August 22, 2014

ಶ್ರೀಯುತ ಅನಂತಮೂರ್ತಿ- Not A Documentary But A Hypothesis

ಜನವರಿ 25 ರಂದು The Times Literary Carnival ನಲ್ಲಿ ಗಿರೀಶ ಕಾಸರವಳ್ಳಿಯವರು ಶ್ರೀ ಯು.ಆರ್. ಅನಂತಮೂರ್ತಿಯವರ ಜೀವನದ ಬಗ್ಗೆ  ಡಾಕ್ಯೂಮೆಂಟರಿ Ananthamurthy -- Not A Documentary But A Hypothesis- ಹಮ್ಮಿಕೊಂಡಿದ್ದರು. ನಾನು ಹೋಗಲು ಮೂರು ಕಾರಣಗಳಿದ್ದವು, 
ಒಂದು ಅದರ ಶೂಟೀಂಗ್ ತೀರ್ಥಹಳ್ಳಿಯಲ್ಲಿ ನಡೆಯುತ್ತಿದ್ದಾಗ ಅದರ ಬಗ್ಗೆ ಲೈವ್ ಅಪ್ಡೇಟ್ ಮಿತ್ರ ನೀಲೇಶ ಜವಳಿ ನಿಡುತ್ತಿದ್ದದ್ದು, ಹಾಗಾಗಿ ತೀರ್ಥಹಳ್ಳಿಯನ್ನು ನೋಡಲು. ಅವರು ಅಪ್ಡೇಟ್ ನೀಡಲು ಕಾರಣ ಅದರಲ್ಲಿ ಒಂದು ಚಿಕ್ಕ ಪಾತ್ರ ಅವರೂ ಮಾಡಿದ್ದು. ಇನ್ನೊಂದು ಅದರಲ್ಲಿ ನಿಹಾಳ ಮನು ಸರ್ ಕೂಡ ಮಾತಾಡಿದ್ದು. ನಿಹಾಳ ಇಷ್ಟದ ಲೆಕ್ಚರರ್ ಅಂದ್ರೆ ಸುಮ್ಮನೇನಾ ಮತ್ತೆ? ಇನ್ನೊಂದು ಕಾರಣ ಹೊಸದಾಗಿ ಪರಿಚಯ ಆದ ಜರ್ನಲಿಸ್ಟ್ ಮಿತ್ರರು, ಮತ್ತೊಂದು ಕಾರಣ ಅಷ್ಟು ದೊಡ್ಡ ಬರಹಗಾರರ ಬಗ್ಗೆ ತಿಳಿಯುವ ಕೌತುಕ. (ಮೂರಕ್ಕಿಂತ ಜಾಸ್ತಿ ಕಾರಣಗಳಾದುವಾ??) :-) ನಾನು ಅವರ ಬರಹಗಳನ್ನು ಓದಲು ಶುರು ಮಾಡಿ ಎರಡು ವರ್ಷಗಳಾಗಿವೆ ಅಷ್ಟೆ. ಹಲವಾರು ಪುಸ್ತಕಗಳಿವೆ ನನ್ನ ಬಳಿ. ಸಂಸ್ಕಾರ ಅಂತೂ ಅಬ್ಬಬ್ಬಾ ಎಂತಹ ಕಾದಂಬರಿ?? ನಿಹಾ ಅದನ್ನು ಮೊದಲು ಇಂಗ್ಲಿಶ್ ಆ ಮೇಲೆ ಕನ್ನಡ ದಲ್ಲಿ ಓದಿದಳು.  ಅದಾದ ನಂತರ ಭಾರತೀಪುರ ಓದಿದೆ. ಈ ಎರಡು ಪುಸ್ತಕಗಳ ಪಂಚ ಅವರ ಭವ, ದಿವ್ಯ, ಅವಸ್ಥೆ ಕಾದಂಬರಿಗಳಲ್ಲಿ ಸಿಗಲಿಲ್ಲ. ಪಚ್ಚೆ ರಿಸೋರ್ಟ್ ಅರ್ಧ ಓದಿ ಕೈ ಬಿಟ್ಟೆ. ಇನ್ನೂ ಹಲವಾರು ಪುಸ್ತಕಗಳಿವೆ ಅವರ ಬಗ್ಗೆ ಅದನ್ನು ಇನ್ನೂ ಓದಬೇಕು. ನನ್ನ ಬಳಿ ಸಮಯ ಸಾಕಷ್ಟಿದೆ. :-) ಅವರು ತೀರ್ಥಹಳ್ಳಿಯವರು ಅಂತ ಅವರ ಮೇಲೆ ಸ್ವಲ್ಪ ಜಾಸ್ತಿ ಪ್ರೀತಿ ನನಗೆ.  

