September 19, 2011

ತ್ಯಾಂಪಣ್ಣ ಭಂಡಾರಿ ನೋವಿನ ಎಣ್ಣೆ

ನಿನ್ನೆ ನಾವು ಡಾ. ಕೆ. ಶಿವರಾಮ ಕಾರಂತ ಕಾದಂಬರಿ ಆಧಾರಿತ ’ಬೆಟ್ಟದ ಜೀವ’ ಸಿನಿಮಾ ಪ್ರದರ್ಶನಕ್ಕೆ ಹೋಗಿದ್ವಿ. ಬೆಟ್ಟದ ತಪ್ಪಲಿನಲ್ಲಿ ವಾಸವಾಗಿದ್ದ ವೃದ್ಧ ದಂಪತಿಗಳ ಮನೆಗೆ .ದಾರಿ ತಪ್ಪಿ  ಬರುವ ಶಿವರಾಮಯ್ಯ, ಈ ದಂಪತಿಗಳೊಂದಿಗೆ ಮೂರು ದಿನ ಕಳೆಯುವ, ಅವರ ಜೀವನವನ್ನು ಹತ್ತಿರದಿಂದ ನೋಡುವ ಅವಕಾಶ ಈ ಸ್ವಾತಂತ್ರ ಚಳುವಳಿ ಹೋರಾಟಗಾರನಿಗೆ. ತೋಟನೋಡುವಾಗ ಜಾರಿ ಬಿದ್ದು ಅವನ ಕಾಲಿಗೆ ತ್ಯಾಂಪಣ್ಣನ ತೈಲ ಹಚ್ಚಿ ಕಾಲು ನೋವನ್ನು ಸರಿಮಾಡಲಾಗುತ್ತದೆ. ಆ ಪ್ರಸಂಗ ನನ್ನ  ಈ ಪೋಸ್ಟ್ ಗೆ ಪ್ರೇರಣೆ. ಚಲನಚಿತ್ರವನ್ನು ನೀವೆಲ್ಲರೂ ಖಂಡಿತ ನೋಡಲೇಬೇಕು. ಚುರುಕಾದ ಸಂಭಾಷಣೆ, ರಮ್ಯ ಮನೋಹರ ಪ್ರಕೃತಿ ದ್ರಶ್ಯ...ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ’ಬೆಟ್ಟದ ಜೀವ’. ಈ ಚಿತ್ರದ ಪ್ರದರ್ಶನ ಏರ್ಪಡಿಸಿದ ’ಅವಿರತ’ ತಂಡಕ್ಕೆ ಧನ್ಯವಾದಗಳು.
ಹಳ್ಳಿಗಳಲ್ಲಿ - ತೋಟ ಗದ್ದೆಗಳ ಕೆಲಸ ಇದ್ದ ಪ್ರತಿ ಮನೆಯಲ್ಲೂ ತ್ಯಾಂಪಣ್ಣ ಭಂಡಾರಿ ನೋವಿನ ಎಣ್ಣೆ ಇರುವುದು ಮಾಮೂಲಿ. ತೀರ್ಥಹಳ್ಳಿಯ ನಮ್ಮ ಅಂಗಡಿಯಲ್ಲೂ ಅದನ್ನು ಮಾರಲು ಇಡುತಿದ್ದು ಪ್ರತಿ ತಿಂಗಳು ನಾವು ಈ ಎಣ್ಣೆಯನ್ನು restock ಮಾಡುವುದಿತ್ತು.
ಇತ್ತೀಚಿಗೆ ಶ್ರೀಕಾಂತ ಹರಳೀಮಠದಲ್ಲಿರುವ ಅವರ ತಮ್ಮನ ಮನೆಗೆ ಭೇಟಿಯಿತ್ತಾಗ ಅಲ್ಲಿ ಗದ್ದೆ ಉಳುತ್ತಿದ್ದ ಎತ್ತು ಕಾಲು ಜಾರಿ ಬಿದ್ದು ಏಳಲಿಕ್ಕಾಗದೆ ಇದ್ದಾಗ, ತಮ್ಮ ಕೆಲಸದ ಆಳಿನಿಂದ ತ್ಯಾಂಪಣ್ಣನ ತೈಲ ತಂದು ಆ ಎತ್ತಿನ ಕಾಲಿಗೆ ಸರಿಯಾಗಿ 10 ನಿಮಿಷ ತಿಕ್ಕಿದ ಮೇಲೆ ಎತ್ತು ಕೆಲ ಹೊತ್ತಿಗೆ ತನ್ನ ಕಾಲ ಮೇಲೆ ನಿಂತು ಹೊಲ ಉಳುವುದನ್ನು ನೋಡಿ ಶ್ರೀಕಾಂತ ಸಖತ್ impressedu. ರಸ್ತೆ ಅಗಲೀಕರಣ ನಿಮಿತ್ತ ನಮ್ಮ ತೀರ್ಥಹಳ್ಳಿಯ ಅಂಗಡಿ ಪೂರ್ತಿ ನೆಲಸಮ ಮಾಡುವ ಮುಂಚೆ ಅಲ್ಲಿರುವ  ಕೆಲವು ತ್ಯಾಂಪಣ್ಣ ಭಂಡಾರಿ ನೋವಿನ ಎಣ್ಣೆ ಬಾಟಲಿಗಳಲ್ಲಿ ಒಂದನ್ನು ಶ್ರೀಕಾಂತ ಬೆಂಗಳೂರಿಗೆ ತಂದಿದ್ದರು.