Showing posts with label friendship. Show all posts
Showing posts with label friendship. Show all posts

September 14, 2012

ಪರಿಚಯ ಸ್ನೇಹ ಸಲಹೆ- ಸುಖಾಂತ್ಯ??

ನನಗೆ 'ಸಿ' ಪರಿಚಯ ಫೇಸ್ ಬುಕ್ ಮೂಲಕ ಆಗಿದ್ದು. ಆವಾಗಿನ್ನೂ ನನಗೆ ಪ್ರೈವಸಿ ಸೆಟ್ಟಿಂಗ್ಸ್ ಬಗ್ಗೆ ತಿಳಿದಿರಲಿಲ್ಲ. ಅವರು ಕಳುಹಿಸಿದ್ದ ಪ್ರೆಂಡ್ ರಿಕ್ವೆಸ್ಟ್ ನಾನು ಅಂಗೀಕರಿಸಿರಲಿಲ್ಲ. ಏನಾದರು thoughts to brighten up your day ಮೆಸೆಜ್ ಅವರಿಂದ ನನ್ನ ಇನ್ ಬಾಕ್ಸ್ನ್ ನಲ್ಲಿರುತ್ತಿತ್ತು. ಒಂದು ದಿನ ಅವರ ಪ್ರೊಫೈಲ್ ಗೆ ಹೋಗಿ ಅವರ ವಿವರಗಳನ್ನು ಓದಿಕೊಂಡೆ. ನಮ್ಮಿಬ್ಬರ ಮಧ್ಯೆ ಯಾವುದೇ ಕಾಮನ್ ಫ್ರೆಂಡ್ ಇರಲಿಲ್ಲ. ಅದಕ್ಕೆ ನಾನು ಅವರಲ್ಲಿ ನನಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದರ ಬಗ್ಗೆ ಕೇಳಿದೆ. ಅದಕ್ಕೆ ಅವರು 'ಯಾರಾದರೂ ಮೊದಲ ಸಲ ಫೇಸ್ ಬುಕ್ ಜಾಯಿನ್ ಆಗಿದಾಗ ಫೇಸ್ ಬುಕ್ ಸಜೆಸ್ಟ್ ಮಾಡುತ್ತದಂತೆ. 'malathi shenoy has no friends yet, please suggest friends to her ಅಂತ'..:-) ಅದಕ್ಕೆ ನಮ್ಮ ಕ್ಲಾಸ್ ನಲ್ಲಿ ಒಬ್ಬ ಮಾಲತಿ ಅಂತ ಇದ್ರು. ಅದು ನೀವೆ ಅಂದುಕೊಂಡು ನಿಮಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದೆ ಅಂದ್ರು. ಮಾಲವಿಕ ಳಿಗೆ ಇದೆಲ್ಲ ಹೇಳಿದಾಗ ಅವಳು, ಅಮ್ಮ ಇದಕ್ಕೆಲ್ಲ ಫಿಶಿಂಗ್ ಅಂತಾರೆ, ಅಂದ್ರೆ ಗಾಳ ಹಾಕೋದು ಅಂತ ಹೇಳಿದ್ಲು. ಕೆಲದಿನಗಳಾದ ಮೇಲೆ ಅವರು ಅವರ ಆರನೆ ಕ್ಲಾಸ್ ನ ಫೋಟೊ ಕಳಿಸಿದ್ರು. ಮೇಲ್ಗಡೆ ಮೌಂಟ್ ನಲ್ಲಿ ಫೋಟೊ ಇದ್ರೆ ಕೆಳಗಡೆ ಎಲ್ಲರ ಹೆಸರುಗಳು ಇದ್ವು. ಹೈದರಾಬಾದಿನ ಸ್ಕೂಲ್. ಅದರಲ್ಲಿ ಮಾಲತಿ ಅನ್ನುವ ಹುಡುಗಿಯ ಹೆಸರು ಕೂಡ ಇತ್ತು. ಆಗ ಅವರ ಪ್ರೊಫೈಲ್ ಗೆ ಪುನ: ಭೇಟಿ ನೀಡಿದೆ. ಅವರು ಬೆಂಗಳೂರಿನ ಹೈ ಫಂಡಾ ಬುಕ್ ಹೌಸ್ ನ ಎಕೌಂಟ್ಸ್ ನಿರ್ವಹಿಸತ್ತಾ ಇದ್ರು. ಆ ಹೆಸರು ಓದಿ ಗಟ್ಟಿಯಾಗಿ ವೌ ಎಂದಿದ್ದು ಈಗಲೂ ನೆನಪಿಗೆ ಬರ್ತದೆ.

ಅವರು ಇನ್ ಬಾಕ್ಸ್ ನಲ್ಲಿ ಏನಾದರೂ thoughts for the day ಮೆಸೇಜ್ ಕಳಿಸ್ತಾ ಇದ್ರು, ಅಥವಾ ಅವರೇ ಬರಿದಿದ್ದ ಇಂಗ್ಲೀಷ್ ಪದ್ಯಗಳು ಕೂಡ... ತುಂಬ ಇಷ್ಟ ಆದ್ರೆ ನಾನು ಅದಕ್ಕೆ ಪ್ರತಿಕ್ರಿಯಿಸ್ತಾ ಇದ್ದೆ. ಆಗಲೇ ಒಂದು ದಿನ ನಮ್ಮ ಸಂಸ್ಥೆಗೆ ಒಂದು ಪುಸ್ತಕ ಬೇಕಾಗಿ ಬಂತು. ಅದು ಎಲ್ಲೂ ಸಿಗಲಿಲ್ಲ. ಆಗ ನನಗೆ 'ಸಿ' ನೆನಪಾಗಿ ಅವರಿಗೊಂದು ಮೆಸೇಜ್ ಕಳಿಸಿದ್ದೆ, ಹಾಗೆ ನನ್ನ ಇ ಮೈಲ್ ಐಡಿ ಕೂಡ ಕೊಟ್ಟೆ.. ಸುಮಾರು ದಿನಗಳು ಅವರಿಂದ ರೆಸ್ಪಾನ್ಸ್ ಇರಲಿಲ್ಲ. ಅಂತೂ ಮರೆತು ಬಿಟ್ರು ಅನ್ನಿಸುತ್ತೆ ಅಂತ ನಾನು ಸುಮ್ಮನಾದೆ.

ಸಾಧಾರಣ 15 ದಿನಗಳ ನಂತರ ನನಗೆ ಜಿ ಮೈಲ್ ಗೆ ಅವರು ಪತ್ರ ಬರೆದರು. ಟ್ರೈನಿಂಗ್ ಅಂತ ಹೊರಗೆ ಎಲ್ಲೋ ಹೋಗಿದ್ದು ಮತ್ತು ಆ ಪುಸ್ತಕಗಳು ಅವರಲ್ಲಿ ಇದ್ದುದಾಗಿಯೂ ಬರೆದರು. ಅಷ್ಟರಲ್ಲೇ ನಮ್ಮ ಸಂಸ್ಥೆಯಿಂದ ಒಂದು ಟಾಕ್ ಪ್ರೋಗ್ರಾಮ್ followed by dinner ಹಮ್ಮಿಕೊಂಡಿದ್ದೆವು. ಅವರಿಗೆ ಅಲ್ಲಿಗೆ ಬರಲು ಹೇಳಿದ್ದೆ. ಅವರು ಪುಸ್ತಕ ತೆಗೆದುಕೊಂಡು ಬಂದರು. ಅವರು ಯಾವಾಗಲೂ ನನಗೆ 'ಮಾಲ್ತಿ' ಅಂತ ಸಂಭೋಧಿಸುತ್ತಿದ್ದರಿಂದ ನನಷ್ಟೆ ಅಥವ ನನಗಿಂತ ದೊಡ್ಡವರೇನೋ ಅಂದುಕೊಂಡಿದ್ದೆ. ನೋಡಿದರೆ ನನಗಿಂತ ಅವರು ಹಲವು ವರ್ಷ ಕಿರಿಯರಾಗಿದ್ದರು. ನನ್ನನ್ನು ನೋಡಿಯಾದ ಮೇಲೆ, ನನ್ನ ಹಲವಾರು ಮಿತ್ರರ ತರಹ ಅಕ್ಕ, ಅಮ್ಮ, ಮೇಡಂ ಅಂತಾರೇನೋ ಅಂದುಕೊಂಡಿದ್ದೆ, ಆದರೆ ಅವರು 'ಮಾಲತಿ' ಸಂಭೋದನೆ ಮುಂದುವರೆಸಿದ್ರು. ನನಗೂ ಒಂದು ತರಹ ಖುಶಿ.ಆದ್ರೂ ಈ ಬಗ್ಗೆ ಅವರಲ್ಲಿ ಕೇಳಿದೆ. ಅದಕ್ಕೆ ಅವರು 'ಅರೇ ಮಿತ್ರರೆಂದರೆ ಮಿತ್ರರು ಅದರಲ್ಲಿ ವಯಸ್ಸು ಯಾಕೆ ಅಡ್ಡ ಬರಬೇಕು?' ಅಂತ. ನನ್ನ ಬ್ಲಾಗ್ ಓದುಗರಲ್ಲಿ ರಾಧಿಕ ಕೂಡ ನನಗಿಂತ ವಯಸ್ಸಿನಲ್ಲಿ ತುಂಬ ಕಿರಿಯರಾದರೂ ನನ್ನ ಹೆಸರು ಹಿಡಿದೇ ಕರೆಯೋದು.:-) ಊಟ ಮಾಡ್ತಾ ಅವರ ಬಗ್ಗೆ ಇನ್ನಷ್ಟು ತಿಳಿಕೊಂಡೆ. ಶ್ರೀಕಾಂತ ಹತ್ತಿರ ಕೂಡ ಮಾತನಾಡಿದರು. ನಮಗೆ ಬೇಕಾಗಿರುವ ಒಂದು ಸಾಫ್ಟ್ ವೇರ್ ತಯಾರಿಕೆಗೆ ಸಹಕರಿಸಲು ಒಪ್ಪಿಕೊಂಡರು. ಹಾಗೆ ಪರಿಚಯ ಇನ್ನಷ್ಟು ಬೆಳೆಯಿತು.

