Showing posts with label ಅಜ್ಜ ಹೇಳಿದ ಕತೆಗಳು. Show all posts
Showing posts with label ಅಜ್ಜ ಹೇಳಿದ ಕತೆಗಳು. Show all posts

August 5, 2012

ಬ್ಲಾಗ್ ಲೋಕದಲ್ಲಿ ನನ್ನ 4 ನೇ ವರ್ಷ; ಅಜೋಬಾ ಹೇಳಿದ ಕತೆಗಳ ಸರದಿ

ಬರೆಯಲು ಶುರು ಮಾಡಿ  4 ನೇ ವರ್ಷಕ್ಕೆ ಕಾಲಿಡುತ್ತಾ ಇದ್ದೇನೆ. ಹೀಗೆ ಬರೆಯುತ್ತೇನೆಂದು ಯಾವತ್ತೂ ಅಂದು ಕೊಂಡಿರಲಿಲ್ಲ. ಈಗಾಗಲೇ ಓದುಗರು ನನ್ನ ಬ್ಲಾಗ್ ಗೆ ಭೇಟಿ ನೀಡಿದ್ದ ಸಂಖ್ಯೆ 31,350 ದಾಟಿದೆ . ಯಾವತ್ತಿನ ಹಾಗೆ ಇದರ ಶ್ರೇಯಸ್ಸು thatskannada ದ ಶ್ಯಾಮ್ (ನನ್ನ ಮೊಟ್ಟ ಮೊದಲ ಕನ್ನಡ ಬರಹ ಇವರು ಪ್ರಕಟಿಸಿದ್ದು)  ರಘು ಅಪಾರ(ನನಗೆ ಬ್ಲಾಗ್ ಬರೆಯಲು ಪ್ರೆರೇಪಿಸಿದ್ದಕ್ಕೆ) ,ವಿಜಯಕರ್ನಾಟಕ,  ಅವಧಿ ( ನನ್ನ ಕೆಲವು ಬರಹಗಳನ್ನು ಅವರ e-zine ಗೆ ಹಾಕ್ಕೊಂಡಿದ್ದಕ್ಕೆ,  ಸುಶ್ರುತ ದೊಡ್ಡೇರಿ (g-buzz/google+ isi ದಕ್ಕೆ, ಬದರಿನಾಥ ಪಲವಳ್ಳಿ (ಫೆಸ್ ಬುಕ್) ,ನಿಲುಮೆ, ಕೆಂಡಸಂಪಿಗೆ, ಶ್ರೀದೇವಿ ಕಳಸದ್ ಇವರಿಗೆ ಹೋಗುತ್ತದೆ.
ನನಗಂತೂ ಆಶ್ಚರ್ಯ. average ತೆಗೆದ್ರೆ ವಾರಕ್ಕ್ಕೆ ಒಂದು ಬರಹ ಬರೆದಿದ್ದೇನೆ. Several people have mentioned about the variety of topics..ಕೆಲವರು 'ತುಂಬಾ ಚೆನ್ನಾಗಿ ಬರೀತೀರಿ, ಆದರೆ ಗಡಿಬಿಡಿಯಿಂದ ಬರೆಯುವ ಹಾಗೆ ಕಾಣುತ್ತೆ,  ಅಂದರೆ,there is a scope for elabaroting ಅಂತ ಅನಿಸಲ್ವ ಅಂತ ಒಬ್ಬರು, ನನ್ನ ಇಷ್ಟದ ಕನ್ನಡದ ಖ್ಯಾತ ಬರಹಗಾರರು ಹೀಗೆ  ಬರೆದಿದ್ದರು.....
Dear Malathi,
I read your article on Cinema in Avadhi. It is very interesting. You have written it from your heart. And most importantly there is no political correctness. However I felt there were too many incidents and experiences crammed into one article. There is a lot of content there for you to explore "slowly". 
best,

