Showing posts with label ತೀರ್ಥಹಳ್ಳಿ. Show all posts
Showing posts with label ತೀರ್ಥಹಳ್ಳಿ. Show all posts

December 26, 2024

Agave flowers

 ಮೊನ್ನೆಯಷ್ಟೇ ಊರಿನಿಂದ ಬಂದೆ. ಈ ಸಲ ಅಗಾವೆ ಗಿಡದಲ್ಲಿ ಸುಂದವಾದ ಬಿಳಿ ಹೂವುಗಳನ್ನು ನೋಡಿದೆ. ಈ ಅಗಾವೆ ಜೀವಮಾನದಲ್ಲಿ ಒಂದೇ ಸಲ ಹೂ ಬಿಡುವುದಂತೆ. ನನಗೆ ನೋಡಲು ಸಿಕ್ಕಿದ್ದು ವಿಶೇಷವೆನಿಸಿತು. ಉಳಿದಂತೆ ಅದರ ಎಲೆಗಳ ನಾರಿನಿಂದ ಸೆಣಬು ಮಾಡುತ್ತಾರೆ. ಕೆಳಗಿದೆ ಚಿತ್ರಗಳು


agave ನ ಇನ್ನೊಂದು ಪ್ರಭೇದ ದಿಂದ tequila  ಮದ್ಯ ಪೆಯವನ್ನು ತಯಾರಿಸುತ್ತಾರೆ. ನಾವು ಬೇಲಿ ಉದ್ದಕ್ಕೂ ತುಂಬಾ agave ಗಳನ್ನು ಹಾಕಿದ್ದೇವೆ.

ತೀರ್ಥಹಳ್ಳಿಯ ಮಂಜು ಕವಿದ ಮುಂಜಾವು..ನಾನು ಟಿ ಕುಡಿಯುವಾಗಿನ ದೃಶ್ಯ


ಈ ವಿಡಿಯೋ whatsapp ನಲ್ಲಿ ಓಡ್ತಾ ಇದೆ. ನೀವು ನೋಡಿ...ಕಥೆ ಸ್ವಲ್ಪ ಬದಲಾಗಿದೆ 🙏👍

       ಇಗೋ ಇನ್ನೊಂದು ಸಂಜೆ @ತೀರ್ಥಹಳ್ಳಿ





May 17, 2020

ನೀಲೇಶ ಜವಳಿ - ತೀರ್ಥಹಳ್ಳಿಯ ಯುವ ಉದ್ಯಮಿ

ಮೊನ್ನೆಯಷ್ಟೇ ತೀರ್ಥಹಳ್ಳಿಯ, ನನ್ನ ಮಾವನವರ ಬಗ್ಗೆ ಓದಿದ್ರಿ. ಈಗ ನನ್ನ ಕಿರಿಯ ಮಿತ್ರ ನೀಲೇಶ ಜವಳಿ ಬಗ್ಗೆ ಓದಿ.
ನೀಲೇಶ ಪದವಿ ಶಿಕ್ಷಣ ಮುಗಿಸಿದ್ದು ಬೆಂಗಳೂರಿನಲ್ಲಿ. ಆದರೂ ಇಲ್ಲಿನ ತಳಕು ಬೆಳಕಿಗೆ ಮರುಳಾಗದೆ, ತಮ್ಮ ಸ್ವಂತ ಊರಾದ ತೀರ್ಥಹಳ್ಳಿಗೆ ತೆರಳಿ,ತಮ್ಮ ತಂದೆಯವರೊಡಗೂಡಿ ಶ್ರೀ ಕಾಫಿ ವರ್ಕ್ಸ್ ಅನ್ನು ಕಾಫಿ ಮಾತ್ರವಲ್ಲ ,ಇನ್ನೂ ಕೆಲವು products ಸೇರಿಸಿ  ಚೆನ್ನಾಗಿ ಮುನ್ನಡಿಸಿದ್ದಾರೆ.
Face book ನಿಂದ ಕಾಪಿ ಮಾಡಿದ್ದು. ಬರಹ : ನಿಖಿಲ್ ಕಾಮತ 