ದಿನಾ ಅವರ HR ಡಿಪಾರ್ಟ್ ಮೆಂಟ್ ನಿಂದ ಬರುವ ಮೈಲ್ ಗಳನ್ನು ನನಗೆ ಫಾರ್ರ್ವಡ್ ಮಾಡುತ್ತಿದ್ದರು. ಪುನ: ಸ್ವಲ್ಪ ದಿನ ಮೌನವಾಗಿದ್ದರು. ಎಲ್ಲಾದರೂ ಟ್ರೈನಿಂಗ್ ಕಳುಸಿದ್ದಾರೇನೋ ಅಂದುಕೊಂಡೆ. ಆದರೆ ಐದು ದಿನದ ನಂತರ ಬಂದ ಪತ್ರಗಳು ತುಂಬ depressive ಆಗಲಿಕ್ಕೆ ಶುರು ಆದವು. ಅವರ ತಂದೆ ತಾಯಿ, ಅಣ್ಣ ತಂಗಿಯರ ಕಂಪ್ಲೈನ್ ಗಳು. ಕೆಳಗಡೆ ಸ್ಥೂಲವಾಗಿ ಅದನ್ನು ಹೇಳುತ್ತೇನೆ.

'ಸಿ' ,ಮೂಲತಃ ಆಂಧ್ರಾ ದಲ್ಲಿನ ಹಳ್ಳಿಯವರು. ಅವರ ತಂದೆ ಅವಕಾಶ ಹುಡುಕಿ ಮೊದಲಿಗೆ ಹೈದರಾಬಾದ್ ನಂತರ ಬೆಂಗಳೂರಿಗೆ ಬಂದವರು. ಮಕ್ಕಳೆಲ್ಲ (ಮೂವರು) ಚಿಕ್ಕವರಾಗಿದ್ದಾಗಲೇ ಬೆಂಗಳೂರಿನಲ್ಲಿ ಸೆಟ್ಟಲ್ ಆಗಿದ್ದರು. ಅವರದ್ದು ಪ್ರೈವೆಟ್ ಫರ್ಮ್ ನಲ್ಲಿ ಚಿಕ್ಕ ಕೆಲಸ. ಅತ್ಯಂತ ಕಡಿಮೆ ಸಂಬಳ. ಅದರಿಂದಲೇ ಇಡಿ ಕುಟುಂಬದ ನಿರ್ವಹಣೆ ಆಗಬೇಕಿತ್ತು. ಅಂತಹದ್ದರಲ್ಲಿ ಹಿರಿಮಗನಿಗೆ ಸಾಲ ಸೋಲ ಮಾಡಿ ಇಂಜಿನಿಯರಿಂಗ್ ಕಲಿಸಿದ್ದರು. ಕಲಿತು ಒಳ್ಳೆ ಕೆಲಸ ಸಿಕ್ಕಿದ ಎರಡೇ ತಿಂಗಳಿಗೆ, ಇನ್ನೇನು  ಸಾಲವನ್ನು ತೀರಿಸಲು ಸಹಾಯ ಮಾಡಬಹುದು ಅಂದುಕೊಳ್ಳುವಾಗಲೇ, ಅವನು ಅನ್ಯಜಾತಿಯವಳೊಂದಿಗೆ ಮದುವೆ ಮಾಡಿಕೊಂಡು, ಅವಳು ಇವರ ಮನೆಯಲ್ಲಿರಲು ಒಪ್ಪಿಕೊಳ್ಳದೆ ಅವನು ಬೇರೆ ಮನೆ ಮಾಡಿ ಇರಲಾರಂಭಿಸಿದ.ಅಷ್ಟಲ್ಲದೇ ಸಂಬಳ ಕೂಡ ಅವನು ತನ್ನ ತಂದೆಗೆ  ಕೊಡದಂತೆ ನೋಡಿಕೊಳ್ಳುತ್ತಿದ್ದಳಂತೆ ಇವರ ಅತ್ತಿಗೆ. ಕೆಲವು ತಿಂಗಳಲ್ಲೇ 'ಸಿ' ತಂದೆಗೆ ಕೆಲಸದಿಂದ ನಿವೃತ್ತಿ ಆಯಿತು. ಅವರಿಗೆ ಸಿಕ್ಕ ಪಿ ಎಫ್ ಎಲ್ಲ ಸಾಲಕ್ಕೆ ಹೋಯಿತು. ಮನೆಯೆನೋ ಸ್ವಂತದಿತ್ತು.ಆದರೆ ಅದರ ಮೇಲೆ ಕೂಡ ಸಾಲ ತೆಗೆದಿದ್ದರು.'ಸಿ' ಹಾಗೂ ಅವರ ಅಣ್ಣನ ಮಧ್ಯೆ 6 ವರ್ಷದ difference. 'ಸಿ' ಗೆ ಮುಂದಕ್ಕೆ ಓದಿಸಲಾಗದೆ, ಅವರು ಕೆಲ್ಸಕ್ಕೆ ಸೇರಿಕೊಂಡರು. ಮನೆ ಈಗ ಅವರ ಖರ್ಚಿನಲ್ಲೆ ನಡೆಯಲಾರಂಭಿಸಿತು. ಅವರ ಆಫಿಸ್ ನವರು ಒಳ್ಳೆಯವರಾದ್ದರಿಂದ ಅವರಿಗೆ  ಓದು ಪೂರ್ಣಗೊಳಿಸಲು ಆರ್ಥಿಕ ಸಹಾಯ ನೀಡಿ ಅವರು ಓದು ಪೊರೈಸಿದ ಮೇಲೆ ಈಗ ಸಾಕಷ್ಟು ಒಳ್ಳೆ ಸಂಬಳದಲ್ಲಿ ಇದ್ದಾರೆ. ಈ ಸಂಗತಿಗಳು ನಡೆದು. 7 ವರ್ಷಗಳೆ ಕಳೆದುಹೋಗಿವೆ. ಮನೆ ಮೇಲೆ ಅವರ ತಂದೆ ತೆಗೆದ ಸಾಲ ಎಲ್ಲ ತೀರಿಸಿದ್ದಾರೆ. ಆರ್ಥಿಕವಾಗಿ ಚೆನ್ನಾಗಿದ್ದು ಈಗ 'ಸಿ' ಬಳಿ ಚಂದದ ಕಾರ್ ಕೂಡ ಇದೆ.

ಈಗ  'ಸಿ' ತಲೆನೋವೇನೆಂದರೆ, ಇತ್ತೀಚಿಗೆ, ಅಂದ್ರೆ ಇವರ ಆರ್ಥಿಕ ಮಟ್ಟ ಸುಧಾರಿಸಿದ ಮೇಲೆ, ಆಗಾಗ ಶನಿವಾರ ಭಾನುವಾರ ಮನೆಗೆ ಆಗಮಿಸುವ ಅಣ್ಣ ಮತ್ತು ಅವನಿಗೆ ರಾಜೋಪಚಾರ ಮಾಡುವ  ಅಮ್ಮ.ಅವನು ವಾಪಸ್ ಅವನ ಮನೆಗೆ ಹೋದ ಮೇಲೆ 'ಸಿ' ಅಮ್ಮ ಕಣ್ಣೀರು ಹಾಕುವುದು, ಕೆಲ ಮಾತಿನಿಂದ 'ಸಿ' ಗೆ ಕೀಳರಿಮೆ ಮೂಡಿಸುವುದು ಇಂತಹುದನ್ನೆಲ್ಲ ಮಾಡುತ್ತಿದ್ದಾರೆ ಅಂತ 'ಸಿ' ಗೆ ತುಂಬ ನೋವಾಗಿದೆ. 'ಸಿ' ಗೆ ಮೂವತ್ತೆರಡು ವರ್ಷ ವಯಸ್ಸು. ಅವರ ತಂಗಿಗೆ ಮೂವತ್ತು. ತಂಗಿಗೆ epilepsy ಕಾಯಿಲೆ ಆದ್ದರಿಂದ ಇನ್ನೂ ಮದುವೆ ಆಗಿಲ್ಲ.ಅವಳು ಮನಸ್ಸಿದ್ದರೆ ಸರಿಯಾಗಿ ಇರುತ್ತಿದ್ದಳಂತೆ ಇಲ್ಲದಿದ್ದರೆ ಮೌನವಾಗಿ ಒಂದು ಮೂಲೆಯಲ್ಲಿ ಕೂತಿರುತ್ತಿರುತ್ತಾಳಂತೆ. ಅಮ್ಮ ಅವಳಿಗೂ ಹೀಯಾಳಿಸುತ್ತಿದ್ದರಂತೆ. ಮತ್ತು ಇತ್ತೀಚೆಗೆ 'ಸಿ' ಅಣ್ಣನಿಗೆ ಗಂಡು ಮಗು ಹುಟ್ಟಿದೆ. ಅತ್ತಿಗೆನೂ ಈಗ ಕೆಲವು ಸಲ special appearance ಹಾಕುತ್ತಾರಂತೆ ಇವರ ಮನೆಯಲ್ಲಿ.

'ಸಿ' ಗೆ ಕಿರಿಕಿರಿಯೆಂದರೆ ಅವನ ಅಣ್ಣ ಇವರ ಮನೆಗೆ ಬರಕೂಡದೆಂದು.ಅವನು ಬಂದು ಹೋದ ಮೇಲೆ 'ಸಿ' ಅಮ್ಮನ  behaviour ಬದಲಾಗುತ್ತದಂತೆ. ಕಷ್ಟದಲ್ಲಿದ್ದಾಗ ತಿರುಗಿ ಕೂಡ ನೋಡದವ, ಈಗ ನಾವು ಚೆನ್ನಾಗಿದ್ದೇವೆ ಅಂತ, ಒಂದು ಚೂರು ಪಾಪಪ್ರಜ್ಞೆ ಕೂಡ ಇಲ್ಲದವ,ಈಗ ಪದೇ ಪದೇ ಮನೆಗೆ ಬರುತ್ತಾನೆ'. ಸೂಕ್ಷ್ಮವಾಗಿ ಅವನು ಅಣ್ಣನಿಗೆ ಹೀಗೆ ಹೇಳುವಾಗ ಅಮ್ಮ ಕೇಳಿಸಿಕೊಂಡು ಇವನಿಗೆ ಛಿ ಮಾರಿ ಹಾಕಿದ್ದರಂತೆ. ಅಣ್ಣನಿಗೆ ಇಷ್ಟವಾಗುವ ಅಡಿಗೆಯನ್ನು ಮಾಡುವುದು, ಅವನನ್ನು, ಅವನ ಕೆಲಸವನ್ನು ಸಿಕ್ಕಾಪಟ್ಟೇ ಹೊಗಳುವುದು 'ಸಿ' ಗೆ ಕಿರಿಕಿರಿಯೆನಿಸಿದೆ. ಸಿಗುವ ವಾರ್ಯಾಂತದಲ್ಲಿ ಅವನ ಅಣ್ಣನೂ ಇವರ ಮನೆಯಲ್ಲೆ ಇರುವುದು ಅವನಿಗೆ ಬೇಡವಾಗಿದೆ. ಅವನು ಬಂದು ಹೋದ ಮೇಲೆ ಅವನ ತಂಗಿ ಇನ್ನಷ್ಟು ಖಿನ್ನಳಾಗುತ್ತಿದ್ದಳಂತೆ. ಯಾಕೆಂದರೆ ಅವಳಿಗೆ ಅಪಸ್ಮಾರ ಇರುವುದರಿಂದ (ಔಷಧಿಯಿಂದ ಅದು ಹಿಡಿತದಲ್ಲಿದ್ದರೂ) ಮಗುವನ್ನು ಮುಟ್ಟಲು ಬಿಡುತ್ತಿರಲಿಲ್ಲವಂತೆ.

ನಾನು, "ಏನ್ರೀ, ಯಾವಾಗಲೂ ನನ್ನ ಬಳಿ ಕಂಪ್ಲೈನ್ ಮಾಡುವುದು ಬಿಟ್ಟು ಏನಾದರೂ ಉಪಾಯ ನೀವೇ ಕಂಡುಕೊಳ್ಳಬಹುದಲ್ಲ. ವಾರ್ಯಾಂತದಲ್ಲಿ ನೀವು ಫ್ರೆಂಡ್ಸ್ ಜತೆ ಎಲ್ಲಾದರೂ ಹೋಗಿ ಮನೆಯಲ್ಲಿರಬೇಡಿ. ಹಾಗೇ ಅಮ್ಮ ಪುನ: ಕಿರಿಕಿರಿ ಮಾಡಿದ್ರೆ ಅಣ್ಣನ ಮನೆಗೆ ಹೋಗಿ ಇರಲು ಸ್ವಲ್ಪ ಗಟ್ಟಿದನಿಯಲ್ಲಿ ಹೇಳಿ. ಅಷ್ಟಕ್ಕೂ ನಮ್ಮ ಮನೆಯಂದ್ರೆ, 'ನಾನು ಬೇರೆ ಮನೆ ಮಾಡಿರ್ತೀನಿ' ಅನ್ನಿ ಮುಂತಾದ ಬಿಟ್ಟಿ ಸಲಹೆ ಕೊಡಲಾರಂಭಿಸಿದೆ. ಅಷ್ಟೆ ಅಲ್ಲ ಒಂದು ತಿಂಗಳು ಟ್ರೈ ಮಾಡಿ ಅಂತ ಕೂಡ ಸೇರಿಸಿದೆ. ಮತ್ತೆ ಅಣ್ಣ ಬಂದಾಗ ತಂಗಿಯನ್ನು ಕಾರ್ ನಲ್ಲಿ  ಎಲ್ಲಾದರೂ  ಕರೆದುಕೊಂಡು ಹೋಗಿ ಬನ್ನಿ, ಮಾಲ್(mall), ಶಾಪಿಂಗ್, ಏನಾದರೂ ಕೊಡಿಸಿ, ಅವಳ ಮದುವೆಗೆ ಪ್ರಯತ್ನ ಮಾಡಿ...ಅಮ್ಮನೊಂದಿಗೆ ಮಾತನ್ನು ಕಡಿಮೆಮಾಡಿ. ಮುದ್ದುಗರೆಯಬೇಡಿ. ಎಷ್ಟು ಬೇಕು ಅಷ್ಟೆ ಮಾತಾಡಿ (ಸಿ ಗೆ ಕಂಡಾಪಟ್ಟೆ ಮಾತಾಡಬೇಕು:-)) this will definitely work out., ಅಂದೆ.'ಸಿ' ಪ್ರಾಬ್ಲಮ್ ಸಾಲ್ವ್ ಮಾಡುವಲ್ಲಿ ನನಗೇನೋ ಹುಮ್ಮಸ್ಸು, ಒಂದು challenge. ಯಾಕಂದ್ರೆ 'ಸಿ' ಒಬ್ಬ ಒಳ್ಳೆ ವ್ಯಕ್ತಿ. ಅವರ ಮನಸ್ಸಿನಲ್ಲಿ ಅವರ ಅಣ್ಣನ ಬಗೆಗಿರುವ ವೈಷಮ್ಯ ಕೂಡ ತೆಗೆದುಹಾಕಬೇಕೆಂದಿತ್ತು ನನಗೆ..

