April 27, 2016

story by Niharika

ನಿಹಾರಿಕಾಳ ಇನ್ನೊಂದು ಕತೆ 'ಶರಣಮ್ಮ' ಪಬ್ಲಿಶ್ ಆಗಿದೆ. ಆಸಕ್ತಿ ಯಿದ್ದರೆ ಕೆಳಕಿನ ಕೊಂಡಿಯಲ್ಲಿ ಓದ ಬಹುದು. ನನಗಿಷ್ಟವಾಯ್ತು ಈ ಕತೆ. ನಿಮ್ಮ ಅಭಿಪ್ರಾಯ??
:-)

April 22, 2016

ದೇವರ ಆಟ

ಆಫಿಸ್ ನಲ್ಲಿದ್ದರೂ ಜಮುನಾಳ ಮನಸ್ಸೆಲ್ಲಾ ಇನ್ನೆರಡು ದಿನದಲಿ ಕಟ್ಟಬೇಕಾದ ಬಡ್ಡಿ  ಕಂತಿನ ಮೇಲೆ ನೆಟ್ಟಿತ್ತು. ಏನು ಮಾಡಿದರೂ ೧೦,೦೦೦ ರೂಪಾಯಿಗಳು ಹೊಂದಿಸಲು ಶಕ್ಯವಿರಲಿಲ್ಲ. ಅಂತೂ ಇಂತೂ ಆಫಿಸ್ ಬಿಡುವ ವೇಳೆಯಾಯ್ತು. ಸ್ನೇಹಿತೆ ವಸುಧಾ 'ಯಾಕೇ ಮೋರೆ ಬಾಡಿದೆ ಹುಷಾರಿಲ್ಲ್ವಾ ' ಅಂತ ಕೇಳಿದಳು. ಇಲ್ವೆ ಹುಷಾರಾಗಿದ್ದೇನಿ. ಇನ್ನೆರಡು ದಿನದಲ್ಲಿ ಕಟ್ಟಬೇಕಾದ ಮೊತ್ತದ ಬಗ್ಗೆ ವಿಚಾರ. 
ಆ ದಿನ ಏನೋ ಅರ್ಜೆಂಟ್ ಇತ್ತು ಆ ವ್ಯಾಪಾರಿಯ್ಂದ ದುಡ್ಡು ಕಡ ತೆಗೆದುಕೊಂಡೆ. ಈಗ ಅರ್ಧ ದುಡ್ಡು ಕಟ್ಟ್ತೇನೆ ಅಂದ್ರೂ ಒಪ್ಪಲ್ಲಾ. ಎಲ್ಲ ದುಡ್ಡು ನಾಡಿದ್ದೇ ಬೇಕಂತೆ. ಏನು ಮಾಡಲಿ? ಮನೆಯಲ್ಲಿ ಪುಟ್ಟ ಮಕ್ಕಳು ಮಾತ್ರ ಇರೋದು. ಅವರಿಗೆ ಏನಾದರೂ ತೊಂದರೆ ಮಾಡ್ತಾರಾ ಅಂತ ಅಷ್ಟೆ ಟೆನ್ಶನ್. ಸಂಬಳ ಕೈಗೆ ಬರಲು ಇನೂ ಹದಿನೈದು ದಿನ. ಅಷ್ಟೂ ಕಾಯಕ್ಕಾಗಲ್ವಂತೆ. ಅವರನ್ನೂ ದೂಷಿಸುವ ಹಾಗಿಲ್ಲ ಬಿಡು. ನನ್ನ ಕಷ್ಟಕ್ಕೆ ತುರ್ತಾಗಿ ದುಡ್ಡು ಕೊಟ್ಟಿದ್ದಾರೆ. ಈಗ ನಾನೂ ಅದನ್ನೂ ಕಟ್ಟಬೇಕಾದುದು ನನ್ನ ಧರ್ಮ. ಬಂಗಾರ ಕೂಡ ಅಡವಿಟ್ಟದ್ದು ಆ ದುಡ್ಡು ಖಾಲಿಯಾಗಿದೆ. 