#Thirthahalli2Global - 2

ಯಾರು ಯಾವುದೇ ಕಾರಣಕ್ಕೆ ಫೋನ್ ಮಾಡೀರ್ಲಿ ಮಾತು ಶುರುವಾಗೋದೆ ಕಾಫೀ ಆಯ್ತಾ ಅಂತ... ಮನೆಗೆ ಬಂದವರು ಅವಸರದಿಂದ ಹೊರಟಾಗ ಹೇಳುವ ಕಾಮನ್ ಡೈಲಾಗ್ "ಅಯ್ಯೋ ಕುತ್ಕೊಳ್ರಿ, ಸ್ವಲ್ಪ ಕಾಫಿ ಕುಡ್ಕೊಂಡು ಹೋಗೋರಂತೆ" ಹೀಗೆ ಕಾಫೀ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. 

ಸುಮಾರು 15ನೇ ಶತಮಾನದಲ್ಲಿ ಯಮನ್ ದೇಶದಲ್ಲಿ ಮೊದಲ ಬಾರಿಗೆ ಕಾಫಿ ಪ್ರಯೋಗವಾಯಿತು. ಅಲ್ಲಿಂದ ಇಲ್ಲಿಯವರೆಗೆ ಕಾಫಿ ನಮ್ಮಲ್ಲಿ ಅಡಕವಾಗಿದೆ. 

ಈ ಎಲ್ಲಾ ಪೀಠೀಕೆಗಳೇಕೆಂದರೆ ನಮ್ಮ ನಡುವೆ ಒಬ್ಬ ಕಾಫಿಪುಡಿ ಮಾರಾಟಗಾರರಿದ್ದಾರೆ. ಅವರು ತಮ್ಮ ವೃತ್ತಿ -ಪ್ರವೃತ್ತಿಗಳಿಂದ ನಮಗೆಲ್ಲಾ ಚಿರಪರಿಚಿತರೇ. ಅವರೇ ಶ್ರೀ ನಿಲೇಶ್ ಜವಳಿ. 

ತೀರ್ಥಹಳ್ಳಿಯ ಕಾಫಿ ಪ್ರಿಯರಿಗೆ ಕಾಫಿ ಎಂದಾಕ್ಷಣ ಬಹುತೇಕರಿಗೆ ನೆನಪಾಗುವುದೇ "ಶ್ರೀ ಕಾಫೀ ವರ್ಕ್ಸ್"

ಶ್ರೀಮನ್ಮಥ ನಾಮ ಸಂವತ್ಸರ, ಪುಷ್ಯ ಬಹುಳ ಷಷ್ಠಿ, ಫೆಬ್ರವರಿ 11,1956ರ ಗುರುವಾರ ಶ್ರೀ ಕಾಫಿ ವರ್ಕ್ಸ್ ದಿ|| ದಯಾನಂದ ಜವಳಿಯವರಿಂದ ಆರಂಭ. ಅವರ ಸುಪುತ್ರ ಶ್ರೀ ನಿಲೇಶ್ ಜವಳಿಯವರು ತಮ್ಮ ವಿದ್ಯಾಭ್ಯಾಸದ ನಂತರ ತಂದೆಯವರ ಉದ್ಯಮದಲ್ಲಿ ಕೈ ಜೋಡಿಸಿದಿರಲ್ಲದೇ ಕಾಫಿ ಪುಡಿ ಮಾಡುವುದರೊಂದಿಗೆ ಹಿಟ್ಟಿನ ಗಿರಣಿ, ಬೇಕರಿ ತಿನಿಸುಗಳ ವ್ಯಾಪಾರವನ್ನೂ ಆರಂಭಿಸಿ ಶ್ರೀ ಕಾಫೀ ವರ್ಕ್ಸ್ ಜನರಿಗೆ ಇನ್ನೂ ಹತ್ತಿರವಾಗುವಲ್ಲಿ ಶ್ರಮಿಸಿದರು. ಸುಮಾರು 64 ವರ್ಷಗಳಿಂದ ಶ್ರೀ ಕಾಫೀ ವರ್ಕ್ಸ್ ನಿರಂತರವಾಗಿ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಾ, ಕಾಫೀ ಪ್ರಿಯರ ಮನಸೂರೆಗೊಂಡಿದೆ. 

