ಮಧ್ಯಾಹ್ನ ಊಟಕ್ಕೆ ಅಚಾನಕ್ಕ್ ಆಗಿ ಗೆಸ್ಟ್ ಇದ್ರು. ಹೊಟ್ಟೆ ಸರಿಯಿಲ್ಲದ್ದರಿಂದ ಮೊಸರನ್ನ ಊಟ ಮಾಡಲು ಬಂದವರು. ಈ ತಂಬುಳಿ ಬಗ್ಗೆ , ಅದರ ಔಷಧಿಯ ಗುಣಗಳ ಬಗ್ಗೆ ಹೇಳಿ' ಅಜ್ವಾಯಿನ್ ಪತ್ತೆ ಕಾ ಚಟ್ನಿ' ಅಂದೆ. ಅದಕ್ಕೆ ಬಂದವರು 'ಅರೇ ಏ ತೋ ಸೇಹತ್ ಕೆ ಲಿಯೇ ಬಹುತ್ ಅಚ್ಚಾ ಹೈ ' ಅಂದಿದಲ್ಲದೆ ನಾನು ಮಾಡಿದ ೫-೬ ಬಗೆಯ ಅಡಿಗೆಯನ್ನು ಊಟ ಮಾಡಿ ಬಾಳೆ ಹಣ್ಣು ತಿನ್ನಲು ಜಾಗ ವಿಲ್ಲಾ ಅಂತ ಪೇಚಾಡಿಕೊಂಡು ಹೋದರು. ( ಇವತ್ತು ಬೆಳಿಗ್ಗೆ ಯಾರಾದರೂ ಊಟಕ್ಕೆ ಬರಬಹುದು ಅನ್ನಿಸಿತ್ತು ಯಾಕೋ ................) :-)
ಬೇಕಾಗುವ ಸಾಮಗ್ರಿ:
4-5 ದೊಡ್ಡಪತ್ರೆ ಎಲೆಗಳು, 8-10 ಕಾಳುಮೆಣಸು, 2 ಟೇಬಲ್ ಸ್ಪೂನ್ ಕಾಯಿ ತುರಿ , ಅರ್ಧ ಟೀ ಸ್ಪೂನ್ ಜೀರಿಗೆ, ಸ್ವಲ್ಪ ತುಪ್ಪ, ಹುಣಸೆ ಹುಳಿ , ಉಪ್ಪು, ಮಜ್ಜಿಗೆ.
ಎಲೆಗಳನ್ನು ಚೆನ್ನಾಗಿ ತೊಳೆಯಿರಿ. ತುಪ್ಪದಲ್ಲಿ ಕಾಳುಮೆಣಸು-ಜೀರಿಗೆ ಹುರಿಯಿರಿ. ಕಾಯಿತುರಿಯಿಂದಿಗೆ ಎಲ್ಲವನ್ನೂ ಸೇರಿಸಿ ನುಣ್ಣಗೆ ರುಬ್ಬಿ. ಇದು ಚಟ್ನಿ ಯಾಯಿತು.
ತಂಬುಳಿಗೆ: ಮೇಲಿನ ಮಿಶ್ರಣಕ್ಕೆ ಮಜ್ಜಿಗೆ / ಮೊಸರು ಬೆರೆಸಿ ತಂಬುಳಿ ಮಾಡಿ. ಬೇಕಿದ್ದಲ್ಲಿ ಸಾಸಿವೆ ಜೀರಿಗೆ ಒಗ್ಗರಣೆ ಕೊಡಬಹುದು. ದೇಹಕ್ಕೆ ತಂಪು. ನೆಗಡಿ ಎಲ್ಲ ಆಗಲ್ಲ. ಹಸಿಮೆಣಸಿನ ಕಾಯಿಯ ಬಳಕೆಯಿಲ್ಲದ್ದರಿಂದ ಎಸಿಡಿಟಿ ಇದ್ದವರಿಗೆ ಇದು ಒಳ್ಳೆಯ ಔಷಧಿ
ಟ್ರೈ ಮಾಡ್ತೀರಾ??
:-)
Vikas Hegde ಎಂಬೋ ತಮ್ಮ ಬ್ಲಾಗ್ ಬರಹಗಾರರಿಗೆ ಧಮಕಿ ಹಾಕ್ತಿದ್ದಾನೆ . ಅದಕ್ಕೆ ಅವನ ಗೂಂಡಾಗಿರಿಗೆ ಹೆದರಿ ಈ ಝಟ್ ಪಟ್ but healthy post
( ನನ್ನ ಬ್ಲಾಗ್ ನ ೬ ನೇ ಹುಟ್ಟುಹಬ್ಬ ಕೂಡ ಆಗಿ ಹೋಯ್ತೇ?? ನನಗೆ ಮರತೇ ಹೋಯ್ತು !!! ಛೆ ಒಂದು ಟ್ರೀಟ್ ಮಿಸ್ ಆಗಿ ಹೋಯ್ತು :-)



2 comments:
Goooood :)
ವಾರ್ಷಿಕೋತ್ಸವದ ಸಂಭ್ರಮಕ್ಕೆ ತಂಬುಳಿಯಾ ರುಚಿ ನೀಡಿದ್ದಕ್ಕೆ ಧನ್ಯವಾದಗಳು, ಅಭಿನಂದನೆಗಳು, ಶುಭಾಶಯಗಳು.
Post a Comment