Showing posts with label ತಿರ್ಥಹಳ್ಳಿ. Show all posts
Showing posts with label ತಿರ್ಥಹಳ್ಳಿ. Show all posts

October 6, 2012

ಸಂಚಿಯಿಂದ ತೆಗೆದ ನೆನಪು-9: (ನನ್ನ 200 ನೆ ಪೋಸ್ಟ್)

can u believe it? i cannot....love u readers my hits have crossed 36000 mark without any effort from my side..
ನನ್ನ 200 ನೆ ಪೋಸ್ಟ್ ಇನ್ನೊಂದು ನೆನಪು...ಕುಛ್ ಖಟ್ಟಿ ಕುಛ್ ಮೀಠಿ

ಮೇ 4, 2012. ಗೀತಾ ದತ್ ಹಾಡು ಗಟ್ಟಿಯಾಗಿ ಹಾಕಿಕೊಂಡು ಮನೆ ಕ್ಲೀನ್ ಮಾಡ್ತಾ ಇದ್ದೆ. ಮನೆ ಕ್ಲೀನ್ ಯಾಕಪ್ಪ ಅಂದ್ರೆ ಯು ಎಸ್ ನಲ್ಲಿರೋ ನನ್ನ ಆತ್ಮೀಯ ಗೆಳೆಯರಾದ ಶ್ರೀವತ್ಸ ಜೋಶಿ, ಸಹನಾ ಜೋಶಿ ಮತ್ತು ನನ್ನ ಬೆಂಗಳೂರಿನ ಮಿತ್ರರಾದ ವೇದಾ ಮತ್ತು ಜ್ಯೋತಿ- ಇವರನ್ನು 6 ನೇ ತಾರೀಕಿಗೆ ಊಟಕ್ಕೆ ಕರೆದಿದ್ದೆ.ಮತ್ತು ಊಟಕ್ಕೆ ಕರೆದ ಎರಡು ದಿನ ಮುಂಚೆ ಮನೆ ಕ್ಲೀನ್ ಆ ಅಂತ ನಿಮ್ಮ ಪ್ರಶ್ನೆಗಳೇನಾದರೂ ಇದ್ದರೆ ಅದಕ್ಕೂ ಉತ್ತರ ಇದೆ. ನಮ್ಮ ಮನೆಯ ಬಳಿ ಮೂರು ನಾಲ್ಕು ಮನೆ ರಿಪೇರಿ, ಮಹಡಿ ಕಟ್ಟಿಸುವುದು, ಬೀಳಿಸಿ ಕಟ್ಟಿಸುವುದು ಮುಂತಾದ ಕೆಲಸಗಳು, ಅದಕ್ಕೆ ಬೇಕಾದ ಸಿಮೆಂಟ್ ಮರಳು ಅದರ ಧೂಳು ನಮ್ಮ ಮನೆಯೊಳಗೆ ಹಾಗಾಗಿ ನನ್ನದೊಂದು ಕ್ಲೀನಿಂಗ್ ಪ್ರೋಗ್ರಾಮು.
ಇದರ ಮಧ್ಯ ನನ್ನ ತಂಗಿ ಜತೆ ಚ್ಯಾಟ್ ಮತ್ತು ಇಲ್ಲಿ ಊಟಕ್ಕೆ ಬರಲಾಗದ, ನನ್ನ ಹೈದರಾಬಾದ್ ನಲ್ಲಿರೋ ಸ್ನೇಹಿತೆ ಸಂಧ್ಯಾ ಹಾಗು ಮಧ್ಯಪ್ರದೇಶದಲ್ಲಿರೋ ನಾಗಮಣಿಯವರಿಗೆ ನನ್ನ ಮೆನ್ಯೂ ಬಗ್ಗೆ ಹೇಳಿ ಆಸೆ ತೋರಿಸ್ತಾ ಇದ್ದೆ. ಶೋ ಕೇಸ್ ಬಳಿ ಕ್ಲೀನ್ ಮಾಡ್ತಿದ್ದಾಗ ಅಲ್ಲೇ ಬಳಿಯಿರುವ ನನ್ನ ಫಿಶ್ ಬೌಲ್ ನಲ್ಲಿರುವ ಮೀನು ನನ್ನನ್ನು ನೋಡಿ ತಿಪ್ಪರಲಾಗ ಹಾಕುತ್ತ ನೀರನ್ನು ಎಲ್ಲ ಕಡೆ ಸಿಂಪಡಿಸುತ್ತಿದ್ದರು. ಅವರಿಗೆ ಸುಮ್ಮನಿರದಿದ್ದರೆ ಬೆಕ್ಕಿಗೆ ಆಹಾರವಾಗಿ ಕೊಡುವುದಾಗಿ ಗದರಿಸಿ ನನ್ನಷ್ಟಕ್ಕೆ ನಗುತ್ತ, ಇನ್ನೇನೂ ಈ ಕಡೆ ತಿರುಗಬೇಕು ಎನ್ನುವಾಗ ನನ್ನ ಸೆಲ್ ಫೋನ್ ಬ್ಲಿಂಕ್ ಆಗುವುದನ್ನು ನೋಡಿದೆ. ನನಗೂ ನನ್ನ ಸೆಲ್ ಫೋನ್ ಗೂ ಅಂತಹ ಗಳಸ್ಯ-ಕಂಠಸ್ಯ ಏನಿಲ್ಲ. ನನ್ನ ತಮ್ಮ ಬೆಳಿಗ್ಗೆ ಫೋನ್ ಮಾಡಿದ ಮೇಲೆ ಅದು ಎಲ್ಲೆಲ್ಲೋ ಇರುತ್ತೆ. ಒಂದು ಸಲ ಹಾಸಿಗೆ ಮಡಚುವಾಗ ಅದರ ಒಳಗಿದ್ದು ಅದನ್ನು ಹುಡುಕಿ ಹೊರತೆಗೆದಾಗ ಎರಡು ದಿನ ದಾಟಿತ್ತು. ಶ್ರೀಕಾಂತ ಟೂರ್ ಅಥವ ಹೊರದೇಶಕ್ಕೆ ಹೋದಾಗ ಮಾತ್ರ ನನ್ನ ಸೆಲ್ ಫೋನ್ ನನ್ನ ಡ್ರೆಸ್ ಪೊಕೆಟ್ ನಲ್ಲಿರುತ್ತೆ. ನನ್ನ ಈ ಅಭ್ಯಾಸ ಬಲ್ಲ ಆತ್ಮೀಯರು ಕುಟುಂಬ ಸದಸ್ಯರು ಆದಷ್ಟು ನನಗೆ ಲ್ಯಾಂಡ್ ಲೈನ್ ಗೆ ಫೋನ್ ಮಾಡುವುದು.
ಹಾಂ! ಎಲ್ಲಿದ್ದೆ? ಮಿಸ್ಡ್ ಕಾಲ್ ನೋಡಿದೆ..ಅರೇ ಮುನ್ನ ಳದ್ದು (ಮುನ್ನ ನನ್ನ ಭೈಯ್ಯ ಅಂದರೆ ಶ್ರೀಕಾಂತರ ಹಿರಿಯಣ್ಣನ ಮಗಳು) . ಭೈಯ್ಯನವರಿಗೆ ಹುಷಾರು ತಪ್ಪಿದ್ದ ದಿನದಿಂದ ಅವಳು ಫೋನ್ ಮಾಡಿದರೆ ಶ್ರೀಕಾಂತಗೆ ಮಾಡೋದು. ನನಗೆ ಬಂದಿರೋದು ಆಶ್ಚರ್ಯ ಪಡುತ್ತ ಅವಳಿಗೆ ಫೋನಾಯಿಸಿದೆ.. 'ಅಪ್ಪ ಹೋಗಿ ಬಿಟ್ಟರು-ಏನು ಮಾಡ್ಲಿ, ಚಿಕ್ಕಪ್ಪ ಫೋನ್ ಎತ್ತತಾ ಇಲ್ಲ' ಅಂದಾಗ ಒಂದು ಕ್ಷಣ ನನಗೆ disorient ಆದ ಭಾವನೆ ಬಂತು. ಕೂಡಲೇ ಸಾವರಿಸಿ, 'ಧೈರ್ಯ ತೆಗೆದುಕೋ' ಸ್ವಲ್ಪ ಹೊತ್ತಿಗೆ ಫೋನ್ ಮಾಡ್ತೇನೆ ಅಂದೆ. ಶ್ರೀಕಾಂತ ಗೆ ಫೋನ್ ಹಚ್ಚಿದಾಗ ಸ್ವಿಚ್ ಆಫ್ ಆಗಿತ್ತು. ಹೌದು ಆ ದಿನ ಬ್ಯಾಂಕಿನ ವರಿಷ್ಟರೊಬ್ಬರ ಭೇಟಿ ಇತ್ತು ಅಂತ ಹೇಳಿದ್ದ ನೆನಪು. ಶ್ರೀಕಾಂತ ಗೆ ಸೆಲ್ಲ್ ಫೋನ್ ಅನ್ನು ಸೈಲೆಂಟ್ ನಲ್ಲಿ ಇಡಕ್ಕೆ ಗೊತ್ತಿಲ್ಲ ಅದಕ್ಕೆ ಅದನ್ನು ಸ್ವಿಚ್ ಆಫ್ ಮಾಡಿಡೋದು. ಅವರ ಜತೆ ಇರುವ ಸಾಲಿಮಠರಿಗೆ ಫೋನ್ ಮಾಡಿದೆ. ಅವರು ವರಿಷ್ಠರ ಕೊಟಡಿಯಿಂದ ಹೊರಗೆ ಬಂದು ನನ್ನ ಜತೆ ಮಾತನಾಡಿದರು. ಶ್ರೀಕಾಂತಗೆ ಸೂಕ್ಷ್ಮವಾಗಿ ವಿಷಯ ತಿಳಿಸಿ ಅಲ್ಲಿಂದ ಮನೆಗೆ ಕಳುಹಿಸಲು ಹೇಳಿದೆ.