ಕಾರ್ಯಕ್ರಮ  ಇದ್ದದ್ದು ಬೆಳಿಗ್ಗೆ 9.30 ಗಂಟೆಗೆ . ಡಾಕ್ಯೂಮೆಂಟರಿ ಆದ ನಂತರ ಪ್ರಕಾಶ ಬೆಳವಡಿ ಶ್ರೀ ಅನಂತಮೂರ್ತಿಯವರ ಜತೆ ಮಾತುಕತೆ ನಡೆಸುವವರಿದ್ದರು. ಆದ್ರೂ ನಿಹಾ - ಮಾಲು ಗೆ ಅಂದೆ’ ಅಷ್ಟು ಬೆಳಿಗ್ಗೆ ಯಾರು ಬರ್ತಾರೆ’ ಅಂತ . ನಾವೇನೋ ಸರಿಯಾದ ಸಮಯಕ್ಕೆ ತಲುಪಿದ್ವಿ. ಕನ್ಫೂಶನ್ ಆಗಿ  ರಿಕ್ಷಾದಲ್ಲಿ ಸ್ವಲ್ಪ  ಹುಡುಕಿಕೊಂಡು ಹೋಗಬೇಕಾಯ್ತು. ಅದು ಇದ್ದದ್ದು ಜಯಮಹಲ್ ಪ್ಯಾಲೆಸ್ ನಲ್ಲಿ. ನಾನು ಅಂದುಕೊಂಡ ಹಾಗಾಯ್ತು. ನಾವು ಇದ್ದದ್ದೆ 9 ಮಂದಿ. ಕಾರ್ಯಕ್ರಮದ ಸಂಚಾಲಕರು ’ಯಾರೂ ಬಂದಿಲ್ಲ ಆದ್ದರಿಂದ ಕಾರ್ಯಕ್ರಮ ಸ್ವಲ್ಪ ವಿಳಂಬವಾಗಿ ಶುರುಮಾಡುವ ಬಗ್ಗೆ ಎನೌಂನ್ಸ್ ಮಾಡಿದರು. ನಾವು ಅಲ್ಲೆ ಪಕ್ಕದಲ್ಲೇ exhibit ಮಾಡಿದ paul Fernandez ಅವರ bangalore in the 60's ಕಾರ್ಟೂನ್ಸ್ ಗಳನ್ನು ನೋಡಲಿಕ್ಕೆ ಹೊರಟೆವು. ನಿಜಕ್ಕೂ ನಗು ಬರುವಂತಹ ಕಾರ್ಟೂನ್ ಗಳು. 

ಆಮೇಲೂ ಯಾರು ಜನ ಸೇರಿರಲಿಲ್ಲ. ನಾನು ಮಕ್ಕಳ ಬಳಿ ಪಿರಿಪಿರಿ ಮಾಡ್ತಿದ್ದೆ. ಜನರಿಗೆ ಒಂದು ಭಾನುವಾರ ಬೇಗ ಎದ್ದು ಬರಲು ಏನು ಧಾಡಿ ಅಂದ್ರೆ ಮಾಲವಿಕಾ ’ನಿನ್ನದೊಳ್ಳೆ ಕತೆ. first of all the Documentary is in English, ಆಮೇಲೆ ನಿನ್ನ ಫ್ರೆಂಡ್ ಇದ್ದಾನೆ ಅಂತ ನೀನು ಇಲ್ಲಿಗೆ ಬಂದಿದ್ದೀಯಾ, ಸುಮ್ನೆ ಡೈಲೋಗ್ ಹೊಡಿಬೇಡ ಅಂದಾಗ ಅವಳಿಗೊಂದು ಗುರ್ ಹೇಳಿದೆ.ಆದರೆ ಅವಳು ಅಂದಿದ್ದು ನಿಜ. ಸಂಡೆ ಅಂದರೆ ನಮ್ಮ ಮನೆಯಲ್ಲಿ ಎಲ್ಲ ಕೆಲಸಗಳು - ತಿನ್ನುವುದು ಬಿಟ್ಟರೆ- ವಿಳಂಬ. 
ಗಿರೀಶ ಕಾಸರವಳ್ಳಿಯವರು ಬಂದಿದ್ದರು. ಕಾರ್ಯಕ್ರಮ ಶುರು ಆದ ಅರ್ಧ ಗಂಟೆ ಆದಮೇಲೆ ಕರಂಟ್ ಪೋಯಿ. ಪುನ: ಅರ್ಧಕ್ಕೆ ಬಿಟ್ಟ ಕಾರ್ಟೂನ್ ವೀಕ್ಷಣೆ. ಅಷ್ಟರಲ್ಲಿ ಶ್ರೀ  ಯು ಆರ್ ಅನಂತಮೂರ್ತಿಯವರು ಎಸ್ತರ್ ಅವರೂ ಬಂದರು. ಈ ಇಳಿವಯಸ್ಸಿಗೆ ಅವರ ಲವಲವಿಕೆ, ಅವರ ವಿಚಾರ ಶಕ್ತಿ, ಅವರ ನೆನಪಿನ ಶಕ್ತಿ , ಮಾತನಾಡುವ ವೈಖರಿ ನಿಜಕ್ಕೂ ಪ್ರಶಂಸನೀಯ. (ನಮ್ಮ ಮಾನಸ ಟೀಮ್ ನ ಸದಸ್ಯರೊಬ್ಬರು ಅವರಿಗೆ ಪುಸ್ತಕ ನೀಅಲು ಹೋದಾಗ ತುಂಬಾ ಪ್ರೋತ್ಸಾಹಕರ ಮಾತನ್ನಾಡಿದ್ದಲ್ಲದೆ, ನಿಮಗೇನಾದರೂ ಬರೆದುಕೊಡಬೇಕಾದಲ್ಲ್ ಹೇಳಿ ನಾನು ಬರೆಯುತ್ತೇನೆ ಅಂದು, ಮತ್ತು ಸ್ವಳಪ್ ಹೊತ್ತು ಬಿಟ್ಟು, ನಾನು ಹೇಳುತ್ತೇನೆ ನೀವು ಬರೆದುಕೊಳ ಬಹುದು ಅಂದಿದ್ದರಂತೆ, ನಿಹಾ ಹೇಳುವ ಪ್ರಕಾರ aaw thaths cho chweet of him' :-)