ಜಮುನಾಳ ಮಗನಿಗೆ ಇತ್ತೀಚಿಗೆ ಆಕ್ಸಿಡೆಂಟ್ ಆಗಿ ತಲೆಗೆ ಏಟು ಬಿದ್ದಿತ್ತು. ಕೂಡಲೆ ಶಸ್ತ್ರ ಚಿಕಿತ್ಸೆ ನಡೆಸಿದ್ದಲ್ಲಿ ಮಾತ್ರ ಜೀವ ಉಳಿಯುವ ಆಸೆಯಿತ್ತು. ಲಕ್ಷಗಟ್ಟಲೆ ಖರ್ಚು ಬಂದಿತ್ತು.  ಹಾಗಾಗಿ ಆಕೆ ಮಾರ್ವಾಡಿಯಿಂದ ದುಡ್ಡನ್ನು ದುಪ್ಪಟ್ಟು ಬಡ್ಡಿಗೆ ತೆಗೆದುಕೊಂಡಿದ್ದಳು. ಅವಳು ಕೆಲಸ ಮಾಡೋದು ಪ್ರೈವೆಟ್ ಫರಂ ನಲ್ಲಿ. ಸಂಬಳ ಬಿಟ್ಟರೆ ಅಲ್ಪ ಸ್ವಲ್ಪ ಮೆಡಿಕಲ್ ಫೆಸಿಲಿಟಿ ಗೆ ದುಡ್ಡು ಕೊಡ್ತಿದ್ರೆ ವಿನಾ: ದೊಡ್ಡ ಮೊತ್ತದ ಸಾಲ ವಗೈರೆ ಕೊಡುತ್ತಿರಲಿಲ್ಲ. 
ಅಲ್ಪ ಸ್ವಲ್ಪ ಉಳಿತಾಯ ಮಾಡಿದ್ದು ಮಕ್ಕಳ ಶಾಲೆಗೇ ಕಟ್ಟ ಬೇಕಾಯ್ತು. ಹಲವಾರು ಜನ ಇದರ ಬಗ್ಗೆ ಚಕಾರ ವೆತ್ತಿದ್ದು ಅವಳಿಗೆ ಗೊತ್ತು. ಅದು ಪ್ರತಿಷ್ಠಿತ ಶಾಲೆ. ಮಾತ್ರವಲ್ಲ ಮಕ್ಕಳಿಬ್ಬರೂ ಬುದ್ದಿವಂತರು. ಅಷ್ಟಲ್ಲದೇ ಈಗ ಆ ಶಾಲೆಗೆ ಭರ್ತಿ  ಮಾಡಿದರೆ ಮಕ್ಕಳ ಹನ್ನೆರಡನೇ ಕ್ಲಾಸ್ ತನಕ ಚಿಂತೆಯಿಲ್ಲದ ಶಿಕ್ಷಣ . ಅದೆಲ್ಲಾ ಆಲೋಚನೆ ಮಾಡಿಯೇ ಮಕ್ಕಳನ್ನು ಆ ಶಾಲೆಗೆ ಹಾಕಿದ್ದಳು. ಇನ್ನುಳಿದ ಉಳಿತಾಯಕ್ಕೆ ಸಧ್ಯಕ್ಕೆ ಕೈ ಹಾಕಿದರೆ ಬಡ್ಡಿ ಹಣ ಪೋಲಾಗುತ್ತಿತ್ತು. ಸಧ್ಯದ ಆಲೋಚನೆ ೧೦,೦೦೦ ರೂಪಾಯಿಗಳನ್ನು ಹೊಂದಿಸುವದು ಆಗಿತ್ತು. 
ಅವಳ ಸ್ನೇಹಿತೆ ಅವಳ ಮುಖ ನೋಡ ಲಾಗದೆ ಅವಳ ಕೈಲಿದ್ದ ಬಂಗಾರದ ಬಳೆ ಕಳಚಿ ಕೊಟ್ಟು. ಇಗೋ ಇದನ್ನು ಮಾರು ಅಥವಾ ಅಡವಿಡು. ಆ ಮೇಲೆ ಯಾವುಗಲಾದ್ರು ದುಡ್ಡು ಕೊಡು. ಮತ್ತು ನೋಡು ನೀನು ನಂಬಿರುವ ದೇವರು ನಿನ್ನನ್ನು ಯಾವತ್ತೂ ಕೈ ಬಿಡುವುದಿಲ್ಲ ಅಂತ ನಕ್ಕಳು. ದೇವರನ್ನು ನಂಬದ ವಸುಧಾ ಚೇಷ್ಟೆ ಮಾಡುತ್ತಾಳೇನೋ ಅಂದುಕೊಂಡಳು ಜಮುನಾ. ಆದರೆ ಅಲ್ಲಿ ತಮಾಷೆ ಇರಲಿಲ್ಲ. ಅವಳ ಕೈ ಬಳೆ ಯನ್ನು ಅವಳಿಗೆ ವಾಪಸ್ಸು ಮಾಡುತ್ತಾ , 'ಅಯ್ಯೋ ಇಟ್ಟುಕೋ . ನಿನ್ನಿಂದಲೇ ನನಗೆ ಧೈರ್ಯ. ಅಷ್ಟಿದ್ದರೆ ಬ್ಯಾಂಕ್ ನಲ್ಲಿರೋ ಎಫ್ ಡಿ ಮುರಿದ್ರಾಯ್ತು ಬಿಡು. 
ಬಸ್ ಹತ್ತಿ  ಬಸವಳಿದು ಟ್ರಾವಲ್ ಮಾಡಿ ಮನೆಗೆ ಬರುವಷ್ಟರಲ್ಲಿ ಜಮುನಾ ಸುಸ್ತಾದಳು. ಮಧ್ಯಾಹ್ನ ಯಾವತ್ತೋ ತಿಂದ ಮೊಸರನ್ನ ಕರಗಿ ಹೊಟ್ಟೆ ತಾಳ ಹಾಕಲಾರಂಭಿಸಿತು. ಮೂರು ಮನೆಗಳಿದ್ದ ಮಹಡಿ ಮನೆ. ಗಂಡ ಬದುಕಿದ್ದಾಗ ಮನೆಯೊಂದು ಕಟ್ಟಿಸ್ದ್ದು ಆಯ್ತು. ಅದರ ಲೋನ್ ಎಲ್ಲ ತೀರಿಸುವಷ್ಟರಲ್ಲಿ ಮಗನ ಅಪಘಾತ. ಮನೆ ಅವಳ ಹೆಸರಿಗಿದ್ದಿದ್ದು ಅವಳಿಗೆ ಅನುಕೂಲ ಆಯ್ತು.  ಕೆಳಗಿನ ಮನೆಗಳೆರಡನ್ನು ಬಾಡಿಗೆಗೆ ಕೊಟ್ಟಿದ್ದಳು.  ತುಂಬಾ ಪುಟ್ಟ ಮನೆಗಳವು, ಬೆಂಕಿ ಪೊಟ್ಟಣದಂತೆ. . ಆದರೆ ಸ್ವಂತದ್ದು ಎನ್ನುವ ಸಮಾಧಾನ. 
ಮಹಡಿ ಏರಿ ತನ್ನ ಮನೆ ತಲುಪಿದಾಗ ಅಲ್ಲಿಬ್ಬರು ಹೊರಗಡೆ ಕೂತಿದ್ದರು. ಮೊದಲಿಗೆ ಮನೆಯ ಬೀಗದ ಕಡೆ ಅವಳ ಕಣ್ಣು ಹೋಯಿತು . ಬೀಗ ಹಾಕಿಯೇ ಇತ್ತು. ಮಕ್ಕಳು ಬರುವುದು ಇನ್ನೂ ಒಂದು ಗಂಟೆ ತಡವಿತ್ತು. ನಿಟ್ಟುಸಿರು ಬಿಟ್ಟಳು. ಆತಂಕದಿಂದ ಬಂದವರತ್ತ ಪ್ರಶ್ನಾರ್ಥಕ ನೋಟ ಬೀರಿದಳು. 
