August 7, 2018

ಕೂಷ್ಮಾಂಡ ಪುರಾಣ

ಕೂಷ್ಮಾಂಡ ಅಂದ್ರೆ ಬೂದುಗುಂಬಳ . Ashgourd . 
ಮನೆಗೆ ಬೂದುಗುಂಬಳಕಾಯಿ ಬಂದಾಗಲೆಲ್ಲ ಒಮ್ಮತದ ದನಿ ಮಜ್ಜಿಗೆ ಹುಳಿಗೆ . ಹೊಟ್ಟೆಗೆ ತಂಪು. ಆರೋಗ್ಯಕ್ಕೆ ಒಳ್ಳೆಯದು. ಕಡು  ಬೇಸಗೆಯಲ್ಲಂತೂ ಇದರ ಸೇವನೆ ಅತ್ಯುತ್ತಮ. ಈ ಸಲ ಸಂತೆಯಿಂದ  ತುಂಬಾ ದೊಡ್ಡ ಹೋಳು ತಂದಿದ್ದರು ಶ್ರೀಕಾಂತ.. ಹಾಗಾಗಿ ಅಕ್ಕ, 'ಅಮ್ಮಾ ತುಂಬಾ ದಿನ ಆಯ್ತು ಕಾಶಿ ಹಲ್ವಾ ಮಾಢದೆ ' ಅಂತ ಹೇಳಿದಳು . ಬೂದುಗುಂಬಳಕಾಯಿಯ ಹಲ್ವಾ ಗೆ ಕಾಶಿ ಹಲ್ವಾ ಯಾಕಂತಾರೆ? ಗೊತ್ತಿಲ್ಲ. ಬಹುಷ್ಯ ಹಿಂದೆ ಕಾಶಿ ರಾಮೇಶ್ವರ ಮುಂತಾದ ಕಡೆ ತೀರ್ಥಯಾತ್ರೆಗೆ  ಹೋಗುವಾಗ ಇದನ್ನು ಕಟ್ಟಿಕೊಂಡು ಹೋಗುತ್ತಿದ್ದರೋ ಏನೋ? (ತೀರ್ಥಯಾತ್ರೆ ಎಂದಾಗ ರೈಲು ತಂಬಿಗೆ ನೆನಪಾಗುತ್ತದೆ. ನನ್ನ ನಾನಿ (ಅಜ್ಜಿ) ಯ ಬಳಿ ಬೆಳ್ಳಿಯ ತಂಬಿಗೆ ಇತ್ತು. ಅಷ್ಟರಲ್ಲೇ ಯಾತ್ರೆ ಮುಗಿಸುತ್ತಿದ್ದರು. ರೈಲು ಕೆಲವು ನಿಲ್ದಾಣದಲ್ಲಿ ಹೆಚ್ಚಿಗೆ ನಿಲ್ಲುತ್ತಿದ್ದ ಕಡೆ ಅದರಲ್ಲಿ ನೀರು ತುಂಬಿಸುತ್ತಿದ್ದರು. ಆಗ ಬೇರೆ ಕಡೆ ನೀರು ಕುಡಿಯುವುದರಲ್ಲಿ ಹೆದರಿಕೆ ಇರಲಿಲ್ಲ, ಹಾಗೆಯೇ ಪ್ಲಾಸ್ಟಿಕ್ ಬಾಟಲಿಗಳಿರಲಿಲ್ಲ. ಪ್ಲ್ಯಾಸ್ಟಿಕ್ ಬಾಟಲಿಗಳು ಯಾವಾಗ ಚಾಲನೆಯಲ್ಲಿ ಬಂತು ಗೊತ್ತಾಗಲೇ ಇಲ್ಲ. ಸ್ವಲ್ಪ track change ಆಯ್ತು 😀 )
ಹಾಗಾಗಿ ನಿನ್ನೆ ನಮ್ಮಲ್ಲಿ ಬೂದುಗುಂಬಳದ ಹಲ್ವಾ. ಸುಮಾರು ಸಮಯ ಬೇಕು ಇದರ ಹಲ್ವಾ ತಯಾರಾಗಲು. ಮೊದಲಿಗೆ ಬೂದುಗುಂಬಳವನ್ನು ತುರಿಬೇಕು. ಬೆಲ್ಲಕ್ಕೆ ಒಂದೆಳೆ ಪಾಕ ಆದಾಗ ತುರಿದಿಟ್ಟ ಬೂದುಗುಂಬಳದಿಂದ ನೀರೆಲ್ಲ ಒತ್ತಿ ತೆಗೆದು ಬೆಲ್ಲದ ಪಾಕಕ್ಕೆ ಹಾಕಬೇಕು. ಬೂದುಗುಂಬಳದ ನೀರಿನ ಅಂಶ ಎಲ್ಲ ಹೋಗಿ ಪಾತ್ರೆಯ  ತಳ  ಬಿಡುತ್ತಿದ್ದ ಹಾಗೆ ಹಲ್ವಾ ತಯಾರಾಗಿದೆ ಅಂತ ಲೆಕ್ಕ. ಸುಮಾರು ಎರಡು ಗಂಟೆಯ ಮೇಲೆ ತಗಲುತ್ತದೆ ಈ ಹಲ್ವಾ ತಯಾರಿಸಲು. ಹಾಗಾಗಿ ತುಂಬಾ ದಿನ ಕೆಡದೆ ಉಳಿಯುತ್ತದೆ. ಕೊನೆಗೆ ಏಲಕ್ಕಿ, ತುಪ್ಪ , ಹುರಿದ ಗೋಡಂಬಿ ಬೆರೆಸಿದರೆ ಆಯ್ತು. ನಿಮ್ಮ ಹಲ್ವಾ ತಯಾರು. :-)
