Showing posts with label ವಸುಧೇಂದ್ರ. Show all posts
Showing posts with label ವಸುಧೇಂದ್ರ. Show all posts

November 21, 2013

ವಸುಧೇಂದ್ರರ ಬರಹಗಳ ಬಗ್ಗೆ ಸಂಕಿರಣ

ಒಂದು ಹೊಸ ಸಮಸ್ಯೆ ಶುರು ಆಗಿದೆ. ನಾನು ಯಾವುದಾದರೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡರೆ, ಅದರ ಬಗ್ಗೆ ರಿಪೋರ್ಟ್ ಮಾಲತಿ ಮ್ಯಾಡಂ ಬ್ಲಾಗ್ ನಲ್ಲಿ ಓದ ಬಹುದು ಅಂತ. ಅಯ್ಯೋ ನಾನು ಎಟೆಂಡ್ ಆಗೋದು ನನಗೆ ತುಂಬಾssss ಆಪ್ತ ಎನಿಸಿದವರ ಸಮಾರಂಭಗಳನ್ನು ಮಾತ್ರ. ಮತ್ತೆ ಭಾಗವಹಿಸಿದ ಸಮಾರಂಭಗಳದ್ದೆಲ್ಲsss ನಾ ಬರೆಯಲ್ಲ. ಈ ಹಿಂದೆ ವಸುಧೇಂದ್ರ ಅವರ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗಿ ಬಂದು ಅದರ ಬಗ್ಗೆ ಸುಮ್ನೆ ತಮಾಶೆಗೆ ಬರೆದಿದ್ದು, ಅದು ಫೇಸ್ ಬುಕ್ ನಲ್ಲಿ ಶೇರ್‍ ಆಗಿದ್ದು ಇಂತಹ ಗಲತ್ ಫೆಹಮಿ ಗೆ ಕಾರಣ. :-)

ಹೌದು ವಸುಧೇಂದ್ರ ಅತ್ಯಂತ ಆತ್ಮೀಯರು. ನಾನು ಅವರನ್ನು ಫ್ರೆಂಡ್ ಅನ್ನುತ್ತೇನಾದರು, ಸಾಧಾರಣ ವಾಗಿ ಫ್ರೆಂಡ್ಸ್ ಆದವರು ಎಷ್ಟು ಒಡನಾಡಬೇಕು ನಾನು ಅಷ್ಟು ಅವರ ಜತೆ ಒಡನಾಡುವುದಿಲ್ಲ. ಆದರೆ ನನಗೆ ಅಗತ್ಯ ಬಿದ್ದಾಗ ಯಾವುದೇ ಸಹಾಯ (ಆಫಿಸ್ ಫ್ರಂಟ್) ಬೇಡಿದರು ಅದಕ್ಕೆ ತಕ್ಷಣ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆಗೊಮ್ಮೆ ಈಗೊಮ್ಮೆ ಭೇಟಿಯಾಗಿದ್ದಾಗಲೂ ಅವರು ಯಾರ ಬಗ್ಗೆ ಕುಹುಕ ಮಾತಾಡುವುದು ಇರಲಿ, ಬೇರೆಯವರ ಬಗ್ಗೆ ಕೆಟ್ಟದ್ದು ಮಾತಾಡುವುದಿರಲಿ ಮುಂತಾದ್ದನ್ನು ಮಾಡುವುದಿಲ್ಲ.  ತುಂಬ ಹಾಸ್ಯ ಪ್ರವೃತ್ತಿಯವರು.  ಇದರಿಂದ ನನಗೆ ಅವರ ಜತೆ ತುಂಬಾ ಕಂಫರ್ಟೇಬಲ್ ಅನ್ನಿಸುತ್ತೆ.
ಅವರ ಬರಹ ಕೂಡ ಅವರಂತೆಯೇ ಆಪ್ತ, honest. ಜೀವನ ಪ್ರೀತಿಯಿಂದ ಕೂಡಿದ ಬರಹಗಳು is not everybody's cup of tea ((or coffee), ಆಮೇಲೆ ಕಾಫಿ ಪ್ರಿಯರು ನನ್ನ ಮೇಲೆ ಸಿಟ್ಟಾಗುವುದು ಬೇಡ :-))
ನಿನ್ನೆಯ ಕಾರ್ಯಕ್ರಮದ ಬಗ್ಗೆ ಚುಕ್ಕುಬುಕ್ಕು ವೆಬ್ಸೈಟ್ ನಲ್ಲಿ ಹಾಕುತ್ತಾರೆಂದು ರಘು ಹೇಳಿದ್ದಾರೆ. ಅದನ್ನು ಇಲ್ಲಿ ಲಿಂಕಿಸುತ್ತೇನೆ. ಎಷ್ಟು ಆಪ್ತವಾಗಿತ್ತು ನಿನ್ನೆಯ ಕಾರ್ಯಕ್ರಮ ಎಂದು ನಿಮಗೂ ಗೊತ್ತಾಗುತ್ತೆ. ಎಂಜಾಯ್

  ಜ್ಯೋತಿ ಫೋನ್ ಬಂದಾಗ ನಾನು "ವಸುಧೇಂದ್ರರ ಕಾರ್ಯಕ್ರಮ ಅಂದ್ರೆ ಸಭೆ ಕಿಕ್ಕಿರಿದು ತುಂಬಿರುತ್ತೆ, ನಾನು ಮೊದಲು ತಲುಪಿದ್ರೆ ನಿಮಗೆ ಸೀಟ್ ರಿಸರ್ವ್ ಮಾಡಿರ್ತೀನಿ ಅಂದಿದ್ದೆ, ಆದರೆ ನಾನು ಮನೆಯಲ್ಲಿ ಒತ್ತು ಶ್ಯಾವಿಗೆ, ಮಿತ್ರ ನೀಲೇಶ ಜವಳಿ ತೀರ್ಥಹಳ್ಳಿಯಿಂದ ಬರುತ್ತಾರೆಂದು ಅರ್ಧ ಅಡಿಗೆ ಮಾಡಿ ಬರುವುದರಷ್ಟರಲ್ಲಿ ನಾನು ತಲುಪುವಾಗ ಸ್ವಲ್ಪ ಲೇಟ್. ಜ್ಯೋತಿ ನನಗೋಸ್ಕರ ಜಾಗ ಕಾಯ್ದಿಟ್ಟಿದ್ದರು. ನಿಹಾ ತೆಗೆದ ಫೊಟೊ. ಸುಮ್ನೆ ನಿಲ್ಲಬೇಡಿ ಏನಾದರೂ ಮಾತಾಡಿ ಅಂದಾಗ ಜ್ಯೋತಿ 'hi malthi how r u? ಅಂದಾಗ ನಾನು ಥಟ್ ಅಂತ 'ಐ ಯಾಮ್ ಫೈನ್' ಅಂತ ನಕ್ಕಾಗ ನಿಹಾ ಕ್ಲಿಕ್ಕಿಸಿದ್ದು. :-)

ಜ್ಯೋತಿ ಕಡಲಾಡಿ, ವಸುಧೇಂದ್ರ ಮತ್ತು ನಾನು. ಅವರ ಫ್ಯಾನ್ ಗಳ ಮಧ್ಯ ಹೊಕ್ಕಿ ಫೋಟೊ ತೆಗೆದದ್ದೆ ಒಂದು ಸಾಹಸ/ಸಂಭ್ರಮ. :-)

ಶತಾವಧಾನಿ ಆರ್ ಗಣೇಶ ಅವರು ಎಷ್ಟೊಂದು ಓದಿಕೊಂಡಿದ್ದಾರೆ ಅಂತ ದಿಗಿಲು ಖುಶಿ ಅನ್ನಿಸಿತು. ಅವರು ಅಂದ ಮಾತು 'ಬರಹ ನಿಂತ ಕಲ್ಲಾಗದಂತೆ ಹರಿಯುವ ಶಾಸನದಂತಿರಬೇಕು'  ತುಂಬ ಇಷ್ಟ ಆಯ್ತು. ಶತಾವಧಾನಿ ಆರ್. ಗಣೇಶ, ಓ.ಎಲ್. ನಾಗಭೂಷಣ ಸ್ವಾಮಿ, ಟಿ.ಪಿ. ಅಶೋಕ ಮತ್ತು ವಸುಧೇಂದ್ರರ ಆಪ್ತ ಮಿತ್ರರಾದ ಎಮ್. ದತ್ತಾತ್ರಿ ಅವರ ಬರಹಗಳ (ಕತೆ, ಕಾದಂಬರಿ, ಲಘು ಬರಹ) ಬಗ್ಗೆ ಎಷ್ಟು ಚಂದದ ಮಾತನ್ನಾಡಿದರು ಅಂದ್ರೆ ನಾನು ಪುನ: ಅವರ ಪುಸ್ತಕಗಳನ್ನು ಓದುತ್ತಾ ಇದ್ದೇನೆ. ನನ್ನ ಮಗಳು ನಿಹಾರಿಕಾ ಕನ್ನಡ ಪುಸ್ತಕ ಓದುವುದು ಕಡಿಮೆ. ಶಿಕಾರಿ ಮುಖಪುಟ ಸ್ಪರ್ಧೆಯಲ್ಲಿ ಭಾಗವಹಿಸಲು (ಅದರ ಬಗ್ಗೆ ಪೋಸ್ಟ್ ಮುಂದೆ) ಶಿಕಾರಿ ಓದುತ್ತಿದ್ದಾಳೆ, ಆದರೆ ಕಾರ್ಯಕ್ರಮದಲ್ಲಿ ಘಟಾನುಘಟಿಗಳ ಮಾತು, ಅದಕ್ಕೆ ತಕ್ಕಂತೆ ನಮ್ಮ ನಗು ಚಪ್ಪಾಳೆಯಿಂದ ಎಷ್ಟು ಪ್ರಭಾವಿತಳಾಗಿದ್ದಾಳೆ ಅಂದ್ರೆ ಅವಳು ವಸುಧೇಂದ್ರರ ಪುಸ್ತಕ ಓದಲು ತೊಡಗಿದ್ದಾಳೆ. ಹೇಗೂ ನನ್ನ ಬಳಿ ಅವರು ಬರೆದ ಎಲ್ಲ ಪುಸ್ತಕಗಳು ಇವೆ ಮತ್ತು ಅವಳಿಗೆ ರಜೆ. ಕಾರಣಾಂತರಗಳಿಂದ ನಮ್ಮ ಟೂರ್ ಪ್ರೋಗ್ರಾಮ್ ಕ್ಯಾನ್ಸ್ಲಲ್ಡ್  <೦>
ಇಲ್ಲಿದೆ ಚುಕ್ಕುಬುಕ್ಕು ಲಿಂಕ್ ಅವರು ಅಪ್ ಡೇಟ್ ಮಾಡಿದ ಹಾಗೆ ಓದ್ತಾ ಇರಿ.
http://www.chukkubukku.com/
ಈಗ ಬೈ
:-)