********
 ಆದರೆ i am a woman in hurry. ತಮ್ಮ. ತಂಗಿ ಅವರ ಮಕ್ಕಳ ಜತೆ ಮಾತು-ಕತೆ, ಫೋನ್, ಇ/ಮೇಲ್, ಚ್ಯಾಟ್, ಶ್ರೀಕಾಂತ ಹಾಗೂ ಮಾಲವಿಕಾ ನಿಹಾರಿಕಾ ರನ್ನು ಗೋಳು ಹೊಯ್ಯುವ ಹೊಸ ಹೊಸ ಉಪಾಯಗಳು, ನನ್ನ ಸ್ಪೆಶಲ್ email friends  (ವೇದಾ, ಜ್ಯೋತಿ, ಸಂಧ್ಯಾ, ನಾಗಮಣಿ ಮತ್ತು ಶ್ರೀವತ್ಸ ಜೋಶಿ) ನಮ್ಮದೊಂದು ಗ್ರೂಪ್ ...ದಿನಾ ಮೈಲ್ ವಿನಿಮಯ ವಾಗುತ್ತಿರುತ್ತೆ, ಇವರ ಜತೆ ಹಾಗೂ ಫೇಸ್ ಬುಕ್ ನಲ್ಲಿ ಪರಿಚಯ ಆದ ಸ್ನೇಹಿತ ಸ್ನೇಹಿತೆಯರ ಜತೆ ಎಸ್ ಎಮ್ ಎಸ್ ಮಾತು, ಮತ್ತು ಹೊರಗಿನ, ಕೆಲವೊಮ್ಮೆ ಆಫಿಸ್ ನ ಕೆಲಸಗಳು, ನನ್ನ ಓದು, ಸಿನಿಮಾ ವೀಕ್ಷಣೆ ಇವೆಲ್ಲರ ಮಧ್ಯೆ ನಾನೇನು explore  ಮಾಡಲಿ?ನನ್ನಂತೆಯೆ ನನ್ನ ಬ್ಲಾಗ್ touch and go. ಬಹಳಷ್ಟು ಜನರು ಬ್ಲಾಗ್ ನಲ್ಲಿ ಕಮೆಂಟ್ ಹಾಕದೆ ಮೈಲ್ ಗೆ ಪತ್ರ ಬರೆಯುತ್ತಾರೆ. ಹಲವಾರು ಬಾರಿ 'ಯಾಕೆ ಆ ಮೈಲ್ ಗಳನ್ನೆಲ್ಲ ಒಟ್ಟು ಮಾಡಿ ಅವರ ಹೆಸರನ್ನು ಹಾಕದೆ ಬ್ಲಾಗ್ ನಲ್ಲಿ ಹಾಕಬಾರದು ಅನ್ನಿಸಿದಿದ್ದೆ. ಮತ್ತೆ 'ಅಲ್ಲ ಎಲ್ಲರೂ ಓದಬೇಕೆಂದಿದ್ದರೆ ಅವರು ಪೋಸ್ಟ್ ಕೆಳಗಡೆ ಕಮೆಂಟ್ ಹಾಕುತ್ತಿದ್ದರು, may be they want to share only with me' ಅಂತ ಎನ್ನಿಸಿ. i thought i will respect their views'..


ನನ್ನ ಟ್ರಾಕರ್ ಮುಂಬೈನಿಂದ, ದೆಹಲಿಯಿಂದ, ಉಡುಪಿಯಿಂದ, ಚೆನ್ನೈನಿಂದ ಮತ್ತು ಒಬ್ಬರು ಲಂಡನ್ ನಿಂದ systematic ಆಗಿ ನನ್ನ ಮೊದಲ ಪೋಸ್ಟ್ ನಿಂದ ಓದುವುದದನ್ನು ಕಂಡಿದ್ದೇನೆ. ಕೊನೆಗೆ ಲಂಡನ್ ಹಾಗೂ ಮುಂಬೈನವರು ಚೆಂದದ ಮೈಲ್ ಹಾಕಿ ಪ್ರತಿಕ್ರಿಯಿಸಿದಾರೆ. i am so happy...