ಈ ಸಲ ಸ್ವಲ್ಪ ಚೀಟಿಂಗ್ ಮಾಡಿದೆ.  ತುರಿದು ನೀರು ಬಸಿದ  ಕುಂಬಳವನ್ನು ನೀರಾರುವ ತನಕ ಮೈಕ್ರೋವೇವಿಸಿದೆ 🙂 ಹಾಗಾಗಿ ಹಲ್ವಾ ಬೇಗ ತಯಾರಾಯಿತು

ashgourd halwa with organic jaggery

ಬೂದುಗುಂಬಳ ತುರಿಯುವ ಕೆಲಸ ಅಕ್ಕ ಹಚ್ಚಿಕೊಂಡಳು. ಕೆಲಸ ಮಾಡ್ತಾ ಅಮ್ಮ ನೀನು ಯಾವತ್ತಾದ್ರೂ  ಪೇಠಾ  ಮಾಡಿದೆಯಾ? ಅಂತ ಕೇಳಿದಳು . ಪೇಠಾ ಆಗ್ರಾದ ಸ್ಪೆಷಲ್ ಸ್ವೀಟು. 
ಹೌದೆಂದ್ದು ನಾವು ಪೇಠಾ ತಯಾರಿಸಿದ ಕತೆ ಶುರು ಮಾಡಿದೆ. 
ಆಗ ಅಕ್ಕ (ಮಾಲವಿಕಾ) ನ  ಮೊದಲ ಹುಟ್ಟು ಹಬ್ಬ ಆಚರಿಸಲು ಅಮ್ಮ ಮತ್ತು ತಮ್ಮ ಮುಂಬೈ ನಿಂದ ಕೊಪ್ಪಕ್ಕೆ ಬಂದಿದ್ದರು.  ಕರೆಂಟ್ ಇದ್ದರೆ ಮಧ್ಯಾಹ್ನ ನಾವು ದೂರದರ್ಶನ ನೋಡುತ್ತಿದ್ದೆವು. ಒಂದು ಮಧ್ಯಾಹ್ನ ಆಗ್ರಾದ ಪೇಠಾ  ತಯಾರಿಸಿವುದನ್ನು  ತೋರಿಸುತ್ತಿದ್ದರು. ನಮ್ಮ ಬಾಡಿಗೆ  ಮನೆಯ ಹಿತ್ತಲಲ್ಲಿ ನಾವು ಪುಟ್ಟ ಕೈತೋಟ ನಿರ್ಮಿಸಿದ್ದೆವು. ಆವಾಗಲೇ (30 ವರ್ಷದ ಹಿಂದೆ) ಮನೆಯ ಹಸಿ ತ್ಯಾಜ್ಯ ವಸ್ತುಗಳನ್ನು ಬಳಸಿ ಕಾಂಪೋಸ್ಟ್ ಕೂಡ ಮಾಡುತ್ತಿದೆವು. ನಮ್ಮ ತೋಟ ನೋಡಲು ಎರಡು ಕಣ್ಣು ಸಾಲುತ್ತಿರಲಿಲ್ಲ. ಅಲ್ಲದೆ ಕೊಪ್ಪದ ವಾತಾವರಣ  ಕೂಡ ಹೂ  ತರಕಾರಿ ಬೆಳೆಸುವಲ್ಲಿ ತುಂಬಾ  ಸಹಕಾರಿ. ನಾವು ಬೆಳೆಸಿದ ಮೂಲಂಗಿ ಅಂತೂ ಈಗಲೂ ಹಲವಾರು ಜನ ನೆನೆಸಿಕೊಳ್ಳುತ್ತಾರೆ. ನನ್ನ ತಮ್ಮ ಬಂದಾಗಲೆಲ್ಲ ತಾಜಾ ಮೂಲಂಗಿ ಸೊಪ್ಪು ಬಳಸಿ ಬ್ರೆಡ್ ಸ್ಯಾಂಡ್ವಿಚ್ ತಯಾರಿಸುತ್ತಿದ್ದೆ. ಈಗಲೂ ತಮ್ಮ ಅದನ್ನೆಲ್ಲ ನೆನೆಸಿಕೊಳ್ಳುತ್ತಾನೆ. ಕುಂಬಳಕಾಯಿಯಂತೂ ಹೇರಳವಾಗಿ ಬೆಳೆಯುತ್ತಿತ್ತು. 