October 8, 2013

ಟಾಯ್ಲೆಟ್ ಪ್ರವರ

(ನಿನ್ನೆ ರಾಯರು ಗಟ್ಟಿ ಆವಾಜ್ ಹಾಕಿದರು: ನಿನ್ನಿಂದ ಸಿಸ್ಟಮ್ ಸ್ಲೋ ಆಗಿದೆ. ನಿನಗೆ ಬೇಡದಿದ್ದ ಫೈಲ್, ಫೋಟೊ, ಸಿನಿಮಾಗಳನೆಲ್ಲ ತೆಗೆದು ಹಾಕಿ, defrag ಮಾಡು ಅಂತ. ಸರಿ ಒಂದೊಂದಾಗಿ ನನ್ನ ಫೋಲ್ಡರ್ ಕ್ಲಿಯರ್ ಮಾಡಬೇಕಾದ್ರೆ ಈ ಹಳೆ ಬರಹ ಸಿಕ್ಕಿತು. ನಿಮಗೆ ಇಷ್ಟ ಆಗುತ್ತೋ ಇಲ್ಲವೋ ಇಲ್ಲಿ ಹಾಕ್ತಾ ಇದ್ದೀನಿ. ಯಾಕಂದರೆ ಆಗ ಈಗಿನಷ್ಟು ಸಲೀಸಾಗಿ ನನಗೆ ಕನ್ನಡದಲ್ಲಿ ಬರೀಲಿಕ್ಕೆ ಬರುತ್ತಿರಲಿಲ್ಲ.
ವಸುಧೇಂದ್ರರ ಬರಹ ಓದಿ ಅವರಿಗೆ ಎಸ್ ಎಮ್ ಎಸ್ ಮಾಡಿದ್ದು ನೆನಪಿದೆ, ಈ ಬರಹ ಕಳಿಸಿದ್ದು ನೆನಪಿಲ್ಲ. ಹಾಗೂ ಇದು Ansi format ನಲ್ಲಿದ್ದದ್ದು ನಾನೇ ಟ್ರೈ ಮಾಡಿ ಮಾಡಿ Unicode ಗೆ ಬದಲಾಯಿಸಿ ಪೋಸ್ಟಿಸಿದ್ದೇನೆ. of course i am proud of myself for figuring it out :-)ಈ ಕತೆ 'ರಕ್ಷಕ ಅನಾಥ' ಕತಾ ಸಂಕಲನದಲ್ಲಿ ಇದೆ ಅನ್ನಿಸುತ್ತೆ....ಫೈಂಡ್ ಔಟ್ ಮಾಡಿ ಹೇಳ್ತೇನೆ........  )
...................................................................................................................
ವಸುಧೇಂದ್ರರ ಸಣ್ಣ ಕತೆ ಮನೆ -’ಮಾರು’ ಓದ್ತಾ ಇರಬೇಕಾದ್ರೆ ನಮ್ಮಲ್ಲಿ ಶ್ರೀಕಾಂತ್ ಗೂ ಮಾಲವಿಕಾ ಗೂ toilet ಬಳಸಲು ಗಲಾಟೆ ನಡೀತಾ ಇತ್ತು
’ಅಪ್ಪ’ 20 ಕೌಂಟ್ ಮಾಡ್ತೇನೆ, ನೋಡು ಹೊರಗೆ ಬರಬೇಕು ಅಂತ ಬೇಗ ಬೇಗ 1 ರಿಂದ ಎಣಿಸಲು ಶುರು ಮಾಡಿದಳು.
ಅದಕ್ಕೆ ಇವರು ’ಹಾ ಹಾ ಅಷ್ಟು ಬೇಗ ಬೇಗ ಎಣಿಸಲಿಕ್ಕೆ ಇಲ್ಲ ಪ್ರತಿ ಸಂಖ್ಯೆ ಆದಮೇಲೂ ೨ ನಿಮಿಷದ ಗ್ಯಾಪ್ ಇರಬೇಕು’
ಕೂಡಲೇ ಅಮ್ಮ ಅಮ್ಮ ನೋಡಮ್ಮ ಅಪ್ಪನ್ನ್ ಅಂತ ನನ್ನ ಬಳಿ ಕಂಪ್ಲೈಂಟ್
ನಾನಂತು ಸುಮ್ಮನೆ ನಗ್ತಿರ್ತೇನೆ, ಅವರದ್ದು ಕೋಳಿ ಜಗಳ ಕೇಳ್ತಾ.
ಕೂಡಲೇ ವಸುಧೇಂದ್ರ ಅವರಿಗೆ ಎಸ್.ಎಮ್.ಎಸ್ ಮಾಡಿದೆ ’hopefully the tundu mane has equal number of toilets’ ಅಂತ.
(ವಿಜಯ ಕರ್ನಾಟಕ ಸಾಪ್ತಾಹಿಕ ಪುರವಣಿ ಪುಟ: 6 , 20 ಸೆಪ್ಟೆಂಬರ್ 09)
ಅರ್ಜೆಂಟ್ ನಲ್ಲಿ ಈ ಮನೆ ಹುಡುಕಿದಾಗ ಇದರಲ್ಲಿರೋದೆ ಒಂದೇ toilet ಅಂತ ನಾವು ಅಷ್ಟು ಗಮನಿಸಿರಲಿಲ್ಲ. ಹೆಚ್ಚಿನಂಶ ಈಗೀನ ಎರಡು ಬೆಡ್ ರೂಮ್ ಬಾಡಿಗೆ ಮನೆಯಲ್ಲಿ ಒಂದು ಬೆಡ್ ರೂಮ್ ಗೆ ಒಂದು ಎಟ್ಯಾಚ್ಡ್ ಬಾತ್/toilet ಇರುತ್ತೆ. ನಾವಿರುವ ಬಾಡಿಗೆ ಮನೆ ೧೫ ವರ್ಷ ಹಳೆಯದು.
ಮುಂಬಯಿನಲ್ಲಿ ನಾನು ಚಿಕ್ಕವಳಿದ್ದಾಗ ನಮ್ಮ ಮನೆ ಇದ್ದಿದ್ದು ಮೂರನೆ ಮಹಡಿಯಲ್ಲಿ. ಲಿಫ್ಟ್ ಇರಲಿಲ್ಲ. ಒಳ ಹೊಕ್ಕ ಕೂಡಲೇ ಒಂದು ದೊಡ್ಡ ಹಾಲ್ ಆಮೇಲೆ ಇನ್ನೂ ಒಳಗೆ ಇನ್ನೊಂದು ರೂಮ್. ಅದಕ್ಕೆ ಬಾಗಿಲು. ಅದು ಅಡಿಗೆ ಮನೆ cum ಬಾತ್ರೂಮ್
ಒಂದು floor  ನಲ್ಲಿ ಒಟ್ಟು ಆರು ಮನೆಗಳಿದ್ದವು. ಎರಡು ಮನೆಗೆ ಒಂದರಂತೆ staircase ಹತ್ತಿರ toilet . ನಾವೆಲ್ಲ ಆಗ ಸರದಿಯಲ್ಲಿ ನಿಲ್ಲ ಬೇಕಾಗುತ್ತಿತ್ತು. ಕೆಟ್ಟ ವಾಸನೆ ಬೇರೆ. ಫೆನಾಯಿಲ್ ಮುಂತಾದವುಗಳ ಬಳಕೆ almost nil . ಈಗೀಗ ಪರಿಸ್ಥಿತಿ improve ಆಗಿದೆ :-)
ತೀರ್ಥಹಳ್ಳಿಯಲ್ಲಿ ನಾವು ಮೂವತ್ತು ಮಂದಿಗೆ ಇದ್ದದ್ದು ಮೂರು toilet, ಅಲ್ಲೂ ಸರದಿ ಸಾಲು, ಶಾಲೆಗೆ ಹೋಗುವ ಮಕ್ಕಳಿಗೆಲ್ಲ ಅರ್ಜೆಂಟ್. ಇನ್ನೊಂದು ಗಮ್ಮತ್ತಿನ ವಿಷಯ ಅಂದ್ರೆ ನಾವು ಹೆಣ್ಣು ಮಕ್ಕಳು toilet ಉಪಯೋಗಿಸುವಾಗ ನಮ್ಮ ಮಾತುಗಳು
ಶ್ರೀಕಾಂತ್ ಗೆ toilet ಗೆ ಹೋಗುವಾಗ ಪತ್ರಿಕೆ ಇರಲೇ ಬೇಕು. ಮದುವೆಯಾದ ಹೊಸದರಲ್ಲಿ ಯುಗಾದಿಗೆ ಮುಂಬೈ ಗೆ ಹೋದಾಗ, ಇವರು ಆಂಗ್ಲ ಪತ್ರಿಕೆ ಯೊಂದನ್ನು ಒಯ್ದು toilet ಗೆ ಹೋದರು. ಸುಮಾರು ಹೊತ್ತಾದರೂ ಹೊರಗೆ ಬರಲೆ ಇಲ್ಲ. ನನ್ನ ತಮ್ಮ ಅಂತೂ ’ಜಿಜಾಜಿ ಗೆ ಅಷ್ಟು ಹೊತ್ತು ಬೇಕಾ, ಏನು ಕಬ್ಬಿಣ ಬೀಳಿಸ್ತಾರಾ?’ ಅಂತ ಕೇಳಿದಾಗ ನನಗಂತೂ ಮುಜುಗರ. ಆಮೇಲೆ ನಿಧಾನಕ್ಕೆ ’ಅವರು ಪೇಪರ್ ತೆಗೆದು ಕೊಂಡು ಹೋಗಿದಾರೆ ಅಂದೆ’, ಅದಕ್ಕೆ ಅವನು ಗಟ್ಟಿಯಾಗಿ ಜೀಜಾಜಿ ನಮ್ಮಲ್ಲಿ ನೀರು ಸಾಕಷ್ಟು ಬರ್ತದೆ, ಪೇಪರ್ ಬಳಸುವ ಅಗತ್ಯವಿಲ್ಲ, ಅಷ್ಟೆ ಅಲ್ಲ ಸಮುದ್ರ ತುಂಬ ಹತ್ತಿರದಲ್ಲೇ ಇದೆ, ಎಂದಾಗ ಅವರಿಗೆಲ್ಲ ನಗು.್, ನನಗೋ ಮುಜುಗರ. :-(
ಇತ್ತೀಚಿಗಂತೂ ವಿಜಯ ಕರ್ನಾಟಕ ಪತ್ರಿಕೆ ಇಲ್ಲದಿದ್ದರೆ ಅವರಿಗೆ toilet ಗೆ ಹೋಗಲು ಕಷ್ಟವಾಗುತ್ತದೆ. ಆಕಸ್ಮಾತ್ ಆ ದಿನ ವಿ.ಕ ಬಂದಿರದಿದ್ದರೆ ಪೇಟೆಗೆ ಹೋಗಿ ಅದನ್ನು ಖರಿದಿ ಮಾಡಿ ಆಮೇಲೆ toilet ಗೆ ಎಂಟ್ರಿ.
ರಜೆ ಗಿಜೆ ಬಂದು ಆ ದಿನ ಪೇಪರ್ ಬಂದಿರದಿದ್ದರೆ ’ಛೆ! ಇವತ್ತು toilet ಸರಿ ಆಗ್ಲೆ ಇಲ್ಲ ಅಂತ’ ಕಾಲು ಸುಟ್ಟ ಬೆಕ್ಕಿನಂತೆ ಆ ಕಡೆ ಈ ಕಡೆ ಹೋಗ್ತಿರುತ್ತಾರೆ.
ಹ್ಮ್ ಈ ಪೋಸ್ಟ್ ಓದಿ ಮೂಗು ಮುರಿಯಬೇಡಿ. ಅಲ್ಲ ಮೂಗು ಏನಾದರೂ ನಿಜಕ್ಕೂ ಮುರಿದರೆ ಅದಕ್ಕೆ ಪ್ಲಾಸ್ಟರ್ ಹೇಗೆ ಹಾಕುತ್ತಾರೆ??ಗೂಗಲಿಸಿ ನೋಡುವಾ??

:-)


.

March 11, 2013

ತಿರುವಣ್ಣಾಮಲಾಯ್- ರಮಣಮಹರ್ಷಿ ಆಶ್ರಮ

ಹಿಂದಿನ ಪೋಸ್ಟ್ ನಲ್ಲಿ ನಿಹಾರಿಕಾಳ ನಾಟಕ ಪ್ರದರ್ಶನ ದ ನಂತರ ನನ್ನ ಟೂರ್ ಅಂತ ಬರೆದಿದ್ದೆ. ಹೌದು ನಾನು ಅಕ್ಕ ಒಂದು ಚಿಕ್ಕ ಬ್ರೇಕ್ ತೆಗೆದುಕೊಂಡ್ವಿ. ನಾವು ಊರಲ್ಲಿದ್ದಾಗಲೇ ನಿಹಾ ನ ಫೋನ್ ಬಂತು, ಅವರ ನಾಟಕಕ್ಕೆ ಮೊದಲನೇಯ ಬಹುಮಾನ ಬಂದಿದ್ದು. ಸ್ಕ್ರಿಪ್ಟ್. ಮ್ಯೂಸಿಕ್, ಸೆಟ್ಟಿಂಗ್ ಮತ್ತು ರಾಶೋಮೊನ್ ನ woodcutter ನ ಪಾತ್ರ ನಿಹಾರಿಕಾ ವಹಿಸಿದ್ಲು. ಅವರೆಲ್ಲರಿಗೂ ಮೇಕ್ ಅಪ್ ಮಾಡಲು ಒಬ್ಬರು ಬಂದಿದ್ದರಂತೆ. ತುಂಬಾ ಚೆನ್ನಾಗಿ ಮಾಡಿದ್ದರು. ಒಂದು ಬೇಸರದ ಸಂಗತಿಯೆಂದರೆ ನನ್ನಿಂದ ಒಂದು ಫೋಟೊ ಕೂಡ ನೆಟ್ಟಗೆ ತೆಗೆಯಲಾಗಲಿಲ್ಲ. :-(. ನಿಹಾ ಮತ್ತು ಟೀಮ್ ಗೆ ಒಂದು congrats ಹೇಳುವಾ?? ಹಿಂದಿನ ಪೋಸ್ಟ್ ನಲ್ಲಿ ಶುಭ ಹಾರೈಸಿದ ಶ್ರೀಕಾಂತ ಮಂಜುನಾಥ ಹಾಗೂ ರಾಧಿಕ ಇವರಿಗೆ ಧನ್ಯವಾದಗಳು. ಹಾಗೂ ನನ್ನ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಪ್ರೀತಿಸುವ ಜ್ಯೋತಿ, ವೇದಾ, ಸಂಧ್ಯಾ ಹಾಗೂ ನಾಗಮಣಿ ಇವರಿಗೂ ತುಂಬು ಹೃದಯದ ಧನ್ಯವಾದಗಳು
ರಾಶೊಮೋನ್ ನಾಟಕದ ಕೆಲ ದೃಶ್ಯಗಳು



ಕಾರ್ಡ್ ಬೋರ್ಡ್ ಬೆಂಕಿ ಮತ್ತು Rashomon baraha ಸಕತ್ ಇಷ್ಟ ಆಯ್ತು


the team:  ಈ ಫೋಟೊ ತೆಗೀ ಬೇಕಾದ್ರೆ ನಿಹಾ ನ ಮಿಸ್ ಬಂದು 'everybody is talking about your play' ಅಂತ ಹೇಳಿ ನನ್ನನ್ನು ನೋಡಿ, 'Are you Niharika's mother? She resembles you a lot ಅಂದ್ರು

ಈ ಸಂತೋಷದ ಸುದ್ದಿಯ ಬೆನ್ನಿಗೇ ಬಂದ ಇನ್ನೊಂದು ಸಂತಸದ ಸಂಗತಿಯೆಂದರೆ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಪುಸ್ತಕ ಸೊಗಸು ಬಹುಮಾನದಡಿ ಬಹುಮಾನ ಗೆದ್ದ ಮೂರು ಪುಸ್ತಕಗಳಲ್ಲಿ ಎರಡರ ಮುಖಪುಟ ಮಿತ್ರ ರಘು ಅಪಾರ ಮಾಡಿದ್ದು. ಮುಂದಿನ ವರ್ಷ ಮೂರು ಪುಸ್ತಕದ ಕವರ್ ಪೇಜ್ ನಿಮ್ಮದೇ ಆಗಿರುತ್ತೆ ಅಂತ ಅವರಿಗೆ ಕಣಿ ಹೇಳಿದ್ದೀನಿ. ರಘು ಮತ್ತು ನನ್ನ ಪರಿಚಯ ಆಗಿದ್ದು ಅವರು ವಿನ್ಯಾಸ ಮಾಡಿದ ಸುರೇಂದ್ರನಾಥರ 'ಎನ್ನ ಭವದ ಕೇಡು' ಪುಸ್ತಕದ ಮುಖಪುಟದ ಮೂಲಕ. ಈ ಪುಸ್ತಕ ಹೊರತಂದಿದ್ದು ಛಂದ ಪ್ರಕಾಶನ. ಹೀಗೆ ವಸುಧೇಂದ್ರ ಹಾಗು ಅವರ ಮೂಲಕ ರಘು ಅವರ ಪರಿಚಯ. ಈಗ ಅವರು ನನ್ನ ಕುಟುಂಬದ ಸದಸ್ಯರು ಎನ್ನುವಷ್ಟು ಆತ್ಮೀಯರು. ಅವರಿಗೊಂದು congrats.
ಪೊಂಡಿ ಟೂರ್ ನ ಹಿಂದಿನ ಭಾಗ
ಕೃಷ್ಣಾಗಿರಿಯಲ್ಲಿ ಎಳನೀರು ಕುಡಿದು ನಮ್ಮ ಮುಂದಿನ ಸ್ಟಾಪ್ ತಿರುವಣ್ಣಾಮಲಾಯ್ ನ ರಮಣಮಹರ್ಷಿ ಆಶ್ರಮಕ್ಕೆ.  ಆಶ್ರಮ ಅಲ್ಲಿರುವುದು ನಾವು ನೋಡಿದ್ದು ಆಕಸ್ಮಿಕ. ನಮ್ಮ ಕಾರ್ ಮುಂದೆ ಹೋಗುತ್ತಿದ ಬೈಕ್ ನಲ್ಲಿ ಹೊರದೇಶದ ಇಬ್ಬರು ಸಡನ್ ತಿರುವು ತೆಗೆದುಕೊಂಡು ಗೇಟ್ ಒಳಗಡೆ ಹೋದಾಗ ನನ್ನ ಕಣ್ಣು ಗೇಟ್ ಮೇಲಿನ ಬರಹವನ್ನು ಓದಿ, ಪೆರುಮಾಳ್ ಗೆ  ಅಲ್ಲಿ ನಿಲ್ಲಿಸುವಂತೆ ಕೇಳಿಕೊಂಡೆವು.
ಅರುಣಾಚಲ ಬೆಟ್ಟದ ಬುಡದಲ್ಲಿ ಬೆಚ್ಚಗೆ ಕುಳಿತಿದೆ ಈ ಆಶ್ರಮ. ವಿದೇಶಿಯರೂ ತುಂಬ ಹೆಚ್ಚಿನ ಸಂಖ್ಯೆಯಲ್ಲಿದ್ದರು. ರಮಣ ಮಹರ್ಷಿಯ ಬಗ್ಗೆ ಗೂಗಲಿಸಿದರೆ ಎಲ್ಲ ಡೀಟೈಲ್ಸ್ ಲಭ್ಯ. ಹಾಗಾಗಿ ನಾನು ನಾವು ತೆಗೆದ ಫೋಟೊಗಳನ್ನು ಹಾಕುತ್ತೇನೆ.
ಯಾವ ತರಹ ಹಸಿರಿದೆ ನೋಡಿ. ದಾರಿಯಲ್ಲಿ ಕಂಡುಬಂದ ಒಂದು ಹೊಲ