ಇನ್ನೊಂದು ಮೈಲ್ ನ ಒಕ್ಕಣೆ ಹೀಗಿತ್ತು, 'ಅಪ್ಪ ಅಮ್ಮ ನಿಗೆ ಬಿಪಿ ಶುಗರ್. ಡಾಕ್ಟರ್ ಹತ್ತ್ತಿರಕ್ಕೆ ಒಯ್ಯಲು ನಾನು. ನನ್ನ ಅಣ್ಣ ಕೂಡ ಮಾಡಬಹುದಲ್ವಾ ?"
ಅದಕ್ಕೆ ನನ್ನ ಉತ್ತರ " come on 'C' dont be mean. What if you did not have any brother. Then you would have done it naa?' stop complaining'
"if your brother wants to make amends and rejoin the family don't thwart him." ಅಂತ ಒಂದು ಸಲ ಹೇಳಿದ್ದೆ. ಅದರ ಮುಂದಿನ ಸಲ ಮನೆಗೆ ಬಂದಾಗ ಏನು ಮಾಡಬೇಕೆಂದು ಈ ಸಲಹೆ ಇತ್ತೆ. 'ಈ ಸಲ ಅಣ್ಣ ಬಂದಾಗ ಪ್ರೀತಿಯಿಂದ ಒಂದೆರಡು ಮಾತಾಡಿ, ಅತ್ತಿಗೆಗೆ ಹಾಯ್ ಅನ್ನಿ,  ಕಷ್ಟ ಅನ್ನಿಸಬಹುದು, ಆದರೆ ಸ್ವಲ್ಪ acting ಮಾಡಿ...(ಬಿಟ್ಟಿ ಸಲಹೆಗೆ ಏನಿದೆ ಬಿಡಿ)..:-)ಹಾಡು ಗುನುಗುನಿಸ್ತಾ ತಂಗಿಯನ್ನು ಕರೆದುಕೊಂಡು ಹೊರಗೆ ಹೋಗಿ. ಅಂತ. ಆ ಒಂದು ಭಾನುವಾರ ಅವರು, ತಂಗಿಯನ್ನು ಕಂಠಿರವ ಇಂಡೋರ್ ಸ್ಟೆಡಿಯಮ್ ನಲ್ಲಿದ ಲೈಫ್ ಸ್ಟೈಲ್ ಎಕ್ಸಿಭಿಷನ್ ಗೆ ಕರೆದುಕೊಂಡು ಹೋಗಿ, ತಂಗಿ ಮನೆಗೆ ಬಂದು ಅದರ ಬಗ್ಗೆ ಎಷ್ಟು ಮಾತನಾಡಿದಳಂದ್ರೆ, 'ಸಿ' ಅಮ್ಮನಿಗೂ ಅದರ ಬಗ್ಗೆ ಕುತೂಹಲ ಬೆಳೆಯಿತಂತೆ. ಆಗ 'ಸಿ' 'ಅಮ್ಮನಿಗೆ, ಮುಂದಿನ ಭಾನುವಾರ 'ನಾವೆಲ್ಲರೂ ಹೋಗೋಣ' ಹಾಗೇ ಹೊರಗಡೆ ಎಲ್ಲಾದರೂ ಊಟ ಮಾಡಿಕೊಂಡು ಸಂಜೆ ವಾಪಸ್ ಬರುವಾ ಅಂದನಂತೆ. ಅಮ್ಮ್ನನಿಗೆ ಸಂಬ್ರಮವೋ ಸಂಭ್ರಮ. (ಹೊಸದಾಗಿ ಖರೀದಿಸಿದ ಕಾರ್ ನಲ್ಲಿ ಅವರನ್ನೆಲ್ಲ 'ಸಿ' ಇನ್ನೂ ಎಲ್ಲೂ ಕರೆದುಕೊಂಡು ಹೋಗಿರಲಿಲ್ಲವಂತೆ')
ಕೆಲದಿನಗಳಾದ ಮೇಲೆ ಅವರ ಮೈಲ್ ಹೀಗಿತ್ತು:
ಮಾಲ್ತಿ, ಗೊತ್ತಾ ಪದೇ ಪದೇ ಅಣ್ಣ ಅತ್ತಿಗೆ ಯೇನಕ್ಕೆ ಬರ್ತಿದ್ರು ಅಂತ?? ಅಪ್ಪ ಮನೇನ ಅವರ ಹೆಸರಿಗೆ ಮಾಡಬೇಕಂತೆ' ಸಾಲ ಎಲ್ಲ ತೀರಿಸಿದೋನು ನಾನು. ಆದ್ರೂ ತಂದೆಗೆ ಅವನ ಮೇಲೆ soft corner ಇದೇಯೇನೋ ಎಂಬ ಗುಮಾನಿ'
ಅದಕ್ಕೆ ನಾನು, 'ಖಂಡಿತ ಅದಕ್ಕೆ ಅವಕಾಶ ಕೊಡಬೇಡಿ. ಮನೆಯನ್ನು ತಂಗಿ ಹೆಸರಿಗೆ ಮಾಡಲು ತಂದೆಗೆ ಸಲಹೆ ಕೊಡಿ' ಮತ್ತು ಅಪ್ಪ ಮನೆಯೇನಾದ್ರೂ ನಿಮ್ಮ ಅಣ್ಣನ ಹೆಸರಿಗೆ ಮಾಡಿದ್ರೆ, ನೀವು ಕಟ್ಟಿದ ಸಾಲದ ಹಣ ನಿಮ್ಮ ಅಣ್ಣ ನಿಮಗೆ ಕೊಡಬೇಕು' ಅಂತಂದೆ..ಕೊನೆಗೆ ತಂದೆ ಮಗಳ ಹೆಸರಿಗೆ ಮನೆ ಮಾಡುವುದೆಂದು, ಅವರ ಬಿಲ್ಡಿಂಗ್ ನಲ್ಲೇ ಇನ್ನೊಂದು ಫ್ಲ್ಯಾಟ್ ಸೇಲ್ ಗೆ ಬಂದಾಗ 'ಸಿ' ಅದನ್ನು ಬ್ಯಾಂಕ್ ಲೋನ್ ಪಡೆದುಕೊಂಡು ಅದನ್ನು ಖರೀದಿಸಿದ್ದಾರೆ. ಮದುವೆ ಆದ ಮೇಲೆ ಅಲ್ಲಿರುತ್ತಾರಂತೆ, ಸಧ್ಯಕ್ಕೆ ಬಾಡಿಗೆಗೆ ಕೊಟ್ಟಿದ್ದಾರೆ.

ಹಿಂದಿನ ವರ್ಷ ದೀಪಾವಳಿ ಸಮಯಕ್ಕೆ, ಒಂದು ಸಂಜೆ ನಾವು ಶಾಪಿಂಗ್ ಹೋಗಿ, ಇನ್ನೇನೂ ಹೋಟಲ್ ಗೆ ನುಗ್ಗಬೇಕು ಅನ್ನುವಷ್ಟರಲ್ಲಿ ಒಂದು ಎಸ್ ಎಮ್ ಎಸ್ ಬಂತು. 'ಮಾಲ್ತಿ ಸಿಗ್ನಲ್ ನಲ್ಲಿ ಕ್ರಾಸ್ ಮಾಡಲಿಕ್ಕೆ ನಿಂತ ನೀವು ನಾಲ್ಕೂ ಜನರನ್ನು ನೋಡಿದೆ. ನಿಮ್ಮನ್ನು ಮಾತನಾಡಿಸುವ ಅಂತ ನಾನು, ನನ್ನ ತಂಗಿ ಕ್ರಾಸ್ ಮಾಡಲಿಕ್ಕೆ ನಿಂತಿದ್ದೆವು. ಅಷ್ಟರೊಳಗೆ ನಿಮ್ಮಲ್ಲಿ ಯಾರೋ ಏನೋ ಅಂದಿದ್ದಕ್ಕೆ ನೀವು ನಾಲ್ಕು ಜನ ನಗ್ತಾ ಇದ್ರಿ, ಎದುರುಗಡೆಯಿಂದ ಬಂದ ವಾಹನದ ಬೆಳಕು ನಿಮ್ಮೆಲ್ಲರ ಮುಖದ ಮೇಲೆ ಪ್ರತಿಫಲಿಸಿ,  ಅದು ಒಂದು ಸುಂದರ ಚಿತ್ರದ ತರಹ ಕಾಣಿಸಿತು. ಅದೇ ದೀಪಾವಳಿ ಹಬ್ಬ ಅನ್ನಿಸಿ ಎಷ್ಟು ಖುಶಿಯಾಯ್ತಂದರೆ, ಕಣ್ಣಲ್ಲೆ ನಿಮ್ಮ ಭಾವಚಿತ್ರವನ್ನು ತೆಗೆದು ನನ್ನ ಹೃದಯದಲ್ಲಿ ಇರಿಸಿಕೊಂಡೆ' it was a divine moment' ಅಂತ ಬರೆದಿದ್ದರು.(ಹೂಂ poet ಗಳು  ಅವರಿಗೆ ಏನೇನು ಅನ್ನಿಸುತ್ತವೋ) "ಬನ್ನಿ ನಮ್ಮ ಜತೆ ಊಟಕ್ಕೆ".ಅಂತ ಮರು ಉತ್ತರ ಕಳಿಸಿದೆ. 'carry on malathi, i dont want to intrude in your family moment' ಅಂತ ಅವರಿಂದ ಮರು ಉತ್ತರ ಬಂದಿತ್ತು.

ಸರಿ ಈಗ ಇದನ್ನು ಹಂಚಿಕೊಳ್ಳಲ್ಲು ಕಾರಣ ಅವರ ಮೈಲ್. ಅವರಿಗೆ ಮದುವೆಯಾಗಿ ಮಗು ಕೂಡ ಆಗಿದೆ. ಒಂದು  ಇಂಡಿಪೆಂಡೆಂಟ್ ಮನೆ ಖರೀದಿಸಿದ್ದಾರೆ. ಅಪ್ಪ, ಅಮ್ಮ, ತಂಗಿ (ಮದುವೆ ಮಾಡಿಕೊಳ್ಳುವುದಿಲ್ಲವಂತೆ) ಎಲ್ಲರೂ ಸೇರಿ ಇರುವಂತಹ ಮನೆ. ಗ್ರಹ ಪವೇಶಕ್ಕೆ invitation ಕಳಿಸಿದ್ದಾರೆ. ಹೆಂಡತಿ ಕೂಡ ಕೆಲಸಕ್ಕೆ ಹೋಗುತ್ತಿದ್ದಾರೆ. ಆಗ ಮಗುವನ್ನು ಸಂಭಾಳಿಸುವ ಕೆಲಸ ಅವರ ತಂಗಿ ಮಾಡುತ್ತಾರಂತೆ. ಹಾಗೇ ಅಣ್ಣನ ಮಗ ಈಗ pre schooler. ಅರ್ಧ ದಿನ ಶಾಲೆ ಮುಗಿಸಿಕೊಂಡು ಇವರ ಮನೆಗೆ ಬರೋದು. ಸಂಜೆ ಅಪ್ಪ ಅಥವ ಅಮ್ಮ ಬಂದು ಕರೆದುಕೊಂಡು ಹೋಗೋದಂತೆ. ಅವರು (ಅಣ್ಣ) ಕೂಡ ಅಲ್ಲೇ ಹತ್ತಿರದಲ್ಲಿ ಮನೆ ಖರೀದಿಸಿದ್ದಾರಂತೆ.

ಹಾಗೆ ಇನ್ನೊಂದು ಬಿಟ್ಟಿ ಸಲಹೆ ಕೊಡಲು ಮಾಲತಿ ಅಕ್ಕ ಮರೀಲಿಲ್ಲ...ತಂಗಿ ಹೆಸರಲ್ಲಿ ಎಕೌಂಟ್ ತೆರೆದು ಅವಳ ಖರ್ಚಿಗೆ ಅಂತ  ಇಬ್ಬರೂ ಅಣ್ಣಂದಿರು ಸ್ವಲ್ಪ  ದುಡ್ಡು ಹಾಕ್ತಾ ಇದ್ದರೆ ಅವಳಿಗೂ ನೆಮ್ಮದಿಯಲ್ಲವಾ ಅಂತ'

????All's well that ends well....
:-)
ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.


August 5, 2012

ಬ್ಲಾಗ್ ಲೋಕದಲ್ಲಿ ನನ್ನ 4 ನೇ ವರ್ಷ; ಅಜೋಬಾ ಹೇಳಿದ ಕತೆಗಳ ಸರದಿ

ಬರೆಯಲು ಶುರು ಮಾಡಿ  4 ನೇ ವರ್ಷಕ್ಕೆ ಕಾಲಿಡುತ್ತಾ ಇದ್ದೇನೆ. ಹೀಗೆ ಬರೆಯುತ್ತೇನೆಂದು ಯಾವತ್ತೂ ಅಂದು ಕೊಂಡಿರಲಿಲ್ಲ. ಈಗಾಗಲೇ ಓದುಗರು ನನ್ನ ಬ್ಲಾಗ್ ಗೆ ಭೇಟಿ ನೀಡಿದ್ದ ಸಂಖ್ಯೆ 31,350 ದಾಟಿದೆ . ಯಾವತ್ತಿನ ಹಾಗೆ ಇದರ ಶ್ರೇಯಸ್ಸು thatskannada ದ ಶ್ಯಾಮ್ (ನನ್ನ ಮೊಟ್ಟ ಮೊದಲ ಕನ್ನಡ ಬರಹ ಇವರು ಪ್ರಕಟಿಸಿದ್ದು)  ರಘು ಅಪಾರ(ನನಗೆ ಬ್ಲಾಗ್ ಬರೆಯಲು ಪ್ರೆರೇಪಿಸಿದ್ದಕ್ಕೆ) ,ವಿಜಯಕರ್ನಾಟಕ,  ಅವಧಿ ( ನನ್ನ ಕೆಲವು ಬರಹಗಳನ್ನು ಅವರ e-zine ಗೆ ಹಾಕ್ಕೊಂಡಿದ್ದಕ್ಕೆ,  ಸುಶ್ರುತ ದೊಡ್ಡೇರಿ (g-buzz/google+ isi ದಕ್ಕೆ, ಬದರಿನಾಥ ಪಲವಳ್ಳಿ (ಫೆಸ್ ಬುಕ್) ,ನಿಲುಮೆ, ಕೆಂಡಸಂಪಿಗೆ, ಶ್ರೀದೇವಿ ಕಳಸದ್ ಇವರಿಗೆ ಹೋಗುತ್ತದೆ.
ನನಗಂತೂ ಆಶ್ಚರ್ಯ. average ತೆಗೆದ್ರೆ ವಾರಕ್ಕ್ಕೆ ಒಂದು ಬರಹ ಬರೆದಿದ್ದೇನೆ. Several people have mentioned about the variety of topics..ಕೆಲವರು 'ತುಂಬಾ ಚೆನ್ನಾಗಿ ಬರೀತೀರಿ, ಆದರೆ ಗಡಿಬಿಡಿಯಿಂದ ಬರೆಯುವ ಹಾಗೆ ಕಾಣುತ್ತೆ,  ಅಂದರೆ,there is a scope for elabaroting ಅಂತ ಅನಿಸಲ್ವ ಅಂತ ಒಬ್ಬರು, ನನ್ನ ಇಷ್ಟದ ಕನ್ನಡದ ಖ್ಯಾತ ಬರಹಗಾರರು ಹೀಗೆ  ಬರೆದಿದ್ದರು.....
Dear Malathi,
I read your article on Cinema in Avadhi. It is very interesting. You have written it from your heart. And most importantly there is no political correctness. However I felt there were too many incidents and experiences crammed into one article. There is a lot of content there for you to explore "slowly". 
best,

********
 ಆದರೆ i am a woman in hurry. ತಮ್ಮ. ತಂಗಿ ಅವರ ಮಕ್ಕಳ ಜತೆ ಮಾತು-ಕತೆ, ಫೋನ್, ಇ/ಮೇಲ್, ಚ್ಯಾಟ್, ಶ್ರೀಕಾಂತ ಹಾಗೂ ಮಾಲವಿಕಾ ನಿಹಾರಿಕಾ ರನ್ನು ಗೋಳು ಹೊಯ್ಯುವ ಹೊಸ ಹೊಸ ಉಪಾಯಗಳು, ನನ್ನ ಸ್ಪೆಶಲ್ email friends  (ವೇದಾ, ಜ್ಯೋತಿ, ಸಂಧ್ಯಾ, ನಾಗಮಣಿ ಮತ್ತು ಶ್ರೀವತ್ಸ ಜೋಶಿ) ನಮ್ಮದೊಂದು ಗ್ರೂಪ್ ...ದಿನಾ ಮೈಲ್ ವಿನಿಮಯ ವಾಗುತ್ತಿರುತ್ತೆ, ಇವರ ಜತೆ ಹಾಗೂ ಫೇಸ್ ಬುಕ್ ನಲ್ಲಿ ಪರಿಚಯ ಆದ ಸ್ನೇಹಿತ ಸ್ನೇಹಿತೆಯರ ಜತೆ ಎಸ್ ಎಮ್ ಎಸ್ ಮಾತು, ಮತ್ತು ಹೊರಗಿನ, ಕೆಲವೊಮ್ಮೆ ಆಫಿಸ್ ನ ಕೆಲಸಗಳು, ನನ್ನ ಓದು, ಸಿನಿಮಾ ವೀಕ್ಷಣೆ ಇವೆಲ್ಲರ ಮಧ್ಯೆ ನಾನೇನು explore  ಮಾಡಲಿ?ನನ್ನಂತೆಯೆ ನನ್ನ ಬ್ಲಾಗ್ touch and go. ಬಹಳಷ್ಟು ಜನರು ಬ್ಲಾಗ್ ನಲ್ಲಿ ಕಮೆಂಟ್ ಹಾಕದೆ ಮೈಲ್ ಗೆ ಪತ್ರ ಬರೆಯುತ್ತಾರೆ. ಹಲವಾರು ಬಾರಿ 'ಯಾಕೆ ಆ ಮೈಲ್ ಗಳನ್ನೆಲ್ಲ ಒಟ್ಟು ಮಾಡಿ ಅವರ ಹೆಸರನ್ನು ಹಾಕದೆ ಬ್ಲಾಗ್ ನಲ್ಲಿ ಹಾಕಬಾರದು ಅನ್ನಿಸಿದಿದ್ದೆ. ಮತ್ತೆ 'ಅಲ್ಲ ಎಲ್ಲರೂ ಓದಬೇಕೆಂದಿದ್ದರೆ ಅವರು ಪೋಸ್ಟ್ ಕೆಳಗಡೆ ಕಮೆಂಟ್ ಹಾಕುತ್ತಿದ್ದರು, may be they want to share only with me' ಅಂತ ಎನ್ನಿಸಿ. i thought i will respect their views'..


ನನ್ನ ಟ್ರಾಕರ್ ಮುಂಬೈನಿಂದ, ದೆಹಲಿಯಿಂದ, ಉಡುಪಿಯಿಂದ, ಚೆನ್ನೈನಿಂದ ಮತ್ತು ಒಬ್ಬರು ಲಂಡನ್ ನಿಂದ systematic ಆಗಿ ನನ್ನ ಮೊದಲ ಪೋಸ್ಟ್ ನಿಂದ ಓದುವುದದನ್ನು ಕಂಡಿದ್ದೇನೆ. ಕೊನೆಗೆ ಲಂಡನ್ ಹಾಗೂ ಮುಂಬೈನವರು ಚೆಂದದ ಮೈಲ್ ಹಾಕಿ ಪ್ರತಿಕ್ರಿಯಿಸಿದಾರೆ. i am so happy...

was i right ಪೋಸ್ಟ್ ಅತೀ ಹೆಚ್ಚಿನ ಪ್ರತಿಕ್ರಿಯೆ ಬಂದಿತ್ತು ಮೈಲ್ ನಲ್ಲಿ. ಅವನ್ನು ಖಂಡಿತ ಒಂದು ಪೋಸ್ಟ್ ರೂಪದಲ್ಲಿ ಹಾಕುವ ಅಂದುಕೊಂಡಿದ್ದೆ, ಹೆಚ್ಚಿನವರು ಕಮೆಂಟ್ ದೊಡ್ಡದಿರುತ್ತೆ ಅಂತ ಮೈಲ್ ಕಳುಹಿಸಿದ್ದರು..ಆದರೆ ನಾನು ತಂಗಿ ಜತೆ ಮಾತನಾಡುತ್ತ ಯಾವುದೇ ಲಹರಿಯಲ್ಲಿ ಸ್ಪ್ಯಾಂ ಸೆಲೆಕ್ಟ್ ಮಾಡಿ ಡೀಲೀಟ್ ಮಾಡುವುದನ್ನು ಬಿಟ್ಟು ನನ್ನ ಪೂರ್ತಿ ಇನ್ ಬಾಕ್ಸ್ ಕ್ಲೀನ್ ಮಾಡಿಬಿಟ್ಟಿದ್ದು ಅಲ್ಲದೇ, ಟ್ರಾಶ್ ನೂ ಕ್ಲೀನ್ ಮಾಡಿ ಬಿಟ್ಟೇ....:-)

ನನ್ನ ಓದುಗ ತಮ್ಮನ ಒಂದು ತಕರಾರಿದೆ....what yaar your blog is only about you, you and you..ಅವನಿಗೆ ಏನು ಉತ್ತರ ಹೇಳಬೇಕೆಂದು ನನಗೆ ತೋಚೇ ಇಲ್ಲ...

ನನ್ನ ಮಿತ್ರ ಖ್ಯಾತ ಬರಹಗಾರರು ನನ್ನ ಪೋಸ್ಟ್ ಒಂದಕ್ಕೆ ಬಂದ ಕಮೆಂಟ್ ಓದಿ ಒಂದು ಎಸ್ ಎಮ್ ಎಸ್ ಹೀಗೆ ಕಳುಹಿಸಿದ್ದರು : Malathi, I just have fans but you have devotees..ಅಂತ.:-) ಇದನ್ನು ಓದಿ ನಾನು ಎರಡು ದಿನ ಗಾಳಿಯಲ್ಲಿ ತೇಲಾಡಿದ್ದು ನಿಜ.

ಒಂದು ಮೋಜಿನ ವಿಷಯ ನಿಮ್ಮ ಜತೆ ಶೇರ್‍ ಮಾಡ್ಲೇಬೇಕು:
ನಾನು ಶ್ರೀಕಾಂತ 'ದ ಪ್ಯಾಕ್'  ಸಿನಿಮಾ ನೋಡಲು ಯವನಿಕಾ ಗೆ ಹೋಗಿದ್ವಿ. ನಮ್ಮ ಹಿಂಬದಿ ಕೂತ ಮಹಿಳೆ ನನ್ನ ಬೆನ್ನಿಗೆ ಹೊಡೆದು' ಮಾಲತಿ ಶೆಣೈ' ಅಲ್ವಾ ಅಂತ ಕೇಳಿದರು. ನಾನು ತಿರುಗಿ ಅವರನ್ನು ನೋಡಿದೆ. ನನಗೆ ಅವರನ್ನೆಲ್ಲೂ ನೋಡಿದ ನೆನಪು ಇರಲಿಲ್ಲ..ಅವರೆ ಮುಂದುವರೆದು -ಇವರು ಶ್ರೀಕಾಂತ..ಮತ್ತೆ ಎಲ್ಲಿ ಮಾಲವಿಕಾ ನಿಹಾರಿಕಾ ಅಂತ ಕೂಡ ಸೇರಿಸಿದರು. ನಾನು ಅವರನ್ನೆ ನೋಡುತ್ತಿದ್ದೆ, ಮತ್ತು ಅವರೇ ನಕ್ಕು ನನ್ನ ಹೆಸರು...***** ನಾನು *****ಬ್ಯಾಂಕ್ ಎಂಪ್ಲಾಯಿ, ಆಫಿಸ್ ಗೆ ಹೋದ ಕೂಡಲೇ ನನ್ನ ಮೊದಲ ಕೆಲಸ ನಿಮ್ಮ ಬ್ಲಾಗ್ ಓದುವುದು..ಟೀ ಬ್ರೇಕ್, ಆಫಿಸ್ ನಿಂದ ಮನೆಗೆ ಹೋಗುವ ಮುನ್ನ ಕೂಡ ಓದುತ್ತೇನೆ, ಚಿಕ್ಕದಾಗಿ ಚೊಕ್ಕದಾಗಿ ಇರುತ್ತೆ, ಓದಕ್ಕೆ ಚೆನ್ನಾಗಿರುತ್ತೆ, ಮತ್ತು ನಿಮ್ಮ ತರಹ ನನಗೂ ವಸುಧೇಂದ್ರರ ಬರಹಗಳು ಇಷ್ಟ' .ನಿಮ್ಮ ಫಾಮಿಲಿ ನನ್ನ ಫ್ಯಾಮಿಲಿ ತರಹ ನೇ ಆಗೋಗಿದೆ'...ಮತ್ತು ಅವರ ಮಗ ಸಾಫ್ಟ್ವೇರ್‍ ಇಂಜಿನಿಯರ್ ಅವರನ್ನೂ ಪರಿಚಯಮಾಡಿಸಿದರು..ನನಗಂತೂ ಸಿಕ್ಕಾಪಟ್ಟೆ ಮುಜುಗರ..ಅದರ ಮಧ್ಯೆ ನಮ್ಮ ರಾಯರ 'malathi shenoy -the famous blogger' ಅನ್ನುವ ಕೀಟಲೆ ಬೇರೆ...

But major chunk of my thanks goes to my family Srikanth- akka- Nimpu who provide me stuffs for my blog. ಮತ್ತೆ ಈಗ ಎಲ್ಲಾದರೂ ಹೊರಗೆ ಹೊರಟರೆ ಶ್ರೀಕಾಂತ, 'ಕ್ಯಾಮರಾ ತೆಗೆದುಕೋ , ನಿನ್ನ ಬ್ಲಾಗ್ ಗೆ ಏನಾದರೂ ಮೆಟಿರಿಯಲ್ ಸಿಗಬಹುದು ಎನ್ನುತ್ತಾರೆ..:-))

ಸರಿ ಸಾಕಷ್ಟು ಆಯಿತು ಅನ್ನಿಸುತ್ತೆ ನನ್ನ ಬಗ್ಗೆ ನಾನೆ ಹೇಳಿಕೊಳ್ಳುವುದು.....

ಈಗ ಮುಂದಿನ ಪೋಸ್ಟ್ ಓದಿ....

ನಾನಿ ಹೇಳಿದ ಕತೆ ಆದ ಮೇಲೆ ಈಗ ಅಜ್ಜ ಹೇಳಿದ ಕತೆಯ ಸರದಿ.(ಇದನ್ನು ಮೆಚ್ಚಿ ಹಲವಾರು ಮೈಲ್ ಗಳು ಬಂದಿವೆ)

ನಮ್ಮ ಅಜ್ಜನಿಗೆ ದೈವದತ್ತವಾದ baritone ದನಿ ಇತ್ತು. ಮೈಕ್ ಬೇಕಿರಲಿಲ್ಲ. ಮುಂಬೈನ ಭಿವಂಡಿಯ ಮನೆಯಲ್ಲಿ ಪ್ರತಿ ಬುಧವಾರ ಅಜ್ಜ ಮರಾಠಿ ಭಾಗವತ ಓದುತ್ತಿದ್ದರು. ಬಿಲ್ಡಿಂಗ್ ನ ಹೆಂಗಸರು  ಅಜ್ಜನ ವಾಚನ ಕೇಳಲು ಬರುತ್ತಿದ್ದರು. ನಾನಂತು ಬುಧವಾರ ಯಾವಾಗ ಬರುತ್ತದೆ ಎಂದು ಕಾಯುತ್ತಿದೆ. ಯಾಕೆಂದರೆ ಆ ದಿನ ಅಮ್ಮ ಮಧ್ಯಾಹ್ನ ನಾನಿಯ ಮನೆಗೆ ಬರುತ್ತಿದ್ದರು. ಸಂಜೆಗೆ ಚನಾ ಉಸ್ಲಿ ಮಾಡುತ್ತಿದ್ದಳು. ಹಿಂಗಿನ ಘ್ಹಂ ಪರಿಮಳ,,ಅದಲ್ಲದೆ ಹದಿನೈದು ದಿನಕೊಮ್ಮೆ ಅಮ್ಮ ಬಂದಾಗ ಕೆಂಡದ ಮೇಲೆ ಬದನೆಕಾಯಿ ಸುಟ್ಟು ಅದರ ಬಜ್ಜಿ. ರಾತ್ರಿ ನಾನು ಬಿಸಿ ಅನ್ನಕ್ಕೆ ಬಜ್ಜಿ ಮತ್ತು ಹಾಲು ಬೆರೆಸಿ ಊಟ ಮಾಡುತ್ತಿದ್ದೆ. ಪ್ರತಿದಿನಕ್ಕಿಂತ ಆ ದಿನ ರಾತ್ರಿ ಸ್ವಲ್ಪ ಜಾಸ್ತಿ ನೆ ಊಟ ಮಾಡಿ ಸುಮಾರು 8 ವರ್ಷಗಳಾಗುವ ತನಕ ನಾನು ಇವತ್ತು ನನಗೆ ಎರಡು ಹೊಟ್ಟೆ ಬಂದಿದೆ ಅದಕ್ಕೆ ಜಾಸ್ತಿ ಊಟ ಮಾಡುತ್ತೇನೆ ಅನ್ನುತ್ತಿದ್ದೆ.

ಸರಿ ಅಜ್ಜ ತಮ್ಮ ಗಡಸು ಕಂಠದಿಂದ ಭಾಗವತ, ಅಥವಾ ಕೃಷ್ಣನ ಬಾಲಲೀಲೆಗಳ ಕತೆಗಳನ್ನು ಹೇಳುವಾಗ ಅಲ್ಲಿ ಸೇರಿದ ಹೆಂಗಸರೆಲ್ಲ ತನ್ಮಯರಾಗಿ ಕೇಳುತ್ತಿದ್ದರು. ಅದರಲ್ಲಿ ತ್ರಾಜೆಡಿ ವಿಷಯಗಳೆಲ್ಲ ಬಂದಾಗ ಅಜ್ಜ ನ ದನಿಯ ಆರ್ದ್ರತೆಗೆ ಹೆಂಗಸರೆಲ್ಲ ಅಳುತ್ತ, ಸುರುಕ್-ಬುರುಕ್ ಅಂತ ಸಿಂಬಳ ತೆಗೆದು ಸೆರೆಗಿಗೆ ಒರೆಸುದು, ಅಜ್ಜ ನ ಕತಾ ವಾಚನ ಮುಗಿದ ಮೇಲೆ ಅಮ್ಮ ದೊನ್ನೆಯಲ್ಲಿ ಹಾಕಿ ಕೊಟ್ಟ ಉಸ್ಲಿ , ಕೆಲವರು ಅದನ್ನು ಅಲ್ಲೆ ತಿಂದು, ಕೆಲವರು ಸೆರಗಿನಲ್ಲಿ ಮುಚ್ಚಿ ಅದನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಆ ಮೇಲೆ 'ಜಾತೆ ಗ ಜಾನುಬಾಯಿ ಅಥವ ರುಕ್ಮಾಂಬಾಯಿ (ನನ್ನ ನಾನಿಗೆ ಎರಡು ಹೆಸರು ಜಾಹ್ನವಿ ಮತ್ತು ರುಕ್ಮಿಣಿದೇವಿ) ನನ್ನ ಅಜ್ಜ ಅವರನ್ನು ಜಾನಿ ಅಂತ ಕರೆದರೆ ಬಿಲ್ಡಿಂಗ್ ನ ಕೆಲವರು ಜಾನಿಬಾಯಿ, ಕೊಂಕಣಿಯವರೆಲ್ಲ ಜಾನೆಕಾ ಅಂತ, ನನ್ನ ಅಪ್ಪನ ಅಮ್ಮ (ಅಜ್ಜಿ) ಅವರನ್ನು ರುಕ್ಮಾಂಬಾಯಿ) ಎಂದು ಕರೆಯುತ್ತಿದ್ದರು.
ನನಗೆ ಸುಮಾರು ದೊಡ್ಡವಳಾಗುವತನಕ ಅಜ್ಜ ಕತೆ ಹೇಳಿದಾರೆ. ಕೆಲವು ರಾಮಾಯಾಣ ಮಹಾಭಾರತದ್ದದ್ದಾದರೆ ಕೆಲವು ಅವರದ್ದೆ ಕಲ್ಪಿತ  ಕತೆಗಳು.

ನನಗಿಷ್ಟವಾಗಿ ನಾನು ಹಲವಾರು ಬಾರಿ ಫರ್ಮಾಯಿಶ್ ಮಾಡಿ ಕೇಳಿದ  ಕತೆಗಳು:

ಕತೆ-1

ಅಕ್ಬರ್ ನ ಆಸ್ಥಾನದಲ್ಲಿ ಮಹಾನ್ ಗಾಯಕರು ತಾನ್ಸೇನ್ ಕೂಡ ಒಬ್ಬರು. ಒಂದು ಸಲ ಬಾದಶಾಹ್ ಅಕ್ಬರ್ ತನ್ನ ಮೊಮ್ಮ್ಕಕ್ಕಳೊಂದಿಗೆ ಆಟದಲ್ಲಿ ತೊಡಗಿದ್ದರಂತೆ. ಆಗ ತಾನ್ಸೇನ್ ಘಾಯಿ ಘಾಯಿ ಆಗಿ ಬಂದು ಏನೋ ವಿಷಯ ಹೇಳಿದರಂತೆ. ಅದಕ್ಕೆ ಅಕ್ಬರ್ ಅವರನ್ನು ಗದರಿಸಿ, 'ತಾನ್ಸೇನ್ ಹೇಳಿ ಕೇಳಿ ನೀವು ನನ್ನ ಆಸ್ಥಾನದ ಮಾಹಾನ್ ಗಾಯಕರು, ಹೇಳುವುದನ್ನು ಚಂದವಾಗಿ ರಾಗವಾಗಿ ಅರುಹಬೇಕು ತಿಳಿಯಿತೆ ಎಂದು ಹೇಳಿದರಂತೆ.
ಆಗ ತಾನ್ ಸೇನ್, ರಾಯರೆssss ಅಂತ ರಾಗವಾಗಿ ಸುಮ್ಮನಾದರಂತೆ
ಅಕ್ಬರ್ (ಅ) " ಹೇಳು ಸಮ್ರಾಟ್'
ತಾನ್ಸೇನ್ (ತಾ)' ರಾಯರೇssss ನಿಮ್ಮ
ಅ: ನಮ್ಮ?? ಏನು ನಮ್ಮ, ಹೇಳಿ
ತಾ: ರಾಯರೇsss ನಿಮ್ಮ ಕುದುರೆ...
ಅ: ನನ್ನ ಕುದುರೆ...ಹೌದು ದೇಶ ವಿದೇಶದಿಂದ ತಂದಿರೋದು...
ತಾ: ರಾಯರೇssss ನಿಮ್ಮ ಕುದುರೆ ಲಾಯಕೆ....
ಅ: ಇದೇನಿದು ತಾನ್ಸೇನ್? ಇದೊಳ್ಳೆ ಪ್ರಶ್ನೆ...ನನ್ನ ಕುದುರೆ ಲಾಯಕೆ?? ಅವು ಅರಬ್ಬಿ ಕುದುರೆಗಳು, ಗಾಳಿಗಿಂತ ವೇಗವಾಗಿ ಓಡುವ ಕುದುರೆ ಇಡೀ ಜಗತ್ತಿನ ನಾಲ್ಕೂ ದಿಕ್ಕಿನಲ್ಲಿ ಸಿಗಿವುದಿಲ್ಲ, ಅಂತಹ ಕುದುರೆಗಳಿಗೆ ನೀನು ಲಾಯಕೆ ಅಂತೆ ಕೇಳುವುದೆ?
ತಾ: ರಾಯರೇ ನಿಮ್ಮsssss ಕುದುರೆ ಲಾಯಕೆ ಬೆಂಕಿ
ಅ: ಏನು ಏನು? ಪುನ: ಹೇಳು..
ತಾ: ರಾಯರೇsss ನಿಮ್ಮ ssss ಕುದುರೆ ಲಾಯಕೆ ಬೆಂಕಿ ತಾಗಿದೆ'
ಅಕ್ಬರ್ ಆಳುಗಳನ್ನು ಬೇಗ ಬೇಗ ಕುದುರೆ ಲಾಯಕೆ ಕಳಿಸುವಷ್ಟರಲ್ಲಿ ಕುದುರೆಲಾಯಕ್ಕೆ ಬೆಂಕಿ ತಾಗಿ ಕರಕಲಾಗಿತ್ತು...
:-)

