ಕೂಡ. ಆಹ್ ಎಷ್ಟೊಂದು ನೆನಪುಗಳು. ಕುಚ್ ಖಟ್ಟಿ ಕುಛ್ ಮೀಠಿ....
ಪುನ: ಬೇಗನೆ ಸಿಗುವ, ಅಲ್ಲಿ ತನಕ ಬೈ ಬೈ....
:-)