ಶ್ರೀ ಕಾಫೀ ವರ್ಕ್ಸ್ ನವರ ಕಾಫೀ ಪುಡಿಯ ರುಚಿ ತೀರ್ಥಹಳ್ಳಿಯ ಗಡಿಯನ್ನು ದಾಟಿರುವುದಲ್ಲದೇ ಹೊರ ಊರು, ಹೊರ ಜಿಲ್ಲೆಗಳಲ್ಲಿ ಅಸಂಖ್ಯ ಅಭಿಮಾನಿ ಗ್ರಾಹಕರನ್ನು ಹೊಂದಿದೆ. ಕಾರ್ಯ ನಿಮಿತ್ತ ಬೇರೆ ಊರುಗಳಿಗೆ ತೆರಳುವವರು ಒಂದು ಕ್ಷಣ ಶ್ರೀ ಕಾಫಿ ವರ್ಕ್ಸ್ ನ ಮುಂದೆ ತಮ್ಮ ವಾಹನ ನಿಲ್ಲಿಸಿ ಕಾಫೀ ಪುಡಿ ಖರೀದಿಸಿ ಮುಂದೆ ಸಾಗುತ್ತಾರೆ. ಬೆಂಗಳೂರಿಗೆ ಬರುವ ತಮ್ಮ ನೆಂಟರ ಬಳಿ ಮರೆಯದೇ ಶ್ರೀ ಕಾಫೀ ವರ್ಕ್ಸ್ ನವರ ಕಾಫಿ ಪುಡಿ ತರ ಹೇಳುತ್ತಾರೆ.

 ಇದಕ್ಕೆಲ್ಲ ಒಂದೇ ಕಾರಣವೆಂದರೆ ಶ್ರೀ ಕಾಫೀ ವರ್ಕ್ಸ್ ನವರ ಕಾಫಿ ಪುಡಿಯ ಸ್ವಾದ ಎಂದೂ ಸಹ ಬದಲಾಗಿಲ್ಲ.
ಇದಕ್ಕೆ ಒಂದು ತಾಜಾ ಉದಾಹಣೆಯೂ ಇದೆ. ಶೃಂಗೇರಿಯಲ್ಲಿ ತೀರ್ಥಹಳ್ಳಿ ಮೂಲದ ಉಪನ್ಯಾಸಕರಿದ್ದಾರೆ. ಪ್ರೋ. ಲಕ್ಷೀನಾರಾಯಣ್ . ಅವರ ತಂದೆ ಹಿರಿಯಣ್ಣ ಗೌಡರು ತೀರ್ಥಹಳ್ಳಿಯಲ್ಲಿ ಬಹುತೇಕರಿಗೆ ಪರಿಚಿತರು. ಅವರ ಕುಟುಂಬ ಶ್ರೀ ಕಾಫೀ ಪುಡಿಯ ಖಾಯಂ ಗ್ರಾಹಕರು.  ಒಮ್ಮೆ ಅವರ ಮನೆಗೆ ಬಂದಿದ್ದ ನೆಂಟರೊಬ್ಬರು ಕಾಫೀ ಬಾಯಿಗಿಡುತ್ತಲೇ ಇಂತಹ ಕಾಫೀ ನಾನು ತೀರ್ಥಹಳ್ಳಿಯಲ್ಲಿದ್ದಾಗ ಸುಮಾರು 20 ವರ್ಷಗಳ ಮುಂಚೆ ಕುಡಿದಿದ್ದು. ಅಲ್ಲಿ ಶ್ರೀ ಕಾಫೀ ವರ್ಕ್ಸ್ ಅಂತ ಒಂದು ಅಂಗಡಿ ಇದೆ. ಅಲ್ಲಿನ ಕಾಫೀ ರುಚಿ ಹೀಗೆ ಇತ್ತು ಎಂದಾಗ ಲಕ್ಷ್ಮೀನಾರಾಯಣ ಚಕಿತರಾಗಿ 20 ವರ್ಷಗಳಿಂದ ಕಾಫೀ ಪುಡಿಯ ಸ್ವಾದವೇ ಬದಲಾಗಿಲ್ಲ ಎಂದರೆ ಅದು ಹೇಗೆ ಎಂದು ನಿಲೇಶ್ ಜವಳಿಯವರ ಬಳಿ ಆಶ್ಚರ್ಯಚಕಿತರಾಗಿ ಕೇಳಿದ್ದಿದೆ.