ಕಾರ್ಯಕ್ರಮದ ಬಗ್ಗೆ ಶೂಟ್ ಮಾಡುವವರ ಕಿರಿಕಿರಿ ಮಧ್ಯ ಫೋಟೊ ತೆಗೆಯುವವರ ಕಿರಿಕಿರಿ ಅದರ ಫ್ಲಾಶ್ ಸೀದಾ ಮುಖದ ಮೇಲೆ.  ಕೊನೆಕೊನೆಗೆ ಆ ಫೋಟೊದವನಿಗೆ ಸನ್ನೆ ಮಾಡಿ ನಮಗೆ irritate ಆಗ್ತಾ ಇದೆ ಅಂತಂದೆ. 

ಶ್ರೀ ಅನಂತಮೂರ್ತಿಯವರ ಬರಹ ಕಾಸರವಳ್ಳಿಯವರ ಮೇಲೆ ತುಂಬಾ ಪ್ರಭಾವ ಬಿರಿದೆ ಅನ್ನುವ ಮಾತಿನಿಂದ ಈ ಸಾಕ್ಷಚಿತ್ರ ಪ್ರಾರಂಭವಾಗುತ್ತದೆ. ಶ್ರೀ ಅನಂತಮೂರ್ತಿಯವರ ಜತೆ ಒಡನಾಡಿದ, ಅವರನ್ನು ಹತ್ತಿರದಿಂದ  ನೋಡಿರುವ ಸಾಹಿತಿಗಳ  ಸಂದರ್ಶನ, ಅಭಿಪ್ರಾಯ, ಅನಿಸಿಕೆಗಳ (bit long winded) ಮೂಲಕ , ಅವರ ಗಾಂಧೀವಾದಿ, ಸಮಾಜವಾದಿ ಚಿಂತನೆಗಳ ಬಗ್ಗೆ ಮಾತನಾಡಿದ್ದಾರೆ. ಅವರ ಬರವಣಿಗೆಯ (both fiction and non-fiction)  ಮೂಲಕ  ಶ್ರೀ ಅನಂತಮೂರ್ತಿಯವರ  ಜೀವನ ಚಿತ್ರಣವನ್ನು ನಮಗೆ ಕಟ್ಟಿಕೊಟ್ಟಿದ್ದಾರೆ. ಇದು ಹೊಸತನದಿಂದ ಕೂಡಿ ಇಂಟೆರೆಸ್ಟಿಂಗ್ ವೇ ಆಫ್ ಇನ್ಟ್ರೋಡ್ಯೂಸಿಂಗ್ ಎ ಪರ್ಸೋನಾ ಅನ್ನಿಸ್ತು.