was i right ಪೋಸ್ಟ್ ಅತೀ ಹೆಚ್ಚಿನ ಪ್ರತಿಕ್ರಿಯೆ ಬಂದಿತ್ತು ಮೈಲ್ ನಲ್ಲಿ. ಅವನ್ನು ಖಂಡಿತ ಒಂದು ಪೋಸ್ಟ್ ರೂಪದಲ್ಲಿ ಹಾಕುವ ಅಂದುಕೊಂಡಿದ್ದೆ, ಹೆಚ್ಚಿನವರು ಕಮೆಂಟ್ ದೊಡ್ಡದಿರುತ್ತೆ ಅಂತ ಮೈಲ್ ಕಳುಹಿಸಿದ್ದರು..ಆದರೆ ನಾನು ತಂಗಿ ಜತೆ ಮಾತನಾಡುತ್ತ ಯಾವುದೇ ಲಹರಿಯಲ್ಲಿ ಸ್ಪ್ಯಾಂ ಸೆಲೆಕ್ಟ್ ಮಾಡಿ ಡೀಲೀಟ್ ಮಾಡುವುದನ್ನು ಬಿಟ್ಟು ನನ್ನ ಪೂರ್ತಿ ಇನ್ ಬಾಕ್ಸ್ ಕ್ಲೀನ್ ಮಾಡಿಬಿಟ್ಟಿದ್ದು ಅಲ್ಲದೇ, ಟ್ರಾಶ್ ನೂ ಕ್ಲೀನ್ ಮಾಡಿ ಬಿಟ್ಟೇ....:-)

ನನ್ನ ಓದುಗ ತಮ್ಮನ ಒಂದು ತಕರಾರಿದೆ....what yaar your blog is only about you, you and you..ಅವನಿಗೆ ಏನು ಉತ್ತರ ಹೇಳಬೇಕೆಂದು ನನಗೆ ತೋಚೇ ಇಲ್ಲ...

ನನ್ನ ಮಿತ್ರ ಖ್ಯಾತ ಬರಹಗಾರರು ನನ್ನ ಪೋಸ್ಟ್ ಒಂದಕ್ಕೆ ಬಂದ ಕಮೆಂಟ್ ಓದಿ ಒಂದು ಎಸ್ ಎಮ್ ಎಸ್ ಹೀಗೆ ಕಳುಹಿಸಿದ್ದರು : Malathi, I just have fans but you have devotees..ಅಂತ.:-) ಇದನ್ನು ಓದಿ ನಾನು ಎರಡು ದಿನ ಗಾಳಿಯಲ್ಲಿ ತೇಲಾಡಿದ್ದು ನಿಜ.

ಒಂದು ಮೋಜಿನ ವಿಷಯ ನಿಮ್ಮ ಜತೆ ಶೇರ್‍ ಮಾಡ್ಲೇಬೇಕು:
ನಾನು ಶ್ರೀಕಾಂತ 'ದ ಪ್ಯಾಕ್'  ಸಿನಿಮಾ ನೋಡಲು ಯವನಿಕಾ ಗೆ ಹೋಗಿದ್ವಿ. ನಮ್ಮ ಹಿಂಬದಿ ಕೂತ ಮಹಿಳೆ ನನ್ನ ಬೆನ್ನಿಗೆ ಹೊಡೆದು' ಮಾಲತಿ ಶೆಣೈ' ಅಲ್ವಾ ಅಂತ ಕೇಳಿದರು. ನಾನು ತಿರುಗಿ ಅವರನ್ನು ನೋಡಿದೆ. ನನಗೆ ಅವರನ್ನೆಲ್ಲೂ ನೋಡಿದ ನೆನಪು ಇರಲಿಲ್ಲ..ಅವರೆ ಮುಂದುವರೆದು -ಇವರು ಶ್ರೀಕಾಂತ..ಮತ್ತೆ ಎಲ್ಲಿ ಮಾಲವಿಕಾ ನಿಹಾರಿಕಾ ಅಂತ ಕೂಡ ಸೇರಿಸಿದರು. ನಾನು ಅವರನ್ನೆ ನೋಡುತ್ತಿದ್ದೆ, ಮತ್ತು ಅವರೇ ನಕ್ಕು ನನ್ನ ಹೆಸರು...***** ನಾನು *****ಬ್ಯಾಂಕ್ ಎಂಪ್ಲಾಯಿ, ಆಫಿಸ್ ಗೆ ಹೋದ ಕೂಡಲೇ ನನ್ನ ಮೊದಲ ಕೆಲಸ ನಿಮ್ಮ ಬ್ಲಾಗ್ ಓದುವುದು..ಟೀ ಬ್ರೇಕ್, ಆಫಿಸ್ ನಿಂದ ಮನೆಗೆ ಹೋಗುವ ಮುನ್ನ ಕೂಡ ಓದುತ್ತೇನೆ, ಚಿಕ್ಕದಾಗಿ ಚೊಕ್ಕದಾಗಿ ಇರುತ್ತೆ, ಓದಕ್ಕೆ ಚೆನ್ನಾಗಿರುತ್ತೆ, ಮತ್ತು ನಿಮ್ಮ ತರಹ ನನಗೂ ವಸುಧೇಂದ್ರರ ಬರಹಗಳು ಇಷ್ಟ' .ನಿಮ್ಮ ಫಾಮಿಲಿ ನನ್ನ ಫ್ಯಾಮಿಲಿ ತರಹ ನೇ ಆಗೋಗಿದೆ'...ಮತ್ತು ಅವರ ಮಗ ಸಾಫ್ಟ್ವೇರ್‍ ಇಂಜಿನಿಯರ್ ಅವರನ್ನೂ ಪರಿಚಯಮಾಡಿಸಿದರು..ನನಗಂತೂ ಸಿಕ್ಕಾಪಟ್ಟೆ ಮುಜುಗರ..ಅದರ ಮಧ್ಯೆ ನಮ್ಮ ರಾಯರ 'malathi shenoy -the famous blogger' ಅನ್ನುವ ಕೀಟಲೆ ಬೇರೆ...

