December 16, 2013

ಸ್ವರೂಪ ರಾಣಿಯ ಕಥೆ

(ನಮ್ಮ ತಂದೆ ದಿನಾಂಕ 11.12.13 ರ ಮಧ್ಯಾಹ್ನ ದೈವಾಧೀನರಾದದರು. ಅವರ ಕೊನೆಯ ಕ್ಷಣಗಳಲ್ಲಿ ಅವರೊಂದಿಗಿದ್ದಿದ್ದು ಸಮಾಧಾನ ತಂದಿದೆ. ಫೋನ್ ಮೂಲಕ/ಎಸ್ ಎಮ್ ಎಸ್ ಮೂಲಕ ಸಂತಾಪ ಸೂಚಿಸಿದವರಿಗೆಲ್ಲ ಧನ್ಯವಾದಗಳು. ಯಾರ್ಯಾರಿಗೆ ತಂದೆಯವರ ದೇಹಾಂತದ ಬಗ್ಗೆ ತಿಳಿಸಬೇಕೆಂಬುದು ಲಿಸ್ಟ್ ಮಾಡುತ್ತಿದ್ದಾಗ ಸ್ವರೂಪ್ ಟೀಚರ್ ಬಗ್ಗೆ ಮಾತು ಬಂತು.)
ಆಕೆ ನನ್ನ ತಮ್ಮಂದಿರ ಗಣಿತ-ವಿಜ್ಝಾನದ ಶಿಕ್ಷಕಿ. ಅವರ ಬ್ಯಾಂಕ್ ಖಾತೆ ನನ್ನ ತಂದೆ ಕೆಲಸ ಮಾಡುವ ಬ್ಯಾಂಕ್ ನಲ್ಲಿ. ಆಗ ನನ್ನ ತಂದೆ ಬಿಹಾರದಿಂದ ಬಂದಿದ್ದಷ್ಟೆ. ತಂದೆಯ ಮೂಲಕ ಅವರ ಪರಿಚಯ ಆದಾಗ ಅವರು ತಮ್ಮಂದಿರ ಟೀಚರ್ ಕೂಡ ಅಂತ ಖುಶಿಯಾಯಿತು. ಮಕ್ಕಳಿಗೆ ಟ್ಯೂಶನ್ಸ್ ಕೊಡಲು ಒಪ್ಪಿದರು. ಅಮ್ಮನ ಬೆಸ್ಟ್ ಫ್ರೆಂಡ್ ಕೂಡ ಆಗಿಬಿಟ್ಟರು. ಶನಿವಾರ ಭಾನುವಾರ, ಅಪ್ಪನ ಹದಿನೈದುದಿನಕ್ಕೊಮ್ಮೆ ನಡೆಯುವ ಗುಂಡು ಪಾರ್ಟಿಗೆಲ್ಲ ಸ್ವರೂಪ್ ಟೀಚರ್ ಕೂಡ ನಮ್ಮೊಂದಿಗೆ ಇರುತ್ತಿದ್ದರು. ಅಮ್ಮ ಕೂಡ ಅವರನ್ನು ಸ್ವರೂಪ್ ಟೀಚರ್ ಅಂತ್ಲೆ ಕರೆಯುತ್ತಿದ್ದರು. ಅವರಿಗೆ ಹೆಚ್ಚು ಕಡಿಮೆ ನಮ್ಮಮ್ಮನ ವಯಸ್ಸು. ಅಮ್ಮನಿಗೆ ನಾವಾಗಲೇ ನಾಲ್ಕು ಜನ ಮಕ್ಕಳಾಗಿದ್ದರೆ ಅವರಿಗೆ ಇನ್ನೂ ಮದುವೆಯಾಗಿರಲಿಲ್ಲ. ಮಾತಿಗೆ ಮುಂಚೆ ನಗು, ನೋಡಲು ಸುರಸುಂದರಿ, ತಿದ್ದಿತೀಡಿದಂತಹ ಕಣ್ಣು-ಮೂಗು, ದಂತದ ಮೈಬಣ್ನ, ಉದ್ದ ಜಡೆ, ಕಡೆದಿಟ್ಟಂತಹ ದೇಹಾಕೃತಿ. ಮದುವೆ ಮಾತು ಬಂದಾಗಲೆಲ್ಲ 'ನಾನು ಓದಿರುವಷ್ಟು ಓದಿದ ವರ ನಮ್ಮ ಜಾತಿಯಲ್ಲಿ ಸಿಗುವುದು ಕಷ್ಟ. ಮತ್ತೆ ಸುಮ್ಮನೆ ego ಪ್ರಾಬ್ಲಂ ಎಲ್ಲ ಬೇಡ. ಹೀಗೆ ಖುಶಿಯಾಗಿದ್ದೇನೆ' ಅಂತ ಮಾತು ಹಾರಿಸುತ್ತಿದ್ದರು. ಸ್ವರೂಪ ರಾಣಿ ಗಣಿತದ ವಿಷಯದಲ್ಲಿ ಎಮ್ ಎಸ್ಸಿ ಮಾಡಿದ ಗೋಲ್ಡ್ ಮೆಡಲಿಸ್ಟ್.  ಬೇಜಾರೆಂದರೆ ಅವರ ತಂಗಿ ತಮ್ಮಂದಿರಿಗೆ ವಿದ್ಯೆ ಹತ್ತಲಿಲ್ಲ. ಅವರ ತಂಗಿ ನನ್ನ ಕ್ಲಾಸ್. ಹತ್ತನೆಯ ತರಗತಿ ನಂತರ ಓದು ಸ್ಥಗಿತಗೊಳಿಸಿ ಟೈಲರಿಂಗ್ ಕಲೀಲಿಕ್ಕೆ ಹೋಗುತ್ತಿದ್ದಳು. ತಮ್ಮ ಯಾವುದೋ ಗರಾಜ್ ನಲ್ಲಿ ಕೆಲಸ. ತಂದೆ ಸರಕಾರಿ ಕರಕೂನ, ಅಮ್ಮ ಗೃಹಿಣಿ, ಅಲ್ಲದೇ ಮನೆಯಲ್ಲಿ  ವಯಸಾದ ಅಜ್ಜಿ. ನಾವು ಅವರ ಮನೆಗೆ ಭೆಟಿ ನೀಡಿದಾಗಲೆಲ್ಲ, ಸ್ವರೂಪ್ ಟೀಚರ್ ಗೆ ಮದುವೆಯಾಗದಿದ್ದರ ಬಗ್ಗೆ ಅವರಮ್ಮನದ್ದು ಯಾವಾಗಲೂ ಕಂಪ್ಲೈಂಟ್.