ಅನಂತಮೂರ್ತಿಯವರ ವ್ಯಕ್ತಿತ್ವ ಮತ್ತು ಚಿಂತನೆಯನ್ನು ದೃಶ್ಯಾತ್ಮಕ ನೆಲೆಯಲ್ಲಿ ಕಟ್ಟಿಕೊಡುವ ನಿಜಕ್ಕೂ ಒಂದು ಪ್ರಶಂಸಾರ್ಹ ಪ್ರಯತ್ನ (ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತು)  ಮಾಡಿದ್ದಾರೆ..  ಡಾಕ್ಯೂಮೆಂಟರಿ ಕೆಲವು ಕಡೆ ಸ್ವಲ್ಪ ಎಡಿಟಿಂಗ್ ಬಿಗಿ ಮಾಡಬೇಕಿತ್ತು ಅನ್ನಿಸ್ತು. background score ತಕ್ಕ ಮಟ್ಟಿಗೆ ಚೆನ್ನಾಗಿತ್ತು. ಮಿತ್ರ ನಿಲೇಶ
ಜವಳಿ,  ’ಪಶ್ನೆ’ ಎನ್ನುವ  ಕತೆಯಲ್ಲಿ ಪಾತ್ರವಹಿಸಿದ್ದಾರೆ, ಮಾತ್ರವಲ್ಲ ಚೆನ್ನಾಗಿ ಆ ಪಾತ್ರವನ್ನು ನಿಭಾಯಿಸಿದ್ದಾರೆ.. ನನಗೆ ಸಂಭಾಷಣೆ ತುಂಬಾ ಚೆನ್ನಾಗಿದೆ ಅನ್ನಿಸಿ ಮರುದಿನ ಅವರ ’ಪ್ರಶ್ನೆ’ ಕತಾ ಸಂಕಲನ ತಂದು ಓದಿದೆ. 
ಮನೆಗೆ ಬಂದು ನಿಲೇಶ ಜವಳಿಗೆ ಎಸ್ ಎಮ್ ಎಸ್ ಮಾಡಿದೆ. ನಿನ್ನ ಪಾರ್ಟ್ ಚೆನ್ನಾಗಿ ಮೂಡಿದೆ, ಡಾಕ್ಯೂಮೆಂಟರಿಗೆ 5 ರಲ್ಲಿ 2.5 ಪಾಯಿಂಟ್ ಕೊಟ್ಟಿದ್ದೇನೆ ಅಂದಾಗ, ಅವಾರ್ಡ್ ಬರಬಹುದಾ?  ಅಂತ ಕೇಳಿದ. ಆಗ ನಾನು ಖಂಡಿತ award ಸಿಗುತ್ತೆ ಅಂದಿದ್ದೆ. ಬೇರೆ ನಿರ್ದೇಶಕರಿಗೆ ನನಗ್ಗೆ ಸಿನಿಮಾ ದಲ್ಲಿ  ಅವಕಾಶ ಕೊಡಲು ಹೇಳಬಹುದಾ ಅಂದಾಗ ಕೂಡ ' ಓಹೋ ಖಂಡಿತಾ' ಅಂದಿದ್ದೆ....ಒಳ್ಳೆ  ಕಣಿ ಹೇಳಿದಹಾಗೆ 
ರಾಷ್ಟ್ರೀಯ ಪ್ರಶಸ್ತಿ ಬಂದಿದಕ್ಕೆ ಖುಶಿಯಾಗಿ ಅವನು ಎಸ ಎಂ ಎಸ ನಲ್ಲಿ  ’ yaahoo our documentary got a national award, i am soooo happy' ಅಂತ ಕಳುಹಿಸಿದ್ದ. ಹಾಗಾಗಿ ಈ ಪೋಸ್ಟ್ ನಿಮ್ಮ ಜತೆ ಶೇರಿಂಗ್. ನೀವು ಅವಕಾಶ ಆದಾಗ ಖಂಡಿತ ನೋಡಿ. (ಟಿ ವಿ ನಲ್ಲಿ ಹಾಕಬಹುದು)

malathi the 'common man' photo c/o Niha. :-)

ಶ್ರೀ ಅನಂತಮೂರ್ತಿಯವರು  ಈಗ ನಮ್ಮೊಂದಿಗಿಲ್ಲ. ಅವರ ಆತ್ಮಕ್ಕೆ ಶಾಂತಿ ಕೋರುತ್ತ ...... :-(
(Draft ನಲ್ಲಿತ್ತು. ಕೆಲವು ವಾಕ್ಯ ಸೇರಿಸಿ  ಈಗ ಪಬ್ಲಿಶ್ ಮಾಡಿದೆ ಅಷ್ಟೆ)