ಪ್ರಸ್ತುತ ಗ್ರಾಹಕರ ಬೇಡಿಕೆಯ ಮೇರೆಗೆ ಶ್ರೀ ನಿಲೇಶ್ ಜವಳಿಯವರು ಹೊರ ಊರುಗಳಲ್ಲಿರುವ ತಮ್ಮ ಗ್ರಾಹಕರಿಗೆ ಕೋರಿಯರ್ ಮೂಲಕ ಕಾಫೀ ಪುಡಿ ರವಾನಿಸುತ್ತಿದ್ದಾರೆ. ಈ ವ್ಯವಸ್ಥೆ ಇರುವುದು ಅನೇಕರಿಗೆ ತಿಳಿದಿಲ್ಲ. ಶ್ರೀ ನಿಲೇಶ್ ಜವಳಿಯವರನ್ನು ದೂರವಾಣಿಯ ಮೂಲಕ ಸಂಪರ್ಕಿಸಿ, ತಮ್ಮ ಆರ್ಡರ್ ತಿಳಿಸಿ, ಆನ್ ಲೈನ್ ಮೂಲಕ ಪೇಮೆಂಟ್ ಮಾಡಲಿಚ್ಛಿಸುವ ಗ್ರಾಹಕರಿಗೆ ಶ್ರೀ ನಿಲೇಶ್ ಜವಳಿ ಕೋರಿಯರ್, ಟ್ರಾನ್ಸ್ ಪೋರ್ಟ್ ಮುಖಾಂತರ ಕಾಫಿ ಪುಡಿ ಇನ್ನಿತರ ಪದಾರ್ಥಗಳನ್ನು ಕಳುಹಿಸಿಕೊಡಲಿದ್ದಾರೆ. 

ಶೀಘ್ರದಲ್ಲಿ ಶ್ರೀ ಕಾಫಿ ವರ್ಕ್ಸ್ ನವರ ಹೊಸ್ ಬ್ರಾಂಡ್ ಕಾಫೀ ಪುಡಿ ನಮ್ಮೆಲ್ಲರ ಕೈ ಸೇರಲಿದೆ. 
ತಮ್ಮ ಸಂಸ್ಥೆಯ ಲಾಂಚನದಂತೆ ಸದಾ ನಗುಮೊಗದೊಂದಿಗೆ ನಮ್ಮೊಂದಿಗೆ ವ್ಯವಹರಿಸುವ ಶ್ರೀ ನಿಲೇಶ್ ಜವಳಿಯವರ ದೂರವಾಣಿ ಸಂಖ್ಯೆ 8050301283

#Thirthahalli2Global

July 8, 2012

ನಮ್ಮ ತೋಟದಲ್ಲಿ , ನದಿ ತೀರದಲ್ಲಿ ಒಂದು ರೌಂಡ್ ಹಾಕುವಾ

ಈ ಸಲ ಊರಿಗೆ ಹೋದಾಗ ಕ್ಯಾಮರಾ ನನ್ನ ಕೈ ನಲ್ಲಿ..ಮಂಗನ ಕೈ ನಲ್ಲಿ ಮಾಣಿಕ್ಯದ ಹಾಗೆ..ಹೆಂಗೆಂಗೋ ತೆಗೆದಿದ್ದೀನಿ..ಬನ್ನಿ join me....:-)
good morning teerthahalli

Green Rose

ಬನ್ನಿ ಮೊದಲು ತೋಟಕ್ಕೆ ಹೋಗುವಾ

ನಮ್ಮ ತೋಟವನ್ನು ನೋಡಿಕೊಳ್ಳುವ ಪುಟ್ಟರಾಜು and family ಜತೆ ನಮ್ಮ ರಾಯರು ಇನ್ blue T-shirt

ಬರಿ ಜಂಬದ ಹುಂಜ

ನನ್ನ ಪುಟ್ಟ ನರ್ಸರಿ
A-Z ಎಲ್ಲ ಇವೆ...:-)

ನನ್ನ ಬಗ್ಗೆ ಕುತೂಹಲ ಈತನಿಗೆ..:-)



Temple Tree
ಸಾಂಬಾರಬಳ್ಳೀ
ನೀರಿನ ಒರತೆ
ಬಾಳೆವನದಲ್ಲಿ ನಾ!!