'ಹೆದರಬೇಡಿ ಮ್ಯಾಡಂ. ನಾವು  ಹೆಸರಾಂತ ಜಾಹಿರಾತು ಕಂಪೆನಿಯಿಂದ ಬಂದಿದ್ದೇವೆ. ನಿನ್ನೆ ಕಾರನಲ್ಲಿ ಈ ಕಡೆಯಿಂದ ಹೋಗುವಾಗ ಟ್ರಾಫಿಕ್ ಜ್ಯಾಮ್ ನಲ್ಲಿಸಿಕ್ಕಾಕಿಕೊಂಡು,  ಹೀಗೇ ಕಣ್ಣಾಡಿಸುವಾಗ ನಿಮ್ಮ ಮನೆಯ ತಾರಸಿಯ ಮೇಲೆ ಕಣ್ಣು ಹೋಯಿತು. ನಮ್ಮ ಜಾಹಿರಾತಿನ ಹೋರ್ಡಿಂಗ್ ಹಾಕಲು ಪ್ರಶಸ್ತ ಜಾಗ. ಇಲ್ಲಿ ಒಂದು ಗ್ರಿಲ್ ರೈಲಿಂಗ್/ scaffolding ನಿರ್ಮಿಸಲು , ನಮ್ಮ ಹೋರ್ಡಿಂಗ್ ಹಾಕಲು ಅನುಮತಿ ನೀಡ ಬಹುದಾ? ಇದರಿಂದ ನಿಮಗೆ ತಿಂಗಳಿಗೆ  ೨೫,೦೦೦ ರೂ ಬಾಡಿಗೆ ಕೊಡುತ್ತೇವೆ ನಾವು. ಈ ಮಹಡಿ ನಿಮ್ಮ ಸ್ವಂತದ್ದು ಅಂತ ನಿಮ್ಮ ಬಾಡಿಗೆದಾರರಿಂದ ತಿಳಿಯಿತು. ಹಾಗಾಗಿ ನಿಮಗೋಸ್ಕರ ವೈಟ್ ಮಾಡ್ತಾ ಇದ್ವಿ. ನಾಳೆ ಇದೇ ಹೊತ್ತಿಗೆ ಬರುತ್ತೇವೆ. ನೀವು ಆಲೋಚನೆ ಮಾಡಿ ನಮ್ಮ ಕಾಂಟ್ರಾಕ್ಟ್ ಒಂದಕ್ಕೆ  ಸಹಿ ಹಾಕ ಬೇಕು. 
" ನಿಮ್ಮ ಹೋರ್ಡಿಂಗ್ ಹಾಕಲು ನನ್ನದೇನೂ ಅಡ್ಡಿಯಿಲ್ಲ. ಅದು ಸೇಫ್ ಆಗಿರಬೇಕು. ಬೆಂಗಳೂರಿನ ಗಾಳಿಗೆ ಹೊಯ್ದಾಡದಂತೆ ಅದನ್ನು ನಿರ್ಮಿಸಬೇಕು. ಅದಲ್ಲದೇ ಆಕಸ್ಮಾತ್ ಅನಾಹುತಗಳೇನಾದರೂ ಆದರೆ ಅದರ ಜವಾಬ್ದಾರಿ ನೀವು ತೆಗೆದುಕೊಳ್ಳಬೇಕು ಅಂದಳು. ಅವರು  ಎಲ್ಲದಕ್ಕೂ ಸೈ ಅಂತ ಹೇಳಿ ಮರುದಿನ ದಿನ ಮರಳುವುದಾಗಿ  ಹೇಳಿದರು. 
"ಏನಾದರೂ ಎಡ್ವಾನ್ಸ್  ಕೊಡಬಹುದಾ? ಒಂದು ಹತ್ತು ಸಾವಿರ ನಾಳೆ ಸಹಿ ಹಾಕಿದ ಮೇಲೆ ಕೊಡ ಬಹುದಾ ಅಂತ ಹೆದರಿ ಹೆದರಿ ಕೇಳಿದಳು. ಅವರು ಸಂತಸದಿಂದ ಖಂಡಿತ ಮ್ಯಾಡಂ ಅಂತ ಹೊರಟರು. 
ಮರುದಿನ ಬೆಳಿಗ್ಗೆ ಅವಳು ಆಫಿಸಿಗೆ ಹೋಗುವಾಗ ಮನೆಯ ಬಳಿಯ ದೇವಸ್ಥಾನದಲ್ಲಿ ಪೂಜೆ ಮಾಡಿಸಿಕೊಂಡು ವಸುಧಾಳಿಗೆ ಪ್ರಸಾದವನ್ನು ಕೊಡಲು ಮರೆಯಲಿಲ್ಲ. 
:-)