ಹೀಗೆ ಒಂದುಸಲ ಬೇರೆ ಊರಲ್ಲಿ ನಡೆದ ಶಾಲಾ-ಕಾಲೇಜು ಸಮಾವೇಶದಲ್ಲಿ ಸ್ವರೂಪ್ ಗೆ ಜೀವನ್ ಸಿಕ್ಕಿದರು. ಅವರದ್ದೆ ಜಾತಿ. ದೂರದ ಹೈದರಾಬಾದ್ ನಲ್ಲಿ ಕಾಲೇಜ್ ಲೆಕ್ಛರರ್. ತಂಗಿಯಂದಿರಂದಿಗೆಲ್ಲ ಮದುವೆ ಮಾಡಿ ಆಗಲೇ ಅವರಿಗೆ ನಲವತ್ತರ ಪ್ರಾಯ. ನಮ್ಮ ಸ್ವರೂಪ್ ಟೀಚರ್ ಗೆ 28-29. ಆದರೂ ಸೂಕ್ತ ವರ ಅಂತ ಮತ್ತು ಮನೆಯಲ್ಲಿನ ಒತ್ತಡಗಳಿಂದ ಸ್ವರೂಪ್ ಅವರನ್ನು ಮದುವೆಯಾಗಲು ಒಪ್ಪಿದರು. ಮದುವೆ ದೂರದ ಹಳ್ಳಿಯಲ್ಲಿ. ಅಪ್ಪನಿಗೆ ಹೃದಯ ಸಂಬಂಧಿ ಕಾಯಿಲೆಯ ಶಸ್ತ್ರ ಚಿಕಿತ್ಸೆ ನಡೆದಿತ್ತಷ್ಟೆ. ಆದುದರಿಂದ ನಾವು ಮದುವೆಗೆ ಹೋಗಲಾಗಲಿಲ್ಲ. ಅ ಮೇಲೆ ಅವರು ನಮ್ಮ ಜತೆ ಪತ್ರ ವ್ಯವಹಾರ ಇಟ್ಟುಕೊಂಡಿದ್ದರು.
ಅಲ್ಲಿ ಜೀವನ್ ಅವರದ್ದು ಕೂಡು ಕುಟುಂಬ. ಅವರ ಚಿಕ್ಕಪ್ಪ ದೊಡ್ಡಪ್ಪ, ಮದುವೆಯಾದವರು ಆಗದವರು ಮುಂತಾದ್ದು. ಮೊದ ಮೊದಲು ಎಲ್ಲ ಚೆನ್ನಾಗಿತ್ತು. ಆದರೆ ಸ್ವರೂಪ್ ಕೆಲಸಕ್ಕೆ ಹೋಗೋದು ಕುಟುಂಬದ ಮಹಿಳಾ ಸದಸ್ಯರಿಗೆ ಸರಿ ಬರುತ್ತಿರಲಿಲ್ಲ. ಅದೇನೂ ಗಂಡಸರ್ ಸರಿಸಮಾನ ಕೆಲ್ಸಕ್ಕೆ ಹೋಗೋದು? ಅವಳ ಗಂಡನೆನೂ ಕೈಲಾಗದವನಾ' ಅಂತೆಲ್ಲ ಕೊಂಕು ಮಾತಾಡುತ್ತಿದ್ದರಂತೆ. ಜೀವನ್ ಇದೆಲ್ಲ ಕೇಳಿಸಿಕೊಳ್ಳದವರಂತೆ ಇರುತ್ತಿದ್ದರಿಂದ ಅವರ ಪಿರಿಪಿರಿಗೆ ಸೊಪ್ಪು ಹಾಕಿದಂತಾಯಿತು. ಇವಳಿಗೆ ಕಿರುಕುಳ ನೀಡಲಾರಂಭಿಸಿದರು. ಸ್ವರೂಪ್ ಟೀಚರ್ ಶಾಲೆಯಿಂದ ಮನೆ ಬರುವ ತನಕ ಅವರು ಬೆಳಿಗ್ಗೆ ತಿಂದಿದ ತಟ್ಟೆ ಲೋಟಗಳು, ಮನೆ ಮಂದಿಯ ಬಟ್ಟೆಗಳು ಅವಳಿಗೋಸ್ಕರ ಕಾಯಲಾರಂಭಿಸಿದವು. ಸುಸ್ತಾಗಿ ಸಂಜೆ ಮನೆಗೆ ಬಂದ ನಂತರ ರಾತ್ರಿ 11 ರ ವರೆಗೆ ಕೆಲಸ. ಗಂಡನಿಗೆ ಏನಾದರೂ ಹೇಳಿದರೆ 'ಅದೆಲ್ಲ ನಿಮ್ಮ ಹೆಂಗಸರ ವಿಷಯ, ನೀನೇ ಏನಾದರೂ ಒಪ್ಪಂದ ಮಾಡಿಕೋ' ಅಂತ ಹೇಳಿ ಕೈತೊಳೆದುಕೊಳ್ಳುತ್ತಿದ. ಅಮೇಲೆ ಸ್ವರೂಪ್ ಟೀಚರ್ ಒಂದಾದ ಮೇಲೆ ಒಂದು ಇಬ್ಬರು ಹೆಣ್ಣು ಮಕ್ಕಳು ಬೇಗ ಬೇಗ ಹುಟ್ಟಿದರು. ಗಂಡು ಮಗು ಹುಟ್ಟಲಿಲ್ಲ ಅಂತ ಅವಳಿಗೆ ಇನ್ನಷ್ಟು ತೊಂದರೆ ಕೊಡುವುದರಲ್ಲಿ ಜೀವನ್ ಕೂಡ ಸೇರಿಕೊಂಡರು.  