ಕದಳಿಫಲ..ನೀರಿಲ್ಲದಿದ್ದರೂ :-(

ಇಲ್ಲಿ ಬಿಸಿಲಿನಿಂದ ಸ್ವಲ್ಪ respite
ಜೋರು ಗಂಟಲಿನ ಪುಟ್ಟ ಹಕ್ಕಿ

ಸೊರಗಿವೆ ಕೆಂಪು ಹರಿವೆ
once in a while we should stop and smell the flowers ಅಂತೆ..ಅದಕ್ಕೆ ನಾನು..... coffee ಹೂವಿನ ಪರಿಮಳ ಘಮ ಘಮ

ತೋಟದ ಒಂದು ಬದಿಯಿಂದ ಕಾಣುವ ಜನತಾ ಕಾಲೋನಿ




ರಸ ಭರಿತ punನೇರಳೆ ಕೆಳಗಿದೆ ಪೇರಳೆ..

guavas the sweetest ever!

ನೀರಿನ ಅಗತ್ಯವಿಲ್ಲ ಈ ಗಿಡಗಳಿಗೆ. they grow robustly the tapioca plants.



ಸಂಜೆಯಾಯಿತು ಈಗ ನದಿ ತೀರ ಯಾನ...:-)


ನದಿಗೆ ಹೋಗಿವ ರಸ್ತೆ



ಅಗೋ ದೂರದಲ್ಲಿ ಅಪ್ಪ ಮಗಳಿಗೆ ಈಜು ಕಲಿಸುತ್ತಿರುವುದು..

ರಜೆ ಮಜಾ

ನನಗಿಷ್ಟ ಈ ನದಿ ತೀರದ ಮೃದು ಮರಳು

ಅಹಾ! ಸರ್ ವಿಶ್ವೇಶ್ವರಯ್ಯ ಕಟ್ಟಿಸಿದ ಸೇತುವೆ..ಎಳ್ಳಮವಾಸ್ಯೆ ಜಾತ್ರೆಗೆ ಬಿಳಿ ಬಣ್ಣ ಹೊಡೆಸಿಕೊಡಿದ್ದು.

ಸುಮ್ನೆ experimenting with camera..:-)

ಕಣ್ಣು ಕಿರಿದು ಗೊಳಿಸಿ ಸೂಕ್ಷ್ಮತೆಯಿಂದ ನೋಡಿದರೆ ರಾಮಮಂಟಪ ಕಾಣಬಹುದು :-)

ಸೂರ್ಯಾಸ್ತಮಾನಕ್ಕೆ ಮುನ್ನ

ಸೂರ್ಯ ಮುಳುಗುವ ಮುಂಚೆ ಪ್ರಖರ

ಲೊ ಶ್ಯಾಮ್ ಹೋ ಗಯೀ ಘರ್ ಚಲ್ತೆ ಹೈ ಅಭಿ!

bye bye ರವಿ

ಸೂರಜ್ ಚಲಾ ಘರ್ ಕೋ
:-)

February 17, 2011

ಹರಿವೆ ಸೊಪ್ಪಿನ ಸಾಸಿವೆ - Recipe

mr and mrs ಸೀನಣ್ಣ. ತೀರ್ಥಹಳ್ಳಿಯ ಕೆಂಪು ಹರಿವೆ ಸೊಪ್ಪು the Best!!

ಇದೇ ಶಿರ್ಷಿಕೆಯಡಿ ನನ್ನ ಬ್ಲಾಗ್ ನಲ್ಲಿ ಇನ್ನೊಂದು ಪೋಸ್ಟ ಇದೆ. ಕೆಳಗಿನ ಲಿಂಕ್ ನ್ನು ಕ್ಲಿಕ್ಕಿಸಿ ಓದಬಹುದು!

http://malathisanchiyinda.blogspot.com/2010/06/blog-post.html

 ಆಮೇಲೆ ಸಾಸಿವೆ ಮಾಡುವ ವಿಧಾನವನ್ನು ಓದಿ. ಓರ್ವ anonymous commentiಗರು ಸಾಸಿವೆ ಮಾಡುವ ವಿಧಾನ ಕೇಳಿದ್ದರು. ಈ recipe ಅವರಿಗಾಗಿ, on demand!! . :-)