ಇದು ನಾನು ತೆಗೆದ ಚಿತ್ರ

ಸುಮ್ನೆ ಒಂದು
random shot

ಅಂತೂ ಚಲಿಸುವ ಗಾಡಿಯಿಂದ ತೆಗೆದ ಚಿತ್ರ ಒಂಚೂರು ಶೇಕ್ ಆಗದೆ ತೆಗೆದದ್ದು ನನ್ನ ಪ್ರಕಾರ ಸಾಹಸವೇ ಸೈ. :-)
ಆಹ್ ಎಷ್ಟು ಚೆನ್ನಾಗಿದೆಯಲ್ಲವೇ? ನಿಹಾ ತೆಗೆದಿದ್ದು
ಸಾಪಾಟ್ ರೆಡ್ಡೀssss..:-)
tree lined roads

ಇವೆಲ್ಲ ಆಶ್ರಮ ತಲುಪುವ ಮುಂಚಿನ ಚಿತ್ರಗಳು. ಇಲ್ಲಿಂದ ಆಶ್ರಮದ ಚಿತ್ರಗಳು:
ರಾಯರು ತೆಗೆದ ಚಿತ್ರ. ಆ ಮರ ನೋಡಿ ಗಂಟುಗಂಟಾಗಿ ಒಂತರಹ ಚೆನ್ನಾಗಿದೆ
ವೇದಾಧ್ಯಯನ ಶಾಲೆ
ರಮಣಮಹರ್ಷಿಯವರ ಸಮಾಧಿ ಸ್ಥಳ. ಇಲ್ಲಿ ಹಲವಾರು ಭಕ್ತರು ಧ್ಯಾನಕ್ಕೆ ಕುಳಿತಿದ್ದರು. ತುಂಬ ಪ್ರಶಾಂತ ವಾತಾವರಣ

ಬಾಲಕ ರಮಣನಿಗೆ ದಿವ್ಯಾನುಭೂತಿಯಾಗಿ ಉಟ್ಟ ಬಟ್ಟೆಯಲ್ಲಿ ತಿರುವಣ್ಣಾಮಲಾಯ್ ಗೆ ಹೊರಟು ಬಂದು ಆಶ್ರಮ ಸ್ಥಾಪಿಸಿದ್ದರ ಬಗ್ಗೆ

ಯಾವುದೇ ಅಡ್ಡಿ ಆತಂಕಗಳಿಲ್ಲದೇ ನಲಿದಾಡುವ ನವಿಲುಗಳು. ಅನತಿ ದೂರದಲ್ಲಿ ಕಾಣುತ್ತಿರುವ ಬೆಟ್ಟ
ಕಾಳು ಕುಕ್ಕುತ್ತಿರುವ ನವಿಲುಗಳು
family time

peahen/peafowl
ಆಶ್ರಮದ ಗೋಬರ್ ಗ್ಯಾಸ್ ಘಟಕ

ಗುಡ್ಡ ಹಾಗೂ ಗೋಶಾಲೆಯ ಒಂದು ಚಿತ್ರ. ಹಲವಾರು ಗೋ ತಳಿಗಳನ್ನು ಇಲ್ಲಿ ಸಂರಕ್ಷಿಸಲಾಗಿದೆ






ದನದ ಕೊಂಬನ್ನು admire ಮಾಡುತ್ತಿರುವ ಶ್ರೀಕಾಂತ

ಮಧ್ಯಾಹ್ನದ ಊಟದ ವ್ಯವಸ್ಥೆ ಕೂಡ ಇತ್ತು. ಆದರೆ ನಾವು ಪಟ್ಟಾಗಿ ಬ್ರೇಕ್ ಫಾಸ್ಟ್ ಮಾಡಿದ್ದು ಮಾತ್ರವಲ್ಲ, ನಾನು ಕಟ್ಟಿಕೊಂಡು ಬಂದ ಮೈಕ್ರೋವೇವಿಸಿದ ಶೆಂಗಾ, orange ಆಪ್ಪಲ್ ಅಂತ ಬಾಯಿ ಆಡಿಸ್ತಾ ಬಂದಿದ್ದಲ್ಲದೇ ಊಟಕ್ಕೆ ಇನ್ನೂ ಒಂದು ಗಂಟೆ ಇದ್ದುದ್ದರಿಂದ ನಾವು ಆಶ್ರಮದಿಂದ ಗಿಂಗಿ ಫೋರ್ಟ್ ಕಡೆ ಹೊರಟ್ವಿ. ಮೇಲಿರುವ ನವಿಲಿನ ಚಿತ್ರಗಳೆಲ್ಲ ಮಾಲವಿಕ ತೆಗೆದದ್ದು. ಯಾಕೋ ನಿಹಾ ಗೆ ಫೋಟೊ ತೆಗೆಯುವ ಮೂಡ್ ಇರಲಿಲ್ಲ. ಎಲ್ಲ ನವಿಲುಗಳನ್ನು ನೋಡ್ತ ನಾನು ಮಾಲು-ನಿಹಾ ಗೆ have u seen the dance of a peacock ಅನ್ನುತ್ತಿದ್ದಹಾಗೆ ಅಲ್ಲೇ ಆವರಣದಲ್ಲಿರುವ ಗೆಸ್ಟ್ ಹೌಸ್ ಮೇಲಿನ ಟೆರೆಸ್ ಮೇಲೆ ಒಂದು  ನವಿಲು ಕುಣಿದಾಡೇ ತೋರಿಸಿತು ಎಂದು ಫೋಟೊ ನೋಡಿ ನೀವೂ ನಂಬಲೇಬೇಕು. :-)

ನಾವು ಹೊರಡುವ ಮುಂಚಿನ ಒಂದು ದೃಷ್ಯ
ಗಣಪ ಮತ್ತು ನವಿಲು. malu clicks

ನಾವು ಪಾಂಡಿಚೆರ್ರಿಯಿಂದ ವಾಪಸ್ ಬರ್ತಾ ತಿರುವಣ್ಣಮಲಾಯ್ ನಲ್ಲಿ ಜಾತ್ರೆ. ಜಾತ್ರೆಯ ದಿನ ಏಳು ಗೋಪುರಗಳಲ್ಲಿ ಮೂರನ್ನಾದರೂ ನೋಡಿದರೆ ಅದು ಪುಣ್ಯ ಅಂತ ಪೆರುಮಾಳ್ ಹೇಳುತ್ತಿದ್ದ. ಉಳಿದ ಭಾಗ ಮುಂದೆ
:-)

April 7, 2012

ಛಂದಪುಸ್ತಕಬಿಡುಗಡೋಪಖ್ಯಾನ ಮಾಲತಿ ishtyle


ಬೋಳುವಾರ ಮಾಮನ ಪುಸ್ತಕ ’ಸ್ವಾತಂತ್ಯ್ರದ ಓಟ’ ಪುಸ್ತಕದ ಬಿಡುಗಡೆ ದಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಸುಧೇಂದ್ರ ಸಿಕ್ಕಿದರು. ಇನ್ವಿಟೇಶನ್ ಕೊಡುತ್ತ ’different ' ಆಗಿರತ್ತೆ ಮಾಲ್ತೀ ಬನ್ನಿ ಅಂದ್ರು. ನಾನು ಹೂಂ ಅಂದೆ. ಪುನ: ಯುಗಾದಿ ದಿನ ನಮ್ಮ ಮನೆಗೆ ಊಟಕ್ಕೆ ಕರೆದಿದ್ದಾಗ ಮತ್ತೊಮ್ಮೆ ನೆನಪಿಸಿದರು.

ವಸುಧೇಂದ್ರ ಅವರ ಪರಿಚಯ ಹೇಗಾಯ್ತು ಅಂತ ಹೇಳೊಕ್ಕೆ ಸ್ವಲ್ಪ flash back mode (ಆಹಾ ಆಜಾದ್ ಭೈಯಾ ಅವರ ’ಪದಾರ್ಥ ಚಿಂತಾಮಣಿ’ ಗೆ flash back ಪದ ಕಳುಹಿಸಬೇಕು) ಹೋಗಬೇಕಾಗುತ್ತದೆ.

ವಿಜಯಕರ್ನಾಟಕದ ಸಾಪ್ತಾಹಿಕ ಪುರವಣಿಯಲ್ಲಿ ವಸುಧೇಂದ್ರರ ಒಂದು ಸಣ್ಣ ಕತೆ ಬಂದಿತ್ತಂತೆ. ಶ್ರೀಕಾಂತ ಅದನ್ನು ಓದಿ  ಮಾಲ್ತಿ ನಿನಗಿಷ್ಟ ಆಗಬಹುದು ಎಂದು ನನಗೋಸ್ಕರ ಆ ಪತ್ರಿಕೆಯನ್ನು ಬದಿಗೆ ಇಟ್ಟಿದ್ದರು. ಮೂರು ನಾಲ್ಕು ಸಲ ಓದಿದ್ಯಾ ಅಂತ ಕೇಳಿದರು ಸಹಾ..ನಾನು ಇಲ್ಲ ಇಲ್ಲ ಅಂತ, ಆಮೇಲೆ ಮನೆಗೆ ಅಮ್ಮ ತಮ್ಮ ಎಲ್ಲ ಬಂದು ಕೊನೆಗೆ ಕಣ್ತಪ್ಪಿನಿಂದ ಆ ಪತ್ರಿಕೆ ರದ್ದಿಯಲ್ಲಿ ಹೋಗಿ ಬಿಡ್ತು. ಶ್ರೀಕಾಂತ ಗೆ ಆ ಕತೆ ಎಷ್ಟು ಇಷ್ಟ ಆಗಿತ್ತೆಂದರೆ ಅವರು ಸಪ್ನಾ ಗೆ ಹೋಗಿ ಅವರು ಬರೆದಿದ್ದ ನಮ್ಮಮ್ಮ ಅಂದ್ರೆ ನಂಗಿಷ್ಟ ’ಪುಸ್ತಕ ತೆಗೆದುಕೊಂಡು ಬಂದ್ರು. ಅಲ್ಲೆ ಕಂಪ್ಯೂಟರ್ ಪಕ್ಕನೆ ಇಟ್ಟು ಬಿಟ್ಟಿದ್ದರು.ಒಂದು ದಿನ ಕೂಡ ನಾನು ಅದನ್ನು ಮುಟ್ಟಲಿಕ್ಕೆ ಹೋಗಿರಲಿಲ್ಲ. ಒಂದು ದಿನ ಆಫಿಸ್ ಕೆಲಸ ಮಾಡಿ ಬೋರ್ ಆಗಿ, ತಂಗಿ ಜತೆ ಚ್ಯಾಟ್ ಮಾಡ್ತಾ ಇದ್ದೆ. ಅವಳಿಗೆ ಫೋನ್ ಬಂದಿದ್ದರಿಂದ ನಮ್ಮ ಚ್ಯಾಟ್ ಗೆ ಸ್ವಲ್ಪ ವಿರಾಮ ಸಿಕ್ಕಿತು, ಕೈಗೆ ಹತ್ತಿದ ಪುಸ್ತಕವನ್ನು ಎತ್ತಿ ಕೊಂಡೆ. ಸುಮ್ಮನೆ ನಾಲ್ಕು ಲೈನ್ ಓದ್ತಾ ಇದ್ದವಳಿಗೆ ಆ ಕತೆ ಯಾವಾಗ ಮುಗಿದು ಯಾವಾಗ ಅಳಲಿಕ್ಕೆ ಶುರು ಮಾಡಿದೆ ಅಂತ ಗೊತ್ತಿಲ್ಲ. ಶ್ರೀಕಾಂತ, ನಿಹಾ ಬಳಿ ಬಂದು, ’ಮಾಲತೀ ಕಸ್ಸಲ್ ಜಾಲ್ಲೆ..ಮತ್ತು ನಿಹಾ ಅಮ್ಮಾ ಅಂತ ತಬ್ಬಿಕೊಂಡಾಗ ಗೊತ್ತಾಯಿತು ನಾನು ಕೀ ಬೋರ್ಡ್ ಮೇಲೆ ತಲೆ ಇಟ್ಟು ಭೋರ್ ಅಂತ ಅಳ್ತಾ ಇದ್ದಿದ್ದು."ಈಗ ಸರಿಯಾಗೆ ಇದ್ದೆ, ಇದ್ದಕ್ಕಿದ್ದ ಹಾಗೆ ಏನಾಯಿತು" ಅಂತ ಇಬ್ಬರೂ ಗಾಬರಿ ಪಟ್ಟರು..ಯಾಕೆ ಅಂದ್ರೆ ನಾನು ಅಳುವ/emotional ಆಗುವ ಪ್ರಾಣಿಯಲ್ಲ. ನನಗೆ ಮಾತು ಬರದೆ ಪುಸ್ತಕದ ಕಡೆ ಬೆರಳು ಮಾಡಿದೆ..ಶ್ರೀಕಾಂತ ’ಹುಚ್ಚು ಹುಡುಗಿ’ ಅಂದ್ರು..ನಿಹಾ ’ಓಹ್ mommy' ಅಂದು ನಗಲು ಶುರು ಮಾಡಿದ್ರು.