ಮತ್ತೆ ಇಬ್ಬರು ಹೆಣ್ಣುಮಕ್ಕಳಿಗೋಸ್ಕರ ದುಡ್ಡು ಸಂಪಾದಿಸಿಡಲು  ಅಂತ ಮನೆಯಲ್ಲಿನ ಒಂದು ಕೋಣೆಯಲ್ಲಿ ಸ್ವರೂಪ್ ಟೀಚರ್ ಸಂಜೆ ಶಾಲೆಯಿಂದ ಬಂದ ನಂತರ ಕಡ್ಡಾಯ ಮನೆ ಪಾಠಮಾಡುವಲ್ಲಿ ಒತ್ತಡ ಶುರು ಆಯಿತು. ಅಷ್ಟೆ ಅಲ್ಲ ಸ್ವರೂಪ್ ಟೀಚರ್ ಶಾಲೆಗೆ ಹೋದಾಗ ಮಕ್ಕಳಿಗೆ ಇಲ್ಲ ಸಲ್ಲದ್ದನ್ನು ಹೇಳಿ ಕೊಡಲು ಪ್ರಾರಂಭಿಸಿದರಂತೆ. ಅಷ್ಟರಲ್ಲಿ ಸ್ವರೂಪ್ ಟೀಚರ್ ಗೆ ಗಂಡು ಮಗ ಹುಟ್ಟಿದ. ಮನೆಯಲ್ಲಿ ಆಗ ಆಕೆಗೆ ಮಹಾರಾಣಿಯ ಸತ್ಕಾರ. ಇನ್ನೇನೂ ಎಲ್ಲ ಸರಿ ಹೋಯಿತು ಅನ್ನುವಷ್ಟರಲ್ಲಿ ಮಗನಿಗೆ ಬುದ್ದಿ ಮಾಂದ್ಯತೆ ಇರುವುದು ಗೋಚರವಾಯಿತು.ಮನೆಯಲ್ಲಿ ಪುನಃ ಯತಾಪ್ರಕಾರ ಕಿರುಕುಳಗಳು ಆರಂಭವಾದವು. ಶಾಲೆಯಲ್ಲಿ ವೇತನ ಪರಿಷ್ಕರಣೆಯಾಗಿ ಸ್ವಲ್ಪ ಹೆಚ್ಚು ಸಂಪಾದನೆ ಬರಲು ತೊಡಗಿದಾಗ ಸ್ವರೂಪ ಟೀಚರ್ ಮಗನ ದೇಖರೇಖಿಗೆ ಒಂದು ಹುಡುಗಿಯನ್ನು ತಂದು ಇಟ್ಟಳು.
ನಮ್ಮ ಅಮ್ಮನನ್ನು ಭೇಟಿ ಯಾಗಲು ಬಂದಾಗ ಎಷ್ಟು ಓದಿ , ಕೆಲಸದಲ್ಲಿದ್ದು ಏನು ಉಪಯೋಗ ಅಂತ ಬೇಸರಿಸಿಕೊಂಡರು. ಈಗ ಅವರು ಗಂಡನ ಸಂಪರ್ಕದಲ್ಲಿಲ್ಲ. ಮಗ ತನ್ನ 15 ನೇ ವರ್ಷದಲ್ಲಿ ತೀರಿಕೊಂಡ. ಇಬ್ಬರೂ ಹೆಣ್ಣು ಮಕ್ಕಳು ಒಳ್ಳೆಯ ಕೆಲಸದಲ್ಲಿದ್ದಾರೆ. ಸ್ವರೂಪ್ ಟೀಚರ್ ರಿಟೈರ್ ಆಗಿದ್ದಾರೆ. ವಾರಕ್ಕೆ ಮೂರು ದಿನ ಅನಾಥಾಶ್ರಮದ ಮಕ್ಕಳಿಗೆ ಫ್ರೀ ಆಗಿ ಪಾಠ ಹೇಳಿಕೊಡುತ್ತಾರೆ. ಮೊದಲಿನಹಾಗೆ ನಗುವುದನ್ನು ಸಂಪೂರ್ಣ ಮರೆತಿದ್ದಾರೆ.
(ಯಾಕೋ ಬೇಜಾರಾಗಿ ಸುಮ್ಮನೆ ಕೂತಿದ್ದೆ. ನನ್ನ ತಮ್ಮ ನಿನ್ನ ಬ್ಲಾಗ್ ನಾದ್ರು ಅಪ್ ಡೇಟ್ ಮಾಡು ಅಂದ. ಅವನೇನೂ ನನ್ನ ಬ್ಲಾಗ್ ಓದಲ್ಲ. ಅವನು ಹೇಳಿದ್ದಕ್ಕೆ ಕಷ್ಟಪಟ್ಟು ಬರೆಯಲು ಪ್ರಯ್ತ್ನಿಸಿದ್ದೇನೆ. ತಪ್ಪುಗಳೇನಾದರು ಇದ್ದಲ್ಲಿ ಬೆಂಗಳೂರಿಗೆ ಬಂದ ಮೇಲೆ ಸರಿಪಡಿಸುತ್ತೇನೆ)
:-(