ಅಪರೂಪ ಅಮವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ಅವರ ಬಲಗಾಲು ಮಣಿಗಂಟು ನೋವು ಬಂದಾಗ ನೋವಿನ ಎಣ್ಣೆ ಹಚ್ಚುತ್ತಾರೆ.(ಹಚ್ಚುತ್ತಾರೆ ಅನ್ನುವುದಕ್ಕಿಂತ ನನ್ನಿಂದ ಹಚ್ಚಿಸಿಕೊಳ್ಳುತ್ತಾರೆ ಅನ್ನಬಹುದು. ಅದಕ್ಕೆ ಬೇರೆ ’ಹೇ, ನಿನ್ನ ಕೈ ನಲ್ಲಿ ಜಾದು ಇದೆ ಅಂತಲೋ ಅಥವಾ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ ಅಂತಲೋ ಹಾಡು ಹೇಳಿ ಪೂಸಿ ಬೇರೆ ಹೋಡಿತಾರೆ). ಮಣಿಗಂಟು ನೋವು  ನಮ್ಮ ಹಿಂದಿನ ದಿನಗಳ trekking/hiking/biking ನ ಉಡುಗೊರೆ. ನಾನು ಸ್ಕೂಲ್ ಗೆ ಹೋಗುವಾಗ ನನ್ನ ನೋಟ್ ಪುಸ್ತಕಗಳು ಕಾಟು ಚಿತ್ತು ಇಲ್ಲದೆ ನೀಟಾಗಿತ್ತು, ಮಾತ್ರವಲ್ಲ ಬೇರೆಯವರಿಗೆ ಮಾದರಿಯಾಗಲಿ ಅಂತ ನನ್ನ ನೋಟ್ ಪುಸ್ತಕವನ್ನು / ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ನೋಟಿಸ್ ಬೋರ್ಡ್ ನಲ್ಲೂ ಹಾಕುತ್ತಿದ್ದರು ಆದರೆ ನಮ್ಮ ಟ್ರೆಕ್ಕಿಂಕ್ ಮುಂತಾದ ಸಾಹಸದ ಕಾರಣ ನನ್ನ ತಲೆ ತುಂಬ ಚಿತ್ತು ಕಾಟುಗಳಿವೆ. :-)
ಐದು ಆರು ವರ್ಷಗಳಿಗೊಮ್ಮೆ ನನಗೆ ತಲೆ ನೋವು ಬರುತ್ತೆ. ಇತ್ತೀಚಿಗೆ ಒಂದು ದಿನ ತಲೆ ನೋವು ಶುರುವಾಯಿತು. ಸುಮಾರು ದಿನಗಳಾಗಿದ್ದವು ತಲೆಗೆ ಎಣ್ಣೆ ಹಚ್ಚದೆ. ಎಣ್ಣೆ cupboard ನಿಂದ ಎದುರಿಗೆ ಸಿಕ್ಕ ಬಾಟಲಿನಿಂದ ಎಣ್ಣೆ ಹಚ್ಚಿಕೊಂಡೆ...