ಈ ಪೇಠಾ ಮಾಡುವ ಕಾರ್ಯಕ್ರಮ ಪ್ರಸಾರವಾಗುವಾಗ ನಮ್ಮ ಹಿತ್ತಲಲ್ಲಿ ಮೂರು ಬೂದುಗುಂಬಳಕಾಯಿಗಳಿದ್ದವು. ಅದರಲ್ಲಿ ಚೆನ್ನಾಗಿ ಬಲಿತ ಕಾಯಿ ಅಮ್ಮ ಸೆಲೆಕ್ಟ್ ಮಾಡಿದರು. ಶ್ರೀಕಾಂತ ಮಧ್ಯಾಹ್ನ ಊಟ ಮುಗಿಸಿ  ಆಫಿಸ್ ಗೆ ಹೋಗುವ ಮುನ್ನ  ಅಮ್ಮ ಅವರ ಬಳಿ ಸುಣ್ಣ ತರಿಸಿಕೊಂಡರು.  ಆಮೇಲೆ ನೀಟಾಗಿ ಕುಂಬಳ ಕಾಯಿಯ ಒಂದೇ ಅಳತೆಯ  ಚೌಕ ಹೋಳುಗಳನ್ನು ಮಾಡಿದರೆ ನಾನು ಮುಳ್ಳು ಚಮಚ ದಿಂದ ಹೋಳುಗಳನ್ನು ಚುಚ್ಚುತ್ತಿದ್ದೆ . ಹೋಳುಗಳನ್ನು ಸುಣ್ಣದ ನೀರಿನಲ್ಲಿ ಎರಡು ದಿನ ನೆನೆ ಹಾಕಿದೆವು. ಮೂರನೇ ದಿನ ಹೋಳುಗಳನ್ನೆಲ್ಲ ಸುಣ್ಣದ ನೀರಿನಿಂದ ತೆಗೆದು ಒಳ್ಳೆಯ ನಿರಿನಿನಲ್ಲಿ ಹಾಕಿ ತೆಗೆದು  ಒಂದು ಬಿಳಿಯ ಮುಂಡಿ (ಮನೆ ಯೊಳಗೆ ಒಣಗಿಸಬೇಕು ಬಿಸಿಲಲ್ಲಲಾ} ನ ಮೇಲೆ ಒಣಗಿಸಲು ಇಟ್ಟೆವು. ನೀರಿನ ಅಂಶವೆಲ್ಲ ಹೋಗಬೇಕು. 
ಸಕ್ಕರೆಗೆ ನೀರು ಬೆರೆಸಿ ಅದು ಎರಡೆಳೆ ಪಾಕ ಆದ ನಂತರ ಅದಕ್ಕೆ ಸ್ವಲ್ಪ ನಿಂಬೆ ರಸ ಹಿಂಡ  ಬೇಕು .ಬೇಕಿದ್ದಲ್ಲಿ ಏಲಕ್ಕಿ ಪುಡಿ ಬೆರೆಸ ಬಹುದು.  ಒಣಗಿದ ಹೋಳುಗಳನ್ನು ಸಕ್ಕರೆ ಪಾಕದಲ್ಲಿ ಒಂದು ದಿನ  ನೆನೆಯಲು ಇಟ್ಟು , ನಂತರ ಒಂದೊಂದೇ sugarcoated ಹೋಳನ್ನು ಇನ್ನೊಂದು  ಪಾತ್ರಗೆ ವರ್ಗಾಯಿಸಬೇಕು. ಪೇಠಾ ತಯ್ಯಾರ್ ಅಂತ ಹೇಳಿದೆ. ಅಷ್ಟರಲ್ಲಿ ಅವಳ ತುರಿಯುವ ಕೆಲಸ ಮುಗಿದಿತ್ತು. 