December 7, 2013

The making of cover page 'Shikari'

ನಮ್ಮ ಫ್ಲ್ಯಾಟ್ ಗೆ ಹೋಗುವ ದಿನ ಸನೀಹ ಬರುತ್ತಿದ್ದ ಹಾಗೆ ನಮಗೆ ಬೇಡದಿದ್ದ ಸಾಮಾನೆಲ್ಲ ಹೊರಗೆ ಹಾಕ್ತಾ ಇದ್ದೀವಿ. ಹಳೇ ಪುಸ್ತಕದ ಕಪಾಟು ಆ ಮನೆಯ ಡೆಕೋರ್‍ ಗೆ ಸ್ಯುಟ್ ಆಗಲ್ಲ ಅಂತ ರಾಯರು ಹೇಳಿದ್ದಾರೆ ಆದ್ದರಿಂದ, ಆ ಕಪಾಟು ಮಾರುತ್ತಿದ್ದೇವೆ. ಅದರಲ್ಲಿನ ಕೆಲವು ಪುಸ್ತಕ ಕೊಡಲೇ  ಬೇಕಾಗಿದೆ. ಹಾಗಾಗಿ ನಿಹಾ, ನಾನು, ಅಕ್ಕ ಕಪಾಟನ್ನು sort ಮಾಡ್ತಾ ಈದ್ವಿ. ನಾವು ಕೆಲಸ ಮಾಡೋದ್ದಕ್ಕಿಂತ ಯಾವುದಾದರೂ ಪುಸ್ತಕ ತೆರೆದು ಅದರೊಳಗಿನ ಏನಾದರೂ ಸ್ವಲ್ಪ ಓದುವುದು, ಪದ್ಯಗಳ ಪುಸ್ತಕದಿಂದ ಪದ್ಯಗಳನ್ನು ಓದುವುದು ಮುಂತಾದ್ದು ಮಾಡಿದ್ದೆ ಹೆಚ್ಚು. ಅದಲ್ಲದೆ, 'ಹೇ ಈ ಪುಸ್ತಕ ಕೊಡಬೇಕಾ ಇದು ನನ್ನ ಫೇವರಿಟ್'....ಹೀಗೆ ಸಾಗಿತ್ತು ನಮ್ಮ ಪುಸ್ತಕದ ವಿಲೇವಾರಿ.
ಅಷ್ಟರಲ್ಲಿ ರಘು ಫೋನ್ ಬಂತು. ನಾವಿಬ್ಬರು ಮಾತಾಡುವುದು ಸಾಧಾರಣ ಒಂದು ಗಂಟೆ + ಆದ್ದರಿಂದ  ಕಪಾಟಿನ ಎಡೆಯಲ್ಲಿ ಪವಡಿಸಿದ ನಾನು ಕಾಲು ಸಡಲಿಸುತ್ತ ಹೊರಗಿನ ಕೋಣೆಗೆ ಬಂದೆ. ನಮ್ಮ ಲೋಕಾಭಿರಾಮ ಮಾತಿನ ನಡುವೆ, 'ಚುಕ್ಕುಬುಕ್ಕು'ವಿನಲ್ಲಿ ಶಿಕಾರಿ ಮುಖಪುಟ ಸ್ಪರ್ಧೆ ಇದೆ, ನಿಹಾ ಗೆ ಭಾಗವಹಿಸಲು ಹೇಳಿ ಅಂದ್ರು . ನಾನು ಸರಿ ಅಂದೆ, ಪುನ: ನಮ್ಮ ಮಾತು ಪುಸ್ತಕ ಸಿನಿಮಾ ಅಂತ ಗಿರ್ಕಿ ಹೊಡೆದು, ಮುಗಿಸಿದ ಮೇಲೆ ನಿಹಾ ಗೆ ಹೇಳಿದೆ, 'ಪುರುಸೊತ್ತಾದಾಗ ಚುಕ್ಕುಬುಕ್ಕು ನೋಡು. ರಜೆ ಯಲ್ಲಿ ಮಾಡಕ್ಕೆ ಏನಿಲ್ಲ ಬೋರ್ ಅಂತಾ ಇದ್ದಿಯಲ್ಲ, ಕವರ್ ಡಿಸೈನ್ ಕಂಟೆಸ್ಟ್ ಹಾಕಿದ್ದಾರಂತೆ'
ಅವಳು ಸರಿ ಅಂದ್ಲು. ಪುಸ್ತಕ ಸಾರ್ಟ್ ಮಾಡಿ ಬ್ರೇಕ್ ತೆಗೊಂಡು ಅವಳು ಕಂಟೆಸ್ಟ್ ನ ಡೇಟೈಲ್ಸ್ ಓದಿ, 'ಆಮ್ಮ, ಬುಕ್ ಓದ ಬೇಕಂತೆ ಕಣೆ' ಅಂತ ಹೇಳಿ ಸುಮ್ಮನಾದಳು
ಇದಾದ ಎರಡು ದಿನದ ನಂತರ ನನಗೆ ಯಶವಂತ ಚಿತ್ತಾಲರ 'ಶಿಖಾರಿ' ಪುಸ್ತಕ ಕಪಾಟಿನಲ್ಲಿ ಸಿಕ್ಕಿತು." Niha , cover page contest or not i strongly reccommend that you read this book, since psychology is your favorite subject (ಅವಳು ಸೈಕೋಲೋಜಿ ಯಲ್ಲಿ ಸೆಂಟಮ್ ಸ್ಕೋರರ್) His novels delve deep into the human psyche. I have read Shikari and liked it but my favorite is Chedha (ಛೇದ)' ಅಂದೆ.

ಮಾಲವಿಕಾ ನಿಹಾರಿಕಾ ಇಬ್ಬರೂ ಹತ್ತನೇಯ ತರಗತಿಯಲ್ಲಿ,ಕನ್ನಡದಲ್ಲಿ ಅನುಕ್ರಮವಾಗಿ ನೂರರಲ್ಲಿ 97, 98  ಅಂಕಗಳು ಪಡೆದುಕೊಂಡಿದ್ದು ನನಗೆ ಖುಶಿಯಾಗಿತ್ತು. ಕೋರ್ ಸಬ್ಜೆಕ್ಟ್ ನಲ್ಲಿ ಒಳ್ಳೆಯ ಮಾರ್ಕ್ ಬಂದು ಲಾಂಗ್ವೇಜ್ s ನಲ್ಲಿ ಕಡಿಮೆ ಬಂದ್ರೆ overall percentage ಕಡಿಮೆಯಾಗಬಹುದೇನೋ ಅನ್ನುವ ನನ್ನ ಅನುಮಾನ ಅವರು ಸುಳ್ಳು ಮಾಡಿದ್ದರು. ಪಿ.ಯು ನಲ್ಲೂ ಕನ್ನಡ ಬಾಷೆ ಆಯ್ದುಕೊಳ್ಲಬಹುದೆಂದು ಅಂದುಕೊಂಡರೆ, ಮಾಲವಿಕಾ ಸಂಸ್ಕೃತ, ಹಾಗೂ ನಿಹಾ ಪ್ರೆಂಚ್ ತೆಗೆದುಕೊಂಡಿದ್ದರು. ಕನ್ನಡ ಆಯ್ದುಕೊಂಡಿದ್ದರೆ ಶ್ರೀಕಾಂತ ಆದ್ರೂ ಸಹಾಯ ಮಾಡ್ತಿದ್ದರು. ಈ ಎರಡು ಭಾಷೆ ನಮಗೆ ಬರುವುದಿಲ್ಲವಲ್ಲ ಅಂದ್ರೆ, ಸುಮ್ನಿರಮ್ಮ ಇವೆರಡು high scoring subjects ಅಂತ ನನ್ನ ಬಾಯಿ ಮುಚ್ಚಿಸಿದರು. ಅವರು ಹೇಳಿದ ಹಾಗೆ ಪಿ ಯು ಸೆಕೆಂಡ್ ಪರೀಕ್ಷೆಯಲ್ಲಿ ಇಬ್ಬರೂ 100 kke 100 ತೆಗೆದುಕೊಂಡು ನನಗೆ ಆಶ್ಚರ್ಯ ಹಾಗೂ ಹೆಮ್ಮೆ ಪಡುವಂತೆ ಮಾಡಿದ್ದರು.
ಅದಾದ ನಂತರ ಮಾಲವಿಕಾ ಹೋಟಲ್ ಮ್ಯಾನೆಜ್ ಮೆಂಟ್ ಸೇರಿದಳು. ಅಲ್ಲಿ ಹೆಚ್ಚಿನವರು ನಾರ್ಥೀಸ್, North-east, ಮಲಯಾಳಿಗಳು. ಹಾಗಾಗಿ ಅವಳ ಸಂಭಾಷಣೆ ಎಲ್ಲ ಹಿಂದಿ ಭಾಷೆಯಲ್ಲ್ಲಿ, ಕಾಲೇಜ ನಲ್ಲಿ ಪಾಠ ಆಂಗ್ಲ ಭಾಷೆಯಲ್ಲಿ. ಬಸ್ ನಲ್ಲಿ ಹೋಗ್ತ ಬಹುಶ: ಕಂಡಕ್ಟರ್ ಜತೆ ಕನ್ನಡದ ಒಂದೆರಡು ಮಾತು ಬಿಟ್ರೆ, ಕನ್ನಡ ನಿಲ್. ನಿಹಾ ಕ್ರೈಸ್ತ್ ಕಾಲೇಜ್ ಸೇರಿದಳು. ಅಲ್ಲಿ ಬರೀ ಇಂಗ್ಲಿಷ್ ಮಾತಾಡುವುದೇ ಆಯ್ತು. ಹಾಗಾಗಿ ಕನ್ನಡದ ಸಂಪರ್ಕವೇ ಹೋದಂತಾಯಿತು. ಅವಳು ಎನ್ ಎಮ್ ಕೆ ಆರ್ ವಿ ಸೇರಿದ ಮೇಲೆ ಪುನ: ಕನ್ನಡ ಮಾತನಾಡಲು ಆರಂಭಿಸಿದ್ದು ಮಾತ್ರವಲ್ಲ, 'ನಮ್ಮ ಮಾನಸ' ಪತ್ರಿಕೆಯ ಎಡಿಟೋರಿಯಲ್ ಬೋರ್ಡ್ ನಲ್ಲಿ ಕೂಡ ಇದ್ದಳು. ಕನ್ನಡ ಪುಸ್ತಕ/ ಕನ್ನಡ ಪೇಪರ್ ಕಡೆ ಇಬ್ಬರೂ ಕಣ್ಣು ಹಾಯಿಸುವುದಿಲ್ಲ. ಅಪರೂಪಕ್ಕೊಮ್ಮೆ ನನ್ನ ಬ್ಲಾಗ್ ನಲ್ಲಿ ಕಣ್ಣು ಹಾಯಿಸುತ್ತಾರೆ ಅಷ್ಟೆ. ಹಾಗಾಗಿ ನಿಹಾರಿಕಾ ಶಿಕಾರಿ ಪುಸ್ತಕ ಓದಲು ತೆಗೆದುಕೊಂಡಾಗ ನಿಜಕ್ಕೂ ಖುಶಿ ಅನ್ನಿಸಿತ್ತು. ಓದ್ತಾ ಓದ್ತಾ ಅದರಿಂದ ಸ್ಪೂರ್ತಿ ಪಡೆಯುತ್ತ ಒಂದೊಂದೆ ಕವರ್ ಪೇಜ್ ಡಿಸೈನ್ ಮಾಡಿದಳು. ಅವಳು ಪುಸ್ತಕ ಬದಿಗೆ ಇಟ್ಟಿದಾಗ ನಾನೂ ಅದನ್ನು ಓದ್ತಾ ಇದ್ದೆ. (ಇದು ನನ್ನ ಮೂರನೇ ಸಲದ ಓದು. ಪ್ರತೀ ಸಲ ಓದುವಾಗ ಏನಾದರೂ ಹೊಸತು ಹೊಳಹು ಪಡೆಯುತ್ತೇನೆ). ಅಲ್ಲದೆ ನಮ್ಮ ಈಗಿನ ಮನೆಯಿಂದ ನಾವು ಹೋಗುತ್ತಿರುವ ಫ್ಲ್ಯಾಟ್ ಗೆ ಹೋಗಲು ತುಂಬಾ ಸಮಯ ಬೇಕು. ಮನೆಯ interiors ನನ್ನ ಜವಾಬ್ದಾರಿ. ಆಗ ಟ್ರಾವಲ್ ಮಾಡುವಾಗ ಅವಳು ಈ ಪುಸ್ತಕ ಓದುತ್ತಿದ್ದಳು.