ಒಂದು ವರ್ಷದ ಹಿಂದೆಯೆ ಭೈಯ ನವರಿಗೆ ಲೀವರ್ ನ ಸಿರ್ರೊಸಿಸ್ (Cirrhosis)  ಅಂತ ಡಯಗ್ನೈಸ್ ಮಾಡಿದ್ದರು. ಅತ್ಯಂತ ಕ್ಲೀನ್, ಸಾಧು life style ನಡೆಸುವ, ಕುಡಿತದಿಂದ ದೂರವಿರುವ ಭೈಯ್ಯನವರಿಗೆ ಈ ರೋಗ ಬಂದಿದ್ದು ನಮಗೆಲ್ಲ ತುಂಬ ಆಶ್ಚರ್ಯದ ಸಂಗತಿ. ಆ ಮೇಲೆ ಗೊತ್ತಯಿತು ಇದು ಬಿ ಪಿ ಮಾತ್ರೆಯ ಸತತ ಬಳಕೆಯಿಂದಾದ ದುಷ್ಪರಿಣಾಮ ಅಂತ. ಹದಿನೈದು ದಿನದ ಹಿಂದೆ ನಾನು ಶ್ರೀಕಾಂತ ತೀರ್ಥಹಳ್ಳಿಯಿಂದ ಉಡುಪಿಗೆ ಹೋಗಿ ಅವರನ್ನು ನೋಡಿಕೊಂಡು ಬಂದಿದ್ದೆವು. ನಾನು ಅಲ್ಲಿಂದ ಹೊರಡುವ ಮುಂಚೆ ಅವರ ಕಾಲಿಗೆರಗಿದ್ದಾಗ ಅವರ ಕಣ್ಣೋಟ ಸಂಜ್ಞೆಯಿಂದಲೆ ನನಗೆ ಗೊತ್ತಾಯಿತು ಅದು ನಮ್ಮ ಕೊನೆಯ ಭೇಟಿ ಅಂತ. ಆದರೂ ನಾನು ,ಇನ್ನು ಸ್ವಲ್ಪ ದಿನದಲ್ಲೆ ನಿಹಾನ ಪರೀಕ್ಷೆ ಮುಗಿಯುತ್ತೆ, ನಾನು ಅವಳು ಇಲ್ಲಿ ಬಂದು ಸ್ವಲ್ಪ ದಿನ ಇರುತ್ತೇವೆ 'ಅಂದಿದ್ದೆ. ಈಗ ಈ ಸುದ್ದಿ.
ನಾನು ಚಿಕ್ಕವಯಸ್ಸಿಗೆ ಮದುವೆಯಾಗಿ ಆ ಮನೆಗೆ ಹೋದಾಗ ಅವರೆ ನನ್ನಲ್ಲಿ ಧೈರ್ಯ ತುಂಬಿದ್ದು ಹಿರಿಯರಂತಿರದೆ ನನ್ನ ಸ್ನೇಹಿತರ ತರಹ ಇದ್ದಿದ್ದು. ಆವಾಗಿನ ದಿನಗಳನ್ನೆಲ್ಲ ನೆನೆಸಿ ಸ್ವಲ್ಪ ಹೊತ್ತು ಅತ್ತೆ. ಆದರೆ ಹಲವಾರು ಕೆಲಸಗಳಿದ್ದವು ಈಗ ಮಾಡಲು. ಮೊದಲಿಗೆ ನನ್ನ ತಮ್ಮನಿಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಆ ಮೇಲೆ ತೀರ್ಥಹಳ್ಳಿಯಲ್ಲೆಲ್ಲ ಸುದ್ದಿ ಮುಟ್ಟಿಸಲು ನೀಲೇಶ ಜವಳಿಗೆ ಫೋನ್ ಮಾಡಿದೆ. ಅದಾದ ನಂತರ ಶ್ರೀವತ್ಸ ಜೋಶಿಯವರಿಗೆ. ಅವರು ಚಂದದ ನಾಲ್ಕು ಸಾಂತ್ವನದ ಮಾತು ಹೇಳಿದರು. ಜ್ಯೋತಿ ವೇದಾ ರ ಫೋನ್ ಹೋಗಲಿಲ್ಲ ಅದಕ್ಕೆ ತಕ್ಷಣ ಅವರಿಗೊಂದು ಮೈಲ್ ಹಾಕಿದೆ. 
ನಿಹಾ ಆ ದಿನ ಬೆಳಿಗ್ಗೆ 'ಸಂವಾದ' ತಂಡ ಆಯೋಜಿಸಿರುವ ಎರಡು  ದಿನದ ಸಿನಿಮ appreciation ಕೋರ್ಸ್ ಗೆ ಅಂತ ತುಮಕೂರಿಗೆ ಹೊರಟಿದ್ದಳು. ಅವಳಿಗೆ ಫೋನ್ ಮಾಡಿ ವಿಷಯ ತಿಳಿಸಿ, ಅವಳಿಗೆ ನಮ್ಮ ತುಮಕೂರಿನ ಆಫಿಸ್ ನಲ್ಲಿ ಕಾಯಲು ಹೇಳಿದೆ. ಮಾಲವಿಕ ಬರಬೇಕು ಅಂತ ನನಗೆ ಆಸೆ ಇತ್ತು. ಯಾಕೆಂದರೆ ಅವಳು ಭೈಯ್ಯ ಅವರನ್ನು ನೋಡಿ ಎರಡು ವರ್ಷಗಳೇ ಸಂದಿದ್ದವು. ಕೆಲಸಕ್ಕೆ ಸೇರಿದ ಮೇಲೆ ಅವಳು ಅವರನ್ನು ನೋಡಿರಲಿಲ್ಲ. ಅವಳಿಗೆ ಫೋನ್ ಮಾಡಿ ಏನು ಮಾಡ್ತೀಯಾ? ನಮ್ಮ ಜತೆ ಬರುತ್ತೀಯಾ ಅಂತ ಕೇಳಿದೆ, ಅವಳು ಒಂಚೂರು ಆಲೋಚಿಸದೆ, ಈಗಲೇ ಹೊರಡುತ್ತೇನೆ ಅಂದಳು. ಇಷ್ಟರಲ್ಲಿ ಶ್ರೀಕಾಂತ ನನಗೆ ಫೋನ್ ಮಾಡಿ ಎರಡು ಗಂಟೆಗೆ ಗಾಡಿ ಬರುತ್ತೆ ರೆಡಿಯಾಗಿರು ಅಂದಿದ್ದರು. ನಾನು ಬೇಗ ಬೇಗ ನಮಗೆ ಬೇಕಾಗಿರುವ ಬಟ್ಟೆ ಬರೆ ಮತ್ತು ಇತರೇ ಅಗತ್ಯದ ಸಾಮಾನುಗಳನ್ನು ಸ್ಯೂಟ್ ಕೇಸ್ ಒಳಗೆ ಹಾಕಿಟ್ಟೆ. ಶ್ರೀಕಾಂತ ಬಂದ ಮೇಲೆ ಮೊದಲು ಅವರು ಊಟ ಮಾಡಿದರು. ಆಮೇಲೆ ಹಣಕಾಸಿನ ವ್ಯವಸ್ಥೆ ಮುಂತಾದವುಗಳನ್ನು ಮಾಡಲು ಆಫಿಸ್ ಗೆ ಹೋದರು. ಮಾಲವಿಕ ಬಂದ ಮೇಲೆ ನಾನು ಅವಳು ಊಟ ಮಾಡಿ ಉಳಿದ ಪದಾರ್ಥಗಳನ್ನು ಕಸದ ಬುಟ್ಟಿಗೆ ಚೆಲ್ಲಿ ಮನೆ ಕಿಟಕಿಗಳು, ಹಿಂದಿನ ಬಾಗಿಲು ಭದ್ರ ಪಡಿಸುವಷ್ಟರಲ್ಲಿ ಗಾಡಿ ಬಂದಿತ್ತು. ನಮ್ಮ ಮನೆಯ ಔನರ್ ಗೆ ಹೇಳ್ಬಿಟ್ಟು, ಒಂದು  ಜತೆ ಬೀಗದ ಕೈ ಅವರಿಗೆ, ಇನ್ನೊಂದು ಆಫಿಸ್ ಗೆ ಕೊಟ್ಟು, ಮಲ್ಲೇಶ್ವರಂ ನಲ್ಲಿ ಶ್ರೀಕಾಂತರ ಕಸಿನ್ ಸತೀಶರನ್ನು ಪಿಕ್ ಮಾಡಿ ಹೊರಟ್ವಿ. ಉಡುಪಿಯಿಂದ ಅಲ್ಲಿನ ವ್ಯವಸ್ಥೆ ಬಗ್ಗೆ ಫೋನ್ ಮಾಡಿ ಆಗಾಗ ಶ್ರೀಕಾಂತ ವಿಚಾರಿಸುತ್ತಿದ್ದರು. ನಾವು ಹೊರಟಾಗ ಆಗಲೇ ಮೂರು ದಾಟಿತ್ತು. ಅಲ್ಲಿಂದ ಟ್ರಾಫಿಕ್ ಎಲ್ಲ ದಾಟಿಕೊಂಡು ಊರ ಹೊರಗಡೆ ಬರಲು 2 ತಾಸುಗಳಾದವು. ದಹನ ಕ್ರಿಯೆ ರಾತ್ರಿ 10 ಕ್ಕೆ ಅಂತ ತೀರ್ಮಾನಿಸಲಾಯಿತು. ನಮ್ಮ ಗಾಡಿಯ ಚಾಲಕ ನನಗೆ 'ನೀವು ಏನೂ ಚಿಂತೆ ಮಾಡಿಬೇಡಿಯಮ್ಮ, ನಿಮಗೆಲ್ಲ 10 ಗಂಟೆಯೊಳಗೆ ಉಡುಪಿಗೆ ತಲುಪಿಸೋದು ನನ್ನ ಜವಾಬ್ದಾರಿ' ಅಂದರು. ನೀಹಾಳನ್ನು ದಾರಿಯಲ್ಲಿ ಪಿಕ್ ಮಾಡಿ ಹೊರಟೆವು. ಸಕಲೇಶಪುರ್ ತಲುಪುವಾಗ ಉಡುಪಿಯಿಂದ ಶ್ರೀಕಾಂತರ ಭಾವ ಫೋನ್ ಮಾಡಿದರು' ರುದ್ರಭೂಮಿ ಸಂಜೆ 7 ಗಂಟೆಗೆ ಕ್ಲೋಸ್, ಮತ್ತು body ಯನ್ನು ಸಾಯಂಕಾಲ 5 ರ ನಂತರ ಆಸ್ಪತ್ರೆಯಲ್ಲಿರಗೂಡುವುದಿಲ್ಲ' ಅಂತ. ಹಾಗಾಗಿ ಭೈಯನವರ ದೇಹವನ್ನು ಮಣಿಪಾಲದ ಶೈತ್ಯಾಗಾರದಲ್ಲಿಡಲಾಯಿತು.ನಾನೂ 'ಡ್ರೈವರ್ ಗೆ, ಗಡಿಬಿಡಿಯಿಂದ ಏನೂ ಹೋಗುವುದು ಬೇಡ, ಘಟ್ಟ ಪ್ರದೇಶ..ಸಾವಕಾಶವಾಗಿ ತಲುಪಿದರಾಯಿತೆಂದು. ನೀಲೇಶ ಮತ್ತು ಊರಿನ ದೇವಸ್ಥಾನದ ಕಡೆಯವರು ಗಾಡಿ ಮಾಡಿ ಹೊರಡುವ ಮುಂಚೆ ಅವನು ನನಗೆ ಎಸ್ ಎಮ್ ಎಸ್ ಮಾಡಿದ. ನಾನು ಕೂಡಲೆ, ಬೇಡ ದಹನ ಕ್ರಿಯೆ ನಾಳೆ. ನೀವೀಗ ಹೋದರೂ ಅಲ್ಲಿ ಭೈಯ್ಯನವರು ಕಾಣ ಸಿಗಲ್ಲ ಅಂತ ಹೇಳಿದೆ. ಹಾಗೂ ಮಿತ್ರ ವಸುಧೇಂದ್ರ ಹಾಗೂ ಸಂದೀಪ ಕಾಮತ್ ಗೆ ವಿಷಯ ತಿಳಿಸಿ ಎಸ್ ಎಮ್ ಎಸ್ ಮಾಡಿ ನನ್ನ ಸೆಲ್ ಫೋನ್ ಅನ್ನು ಬ್ಯಾಗ್ ಒಳssssಗಡೆ ತುರುಕಿಸಿಟ್ಟೆ. ಇನ್ನು ಯಾರ ಜತೆನೂ ಯಾವ ಮಾತೂ ಎಸ್ ಎಮ್ ಎಸ್ ನನಗೆ ಬೇಕಿರಲಿಲ್ಲ.