ಹರಿವೆ ಸೊಪ್ಪು - 3 ಕಟ್ಟು
ತಾಜಾ ತೆಂಗಿನ ಕಾಯಿ ತುರಿ - 4 ದೊಡ್ಡ ಚಮಚ ಅಥವಾ 1/2 ತೆಂಗಿನಕಾಯಿ
ಸಾಸಿವೆ - 2 ಟೀ. ಚಮಚ
ಹುಣಸೆ ಬೀಜದ ಗಾತ್ರದಷ್ಟೆ ಹುಣಸೆ ಹುಳಿ :-)

ಹಸಿಮೆಣಸಿನ ಕಾಯಿ ನಾಲ್ಕೈದು, ಉಪ್ಪು, ಒಗ್ಗರಣೆಗೆ ಎಣ್ಣೆ, ಸಾಸಿವೆ, ಕರಿಬೇವು, ಕೆಂಪು ಒಣ ಮೆಣಸಿನ ಕಾಯಿ

ಸೊಪ್ಪನ್ನು ಚೆನ್ನಾಗಿ ತೊಳೆದು,ಸಣ್ಣಕ್ಕೆ ಕತ್ತರಿಸಿ.ಇದಕ್ಕೆ ಹಸಿ ಮೆಣಸಿನಕಾಯಿಯನ್ನು ಉದ್ದಕ್ಕೆ ಸೀಳಿ ಹಾಕಿ, ಸ್ವಲ್ಪ ಉಪ್ಪು ಬೆರೆಸಿ, ಮುಚ್ಚಿ, ಒಲೆಯ ಮೇಲಿಡಿ. ಸಾಧಾರಣವಾಗಿ ಅದು ಬೇಯುತ್ತಾ ನೀರು ನೀರು ಆಗತ್ತೆ ಹಾಗೇ ಸೊಪ್ಪಿನ ಪ್ರಾಮಾಣ ನೂ ಕಡಿಮೆ ಆಗುತ್ತೆ. ಅದಕ್ಕೆ ಉಪ್ಪು ಆದಷ್ಟು ಕಡಿಮೆ ಹಾಕಿ. ಬೇಕಾದ್ರೆ ರುಚಿ ನೋಡಿ ಲಾಸ್ಟ್ ಲ್ಲಿ ಬೆರೆಸ ಬಹುದು. ತುಂಬ ಹೊತ್ತು ಬೇಯಿಸಬೇಡಿ. ಅದರಿಂದ ಪೌಷ್ಠಿಕಾಂಶ ನಾಶವಾಗುತ್ತೆ.

ಬೆಂದ ಸೊಪ್ಪಿನಿಂದ ಮೆಣಸಿನಕಾಯಿಯನ್ನು ಆರಿಸಿ ತೆಗೆದು ಕಾಯಿ ತುರಿಗೆ ಹಾಕಿ, ಚಿಕ್ಕ ಹುಣಸೆ ತುಂಡಿನೊಟ್ಟಿಗೆ ತರಿ ತರಿಯಾಗಿ ರುಬ್ಬಿ. ಕೊನೆಯಲ್ಲಿ ಸಾಸಿವೆಯನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿದಿಟ್ಟು, ರುಬ್ಬಿದ ಪದಾರ್ಥಕ್ಕೆ ಬೆರೆಸಿ-(ಮಿಕ್ಸಿ ಅಥವಾ ರುಬ್ಬುವಕಲ್ಲಲ್ಲಿ ) ಒಂದು ಅಥವಾ ಎರಡು ಸುತ್ತು ತಿರುವಿ. ತಣ್ಣಗಾದ ಬೆಂದ ಸೊಪ್ಪಿಗೆ ಬೆರೆಸಿ. ಸಾಸಿವೆ, ಕರಿಬೇವು ಮತ್ತು ಒಣ ಕೆಂಪು ಮೆಣಸಿನ ಒಗ್ಗರಣೆ ಕೊಡಿ. ಸಾಸಿವೆ readdy. ಇದು ತಣ್ಣಗಿನ ಪದಾರ್ಥ. ಬೇಸಿಗೆಯಲ್ಲಿ (summer) ತುಂಬ ಹಿತವಾಗಿರುತ್ತೆ. ಕೆಲವರು ಸಾಸಿವೆಯನ್ನು ಹಸಿಯಾಗೆ ಹಾಕುತ್ತಾರೆ. ಹಸಿ ಸಾಸಿವೆ ಬಳಸುವುದಾದರೆ ಒಂದುವರೆ ಸ್ಪೂನ್ ಸಾಸಿವೆ ಹಾಕಿ ಸಾಕು.but i like my version of ಹರಿವೆ ಸೊಪ್ಪಿನ ಸಾಸಿವೆ.