ಮೊದಲ 24 ಕವರ್ ಪೇಜ್ ಡಿಸೈನ್ಸ್ ಅಷ್ಟೆ ನನಗೆ ನೋಡಲಿಕ್ಕೆ ಆಗಿದ್ದು, ಆಮೇಲೆ ಮಾಲವಿಕಾಳ ಸೆಪ್ಟೊಪ್ಲಾಸ್ಟಿ ಸರ್ಜರಿ ಇತ್ತು. ಐದು ದಿನ ಆಸ್ಪತ್ರೆ ಓಡಾಟವೇ ಆಯ್ತು. ಚುಕ್ಕುಬುಕ್ಕುವಿನಲ್ಲಿ ಹಾಕಿದ್ದ, ನಮ್ಮ ಎಂಟ್ರಿಸ್ ಬಿಟ್ಟರೆ ಹಲವಾರು ಚಂದದ ಕವರ್ ಪೇಜ್ ಗಳು ಇದ್ದುವು, ಆಗ ನನಗೆ 'ಛೆ! ನಾನು ಕಳುಹಿಸಬಾರದಿತ್ತು ಅಂದುಕೊಂಡಿದ್ದೆ. 
ವಸುಧೇಂದ್ರ ಬೆಳಿಗ್ಗೆ ಮುಂಚೆ ಕಳುಹಿಸಿದ ಮೈಲ್ ನಿಂದ (ಅದನ್ನು ನಾನು ನನ್ನ ಸೆಲ್ ಫೋನ್ ನಲ್ಲೇ ಓದಿದೆ) ಗೊತ್ತಾಯಿತು ನನ್ನ ಮತ್ತು ನಿಹಾಳ ಕವರ್ ಪೇಜ್ ಅಂತಿಮ 12 ರಲ್ಲಿ ಬಂದಿದ್ದು. ಆದರೆ ಆ ದಿನ ತುರ್ತಾಗಿ ಪ್ಲ್ಯಾಟ್ ಕಡೆ ಹಾಗೂ ಹಲವು ಇತರೇ ಕೆಲಸಗಳ ನಿಮಿತ್ತ ನಾನು ನಿಹಾ ಚುಕ್ಕುಬುಕ್ಕುಗೆ ಹೋಗಿ ನೋಡಿದಾಗ ಮಧ್ಯಾಹ್ನ ದಾಟಿತ್ತು.
ನಿಹಾಗೆ ಪ್ರೈಜ್ ಬಂದಿದ್ದು ಕೂಡ ವಸುಧೇಂದ್ರ ಅವರೆ ನನಗೆ ಮೊದಲು ತಿಳಿಸಿದ್ದು. ಆಮೇಲೆ ಹಲವಾರು ಎಸ್ ಎಮ್ ಎಸ್ ಗಳು, ಫೋನ್ ಗಳು, ಇ-ಮೈಲ್ ಗಳು. ಖುಶಿಯಾಯ್ತು ಎಲ್ಲರೂ ನಿಹಾಗೆ ಅಭಿನಂದಿಸಿದ್ದು. ಇದರಲ್ಲಿ ನನಗೆ ತುಂಬಾ ಖುಶಿ ಎನಿಸಿದ್ದು 'ಜೋಗಿ' ಅವರ ಎಸ್ ಎಮ್ ಎಸ್- ಅವರ ಬುಸಿ ಶೆಡ್ಯೂಲ್ ನಲ್ಲಿ ಸ್ವಲ್ಪ ಟೈಮ್ ತೆಗೊಂಡು ನನಗೆ ಎಸ್ ಎಮ್ ಎಸ್  ಕಳುಹಿಸಿದ್ದು.....:-) 
ನಾನು ನಿಹಾಗೆ ಈ ಮೊದಲೇ ಪ್ರಾಮಿಸ್ ಮಾಡಿದೆ 'ಪ್ರೈಜ್ ಬರಲಿ ಬಿಡಲಿ ನಾನಂತು ನಿನಗೆ ಏನಾದರೂ ಸ್ಪೆಷಲ್ ಉಡುಗೊರೆ ಕೊಡುತ್ತೇನೆ ಯಾಕೆಂದರೆ ನೀನು ಪ್ರಾಮಾಣಿಕವಾಗಿ ಕಂಟೆಸ್ಟ್ ನಲ್ಲಿ ಭಾಗವಹಿಸಿದ್ದೀಯಾ ಅಂತ. ಹಾಗಾಗಿ ಅವಳಿಗೆ ಸೆಕೆಂಡ್ ಪ್ರೈಜ್ ಬಂದಿದ್ದು ನನಗೆ ಖುಶಿ.
ನಿಹಾ ಕವರ್ ಪೇಜ್ ಗಳನ್ನು ಮಾಡುವಾಗ ನನಗೂ ಹುಮ್ಮಸ್ಸು ಬಂದು  ನಾನೂ ಮೂರು ಕವರ್ ಪೇಜ್ ಗಳನ್ನು ಮಾಡಿ ಕಳುಹಿಸಿದೆ. :-(
 this coverpage was for private circulation only, not for the competition. just experimenting with the color combos. :-) :-) Niha said 'not at all nice mommee'
 ah this is atrocious the original colour was awful. Niha said you can do better so i just clicked on the microsoft picture managers' autocolour option and this came up. i used mspaint,artRage for this coverpage. both malavika and niharika liked this though it did not reflect  anything from the novel 'Shikari'.