ಶ್ರೀಕಾಂತ-ಸತೀಶ ಸಮಯ ಕಳೆಯಲು ಲೋಕಾರೂಢಿಯ ಮಾತುಗಳನ್ನಾಡುತ್ತಿದ್ದರೆ, ನಿಹಾ ಅವಳ ಪುಸ್ತಕ ಓದುತ್ತಿದ್ದಳು, ಮಾಲವಿಕ ನಿದ್ದೆಗೆ ಜಾರಿದ್ದಳು. ನನಗೋ ಮೌನ ಮಾತ್ರ ಬೇಕಾಗಿತ್ತು. ಆವಾಗಾವಾಗ ಒಸರುತ್ತಿದ್ದ ಕಂಬನಿ ಕಿಟಕಿಯಿಂದ ಬೀಸುತ್ತಿದ  ಗಾಳಿಗೆ ಹಾಗೇ ಆವಿಯಾಗುತ್ತಿತ್ತು. ನನ್ನ ಪರಿವಾರದವರು ನಾನು ಅಳುವುದು ನೋಡುವುದು ನನಗೆ ಬೇಕಾಗಿರಲಿಲ್ಲ.
ಹಾಗೆ ಹಳೆ ನೆನಪುಗಳೆಲ್ಲ ಒತ್ತಿಕೊಂಡು ಬಂದವು:
ಚಿಕ್ಕ ಪ್ರಾಯಕ್ಕೆ ಮದುವೆಯಾಗಿ ನಾನು ನನ್ನ ಮುಂಬೈ ನ ಪುಟ್ಟ ಕುಟುಂಬದಿಂದ ಈ ಕೂಡು ಕುಟುಂಬಕ್ಕೆ ಹಾರಿದ್ದೆ. ನಗರದಿಂದ ಹಳ್ಳಿಗೆ. ನನಗೊಂದೂ ತೋಚುತ್ತಿರಲಿಲ್ಲ. ಮದುವೆಯಾದ ಎರಡು ದಿನದ ನಂತರ, ತೀರ್ಥಹಳ್ಳಿಯಲ್ಲಿ ಆಯೋಜಿಸಿದ ಸತ್ಯನಾರಾಯಣ ಪೂಜೆ ಮುಗಿಸಿ ನನ್ನ ತಂದೆ ತಾಯಂದಿರು, ತಮ್ಮಂದಿರು, ತಂಗಿ ಹೋದ ಮೇಲೆ ನನಗೆ ಅನಾಥ ಪ್ರಜ್ಞೆ ಕಾಡಿತ್ತು. ನನಗೆ ಹಳ್ಳಿ ಜೀವನದ ಪರಿಚಯವಿರಲಿಲ್ಲ. ಶ್ರೀಕಾಂತ ಬೆಳಿಗ್ಗೆ 9 ಕ್ಕೆ ಮನೆ ಬಿಟ್ಟರೆ ಬರುತ್ತಿದ್ದದ್ದೆ ರಾತ್ರಿ. ಮನೆಯಲ್ಲಿ ಮುನ್ನ (ಸುಮತಿ) ಬಿಟ್ಟರೆ ಎಲ್ಲರೂ ನನಗಿಂತ ಹಲವಾರು ವರ್ಷ ಹಿರಿಯರೇ. ಬೇಗ ಎದ್ದು ಅಕ್ಕ (ಓರಗಿತ್ತಿ) ನಿಗೆ ನನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದೆ. ಆ ಮೇಲೆ ನನ್ನ ಮೊದಲನೇ ವರ್ಷದ ಪದವಿ ಪರೀಕ್ಷೆಗೆ ಓದುತ್ತಿದ್ದೆ. ಸ್ವಲ್ಪ ಹೊತ್ತು ಅತ್ತೆಯವರ ಜತೆ ಸಮಯ ಕಳೆಯುತ್ತಿದ್ದೆ. ಅವರಿಗೆ ಕಣ್ಣಲ್ಲಿ ದೃಷ್ಟಿಯಿರಲಿಲ್ಲ ಹಾಗೂ ಕಿವಿ ಮಂದವಾಗಿ ಕೇಳಿಸುತ್ತಿತ್ತು. ಅವರ ತವರುಮನೆಯ ಕತೆಗಳನ್ನು ಹೇಳಿ ನನ್ನನ್ನು ರಂಜಿಸುತ್ತಿದ್ದರು. ಮಧ್ಯಾಹ್ನ ಮಾವ ಅಂಗಡಿ ನೋಡಿಕೊಳ್ಳುತ್ತಿದ್ದರೆ ಭೈಯ್ಯ ಊಟಕ್ಕೆ ಬರುತ್ತಿದ್ದರು. ಅವರದ್ದು ಸಾವಕಾಶ ಊಟ. ಅಕ್ಕ ಮತ್ತು ಭಯ್ಯ ಅವರನ್ನು ಬಡಿಸುತ್ತ ಅವರ ಮಾತುಗಳನ್ನು ಕೇಳಲು ಉತ್ಸುಕಳಾಗುತ್ತಿದೆ. ಅವರು ಓದುವುದರಲ್ಲಿ, ಅದರಲ್ಲೂ ಲೆಕ್ಕದಲ್ಲಿ ತುಂಬ ಬುದ್ದಿವಂತರಿದ್ದರಂತೆ, ಆದರೆ ಮಾವನವರಿಗೆ ಅಂಗಡಿಯಲ್ಲಿ ಸಹಾಯ ಮಾಡಬೇಕಾಗಿ ಬಂದು ಅವರು 8 ನೇ ಈಯತ್ತೆ ಮುಗಿಯುತ್ತಿದ್ದ ಹಾಗೆ ಅವರನ್ನು ಶಾಲೆಯಿಂದ ಬಿಡಿಸಿದ್ದರಂತೆ. ಈ ಬಗ್ಗೆ ಅವರು ಬೇಜಾರಿನಿಂದ ಹಲವಾರು ಬಾರಿ ನನ್ನಲ್ಲಿ ಹೇಳಿಕೊಂಡಿದ್ದರು. ಮನೆಯಲ್ಲಿ ಹಿರಿಯ ಮೂವರು ಗಂಡಸಿದ್ದರೂ (ನನ್ನ ಮಾವನವರ ಇಬ್ಬರು  ತಮ್ಮಂದಿರು ಮತ್ತು ಶ್ರೀಕಾಂತರ ಇನ್ನೊಬ್ಬ ಅಣ್ಣ) ಅವರೆಲ್ಲ ಬೇರೆ ಬೇರೆ ಕೆಲಸ ಮಾಡುತ್ತಿದ್ದರಿಂದ ಅಂಗಡಿಯ ಜವಾಬ್ದಾರಿ ನನ್ನ ಭೈಯ್ಯನವರ ಮೇಲೆ. ಭಾರವಾದ ಮೂಟೆಗಳನ್ನು ಹೊರುವುದರಿಂದ ಅಂಗಡಿಯ ಸಾಮಾನುಗಳನ್ನು ಅದರ ಸ್ಥಾನದಲ್ಲಿಡುವುದು, ಸೇಲ್ಸ್, ಆರ್ಡರ್ ಕೊಡುವುದು, ತಿಂಗಳಿಗೆ ಒಂದು ಸಲ ಶಿವಮೊಗ್ಗಕ್ಕೆ ಹೋಗಿ ಖಾಲಿಯಾದ ಸಾಮಾನಿನ ಪಟ್ಟಿ ಕೊಟ್ಟು ಬರುವುದು ಮುಂತಾದ ಹತ್ತು ಹಲವು ಕೆಲಸಗಳು. ನಮ್ಮ 25 ವರ್ಷದ ಒಡನಾಟದಲ್ಲಿ ಅವರು ಕಾಯಿಲೆ ಬಿದ್ದದ್ದು ಆ ಒಂದೇ ಸಲ. ಭಾನುವಾರ ಅಂಗಡಿ ಬಾಗಿಲು ಹಾಕಿದ್ದರೂ ಓಣಿ ಬಾಗಿಲಿನಿಂದ ಬರುವ ಗ್ರಾಹಕರು. ಹಾಗಾಗಿ ರವಿವಾರ ಕೂಡ ಕೆಲಸವೇ ಆಗುತ್ತಿತ್ತು.

ನಮ್ಮ ತೀರ್ಥಹಳ್ಳಿಯ ಜೀನಸಿ ಅಂಗಡಿಗೆ 100 ವರ್ಷಕ್ಕಿಂತ ಹಳೆಯ ಇತಿಹಾಸ..ಎಲ್ಲ ಸಿಗುತ್ತಿತ್ತು. ಊರಿನಲ್ಲಿ ಒಂದು ಮಾತು ಇತ್ತು ;ಎಲ್ಲೂ ಸಿಗದಿದ್ದರೆ ಬಾಲಕೃಷ್ಣ ಶಣೈ ಅವರ ಅಂಗಡಿಯಲ್ಲಿ ಸಿಗುತ್ತೆ ಅಂತ. ಬಾಣಂತಿ ಔಷಧಗಳು, ಬೇರು-ಕಾಷ್ಟಗಳು etc etc..:-)
ಬೆಳಿಗ್ಗೆ ಅವರು ಹೋಮ್ ಗಾರ್ಡ್ಸ್ ಸೇವೆ ಗೆ ಹೋಗುತ್ತಿದ್ದರು. ಅವರು ಹೋಮ್ ಗಾರ್ಡ್ ಕ್ಯಾಂಪ್ ಗೆ ಎಲ್ಲ ಹೋದಾಗ ಕ್ರೀಯಾಶೀಲತೆಯಿಂದ ಪಡೆದ ಬಹುಮಾನಗಳ ಬಗ್ಗೆ, ಅವರು ಕಲಿತ ಬೇರೆ ಬೇರೆ knots ಬಗ್ಗೆ ಹೇಳೊದು ಅದರ ಪ್ರಾತ್ಯಕ್ಷಿಕತೆ ಕೂಡ ಮಾಡಿ ತೋರಿಸುವುದು, ಫರ್ಸ್ಟ್ ಎಇಡ್ ಬಗ್ಗೆ ಎಲ್ಲ ಹೇಳುತ್ತಿದ್ದರು. ಯಾವುದೇ ಪದಾರ್ಥ/ಸಾಮಾನು ಅವರು ವೇಸ್ಟ್ ಮಾಡುತ್ತಿರಲಿಲ್ಲ ನಮಗೂ ಹಾಗೇ ಹೇಳುತ್ತಿದ್ದರು, 'ಯಾವುದಕ್ಕಾದರೂ ಉಪಯೋಗಕ್ಕೆ ಬರುತ್ತದೆ' ಅಂತ.
