ನನ್ನ ಇಬ್ಬರೂ ಮಕ್ಕಳಿಗೂ ಶ್ರೀಕಾಂತ್ ಕಡೆಯ ಅನುವಂಶಿಕ ಬಳುವಳಿಯಾಗಿ ದಟ್ಟ ಬೇಗನೆ ಬೆಳೆಯುವ ಕೂದಲು. ನನ್ನ ಕಡೆಯವರ ಕೂದಲೂ ಚೆನ್ನಾಗಿದೆ. ಆದರೆ ಸಪೂರ, ಉದ್ದ, ರೇಷ್ಮೆ ನುಣುಪಿನ ಕೂದಲು.
ನನ್ನ ಮಕ್ಕಳಿಬ್ಬರೂ ಸ್ವಲ್ಪ different. ಇಬ್ಬರೂ ಒಳ್ಳೆ ಅಂಕಗಳನ್ನು ಪಡೆದು ತಮ್ಮದೇ ಬೇರೆ ರೀತಿ ಉದ್ದಿಮೆ/ ಜೀವನದ ಹಾದಿ ಹಿಡಿದು ಆರಾಮಾಗಿದ್ದಾರೆ. ದೊಡ್ಡವಳಂತು ಯಾವುದಕ್ಕೂ ತಲೆ ಕೆಡೆಸಿಕೊಡುವುದಿಲ್ಲ. ಇಂತಹ ಪೈಕಿ ಇತ್ತೀಚಿನ ದಿನಗಳಲ್ಲಿ ಯಾರೂ ಸಿಗುವುದಿಲ್ಲ. ಯಾರು ಏನೇ ಅನ್ನಲಿ...ನನಗೆ ಈ ಹಾಡು ನೆನಪು ಬರುತ್ತೆ 'ಯಾರೇ ಕೂಗಾಡಲಿ, ಯಾರೇ ಹೋರಾಡಲಿ....😁
ಇಬ್ಬರ ಕೂದಲು ಬೆಳ್ಳಗಾಗಲು ಶುರು ಆಗಿದೆ. ಅವರ ಅಪ್ಪ (ಆಶ್ಚರ್ಯ) ಅವರಿಗೆ ಕೂದಲಿಗೆ ಬಣ್ಣ ಹಚ್ಚಲು ಹೇಳುತ್ತಾರೆ. ಇಬ್ಬರೂ ಖಡಾಖಂಡಿತವಾಗಿ ಇಲ್ಲ ಅಂದಿದ್ದಾರೆ. ಇಬ್ಬರೂ ಹೆಯರ್ ಡೈ ( hair dye) ಮುಂತಾದ್ದು ಹಚ್ಚುವುದಿಲ್ಲ. ಕ್ಯಾನ್ಸರ್ patients ಗಳಿಗೆ ವಿಗ್, ಚವರಿ ಮಾಡಲು ಕಪ್ಪು ಬಿಳಿ ಮಿಶ್ರಿತ ಕೂದಲು ತೆಗೆದುಕೊಳ್ಳುತ್ತಾರೆಂದು ಗೊತ್ತಾದಮೇಲೆ,.ಈಗ ಕೂದಲನ್ನು ಸೊಂಪಾಗಿ ಬೆಳೆಸಿ ಅದನ್ನು donate ಮಾಡುತ್ತಾರೆ. ಅವರ ಅಜ್ಜಿ ಅಂದರೆ ನನ್ನ ಅಮ್ಮನಿಗೂ ಕೂದಲು donate ಮಾಡಲು ಪ್ರೇರೇಪಿಸಿದ್ದಾರೆ.
ತಲೆಗೆ ಹಚ್ಚುವ ಎಣ್ಣೆ ನಾನು ತಯಾರಿಸುತ್ತೇನೆ. ಕೊಬ್ಬರಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಕರಿಬೇವು, ಮೆಂತೆ ಕಾಳು ಮತ್ತು ಕಲೊಂಜಿ (ನೀರುಳ್ಳಿ ಬೀಜ) ಹಾಕುತ್ತೇನೆ. ಉಗುರು ಬೆಚ್ಚಗೆ ಇರುವಾಗಲೇ ತಲೆಗೆ ಹಚ್ಚುವುದು. ಚಳಿಗಾಲದ ದಿನಗಳಲ್ಲಿ scalp ಡ್ರೈ ಆದರೆ , ಅಥವಾ ಕೂದಲಲ್ಲಿ dandruff ಆದರೆ, ಈ ಎಣ್ಣೆಗೆ ಅರ್ಧ ನಿಂಬೆಯ ರಸ ಹಿಂಡಿದರೆ ಆಯ್ತು. ಬೇರೆಯವರಿಂದ ಮಾಲಿಶ್ ಮಾಡಿಸಿಕೊಂಡರೆ ಉತ್ತಮ 🙂🙂❤️
No comments:
Post a Comment