ಸ್ನೇಹಿತೆ ಫೋನ್ ಮಾಡಿ ಯಾವ ಕವರ್ ಪೇಜ್ ನಿಮ್ಮದು ಅಂತ ಕೇಳಿದಾಗ, ಹೇಳಬಾರದಲ್ಲವಾ? ಅಂತ ಹೇಳಿ, ಯಾವುದು ಚೆನ್ನಾಗಿಲ್ಲ ಅದೆಲ್ಲ ನಂದೇ ಅಂದಿದ್ದೆ, ಅದಕ್ಕೆ ಬಾಣಗಳ ಚಿತ್ರ ಇರುವುದು ನಿಮ್ಮದೇನಾ ಅಂತ ಕೇಳಿದ್ರು, ಹಿ ಹಿ ಹಿ....(ಕವರ್ ಪೇಜ್ ಕಳುಹಿಸಿದ ಮೇಲೆ ನನಗೆ ಎಷ್ಟು ಮುಜುಗರ ಆಯ್ತು ಅಂದ್ರೆ  ನನ್ನ ಆಪ್ತ ಸ್ನೆಹಿತೆಯರಾದ ಜ್ಯೋತಿ, ವೇದ, ನಾಗಮಣಿ, ಸಂಧ್ಯಾ ಅವರೊಂದಿಗೆ ಹೇಳಿಕೊಂಡೆ. 'ಕಳುಹಿಸಿದ ಮೇಲೆ ಕಳುಹಿಸಬಾರದು ಅನ್ನಿಸಿತು' ಅಂತ, ಆದರೆ ಅವರೆಲ್ಲ ತುಂಬ encouraging words ನಿಂದ ಸಮಾಧಾನ ಮಾಡಿದ್ರು. ಅವರಿಗೆಲ್ಲ ದೊಡ್ಡ ಧನ್ಯವಾದಗಳು. ಲವ್ ಯು ಗಯ್ಸ್.
ನಿಜ ಹೇಳಬೇಕೆಂದರೆ ಚುಕ್ಕುಬುಕ್ಕುವಿನಲ್ಲಿನ ಈ ಪ್ಯಾರಾ ನಿಂದ ಇಂಪ್ರೆಸ್ಸ್ ಆದೆ:
ಈ ಸ್ಪರ್ಧೆಯ ಹಿಂದಿರುವ ಉದ್ದೇಶ ಕಾದಂಬರಿಯನ್ನು ಮೆಚ್ಚಿದ ಓದುಗರಿಗೆ ಅದರ ಕಥಾಲೋಕದಲ್ಲಿ ಇನ್ನಷ್ಟು ಮುಳುಗೇಳುವ ಅವಕಾಶ ಕಲ್ಪಿಸುವದು.  ಆದ್ದರಿಂದ ಹಿಂದೆಂದೂ ಚಿತ್ರ ಬರೆಯದಿದ್ದರೂ ನೀವೀ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಫೋಟೋಶಾಪ್‌ ಬರಲೇಬೇಕು ಅಂತ ಇಲ್ಲ. ನೀವೇ ತೆಗೆದ ಫೋಟೊ, ಬಿಳಿಹಾಳೆ, ಬಣ್ಣ, ಬ್ರಷ್ಯು, ಕತ್ತರಿ, ಗೋಂದು ಏನನ್ನಾದರೂ ಬಳಸಿ. ಫೋಟೊ ತೆಗೆದು ಶೀರ್ಷಿಕೆ ಸೇರಿಸಿ ಕಳಿಸಿ.
ನನ್ನ cr'eat'ivity ಅಡಿಗೆ ಮಾಡಿ ತಿನ್ನುವುದು ರಲ್ಲೇ ಮುಗಿದು ಹೋಗುತ್ತೆ, ಅದಕ್ಕೆ ಸ್ಪರ್ಧೆಯಲ್ಲಿ ಹೇಳಿದ ಹಾಗೆ ಯಾಕೆ ಒಂದು ಕೈ ನೋಡಬಾರದು ಅಂತ contest ನಲ್ಲಿ ಪಾಲ್ಗೊಂಡೆ.