ವಿಷ್ಣುವರ್ಧನ್ ಅವರ ನೆಚ್ಚಿನ ಸಿನಿಮಾ ತಾರೆ. ಅವರ ಆಪ್ತಮಿತ್ರ ಸಿನಿಮಾವನ್ನು ರಾತ್ರಿ ಅಂಗಡಿ ಬಾಗಿಲು ಮುಚ್ಚಿದ ಮೇಲೆ ಲಾಸ್ಟ್ ಶೋ ಹೋಗಿ ಮೂರು ಸಲ ಹೋಗಿ ನೋಡಿ ಬಂದವರು. ಮತ್ತು ತೀರ್ಥಹಳ್ಳಿಗೆ ವಿಷ್ಣುವರ್ಧನ್ ಅವರು ಭೇಟಿ ನೀಡಿದಾಗ ಬೆಳಿಗ್ಗಿನಿಂದ ಸಂಜೆ ತನಕ ಬಿಸಿಲನ್ನೂ ಲೆಕ್ಕಿಸದೆ ಕಾದು, ಅವರಿಗೆ ಹಸ್ತಲಾಘವ ನೀಡಿದ್ದು ಅದು ಟಿ.ವಿ ಯವರು ರೆಕಾರ್ಡ್ ಮಾಡಿದ್ದು, ಮನೆಗೆ ಬಂದು  ಬೆಂಗಳೂರಿನಲ್ಲಿದ್ದ ನನಗೆ ಫೋನಾಯಿಸಿದ್ದು ಇನ್ನು ನಿನ್ನೆ ಮೊನ್ನೆ ತರಹ ಹಸಿ ಹಸಿ ನೆನಪು.
ಮಾಲು-ನಿಹಾ 10 ನೇ ಮತ್ತು PUC 2 ನಲ್ಲಿ ಒಳ್ಳೆ ಅಂಕಗಳಿಂದ ಪಾಸ್ ಆದಾಗ, ಲೆಕ್ಕದಲ್ಲಿ ನೂರಕ್ಕೆ ನೂರು ಪಡೆದಾಗಲೆಲ್ಲ ಅವರಿಗೆ ಮೊದಲಿಗೆ ಫೋನಾಯಿಸುತ್ತಿದೆ. ಇಬ್ಬರಲ್ಲಿ ಒಬ್ಬರಾದರೂ ಡಾಕ್ಟರ್ ಆಗಬೇಕೆಂದು ಅವರು ಬಯಸಿದ್ದರು. :-)
ತುಂಬ ಕಷ್ಟ ಪಟ್ಟಿದ ಜೀವ. ಮನೆಯ ಹಿರಿಯರೆಲ್ಲ ಅವರ ಕೊನೆ ಸಮಯದಲ್ಲಿ ಹಾಸಿಗೆ ಹಿಡಿದಾಗ ಅವರ ಮಲ ಮೂತ್ರಕೂಡ clean  ಮಾಡಿದವರು. ಹಿರಿಯರೆಲ್ಲ ಕಾಲವಾದ ಮೇಲೆ, ಒಬ್ಬಳೆ ಮಗಳು 'ಮುನ್ನ' (ಸುಮತಿ) ಳ ಮದುವೆಯ ಬಳಿಕ ಅವರು ಸ್ವಲ್ಪ ನೆಮ್ಮದಿಯಿಂದಿದ್ದರು. ಹಲವಾರು ಬಾರಿ ನಾನು ಅವರಿಗೆ ಕೆಲಸಕ್ಕೆ ಸಣ್ಣ ಹುಡುಗರನ್ನು ಇಟ್ಟುಕೊಳ್ಳಿ, ಎಲ್ಲ ನೀವೆ ಮಾಡುವುದನ್ನು ಇನ್ನು ಸಾಕು ನಿಲ್ಲಿಸಿ ಅಂತ ಗಿಣಿಗೆ ಹೇಳಿದ ಹಾಗೆ ಹೇಳಿದ್ದೆ. ಆದಷ್ಟು ದಿನ ನಿರ್ವಹಿಸುತ್ತೇನೆ ಆಮೇಲೆ  ಅದೆಲ್ಲ ಇದ್ದದ್ದೆ ಅಲ್ಲವಾ ಅಂತ ಹೆಳುತ್ತಿದ್ದರು. ಅಷ್ಟರಲ್ಲಿ ಊರಿನಲ್ಲಿ ಕೊಂಕಣಿಯವರು ಶ್ರೀ ವೆಂಕಟರಮಣ ದೇವಸ್ಥಾನ ಕಟ್ಟುವುದೆಂದು ನಿರ್ಧರಿಸಿದರು. ಆ ಸಲುವಾಗಿ ಅವರು ಓಡಾಡಿದ್ದು.ಊರೂರು ತಿರುಗಿದ್ದು ಅಷ್ಟಿಷ್ಟಲ್ಲ. ಆದರೂ ತುಂಬ ಎಂಜಾಯ್ ಮಾಡುತ್ತಿದ್ದರು. ಅವರು ತುಂಬ jovial ಮನುಷ್ಯ. ಎದುರಿಗೆ ಸಿಕ್ಕ ಯಾರನ್ನೂ ಮಾತನಾಡಿಸದೇ ಯಾವತ್ತೂ ಕಳಿಸಿದವರಲ್ಲ.
'ದೇವರ ಕೆಲಸ ಶುರು ಹಚ್ಚಿಕೊಂಡ ಮೇಲೆ ನನಗೆ ಆದಾಯ ಕೂಡ ಹೆಚ್ಚಾಗಿದೆ, ಎಲ್ಲ ಸ್ವಾಮಿ ದೇವನ ಕೃಪೆ' ಅಂತ ಎಷ್ಟೊಂದು ಬಾರಿ ನನ್ನ ಬಳಿ ಹೇಳಿದ್ದರು. ರಾತ್ರಿ ಊಟ ವಾದ ಮೇಲೆ ಅವರು, ಯಾರ್ಯಾರು ದೇವಸ್ಥಾನಕ್ಕೆ ಎಷ್ಟೆಷ್ಟು ದೇಣಿಗೆ ನೀಡಿದರು ಮುಂತಾದೆಲ್ಲ ರಸಿತಿಯನ್ನು ಬರೆಯುತ್ತ, ರಸವತ್ತಾಗಿ ಹೇಳುತ್ತಿದ್ದರು. ಇನ್ನೊಮ್ಮೆ ಒಂದು ಚಿಕ್ಕ ಪೆಟ್ಟಿಗೆ ತೋರಿಸಿ 'ಇದರಲ್ಲಿ ನಾನು ದಿನಾ 100 ರೂ ಹಾಕುತ್ತೇನೆ ವಾರಕ್ಕೊಂದು ಸಲ ಅದು ದೇವಸ್ಥಾನಕ್ಕೆ ನೀಡುತ್ತೇನೆ ಅಂದಿದ್ದರು. ಆಪ್ತರು ಪರಿಚಯಸ್ಥರು ಹಲವಾರು ಜನರು 'ದೇವಸ್ಥಾನಕ್ಕಾಗಿ ತುಂಬ ಖರ್ಚು ಮಾಡುತ್ತಿದ್ದಾರೆ' ಅಂದಾಗ ಅವರ ದುಡ್ಡು ಬೇಕಾದ ಹಾಗೆ ಖರ್ಚು ಮಾಡಲು ಅವರಿಗೆ ಹಕ್ಕಿದೆ ಅಂತ ಹೇಳಿ ನಾನು ಬಾಯಿ ಮುಚ್ಚಿಸಿದೆ. ನನಗೂ ದೇಣಿಗೆ ನೀಡಲು ,ಹಾಗೂ ಈ ನಿಟ್ಟಿನಲ್ಲಿ ನನ್ನ ಕುಟುಂಬದವರನ್ನು ಪ್ರೇರೇಪಿಸಲು ಅವರು ಅವಾಗಾವಾಗ ನನಗೆ ಹೇಳುತ್ತಿದ್ದರು. ನನಗೆ ಅದರಲ್ಲೆಲ್ಲ ನಂಬಿಕೆಯಿಲ್ಲ. ಅದಕ್ಕೆ ನಕ್ಕು ಸುಮ್ಮನಾಗುತ್ತಿದೆ. ಕಡೆಗೆ ಅವರೇ ನನ್ನ ತಂದೆ-ತಾಯಿ, ತಮ್ಮ, ತಂಗಿಯರಿಗೆ ಫೋನ್ ಮಾಡಿ ಅವರಿಂದ ದೇಣಿಗೆ ಪಡೆಯುವುದರಲ್ಲಿ ಯಶಸ್ವಿಯಾದರು. ದೇವಸ್ಥಾನದ ಅಧ್ಯಕ್ಷರನ್ನಾಗಿ ಮಾಡಿದಾಗಲಂತೂ ಅವರ ಖುಶಿ ಹೇಳತೀರದು. ಅಷ್ಟು ಖುಶಿಯಲ್ಲಿದ್ದಾಗಲೇ ಅವರು ಒಂದು ದಿನ ರಕ್ತ ವಾಂತಿ ಮಾಡಿಕೊಂಡಿದ್ದು. ದೇವಸ್ಥಾನದ ಕಮಿಟಿಯವರ ಸಹಾಯದಿಂದ ಅವರಿಗೆ ಮಣಿಪಾಲಕ್ಕೆ ಕರೆದೊಯ್ಯಲಾಯಿತು. ಆಗ ನಾವು ಹಾಗೂ ನನ್ನ ತಮ್ಮನ ಕುಟುಂಬ ಮಹಾರಾಷ್ಟ್ರದ  ಟೂರ್ ಹೋಗಿದ್ದೆವು. ಆಮೇಲೆ ಅವರ ಚಿಕಿತ್ಸೆಗೋಸ್ಕರ ಅಂತ ಅವರು ಉಡುಪಿಯಲ್ಲೆ ಇರುವುದೆಂದು ನಿರ್ಧರಿಸಲಾಯಿತು ಉಡುಪಿಯಲ್ಲಿ ಹೇಗೂ ಮುನ್ನಳ ಮನೆಯಿತ್ತು.
ಕೊನೆ ಕೊನೆಗೆ ಅವರ ಜೀವ ತೀರ್ಥಹಳ್ಳಿ ಕಡೆ ಎಳೆಯುತ್ತಿತ್ತು. ಅಲ್ಲೇ ಹುಟ್ಟಿ ಬೆಳೆದು, ಕಷ್ಟ ಸುಖ, ದು:ಖ, ಹುಟ್ಟು, ಸಾವು ಸಂತಸ ಕಂಡಂತಹ ಮನೆಗೆ ಹೋಗುವ ಸಹಜ ತವಕ ವ್ಯಕ್ತ ಪಡಿಸುತ್ತಿದ್ದರು.ಉಡುಪಿಯಲ್ಲಿ  ಕೂಡ ಅಕ್ಕ ಪಕ್ಕದವರ ಸ್ನೇಹ ಸಂಪಾದಿಸಿದ್ದರು. ಯಾರಿಗೂ ಯಾವತ್ತೂ ಕೇಡು ಬಯಸಿದವರಲ್ಲ.