ಸೊಪ್ಪು ತೀರ್ಥಹಳ್ಳಿಯಿಂದ ತಂದಿದ್ದು. ಬೆಂಗಳೂರಿಗೆ ಬರುತ್ತ. ಬಸ್ ನಲ್ಲಿ ಬಸವಳಿದು ಹೀಗಾಗಿದೆ ಅಷ್ಟೆ. ರುಚಿ ಮಾತ್ರ sooper!!!
:-)

July 9, 2010

ತೀರ್ಥಹಳ್ಳಿ unlimited


ತೀರ್ಥಹಳ್ಳಿ ಪೇಟೆಯಿಂದ 5 ಕಿ.ಮಿ ದೂರದ ಹೆನ್ನಂಗಿಯಲ್ಲಿದೆ ನಮ್ಮ್ ತೋಟ. ಮೊನ್ನೆ ಹೋದಾಗ ಮಳೆಯೋ ಮಳೆ. ಹಲಸಿನ ಕಾಯಿ ಚಿಪ್ಸ್, ಕರಿದ ಹಲಸಿನ ಹಪ್ಪಳ, ಉಪ್ಪಿಗೆ ಹಾಕಿದ ಮಾವಿನಕಾಯಿ ಗೊಜ್ಜು,ಕೆಂಪಕ್ಕಿ ಗಂಜಿ, ಚಳಿಗೆ ರಗ್ಗು ಹೊದ್ದು ಕೂತಿದ್ದು.....ಬೆಂಗಳೂರಿನಲ್ಲಿ ನೋಡಿದ್ರೆ, ಹಪ್ಪಳ ಸಂಡಿಗೆ ಒಣಗಿಸುವಷ್ಟು ಬಿಸಿಲು. ಆದ್ರೆ complain ಮಾಡಬಾರ್ದು,,ಯಾಕಂ
ತಂದ್ರೆ ತೀರ್ಥಹಳ್ಳಿಯ ಮಳೆಗೆ ಒದ್ದೆಯಾದ ಬಟ್ಟೆಗಳನ್ನು ಇಲ್ಲಿ ಬಂದು ಒಣಗಿಸಿದೆ. ಕೆಲವು ಚಿತ್ರಗಳಿವೆ ನೋಡಿ...
Sun looking at its reflection mirrored in the tunga river. shot from the bridge

ತೋಟದ ಇನ್ನೊಂದು entrance. ಮಾಲವಿಕ,ಅನ್ನಕ್ಕ (ಶ್ರೀಕಾಂತ್ ಅಕ್ಕ) ಎಂಡ್ ಮಾಲತಿ!!


ಮಿಯಾಂವ್

ಹೊಲವೇ ವಿಸ್ಮಯssssss!!!!!!!!!!!!!!!(with due apologies to Jayanth Kaikiniಯವರಿಗೆ)

ಪೆಟ್ಲು ಕಾಯಿ/ಅರ್ ಲಮರ್ಲ್ ಕಾಯಿ ಗಿಡ ಹೂ ಬಿಟ್ಟದ್ದು. ಲಿಂಬೆಹಣ್ಣಿನ ಜತೆ ಈ ಕಾಯಿ ಹಾಕಿ ಉಪ್ಪಿನಕಾಯಿ ಮಾಡ್ತಾರೆ. ಚೆನ್ನಾಗಿರುತ್ತೆ.ಒಳ್ಳೆ ಔಷಧೀಯ ಗುಣವುಳ್ಳದ್ದು