ಹೀಗೆ ಮಾಡಿದ ಪೇಠಾ ಮಾಲವಿಕಳ  ಹುಟ್ಟುಹಬ್ಬದಿನದಂದು ಎಲ್ಲರಿಗು ಇತರ ತಿಂಡಿ ಖಾದ್ಯದೊಂದಿಗೆ ಬಡಿಸಲಾಯಿತು. ಸಕ್ಕರೆ ಸ್ವ ಲ್ಪ ಜಾಸ್ತಿಯಾದುದು ಬಿಟ್ಟರೆ, ಪೇಠ ಸೂಪರ್ ಆಗಿತ್ತು. 
ಬೂದುಗುಂಬಳದ ಜ್ಯೂಸು : ತುರಿದ ಬೂದುಗುಂಬಳದಿಂದ  ಹಿಂಡಿದ ರಸಕ್ಕೆ ನಿಂಬೆ ರಸ ಮತ್ತು ಜೇನುತುಪ್ಪ ಬೆರೆಸಿ ಕುಡಿಯಬಹುದು.  ಹೌದು ಕೊಂಕಣಿಯವರು ಏನನ್ನು ವೆಸ್ಟ್ ಮಾಡುವುದಿಲ್ಲ :-)
ಶ್ರೀಕಾಂತ ಆಫಿಸ್ ಕೆಲಸದ ಮೇಲೆ ದೆಹಲಿಗೆ ಹೊಆಗಲೆಲ್ಲ ನನಗೋಸ್ಕರ ಪೇಠಾ ತೆಗೆದುಕೊಂಡು ಬರುತ್ತಾಳೆ. ಈಗ ಅದು ಕೇಸರ್, ಕೇದಗೆ , ಮಿಕ್ಸಡ್ ಫ್ರೂಟ್ ಅಂತ ಬೇರೆ ಬೇರೆ ಆಕಾರ ಫ್ಲೇವರ್ಸ್ ನಲ್ಲಿ ಲಭ್ಯ. 
ಹಾಗೆ ಒಂದು ಕೊಂಕಣಿ ಗಾದೆ ಇದೆ. ಅದರ ಕನ್ನಡ ವರ್ಷನ್ ಹೀಗೆ : ತನ್ನ ಮನೆಯ ಹಿತ್ತಲಲ್ಲಿ ಕುಂಬಳಕಾಯಿ ಕೊಳೆಯುತ್ತಿದ್ದರು ಇವನಿಗೆ ಬೇರೆಯವರ ಮನೆಯಲ್ಲಿನ  ಕುಂಬಳಕಾಯಿಯ ಹುಳುಕು ಹುಡುಕುವುದರಲ್ಲಿ ಎತ್ತಿದ ಕೈ ' ಅಂತ 
ಹೀಗೆ ಒಂದು ಲಹರಿ :-)

August 4, 2018

ಸಾರ - ಸಂಸಾರ

ಸಿನಿಮಾ ಮುಗಿಸಿ ಸುಚೇತಾ ಮತ್ತು ಮಗಳು ಶಾಂಭವಿ  ಹಾಗೆ ಟಿವಿ ಮುಂದೆ ಹಾಸಿಗೆ ಹಾಸಿಕೊಂಡು ಮಲಗಿದರು. ಇದು ಯಾವತ್ತೂ ಶುಕ್ರವಾರದ ವಾಡಿಕೆ. ಶಾಂಭವಿಗೆ ಶನಿವಾರ ಭಾನುವಾರ ಕೆಲಸಕ್ಕೆ ರಜೆ.ಶುಕ್ರವಾರ ಸಂಜೆ ಯಾವುದಾದರೂ ಸಿನಿಮಾ ನೋಡಿ ಮಲಗುವುದು.  ಅವಳು ಫುಡ್ ಮ್ಯಾಗಝಿನ್  ಒಂದಕ್ಕೆ ಎಡಿಟರ್ ಆಗಿ ಕೆಲಸ ಮಾಡುತ್ತಾಳೆ. ನಿದ್ದೆ ಬರದೇ ಇದ್ದಲ್ಲಿ ತನ್ನ ಆಫಿಸಿನ ಬಗ್ಗೆ ಏನಾದರೂ ಹೇಳುತ್ತಾಳೆ. 
