April 11, 2020

ದ್ರಾಕ್ಷಿ




ದ್ರಾಕ್ಷಿ - ಅನಾನಸು ಸಾಸಿವೆ

ಇವತ್ತು ದ್ರಾಕ್ಷಿ ಬೆಳೆಸುವ ರೈತರು ಅಪಾರ್ಟ್ಮೆಂಟ್ ಗೆ ಬಂದಿದ್ದರು. ಕೆಜಿ ಒಂದಕ್ಕೆ 55₹. ತುಂಬಾ ಕಡಿಮೆಯಾಯ್ತು ಅಅನ್ನಿಸ್ತು.  ಶರದ್ variety. ಇನ್ನೊಂದು variety ಕೂಡ ಇದೆ ಆದ್ರೆ, harvest ಮಾಡಲು ಅವರಿಗೆ ಜನ ಸಿಗಲಿಲ್ಲವಂತೆ. ಸುಮಾರು ಜನ ತೆಗೊಂಡ್ರು. ಕೆಲವರು ಒಂದು ಕೆ ಜಿ ತೆಗೊಂದು, ರುಚಿ ನೋಡಿ ಇನ್ನಷ್ಟು ದ್ರಾಕ್ಷಿ ಖರೀದಿಸಿದರು
ನಮ್ಮ ಬಿಲ್ಡಿಂಗ್ ನಲ್ಲಿರೋ ಅನುಪಮ ಅನ್ನುವವರು 2 ಕೆ ಜಿ ದ್ರಸ್ಕಿ, ನಾಲ್ಕು ಸೆಕ್ಯೂರಿತಿಯವರಿಗೆ ಕೊಟ್ಟರು...ಶ್ರೀಕಾಂತ ಮತ್ತು ಅವರ ಪರಿಚಯದವರು ಲಿಂಗಣ್ಣ ಅವರು ಕೆಲವು ಕೆ ಜಿ ದ್ರಾಕ್ಷಿ ಖರೀದಿಸಿ ಬಿ ಬಿ ಎಂ ಸಿ ಹೌಸ್ ಕೀಪಿಂಗ್ ನವರಿಗೆ ಕೊಟ್ಟರು. Nice ಅಲ್ವಾ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಮದುವೆ, ಮುಂಜಿ ಮುಂತಾದ ಸಮಾರಂಭಕ್ಕೆ ಕಡ್ಡಾಯವಾಗಿ ಮಾವು , ಅನಾನಸು, ಗೇರು ಹಣ್ಣು, ದ್ರಾಕ್ಷಿ ಮುಂತಾದು ಹಾಕಿ ಸಾಸಿವೆ ಮಾಡುತ್ತಾರೆ. ಕೇಕ್ ಆರ್ಡರ್ ಇತ್ತು. ಅದಕ್ಕಾಗಿ ಅನಾನಸು ತರಿಸಿದ್ದು, ಕೆಲವು ಹೋಳು ಉಳಿದಿತ್ತು. ಇವತ್ತು ದ್ರಾಕ್ಷಿ ಕೂಡ ಸಿಕ್ಕಿದ್ದರಿಂದ ದ್ರಾಕ್ಷಿ -  ಅನಾನಸಿನ ಸಾಸಿವೆ ನಮ್ಮನೇಲಿ
#ಲಾಕ್ ಡೌನ್..

No comments: