Showing posts with label ಸಂದೀಪ ಉಣ್ಣಿಕೃಷ್ಣನ್. Show all posts
Showing posts with label ಸಂದೀಪ ಉಣ್ಣಿಕೃಷ್ಣನ್. Show all posts

November 25, 2009

26/12 (ಉಗ್ರರ ದಾಳಿ)


ಅರೇ ಇದೇನಿದು? ಎಲ್ಲರೂ ನವೆಂಬರ್ 26 ರ ಬಗ್ಗೆ ಮಾತಾಡ್ತಾ ಇದ್ದರೆ, ಮಾಲತಿ ಡಿಸೆಂಬರ್ 26, 2008 ಅಂತ ಬರೆದಿದ್ದಾಳೆ ಅಂದುಕೊಂಡ್ರಾ?

ಮದುವೆಯಾದ ಮೊದಲ ಕೆಲವು ವರ್ಷ ನಾನು ಆಗಾಗ ಮುಂಬೈಗೆ ಹೋಗುತ್ತಿದೆ. ಹೊಸ ದೀಪಾವಳಿ, ಮೊದಲ ಯುಗಾದಿ, ಆಮೇಲೆ ನನ್ನ ಪರೀಕ್ಷೆಗಳು. ನಾನು university of Bombay -distance Education ಅಡಿ ನನ್ನ ಗ್ರಾಜ್ಯುವೇಷನ್ ಮಾಡಿದೆ. ಮತ್ತು ಇಬ್ಬರು ಮಕ್ಕಳು ಅಲ್ಲೇ ಹುಟ್ಟಿದ್ದು, ಅಮೇಲೆ ತಂಗಿ ತಮ್ಮಂದಿರ ಮದುವೆ ಹೀಗೆ. ಇತ್ತಿಚಿಗಿನ 10 ವರ್ಷದಲ್ಲಿ ನಾವು ನಾಲ್ಕೂ ಜನ ಕೂಡಿ ಮುಂಬೈಗೆ ಹೋಗಿದ್ದಿಲ್ಲ.



ನನ್ನ ತಮ್ಮ ಕೆಲವು ವರ್ಷ ಕೆಲಸದ ನಿಮಿತ್ತ ಹೊರ ದೇಶಕ್ಕೆ ಹೋಗುವವನಿದ್ದ. ಅದಕ್ಕೆ ಅವನು ಫೋನ್ ಮಾಡಿ ’ಈ ಸಲ ಎಲ್ಲರೂ ಬಂದು ಬಿಡಿ. ಒಮ್ಮೆ ಹೊರ ದೇಶಕ್ಕೆ ಹೋದರೆ ಇನ್ನು 5-6 ವರ್ಷ ಬರುವುದಿಲ್ಲ. ನೀವು ನನ್ನ ಹೊಸ ಮನೆ ಇನ್ನೂ ನೋಡಿಲ್ಲ.’ ಹಾಗಾಗಿ ಹಿಂದಿನ ವರ್ಷ ಮಕ್ಕಳ christmas ರಜೆ ಗೆ ನಾವು ಮುಂಬೈಗೆ ಹೋದೆವು. 26 ರಂದು elephanta caves ಗೆ ಹೋಗುವುದು ನಿರ್ಧರಿಸಿದೆವು. ಉಗ್ರರ ದಾಳಿ 179 ಜನರನ್ನು ಬಲಿ ತೆಗೆದುಕೊಂಡು ಸರಿಯಾಗಿ ಒಂದು ತಿಂಗಳು


ಗೇಟ್ ವೇ ಆಫ್ ಇಂಡಿಯಾ ಬಳಿ ನಾವು ಬೆಳಿಗ್ಗೆ 9.30 ಗೆ ತಲುಪಿದೆವು. ತುಂಬ gloomy ಆಗಿತ್ತು ಆ ದಿನ. ಆಗಲೇ ಮಿಡಿಯಾದವರು ತಮ್ಮ ವ್ಯಾನ್ ಹಾಗೂ ಸಟೆಲ್ಲೈಟ್ ರಿಸೀವರ್ಸ್ ಹಿಡ್ಕೊಂಡು ಸಜ್ಜಾಗಿದ್ದರು .ಸುತ್ತ ಮುತ್ತ ಪೋಲಿಸ್ ಪ್ರಹರೆ. ಸಾವು-ನೋವು ಸಂಭವಿಸಿದ ಮನೆಯವರು, ಮಿತ್ರ-ಬಾಂಧವರು ಕಣ್ಣೀರುಗರೆಯು
ತ್ತ ಮೋಂಬತ್ತಿ ಹೊತ್ತಿಸುತ್ತಿದ್ದರು


ಆ ದಿನ ಆತಂಕವಾದದ ವಿರುದ್ದ ಮೌನ ಮೆರವಣಿಗೆ (silent march) ಹಮ್ಮಿಕೊಳ್ಳಲಾಗಿತ್ತು. ಎಷ್ಟೆ ಗಂಭೀರವಾಗಿರಲು ಪ್ರಯತ್ನ ಪಟ್ಟರೂ ಕೆಲವರಿಗೆ ಬಿಕ್ಕು ಬರುತ್ತಿತ್ತು.. ಅಲ್ಲಿ ನಿಂತ ನಮ್ಮ ಕಣ್ಣಲ್ಲೂ ನೀರು. photography was strictly prohibited so as not to interfere in their moment of grief. ಹಾಗಾಗಿ mourners ಗೆ ತೊಂದರೆಯಾಗದಂತೆ ಮಿಡಿಯಾದವರು respectfully ಸ್ವಲ್ಪ ದೂರದಲ್ಲಿ ಇದ್ದರು.



ಬೆಂಕಿಯಲ್ಲಿ damage ಆಗಿದ್ದ ಹೋಟಲ್ ತಾಜ್ ಮಹಲ್ ರಿಪೇರಿ ಕೆಲಸದಲ್ಲಿ ತೊಡಗಿ ಕೊಂಡಿತ್ತು.


ಕೆಲವೇ ದಿನಗಳ ಹಿಂದೆ ಅಂದರೆ ಡಿಸೆಂಬರ್ 21 ಕ್ಕೆ ಪುನಃ ಅದು ಅತಿಥಿಗಳಿಗೆ ತೆರೆಯಲ್ಪಟ್ಟಿತ್ತು.ತಾಜ್ ಮಹಲ್ ಹೋಟೆಲ್ ಗೆ ೧೦೬ ವರ್ಷಗಳ ಇತಿಹಾಸವಿದೆ. ಪ್ರಥಮ ಮಹಾ ಯುದ್ದದ ವೇಳೆ ಇದೇ ಹೋಟಲನ್ನು 600 ಮಂಚಗಳಿರುವ ಆಸ್ಪತ್ರೆಯಾಗಿ convert ಮಾಡಲಾಗಿತ್ತು.


ಧೈರ್ಯ ತೋರಿಸಿದ ಎಲ್ಲ ಧೀರರಿಗೂ ನನ್ನ ಸಲಾಮ್. ಸಂದೀಪ ಉಣ್ಣಿಕೃಷ್ಣನ್ ನ ತಾಯಿಯನ್ನು ಕಂಡಾಗಲೆಲ್ಲ ಒಂದು ಅವ್ಯಕ್ತವಾದ ನೋವು ಎದೆಯೊಳಗೆ ಹಾದು ಹೋಗುತ್ತದೆ.ನೋವನಂತು ಮರೆಯಲು ಸಾಧ್ಯವಿಲ್ಲ, ಆದರೆ ಅದನ್ನು ಸಹಿಸುವ ಶಕ್ತಿ ಅವರಿಗೆ ಬರಲಿ ಎಂದು ಆಶೀಸೋಣ.


ಈಗ ಕೈಗೆತ್ತಿಕೊಂಡಿರುವ ,ಯಶವಂತ ಚಿತ್ತಾಲರು ಬರೆದ ಕಾದಂಬರಿ, ’ಕೇಂದ್ರ ವೃತ್ತಾಂತ’ ದಲ್ಲಿ memories are memorials! ಅಂತ ಉಲ್ಲೇಖಿಸಿದ್ದಾರೆ.ನೆನಪುಗಳು ಆಳದಲ್ಲಿ ಕಾಡಿದ ಭಾವನೆಗಳಿಗೆ ಎದ್ದು ನಿಂತ ಸ್ಮಾರಕಗಳು.ಎಷ್ಟು ಅರ್ಥಪೂರ್ಣ ಆಗಿದೆಯಲ್ಲವ ಈ phrase!!


ರಕ್ತಪಾತಕ್ಕೆಲ್ಲ ಅಂತ್ಯ ಯಾವಾಗ? ಏನಾಗ್ತಾ ಇದೆ ನಮ್ಮ ದೇಶದಲ್ಲಿ?
ಉಗ್ರರಯರ ದಾಳಿಯಲ್ಲಿ ತೀರಿಕೊಂಡವರ ಆತ್ಮಕ್ಕೆ ಶಾಂತಿ ಕೋರುವಾ.

ಆದರೂ ಮುಂಬೈ ಮೇರಿ ಜಾನ್. phoenix ಹಕ್ಕಿಯಂತೆ ಯಾವಾಗಲೂ ಮೇಲೇಳುತ್ತದೆ. ಮುಂಬೈ ನ spirit ಗೂ ಒಂದು ಸಲಾಮ್
marine Drive. ರಾತ್ರಿ ದೀಪದ ಸಾಲು ಹಾರವನ್ನು ನೆನೆಪಿಸುತ್ತದೆ ಅದಕ್ಕೆ Queens Necklace ಅಂತ ಹೇಳುತ್ತಾರೆ.


ಚಿತ್ರಗಳು - yours truly