ಇದರಕ್ಕಿಂತ ಮುಂಚೆ ನಾನತ್ತಿದ್ದು ಒಂದೇ ಸಲ ನೋ ನೋ ಮದುವೆಯಾಗಿ ಅಮ್ಮನ ಬಿಟ್ಟು ಬರುವಾಗ ಖಂಡಿತ ಅಳಲಿಲ್ಲ..:-). ಆದರೆ ಕೊಪ್ಪದಲ್ಲಿ ನಾವು ಬಾಡಿಗೆ ಮನೆಗೆ ಬಂದ ಮೊದಲ ಭಾನುವಾರ ನಾನು,  ಶ್ರೀಕಾಂತ ಶಟಲ್ ಆಡಲು ಹೋಗುವಾಗ, ’ಇವತ್ತು ಮಸಾಲೆ ದೋಸೆ’ ಅಂತ style ಆಗಿ ಹೇಳಿದ್ದೆ. ನನ್ನ ಜೀವನದ ಮೊದಲನೇ ಸಲ ಮಾಡಿದಂತಹ ಮಸಾಲೆ ದೋಸೆ. ಶ್ರೀಕಾಂತ ರಾಯರು ಅವರು ಮೂರು ನಾಲ್ಕು ಗೆಳೆಯರನ್ನು ಕರೆದುಕೊಂಡು ಬರುವುದೇ?? ನನಗೆ ಅಡಿಗೆಯ ’ಅ’ ಅಕ್ಷರ ನೂ ಸರಿ ಗೊತ್ತಿರಲಿಲ್ಲ. ಅಮ್ಮನ ಬಳಿ ಹೇಳಿಸಿಕೊಂಡು ಒಂದು ಹಳೆಯ ಕ್ಯಾನರಾ ಬ್ಯಾಂಕ್ ಡೈರಿಯಲ್ಲಿ 
for 1 glass udad daal add three glasses of rice and 1/4 cup of poha...ಅಂತ ಬರೆದುಕೊಂಡಿದ್ದನ್ನು ಚಾಚೂ ತಪ್ಪದೆ, ಪ್ರೀತಿಯಿಂದ ದೊಡ್ಡ ಭೈಯಾ ಖರೀಧಿಸಿ ಕೊಟ್ಟ ರುಬ್ಬುವ ಕಲ್ಲಲ್ಲಿ ರುಬ್ಬಿ ಹಿಟ್ಟೇನೋ ರೆಡಿ ಮಾಡಿಟ್ಟೆ. ಮರುದಿನ ಶ್ರೀಕಾಂತ ಆಡಲು ಹೋದ ತಕ್ಷಣ , ಅಮ್ಮ ಮಾಡುವ ಆಲು ಭಾಜಿಯನ್ನು ನೆನಪಿಸಿಕೊಂಡು ಅಂದಾಜಿನಲ್ಲೇ ಆಲೂಗಡ್ಡೆ ಪಲ್ಯ, ಮತ್ತು ಕೆಂಪು ಚಟ್ನಿ ರೆಡಿ ಮಾಡಿಟ್ಟೆ...ಶ್ರೀಕಾಂತ ಅವರ ಸ್ನೇಹಿತರನ್ನೆಲ್ಲ ಪರಿಚಯಮಾಡಿಸಿದರು. ಒಬ್ಬರಂತೂ ಬಾಂಬೆಯಲ್ಲಿ ಮಸಾಲೆ ಚಾ ಮಾಡ್ತಾರಂತಲ್ಲವಾ?? ನಮಗೆ ಮಸಾಲಾ ಚಾ ನೆ ಮಾಡಿ ಅಂದ್ರು. ಚಾ ಅಂತೂ ನನಗೆ ಮಾಡಿ ರೂಢಿಯಿತ್ತು.

ಸರಿ ಭೈಯಾ ನೆ ಕೊಡಿಸಿದ ಹೊಸ ಮಿರಿ ಮಿರಿ ಮಿಂಚುವ ಕಾವಲಿ ಗ್ಯಾಸ್ ಮೇಲಿಟ್ಟೆ, ತುಂಬ confidence ನಲ್ಲಿ ದೋಸೆ ಹುಯ್ದೆ...correct ಉರುಟಾಗಲಿಲ್ಲ, but it was ok-ish. ಚೆಂದದ ಕೆಂಪಾಗಿ ಬಿಡ್ತು ದೊಸೆ. ಸುಟ್ಟುಗದಿಂದ ತೆಗಿಲಿಕ್ಕೆ ನೋಡಿದ್ರೆ ಜಪ್ಪಯ್ಯ ಅಂದ್ರು ದೋಸೆ ಕಾವಲಿ ಮೇಲಿಂದ ಮೇಲೆ ಬಂದ್ರೆ ಹೇಳಿ...ನನಗೋ ’ಛೆ! ಶ್ರೀಕಾಂತ ಎಷ್ಟು ಪ್ರಿತಿಯಿಂದ ಅವರ ಮಿತ್ರರನ್ನೆಲ್ಲ ಕರೆದುಕೊಂಡು ಬಂದಿದ್ದಾರೆ, ಅವರ shape-out ಆಗುತ್ತಲ್ಲವಾ ಅಂತ ಅಂದುಕೊಂಡು ಅಲ್ಲಿ ಅಳ್ತಾ ನಿಂತೆ. 5 ನಿಮಿಷ ಆಯ್ತು, 10 ನಿಮಿಷ ಆಯ್ತು . ಮಸಾಲ ಬಿಡಿ, ಸಾದಾ ದೋಸೆದೂ ಸದ್ದಿಲ್ಲದ್ದೆ ಹೋದಾಗ ಶ್ರೀಕಾಂತ ನಿಧಾನಕ್ಕೆ ಅಡಿಗೆ ಮನೆಗೆ ಬಂದ್ರು. ನಾನು ಅವರನ್ನು ತಬ್ಬಿಕೊಂಡು ಅಳಲಿಕ್ಕೆ ಶುರು ಮಾಡಿದೆ. ಅವರು ಏನಾಯ್ತು ಅಂದ್ರು, ನಾನು , ದೋಸೆ ಏಳ್ತಾ ಇಲ್ಲ ಅಂದೆ’ ಅವರು ಅಷ್ಟೇನಾ?? ಅಂತ ಹೇಳಿ ಹಾಲ್ ನಲ್ಲಿರುವ ಸ್ನೇಹಿತರನ್ನೆಲ್ಲ ಅಡಿಗೆ ಮನೆಗೆ ತಾಗಿರುವಂತೆ ಇರುವ ಡೈನಿಂಗ್ ಟೇಬಲ್ ಗೆ ಕರೆದು, ಮಾತಾಡ್ತಾ, ನನ್ನ ಕಾವಲಿ ಸುಟ್ಟುಗದಿಂದ ಕೇರಿ ಕೇರಿ ಕ್ಲೀನ್ ಮಾಡಿದರು. ಆ ಮೇಲೆ ಕಾವಲಿ ಮೇಲೆ ಒಳ್ಳೆ professional cook ತರಹ ಚೋಂಯ್ಯ ಅಂತ ನೀರು ಸಿಂಪಡಿಸಿ ಆಮೇಲೆ ದೋಸೆ ಹೋಯ್ದರು. ಅಹಾ ಎಷ್ಟು ಸಲೀಸಾಗಿ ದೋಸೆ ಮಾಡಿದರು. ಎರಡು ದೋಸೆ ಮಾಡಿದ ಮೇಲೆ ಉಳಿದಿದ್ದ ದೋಸೆ ನಾನೆ ಹುಯ್ದು ಮಸಾಲೆ ಟೀ ಮಾಡಿ ಅವರ ಸ್ನೇಹಿತರ ಕಡೆ ಭೇಶ್ ಅನ್ನಿಸಿಕೊಂಡೆ...ಅ ಮೇಲೆ ನಾನು ಅತ್ತಿದ್ದು ವಸುಧೇಂದ್ರರ ಕತೆ ಓದಿ...

ಅವರಿಗೊಂದು ಮೈಲ್ ಕಳುಹಿಸಿದೆ, ಅವರು ಪ್ರತಿಕ್ರಯಿಸಿ, ಅವರ ಪುಸ್ತಕದ ಲಿಸ್ಟ್ ನ್ನೆ ಕಳುಹಿಸಿದರು.

ಮಿತ್ರ ಅಪಾರರ ಬ್ಲಾಗ್ ನಲ್ಲಿ ವಸುಧೇಂದ್ರರ ಇನ್ನೊಂದು ಕತೆ ಹಾಕಿದ್ದರು. ಅದನ್ನು ಓದುತ್ತಾ ಎಷ್ಟು ತನ್ಮಯಳಾದೆ ಅಂದರೆ  background ನಲ್ಲಿ ಹಾಲು ಸುಟ್ಟ ವಾಸನೆ ಮೂಗಿಗೆ ಬಡೀತಿದ್ರೆ, "ಛೆ ಯಾರೊ ಹಾಲು ಗ್ಯಾಸ್ ಮೇಲಿಟ್ಟು ಮರೆತಿದ್ದಾರೆ, ತಲೆಇಲ್ಲದವರು’ ಅಂದುಕೊಳ್ಳತ್ತಾ , ಕತೆ ಓದಿ ಮುಗಿದ ಮೇಲೆ ನನಗೆ ಹಾಲು ಸುಟ್ಟ ವಾಸನೆ ನಮ್ಮ ಮನೇದೆ ಅಂತ ಗೊತ್ತಾಗಿದ್ದು..ಪಾತ್ರೆ ಸರಿ ಪಡಿಸೋ ಸ್ಥಿತಿಯಲ್ಲಿ ಇರಲಿಲ್ಲ. ವಸುಧೇಂದ್ರ ಅವರಿಗೆ blame ಮಾಡಿ ಇನ್ನೊಂದು ಉದ್ದ ಮೈಲ್ ಹಾಕ್ದೆ..ಆ ಮೇಲೆ ಸಪ್ನಾ ಗೆ ಹೋಗಿ ಅವರು ಬರೆದ ಎಲ್ಲ ಪುಸ್ತಕಗಳನ್ನು ತಂದು ಇನ್ನೆರಡು ಟೀ ಪಾತ್ರೆಗಳನ್ನು ಸುಟ್ಟು ನಾನು ಅವರ ಬರಹದ ಕಂಡಾಪಟ್ಟೆ ಫ್ಯಾನ್ ಆಗಿ, ಅವರ ಒಂದೆರಡು ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಿಗೆ attendance ಹಾಕಿ, (ಹೋ ವಸುಧೇಂದ್ರರ ಎಲ್ಲ ಕಾರ್ಯಕ್ರಮಕ್ಕೆ ನಿಮಗೆ ಹೋಗಕ್ಕೆ ಆಗುತ್ತೆ, ನಮ್ಮ ಒಂದೂ ಕಾರ್ಯಕ್ರಮಕ್ಕೆ ನೀವು ಬರುವುದಿಲ್ಲ ಅಂತ ’ಅವಿರತ ಸತೀಶ ’  ಅವರ ಕೋಪವನ್ನು ಸಹಿಸಿಕೊಂಡು) ಎಲ್ಲರಿಗೂ ಅವರು ನನ್ನ ಫ್ರೆಂಡ್ ಅಂತ ಹೇಳ್ತಾ ಇದ್ದೆ. ಮತ್ತೆ ಯಾರಾದರೂ ’ಮಾಲತಿ ನಿಮ್ಮ ಫ್ರೆಂಡಾ, ಅಂತ ಕೇಳಿದವರಿಗೆ ಸುಮ್ಮನೆ ಹೂಂ ಅನ್ನಿ’ ಅನ್ನುವ ಬೆದರಿಕೆ ಕೂಡ ಅವರಿಗೆ ಕೊಟ್ಟಿದ್ದೇನೆ ಹಲವು ಬಾರಿ ಎಸ್ ಎಮ್ ಎಸ್ ಮೂಲಕ. ಅವರು ನನ್ನನ್ನು ಫ್ರೆಂಡ್ ಅಂತ consider ಮಾಡ್ತಾರಾ, ನಿಜಕ್ಕೂ ಗೊತ್ತಿಲ್ಲ.
end of flash back..)

e-ಮೈಲ್ ನಲ್ಲಿ ಅವರು ಕಳುಹಿಸಿದ ಆಮಂತ್ರಣ ಪತ್ರ ಬಂದ ಮೇಲೆ...ಶ್ರೀಕಾಂತ ಬಳಿ ಜೇನಿಗಿಂತ ಸಿಹಿಯಾಗಿ ’ಶ್ರೀsssಕಾಂssss ತ್ ಗುಡ್ ಫ್ರೈಡೆ ದಿನ ಏನು ಪ್ರೋಗ್ರಾಮ್ ಅಂದಾಗ ಅವರೋ ಮಹಾ ಚಾಲಾಕಿನ ಆಸಾಮಿ i am busy on that day ಅಂದು ,ಏನಿದೆ ಆವತ್ತು ಅಂತ ಕೇಳಿದ್ರು. ವಸುಧೇಂದ್ರರ ಪುಸ್ತಕ ಬಿಡುಗಡೆ ಅಂದೆ. ನಿನಗೊಬ್ಬಳಿಗೆ ಹೋಗಲಿಕ್ಕೆ ಏನಾಗುತ್ತೆ ಅಂತ ಸೇರಿಸಿದರು. ರಾತ್ರಿ ಅಕ್ಕ ಬಂದ ಮೇಲೆ ’ಅಕ್ಕಾssss ಈ ವಾರ ಗುಡ್ ಫ್ರೈಡೆ ದಿನ ರಜೆ ಹಾಕೆ..ನನ್ನ ಜತೆ ವಸುಧೇಂದ್ರ ಮಾಮನ book release ಗೆ ಬಾ ಅಂದೆ...ಅವಳು ನಕ್ಕು i love you mommy, but i cannot take leave...my christian colleagues are on leave on that day ಅಂದ್ಲು. ನಿಹಾ ಗೆ ಕೇಳೋ ಹಾಗೆ ಇರಲಿಲ್ಲ. ಯಾಕಂದ್ರೆ ಪುಸ್ತಕ ಬಿಡುಗಡೆ ಮರುದಿನ ಅವಳಿಗೆ ಪರೀಕ್ಷೆ ಇದೆ ಅಂತ ಗೊತ್ತಿತ್ತು.

ನನ್ನ ಸ್ನೇಹಿತೆಯರಾದ ವೇದಾ ಹಾಗೂ ಜ್ಯೋತಿ ಗೆ ಬರುತ್ತೀರಾ, ಒಂದು ದಿನ ಇಡಿ ಒಟ್ಟಿಗೆ ಟೈಮ್ ಸ್ಪೆಂಡ್ ಮಾಡುವಾ, ಹೇಗೂ ಆಮೇಲೆರಡು ದಿನ ನಿಮಗೆ ರಜೆ ಇರುತ್ತೆ ಅಂದಾಗ ಜ್ಯೋತಿ ಅವರ ಹೈದರಾಬಾದ ಟ್ರಿಪ್ ಬಗ್ಗೆ ಹೇಳಿದ್ರು. ವೇದ, ’ಕಾರ್ಯಕ್ರಮದ ಹಿಂದಿನ ದಿನ ಹೇಳ್ತೇನೆ ಮಾಲ್ತಿ’ ಅಂದ್ರು.

ಕಾರ್ಯಕ್ರಮದ ಹಿಂದಿನ ದಿನ ನಾನು ವೇದಾ ಅವರಿಗೆ ಬರುತ್ತೀರಾ ಅಂತ ಕೇಳಲಿಲ್ಲ...’ನಾಳೆ ನೀವು ಬರುತ್ತೀರಿ’ ಅಂತ ಎಸ್ ಎಮ್ ಎಸ್ ಮಾಡಿ..ನಿಮಗೋಸ್ಕರ ಶಶಿ ದೇಶಪಾಂಡೆ ಹಾಗೂ ಇನ್ನಿತರ ಬುಕ್ಸ್ ತರುತ್ತೇನೆ ಎನ್ನುವ ಆಮೀಶ ತೋರಿಸಿದೆ. ಅವರು ಕೂಡಲೇ ಮರು ಎಸ್ ಎಮ್ ಎಸ್ ಮಾಡಿ..’I am coming ' ಅಂದದ್ದಲ್ಲದ್ದೆ.. ಅವರು ಆಫಿಸ್ ನಿಂದ ಸಂಜೆ ಮನೆಗೆ ಹೋಗುವಾಗ ಫೋನ್ ನಲ್ಲೂ ಮರುದಿನ ಭೇಟಿ ಯಾಗುವ ಬಗ್ಗೆ ಹೇಳಿದರು.ರಾತ್ರಿ ನಾನು ನನ್ನ ಕಾಟನ್ ಸೀರೆಗೆ ಇಸ್ತ್ರೀ ಹಾಕ್ತಾ ಇದ್ದ್ದಾಗ ನಿಹಾ ನಗ್ತಾ, ’ಅಮ್ಮ ನಾಡಿದ್ದು  ನನಗೆ ಪರೀಕ್ಷೆ ಇಲ್ಲ..ಸೀದಾ ಮಂಡೆ (monday) ನೆ. time table ಈಗ ನೋಡ್ದೆ. ನಾನು ಬರುತ್ತೇನೆ ನಿನ್ನ ಜತೆ ಅಂದಾಗ ನಾನು ಕುಣಿಯೊದೊಂದೇ ಬಾಕಿ.the more the merrier ಅಂತ.

ಸರಿ ಬೆಳಿಗ್ಗೆ ಬೇಗ ಎದ್ದು, ಟಿಫನ್, ಶ್ರೀಕಾಂತ ರಾಯರಿಗೆ ಅಡಿಗೆ ಎಲ್ಲ ಮಾಡಿಟ್ಟು ಮೊದಲನೇ ಸಲ ಸರಿಯಾದ ಟೈಮ್(ಎಲ್ಲ ಫಂಕ್ಷನ್ ಗಳಿಗೂ ನಮ್ಮದು ಲೇಟ್ ಎಂಟ್ರಿ) ನಾವು ಎ.ಡಿ.ಎ ರಂಗಮಂದಿರ ತಲುಪಿದೆವು. ಮೆಟ್ಟಿಲ ಮೇಲೇರ ಬೇಕಾದ್ರೆ ಆ ದಿನ ಬೆಳಿಗ್ಗೆ ಬೆಳಿಗ್ಗೆ ಫೇಸ್ ಬುಕ್ ಪ್ರೆಂಡ್ ರಿಕ್ವೆಶ್ಟ್ ಕಳುಹಿಸಿದ ಮತ್ತು ನಾನು accept ಮಾಡಿದ.. ಉಮೇಶ ದೇಸಾಯಿ (ಅವರ ಬ್ಲಾಗ್ ಓದಿದ್ದೇನೆ, ಅವರು ಕೆಲವೊಮ್ಮೆ ನನ್ನ ಬ್ಲಾಗ್ ಗೆ ಬರುತ್ತಾರೆ ಹಾಗಾಗಿ ಅವರು ಗೊತ್ತು) ಯವರನ್ನು ಕಂಡೆ...but ಅವರು ಸೆಲ್ ಫೋನ್ ನಲ್ಲಿ ಮಾತಾನಾಡುವುದರಲ್ಲಿ ಎಂಗೇಜಡ್ ಆಗಿದ್ದರು. ಮತ್ತು ಅವರೇ ಇವರಾ ಅನ್ನುವ ಸಣ್ಣ doubt ಕೂಡ ಇತ್ತು.

ಒಳಗಡೆ ಎಂಟರ್ ಆದ ಕೂಡಲೇ ಫ್ಲೆಕ್ಸ್ ನಲ್ಲಿ ಮೂಡಿದ ಮಕ್ಕಳ ಬ್ಲ್ಯಾಕ್ & ವ್ಹೈಟ್ ಚಿತ್ರ ಹಾಗೂ ಆಕರ್ಷಕ ರಂಗೋಲಿ ನಮ್ಮನ್ನು ಎದುರುಗೊಂಡವು..ಸೈಡ್ ನಿಂದ ವಸುಧೇಂದ್ರ ಫಾಸ್ಟ್ ಆಗಿ ನಡೀತಾ ಇದ್ರು..ನಾನು ಕೈ ಎತ್ತಿ ಗ್ರೀಟ್ ಮಾಡಿ Rangoli is nice ಅಂದೆ, ಅವರು ಬನ್ನಿ ಬನ್ನಿ, ಚೆನ್ನಾಗಿದೆಯಲ್ಲವಾ?? ಬೇಗ ಬೇಗ ಕಾಫಿ ಕುಡೀರಿ, ಕಾರ್ಯಕ್ರಮ ಶುರು ಮಾಡುವ ಅಂದ್ರು. ರಂಗೋಲಿಯನ್ನು ಸ್ವಲ್ಪ ಹೊತ್ತು admire ಮಾಡಿ, ಮುಂದಕ್ಕೆ ಹೋದಾಗ ರಘು ಅಪಾರ ಕಾಣಿಸಿದ್ರು..ಅವರ ಬಳಿ ಹೋಗಿ ,’ನೀಹಾ ನಿಮಗೇನೋ ಕೇಳಬೇಕಂತೆ’ ಅಂತಂದೆ...ನೀಹಾ ನನಗೆ ’ಅಮ್ಮ direct ಹಾಗಾ ಹೇಳೋದು, ಒಂದು ಹಾಯ್ ಹೆಲ್ಲೋ ಹೇಳ್ದೆ’ ಅನ್ನುವಷ್ಟರಲಿ ರಘು ನಮ್ಮ ಬಳಿ ಬಂದಾಯಿತು. ಅವರು ಮಾತಾಡ್ತಿರ ಬೇಕಾದ್ರೆ ನನಗೆ ಬೋಳುವಾರ ಮಾಮ ಕಂಡ್ರು...ನಾನು ಅವರ ಬಳಿ ಹೋದೆ

"ನಮಸ್ಕಾರ, ನಾನು ಮಾಲತಿ, ಶ್ರೀಕಾಂತ ಶಣೈ ಹೆಂಡತಿ. ನಿಮ್ಮ ಬಳಿ ನಾನು complaint ಮಾಡ ಬೇಕಿದೆ." ಬೋಳುವಾರ ಮಾಮ ಸ್ವಲ್ಪ tense ಆದ ಹಾಗೆ ಕಂಡಿತು. ನಾನು ಮುಂದುವರೆಸಿದೆ, "ಮೊದಲೆ ಕೆಲಸದ ಒತ್ತಡ ಅಂತ ನನ್ನ ಬಳಿ ಸರಿ ಮಾತು ಕತೆ ಆಡುತ್ತಿಲ್ಲ’ ಈಗ ಸಿಕ್ಕಿದಷ್ಟು ಸಮಯದಲ್ಲಿ ನಿಮ್ಮ ’ಸ್ವಾತಂತ್ರ್ಯದ ಓಟ’ ಓದುತ್ತಾ ಕೂರ್ತಾರೆ. ಈಗ ಫಂಕ್ಷನ್ ಬರುವ ಮುಂಚೆ ಐದು ಸಲ ’ಬೈ’ ಹೇಳಿ ಆರನೇ ಸಲ ಬೈಯೋ ಧಾಟಿಯಲ್ಲಿ ಬೈ ಹೇಳಿದ ಮೇಲೆ ಒಂದು ಸಣ್ಣಕ್ಕೆ ಬೈ ಹೇಳಿ ಕಳುಹಿಸಿದಾರೆ. ಬಾಗಿಲಿಗೆ ಚಿಲ್ಕ ಹಾಕಿದ್ದಾರೋ ಇಲ್ಲವೋ ಗೊತ್ತಿಲ್ಲ. ಪುಸ್ತಕದ ಕೊನೆ ನಾಲ್ಕು ಪುಟಗಳು ಮಾತ್ರ ಉಳಿದಿತ್ತು ನಾವು ಹೊರಡುವಾಗ ಅಂದೆ’ . ಬೋಳುವಾರ ಮಾಮ ’ನಿಜಕ್ಕೂ ಅಷ್ಟೊಂದು ಕುತೂಹಲದಿಂದ ಓದುತ್ತಿದ್ದಾರಾ ಅಂತ ಕೇಳಿದ್ರು..ನಾನು ಅಷ್ಟು ದೊಡ್ಡ dialogue ಹೋಡೆದು ಸುಸ್ತಾಗಿದ್ದೆ, ಸುಮ್ಮನೆ ಗೋಣು ಅಲ್ಲಾಡಿಸಿದೆ.

(ಹಾಗೇನೆ , ಬೋಳುವಾರ ಮಾಮ ಏನಾದರೂ ಸಿಕ್ಕರೆ ನಿಮ್ಮ ಬಗ್ಗೆ complain ಮಾಡ್ತೀನಿ ಅಂತ ಕೂಡ ಸೇರಿಸಿದ್ದೆ ಬೆಳಿಗ್ಗೆ ಹೊರಡುವ ಮುನ್ನ)

(ಇದರ ಮಧ್ಯೆ ಒಂದು ಗಮ್ಮತ್ತಿನ ಸಂಗತಿ ನಡೆದಿದೆ. ನಾವು ಮನೆಯಿಂದ ಹೊರಟು ಹತ್ತು ನಿಮಿಷ ಆದ ಮೇಲೆ ಶ್ರೀಕಾಂತ ಫೋನ್ ’ನಿಹಾರಿಕಾ ಎಲ್ಲಿ?? ಮನೆಯಲ್ಲಿ ಕಾಣ್ತಾ ಇಲ್ಲ’ ಅಂತ ನಾನು ಹೋ ಸರಿಯಾಯ್ತು..ಬೆಳಿಗ್ಗೆ ತಿಂಡಿ ತಿನ್ನುವಾಗ ನಿಹಾ ನನ್ನ ಜತೆ ಬರುತ್ತಾಳೆ, ಅಡಿಗೆ ಏನೇನು ಮಾಡಿದ್ದೇನೆ, ಯಾವುದನ್ನು ಬಿಸಿ ಮಾಡಬೇಕು ಅನ್ನುವ ನನ್ನ instructions ಗೆಲ್ಲ..ಎಲ್ಲಕ್ಕೂ ಹೂಂ ಹೂಂ’ ಅಂದಿದ್ರು..ಸ್ವಲ್ಪ ಕೀಟಲೆ ಮಾಡುವ ಅಂದುಕೊಂಡೆ, ಬೇಡ ಪಾಪ ಅಂತ ಸುಮ್ಮನಾಗಿದ್ದೆ)
"ನೀವು ಓದಿದ್ರಾ"- ಬೋಳುವಾರ ಮಾಮ
"not yet..ನನ್ನ ಓದು ಸ್ವಲ್ಪ ಸ್ಲೋ’..ನಾನು ನಿಧಾನಕ್ಕೆ ಓದ್ತೀನಿ ಅಂದು...ಅವರಿಗೆ ಬೈ ಹೇಳಿ...ವೇದಾಗೆ ಕಾಯ್ತಾ entrance ಬಳಿ ನಿಂತೆ.

ಅಷ್ಟರಲ್ಲಿ ನನ್ನ ಬ್ಲಾಗ್ ತಮ್ಮ/ಮಿತ್ರ ಸುಶ್ರುತ ದೊಡ್ಡೇರಿ ಬಂದ್ರು. ’ಎನ್ರೀ, ಒಬ್ರೆ ಬಂದಿದ್ದೀರಾ, ಎಲ್ಲಿ ದಿವ್ಯಾ ಅಂತ ಕೇಳಿದ್ರೆ ಮಹಾ ಸ್ಟೈಲ್ ಅಲ್ಲಿ ನನಗೆ ಇವತ್ತು ರಜೆ, ಅವಳಿಗೆ ರಜೆ ಇಲ್ಲ..ಅಂತ ಅವರು ಬರೆಯುವ ಕವನದ ಧಾಟಿಯಲ್ಲೇ ಹೇಳಿದ್ರು, ನಾನು ಅವರಿಗೆ ಬೇಗ ಬೇಗ ಕಾಫಿ ಕುಡಿದು ಒಳಗೆ ಹೋಗಿ ಅಂದೆ, ಮಹಾ ನನ್ನ ಕಾರ್ಯಕ್ರಮದ ತರಹ. (ದಿವ್ಯಾ ಹೆಗ್ಡೆ ಮತ್ತು  ಸುಶ್ರುತ  ದೊಡ್ಡೇರಿ ಇಬ್ಬರೂ ನನ್ನ ಆತ್ಮೀಯರು..ಅವರಿಬ್ಬರೂ ಮದುವೆ ಆಗುತ್ತಿದ್ದಾರೆ ಅಂದಾಗ ನಾನೆಷ್ಟು ಸಂಭ್ರಮ ಪಟ್ಟೇ ಅಂತ ನಮ್ಮ ಮನೆಗೆ ಬಂದು ನೀವು ಕೇಳಬೇಕು):-)

 ವೇದಾ ಬಂದ್ರು...ಸೆಟ್ ಡಿಸೈನ್ ಮಾಡಿದ ಪ್ರದೀಪ್ ಕಂಬತ್ತಳ್ಳಿ ಯವರನ್ನು ಪರಿಚಯಿಸಿದರು.


ನಾವು ಒಳಗೆ ಹೋಗುವಾಗ ಸ್ಟೇಜ್ ಮೇಲೆ ಗಿರೀಶ ಕಾಸರವಳ್ಳಿ , ರಹಮತ್ ತೆರಿಕೇರೆ ಯವರು ಆಗಲೇ ಕೂತಿದ್ದರು. ಗಿರೀಶ ಕಾಸರವಳ್ಳಿಯವರ ಫೋಟೊಗಳನ್ನು ನೋಡಿದ್ದೆ, ಅವರ ’ಗುಲಾಬಿ ಟಾಕಿಸ್ ’ ಇತ್ತೀಚಿಗೆ ನೋಡಿದ್ದು ಬಿಟ್ಟರೆ ಅವರ ಬಗ್ಗೆ ಹೆಚ್ಚಿಗೇನೂ ತಿಳಿದಿಲ್ಲ.  ಸುಮಾರು ವರ್ಷಗಳ ಹಿಂದೆ ನಾನು ತೀರ್ಥಹಳ್ಳಿಯಿಂದ ಉಡುಪಿಗೆ ಹೋಗುವಾಗ ಇಬ್ಬರು ಮಹಿಳೆಯರು ನನ್ನನ್ನೆ ಸ್ವಲ್ಪ ಹೊತ್ತು ಕುತೂಹಲದಿಂದ ನೋಡ್ತಾ, ನಾನು ನನಗಿದ್ದ ಉದ್ದಕೂದಲನ್ನು ನೆನೆಸಿಕೊಂಡು, ಈಗ step cut ಗಾಗಿ ಗಿಡ್ಡ ಆಗಿರುವ ನನ್ನ ಕೂದಲಿನ ಬಗ್ಗೆ ಕಸಿವಿಸಿಗೊಳ್ಳುತ್ತಿರಬೇಕಾದ್ರೆ ’ನೀವು ಕಾಸರವಳ್ಳಿ ಫ್ಯಾಮಿಲಿಯವರಾ ಅಂತ ಅವರು ನನಗೆ ಕೇಳಿ, ನನ್ನ ಒಟ್ಟಿಗೆ ಇದ್ದ ನನ್ನ ಅಕ್ಕ .’ಅಲ್ಲ’ ಅಂತ ಹೇಳಿದ ಮೇಲೆ, ಅವರಿಬ್ಬರೂ ಅವರಲ್ಲೇ ನಾನು ಯಾರನ್ನೋ ಹೂ ಬ ಹೂ ಹೋಲುತ್ತೇನೆ ಅಂತ ಮಾತನಾಡಿಕೊಳ್ಳುತ್ತಿದ್ದರಂತೆ.ಇದನ್ನೂ ಅಕ್ಕ ಹೇಳಿದರು. ಆ ಮೇಲೆ ಎರಡು ಮೂರು ಸಲ ಹೀಗೆ ಕಾಸರವಳ್ಳಿ ಕುಟುಂಬದವರಾ ಅಂತ ಕೇಳಿದವರು ಇದ್ದರು. ಅದಕ್ಕೆ ಸ್ವಲ್ಪ ಕುತೂಹಲದಿಂದ ಅವರ ಕಡೆ ನೋಡಿದೆ. ರಹಮತ್ ತರೀಕೆರೆಯವರ ಬರಹಗಳನ್ನು ನಾನು ಪ್ರಜಾವಾಣಿ ಸಾಪ್ತಾಹಿಕದಲ್ಲಿ ಓದ್ದಿದ್ದೇನೆ.

ಗಾರ್ಗಿ ಪಂಚಾಂಗಂ ತುಂಬ ಸುಶ್ರ್ಯಾವ್ಯವಾಗಿ ಕಗ್ಗವನ್ನು ಹಾಡಿದರು. ಶ್ರೀಕಾಂತ ಮೂಡ್ ಬಂದಾಗ ಕಗ್ಗದಲ್ಲಿನ ಸಾಲುಗಳನ್ನು ಉರುಳಿಸ್ತಾ ಇರ್ತಾರೆ. ಆದರೆ ಇಂಪಾಗಿ ಇದನ್ನು ಹಾಡಬಹುದು ಅಂತ ತಿಳಿದಿದ್ದು ಇದೇ ಮೊದಲು. ಖುಶಿಯಾಯ್ತು.


ಸುಧನ್ವಾ ದೇರಾಜೆ ಅವರ ನಿರೂಪಣೆ. ಆಮೇಲೆ ಸ್ಕ್ರೀನ್ ಮೇಲೆ ಕನ್ನಡ ಹಿರಿಯ ಕಿರಿಯ ಸಾಹಿತಿಗಳಿಂದ ಸ್ಟೇಜ್ ಮೇಲಿದ್ದವರ, ಪುಸ್ತಕ ಪ್ರಕಟವಾಗುತ್ತಿದವರ ಬಗ್ಗೆ ನಾಲ್ಕು ಒಳ್ಳೆ ಮಾತುಗಳನ್ನು ಆಡಿದರು.(:-)) ನನಗೇ ಈ style ತುಂಬ ಹಿಡಿಸಿತು.
ಆ ಮೇಲೆ ಪುಸ್ತ್ಕಕ ಬಿಡುಗಡೆ. ಬಸವಣ್ಣೆಪ್ಪಾ ಕಂಬಾರರು, ನಾಗರಾಜ ವಸ್ತಾರೆಯವರು ಹಾಗೂ  ಪ್ರಶಾಂತ ಆಡೂರ ಅವರು ನಾಲ್ಕೇ ನಾಲ್ಕು ಮಾತಾಡಿದರು.  ಪ್ರಶಾಂತ ಆಡೂರ ರವರು ನಗಿಸಬಹುದು ಎಂದು ನಾನು ನಗಲೂ ಸಜಾಗಿದ್ದೆ. ಅವರು disappoint ಮಾಡಿದರು. ಎಲ್ಲರು ಚುಟುಕಾಗಿ ಮಾತನಾಡಿದರು.

ಆ ಮೇಲೆ ಕಾಸರವಳ್ಳಿಯವರ ಹಾಗೂ ತರೀಕೆರೆಯವರ ಜುಗಲ್ ಬಂದಿ ಶುರು ಆಯ್ತು. ಸ್ವಲ್ಪ ಹೊತ್ತು ಕೇಳಿದೆ, ಆ ಮೇಲೆ ನನ್ನ ಮನಸ್ಸು drift ಆಗಲಿಕ್ಕೆ ಶುರು ಆಯ್ತು.
this photo from HP Nadig Face book album

ಎದುರಿಗೆ ಕೂತುಕೊಂಡಿದ್ದ ಸುಶ್ರುತ ದೊಡ್ಡೇರಿ ಯನ್ನು ನೋಡಿ ದಿವ್ಯಾ ಹೆಗ್ಡೆ ಗೆ ಒಂದು ಕೀಟಲೇ ಮೆಸೆಜ್ ಕಳಿಸಿದೆ. ನಿಹಾ ಕುತೂಹಲದಿಂದ ಜುಗಲಬಂದಿಯನ್ನು ಆಲಿಸ್ತಾ  ಇದ್ದಳು. ವೇದಾ ಕಡೆ ಬಗ್ಗಿ ಇಂಟರೆಸ್ಟಿಂಗ್ ಇದೆಯಾ? ಅವರಿಬ್ಬರೂ ವೈರಿಯಾದರೆ ’ಜಗಳಬಂದಿ’ ಬಾಯಿಂದ ತುಂಬ ಉಗುಳು ಬರ್ತಾ ಇದ್ರೆ.’ಉಗುಳಬಂದಿ’ ಅಂತೆಲ್ಲ ಪನ್ನ್ ಮಾಡಿ ನಕ್ಕು ಎದುರಿಗೆ ಕೂತವರು ನಮ್ಮನ್ನು ಗುರಾಯಿಸಿಕೊಂಡು ನೋಡಿದರೆ , ನೀಹಾ ’ಮೋಮಿ’ ಅಂತ warning look ಒಂದನ್ನು ಎಸೆದಳು. ಪುನ: ಸ್ವಲ್ಪ ಹೊತ್ತು ಗಮನವಿಟ್ಟು ಕೇಳ್ದೆ. the  bicycle thief ನ ಒಂದು ಸೀನ್ ಎಷ್ಟು ಚೆನ್ನಾಗಿ explain ಮಾಡಿದ್ರು ಅಂದ್ರೆ, ಹೌದಲ್ಲವೇ ನನಗಿದು ಹೋಳಿಲೇ ಇಲ್ಲ ಅಂತ ಅನ್ನಿಸ್ತು. ಅಷ್ಟರಲ್ಲಿ  ಕನ್ನಡದ ಒಳ್ಳೆ ಕತೆಗಾರರು ಅಂತ ಅಮರೇಶ ನುಗಡೋಣಿ, ವೈದೇಹಿ ಮುಂತಾದ ಇನ್ನೂ ಕೆಲವು ಹೆಸರನ್ನು ಹೇಳುತ್ತಿರಬೇಕಾದ್ರೆ, ನಾನು ವೇದ ಕಡೆ ಬಗ್ಗೆ ಛೆ! 'ಮಾಲತಿ ಶೆಣೈ’ ಹೆಸರೆ ಹೇಳಲಿಲ್ಲ ಅಂದಾಗ, ವೇದ ಒಂದು ಕ್ಷಣ ದಕ್ಕಾಗಿ, ಅವರು why not malathi' ಅಂದಾಗ ನಕ್ಕು ನಾವಿಬ್ಬರೂ ಪುನ: ಕೆಂಗಣ್ಣಿಗೆ ಗುರಿ + ನಿಹಾರಿಕಾಳ..’mommy' part-2 ಗೆ ಈಡಾಗಬೇಕಾಯ್ತು...ಇನ್ನೊಮ್ಮೆ ಸದ್ದು ಗಿದ್ದು ಮಾಡಿದ್ರೆ ಅವಳು ನಮ್ಮ ಬಳಿಯಿಂದ ಎದ್ದು ಬೇರೆ ಕಡೆಗೆ ಹೋಗಿ ಕೂರುತ್ತಾಳೆಂದು ಸ್ವಲ್ಪ ಡೀಸೆಂಟ್ ಆಗಿ ಕೂತುಕೊಂಡ ಮೇಲೆ ಒಂದು ಪುಟ್ಟ ಬ್ರೇಕ್ ಕೊಟ್ಟರು.
photo from Prashanth Addoor Face book album 
ಈ ಸಲದ ಛಂದ ಬಹುಮಾನ ವಿಜೇತರಾದ  ಬಸವಣ್ಣೆಪ್ಪಾ  ಕಂಬಾರ..ಎರಡು ಮಾತುಗಳನ್ನಾಡುತ್ತಿರುವುದು

ಆಮೇಲೂ 20 ನಿಮಿಷ ಜುಗಲ್ ಬಂದಿ ಇದೆಯೆಂದಾಗ ನಿಧಾನವಾಗಿ disappearing act ಮಾಡುವ ಅಂದುಕೊಂಡ್ವಿ, ನಾನು ವೇದಾ. ಆದರೆ ನಿಹಾ ನನಗೆ ಕೇಳಬೇಕು, ನೀವಿಬ್ಬರೂ ಬೇಕಾದ್ರೆ ಹೋಗಿ ಅಂದಳು. ಆದರೆ ವೇದ, ’ಪಾಪ ಹುಡುಗಿ ಕುತೂಹಲದಿಂದ ಕೇಳ್ತಾ ಇದ್ದಾಳೆ, ನಾವು ಕೂರುವಾ’ ಅಂದ್ರು. ನಾನು ನನ್ನ ಫೇಸ್ ಬುಕ್ ಮಿತ್ರರನ್ನು ಗುರುತಿಸ್ತಾ ಇದ್ದೆ. ನಿಹಾರಿಕ ಜುಗಲ್ ಬಂದಿ ಎಲ್ಲ ಕೇಳಿಸಿಕೊಂಡು ನಾನೂ ಒಂದು ದಿನ ಚಂದದ ಫಿಲ್ಮ್ ಮಾಡ್ತೀನಿ ಅಂದಳು.

ಕಾರ್ಯಕ್ರಮ ಮುಗಿದ ಮೇಲೆ ಲಘು ಊಟದ ಮುಂಚೆ ನನ್ನ-ವೇದಾಳ ಫೋಟೊ ಸೆಶನ್ ಆಯ್ತು ಕೇರ್ ಆಫ್ ನಿಹಾರಿಕಾ...ಅ ಮೇಲೆ ರಂಗೋಲಿಯನ್ನು ಇನ್ನಷ್ಟು ಡೀಟೈಲ್ ಆಗಿ ನೋಡಿದೆವು. ಸುಶ್ರುತ ನಮ್ಮ ಬಳಿಗೆ ಬಂದು, ಮಾಲತಿಯಕ್ಕ ಸ್ವಲ್ಪ ಕಾರ್ನರ್ ನಲ್ಲಿ ನಿಲ್ಲಿ, ಅಂತ ಹೇಳಿ ನನಗೆ ಅವರ ಮದುವೆ ಆಮಂತ್ರಣ ಪತ್ರಿಕೆ ಕೊಟ್ಟರು. ಮುಂದಿನ ತಿಂಗಳು ಮದುವೆ, ಎರಡು ದಿನ ನೀವಿರಬೇಕು..ಅಂತ...Invitation card ತುಂಬ ಚೆಂದ ಇದೆ, ಒಳಗಿನ ಒಕ್ಕಣೆ ಕೂಡ...after all poet ಮಂದಿ..