But major chunk of my thanks goes to my family Srikanth- akka- Nimpu who provide me stuffs for my blog. ಮತ್ತೆ ಈಗ ಎಲ್ಲಾದರೂ ಹೊರಗೆ ಹೊರಟರೆ ಶ್ರೀಕಾಂತ, 'ಕ್ಯಾಮರಾ ತೆಗೆದುಕೋ , ನಿನ್ನ ಬ್ಲಾಗ್ ಗೆ ಏನಾದರೂ ಮೆಟಿರಿಯಲ್ ಸಿಗಬಹುದು ಎನ್ನುತ್ತಾರೆ..:-))

ಸರಿ ಸಾಕಷ್ಟು ಆಯಿತು ಅನ್ನಿಸುತ್ತೆ ನನ್ನ ಬಗ್ಗೆ ನಾನೆ ಹೇಳಿಕೊಳ್ಳುವುದು.....

ಈಗ ಮುಂದಿನ ಪೋಸ್ಟ್ ಓದಿ....

ನಾನಿ ಹೇಳಿದ ಕತೆ ಆದ ಮೇಲೆ ಈಗ ಅಜ್ಜ ಹೇಳಿದ ಕತೆಯ ಸರದಿ.(ಇದನ್ನು ಮೆಚ್ಚಿ ಹಲವಾರು ಮೈಲ್ ಗಳು ಬಂದಿವೆ)

ನಮ್ಮ ಅಜ್ಜನಿಗೆ ದೈವದತ್ತವಾದ baritone ದನಿ ಇತ್ತು. ಮೈಕ್ ಬೇಕಿರಲಿಲ್ಲ. ಮುಂಬೈನ ಭಿವಂಡಿಯ ಮನೆಯಲ್ಲಿ ಪ್ರತಿ ಬುಧವಾರ ಅಜ್ಜ ಮರಾಠಿ ಭಾಗವತ ಓದುತ್ತಿದ್ದರು. ಬಿಲ್ಡಿಂಗ್ ನ ಹೆಂಗಸರು  ಅಜ್ಜನ ವಾಚನ ಕೇಳಲು ಬರುತ್ತಿದ್ದರು. ನಾನಂತು ಬುಧವಾರ ಯಾವಾಗ ಬರುತ್ತದೆ ಎಂದು ಕಾಯುತ್ತಿದೆ. ಯಾಕೆಂದರೆ ಆ ದಿನ ಅಮ್ಮ ಮಧ್ಯಾಹ್ನ ನಾನಿಯ ಮನೆಗೆ ಬರುತ್ತಿದ್ದರು. ಸಂಜೆಗೆ ಚನಾ ಉಸ್ಲಿ ಮಾಡುತ್ತಿದ್ದಳು. ಹಿಂಗಿನ ಘ್ಹಂ ಪರಿಮಳ,,ಅದಲ್ಲದೆ ಹದಿನೈದು ದಿನಕೊಮ್ಮೆ ಅಮ್ಮ ಬಂದಾಗ ಕೆಂಡದ ಮೇಲೆ ಬದನೆಕಾಯಿ ಸುಟ್ಟು ಅದರ ಬಜ್ಜಿ. ರಾತ್ರಿ ನಾನು ಬಿಸಿ ಅನ್ನಕ್ಕೆ ಬಜ್ಜಿ ಮತ್ತು ಹಾಲು ಬೆರೆಸಿ ಊಟ ಮಾಡುತ್ತಿದ್ದೆ. ಪ್ರತಿದಿನಕ್ಕಿಂತ ಆ ದಿನ ರಾತ್ರಿ ಸ್ವಲ್ಪ ಜಾಸ್ತಿ ನೆ ಊಟ ಮಾಡಿ ಸುಮಾರು 8 ವರ್ಷಗಳಾಗುವ ತನಕ ನಾನು ಇವತ್ತು ನನಗೆ ಎರಡು ಹೊಟ್ಟೆ ಬಂದಿದೆ ಅದಕ್ಕೆ ಜಾಸ್ತಿ ಊಟ ಮಾಡುತ್ತೇನೆ ಅನ್ನುತ್ತಿದ್ದೆ.