ಮೂರು ದಿನದ ಮಳೆಗೆ ಕೆರೆ ತುಂಬಿದ್ದು



ಹಾದಿಗುಂಟ

ಮಳೆಯು ನಿಂತ ಮೇಲೆ ಹನಿಯೊಂದು ಮೂಡಿದೆ..ಹೂವಿನ ಮೇಲೆ

ಮಾಲು checkingout ಶ್ರೀಗಂಧದ (sandalwood)ಮರ. ಬಿದಿರಿನ ಎಡೆಯಲ್ಲಿದೆ ಈ ಮರ

ಪೇಟೆಯಲ್ಲಿ pot ನಲ್ಲಿ ಬೆಳೆದು, ಟೈಮ್ ಟೈಮಿಗೆ ನೀರು ಹಾಕಿ ನಾವು ಮುಚ್ಚಟೆಯಿಂದ ಬೆಳೆಸುವ fern , ಇಲ್ಲಿ ತನ್ನಷ್ಟಕ್ಕೆ ಚಿಗುರಿದೆ. ಬಿಂದಾಸ್....

ಮುಂದೆ ಈ ಬಂಡೆಕಲ್ಲು ಇರುವ ಪ್ರದೇಶದಲ್ಲಿ ನಮ್ಮ cultural function/ family Annual get-together ಗಳು.

Bamboo

ಬಂಡೆ ಕೊರೆದ (blast ಮಾಡಿ ಇದನ್ನು ತೆಗೆಯಲಾಗುತ್ತದೆfor construction purpose)  ಜಾಗದಲ್ಲಿ ತುಂಬಿದ ಮಳೆ ನೀರು. ಒಳ್ಳೆ ಹಿಮಾಲಯದ ವಾತಾವರಣ ತರಹ ಕಾಣುತ್ತಿದೆ
ಇರುವೆಯ ಸಾಲು. ಸರಿ ಕಚ್ಚಿಸಿಕೊಂಡ್ವಿ ಎಲ್ಲರೂ ಆ ಮೇಲೆ michael jackson ಡ್ಯಾನ್ಸು!!

ಕವಲು?? ದಾರಿ!! ಎಸ್.ಎಲ್.ಭೈರಪ್ಪ ನವರ ನವೀನ ಕಾದಂಬರಿ ಅಲ್ಲ :-)


ಚಕ್ಕಲಿ ಹುಳು, ಮುಟ್ಟಿದರೆ ಚಕ್ಕುಲಿ ತರ ಮುರುಟಿಕೊಳ್ಳುತ್ತೆ

ಔಷಧೀಯ ಸಸ್ಯಗಳು


double ದಾಸವಾಳ. ಬಣ್ಣ ನೋಡಿ ಅಬ್ಬಲಿಗೆ ಹೂ ತರಹ!!


ಹೂವು-ಹಣ್ಣು. seedless ನಿಂಬೆ. 



ಪುನರ್ ನಿರ್ಮಾಣಗೊಂಡ ನಾಗದೇವನ ಗುಡಿ, ಹಳೇ ನಾಗಬನಾನೇ ನನಗೆ ಇಷ್ಟವಾಗಿತ್ತಪ್ಪ. (ಹಳೆ post ನಲ್ಲಿದೆ ಆವಾಗಿನ ಚಿತ್ರ) :-(

ಕೀಟ unknown..ಕಾಣಿಸುತ್ತ???

Lemongrass- ಮಜ್ಜಿಗೆಹುಲ್ಲು??? is that right? ಮಳೆಗಾಲದಲ್ಲಿ ಇದರ ಕಷಾಯ-the best!!


ದೂರದ ಬೆಟ್ಟ ನುಣ್ಣಗೆ.......ಸಣ್ಣಗೆ, ಆನಂದಗಿರಿ ಬೆಟ್ಟ

ಇನ್ನೊಂದು ಕೆರೆ

ನಮ್ಮ ತೋಟದ ರಕ್ಷಕ ದೈವದ ಗುಡಿ

ತಾವರೆ ಕೆರೆ


ತಾವರೆ.lotus pond


ಯಾಕೋ ನನ್ನ ನೋಡಿ ಹೆದರಿದ ಹಸು
ಆಮೇಲೆ ನಾಗಾಲೋಟ(?)ದಿಂದ ಓಡಿ, ಆ ಮೊಪೆಡ್ ನ ಬೀಳಿಸ್ತು! 
:-)