ಫಕ್ಕನೆ ನನ್ನ ಕಣ್ಣು ಒಬ್ಬರನ್ನು ಸಂಧಿಸಿತು, ಅರೇ ಶ್ರೀನಿಧಿ ಡಿ.ಎಸ್ ಅಂದುಕೊಳ್ಳಬೇಕಾದ್ರೆ ಅವರು ಕೈ ಎತ್ತಿದರು, ನಾನು reflex ನಲ್ಲಿ ಕೈ ಎತ್ತಿ, ನಾಚಿಕೊಂಡು ನನ್ನ ಹಿಂದೆಗಡೆ ನಿಂತವರಿಗೆ ಅವರು ಕೈ ಮಾಡಿದ್ದಿರಬೇಕೆಂದು ಹಿಂದೆ ನೋಡ್ತಿರಬೇಕಾದ್ರೆ, ಅವರು ಅಲ್ಲಿಂದಲೇ’ನಿಮಗೆ’ ಅಂತ ಹೇಳಿ ಹತ್ತಿರ ಬಂದಾಗ ನಾನೇ ಶ್ರೀನಿಧಿ ಡಿ.ಏಸ್. ಅಂದೆ...ಮತ್ತೇನು ವಿಶೇಷ ಅಂದಾಗ ವಿಶೇಷ ಸುಶ್ರುತ ಅವರದ್ದು ಮದುವೆ ಅಂದೆ, ನೀವು ಅವರ ಕಸಿನ್ ಆ ಅಂತಲೂ ಕೇಳಿದೆ..ಅದಕ್ಕೆ ಇಲ್ಲ ಒಂದೆ ಊರು, (ಸ್ಕೂಲು, ರೂಮ್ ಮೇಟ್ .ಅಂತೆಲ್ಲ ಕೇಳಿಸ್ತು..) ಬಟ್ ಅವರು ಒಂದೇ ಊರವರು ಮಾತ್ರ , ಸಾಹಿತ್ಯಿಕ ಫ್ರೆಂಡ್ ಅಂತೆ ಸುಶ್ರುತ post ಓದಿದ ಮೇಲೆ ಹೇಳಿದರು).ಅಷ್ಟರಲ್ಲಿ ನಿಹಾ, ಅಮ್ಮ, ನಿನ್ನನ್ನು ಮನು ಸರ್ ಗೆ ಪರಿಚಯ ಮಾಡಿಕೊಡ್ತೇನೆ ಅಂದ್ಲು. ನನಗೂ ಕುತೂಹಲ. ಮನೆಯಲ್ಲಿ ಅವಳು ’ನಮ್ಮ ಮನು ಸರ್ ಹಾಗೆ, ನಮ್ಮ ಮನು ಸರ್ ಹೀಗೆ ಎಂದಾಗಲೆಲ್ಲ ನನಗೆ ಹೊಟ್ಟೆಕಿಚ್ಚಾಗ್ತಿತ್ತು. ಯಾಕಂದ್ರೆ ಅವಳು ಯಾರ ಬಗ್ಗೇನು ಅಷ್ಟು ಪ್ರೀತಿಯಿಂದ  ಆತ್ಮೀಯತೆಯಿಂದ  ಮಾತಾಡಲ್ಲ. ನಮ್ಮದು ಹಲ್ಲೋ ನಮಸ್ಕಾರಗಳ ವಿನಿಮಯ ಆಯ್ತು.

ಆ ಮೇಲೆ ಪುಸ್ತ್ತಕ ಕೊಳ್ಳಲು ಹೋದೆವು. ಪುಸ್ತಕಕ್ಕಿಂತ ಪೇಪರ್ ಬ್ಯಾಗ್ ಮೇಲಿನ ಬ್ಲರ್ಬ್ ತುಂಬ ಇಷ್ಟ ಆಗಿ ನಾನು ವೇದಾ ಓದಿ ನಗ್ತಾ ಇದ್ವಿ.
(ಬ್ರಾಕೆಟ್ ಒಳಗಿದ್ದನ್ನು ಓದಿ)
 ಆ ಮೇಲೆ ಊಟ, ವಸುಧೇಂದ್ರ ಅವರಿಗೆ ಬೈ ಹೇಳಿ, ಲಾಸ್ಟ್ ನಲ್ಲಿ ಮಾಲವಿಕ ಹೆಸರೂ ಅವರ ಸ್ಕ್ರಾಲ್ ನಲ್ಲಿ ಸೇರಿಸಿದಕ್ಕೆ ಥ್ಯಾಂಕ್ಸ್ ಹೇಳಿ...it was a nice gesture on his part...ರಾತ್ರಿ ಮಾಲವಿಕ ಮನೆಗೆ ಬಂದ ಮೇಲೆ ಅವಳಿಗೆ ಹೇಳಿದೆ...’ಅಮ್ಮ ನಾನು ಕ್ರಿಸ್ಟಲ್ ನ ಅಂಗಡಿಯ ಎಡ್ರಸ್/ಫೋನ್ ನಂ ಎಸ್ ಎಮ್ ಎಸ್ ಮಾಡಿದ್ದು ಬಿಟ್ರೆ ಏನೂ ಮಾಡಿಲ್ಲ, how sweet of him ಅಂದಳು.

ಎದುರಿಗೆ ಸಿಕ್ಕ ಪ್ರಶಾಂತ ಆಡೂರ ರವರ ಹಸ್ತಾಕ್ಷರವನ್ನು ವೇದಾ ಅವರ ಪುಸ್ತ್ಕಕದ ಮೇಲೆ ಹಾಕಿಸಿ, ನಾನು ’ಮಾಲತಿ ಶೆಣೈ, ನಿಮ್ಮ ಫೇಸ್ ಬುಕ್ ಫ್ರೆಂಡ್ ’ ಅಂತ ನನ್ನನ್ನು ನಾನೆ  ಪರಿಚಯಿಸಿಕೊಂಡೆ. ಅಪಾರ ರಘು ಗೆ ಬೈ ಹೇಳಿ ನಾವು ಮೂರು ಜನ ಕಬ್ಬನ್ ಪಾರ್ಕ್ ನಲ್ಲಿ ಸ್ವಲ್ಪ ಗಂಟೆಗಳನ್ನು ಸ್ಪೆಂಡ್ ಮಾಡಿ, ವೇದ ಕೊಡಿಸಿದ ಐಸ್ ಕ್ರೀಮ್ ತಿಂದು, ತುಂಬ ತುಂಬ ಮಾತಾಡಿ (ಮಾತಾಡಿದ್ದು ನಾನೆ ಜಾಸ್ತಿ :-(...)

ಕಬ್ಬನ ಪಾರ್ಕ್ ಹೋಗ್ತಾ ಸಿಗ್ನಲ್ ನಲ್ಲಿ

ಎಂಜಾಯ ಮಾಡಿದೆ ನಿನ್ನೆ ದಿನ.

ಮನೆಗೆ ಬಂದು ಕುಟ್ಟವಲಕ್ಕಿ ಹಿಡಿದು ಕೂತೆ.ನನ್ನ ಅಕ್ಕ ಒಂದು ಸಲ ಕುಟ್ಟವಲಕ್ಕಿ ಮಾಡಿದ್ರು. ಅದನ್ನು ತಿನ್ನುವುದು ಹೇಗೆ ಅಂತ ಗೊತ್ತಿಲ್ಲದೆ, ಅದನ್ನು ಒಂದೆ ಸಲಕ್ಕ ಬಾಯಲ್ಲಿ ಮುಕ್ಕಿ, ಕೆಮ್ಮಿ, ಸೀನಿ, ಕಣ್ಣು ಮೂಗುಗಳಿಂದ ನೀರು ಸುರಿಸಿದ್ದು, ಶ್ರೀಕಾಂತ ಅದನ್ನು ಹೇಗೆ ತಿನ್ನುವುದು ಅಂತ ಹೇಳಿಕೊಟ್ಟಿದ್ದು ಎಲ್ಲ ನೆನಪಾಯಿತು. ಕುಟ್ಟ್ವವಲಕ್ಕಿಯನ್ನು (ಇದು ನಗಿಸಿ ನಗಿಸಿ ಕಣ್ಣಿಂದ ಮೂಗಿಂದ ನೀರು ಬರೆಸುತ್ತದೆ) ಮುಗಿಸಿ , ಆ ಮೇಲೆ ಆಫಿಸಿನ ಕೆಲವು ತುರ್ತು ಕೆಲಸಗಳನ್ನು ಮುಗಿಸಿ, ಆಮೇಲೆ ಫೇಸ್ ಬುಕ್ ಮೇಲೆ ಕಣ್ಣು ಹಾಯಿಸಿ.....ಆಮೇಲೆ....

ಹಾಂ, ನಾವು ಮನೆ ತಲುಪಿದ ಕೂಡಲೆ ಶ್ರೀಕಾಂತ ಕೇಳಿದ ಮೊದಲ ಪ್ರಶ್ನೆ...ಹೇಗಿತ್ತು ಫಂಕ್ಷನ್? ಬೋಳುವಾರ ಮಾಮ ಸಿಕ್ಕಿದ್ದರಾ?
ನಾನು programme was nice, ಹೌದು ಸಿಕ್ಕಿದ್ದರು. ನಿಮ್ಮ ಬಗ್ಗೆ ಕಂಪ್ಲೈನ್ ಮಾಡ್ದೆ..ಅಂದಾಗ ಹಾಹಾಹಾ ಹೊ ಹೊ ಹೊ..ನೀನು?? ಹೋಗಿ ಮಾತಾಡ್ಸೋದಾ?? ಸಾಧ್ಯಾನೆ ಇಲ್ಲ ಅಂದ್ರು...ಹತ್ತೆ ನಿಮಿಷ..ಬೋಳುವಾರ ಮಾಮ ಖುದ್ದು ಫೋನ್ ಮಾಡಿದ್ರು :-))))))))))))))))))))))))))))))))))))

ತಾರೀಕೂ 06.04.2012 ರಂದು ಛಂದ ಪ್ರಕಾಶನದಿಂದ ಬಿಡುಗಡೆಯಾದ ಪುಸ್ತಕಗಳು
1. ಕುಟ್ಟವಲಕ್ಕಿ - ಪ್ರಶಾಂತ ಆಡೂರ
2. ಆಟಿಕೆ - ಬಸವಣ್ಣೆಪ್ಪ ಕಂಬಾರ
3. ನಿರವಯವ - ನಾಗಾರಾಜ ವಸ್ತಾರೆ
:-)

February 6, 2012

ಚಿತ್ರಸಂತೆ 2012

ಚಿತ್ರ ಸಂತೆಗೆ ಒಂದು ರೌಂಡ್ ಹಾಕುವ ಮುನ್ನ ನನ್ನ ವಿಚಿತ್ರ ಕತೆ ಹೇಳ್ತೆನೆ..
ನನಗೆ ಒಂದು ವಿಚಿತ್ರ ಕಾಯಿಲೆ ಇದೆ. ಅದು ಜನರ ಹೆದರಿಕೆ. ಆಂಗ್ಲ ಭಾಷೆಯಲ್ಲಿ ಇದಕ್ಕೆ Anthropophobia -ಆಂತ್ರೋಫೊಫೋಬಿಯ ಅಂತಾರೆ. ಇದು ಯಾವಗಲಿಂದ ಶುರು ಆಯ್ತು ಗೊತ್ತಿಲ್ಲ. ಬಹುಶ: ಚಿಕ್ಕಂದಿನಿಂದ ಅಜ್ಜನ ಅತೀ ಮುತುವರ್ಜಿ/ಕಾಳಜಿ ಯಿಂದ ಹೀಗಾಗಿರಬಹುದಾ? ಮನೆಯಿಂದ ಹೊರಗೆ ಹೋಗಬೇಕಾದರೆ..ಅಂದರೆ ಶಾಲೆಗೆ/ಪೇಟೆಗೆ ಎಲ್ಲದಕ್ಕೂ ಆಳು ಕಾಳು ನನ್ನ ಜತೆ ಇರುತ್ತಿದ್ದರು, ಅಥವಾ ನಮ್ಮ ಅಜ್ಜನೆ ನಮಗೆ ಕಾರಿನಲ್ಲಿ ಕರೆದುಕೊಂದು ಹೋಗೋದು. ಅಷ್ಟಲ್ಲದೆ ಅಜ್ಜನ clients ಬಂದಾಗಲೆಲ್ಲ ನನಗೆ ಗ್ರಹಬಂಧನ. ಓದಿಕೊಳ್ಳಲು ಒಂದು ರಾಶಿ ಪುಸ್ತ್ಕಕ. ಶಾಲೆಯಿಂದ ಕರೆದುಕೊಂಡು ಹೋಗುವ ಟ್ರಿಪ್/ಟೂರ್, ಸಿನಿಮಾ ಇದಕ್ಕೆಲ್ಲ ಹೋಗಲು ಅಪ್ಪಣೆ ಇರಲಿಲ್ಲ. ಎಲ್ಲಿಗಾದರೂ ಹೋಗಬೇಕಾದರೆ ಕುಟುಂಬದ ಸದಸ್ಯರೊಂದಿಗೆ ಮಾತ್ರ. ಆದ್ದರಿಂದ ನನಗೆ ಜನರ ಬಳಿ ಮಾತಾಡಲು ಅವರ ಜತೆ ಹೇಗೆ ವರ್ತಿಸಬೇಕೆಂಬುದು ಗೊತ್ತಿರಲಿಲ್ಲ..(ಈಗಲೂ...ಹೌದು ನಾಚಿಕೆ ಆಗುತ್ತೆ ಇದನ್ನು ಹೇಳಿಕೊಳ್ಳಲು) ಶ್ರೀಕಾಂತ್ ಅಂತೂ ಯಾವಾಗಲೂ ಹೇಳುತ್ತಾರೆ...for how long you can carry on like this ಅಂತ....ಮತ್ತೆ ಅವರು ಮೊದಲೆಲ್ಲ ’ಬಾಂಬೆಯಲ್ಲಿ ನೀನು ಹೇಗಿದ್ದೆ’ ಅಂದರೆ ನನ್ನ ಉತ್ತರ ’ಬಾಂಬೆಯಲ್ಲೂ ಹೀಗೆ ಇದ್ದೆ’...island ತರಹ!!
ಆದರೂ ನನ್ನ ಮನೆ ಯಿಂದ ಹೊರಗೆ ಹೋಗಿ ಮಾಡುವ ಕೆಲಸಗಳನ್ನೆಲ್ಲ ನಾನೇ ಮಾಡುತ್ತೇನೆ. It does not affect my day to day functioning in any way. 
ಒಬ್ಬಳೆ ಹೊರಗೆ ಹೋದಾಗ ಪೂರ್ತಿ switch off ಆಗಿ ಬಿಡ್ತೇನೆ. ನನ್ನ ಸುತ್ತಲೂ ಒಂದು ಕೋಟೆ ನಿರ್ಮಾಣವಾಗುತ್ತೆ. ಆದರೆ ನಾವು ನಾಲ್ಕು ಜನ ಎಲ್ಲಾದರೂ ಹೋದಾಗ ಅದು ಒಂದು ಬೇರೆ ಪ್ರಪಂಚ. ಇದರಲ್ಲಿ ನಾನು ಯಾರನ್ನೂ ಸೇರಿಸ ಬಯಸುವುದಿಲ್ಲ. ಉಳಿದ ಜನಜಂಗುಳಿಯೆಲ್ಲ ಒಂದು ತರಹ peripheral vision ನಲ್ಲಿ kaleidoscope ತರಹ ಮೂವ್ ಆಗ್ತಾ ಇರುತ್ತೆ. ಇದೆಲ್ಲ ಯಾಕೆ ಹೇಳ್ತಾ ಇದ್ದೇನಿ ಅಂದ್ರೆ ಮೊನ್ನೆ ಚಿತ್ರ ಸಂತೆಗೆ ಹೋದಾಗ ನನ್ನ ಕೆಲವು ಬ್ಲಾಗ್ ಓದುಗರನ್ನು ನೋಡಿದೆ. ಅವರು ನಗು ಮುಖ ಮಾಡಿಕೊಂಡು ನನ್ನ ಬಳಿ ಬರುವಷ್ಟರಲ್ಲಿ ನಾನು ಮುಖ ತಿರುಗಿಸಿ ಅಲ್ಲಿಂದ ಜಾಗ ಖಾಲಿ ಮಾಡಿ ಆಗಿತ್ತು. ಯಾಕೋ ನನಗೆ ಇದರ ಮೇಲೆ ಪೂರ್ತಿ control ಇಲ್ಲ. ಒಬ್ಬಳೆ ಊರೂರು ತಿರುಗಿದ್ದೇನೆ... ನನಗೆ ಫೇಸ್ ಬುಕ್ ನಲ್ಲಿ ಇಷ್ಟು ಸ್ನೇಹಿತರು ಇದ್ದಾರೆ ಅಂತ ನನ್ನ ತಮ್ಮ ಯಾವಾಗಲೂ ನನಗೆ ತಮಾಷೆ ಮಾಡ್ತಾನೆ. "ಫೇಸ್ ಬುಕ್ ನಲ್ಲಿ ಫ್ರೆಂಡ್ಸ್...ಫೇಸ್ to ಫೇಸ್ ಆದಾಗ ಹೆದರು ಪುಕ್ಕಲಿ ಅಂತ. ಇಷ್ಟಕ್ಕೂ ಯಾರಾದರೂ ನನ್ನ ಗಂಭೀರ ಮುಖ ನೋಡಿ ಧೈರ್ಯ ಮಾಡಿ ಮಾತ ನಾಡಿಸಲು ಬಂದರೆ ನಾನು ಕೆಂಪು ಕೆಂಪು ಆಗಿ ನಾಲಗೆ ತೊದಲುತ್ತದೆ.ಬೆ ಬೆ ಬೆ ಅಂತಿರತ್ತೀನಿ.....ಯಾರೋ ಒಬ್ಬರು ನನ್ನನ್ನು ಭೇಟಿ ಮಾಡಿದ ಮೇಲೆ ಒಂದು ಎಸ್ ಎಮ್ ಎಸ್ ಕಳುಹಿಸಿದ್ದರು..ಬ್ಲಾಗ್ ನೀವೆ ಬರೆಯುವುದಾ...u sound so funny and interesting in your writings..ಅಂತ :-((