ಯಾಕೋ ಜಿಡ್ಡು ಜಿಡ್ಡಾಗಿತ್ತು. ಎಣ್ಣೆ ಹಚ್ಚಿದ ಎರಡೆ ನಿಮಿಷಕ್ಕೆ ತಲೆ ನೋವು ವಾಸಿ. ಆದರೆ ತಲೆ ಸ್ನಾನ ಮಾಡಿದ ಮೇಲೂ ತಲೆಯೆಲ್ಲ ಜಿಡ್ಡು. ಶ್ರೀಕಾಂತ ಅಕ್ಕ ತರಹೇವಾರಿ ಹೂವಿನ ಎಲೆಗಳಿಂದ ತಲೆಗೆ ಹಚ್ಚುವ ಎಣ್ಣೆ ಮಾಡುತ್ತಾರೆ. ಬಹುಶಃ ಶ್ರೀಕಾಂತ ಹತ್ತಿರ ಕಳುಹಿಸಿರಬೇಕು ಮತ್ತು ಶ್ರೀಕಾಂತ ನನಗೆ ಹೇಳಲು ಮರೆತು, ಅದನ್ನು ಎಣ್ಣೆ ಕಪಾಟಿನಲ್ಲಿ ಇಟ್ಟಿರಬೇಕು ಅಂತ ನಾನು ಅಂದಾಜಿಸಿದೆ. ಶ್ರೀಕಾಂತ ತೀರ್ಥಹಳ್ಳಿಯಿಂದ ಫೋನ್ ಮಾಡಿದಾಗ ಕೇಳಿದೆ, ಯಾವ ಎಣ್ಣೆಯದು?? ತಲೆ ನೋವು ಮಾಯ...(ಫೋನ್ ಮಾಡಿದಾಗ ಬಹುಶಃ  ಪಕ್ಕದಲ್ಲೆ ಯಾರೋ ಇದ್ದಿರಬೇಕು ಇಲ್ಲದಿದ್ದರೆ ಶ್ರೀಕಾಂತ ’ನಿನಗೆ ತೆಲೆ ನೆ ಇಲ್ಲ ತಲೆ ನೋವು ಎಲ್ಲಿಂದ’ ಅಂತ ಕೇಳೋವ್ರು.)
ಅವರು ಅಯ್ಯೋ ಮಾರಾಯ್ತಿ ನೋಡ್ಲಿಕ್ಕಿಲ್ಲವಾ ಅದು ತ್ಯಾಂಪಣ್ಣನ ನೋವಿನ ಎಣ್ಣೆ ಅಂದರು. ಗೊತ್ತಾಗಲಿಕ್ಕೆ ಅದಕ್ಕೆ ಲೇಬಲ್ ಬೇರೆ ಇರಲಿಲ್ಲ. ತಲೆ ನೋವಿನ ಜತೆ ಸ್ವಲ್ಪ ಕೂದಲು ಒಂದಿಷ್ಟು ಉದುರಿ ಹೋಗಿದೆ :-)
ಮತ್ತೆ ವಾಸನೆಯಿಂದ ಗೊತ್ತಾಗಲ್ವಾ ಅಂತ ನಿಮ್ಮ ಪ್ರಶ್ನೆಗಳೇನಾದರೂ ಇದ್ರೆ ಮುಂದೆ ಓದಿ
ನಮ್ಮ ಅಡಿಗೆ ಮನೆ ಎದುರಿಗೆ ಶ್ರೀ ರಾಮ ದೇವಸ್ಥಾನ. ಭಕ್ತರು ಹೆಚ್ಚಿದ ಹಾಗೆ, ದೇವಸ್ಥಾನವೂ ಗಟ್ಟಿಯಾಗಿ ದೊಡ್ಡದಾಗಿದೆ. ನಿತ್ಯ ಹೋಮ -ಹವನ- ಭಜನೆ ಮುಂತಾದವು ನಡೆಯುತ್ತಿರುತ್ತದೆ. ನಾನು ತಲೆಗೆ ಎಣೆ ಹಚ್ಚಿದ ದಿನ ಸಂಕಷ್ಟಿ ಬೇರೆ. ಹೋಮದಲ್ಲಿ ಅಗರಬತ್ತಿಯೊಂದಿಗೆ ಅದರ ಪ್ಲಾಸ್ಟಿಕ್ ಕೂಡ ಸೇರಿ ಕೆಟ್ಟ ವಾಸನೆ. ಹೋಮ-ಅಗರಬತ್ತಿ, ಉರಿಯುವ ಎಣ್ಣೆ ವಾಸನೆ ಎಲ್ಲ ನನ್ನ ಅಡಿಗೆ ಮನೆಗೆ. ನಾನು ತಲೆಗೆ ಹಚ್ಚುವ ಎಣ್ಣೆಗಳ ಬಾಟಲಿ ಕೂಡ ಅಡಿಗೆ ಮನೆಯಲ್ಲೇ ಇವೆ. ಆದ್ದರಿಂದ ತಕ್ಷಣ ಯಾವುದರ ಸುವಾಸನೆ/ವಾಸನೆ ಇತ್ಯಾದಿ ಗೊತ್ತಾಗುವುದಿಲ್ಲ.
ಹೂಂ ಒಂದು ಸಲ ಹೋಗೆನಕಲ್ ಗೆ ಟ್ರಿಪ್ ಹೋಗಿದ್ವಿ  ಆಫಿಸ್ ಮಂದಿಯೆಲ್ಲ..ಅಲ್ಲಿ ಮೈ ಗೂ ಎಣ್ಣೆ ಹೊಟ್ಟೆಗೂ ಎಣ್ಣೆ ಹಾಕುವವರನ್ನು ನೋಡ್ದೆ.
ಇದಕ್ಕಿಂತ ಮುಂಚಿನ ಪೋಸ್ಟ್ : ’ಸಂಬಂಧಗಳು’ ಓದಿ ಮೂಡ್ ಹಾಳಾಗಿದವರಿಗೆ ಇದು ಸುಮ್ನೆ ಒಂದು ಲೈಟ್ ಪೋಸ್ಟ.