ಅಯ್ಯೋ ಅಮ್ಮ ಮರೆತೇ ಹೋಯ್ತು. ತಡಿ ನನ್ನ ಬ್ಯಾಗ್ನಲ್ಲಿ ತಿರುಪತಿ ಲಾಡು ಇದೆ, ನಿನಗೆ ಇಷ್ಟ ಅಂತ ತಂದಿದ್ದೇನೆ. ಇರುವೆ ಬರದೇ ಇದ್ದಾರೆ ಸಾಕು  ಅಂತ ತನ್ನ ಕೊಠಡಿಗೆ ಓಡಿದಳು.  
ಮ್ಮ್ಮ್ಮ್ಮ್ ತುಂಬಾ ರುಚಿಯಾಗಿದೆ ಕಣೆ, ಆದ್ಸರಿ ಯಾರು ತಿರುಪತಿಗೆ ಹೋಗಿದ್ದು?
'ನಮ್ಮ ಆಫಿಸ್ ನಲ್ಲಿ ತುಂಬಾ ವಯಸಾದವರೆಂದರೆ ಚಂದ್ರನ್ ನಾಯರ್ . ಅವರು ಫ್ಯಾಮಿಲಿಯೊಂದಿಗೆ ಹೊರನಾಡಿಗೆ ಹೋಗಿದ್ದರು. ಅಲ್ಲಿಂದ ಸುಬ್ರಮಣ್ಯ, ಧರ್ಮಸ್ಥಳ ಎಲ್ಲ ಹೋಗಿ ಬಂದರು. ಈಗ ತಿರುಪತಿ ಮಾತ್ರ ಅಲ್ಲ ಎಲ್ಲ ಕಡೆ ಈ ಲಾಡು ಸಿಗುತ್ತೆ ಅಂತ ನಕ್ಕಳು. 
ಚಂದ್ರನ್ ನಾಯರ್ ಆ?  ನನ್ನ ಕ್ಲಾಸ್ ನಲ್ಲಿ ಕೂಡ ಒಬ್ಬ ಚಂದ್ರನ್ ನಾಯರ್ ಇದ್ದ. ಕಲಿಯಲು ಮಹಾ ಜಾಣ. ಆದರೂ ಫಿಸಿಕ್ಸ್ ನಲ್ಲಿ ನನಗೇನಾದರೂ ಹೆಚ್ಚು ಮಾರ್ಕ್ ಬಂದರೆ ನನ್ನ ಬಳಿ ಪೇಪರ್ ಇಸ್ಕೊಂಡು ಇಡೀ ಉತ್ತರ ಪತ್ರಿಕೆಯನ್ನು ತಪ್ಪು ಉತ್ತರವೇನಾದರೂ ಇದೆಯಾ ಅಂತ ಜಾಲಾಡುತ್ತಿದ್ದ ಬಗ್ಗೆ ಹೇಳಿ ನಗಿಸಿದಳು. 
ಸುಚೇತಾ ತನ್ನ ಕಾಲೇಜಿನ ಬಗ್ಗೆ ಮೆಲುಕುಹಾಕುತ್ತಿದ್ದರೆ ಶಾಂಭವಿ ಆಗಲೇ ನಿದ್ದೆಗೆ ಜಾರಿದ್ದಳು. 
ಚಂದ್ರನ್  ನಾಯರ ತನ್ನ ಜತೆ ೧೧ ಮತ್ತು ಹನ್ನೆರಡನೇ ಕ್ಲಾಸ್ ಓಡುತ್ತಿದ್ದಾಗ ಜತೆಯಾಗಿದ್ದ. . ಅವನ ತಂದೆ ಸ್ವೀಡನ್ ದೇಶಕ್ಕೆ ರಾಯಭಾರಿಯಾಗಿದ. ಆ ವರ್ಷ ಅವರು ಮುಂಬಯಿಗೆ ಬಂದಿದ್ದರು. ಮುಂದಿನ ವ್ಯಾಸಂಗಕ್ಕೆ ಅನುಕೂಲವಾಗಲು ಚಂದ್ರನ್ ನನ್ನ ಮುಂಬಯಿಯ ಕಾಲೇಜಿಗೆ ಸೇರಿಸಿದ್ದರು. ಓದಲು ಅದರಲ್ಲೂ ಲೆಕ್ಕದಲ್ಲಂತೂ ಅವನು ತುಂಬಾ ಜಾಣನಾಗಿದ್ದ. ಬಾಹ್ಯಾಕಾಶ ವಿಜ್ಯ್ನಾನಿಯಾಗಿ  ಅಮೆರಿಕಕ್ಕೆ ಹೋಗುವ ಕನಸು ಅವನದ್ದಾಗಿತ್ತು ಸುಚೇತಾ ಗೆ ಫಿಸಿಕ್ಸ್ ನಲ್ಲಿ ಯಾವತ್ತೂ ಹೆಚ್ಚಿನ ಅಂಕ. ಫಿಸಿಕ್ಸ್ ಪೇಪರ್ ಅನ್ನು ಅವರ ಕೈಗೆ ಕೊಟ್ಟಾಗ ಮೊದಲು ಚಂದ್ರನ್ ಅವಳ ಕೈನಿಂದ ಉತ್ತರ ಪತ್ರಿಕೆ ಕಸಿಕೊಂಡು ಏನಾದರೂ ತಪ್ಪು ಇದೆಯಾ ಅಂತ ಹುಡುಕುತ್ತಿದ್ದ. ಒಂದು ಸಲ ಒಂದು ತಪ್ಪು ಉತ್ತರಕ್ಕೆ ಮಾರ್ಕ್ಸ್ ನೀಡಿದ್ದು ಅವನು  ಅವಳ ಉತ್ತರಪತ್ರಿಕೆಯನ್ನು ಸರ್ ಬಳಿ ಒಯ್ದು , ಬೈಸಿಕೊಂಡಿದ್ದ. ಅದೊಂದು ಬಿಟ್ಟರೆ ಅವನಿಗೆ ಸುಚೇತಾ ಎಂಬ ಪ್ರಾಣಿ ತನ್ನ ಕ್ಲಾಸ್ಮೆಟ್ ಅಂತ ಹೊಳೆಯುತ್ತಲೂ ಇರಲಿಲ್ಲ. ಬೇರೆ ಹುಡುಗಿಯರನ್ನು ಪಟಾಯಿಸುವುದರಲ್ಲಿ ಇರುತ್ತಿದ್ದ. ಸಣಕಲು ಮೈಯ, ತಲೆಗೆ ಎಣ್ಣೆ ಹಚ್ಚಿ ಜಡೇ  ಹೆಣೆದು   ಕಾಡಿಗೆ ಕಂಗಳ ಶಾಂಭವಿ ಅವನ ಅಸ್ತಿತ್ವದ ಅರಿವಲ್ಲಿ ಇರಲಿಲ್ಲ. ಆ ಎರಡು ವರ್ಷ ಒಟ್ಟೆಗೆ ಕಲಿತದ್ದೇ ಬಂತು. ಆಮೇಲೆ ಕ್ಲಾಸಿನವರು ಏನಾದರೇನೆಂದೇ ಗೊತ್ತಿರಲಿಲ್ಲ. ಹನ್ನೆರಡನೇ ಕ್ಲಾಸ್ ಮುಗಿಸಿದ ಹಾಗೆ , ಮುಂದೆ ಓದುತ್ತೇನೆಂದು ಆಸೆ ಪ್ಪಟ್ಟರೂ ಹಿರಿಯರು ಸೇರಿ ಗೌರೀಶನೊಂದಿಗೆ ಮಾಡುವೆ ಮಾಡಿಸಿದರು. ಗೌರೀಶನಂದು ದೊಡ್ಡ ಕುಟುಂಬ. ಚಿಕ್ಕ ಪ್ರಾಯಕ್ಕೆ ಶಾರ್ಜಾ ಗೆ  ಹೋಗಿ ಅಲ್ಲಿ ಡ್ರೈವರ್ ಕೆಲಸ ಮಾಡುತ್ತಿದ್ದ. ವರ್ಷಕ್ಕೊಂದು ಬಾರಿ ಭಾರತಕ್ಕೆ ಬಂದರೆ ಒಂದು ತಿಂಗಳು ಇದ್ದು ಹೋಗುತ್ತಿದ್ದ. ಶಾಂಭವಿ ಒಬ್ಬಳೇ ಮಗಳು. ಈಗ ಗಂಡನಿಗೆ ಅಷ್ಟೊಂದು ಜವಾಬ್ದಾರಿಗಳಿರಲಿಲ್ಲ. ಆದ್ರೂ ಶಾರ್ಜಾ ದ  ಜೀವನಕ್ಕೆ ಹೊಂದಿಕೊಂಡಿದ್ದಾನೆ. ಎಷ್ಟು ಆಗುತ್ತೆ ಅಷ್ಟು ಅಲ್ಲಿ ದುಡಿಯುತ್ತೇನೆ ಆಮೇಲೆ ಹೇಗೂ ಇಲ್ಲೇ ಬರಬೇಕಲ್ಲ ?? ಸುಚೇತಾಳಿಗೆ ಅದೇ ಅಭ್ಯಾಸ ಆಗಿದೆ. ಅವಳು ಕೆಲಸಕ್ಕೆ ಹೋಗುವುದಿಲ್ಲ. ಮನೆ ಸಂಭಾಳಿಸುವುದೇ ಕೆಲಸ. ಒಂದು ರೂಮ್ ಹಾಲ್ ನ ಪುಟ್ಟ ಮನೆ. ಬೆಳಿಗ್ಗೆ ಬೇಗನೆ ತಿಂಡಿ ಊಟ ಅಡುಗೆ ಗಳ ಕೆಲಸ ಮುಗಿಸುತ್ತಿದ್ದಳು. ಶಾಂಭವಿ ಮಧ್ಯಾಹ್ನಕ್ಕೆ ಡಬ್ಬಿ ಕಟ್ಟಿಕೊಂಡು ಹೋಗುತ್ತಾಳೆ. ಉಳಿದಂತೆ ಇಡೀ ದಿನ ಪುಸ್ತಕ ಓದಿಕೊಂಡು ಟಿವಿ ನೋಡಿಕೊಂಡು, ಸಂಜೆ ಅಕ್ಕ ಪಕ್ಕದ ಪರಿಚಯಸ್ಥ ಹೆಣ್ಣು ಮಕ್ಕಳ ಜತೆ ವಾಕ್. ವಾಕ್ ಗಿಂತ ಟಾಕ್ ಗೆ ಎಚ್ಚ್ಚು ಪ್ರಾಶಸ್ತ್ಯ. ರಜೆಯಿದ್ದಾಗ ಮಗಳ ಜತೆ ಎಲ್ಲಾದರೂ ಶಾಪಿಂಗ್ ಅದು ಇದು ಅಂತ ಹೋಗುತ್ತಾಳೆ. ಹೊರಗಡೆ ಊಟ ಮಾಡಿಕೊಂಡು ಬರುತ್ತ....... . ಒಟ್ಟಿಗೆ ಆರಾಮಾಗಿದ್ದಾಳೆ. 
ಹೀಗೆ ಒಂದು ಸಲ ಶ್ಯಾ೦ಭವಿಯ  ಆಫಿಸಿನಲ್ಲಿ ಫ್ಯಾಮಿಲಿ ಡಿನ್ನರ್ ಇಟ್ಟುಕೊಂಡಿದ್ದರು. ಅಮ್ಮ ನೋಡು ಅವರೇ ಚಂದ್ರನ್ ನಾಯರ್ ಅಂತ ಮಗಳು ಬೆರಳು ಮಾಡಿ ತೋರಿಸಿದಳು. ಅವರನ್ನು ನೋಡುತ್ತಿದ್ದಂತೆ ಒಂದು ಕ್ಷಣ ಮೈಯೆಲ್ಲಾ ಬಿಸಿ ತಣ್ಣಗೆ ಭಾಸವಾಯಿತು. ಮೂವತ್ತು ವರುಷದ ನಂತರವೂ ಅವ್ಳ ಕ್ಲಾಸಿನ ಚಂದ್ರನ್ ನಾಯರ್ ಅನ್ನು ಅವಳು ಗುರುತಿಸಿದಳು. ಸಖೇದಾಶ್ಚರ್ಯ !!! ಅರೆ ವಾಟ್ ಆರ್ ಯು ಡುಯಿಂಗ್ ಹಿಯರ್ ?? ಅಂತ ಕೇಳಿದಳು ಅವನಿಗೆ ಕಸಿವಿಸಿ . ಯಾರಪ್ಪ ಇದು ಅಂತ . ತಕ್ಷಣ ತನ್ನ ನಾಲಿಗೆ ಕಚ್ಚಿಕೊಂಡಳು ಸಚೇತಾ . ಅವಳು ಹಳೆ ಸಚೇತಾ ಆಗಿರಲಿಲ್ಲ. ಮ ಕೈ ತುಂಬಿಕೊಂಡು ಒಳ್ಳೆ ಡುಮ್ಮಿ ತರಹ ಆಗಿದ್ದಳು. 
ಅವಳೋ ಈ ಚಂದ್ರನ್ ನಾಯರ್ ಒಳ್ಳೆ ಖ್ಯಾತ ವಿಜ್ನ್ಯಾನಿ ಆಗಿರಬಹುದೆಂದು ತಿಳಿದಿದ್ದಳು. ಅಲ್ಲದಿದ್ದರೂ ಒಳ್ಳೆ ದೊಡ್ಡ ಕೆಲಸದಲ್ಲಿರಬಹುದು ಎಂದು ಕೊಂಡಿದ್ದಳು. ಈ ಸಣ್ಣ ಪತ್ರಿಕೆಯ ಅಕೌಂಟೆಂಟ್ ಎಂದು ಊಹಿಸಲು ಅವಳಿಗೆ ಅಸಾಧ್ಯ. 
ತನ್ನ ಪರಿಚಯ ಹೇಳಿಕೊಂಡಳು. ಅವನಿಗೆ ನೆನಪಿಗೆ ಬರಲಿಲ್ಲ. ಕಡೆಗೆ ಫಿಸಿಕ್ಸ್ ಬಗ್ಗೆ ಮಾತು ಶುರುಮಾಡಿದಾಗ, ಯಸ್ ಯಸ್ ಐ ರಿಮೆಂಬರ್  ಆ ಗರ್ಲ್ ಬಟ್ ನಾಟ್ ಕ್ಲಿಯರ್ಲಿ    ಅಂತ ಹೇಳಿದಾಗ ಸುಚೇತಾ ಗಟ್ಟಿಯಾಗಿ ನಕ್ಕಿದ್ದಳು. 
ಡಿಗ್ರಿ ಓದುವಾಗ ತನ್ನ ತಂದೆ ತಾಯಿ  ಪ್ಲೇನ್ ಕ್ರಾಶ್ ನಲ್ಲಿ  ತೀರದ್ದು , ಅವನ ದೊಡ್ಡಪ್ಪ ಎಲ್ಲಾ ಆಸ್ತಿ  ಕಬಳಿಸಿದ್ದು , ಮುಂಬಯಿಯ ಕಾಲೇಜಿನಿಂದ ಬಿಡಿಸಿ, ಊರಿನ ಕಾಲೇಜು ಹಾಸ್ಟೆಲ್ ಓದು, ವಾಸ , ಒಂದು ವರ್ಷ ಸಯನ್ಸ್ ಕಲಿತು ನಂತರ ಕಾಮರ್ಸ್ ಗೆ ಸೇರಿದ್ದು. ಕಷ್ಟ ಪಟ್ಟು ಓದಿ ಕೆಲಸ ಸಂಪಾದಿಸಿದ್ದು ಎಲ್ಲ ಹೇಳಿಕೊಂಡ. ಹೆಂಡತಿ ಬೆಂಗಳೂರಿನ ಆಸ್ಪತ್ರೆಯಲ್ಲಿ ನರ್ಸ್ ಕೆಲಸ. ಹಾಗಾಗಿ ಅವನು ಬೆಂಗಳೂರಿಗೆ ಬಂದು ಹಲವು ವರ್ಷಗಳೇ ಕಳೆದಿದ್ದವು. ಇಬ್ಬರು ಗಂಡು ಮಕ್ಕಳು . ಒಬ್ಬ ಕೆಲಸಕ್ಕೆ ಸೇರಿದ್ದನೆಂದು ಇನ್ನೊಬ್ಬ ತೀರಾ ಸಣ್ಣವ , ಈಗ ಹೈಸ್ಕೂಲ್ ಎಂದು ತಿಳಿಸಿದ.  ನೀನೂ ಫಿಸಿಷಿಸ್ಟ್ ಆಗುತ್ತಿ ಅಂದುಕೊಂಡಿದ್ದೆ ಎಂದ . ಅವಳು ನಕ್ಕಳು. ಮನೆಗೆ ಬರುವಂತೆ ವಿಳಾಸ, ಫೋನ್ ನಂಬರ್ ವಿನಿಮಿಯಾ ಮಾಡಿಕೊಂಡರು   
:-)