April 21, 2016

ಇನ್ನೆರಡು ಕತೆಗಳು

ನಿಹಾಳ ಇನ್ನೆರಡು ಕತೆಗಳು ಪಬ್ಲಿಶ್ ಆಗಿವೆ. ಆಸಕ್ತಿಯುಳ್ಳವರು ಕೆಳಗಿನ ಕೊಂಡಿಯಲ್ಲಿ ಅವನ್ನು ಓದಬಹುದು.

:-)

NIHA STORY 1


NIHA STORY 2

thank you

April 10, 2016

ಅಡುಗೆಯ ನೆನಪುಗಳು

೧೯೮೬-೮೭ ರ ಸಮಯ. ಕೊಪ್ಪ.  ಆಗ ರಾತ್ರಿ ೧೧. ೦೦ ಗಂಟೆಗೆ ದೂರದರ್ಶನದಲ್ಲಿ ಶನಿವಾರ  In Retrospective ಟ್ಯಾಗ್ ನ ಅಡಿ ದೇಶ ವಿದೇಶ ಗಳ ಒಳ್ಳೆಯ  ಸಿನಿಮಾಗಳು  ಪ್ರಸಾರ ವಾಗುತ್ತಿತ್ತು. ಆ ದಿನ ರಾತ್ರಿ ನಮ್ಮಲ್ಲಿ ಪಾರ್ಟಿ. ಆಗ ಪ್ರತೀ ವಾರ್ಯಾಂತ ಶ್ರೀಕಾಂತರ ಬ್ಯಾಚುಲರ್ ಫ್ರೆಂಡ್ಸ್ ಎಲ್ಲ ನಮ್ಮಲ್ಲಿ ಊಟಕ್ಕೆ ಇರುತ್ತಿದ್ದರು. ಕರೆಂಟ್ ಇರುತ್ತಿದ್ದದ್ದೆ ಅಪರೂಪ. ಆ ದಿನ ಹಾಗೆ, ಫ್ರೆಂಡ್ಸ್ ಎಲ್ಲ ಊಟ ಮಾಡಿ ಹೋದರು. ನನಗೋಸ್ಕರ ಎಲ್ಲ ಸ್ವಲ್ಪ ಸ್ವಲ್ಪ ಅಡಿಗೆ ಉಳಿದಿತ್ತು. ಸಿನಿಮಾ ಇನ್ನು ಕೆಲವೇ ಕ್ಷಣದಲ್ಲಿ ಪ್ರಾರಂಭವಾಗಬೇಕು. ಆ ದಿನ ರಾಜ್ ಕಪೂರ್ ನ ಮೇರಾ ನಾಮ್ ಜೋಕರ್ ಪ್ರಸಾರವಾಗುವುದಿತ್ತು. ಕರೆಂಟೂ ಇತ್ತು. ಒಂದು ದೊಡ್ಡ ಎಲೆ ತಂದು,ಟಿ ವಿ ಮುಂದೆ   ಹಾಲ್  ನಲ್ಲಿ ಹಾಸಿಟ್ಟು ಅದರಲ್ಲಿ ಉಳಿದ ಎಲ್ಲ ಅಡುಗೆ ಬಡಿಸಿ, ಇನ್ನೇನು ಊಟ ಬಾಯಿಗೆ ಹಾಕ್ಕೋ ಬೇಕು...