:-)

9 comments:

Badarinath Palavalli said...

ಮೊದಲಿಗೆ ಬದುಕನ್ನು ಅಸಲೀ ಕೋನದಿಂದ ಆಸ್ವಾದಿಸುವ ನಿಮ್ಮ ಕುಟುಂಬದ ಚೈತನ್ಯಶೀಲತೆಗೆ ಶರಣು. ಅದೇ ಉಪ್ಪಿಟ್ಟು, ಟೀವಿಯಲ್ಲಿ ಅದೇ ಮುಗಿಯದ ಧಾರವಾಹಿ ಅಂತ ಬದುಕಿ ಬಿಡುವ ನಮ್ಮಂತ ಸಾಧಾರಣ ವ್ಯಕ್ತಿಗಳ ಮದ್ಯೆ ನೀವು ಆದರ್ಶಪ್ರಾಯರು.

1. ಬೆಟ್ಟದ ಜೀವ ನಾನು ಮಿಸ್ ಮಾಡಿಕೊಂಡ ಸಿನಿಮಾ! ದತ್ತಣ್ಣ ಪಾತ್ರ ಪರಕಾಯ ಪ್ರವೇಶ ಮಾಡುವುದರಲ್ಲಿ ನಿಸ್ಸೀಮ ಕಲಾವಿದ. ಅವಿರತ ತಂಡಕ್ಕೆ ಅಭಿನಂದನೆಗಳು.

2. ತ್ಯಾಂಪಣ್ಣ ಭಂಡಾರಿ ನೋವಿನ ಎಣ್ಣೆ ಮತ್ತು ಅದನ್ನು ಬಳಸಿದ ಮೂರೂ ಪ್ರಸಂಗಗಳು ವಿಭಿನ್ನವಾಗಿವೆ. ಎತ್ತು, ಶ್ರೀಕಾಂತ್ ಸಾರ್ ಮತ್ತು ನಿಮ್ಮದೆ ಅಡುಗೆ ಮನೆ ಪ್ರಹಸನವೂ ಚೆನ್ನಾಗಿ ನಿರೂಪಿತವಾಗಿವೆ.

nenapina sanchy inda said...

@ Badari
thank you for all the lovely words..pls dont miss the next screening of 'beTTada jeeva' Great Dialogues
:-)
malathi S

Anonymous said...

Malthi nangu thyampanna enne tharisikodi pls. Lekhana kushi kodthu, jothe Malthi moogu entha churuku antha gottaghoythu ha ha ha.

Veda

ಸಿಂಧು sindhu said...