ನಾವು ಉಡುಪಿ ತಲುಪಿದಾಗ ರಾತ್ರಿ 11.30. ಹೋಗಿ ಮೊದಲಿಗೆ ಅಕ್ಕನನ್ನು ತಬ್ಬಿಕೊಂಡಿದ್ದು. ರಾತ್ರಿ ಇಡೀ ಸಂಕಟ, ದು:ಖವನ್ನೂ ಮರೆಮಾಚಿಸುವಷ್ಟು ಸೊಳ್ಳೆಗಳ ಕಾಟ. ಅಕ್ಕನೆ ಎದ್ದು ನಮಗೆ ಸೊಳ್ಳೆ ಓಡಿಸುವ ಕಾಯಿಲ್ ತಂದು ಕೊಟ್ಟರು. ಹಾಗೆ ಹೀಗೆ ಹೊರಳಾಡಿ  ಬೆಳಗಾಗುವುದನ್ನೆ ಕಾಯುತ್ತಿದ್ದೆ. ಶೈತ್ಯಾಗಾರದ ಬಾಗಿಲು ತೆರೆಯುವುದೇ 8 ಗಂಟೆಗೆ.
ಯಾರೂ ಅಳಕೂಡದೆಂದು ಭೈಯ್ಯ ನವರು ಹೇಳಿದ್ದರಂತೆ. ಆದರೂ ಕೊನೆಯ ಬಾರಿ ಅವರನ್ನು ಎತ್ತಿಕೊಂಡು ಹೋದಾಗ ತಡೆಯಲಾಗದೆ ಬಿಕ್ಕಳಿಸಿದ್ದೆ. ಅಷ್ಟೆ ಅಲ್ಲ, ಯಾರಿಗೂ ತೊಂದರೆ ಯಾಗಬಾರದೆಂದು ಅಂತ್ಯ ಸಂಸ್ಕಾರಕ್ಕೆಂದು ದುಡ್ಡು ಸಹ ರೆಡಿ ಮಾಡಿ ಬ್ಯಾಂಕ್ ನಲ್ಲಿ ಇಟ್ಟಿದ್ದರು ಎಂದರೆ ನಂಬುತ್ತೀರಾ??
ಈಗ ನಮ್ಮಲಿರುವುದು ಅವರ ನೆನಪು ಮಾತ್ರ.
ಮುನ್ನ ಉರ್ಫ್ ಸುಮತಿ ಹೆಗ್ಡೆ ಅವಳ ತಂದೆ ಬಗ್ಗೆ ಬರೆದಿದ್ದು ಕೆಳಗಿನ ಕೊಂಡಿಯಲ್ಲಿದೆ
http://sumathihegde.blogspot.in/2012/09/blog-post_15.html
:-(
200 ನೇ ಬರಹಕ್ಕೆ ತಲುಪಿದಕ್ಕೆ ಪುನ: ರಘು ಅಪಾರ, ಶ್ರೀಕಾಂತ, thatskannada.com, ವಿಜಯಕರ್ನಾಟಕ ಪತ್ರಿಕೆ, ಶ್ರೀವತ್ಸ ಜೋಶಿ, ಬದರಿನಾಥ ಪಲವಳ್ಳಿ, ಶ್ರೀದೇವಿ ಕಳಸದ್, ಅವಧಿ ಮ್ಯಾಗ್, ಕೆಂಡಸಂಪಿಗೆ, ನಿಲುಮೆ, ಕನ್ನಡ ಬ್ಲಾಗರ್ಸ್ ಲಿಸ್ಟ್, ಸಂಪದ ಹಾಗೂ ನನ್ನೆಲ್ಲ ಓದುಗ ಮಿತ್ರರಿಗೆ ನನ್ನ ಧನ್ಯವಾದ ಸಲ್ಲುತ್ತದೆ.

February 28, 2012

ABC , ದೇಶಕಾಲ ...ಮತ್ತಿನ್ನೆನೋ....

Tea and book any time!!

ನಾವು ತೀರ್ಥಹಳ್ಳಿ ಕೊಪ್ಪ ದಲ್ಲಿದ್ದಾಗ ತಪ್ಪದೆ ವಾರಾಂತ್ಯದಲ್ಲಿ ಬೈಕ್ ನಲ್ಲಿ ಎಲ್ಲಾದರೂ ಹೋಗುತ್ತಿದ್ದೆವು.. ಶ್ರೀಕಾಂತ್ ಶನಿವಾರ ಬೆಳಿಗ್ಗೆ ಅವರ ಬುಲೆಟ್ ಬೈಕ್ ನ್ನು ಸರ್ವಿಸಿಂಗ್ ಗೆ ಕೊಟ್ಟು ಬರುತ್ತಿದ್ದರು. ಶನಿವಾರ ಮಧ್ಯಾಹ್ನ (ಈಗಿನ ಹಾಗೆ ಕೆಲಸದ ಒತ್ತಡ ಇರುತ್ತಿರಲಿಲ್ಲ) ಬೈಕ್ ಇರುವ ಫ್ರೆಂಡ್ಸ್ ಎಲ್ಲ ಸೇರಿ ಬೈಕಿಂಕ್, ಹೈಕಿಂಗ್/ ಚಾರಣ ಅಂತೆಲ್ಲ ಹೋಗಿ ಬಿಡ್ತಿದ್ವಿ. ಶ್ರೀಕಾಂತ ಸ್ನೇಹಿತರ ವರ್ಗದಲ್ಲಿ ಮದುವೆಯಾದ ಜೋಡಿ ಅಂದ್ರೆ ನಾನು-ಶ್ರೀಕಾಂತ. ನಾವು ಒಟ್ಟಿಗೆ 8 ಮಂದಿ ಅಂದ್ರೆ ನಾಲ್ಕು ಬೈಕ್....
ಎಲ್ಲರ ತಿಂಡಿ/ಊಟದ ಜವಾಬ್ದಾರಿ ನಂದು. ಬೆಳಿಗ್ಗೆ ಎರಡು ಗಂಟೆಗೆಲ್ಲ ಎದ್ದು ನಾನು ಅಡಿಗೆ / ತಿಂಡಿ ಮಾಡುತ್ತಿದ್ದೆ. ಈಗಿನ ಹಾಗೆ ಮಿಕ್ಸಿ ಇರಲಿಲ್ಲ. ಎಲ್ಲದಕ್ಕೂ ರುಬ್ಬೋ ಕಲ್ಲೇ ಗತಿ. ಕೆಲ ಸಮಯದ ನಂತರ ಮಿಕ್ಸಿ ತೆಗೆದುಕೊಂಡೆ ಯಾದರೂ ಕರೆಂಟ್ ಇರುತ್ತಿರಲಿಲ್ಲ. ಇಲ್ಲಿ ಬೆಂಗಳೂರಿಗೂ ಬಂದಿದೆ ನನ್ನ ಸಾಥಿ ರುಬ್ಬುವ ಕಲ್ಲು. :-) ನಾನು ಹೆಚ್ಚಾಗಿ ಕೊಟ್ಟೆ ಕಡುಬು ಮಾಡುತ್ತಿದ್ದೆ. ಅದು ಬಿಟ್ಟರೆ ಬಾಳೆ ಎಲೆ ಕಡುಬು.( ಅಪರೂಪಕ್ಕೆ ಚಪಾತಿ, ಚಿತ್ರ್ರಾನ್ನ)...ಅದಕ್ಕೆ ಗಟ್ಟಿ ಚಟ್ನಿ., ಅದರ ಜತೆ ಬ್ರೆಡ್ ಜ್ಯಾಮ್, ಬಿಸ್ಕತ್- ಬೆಣ್ಣೆ..ಉಪ್ಪಿನಕಾಯಿ, ಸಾಕಷ್ಟು ಕುಡಿಯುವ ನೀರು...ಪ್ರಥಮ ಚಿಕಿತ್ಸಾಡಬ್ಬಿ ಟಾರ್ಚ್ ಗೆ ಸೆಲ್ಲ್ (ದೊಡ್ಡ hunting torch ಇತ್ತು. ಸಕಥ್ powerful..) , ಜಮಖಾನೆ, ಹಳೆಯ ವಾರ್ತಾಪತ್ರಿಕೆಗಳು..etc etc.ಮುಂತಾದವು ಎಲ್ಲ ನನ್ನ ಡಿಪಾರ್ಟ್ಮೆಂಟ್.  ದೊಡ್ಡದೊಂದು ಆರ್ಮಿ ರಕ್ ಸ್ಯಾಕ್ ಒಂದಿತ್ತು. bachelor ಹುಡುಗರೆಲ್ಲ ಆರಾಮಾಗಿ ಕೈ ಬೀಸಿ ಬರುತ್ತಾ ಇದ್ದರು.:-) 
ನನ್ನದಿನ್ನೂ ಡಿಗ್ರಿ ಪರೀಕ್ಷೆ ಮುಗಿದಿರಲಿಲ್ಲ. ಆದುದರಿಂದ ನನ್ನ ವಾರದ ದಿನಚರಿ ಹೀಗಿರುತ್ತಿತ್ತು. ಶ್ರೀಕಾಂತ್ ಬೆಳೆಗ್ಗೆ 10.00 ಗಂಟೆಗೆಲ್ಲ ಮನೆ ಬಿಟ್ಟರೆ ಬರುತ್ತಿದ್ದಿದ್ದೆ ರಾತ್ರಿ 9.00 ರ ನಂತರ, ಬ್ಯಾಂಕಿನ field officer ಹುದ್ದೆಯಲ್ಲಿದ್ದರಿಂದ ವಾರದಲ್ಲಿ ಮೂರು ದಿನ ಹಳ್ಳಿಗಳಿಗೆ visit. ಆಗ ಬರುವುದು ರಾತ್ರಿ ಎರಡು ಗಂಟೆ ಆಗಿದ್ದೂ ಇದೆ.
ನಾನೋ ಮುಂಬೈನಿಂದ direct ತೀರ್ಥಹಳ್ಳಿಗೆ ಬಂದಿದ್ದು. ಸ್ವಲ್ಪ ಸಮಯ ಕೂಡು ಕುಟುಂಬದ ಜತೆ ಇದ್ದುದರಿಂದ ನನಗೆ ಅಷ್ಟೊಂದು ಕಷ್ಟ ಅನಿಸಿರಲಿಲ್ಲ. ಆದರೆ ಕೊಪ್ಪಕ್ಕೆ ಹೋದ ಮೇಲೆ ನಾವಿಬ್ಬರೆ. ಮನೆ ಪೇಟೆಯಿಂದ ಸುಮಾರು ದೂರ. ಬೆಳಿಗ್ಗೆ ಶ್ರೀಕಾಂತ ಹೋದ ನಂತರ ಮನೆಯ ಸಾಫ್ ಸಫಾಯಾ...ಕನ್ನಡ ಬರುತ್ತಿರಲಿಲ್ಲವಾದ್ದರಿಂದ ನಾನು ಮನೆಯಿಂದ ಹೊರಗೂ ಹೋಗುತ್ತಿರಲಿಲ್ಲ. ಮಧ್ಯಾಹ್ನ ಅಡಿಗೆ ಮಾಡುತ್ತಿರಲಿಲ್ಲ. ರಾತ್ರಿನೆ  ಅಡುಗೆ.ಕ್ಯಾಸೆಟ್ ಪ್ಲೇಯರ್ ನಲ್ಲಿ ಹಳೆಯ ಹಿಂದಿ ಹಾಡುಗಳನ್ನು ಹಾಕಿಕೊಂಡು ನನ್ನ ಮನೆ ಕೆಲಸ ಎಲ್ಲ ಪೋರೈಸಿ, ನಾನು ಓದಲು ಕುಳಿತುಕೊಳ್ಳುತ್ತಿದೆ. ಆಗಾಗ ಕರೆಂಟ್ ಹೋಗುತ್ತಿತ್ತು. ಮಳೆಗಾಲದಲ್ಲಂತೂ ಒಂದು ಸಲ 15  ದಿನ ಕರೆಂಟ್ ಇರಲಿಲ್ಲ. ಆಗಲೇ ನಾನು ಬಾವಿಯಿಂದ ನೀರು ಸೇದಲು ಕಲಿತಿದ್ದು. ಮುಂಬೈ ನಲ್ಲಿ ರಾತ್ರಿ ಅನ್ನುವುದೇ ಇರುತ್ತಿರಲಿಲ್ಲ. ಎರಡು ಗಂಟೆ ತನಕ ವಾಹನಗಳು ಓಡಾಡುತ್ತಲೇ ಇರುತ್ತಿದವು , ಆಮೇಲೆ ಬಿಲ್ಡಿಂಗ್ ಕೆಳಗಡೆ ಇರುವ ಹೋಟಲ್ ನ ಸದ್ದು ಗದ್ದಲ್...ರಸ್ತೆಯ ಬೀದಿ ದೀಪ ಗಳಿಂದ ಮನೆಯೊಳಗೆ ರಾತ್ರಿಯೂ ಬೆಳಕು ಕಂಡು  ಬೆಳೆದಿದ್ದ ನಾನು,ಕೊಪ್ಪದ ಕತ್ತಲೆಗೆ  ಹೆದರಿದ್ದೆ. ಕರೆಂಟ್ ಹೋದರಂತೂ ಮುಗಿಯಿತು. ಮೊದಲು ಕೆಲವು ದಿನ ಬಾಗಿಲ ಬಳಿ ಕೂತು ಅತ್ತಿದ್ದೆ. ಕರೆಂಟ್ ಹೋದಾಗ ಕ್ಯಾಂಡಲ್ ಹಚ್ಚಿಟ್ಟು, ಟಾರ್ಚ್ ಬಗಲಲ್ಲಿಟ್ಟು ಒಂದು ಕೋಲು ಹಿಡಿದುಕೊಂಡು ರಾತ್ರಿಯ ಗವ್ ಎನ್ನುವ silence ಗೆ ಶ್ರೀಕಾಂತ ಬುಲೆಟ್ ಬೈಕ್ ನ ಡಗ್ ಡಗ್ ಸದ್ದಿಗೆ ನನ್ನ ಕಿವಿ tuned ಆಗಿರುತ್ತಿತ್ತು, ಅಷ್ಟರವರೆಗೆ ಕ್ರೀಮಿಕೀಟಗಳು ಹೊರಡಿಸುವ ಸದ್ದು, ನನ್ನ ಹೃದಯದ ಲಬ್ ಡಬ್ ಕೇಳುತ್ತ ಕೂರುತ್ತಿದ್ದೆ..ಅದರ ಮಧ್ಯೆ ಬಳಿಯಲ್ಲೆ ಇರುವ ಕಬ್ಬಿನ ತೋಟದಿಂದ ಊಳಿಡುವ ನರಿ ನನ್ನ ಅಳುವನ್ನು ಹೆಚ್ಚಿಸುತ್ತಿದ್ದುವು...ಕ್ರಮೇಣ ನನಗೆ ನಾನೆ ಸಮಾಧಾನ ಧೈರ್ಯ ಹೇಳಿಕೊಂಡೆ...ಹೆದರಿದರೆ ಏನೂ ಉಪಯೋಗವಿಲ್ಲ. ಏನಾಗುತ್ತೆ ಮಹಾ ಅಂತ...
ವಾರಾಂತ್ಯಕ್ಕೆ ಜೀವ ಹಾತೊರೆಯುತ್ತಿತ್ತು. ಕೊಪ್ಪದಲ್ಲ್ಲಿದ್ದ ಐದು ವರ್ಷ ಪ್ರತೀ ಶನಿವಾರ ಭಾನುವಾರ ನಾವು ಬೈಕ್ ನಲ್ಲಿ ಹೋಗುತ್ತಿದ್ದೆವು. ಹೀಗೆ ಒಂದುಸಲ ನ್ಯೂಸ್ ಪೇಪರ್ ನಲ್ಲಿ ಜಿ.ಎನ್. ಅಶೋಕವರ್ಧನ್ ಬರೆದ  ’ಚಕ್ರವರ್ತಿಗಳು’ ಅನ್ನುವ ಪುಸ್ತಕದ ವಿಮರ್ಶೆ ಬಂದಿತ್ತು. ನಾನು ಫೈನಲ್ ಯಿಯರ್ ಪದವಿ ಪರೀಕ್ಷೆ  ಕೊಟ್ಟು ಮುಂಬೈನಿಂದ ಬಂದಿದ್ದಷ್ಟೆ.. ಅರೇ ನಮ್ಮ ಹಾಗೆ ಬೈಕರ್ಸ್ ಈ ಪುಸ್ತಕ ನಾವು ಕೊಳ್ಳಲೇ ಬೇಕು. ಈ ಸಲ ಮಂಗಳೂರು-ಉಡುಪಿ ಪ್ರಯಾಣ ಎಂದು ಫಿಕ್ಸ್ ಆಯಿತು. ಸರಿ ನನ್ನ ಯಥಾ ಪ್ರಕಾರ ಟ್ರಾವೆಲ್ ಪ್ಲ್ಯಾನ್ಸ್ ಶುರು. 
ಬೆಳಿಗ್ಗೆ 6.00 ಗಂಟೆಗೆ ಮನೆ ಬಿಟ್ಟೆವು. ಟ್ರಾಫಿಕ್ ಅನ್ನುವುದೇ ಇರುತ್ತಿರಲಿಲ್ಲವಾದ್ದರಿಂದ ಸ್ವಲ್ಪ ವೇಗವಾಗೆ ಹೊರಟು ಬೇಗ ಮಂಗಳೂರು ತಲುಪಿದೆವು. ಮಧ್ಯದಲ್ಲಿ ಸ್ವಲ್ಪ ಹೊತ್ತು  ಆಗುಂಬೆಯಲ್ಲಿ ಬ್ರೇಕ್ ಕೂಡ ತೆಗೆದುಕೊಂಡೆವು. ಅತ್ರಿ ಬುಕ್ ಸೆಂಟರ್  (ABC)ಬಳಿ ಹೋದಾಗ ಅದು ಇನ್ನೂ ತೆರೆದಿರಲಿಲ್ಲ. ನಾವು ಅಲ್ಲೆ ಕಾಯುತ್ತ ನಿಂತುಕೊಂಡೆವು. ಪುಸ್ತಕದ ಅಂಗಡಿ ಓಪನ್ ಆದ ಕೂಡಲೆ ನಾವು ಅಷ್ಟೂ ಜನ ಒಳಗೆ. ನನಗೆ ಬೇಕಾದ ಪುಸ್ತಕಗಳನ್ನೆಲ್ಲ ನಾನು ಮುಂಬೈ ನ Strand ಬುಕ್ಸ್ ನಿಂದ ಹೊತ್ತು ತರುತ್ತಿದ್ದೆ. ಕನ್ನಡ ನನಗೆ ಬರುತ್ತಿರಲಿಲ್ಲವಾದ್ದರಿಂದ ನಾನು ಸುಮ್ಮನೆ ಕೈ ಗೆ ಸಿಕ್ಕ ಪುಸ್ತಕ ತಿರುವಿ ಹಾಕುತ್ತ ಇದ್ದೆ. ಹಸಿವೆ, ಪ್ರಯಾಣದ ಆಯಾಸ ಅಷ್ಟು ಮಾತ್ರವಲ್ಲ i was pregnant ಕೂಡ. ಅಷ್ಟರಲ್ಲಿ ಕೋಮಾರ್ ಎಂಬ ಮಿತ್ರರು...ಬಲು joker ಅವರು ನಾನು ಸುಮ್ಮನಿದ್ದುದನ್ನು ನೋಡಿ ಏನೊ ಜೋಕ್ ಮಾಡಿದರು.  ನನಗೆ ನಗು ಬಂದು ನಾನು ಜೋರಾಗಿ ನಕ್ಕಿದ್ದೆ. ಆಗ ಪುಸ್ತಕದ  ಅಂಗಡಿಯ ಮಾಲೀಕ ಸಿಡುಕಿ ಜೋರಾಗಿ serious ಇದ್ದರೆ ಮಾತ್ರ ಇಲ್ಲಿ ಬರಬೇಕು..ಅಂತ ಬೈದರು. ನಾನೋ ಕಕ್ಕಾಬಿಕ್ಕಿ. ನನ್ನ 19 ವರ್ಷದಲ್ಲಿ ಯಾರೂ ನನಗೆ ಗದರಿದವರೇ ಇಲ್ಲ. ಆಗಲೇ ಸರಿಯಾಗಿ ಅವರ ಮುಖ ನೋಡಿದ್ದು ನಾನು. ನಮ್ಮ ರಾಯರು ಎಲ್ಲೋ ಪುಸ್ತಕಗಳ ಮಧ್ಯ ಹುದುಗಿಹೋಗಿದ್ದರು. ಅವರು ಬೈದಿದಕ್ಕೆ ನನಗೆ ಸಿಟ್ಟು ಬಂದು ನಾನು ಹೊರಗೆ ಬಂದು ನಿಂತೆ. ಈ rude ಮೀಸೆ ಮಾಮನ ಹತ್ತಿರ ಯಾರು ಪುಸ್ತಕ ತೆಗೋತಾರೆ ಅಂತ ಅನ್ನಿಸಿತ್ತು. ಅಷ್ಟರಲ್ಲೇ ಶ್ರೀಕಾಂತ ಅವರು ಬರೆದಿದ್ದ ಪುಸ್ತಕ ಜತೆ ಇನ್ನೂ ಹಲವಾರು ಪುಸ್ತಕಗಳನ್ನು ಕೊಂಡು ಅವರ ಬಳಿ ಲೋಕಾಭಿರಾಮವಾಗಿ ಮಾತನಾಡುತ್ತ, ನಮ್ಮನ್ನು ಇನ್ನೂ ಸ್ವಲ್ಪ ಹೊತ್ತು ಕಾಯಿಸಿದರು. ನಾನು ಹೊರಗಡೆ ನಿಂತು ಇನ್ನು ಈ ಅಂಗಡಿಗೆ ಕಾಲಿಡಲ್ಲ ಅಂತ promise ಮಾಡಿದೆ. ಆ ಮೇಲೆ ನಾವು ಉಡುಪಿ, ದೇವಸ್ಥಾನ,St. Marys  ಸಮುದ್ರ ಅಂತೆಲ್ಲ ಹೋಗಿ ವಾಪಸ್ ಭಾನುವಾರ ಸಂಜೆ ಮನೆಗೆ ಬಂದ್ವಿ.
ಅಷ್ಟರಲ್ಲೇ ನಮಗೆ ಬೆಳ್ತಂಗಡಿಗೆ ವರ್ಗವಾಯಿತು. ಅಲ್ಲಿಂದ ನಾವು ಪ್ರತಿ ವಾರಾಂತ್ಯ ಮಂಗಳೂರಿಗೆ ಹೋಗಿ ಬರುವುದು ಶುರುವಾಯಿತು. ನಮ್ಮ ನೆಂಟರ ಮನೆಗೆ ಹೋಗುವಾಗಲೆಲ್ಲ ಅತ್ರಿ ಬುಕ್ ಸೆಂಟರ್ ಕಾಣಿಸುತ್ತಿತ್ತು. ಅದರಲ್ಲಿ ಪುಸ್ತಕದ ಅಟ್ಟಿ ಬೆಳೆಯುವುದು ಕಾಣಿಸುತ್ತಿತ್ತು. ನಾನು ಮಾತ್ರ ಪುನ: ಆ ಶಾಪ್ ಗೆ ಕಾಲಿಡಲಿಲ್ಲ.  ಈಗ childish ಅನ್ನಿಸಿ ನಗು ಬರುತ್ತಿದೆ. ಅದು ಮುಚ್ಚುತ್ತಿದೆ ಅಂದಾಗ ಎಲ್ಲ ನೆನಪು ಬಂತು. ಅಶೋಕವರ್ಧನ್ ಅವರ ತಂದೆಯವರು GTN ಅವರು ಬರೆದ ಎರಡು ಪುಸ್ತಕ ನನ್ನ ಬಳಿ ಇವೆ. ಅದರಲ್ಲಿ NCC ದಿನಗಳು ನನಗೆ ತುಂಬ ಇಷ್ಟ. ನನ್ನ ಲೈಬ್ರರಿಯಲ್ಲಿವೆ. ಮತ್ತು ಅಷೋಕವರ್ಧನ್ ಅವರು ಬರೆದ ’ಚಕ್ರವರ್ತಿಗಳು’ ಕಪಾಟಿನಲ್ಲಿ ಎದುರಿಗೇ ಇದೆ. ಹಾಗಾಗಿ ಯಾವತ್ತು ಅವರನ್ನ ಅವರ ಮುಖವನ್ನು ಮರೆತಿಲ್ಲ. :-)
ಪ್ಲಾಸ್ಟಿಕ್ ಚೀಲ ಬಳಸದೇ ಪೇಪರ್ ನಲ್ಲಿ ಪುಸ್ತಕ ಕಟ್ಟಿ ಕೊಡುತ್ತಿದ್ದಾರೆ ಅಂತ ಕೇಳಿದಾಗ ಅವರ ಬಗ್ಗೆ ಒಂದುತರಹ ಹೆಮ್ಮೆ ಎನಿಸಿದ್ದು ನಿಜ....ಅವರ ಬಗ್ಗೆ ಅವರ ಪುಸ್ತ್ಕಕ ದ collection ಬಗ್ಗೆ ಜನರು ಒಳ್ಳೆಯ ಮಾತನಾಡಿದ್ದಾಗಲೆಲ್ಲ...ಹೂಂ ಬಹುಶ: ಆ ದಿನ ನನ್ನ ಟೈಮ್ ಸರಿಯಿರಲಿಲ್ಲ ಅಂದುಕೊಳ್ಳುತ್ತಿದ್ದೆ. ಹಾಗೂ ಆಗುತ್ತೆಯಲ್ಲವಾ ಕೆಲವೊಮ್ಮೆ?  ಅಬ್ಬಾ ಎಷ್ಟೊಂದು ವರ್ಷಗಳೆ ಕಳೆದುಹೋದವು. ಈಗ ನನ್ನ 42 ವಯಸ್ಸಿನಲ್ಲಿ ಇದನ್ನೆಲ್ಲ ನೆನಪು ಮಾಡಿಕೊಳ್ತಾ ಶ್ರೀಕಾಂತ ಜತೆ  ನಿಮ್ಮ ಜತೆ ಶೇರ್ ಮಾಡಿಕೊಳ್ಳ್ಳುತ್ತ  ಇದ್ದೇನೆ.


ಇನ್ನೂ ದೇಶಕಾಲ ಪುಸ್ತಕದ ಬಗ್ಗೆ ನನಗೆ ತಿಳಿದದ್ದೆ ಅದರ ಐದನೇ ವರ್ಷದ ಹುಟ್ಟಿದ ಹಬ್ಬ ಆಚರಿಸಿದಾಗ. ಮಿತ್ರ ಅಪಾರ (ರಘು) ನನಗೆ ಆ ಪುಸ್ತಕ ಕೊಟ್ಟಿದ್ದು. ಎಷ್ಟು ಇಷ್ಟ ಆಯಿತೆಂದರೆ ಹಳೆಯ ಕೆಲವು ಪ್ರತಿಗಳು ಸಪ್ನಾ ಹಾಗು ಅಂಕಿತದಲ್ಲಿ ಸಿಕ್ಕಿದ್ದು ಎಲ್ಲ ತೆಗೆದುಕೊಂಡು ಬಂದಿದ್ದೆ. ಉಳಿದದ್ದು  ನಾಗರಾಜ ರಾವ್ ಜವಳಿಯವರ ಬಳಿ borrow ಮಾಡಿ ಓದುವುದೆಂದು ಆಯಿತು. ಹೊಸ ಪುಸ್ತ್ಕಕ ತಂದಾಗಲೆಲ್ಲ ಮೊದಲು ನಾನು ಆ ಪುಸ್ತಕದ ಮುಖಪುಟ ನೇವರಿಸುತ್ತೇನೆ. ಆಮೇಲೆ ಹಿಂಬದಿ ಪುಟ ಓದುತ್ತೇನೆ. ಆ ಮೇಲೆ ಮೊದಲಿನಿಂದ ಕೊನೆಯ ತನಕ ಒಂದೂ ಅಕ್ಷ ರ ಬಿಡದೆ ಓದುತ್ತೇನೆ.  ವಿವೇಕ ಶಾನುಭಾಗ್ ಅವರ ಆಪ್ತ ಮುನ್ನುಡಿ ಓದಿಯೇ ನನಗೆ ಅವರು ಆತ್ಮೀಯ ರಾಗಿಬಿಟ್ಟಿದ್ದಾರೆ.ಅವರ ಪ್ರತೀ ಪುಸ್ತಕ ವಿಶೇಷವಾಗಿವೆ...ಮುಖಪುಟದಿಂದ ಹಿಡಿದು, ವಿಷಯದ ವೈವಿಧ್ಯತೆ, ಒಳಗಿನ illustrations, ಪುಟಗಳ (pages) quality...etc ಈಗ ಅವರು ಕೆಲ ಸಮಯದ ಬ್ರೇಕ್ ಅಂದಾಗ ಸಿಕ್ಕಾಪಟ್ಟೆ ಬೇಜಾರಾಗಿದೆ.:-(
ದೇಶಕಾಲ 28 ನೆ ಸಂಚಿಕೆಯಲ್ಲಿ ನನಗೆ ಇಷ್ಟವಾದ ಕತೆಗಳು in the order of my liking i have numbered them 1 to 8
1.ಮೋಹನ ಸ್ವಾಮಿ – ಷಣ್ಮುಖ ಎಸ್
2.ಫೋಟೋ ದೊಳಗೆ ಸಿಕ್ಕಿಹಾಕಿಕೊಂಡ ಮುಖ – ಮೌನೇಶ ಬಡಿಗೇರ್
3.ಒಳಾಂಗಣ – ಜಯಂತ ಕಾಯ್ಕಿಣಿ
4.ಮತ್ತೆ ಹರಿದ ದೇವರು – ಎಚ್ ಎಸ್ ನಾಗವೇಣಿ
5.ಬೆಳಗೂ ಅದೆ, ಕತ್ತಲೆಯೂ ಅದೆ – ಅಮರೇಶ ನುಗಡೋಣಿ
6.ಸಂಪೂರ್ಣ ಪಾರಿಜಾತ – ಅಬ್ದುಲ್ ರಶೀದ್
7.ವಿಚಿತ್ರಕತೆ – ವಿವೇಕ ಶಾನಭಾಗ
8.ಮುಂದುವರೆಯುವುದು – ಎಮ್. ಎಸ್. ಶ್ರೀರಾಮ್. 

ಈ ಕತೆಗಳು ಈ order ನಲ್ಲಿ ಯಾಕಿಷ್ಟ ವಾದವು ಎನ್ನುವ elaboration , ಮುಂದಿನ ಪೋಸ್ಟ್ ನಲ್ಲಿ.........
ಪ್ರತಿ ಸಲ ದೇಶಕಾಲದ ಬಗ್ಗೆ ಬ್ಲಾಗ್ ಅಥವ ಫೇಸ್ ಬುಕ್ ನಲ್ಲಿ ಹಾಕಿದ್ದಾಗಲೆಲ್ಲ ನನಗೆ ಕೆಲವು ಮೈಲ್ ಗಳು ,’ಏನು ನೀವು ದೇಶಕಾಲ advertisement ನ ಹೊಣೆ ಹೊತ್ತಿದ್ದೀರಾ’ ಅಂತ...ಇನ್ನೂ ಕೆಲವರು ಅವರು ಕೊಂಕಣಿಯವರು ಅಂತ ಅದಕ್ಕೆpartiality  ಎಂದು ಅಪಾದಿಸಿದವರು ಇದ್ದಾರೆ.