ಸರಿ ಅಜ್ಜ ತಮ್ಮ ಗಡಸು ಕಂಠದಿಂದ ಭಾಗವತ, ಅಥವಾ ಕೃಷ್ಣನ ಬಾಲಲೀಲೆಗಳ ಕತೆಗಳನ್ನು ಹೇಳುವಾಗ ಅಲ್ಲಿ ಸೇರಿದ ಹೆಂಗಸರೆಲ್ಲ ತನ್ಮಯರಾಗಿ ಕೇಳುತ್ತಿದ್ದರು. ಅದರಲ್ಲಿ ತ್ರಾಜೆಡಿ ವಿಷಯಗಳೆಲ್ಲ ಬಂದಾಗ ಅಜ್ಜ ನ ದನಿಯ ಆರ್ದ್ರತೆಗೆ ಹೆಂಗಸರೆಲ್ಲ ಅಳುತ್ತ, ಸುರುಕ್-ಬುರುಕ್ ಅಂತ ಸಿಂಬಳ ತೆಗೆದು ಸೆರೆಗಿಗೆ ಒರೆಸುದು, ಅಜ್ಜ ನ ಕತಾ ವಾಚನ ಮುಗಿದ ಮೇಲೆ ಅಮ್ಮ ದೊನ್ನೆಯಲ್ಲಿ ಹಾಕಿ ಕೊಟ್ಟ ಉಸ್ಲಿ , ಕೆಲವರು ಅದನ್ನು ಅಲ್ಲೆ ತಿಂದು, ಕೆಲವರು ಸೆರಗಿನಲ್ಲಿ ಮುಚ್ಚಿ ಅದನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಆ ಮೇಲೆ 'ಜಾತೆ ಗ ಜಾನುಬಾಯಿ ಅಥವ ರುಕ್ಮಾಂಬಾಯಿ (ನನ್ನ ನಾನಿಗೆ ಎರಡು ಹೆಸರು ಜಾಹ್ನವಿ ಮತ್ತು ರುಕ್ಮಿಣಿದೇವಿ) ನನ್ನ ಅಜ್ಜ ಅವರನ್ನು ಜಾನಿ ಅಂತ ಕರೆದರೆ ಬಿಲ್ಡಿಂಗ್ ನ ಕೆಲವರು ಜಾನಿಬಾಯಿ, ಕೊಂಕಣಿಯವರೆಲ್ಲ ಜಾನೆಕಾ ಅಂತ, ನನ್ನ ಅಪ್ಪನ ಅಮ್ಮ (ಅಜ್ಜಿ) ಅವರನ್ನು ರುಕ್ಮಾಂಬಾಯಿ) ಎಂದು ಕರೆಯುತ್ತಿದ್ದರು.
ನನಗೆ ಸುಮಾರು ದೊಡ್ಡವಳಾಗುವತನಕ ಅಜ್ಜ ಕತೆ ಹೇಳಿದಾರೆ. ಕೆಲವು ರಾಮಾಯಾಣ ಮಹಾಭಾರತದ್ದದ್ದಾದರೆ ಕೆಲವು ಅವರದ್ದೆ ಕಲ್ಪಿತ  ಕತೆಗಳು.