August 18, 2014

ಹೀಗೆರಡು ನೆನಪುಗಳು

ನೆನಪು-1
ಮದುವೆಯಾಗಿ ಕೆಲ ತಿಂಗಳು ಕಳೆದಿತಷ್ಟೆ. ಅಕ್ಕನಿಗೆ ಅಡಿಗೆಗೆ ನನ್ನ ಪಾಲಿನ ಸಹಾಯ ಅಂದ್ರೆ ಕಾಯಿ ತುರಿದು ಕೊಡೋದು, ತರಕಾರಿ ಕಟ್ ಮಾಡಿ ಕೊಡೋದು ಮುಂತಾದ್ದು ಮುಗಿದ ಮೇಲೆ ನನ್ನ ಪದವಿ ಪರೀಕ್ಷೆಗೆ ಓದುತ್ತಾ, ಕಾಲು ಚಾಚಿ, ಅಡಿಗೆ ಮನೆಯ ಎದುರಿಗೆ ಇರುವ ಚಿಕ್ಕ ಅಂಗಳದಲ್ಲಿ ,ಅದು ಹಳೆಯ ಕಾಲ ಚೌಕದ ಮನೆ. ಮಧ್ಯದ ತುಳಸಿ ಕಟ್ಟೆಯ ಅಂಗಳದ ಸುತ್ತ ನಮ್ಮ ಮನೆಯ ಕೋಣೆಗಳು. ಹಿತವಾದ ಬಿಸಿಲು ಅಂಗಳದಲ್ಲಿ ಬೀಳುತಿತ್ತು. ವಿಜ್ಝಾನ ವಿಷಯವನ್ನು ಬಿಟ್ಟು ಆರ್ಟ್ ಸ್ ಸ್ಟ್ರೀಮ್ ಗೆ ಶಿಫ್ಟ್ ಆಗಿದ್ದನ್ನು ನಾನು ನಿಧಾನಕ್ಕೆ ಎಕ್ಸೆಪ್ಟ್ ಮಾಡಿದ್ದೆ ಅಲ್ಲದೇ ಸೋಶಿಯೋಲಾಜಿ ನನ್ನ ಇಷ್ಟದ ವಿಷಯವಾಗಿ ಪರಿಣಿಮಿಸಿತು. ನಾನು ಕಾಲು ಚಾಚಿಕೊಂಡು ತಲ್ಲೀನತೆಯಿಂದ khaasi-synteng ಬುಡಕಟ್ಟು ಜನಾಂಗದ charasteric feature ಬಗ್ಗೆ ಓದುತ್ತ ಇದ್ದೆ. ಕಾಲಿನ ಬುಡಕ್ಕೆ (ಪಾದಗಳಿಗೆ) ತಣ್ಣನೆಯ ಗಾಳಿಯೊಂದು ಬೀಸಿತು. ಓ ಚೆಂದದ ಗಾಳಿ ಕಾಲಿಗೆ ಮಾತ್ರ ಸೋಕುತ್ತಿದೆ ಅಂದು ಕೊಂಡು ಓದನ್ನು ಮುಂದುವರೆಸಿದೆ. ಕೆಲ ಸಮಯದ ನಂತರ ಪುಣ: ಪಾದಗಳ ಬಳಿ ಗಾಳಿ ಮಾತ್ರವಲ್ಲ ಫುಸ್ ಅನ್ನುವ ಸದ್ದು ಕೂಡ ಕೇಳಿಸಿಕೊಂಡಿತು. ತಲೆ ಎತ್ತಿ ನೋಡುತ್ತೇನೆ, ಕರಿ ನಾಗರವೊಂದು ಹೆಡೆ ಎತ್ತಿ ನಿಂತಿದೆ. ಆಗಿನ್ನು ತೀರ್ಥಹಳ್ಳಿಯಲ್ಲಿ ಟಿ ವಿ ಇರಲಿಲ್ಲ ಹಾಗಾಗಿ ನ್ಯಾಶನಲ್ ಜಿಯೋಗ್ರಾಫಿಕ್ ಚ್ಯಾನೆಲ್ ಕೂಡ ಇರಲಿಲ್ಲ. ನಾಗರ ಹಾವು ಎಂಬ ಜಂತುವನ್ನು, ಮುಂಬೈನಲ್ಲಿ ನಾಗರ ಪಂಚಮಿಯಂದು ಮನೆ ಮನೆಗೆ ಬುಟ್ಟಿಯಲ್ಲಿ ತಂದು, ನಾಗೋಬಾಲಾsssss ದೂssssದ್(ನಾಗಪ್ಪನಿಗೆ ಹಾಲು) ಎನ್ನುತ್ತ ಹಾವಾಡಿಗರು ಮನೆಗೆ ತಂದು,ಮೆಟ್ಟಿಲ ಬಳಿ ನೆಲದ ಮೇಲಿಟ್ಟು  ಬುಟ್ಟಿ ಮುಚ್ಚಳ ತೆರೆದು ಅಫೀಮು ಕುಡಿದ ನೀರ್ಜೀವ  ಮಲಗಿದಂತ ಅದರ ತಲೆ ಮೇಲೆ ಕುಕ್ಕಿಯೋ, ಬಾಲ ಎಳೆದೋ ಅದು ಹೆಡೆ ಎತ್ತುವಂತೆ ಮಾಡುವುದು, ಅಮ್ಮ ಬಟ್ಟಲಲ್ಲಿ ಹಾಲು ತಂದು ಬುಟ್ಟಿಯ ಎದುರಿಗೆ ಇಡುವುದು, ಹಾವಾಡಿಗಳು ಹಾವಿನ ತಲೆಯನ್ನು ಹಾಲಲ್ಲಿ ಮುಳುಗಿಸಿ ತೆಗೆಯುವುದು, ಆಮೇಲೆ ಅಷ್ಟೆ ಜಬರದಸ್ತಿಯಿಂದ ಹಾವನ್ನು ಬುಟ್ಟಿಗೆ ಸೇರಿಸಿ, ಅಮ್ಮ ಕೊಟ್ಟ ಒಂದು ಶೇರು ಅಕ್ಕಿ, ಕೆಲವು ನಾಣ್ಯ ಪಡೆದುಕೊಂಡು ಹೋಗುವದನ್ನು ನೋಡುವುದಷ್ಟಕ್ಕೆ ಸೀಮಿತಗೊಂಡಿದ್ದು, ಈ ಹಾವು ಪೂತ್ಕರಿಸುವಾಗ ಅದರ ಗಲ್ಲ ನಡುಗುವುದು, ನಾಲಗೆ ಹೊರ ಒಳ ಚಾಚುವುದು, ಮಿರಿ ಮಿರಿ ಮಿಂಚುವ ಅದರ ಮೈ ಮೊದಲ ಬಾರಿಗೆ ಅಪ್ ಕ್ಲೋಸ್ ನೋಡಿದ್ದು. ತನ್ನಷ್ಟಕ್ಕೆ ನನ್ನ ಗಂಟಲಿನಿಂದ ’ಅಕ್ಕ’ ಎನ್ನುವು ಕೂಗು ಹೊರ ಹೊಮ್ಮಿತು. ಸಾಂಬರ್ ಮಾಡಲು ತೊಗರಿ ಬೆಳೆ ತರಲು ಒಳ ಹೋದ ಅಕ್ಕ ನನ್ನ ಕೂಗಿನಿಂದ ಅಂಗಳ ಬಳಿ ಬಂದರು. ಅವರು ’ಯಾಕೋ ನಾಗಪ್ಪ?? ಏನಾಯ್ತು? ಏನಾದರು ಮೈಲಿಗೆ ಆದರೆ ಕ್ಷಮಿಸಬೇಕು. ಇವತ್ತು ಮಧ್ಯಾಹ್ನದ ಪೂಜೆಗೆ ನಿನಗಾಗಿ ವಿಶೇಷ ಆರತಿ ಮತ್ತು ನಾಗನ ಕಲ್ಲಿಗೆ ಹಣ್ಣು ಕಾಯಿ, ಪಂಚಾಮೃತದ ಅಭೀಷೇಕ ಮಾಡಿಸುತ್ತೇವೆ. ಈಗ ನೀನು ಹೋಗು. ಹೀಗೆ ಮನುಷ್ಯರು ಓಡಾಡುವ ಜಾಗದಲ್ಲಿ ನೀನು ಬರಬಾರದು’ ಅಂದಾಗ ಮಹಾ ಹೇಳಿದ್ದು ಗೊತ್ತಾದ ಹಾಗೆ ಹೆಡೆಯನ್ನು ಒಂದು ಸಲ ಹಾಗೆ ಹೀಗೆ ವಾಲಿಸಿ, ಹೆಡೆ ಮುಚ್ಚಿ ಅಲ್ಲಿಂದ ನಿಧಾನಕ್ಕೆ ಹೊರಟು ಹೋಯಿತು. ನಾನು ಬಿಟ್ಟ ಬಾಯಿ (ಸಧ್ಯ ಬೇರೆ ಯಾವುದೇ ಜಂತು ನನ ಬಾಯಿಯೊಳಗೆ ಹೊಕ್ಕಲಿಲ್ಲ) ಬಿಟ್ಟ ಕಣ್ಣುಗಳಿಂದ ಅದರ ಚೂಪು ಬಾಲ ಮರೆಯಾಗುವ ತನಕ ನೋಡುತ್ತಲೆ ಇದ್ದೆ. ಕಾಲು ಮಡಚಲು ಆಗದಷ್ಟು ಮರಗಟ್ಟಿತ್ತು.