 thought i was trying to depict the confused mind in this coverpage. the illustration is by Niharika. Personally this is my favorite


This made to the final 12 and surprise of surprises made it to the last 5 and got a special mention by the Judge for its abstract depiction and also the reasons why this was discarded. AND i agree with the judge this had nothing to do with the novel. The exciting part of this Novel Shikari (which has seen many edition - the copy with me shows the year  2007- the book was first published in 1979) was that the contestants had to read the book. My favorite is Cheda another novel by Sri Yashawanth Chittal and Shikari comes a second. ( used Freshpaint from my windows phone, Transferred it to artRage and final touches in MsPaint for this abstract drawing).

 Nihas cover designs:


Here she has scanned her Psychology answer papers and drew the warli figures in ink and then used 'invert colour ' option in MsPaint, brought them all together in this coverpage. This is my favorite
The photograph of the hand and its shadow is her own. She tried to photograph my hand it did not come out nice. I tried to photograph hers and she was not happy with the result, so she shot her own hand. anyways she is a lefty. :-) Just loved this cover page cos she attempted this after reading the Novel. But this consumed a lot of time and she almost gave up in between. i had promised her that i would give her a prize cos this was an honest attempt.  There was some problem with resolution which we could not rectify. But Raghu has given her guidance for any future attempt. :-)
If i were the judge i would choose this design for its enigmatic depiction

In the final 12: here is the link. Two of Niha's coverpages made it to the final 12.

http://www.chukkubukku.com/event/mukhaputa-shikari/final12

Here is the Judge's comment:
http://www.chukkubukku.com/kagada/1386184861
Anyways Niharika will have triple treat today. first because she turns 21 today, second for winning the contest and third one to keep my promise.

The contest was organised by Chukkubukku-an exclusive website and the only such  to my knowledge which is completely dedicated to Kannada literature, and  Ankita Pustaka.The covers were judged by Sri Channakeshava- theatre personality and a renowned artist.

here is the link to the web

www.chukkubukku.com

We both enjoyed a lot.

Never judge a book by its cover ಅನ್ನುತ್ತಾರಾದರೂ ನನಗೆ ಕವರ್ ಪೇಜ್ ಚಂದ ಇರಬೇಕು.  ಆಪ್ತ ಮಿತ್ರರೊಬ್ಬರು ಒಂದು ಪುಸ್ತಕ ಓದಲು suggest ಮಾಡಿದ್ದರು. ನಾನು- ಪುಸ್ತಕದ ಕವರ್ ಪೇಜ್ ಚೆನ್ನಾಗಿರಲಿಲ್ಲ ಅದಕ್ಕೆ ತೆಗೊಂಡಿಲ್ಲ ಅಂದಾಗ ಸರಿ ಬೈದು ಒಂದು ಉದ್ದ ಮೈಲ್ ಕಳಿಸಿ ಕೆಲವು ದಿನ ಮಾತು ಬಿಟ್ಟಿದ್ದರು. 

Moral of the story is : give it (anything) your best shot, one  has every chance to win. ;-) :-)

ಏನಂತೀರಾ??