ನನಗಿಷ್ಟವಾಗಿ ನಾನು ಹಲವಾರು ಬಾರಿ ಫರ್ಮಾಯಿಶ್ ಮಾಡಿ ಕೇಳಿದ  ಕತೆಗಳು:

ಕತೆ-1

ಅಕ್ಬರ್ ನ ಆಸ್ಥಾನದಲ್ಲಿ ಮಹಾನ್ ಗಾಯಕರು ತಾನ್ಸೇನ್ ಕೂಡ ಒಬ್ಬರು. ಒಂದು ಸಲ ಬಾದಶಾಹ್ ಅಕ್ಬರ್ ತನ್ನ ಮೊಮ್ಮ್ಕಕ್ಕಳೊಂದಿಗೆ ಆಟದಲ್ಲಿ ತೊಡಗಿದ್ದರಂತೆ. ಆಗ ತಾನ್ಸೇನ್ ಘಾಯಿ ಘಾಯಿ ಆಗಿ ಬಂದು ಏನೋ ವಿಷಯ ಹೇಳಿದರಂತೆ. ಅದಕ್ಕೆ ಅಕ್ಬರ್ ಅವರನ್ನು ಗದರಿಸಿ, 'ತಾನ್ಸೇನ್ ಹೇಳಿ ಕೇಳಿ ನೀವು ನನ್ನ ಆಸ್ಥಾನದ ಮಾಹಾನ್ ಗಾಯಕರು, ಹೇಳುವುದನ್ನು ಚಂದವಾಗಿ ರಾಗವಾಗಿ ಅರುಹಬೇಕು ತಿಳಿಯಿತೆ ಎಂದು ಹೇಳಿದರಂತೆ.
ಆಗ ತಾನ್ ಸೇನ್, ರಾಯರೆssss ಅಂತ ರಾಗವಾಗಿ ಸುಮ್ಮನಾದರಂತೆ
ಅಕ್ಬರ್ (ಅ) " ಹೇಳು ಸಮ್ರಾಟ್'
ತಾನ್ಸೇನ್ (ತಾ)' ರಾಯರೇssss ನಿಮ್ಮ
ಅ: ನಮ್ಮ?? ಏನು ನಮ್ಮ, ಹೇಳಿ
ತಾ: ರಾಯರೇsss ನಿಮ್ಮ ಕುದುರೆ...
ಅ: ನನ್ನ ಕುದುರೆ...ಹೌದು ದೇಶ ವಿದೇಶದಿಂದ ತಂದಿರೋದು...
ತಾ: ರಾಯರೇssss ನಿಮ್ಮ ಕುದುರೆ ಲಾಯಕೆ....
ಅ: ಇದೇನಿದು ತಾನ್ಸೇನ್? ಇದೊಳ್ಳೆ ಪ್ರಶ್ನೆ...ನನ್ನ ಕುದುರೆ ಲಾಯಕೆ?? ಅವು ಅರಬ್ಬಿ ಕುದುರೆಗಳು, ಗಾಳಿಗಿಂತ ವೇಗವಾಗಿ ಓಡುವ ಕುದುರೆ ಇಡೀ ಜಗತ್ತಿನ ನಾಲ್ಕೂ ದಿಕ್ಕಿನಲ್ಲಿ ಸಿಗಿವುದಿಲ್ಲ, ಅಂತಹ ಕುದುರೆಗಳಿಗೆ ನೀನು ಲಾಯಕೆ ಅಂತೆ ಕೇಳುವುದೆ?
ತಾ: ರಾಯರೇ ನಿಮ್ಮsssss ಕುದುರೆ ಲಾಯಕೆ ಬೆಂಕಿ
ಅ: ಏನು ಏನು? ಪುನ: ಹೇಳು..
ತಾ: ರಾಯರೇsss ನಿಮ್ಮ ssss ಕುದುರೆ ಲಾಯಕೆ ಬೆಂಕಿ ತಾಗಿದೆ'
ಅಕ್ಬರ್ ಆಳುಗಳನ್ನು ಬೇಗ ಬೇಗ ಕುದುರೆ ಲಾಯಕೆ ಕಳಿಸುವಷ್ಟರಲ್ಲಿ ಕುದುರೆಲಾಯಕ್ಕೆ ಬೆಂಕಿ ತಾಗಿ ಕರಕಲಾಗಿತ್ತು...
:-)