ನೆನಪು-2
ಆಗ ನಾವು ಬಸವೇಶ್ವರನಗರದಲ್ಲಿದ್ದೆವು. ಯಾವತ್ತಿನಂತೆ ಬೆಳಿಗ್ಗೆ ನಾಲ್ಕು ಗಂಟೆ ಅಡಿಗೆಮನೆಯಲ್ಲಿ ನಿಂತು ಚಹಾ ತಯಾರಿಸುತ್ತ ಇದ್ದೆ. ಅಡಿಗೆ ಮನೆ ಕಟ್ಟೆ ಎದುರಿಗೆ ದೊಡ್ಡ ಕಿಟಕಿ. ಒಂಚೂರು ಸದ್ದಿರಲಿಲ್ಲ. ಚಹಾಗೆ ನೀರು ಮರಳುತ್ತಿದ್ದ ಹಾಗೆ, ಮೂಂಜಾವಿನ ನೀರವತೆಯಲ್ಲಿ, ನಾನು ಬುಕ್ ಹಿಡಿದುಕೊಂಡು ಓದ್ತಾ ಇದ್ದೆ. ಸಡನ್ ಆಗಿ ಕಿಟಕಿ ಬಳಿಯಿಂದ ಅಕ್ಕೋಯ್ ಅನ್ನುವ ಕೂಗು ಕೇಳಿ ನಾಲ್ಕ್ ಇಂಚ್ ಮೇಲೆ ಹಾರಿದೆ. ’ಹೆದರಿ ಬಿಟ್ರಾ ಅಕ್ಕಾ, ನಾನು ನೈಟ್ ಬೀಟಿನ ಪೋಲಿಸಪ್ಪ. ಯಾರಾದರೂ ಏಳ್ತಾರಾ ಅಂತ ಕಾಯ್ತ ಇದ್ದೆ. ಇಲ್ಲಿ ಲೈಟ್ ಕಾಣಿಸಿ ಇಲ್ಲಿಗೆ ಬಂದೆ. ಏನಿಲ್ಲ, ನನ್ನ ಬೈಕ್ ನಲ್ಲಿ ಪೆಟ್ರೋಲ್ ಖಾಲಿಯಾಗಿದೆ. ಹೊಸ ಬೈಕ್ ಒಂದು ಕಣ್ಣಿಡಿ ಅಂತಷ್ಟೆ ಹೇಳೋದಿತ್ತು’ ಅಂದ. ನಾನು ಸರಿ ಅಂದೆ. ಅಡಿಗೆ ಮನೆಯ ಕಿಟಕಿಯ ಮುಂದಿನ ರಸ್ತೆಯ ಆಚೆ ಬದಿಯ ಲೈಟ್ ಕಂಬದ ಕೆಳಗೆ ಬೈಕ್ ನಿಲ್ಲಿಸಿದ್ದ. ನಿಜಕ್ಕೂ ಹೊಸ ಬೈಕ್, ಅದರ ಮೇಲೊಂದು ಕೆಂಪು ಬಣ್ನದಿಂದ ಬರೆದ ಹುಲಿಯ ಚಿತ್ರ ನಿಚ್ಚಳವಾಗಿ ಕಾಣುತ್ತಿತ್ತು. ಆಯ್ತಪ್ಪ ಅಂದೆ. ಅವನು ಹೋಗಿ ಬಿಟ್ಟ. ನನಗೆ ಆ ದಿನ ಆಫಿಸ್ ಗೆ ಹೋಗುವುದಿತ್ತು. ಪಕ್ಕದ ಮನೆಯ ರಾಮಮೂರ್ತಿಗೆ ಬೈಕ್ ಬಗ್ಗೆ ಹೇಳಿ ಹೋಗ ಬೇಕು ಅಂತ್ಂದುಕೊಂಡಿದ್ದೆ. ಆದರೆ ಅಡಿಗೆ ಕೆಲಸ ಮನೆ ಕೆಲಸ ಮುಗಿಸಿವುದರಲ್ಲಿ ನನಗೆ ಮರೆತೆ ಹೋಯ್ತು. ಸಂಜೆ ಮನೆಗೆ ಬರುವಾಗ ಎಂದಿಗಿಂತ ತಡವಾಗಿತ್ತು. ಆಗಲೇ ಸ್ಟ್ರೀಟ್ ಲೈಟ್ ಎಲ್ಲ ಹೊತ್ತಿಕೊಂಡಿತ್ತು. ಮನೆಯ ಆ ಕಡೆ ಏನೋ ಗೌಜು. ಅಡಿಗೆ ಮನೆಯೆ ಕಿಟಕಿಯಿಂದ ನೋಡಿದರೆ ಬೆಳಿಗ್ಗೆ ಪಾರ್ಕ್ ಮಾಡಿದ್ದ ಬೈಕ್ ಸುತ್ತಲೂ ಜನ, ಪೋಲಿಸ್ ನಾಯಿ ಹಿಡಕೊಂಡು ಬಂದ ಪೋಲಿಸರು. ಬೆಳಿಗ್ಗೆ ಬೈ ಕ್ ಪಾರ್ಕ್ ಮಾಡಿ ಹೋದ ಪೋಲಿಸಪ್ಪ ನೆನಪು ನನಗೆ ಆಗ ಆಗಿದ್ದು. ನಾನೇ ಅಲ್ಲಿ ಹೋದೆ. ಹೀಗೆ ಹೀಗೆ ಅಂದೆ. ಅಷ್ಟೊತ್ತಿಗೆ ಪೋಲಿಸಪ್ಪನ ಮಗ ಪ್ಲಾಸ್ಟಿಕ್ ಕ್ಯಾನ್ ನಲ್ಲಿ ಪೆಟ್ರೋಲ್ ಹಿಡುದು ಕೊಂಡು ಬಂದ.
ಆದದಿಷ್ಟೆ: ರಾಮಮೂರ್ತಿ (ಇದ್ದ ಕೆಲಸ ಬಿಟ್ಟು ಇನ್ನೊಂದನ್ನು ಹುಡುಕುತ್ತಿದ್ದ , ಮನೆಯಲ್ಲೇ ಇದ್ದ ಅವರು), ಬೆಳಿಗ್ಗೆ ಇಂದ ಅಲ್ಲಿ ಪಾರ್ಕ್ ಆಗಿದ್ದ ಹೊಚ್ಚ ಹೊಸ ಬೈಕ್ ಸಂಜೆ ತನಕ ಅಲ್ಲೇ ಇದ್ದದ್ದು ನೋಡಿ ಬಾಂಬ್ /ಅಥವಾ ಕಳ್ಳತನದಲ್ಲಿ ಇನ್ವಾಲ್ವ್ ಆಗಿದೆ ಬೈಕ್ ಅಂದುಕೊಂಡು ಪೋಲಿಸರಿಗೆ ಕರೆ ಮಾಡಿದಾರೆ. ಪೋಲಿಸರು ಎಲ್ಲರ ಹೇಳಿಕೆಯನ್ನು ಆಲಿಸುತ್ತ ಇದ್ದರು. ನಾನು ಹೋಗಿ ಬೆಳಿಗ್ಗೆ ಏನಾಯಿತು ಅಂತ ವಿವರಿಸಿದೆ. ಮುಂದಿನದನ್ನು ಪೋಲಿಸಪ್ಪನ ಮಗ ವಿವರಿಸಿದ: ಅಪ್ಪ ಎರಡು ದಿನದಿಂದ ನೈಟ್ ಡ್ಯೂಟಿ, ನಿನ್ನೆ ಬೆಳಿಗ್ಗೆ ಹತ್ತಿರದ ಸಂಬಂಧಿಯೊಬ್ಬರ ಸಾವು, ಮತ್ತು ಪುನ: ನೈಟ್ ಶಿಫ್ಟ್, ಅದ್ದರಿಂದ ಸರಿ ನಿದ್ದೆಯಾಗಿರಲಿಲ್ಲ. ಬೆಳಿಗ್ಗೆ ನನ್ನನ್ನು ಎಬ್ಬಿಸಿ ಬೈಕ್ ಎಲ್ಲಿ ಪಾರ್ಕ್ ಮಾಡಿದ್ದೇನೆ, ಪೆಟ್ರೋಲ್ ತುಂಬಿಸಬೇಕೆಂದು ಹೇಳಿ ಮಲಗಿದರು. ನನಗೆ ಬೇರೆ ತುರ್ತು ಕೆಲಸಗಳ ಒತ್ತಡದಿಂದ ಈಗಷ್ಟೆ ಇತ್ತಕಡೆ ಬರಲಾಯಿತು ಎಂದು ಹೇಳಿದ