ಅವರಿಗೆ ನನ್ನ ಉತ್ತರ : ಪುಸ್ತಕ ಚೆನ್ನಾಗಿದ್ದರೆ ಅದರ advertisement ಮಾಡಲು ನನಗೆ ಎಲ್ಲ ಹಕ್ಕು ಇದೆ, ಮತ್ತು ಕೊಂಕಣಿಯವರು ಅಂದಿದಕ್ಕೆ, ಯು.ಆರ್ ಅನಂತಮೂರ್ತಿ, ಎಸ್. ಎಲ್ ಭೈರಪ್ಪ, ಶ್ರೀನಿವಾಸ ವೈದ್ಯ, ವಸುಧೇಂದ್ರ, ವೈದೇಹಿ ಅವರ ಬರಹ ಕೂಡ ಇಷ್ಟ ಆಗುತ್ತೆ ಅಂತ ಹಾಕಿದ್ದೇನಲ್ಲವಾ? ಅಂತಲೂ ಕೇಳಿದ್ದೇನೆ. -’ಅದು ನಿಜಕ್ಕೂ ನನ್ನ ತಲೆಗೆ ಹೊಳಿಲೇ ಇಲ್ಲ..:-( ಹಾಗೆ ನೋಡಿದ್ರೆ ಜಯಂತ ಕಾಯ್ಕಿಣಿ, ಯಶವಂತ ಚಿತ್ತಾಲರು ಹಾಗೂ ಇತ್ತಿಚಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಗೋಪಾಲಕೃಷ್ಣ ಪೈ ಯವರೆಲ್ಲ ಕೊಂಕಣಿಯವರು ಅಂತ ನೀವು ಹೇಳಿದ್ದ ಮೇಲೆ realise ಆಯ್ತು..ನನಗೆ ಹೆಮ್ಮೆ ಅಂತ ಉತ್ತರ ಕಳಿಸಿದ್ದೆ..:-) ನನ್ನ fav ಬರಹಗಾರರು ಎಸ್. ಎಲ್ ಭೈರಪ್ಪ ಮತ್ತು ಯಶವಂತ ಚಿತ್ತಾಲರು. ಅವರು ಬರೆದ ಎಲ್ಲ ಪುಸ್ತಕಗಳು ನನ್ನಲ್ಲಿವೆ ಮತ್ತು ಅವನ್ನು ಓದಿದ್ದೇನೆ.
ಅಂದ ಹಾಗೆ ಗೋಪಾಲಕೃಷ್ಣ ಪೈ ಮಾಮ ಮುಂಬೈನಲ್ಲಿ  ನಮ್ಮ ಬಿಲ್ಡಿಂಗ್ ನಲ್ಲೆ ಇದ್ದಿದ್ದು. ಅವರ ಬಗ್ಗೆ ನನಗೆಲ್ಲ ಗೊತ್ತು ಆದರೆ ಅವರಿಗೆ ನಾನು ಗೊತ್ತಿಲ್ಲ. ಅವರಿಗೆ ನನ್ನ ತಮ್ಮ ಕೃಷ್ಣಾನಂದ, ಪಾಂಡುರಂಗ ಮತ್ತು ತಂಗಿ ಜ್ಯೋತಿ ಖಂಡಿತ ಗೊತ್ತು..:-))) ಶ್ರೀಕಾಂತ ರಾತ್ರಿ ಬೆಳಗೂ ಕೂತು ಅವರ ಸ್ವಪ್ನ ಸಾರಸ್ವತ’ ಓದಿದಾಗ ನನಗೆ ಹೊಟ್ಟೆಕಿಚ್ಚಾಗಿತ್ತು. ಅವರು ಯಾವ ಪುಸ್ತಕ ಹೀಗೆ at a stretch ಓದಿದ್ದು ನಾನು ನೋಡೆ ಇರಲಿಲ್ಲ. ನಾನಿನ್ನು ಪುಸ್ತಕ ಓದಿಲ್ಲ. ಅದರ ಗಾತ್ರ ನೋಡಿ ನನಗೆ ಗಾಬರಿ ಮತ್ತೀಗ ಅದು ತೀರ್ಥಹಳ್ಳಿ ಯಲ್ಲಿ ನೆಂಟರಿಷ್ಟರಲ್ಲಿ rounds ಹಾಕ್ತಾ ಇದೆ. :-)
dont know why i prefer books to human beings...i feel safe with them.ತುಂಬ ಚಿಕ್ಕ ಪ್ರಾಯಕ್ಕೆ ಓದುವ habits ಬೆಳೆಸಿಕೊಂಡಿದ್ದೆ. ನನ್ನ 6 ನೆ ವರ್ಷದಿಂದಲೆ....ನನ್ನ ಅಜ್ಜ ನನಗಾಗಿ ತುಂಬ ಪುಸ್ತಕ ಖರೀದಿಸುತ್ತಿದ್ದರು. ನನ್ನ ಸುತ್ತ ಮುತ್ತಲೂ ಯಾವಾಗಲೂ ಪುಸ್ತಕ comics ಗಳು ಸುತ್ತುವರೆದಿರುತ್ತಿದ್ದವು. ಗೊಂಬೆ ಎಲ್ಲ ಇಟ್ಟುಕೊಂಡು ಆಡಿದ್ದು ನೆನಪೆ ಇಲ್ಲ. ಮಾಲವಿಕ ಹುಟ್ಟಿದ ಮೇಲೆ ಅಮ್ಮನ ಪತ್ರ ಹೀಗೆ ಇರುತ್ತಿದ್ದವು ’ನೀವು ಇಬ್ಬರೂ ಹಾಗೆ ಓದುತ್ತ ಕೂತರೆ ಮಾಲವಿಕ ಭಾಷೆ ಕಲಿಯುವುದು ಹೇಗೆ ’ ಅಂತ...ನಿಜ ಹೇಳಬೇಕೆಂದರೆ ಮಾಲವಿಕ ಮಾತು ಕಲಿತಿದ್ದು ಶ್ರೀಕಾಂತರ ಹಲವಾರು ಮಿತ್ರರಿಂದಲೆ. ದಿನ ಸಂಜೆ ಅವರು ಬಂದು ಮಾಲವಿಕ ಳನ್ನು ಮಾತನಾಡ್ಸಿ ಅವಳ ಜತೆ ಆಡುತ್ತಿದ್ದರು. ನಾನು ಅವರಿಗೋಸ್ಕರ ಅಡಿಗೆ ಮಾಡ್ತಿದ್ದೆ. :-) ಮಾಲವಿಕ ನಿಹಾರಿಕ  ಕೂಡ  ಓದುವ ಹವ್ಯಾಸ ಬೆಳಸಿಕೊಂಡಿದ್ದಾರೆ.  i do find Televisions a detriment to reading habits....ನಿಹಾ ಳ ಬರಹ ಕೂಡ ಚೆನ್ನಾಗಿದೆ. ಈಗ ಹಿಂದಿ ಕನ್ನಡದಲ್ಲಿ ಬರೆಯುವ  ಪ್ರಯತ್ನ ನಡೆಸಿದ್ದಾಳೆ. ಕಾಲೇಜಿನ ಸಹಪಾಠಿಗಳ ಜತೆ ಸೇರಿ ಒಂದು magazine ನನ್ನು revive ಮಾಡುತ್ತಿದ್ದಾಳೆ. ಶ್ರೀಕಾಂತ ಮತ್ತು ಮಾಲವಿಕ ಕೂಡ ಚೆನ್ನಾಗಿ ಬರೆಯುತ್ತಾರೆ ಆದರೆ ಅವರಿಗೆ ಪುರುಸೊತ್ತು ಇಲ್ಲ....:-)
 ನನ್ನ ಪುಸ್ತಕ ಓದುವ ಹವ್ಯಾಸ ತಿಳಿದಿರುವ ಆತ್ಮೀಯರೆಲ್ಲ e-ಬುಕ್, ಕಿಂಡಲ್ ಬಗ್ಗೆ ಎಲ್ಲ ಸಲಹೆ ಕೊಡುತ್ತಿರುತ್ತಾರೆ.ಎಲ್ಲ ಕ್ಲಾಸಿಕ್ಸ್ ನ ಪಿಡಿಎಫ್ ನನ್ನ ಸಿಸ್ಟಮ್ ನಲ್ಲಿದೆ . ಆದರೂ ಪುಸ್ತ್ಕಕ ಕೈಯಲ್ಲಿ ಹಿಡಿದು, feel ಮಾಡಿಕೊಂಡು , ಮಲಗಿ..ಒಂದು ಪ್ಲೇಟ್ ಕುರುಕುಲು ತಿಂಡಿ ಜತೆ ...ಓದುವುದೇ ಹೆಚ್ಚು ಇಷ್ಟ. ಅಥವ ನನ್ನ ಝೂಲಾದ ಮೇಲೆ ಕೂತು ಓದುವುದು, ಟೀ ಜತೆ ಓದುವುದು ಇವೆಲ್ಲ ತುಂಬಾ ಇಷ್ಟ....
ಶ್ರೀಕಾಂತ ಮೊದಲೆಲ್ಲ ಎಷ್ಟೊಂದು ಓದ್ತಿಯ..ಬರೀ ಬರೀ..ಅನ್ನುತ್ತಿದ್ದರು..ಈಗ ಅಲ್ಪ್ಸ ಸ್ವಲ್ಪ ಬರೆಯುತ್ತೇನಾದರು...ಬರಹದಲ್ಲಿ depth ಇಲ್ಲ ಅನ್ನುತ್ತಿರುತ್ತಾರೆ...its not necessary that everybody who read a  lot should also be able to write well...my blog is full of my idle jottings ಅಷ್ಟೆ writing is not my forte......:-( ಇದು ಶ್ರೀಕಾಂತ ಒಬ್ಬರ ಅಭಿಪ್ರಾಯ ಅಲ್ಲ. ಹಲವಾರು ಓದುಗರು ಇದನ್ನು ನನಗೆ ಹೇಳಿದಾರೆ. ನನ್ನ ಬ್ಲಾಗ್ ನಲ್ಲಿ ನನ್ನ ಕನ್ನಡದ practice ಮಾಡುತ್ತೇನೆಯೆ ಹೊರತು ನನ್ನ ಬರಹಗಳ ಬಗ್ಗೆ ನನಗೆ ಹೇಳಿಕೊಳ್ಳುವ ಅಭಿಮಾನವೇನು ಇಲ್ಲ. :-) ಆಗಲೇ ಇದು ನನ್ನ 150 ನೇ ಪೋಸ್ಟ್...not bad at all, all things considered!!
ಇನ್ನು ನನಗೆ ನಿಮಗೂ ಬ್ರೇಕ್..ನಮ್ಮ ಸಂಸ್ಥೆಯ 10 ನೆ ಹುಟ್ಟುಹಬ್ಬದ (ಅದು ಇದ್ದದ್ದು ನವೆಂಬರ್ 15 ರಂದು...ಯಾರಿಗೂ ಪುರುಸೊತ್ತಿರಲಿಲ್ಲ..ಈಗಲೂ ಸಡನ್ ಆಗಿ) ಸಮಾರಂಭಕ್ಕೆ ನಾವೆಲ್ಲ ರೆಡಿ ಯಾಗ್ತಿದ್ದೇವೆ .ಈ ವರ್ಷ ಕೂಡ ನಮಗೆ ನಬಾರ್ಡ್ ನಿಂದ best NGO ಪ್ರಶಸ್ತಿ ಸಿಕ್ಕಿದೆ.awards mean we have to work harder. ಕಾರ್ಯಕ್ರಮದ ನಂತರ ನನ್ನದು ಒಂದು ಚಿಕ್ಕ ಟೂರ್....yes as usual books are accompanying me.....ವ್ಯಾಸರಾಯ ಬಲ್ಲಾಳರ ಉತ್ತರಾಯಣ, The Crimson Throne by Sudhir Kakar ಮತ್ತು tales told by Mystics by Manoj Das....
ನಾನು ವಾಪಸ್ ಬರುವ ತನಕ... ತನಕ....ಬೈ ಬೈ....take care!!
:-)