ಕತೆ-2

ಇದು ಅಕ್ಬರ್na ಆಸ್ಥಾನದಲ್ಲಿದ್ದ  ಬೀರಬಲ್ಲನ ಕತೆ ..ವಿಥ್ ಕೊಂಕಣಿ ಟ್ವಿಸ್ಟ್
ಆಸ್ಥಾನದ ಪಂಡಿತ ಮಹಾಶಯರು ಒಂದು ಸಲ ಅಕ್ಬರ್ ಬಾದಶಾಹರು ಬೀರಬಲ್ಲನಿಗೆ ಹೇಳಿ ಕಳುಹಿಸಿದ್ದಾರೆಂದು, ಹೇಳಲು ಬಂದಿದ್ದರು. ಪಂಡಿತರು ಅವರ ಮನೆ ತಲುಪಿದಾಗ ಬೀರಬಲ್ಲ ಸ್ನಾನ ಮಾಡುತ್ತಿದ್ದರು
"ಏನಿದು ಈ ಹೊತ್ತಿನಲ್ಲಿ ಸ್ನಾನ?'
ಏನಿಲ್ಲ ಮನುಷ್ಯರ ಹೊಲಸು (ಮಲ) ತುಳಿದಿದ್ದೆ, ಅದಕ್ಕೆ...
ಬೀರಬಲ್ಲನ ಮೇಲೆ ಹೊಟ್ಟೆಕಿಚ್ಚು ಪಡುತ್ತಿದ್ದ ಪಂಡಿತರು, 'ಛೆ, ಮಲ ತುಳಿದರೆ ಅಷ್ಟು ಭಾಗ ಕಾಲು ಕತ್ತರಿಸಬೇಕು' ಅಂತ ಸಲಹೆ ಕೊಟ್ಟು,ಗಹಗಹಿಸಿ ನಕ್ಕು,  ಅಕ್ಬರ್ ಮಹಾಶಯರ ನಿರೋಪವನ್ನು ಅವರು ಅಲ್ಲಿಂದ ನಿರ್ಗಮಿಸಿದರು
ಬೀರಬಲ್ಲನಿಗೆ ಸಿಟ್ಟು ಬಂದು ತಡಿ ಮಾಡುತ್ತೇನೆ ಈ ಪಂಡಿತನಿಗೆ ಅಂತ ಮನಸ್ಸಲ್ಲೆ ಲೆಕ್ಕ ಹಾಕಿದನು. ಪಂಡಿತರಿಗೆ ಕೆಸುವಿನ ಎಲೆ ಪ್ತತ್ರೋಡೆ ಇಷ್ಟ ಅಂತ ಈಡಿ ರಾಜ್ಯಕ್ಕೆ ಗೊತ್ತಿರುವ ವಿಷಯ. ಕೆಸುವಿನ ಎಲೆ ಅಂದ ಕೂಡಲೆ ಪಂಡಿತರ ಬಾಯಲ್ಲಿ ನೀರುರೂವುದು.
ಸರಿ ಮರುದಿನ ಬೀರಬಲ್ಲ ಮನೆಯ ಹಿಂಬದಿ ಜಾಗದಲ್ಲಿ ದೊಡ್ಡ ಗುಂಡಿ ತೋಡಿ, ಆ ಕೇರಿಯವರಿಗೆಲ್ಲ ಬಹಿರ್ದೆಸೆಗೆ ಎಲ್ಲರೂ ಮನೆಯ ಹಿಂಬದಿಯ ಗುಂಡಿಯನ್ನು ಬಳಸಬೇಕು ಎಂದು ಫರ್ಮಾನು ಹೊರಡಿಸಿದನು.ಎಲ್ಲರೂ ಖುಶಿಯಿಂದ ಅವರ ಗುಂಡಿಯನ್ನು ಬಳಸಿದರು. ಹದಿನೈದು ದಿನದಲ್ಲಿ ಗುಂಡಿ ತುಂಬಿತು. ಆಳುಗಳನ್ನು ಕರೆತಂದು ಬೀರಬಲ್ಲ ಆ ಗುಂಡಿಯ ಮೇಲೆ ತೆಳುವಾದ ಮಣ್ಣನ್ನು ಹರಡಿಸಿದ. ಗುಂಡಿಯ ಮಧ್ಯದಲ್ಲಿ ಕೆಲವು ಕೆಸುವಿನ ಎಲೆಯ  ಗೆಡ್ಡೆಗಳನ್ನು ಬಿಸಾಕಿದ. ಕೆಲವೇ ದಿನಗಲಲ್ಲೇ ಕಸುವಿನ ಎಲೆಗಳು ಆದವು, ಒಳ್ಲೆ ಗೊಬ್ಬರದಿಂದ ರಾಕ್ಷಸ ಗಾತ್ರದ ಕೆಸುವಿನ ಎಲೆಗಳು ಹುಟ್ಟಿಕೊಂಡವು. ಎಲ್ಲರ ಬಾಯಲ್ಲೂ ಈ ಕೆಸುವಿನ ಎಲೆಯ ಮಾತೇ...