ಅಷ್ಟರಲ್ಲಿ ಧಡ್ ಧಡ್ ಅಂತ ಬಾಗಿಲ ಸದ್ದು. ಬಂದವರಾರೆಂದು ನೋಡಲು ಯಾವ ಮಾರ್ಗವು ಇರಲಿಲ್ಲ. ಬಾಗಿಲು ತೆರೆದೇ ನೋಡ ಬೇಕು. ಶ್ರೀಕಾಂತ ರಾತ್ರಿ ಆಫಿಸ್ ನ ಫೀಲ್ಡ್ ವರ್ಕ್ ಎಲ್ಲ ಮುಗಿಸಿ ರಾತ್ರಿ ಬರುವುದೇ ತಡವಾಗಿರುತ್ತಿತ್ತು. ಕೊಪ್ಪಕ್ಕೆ  ಮೊದಲು, ಬಂದ ಹಾಗೆ ನಾನು ತುಂಬಾ ಹೆದರ್ತಿದ್ದೆ ಕತ್ತಲೆಗೆ, ಹಾಗಾಗಿ ನಾನು ಬಾಗಿಲ ಬಳಿ ಒಂದು ದಪ್ಪನೆಯ ದೊಣ್ಣೆ ಹಾಗು ಹಂಟಿಂಗ್ ಟಾರ್ಚ್ ಯಾವಾಗಲೂ ಇಟ್ಟಿರುತ್ತಿದ್ದೆ. ಅದು ಅದರ ಜಾಗದಲ್ಲಿದ್ದದ್ದು ಖಾತರಿ ಮಾಡಿ, ಶ್ರಿಕಾಂತ ಗೆ ಸನ್ನೆಯಿಂದಲೇ 'ನಾನು ಎಲೆ ಅಡಿಗೆ ಮನೆಗೆ ಒಯ್ದು  ಇಡ್ತೇನೆ, ಆಮೇಲೆ ಬಾಗಿಲು ತೆಗಿರಿ ಅಂದೆ. ನಾನು ಹೊರಗೆ ಬಂದು ನೋಡ್ತೇನೆ.... ಕೆದರಿದ ಕೂದಲಿನ, ಕೆಂಪು ಕಣ್ಣಿನ ಆಸಾಮಿ. 'ನನ್ನ ಹೆಸರು ಗೋಪಿ, ರಾಮಕೃಷ್ಣ (ಶ್ರೀಕಾಂತ ಕಸಿನ್) ನಿಮ್ಮ ಹೆಸರು ಸೂಚಿಸಿದ್ರು. ನಾನು ಪಶ್ಚಿಮ ಘಟ್ಟ ಉಳಿಸಿ ಪಾದಯಾತ್ರೆಯಲ್ಲಿ ಪಾಲೊಂಡಿದ್ದೆ. ಇವತ್ತು ವಾಪಸ್ ಶಿವಮೊಗ್ಗೆಗೆ ಹೋಗಲು ಯಾವುದೇ ವಾಹನ ಸೌಕರ್ಯ ಸಿಗಲಿಲ್ಲ. ......ನಾನು ಬಿಟ್ಟ ಬಾಯಿಯಿಂದ ನೋಡುತ್ತಲೇ ಇದ್ದೆ. ರಾತ್ರಿ ಮಲಗಲು ಜಾಗ ಬೇಕಿತ್ತು. ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಹೊರಡುತ್ತೇನೆ ಎಂದರು. ತಕ್ಷಣ ಸಾವರಿಸಿ 'ಒಳಗೆ ಬನ್ನಿ ಅಂದ್ರು ಶ್ರೀಕಾಂತ . ಗೋಪಿ ಬಗ್ಗೆ ನಮಗೆ ಕೇಳಿ ಗೊತ್ತಿತ್ತು. ನೋಡಿದ್ದು ಇದೇ ಮೊದಲು. ಊಟ ಮಾಡ್ತೀರಾ ಅಂದೆ.... ಹೌದು ಜೋರು ಹಸಿವೆಯಾಗಿದೆ ಅಂದ್ರು. 