funny ginny ಎಲ್ಲ ನನ್ನ ಆಪ್ತ ವಲಯದಲ್ಲಿ ಮಾತ್ರ...ಅಂದ್ರೆ ನನ್ನ ಕುಟುಂಬದ ಸದಸ್ಯರು, ಕೆಲವೇ ಕೆಲವು ಬೆರಳಣಿಕೆಯ ಮಿತ್ರರು. ನನಗೆ ಫ್ರೆಂಡ್ಸ್ ಅಂತ ಆಗಿದ್ದು ಇತ್ತೀಚಿಗಿನ 10 ವರ್ಷಗಳಲ್ಲಿ, ಬೆಂಗಳೂರಿಗೆ ಬಂದ ಮೇಲೆ...ಅದೂ 5 ಜನ...
ಮತ್ತೆ ಫೇಸ್ ಬುಕ್ ಮುಂತಾದ ತಾಣಗಳಲ್ಲಿ ಫ್ರೆಂಡ್ಸ್ ಅಂದ್ರೂ ಒಂದು ತರಹ certain degree of anonymity ಇರುತ್ತದಲ್ಲವಾ? ಅದಕ್ಕೆ ಅಲ್ಲಿ ಒಡನಾಡುವುದರಲ್ಲಿ ನನಗೇನೂ ಸಂಕೋಚ ಅನಿಸುವುದಿಲ್ಲ.
ನಮ್ಮ ಆಫಿಸ್ ನಲ್ಲಿ ನನ್ನ ಈ ಪ್ರವ್ರತ್ತಿ ಎಲ್ಲರಿಗೂ ಗೊತ್ತು ಆದ್ದರಿಂದ ನನಗೆ ನನ್ನ ಪಾಡಿಗೆ ಸುಮ್ಮನೆ ಬಿಡುತ್ತಾರೆ. ಆದರೂ ಒಂದು ಸಲ vote of thanks ಗೆ ನನ್ನ ಹೆಸರು sudden ಆಗಿ ಸ್ಟೇಜ್ ನಲ್ಲಿ ಕರೆದಾಗ..ನಾನು ಕೂಲ ಆಗಿ vote of thanks ಹೇಳಿ ಬಂದೆ. ಅದೇ ಅದಕ್ಕೇನಾದರೂ ಮೊದಲೇ practice ಎಲ್ಲ ಮಾಡಿದರೆ ನನ್ನ ಕಾಲು ತರ ತರ ಕಂಪಿಸಿ, ನನ್ನ ಎದೆ ಬಡಿತ ನನ್ನ ಕಿವಿಯೊಳಗೆ ಬಿಡಿ ಬೇರೆ ಯವರಿಗೂ ಕೇಳಿಸುತ್ತದೆಯೇನೋ ಅನ್ನುವಷ್ಟು ಧಡಕ್-ಭಡಕ್...ಅಪರೂಪಕ್ಕೆ one -to -one situation ನಲ್ಲಿ ಸರಿಯಾಗೇ ವರ್ತಿಸುತ್ತೇನೆ ಆದರೆ crowd ನಲ್ಲಿ ಏನೋ ಭಯ....ಇಲ್ಲೂ ಕೆಲವೊಂದು ವಿಚಿತ್ರ ರೀತಿ behave ಮಾಡ್ತೇನೆ.
Emergency situation ಉದಾಹರಣೆಗೆ accident ಏನಾದರೂ ಆಯಿತು ಅಂತ ತಿಳಕೊಳ್ಳಿ ಆಗ ನಾನೆ ಮುಂದಾಳತ್ವ ವಹಿಸಿ ಹೀಗೆ ಹೀಗೆ ಮಾಡಿ ಅಂತ instructions ಕೊಡ್ತೇನೆ. ಆಗ ನಾನು ಬೇರೆ ನೆ ಮಾಲತಿ...:-)
ನನ್ನ ಈ ವಿಚಿತ್ರ ನಡೆವಳಿಕೆಗೆ ಕ್ಷಮೆ ಕೋರುತ್ತಾ...ಬನ್ನಿ ಚಿತ್ರ ಸಂತೆ ಗೆ ಹೋಗಿ ಬರುವ..
ಈ ಸಲದ ವಿಶೇಷ ಅಂದ್ರೆ ನಾನಾಗಿ ಕೆಲವು ಆರ್ಟಿಸ್ಟ್ ಗಳನ್ನು ಮಾತನಾಡಿಸಿದ್ದು.
ಎಂಟರ್ ಆದ ಹಾಗೆ ಮೊದಲಿಗೆ ಇಟ್ಟಿದ್ದ exhibition ಗೆ ಹೋದಾಗ ಸೂರ್ಯಕಾಂತಿ ಹೂಗಳ ಮೇಲೆ ಬಿಟ್ಟು ಬಿಟ್ಟು ಒಂದು ಚಿಟ್ಟೇ ಬಂದು ಕೂರುತ್ತಿತ್ತು. ನಾನು ನೀಹಾ ಅದರ ಬಗ್ಗೆ ಕಾಮೆಂಟ್ ಮಾಡ್ತಾ ನಗುವಾಗ ಚಿತ್ರಕಾರನೂ ನೋಡಿ...Yes??!! ಅಂದ... ನಾನು ’ಸೀ your art work is so life like that it has confused the butterfly ಅಂದಾಗ ತುಂಬ ಖುಶಿ ಪಟ್ಟ.
"which paintings did you like ma'am?"
ನಾನು ಬೆರಳಿನಿಂದ ನನ್ನಗೆ ಇಷ್ಟ ಆದ ಚಿತ್ರಗಳನ್ನು -( ಮೂರು ನಾಲ್ಕು)- ತೋರಿಸಿದೆ.
"will you be buying ma'am?"
"Not at this time, when i move to my own place..then"
"no Problem, ma'am...all the best to having your own place". "This is my card"..When you go to your own house please visit my studio and pick which ever you want"
ಅವನಿಗೊಂದು ಥ್ಯಾಂಕ್ಸ್ ಹೇಳಿ "ಫೋಟೊ ತೆಗೀ ಬಹುದಾ ಅಂತ ಕೇಳ್ದೆ’
ಅವನು ,"Excuse me ma'am, No" ಅಂದ
"why?"
ಅದಕ್ಕೆ ಅವನ ಉತ್ತರ: ’ಹಿಂದಿನ ವರ್ಷ ಯಾರೋ ಒಬ್ಬರು ಹೀಗೆ ಫೋಟೊ ತೆಗೆದುಕೊಂಡು ಹೋಗಿ ಅದನ್ನು desk Top Calendar ಮಾಡಿಕೊಂಡು ಮಾರಿ ದುಡ್ಡು ಮಾಡಿದಾರೆ ಅಂದ
ಹೀಗೂ ಉಂಟೆ ಅಂದು ಕೊಂಡು ನಾನು ನಿಹಾ ಮುಂದಕ್ಕೆ ನಡೆದೆವು...
ಈ ಚಿತ್ರ ನನಗೆ ಕನಸಲ್ಲೂ ಕಾಡುತ್ತೆ
ಸುಮಾರು ಹೊತ್ತು ಕಾದರೂ (ಆಗ ಊಟದ ಸಮಯ ) ಚಿತ್ರಕಾರನನ್ನು ಭೇಟಿ ಮಾಡಲು ಆಗಲಿಲ್ಲ

entrance nalli...ಚೆನ್ನಾಗಿದೆ ಯಲ್ಲವಾ?

ನಾನೂ ನಿಹಾರಿಕಾನೂ ಒಂದೆ ಸಲಕ್ಕೆ wow ಅಂದಂತಹ ಚಿತ್ರ. looks so alive

photograph?? no... spent half an hour here savoring all the pictures

ಧೂಳಾಗಬಾರದೆಂದು wrap ಮಾಡಿದ ಪ್ಲ್ಯಾಸ್ಟಿಕ್ ಕವರ್ ನಿಂದ ಬೇರೆನೆ effect..:-)
so sweet!!
so intricate an art!!

ಸ್ವಲ್ಪ ನಾಚಿಕೆ ಸ್ವಲ್ಪ ಹೆಮ್ಮೆಯಿಂದ ಅವನು ಚಿತ್ರದ ಬಗ್ಗೆ ಮಾತನಾಡಿದ.
ಮಾಲದಿಯಮ್ಮೆ!!ಪೈಂಟಿಂಗ್ ನೋಕುನು!!

ನಮ್ಮೆಲ್ಲರ ಕುವೆಂಪು.....
ಈ ಹುಡುಗಿ ತುಂಬಾನೆ creative ಇದ್ದಾಳೆ ಅನ್ನಿಸ್ತು..
ತಮಿಳುನಾಡಿದ ಚಿತ್ರಕಾರನ ಕೈಚಳಕ



ಕೋಲ್ಕೋತಾ ದ ಚಿತ್ರಕಾರ..


If you like my art u can also 'like' me on facebook ಅಂತ ಹೇಳಿದ Prabha Narayanan..ಅವರ ವಿಸಿಂಟಿಂಗ್ ಕಾರ್ಡ್ ತುಂಬ ಚೆನ್ನಾಗಿದೆ
ಯಾಕೋ paris ನೆನಪಾಯ್ತು!!:-)
ಡಿಟೈಲಿಂಗ್ ನೋಡಿ!!! ನಾನಂತು ದಂಗು ಬಡಿದು ಹೋದೆ!!
ಹೆಂಗಸರನ್ನೂ ನಾಚಿಸುವಷ್ಟು ಇವರ ನಾಚಿಕೆ..ಸೊ ಸ್ವೀಟ್!!:-)
ಮೇಲಿನ red T shirt ಹಾಕಿದ ಹುಡುಗ ಕೇವಲ ಮೂರುವರೆ ತಾಸಲ್ಲಿ black ball point ಪೆನ್ ನಿಂದ ಮಾಡಿದ್ದನಂತೆ!!
ಹಳೆ ಕಾಲದ ಸಿನಿಮಾ ಪೋಸ್ಟರ್ ನೆನಪಿಸಿತು


ನಿಹಾರಿಕಂಗೆ ಈ ಹುಡುಗ ವಸುಧೆಂದ್ರ ಮಾಮ (ನನ್ನ ಆಪ್ತ ಮಿತ್ರರು ಹಾಗೂ ಖ್ಯಾತ ಬರಹಗಾರರು)ನನ್ನು ನೆನಪಿಸಿತಂತೆ . ಈ ಚಿತ್ರವನ್ನು ಅವರಿಗೆ ಕಳುಹಿಸಿದಾಗ " ಈ ಹುಡುಗನಿಗೆ ನನ್ನ ಹೋಲಿಕೆಯಿದೆ ಅಂದರು". ಎಷ್ಟು ಹೊತ್ತು ಈ ಹುಡುಗನನ್ನೆ ನೋಡುತ್ತ ಇದ್ದೇವು ಅಂದರೆ ಆ ಹುಡುಗ ನಾಚಿಕೆ ಪಟ್ಟು ಫಳ್ಳನೆ ಒಂದು ಚಂದದ ನಗೆ ನಮ  ಕಡೆ ಬೀರಿದ..
ಇನ್ನೂ ಸುಮಾರು ಚಿತ್ರಗಳಿವೆ...part -2 ಮಾಡುತ್ತೇನೆ.
enjoy
:-)