ಈ ವಿಷಯ ಪಂಡಿತರ ಕಿವಿಗೆ ಬೀಳಲು ಹೆಚ್ಚು ಹೊತ್ತು ಆಗಲಿಲ್ಲ. ಎಲಾ ಕಳ್ಳ ಬೀರಬಲ್ಲ ನನಗೆ ಹೇಳಲೇ ಇಲ್ಲ. ಇವತ್ತು ಹೇಗಾದರಾಗಲೀ ಏನಾದರು ನೆವ ಮಾಡಿ ಎಲೆಗಳನ್ನು ಪಡೆಯಬೇಕು. ಆಸ್ಥಾನದ ಕೆಲ್ಸಕ್ಕೆ ಹೋಗುವ ಮುನ್ನ ಎಲೆಗಳನ್ನು ತಂದು ಕೊಟ್ಟರೆ, ಹೆಂಡತಿ ಮಧ್ಯಾಹ್ನಕ್ಕೆ ಪತ್ರೋಡೆ ಮಾಡಿಡುತ್ತಾಳೆ ಅಂತ ಕನಸು ಕಾಣುತ್ತ ಬೀರಬಲ್ಲನ ಮನೆ ತಲುಪಿದರು ಪಂಡಿತ ಮಹಾಶಯರು.
ಬೀರಬಲ್ಲನ ಮನೆಯಲ್ಲು ಬೀರಬಲ್ಲ ಸ್ನಾನ ಮುಗಿಸಿ ಪೂಜೆಗೆ ಕುಳಿತಿದ್ದರು. ಅವನು ಪಂಡಿತರಗೆ 'ನೀವೆ ಎಷ್ಟು ಬೇಕೋ ಅಷ್ಟು ಎಲೆಗಳನ್ನು ಕೊಯ್ದುಕೊಳ್ಳಿ ಅಂದನು. ಮನೆಹಿಂದುಗಡೆ ಹೋಗಿ ನೋಡಿದರೆ ದೊಡ್ಡ ಗಾತ್ರದ ಕೆಸುವಿನ ಎಲೆಗಳು ಪಂಡಿತರನ್ನು ಅಣಕಿಸುತ್ತಿದ್ದವು. ಬೇಗೆ ಬೇಗನೆ ಮುಂಡನ್ನು ಮೇಲಕ್ಕೆ ಕಟ್ಟಿ ನಿಧಾನಕ್ಕೆ ಗುಂಡಿಯಲ್ಲಿ ಇಳಿದರೆ, ಪಂಡಿತರ ಸ್ವಲ್ಪ ದೊಡ್ಡದೇ ಎನ್ನುವ ಗಾತ್ರ ಪೂರ್ತಿ ಮಲದಲ್ಲಿ ಮುಳುಗಿ ಹೋಯಿತು. ಅಲ್ಲಿಂದಲೆ ಪಂಡಿತರು ಬೊಬ್ಬೆ ಹೊಡೆಯಲು ಶುರು ಮಾಡಿದರೆ, ಬೀರಬಲ್ಲ ಮಾತ್ರ ಕೂಲ್ ಆಗಿ 'ನಿಮ್ಮನ್ನು ಎಲ್ಲಿಯವರೆಗೆ ಕತ್ತರಿಸಬೇಕು ಈಗ, ಪಂಡಿತರೇ'? ಅಂತ ಕೇಳಿದ....

ನನ್ನ ಓದುಗ ಮಿತ್ರರಿಗೆಲ್ಲ ಹೃತ್ಪೂರ್ವಕ ಧನ್ಯವಾದಗಳು ಮತ್ತು Happy Friendship Day...

True friendship is like sound health; the value of it is seldom known until it is lost.” Charles Caleb Colton

:-)