ಕತೆ-2

ಇದು ಅಕ್ಬರ್na ಆಸ್ಥಾನದಲ್ಲಿದ್ದ  ಬೀರಬಲ್ಲನ ಕತೆ ..ವಿಥ್ ಕೊಂಕಣಿ ಟ್ವಿಸ್ಟ್
ಆಸ್ಥಾನದ ಪಂಡಿತ ಮಹಾಶಯರು ಒಂದು ಸಲ ಅಕ್ಬರ್ ಬಾದಶಾಹರು ಬೀರಬಲ್ಲನಿಗೆ ಹೇಳಿ ಕಳುಹಿಸಿದ್ದಾರೆಂದು, ಹೇಳಲು ಬಂದಿದ್ದರು. ಪಂಡಿತರು ಅವರ ಮನೆ ತಲುಪಿದಾಗ ಬೀರಬಲ್ಲ ಸ್ನಾನ ಮಾಡುತ್ತಿದ್ದರು
"ಏನಿದು ಈ ಹೊತ್ತಿನಲ್ಲಿ ಸ್ನಾನ?'
ಏನಿಲ್ಲ ಮನುಷ್ಯರ ಹೊಲಸು (ಮಲ) ತುಳಿದಿದ್ದೆ, ಅದಕ್ಕೆ...
ಬೀರಬಲ್ಲನ ಮೇಲೆ ಹೊಟ್ಟೆಕಿಚ್ಚು ಪಡುತ್ತಿದ್ದ ಪಂಡಿತರು, 'ಛೆ, ಮಲ ತುಳಿದರೆ ಅಷ್ಟು ಭಾಗ ಕಾಲು ಕತ್ತರಿಸಬೇಕು' ಅಂತ ಸಲಹೆ ಕೊಟ್ಟು,ಗಹಗಹಿಸಿ ನಕ್ಕು,  ಅಕ್ಬರ್ ಮಹಾಶಯರ ನಿರೋಪವನ್ನು ಅವರು ಅಲ್ಲಿಂದ ನಿರ್ಗಮಿಸಿದರು
ಬೀರಬಲ್ಲನಿಗೆ ಸಿಟ್ಟು ಬಂದು ತಡಿ ಮಾಡುತ್ತೇನೆ ಈ ಪಂಡಿತನಿಗೆ ಅಂತ ಮನಸ್ಸಲ್ಲೆ ಲೆಕ್ಕ ಹಾಕಿದನು. ಪಂಡಿತರಿಗೆ ಕೆಸುವಿನ ಎಲೆ ಪ್ತತ್ರೋಡೆ ಇಷ್ಟ ಅಂತ ಈಡಿ ರಾಜ್ಯಕ್ಕೆ ಗೊತ್ತಿರುವ ವಿಷಯ. ಕೆಸುವಿನ ಎಲೆ ಅಂದ ಕೂಡಲೆ ಪಂಡಿತರ ಬಾಯಲ್ಲಿ ನೀರುರೂವುದು.
ಸರಿ ಮರುದಿನ ಬೀರಬಲ್ಲ ಮನೆಯ ಹಿಂಬದಿ ಜಾಗದಲ್ಲಿ ದೊಡ್ಡ ಗುಂಡಿ ತೋಡಿ, ಆ ಕೇರಿಯವರಿಗೆಲ್ಲ ಬಹಿರ್ದೆಸೆಗೆ ಎಲ್ಲರೂ ಮನೆಯ ಹಿಂಬದಿಯ ಗುಂಡಿಯನ್ನು ಬಳಸಬೇಕು ಎಂದು ಫರ್ಮಾನು ಹೊರಡಿಸಿದನು.ಎಲ್ಲರೂ ಖುಶಿಯಿಂದ ಅವರ ಗುಂಡಿಯನ್ನು ಬಳಸಿದರು. ಹದಿನೈದು ದಿನದಲ್ಲಿ ಗುಂಡಿ ತುಂಬಿತು. ಆಳುಗಳನ್ನು ಕರೆತಂದು ಬೀರಬಲ್ಲ ಆ ಗುಂಡಿಯ ಮೇಲೆ ತೆಳುವಾದ ಮಣ್ಣನ್ನು ಹರಡಿಸಿದ. ಗುಂಡಿಯ ಮಧ್ಯದಲ್ಲಿ ಕೆಲವು ಕೆಸುವಿನ ಎಲೆಯ  ಗೆಡ್ಡೆಗಳನ್ನು ಬಿಸಾಕಿದ. ಕೆಲವೇ ದಿನಗಲಲ್ಲೇ ಕಸುವಿನ ಎಲೆಗಳು ಆದವು, ಒಳ್ಲೆ ಗೊಬ್ಬರದಿಂದ ರಾಕ್ಷಸ ಗಾತ್ರದ ಕೆಸುವಿನ ಎಲೆಗಳು ಹುಟ್ಟಿಕೊಂಡವು. ಎಲ್ಲರ ಬಾಯಲ್ಲೂ ಈ ಕೆಸುವಿನ ಎಲೆಯ ಮಾತೇ...ಈ ವಿಷಯ ಪಂಡಿತರ ಕಿವಿಗೆ ಬೀಳಲು ಹೆಚ್ಚು ಹೊತ್ತು ಆಗಲಿಲ್ಲ. ಎಲಾ ಕಳ್ಳ ಬೀರಬಲ್ಲ ನನಗೆ ಹೇಳಲೇ ಇಲ್ಲ. ಇವತ್ತು ಹೇಗಾದರಾಗಲೀ ಏನಾದರು ನೆವ ಮಾಡಿ ಎಲೆಗಳನ್ನು ಪಡೆಯಬೇಕು. ಆಸ್ಥಾನದ ಕೆಲ್ಸಕ್ಕೆ ಹೋಗುವ ಮುನ್ನ ಎಲೆಗಳನ್ನು ತಂದು ಕೊಟ್ಟರೆ, ಹೆಂಡತಿ ಮಧ್ಯಾಹ್ನಕ್ಕೆ ಪತ್ರೋಡೆ ಮಾಡಿಡುತ್ತಾಳೆ ಅಂತ ಕನಸು ಕಾಣುತ್ತ ಬೀರಬಲ್ಲನ ಮನೆ ತಲುಪಿದರು ಪಂಡಿತ ಮಹಾಶಯರು.
ಬೀರಬಲ್ಲನ ಮನೆಯಲ್ಲು ಬೀರಬಲ್ಲ ಸ್ನಾನ ಮುಗಿಸಿ ಪೂಜೆಗೆ ಕುಳಿತಿದ್ದರು. ಅವನು ಪಂಡಿತರಗೆ 'ನೀವೆ ಎಷ್ಟು ಬೇಕೋ ಅಷ್ಟು ಎಲೆಗಳನ್ನು ಕೊಯ್ದುಕೊಳ್ಳಿ ಅಂದನು. ಮನೆಹಿಂದುಗಡೆ ಹೋಗಿ ನೋಡಿದರೆ ದೊಡ್ಡ ಗಾತ್ರದ ಕೆಸುವಿನ ಎಲೆಗಳು ಪಂಡಿತರನ್ನು ಅಣಕಿಸುತ್ತಿದ್ದವು. ಬೇಗೆ ಬೇಗನೆ ಮುಂಡನ್ನು ಮೇಲಕ್ಕೆ ಕಟ್ಟಿ ನಿಧಾನಕ್ಕೆ ಗುಂಡಿಯಲ್ಲಿ ಇಳಿದರೆ, ಪಂಡಿತರ ಸ್ವಲ್ಪ ದೊಡ್ಡದೇ ಎನ್ನುವ ಗಾತ್ರ ಪೂರ್ತಿ ಮಲದಲ್ಲಿ ಮುಳುಗಿ ಹೋಯಿತು. ಅಲ್ಲಿಂದಲೆ ಪಂಡಿತರು ಬೊಬ್ಬೆ ಹೊಡೆಯಲು ಶುರು ಮಾಡಿದರೆ, ಬೀರಬಲ್ಲ ಮಾತ್ರ ಕೂಲ್ ಆಗಿ 'ನಿಮ್ಮನ್ನು ಎಲ್ಲಿಯವರೆಗೆ ಕತ್ತರಿಸಬೇಕು ಈಗ, ಪಂಡಿತರೇ'? ಅಂತ ಕೇಳಿದ....

ನನ್ನ ಓದುಗ ಮಿತ್ರರಿಗೆಲ್ಲ ಹೃತ್ಪೂರ್ವಕ ಧನ್ಯವಾದಗಳು ಮತ್ತು Happy Friendship Day...

True friendship is like sound health; the value of it is seldom known until it is lost.” Charles Caleb Colton

:-)