'ಸ್ವಲ್ಪ ಹೊತ್ತು ಕಾಯಬೇಕಾಗಬಹುದು ಅಂದೆ. ಅಡ್ಡಿಯಿಲ್ಲ ಅಂದ್ರು. ಶ್ರೀಕಾಂತ ಅವರಿಗೆ ಟವೆಲ್ ಕೊಟ್ಟು ಸ್ನಾನಕ್ಕೆ   ಕಳುಹಿಸಿದರು. ಕೊಪ್ಪದಲ್ಲಿ ಚಳಿ ಇತ್ತು ಆವಾಗ, ಹಾಗಾಗಿ ನಾನು ಬಿಸಿ ನೀರನ್ನು  ತಪ್ಪಿಸುತ್ತಿರಲಿಲ್ಲ. ಮುಂಬೈನಲ್ಲಿ ಹುಟ್ಟಿ ಬೆಳೆದ ನನಗೆ ಕೊಪ್ಪ ದಲ್ಲಿನ ಚಳಿ ಆಕಸ್ಮಿಕ/ಅಚ್ಚರಿ . ತೀರ್ಥಹಳ್ಳಿ  ಗಿಂತ ಕೊಪ್ಪದಲ್ಲಿ ಚಳಿ ಜಾಸ್ತಿ. 
ನಾನು ಫ್ರೆಶ್ ಆಗಿ ಅಡಿಗೆ ಮಾಡಬೇಕಿತ್ತು. ತೊಗರಿ ಬೇಳೆ, ಅಕ್ಕಿ ಮೊದಲು ಕುಕ್ಕರಿನಲ್ಲಿಟ್ಟೆ. ಕ್ಯಾಬೇಜ್ ಇತ್ತು ಅದನ್ನು ಕತ್ತರಿಸಿ ಪಲ್ಯ ಮಾಡಿದೆ. ಕುಕ್ಕರ್ ಆರಿದ ಮೇಲೆ ತೊವ್ವೆಗೆ ಒಗ್ಗರಣೆ ಹಾಕಿ, ಬೇಗ ಬೇಗ  ಹಪ್ಪಳ ಸಂಡಿಗೆ ಕರಿದೆ. ಉಪ್ಪಿನಕಾಯಿ ಹೇಗೂ ಇತ್ತು.  ಅಷ್ಟು ರಾತ್ರಿ ಸರಿಯಾಗಿ  ಊಟ ಮಾಡುತ್ತಾರೋ ಎಂಬ ದೌಟ್  ಇತ್ತು. ಆಮೇಲೆ   ಟೇಬಲ್ ಮೇಲೆ ಎಲೆ ಹಾಕಿ ಊಟ ಬಡಿಸಿದೆ. ಊಟ ಚೆನ್ನಾಗಿದೆ, ಹಸಿವೆಯಾಗಿತ್ತು ಅಂತ, ಅವರ ಚಳುವಳಿ ಬಗ್ಗೆ ಮಾತಾಡ್ತಾ ಊಟ ಮುಗಿಸಿದ್ರು.  ಅವರಿಗೆ ಹಾಲ್  ನಲ್ಲೇ ಹಾಸಿಗೆ ಹಾಕಿದೆವು. ನಮ್ಮ ಸಿನಿಮಾ ಪ್ರೋಗ್ರಾಂ ಕ್ಯಾನ್ಸೆಲ್. ಆದ್ರೂ ಮನಸೀಗೆ ಏನೋ ಸಮಾಧಾನ. ಅವರು ಹೇಳಿದ ಹಾಗೆ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಹೊರಟ್ರು. ಬಹುಶ: ರಾತ್ರಿ ಎರಡೆ ಗಂಟೆ ನಿದ್ದೆ ಮಾಡಿರಬೇಕು ನಾವು. 
ಆಗ ಅಡಿಗೆ ಮಾಡಿ ಬಡಿಸೋದ್ರಲ್ಲಿ ಏನೋ ಖುಶಿ ಮುಂಬೈಯಾ , ನಾರ್ತ್  ಇಂಡಿಯನ್ ಅಡುಗೆ, ಹೊಸ ರುಚಿ ಇವೆಲ್ಲವನ್ನೂ ಶ್ರೀಕಾಂತ ಫ್ರೇಂಡ್ಸ್, ನಮ್ಮ ಸಂಬಂಧಿಕರಿಗೆ ಅಡುಗೆ ಮಾಡೋದ್ರಲ್ಲಿ ಏನೋ ಥ್ರಿಲ್  . ಈಗ ಅಡುಗೆ ಮನೆಯೆಂದ್ರೆ ಬೇಸರ. ಆ ಕಡೆ ಹೋಗಲೂ ಕೆಲವೊಮ್ಮೆ ಮನಸ್ಸಿರಲ್ಲ. ತಂಗಿಗೆ ಹೇಳಿದ್ರೆ. you have become a burn out  ಅಂತಾಳೆ. ನನ್ನ ತಮ್ಮ ಅಮ್ಮ ಎಲ್ಲ ನನ್ನ ಆಗಿನ ಅಡುಗೆಯ ಬಗ್ಗೆ ಮೆಚ್ಚುಗೆಯ ಮಾತಾಡಿ, ಈಗ ಯಾಕೆ ಹಾಗಾಗಿದ್ದೀಯಾ ಅಂತ ಕೇಳ್ತಾರೆ. :-)
ಮತ್ತು ಆಪ್ತ ಮಿತ್ರ ಗುರು ' ಅಡಿಗೆ ಮಾಡಕ್ಕೆ ಇಷ್ಟ ಇಲ್ಲಾ ಅಂತ ಹೇಳ್ತಾ ಇಷ್ಟು ರುಚಿಯಾದ ಅಡುಗೆ ಮಾಡ್ತಿಯಾ, ಇನ್ನು ಮನಸ್ಸಿಟ್ಟು ಮಾಡಿದ್ರೆ ನಾವು   ಊಟದ ಸಮೇತ ನಮ್ಮ ಬೆರಳುಗಳನ್ನು ಮುಗಿಸುತ್ತಿದ್ವೋ ಏನೋ ಅಂತ ತಮಾಷೆ ಮಾಡ್ತಾನೆ. 
ನನಗೆ ಈಗ ಅಡಿಗೆ ಮಾಡಲು ಬೇಜಾರಾದ್ರೆ ಶ್ರೀಕಾಂತ ಅಥವಾ ಮಕ್ಕಳು ಅಥವಾ ನಮ್ಮ ಬಿಲ್ಡಿಂಗ್ ಎದುರಿಗಿರುವ ಆನಂದ ಭವನ್ ನಿಂದ ತಿಂಡಿ ಅಡುಗೆ ಬರುತ್ತವೆ. 
ಇವತ್ತು ಹಾಗೆ ಬೆಳಿಗ್ಗೆ ಲಾಲ್ಬಾಗ್ ವಾಕಿಂಗ್, ಬರ್ತಾ ಹೊರಗಡೆ ತಿಂಡಿ, ಮಧ್ಯಾಹ್ನ ರಾತ್ರಿ  ಶ್ರೀಕಾಂತ ಅಡುಗೆ.  i count my blessings.:-) 
ಸುಮ್ನೆ ನೆನಪಾಯ್ತು ಗೀಚಿದೆ. 

April 9, 2016

Niha's story get published

ನಿಹಾಳ  ಬರಹ ಕೆಳಗಿನ ಜಾಲದಲ್ಲಿ ಪಬ್ಲಿಶ್ ಆಗಿದೆ. ಆಸಕ್ತಿಯುಳ್ಳವರು ಓದಬಹುದು

tale of a coin

April 1, 2016

My daughter's art

Niharika is starting a comic a day in her blog. you can watch her comic art in her blog

http://niharikashenoycomics.blogspot.in/

Day 1 here goes