ಮಾಲ್ತಕ್ಕಾ,

ಖುಶೀ ಆಯ್ತು.. ಒಳ್ಳೆ ತ್ಯಾಂಪಣ್ಣನ ತೈಲದ ಹಾಗಿರೋ ಪೋಸ್ಟೇ ಮಾಡಿದೀರಿ.

ಬೆಟ್ಟದ ಜೀವ ನೋಡಿದೆ ನಾನು. ನಂಗೆ ಸಂಭಾಷನೆ ಇಷ್ಟ ಆಗಲಿಲ್ಲ. ಆದ್ರೆ ನೀವು ಹೇಳಿದ ಛಾಯಾಗ್ರಹಣ, ಕಾಡು ಸಕ್ಕತ್ ಇದೆ. ಕುಮಾರಪರ್ವತ ನನ್ನ ನೆಚ್ಚಿನ ಜಾಗ ಕೂಡ.
ಕನ್ನಡದ ಪ್ರಯತ್ನ ಅಂತ ಬೆನ್ತಟ್ಟಕ್ಕೆ ನೋಡಬೇಕಾದ ಸಿನಿಮಾನೆ ಇದು.

ಸರಿ ಇನ್ಮೇಲೆ ಎಣ್ಣೆ ಹಚ್ಕೋ ಬೇಕಿದ್ರೆ ಅಡ್ಗೆ ಮನೆಯಿಂದ ಬಾಲ್ಕನಿಗೆ ಬಂದು ಹಚ್ಕೊಳ್ಳಿ. :)

ಪ್ರೀತಿಯಿಂದ,
ಸಿಂಧು

Swarna said...

ತ್ಯಾಂಪಣ ಭಂಡಾರಿ ಮತ್ತು ಪಿಂಡ ತೈಲ ನಮ್ಮಲ್ಲೂ ಫೆಮಸ್ಸು :-)
ಎರಡೂ ಒಳ್ಳೆ ಮದ್ದುಗಳು.
ನಾನು ೮ನೇ ತರಗತಿಯಿಂದ ಇಂಗ್ಲಿಷ್ ಮೀಡಿಯಂ, ಮೊದಲ ಬಾರಿ ಅಳುಕುತ್ತಲೇ
ಇಂಗ್ಲಿಷ್ ಟೆಸ್ಟ್ ಬರೆದೆ. ನಮ್ಮಿಸ್ಸು ಈಡಿ ಕ್ಲಾಸಿಗೆ ನಂ ಪೇಪರ್ ತೋರಿಸಿದ್ರು, ಕಾಟು ಚಿತ್ತು
ಇಲ್ಲದೆ ಎಷ್ಟು ನೀಟಾಗಿ ಕನ್ನಡ ಮೀಡಿಯಂ ಹುಡುಗಿ ಬರೆದಿದ್ದಾಳೆ ಅಂತ ನಿಮ್ಮ ಪ್ರಸಂಗ ಓದಿ
ನೆನಪಾಯಿತು
ನನ್ನ ಸಂಚಿಯ ನೆನಪು :-)
ಸ್ವರ್ಣ

nenapina sanchy inda said...

@ Veda: thank you. Sure!!

@ Sindhu: No balcony da...thats the problem. waiting to shift to our BTM Layout flat. Read ur write up in KS. too good! makes me feel ashamed of my writing :-)

@ Swarna: Proud of you dear!!thanks for sharing

ಸಾಗರದಾಚೆಯ ಇಂಚರ said...

Malaysia gu swalpa tyaampannana enne kalisikodi :)

nenapina sanchy inda said...

khanDita Dr. yaaraadroo malaysia ge baruvavaridre kaLisi koDtEne
:-)

Anonymous said...

ಏನೇ ಆಗಲಿ. ಆ ತೈಲ ಹಚ್ಚಿದ್ದರಿಂದ ತಲೆನೋವು ಹೋಯಿತಲ್ಲ ಅಷ್ಟು ಸಾಕು. ಅದು ಜಿಡ್ಡಾದರೂ ಇರಲಿ, ಸುವಾಸನಾಯುಕ್ತವಾಗಿರಲಿ. ನೋವು ಮಾಯವಾಗಬೇಕಾದುದು ಮುಖ್ಯ! ತ್ಯಾಂಪಣ್ಣನಿಗೆ ನಮೋನಮಃ
ಮಾಲಾ