ಮೇಲೇನ ಎರಡು ನೆನಪಿಗೆ ಕಾರಣ ಯಶವಂತ ಚಿತ್ತಾಲರ ’ನಾಗರ ಪಂಚಮಿ’ ಮತ್ತು ’ಬೆಳಗು ಜಾವದ ಕನಸು’ ಕತೆಗಳು
:-)

July 6, 2014

Book Cover page Design Contest

The Chukkubukku Website for books and famous publishing house of Dharwad- Manohar Grantha mala (Srikanth has a soft corner for this publishing house :-)) has announced a cover page design contest for M R Dattathri Novel 'Masaku Bettada dari' .
I Am travelling and my laptop does not support Kannada. So am copy pasting the mail from Chukku Team.
Last year Niharika entered one such contest and secured the second prize. Hope there are more contestants this year. So what are you waiting for. Throw in your hats in to the ring :-) The more the merrier....
Good luck from nenapina Sanchiyinda.
Details in the mail as follows :-

ಚುಕ್ಕುಬುಕ್ಕು ತಾಣ ಮತ್ತೊಂದು ಮುಖಪುಟ ಸ್ಪರ್ಧೆಯನ್ನು ತಂದಿದೆ! ಈ ಬಾರಿ ನಾಡಿನ ಖ್ಯಾತ ಪ್ರಕಾಶನ ಸಂಸ್ಥೆಯಾದ ಮನೋಹರ ಗ್ರಂಥಮಾಲೆಯ ಸಹಯೋಗದೊಂದಿಗೆ ಈ ಸ್ಪರ್ಧೆಯನ್ನು ಆಯೋಜಿಸಿದ್ದೇವೆ. ಈ ಬಾರಿ ನೀವು ಮುಖಪುಟ ವಿನ್ಯಾಸಗೊಳಿಸಬೇಕಿರುವುದು ಕಾದಂಬರಿಕಾರ ಎಂ ಆರ್ ದತ್ತಾತ್ರಿ ಅವರ ಹೊಸ ಪುಸ್ತಕ 'ಮಸುಕು ಬೆಟ್ಟದ ದಾರಿ'ಗೆ.

ಬಹುಮಾನದ ಮೊತ್ತ ೫೦೦೦ ರೂ. ನಿಮ್ಮ ವಿನ್ಯಾಸ ನಮ್ಮನ್ನು ಜುಲೈ 12ರೊಳಗೆ ತಲುಪಬೇಕು. ಎಲ್ಲ ಪ್ರವೇಶಗಳನ್ನು ಅವಲೋಕಿಸಿ, ತಮ್ಮ ಕೃತಿಯ ಭಾವಲೋಕವನ್ನು ಸೂಕ್ತವಾಗಿ ಬಿಂಬಿಸುವ ಮುಖಪುಟವನ್ನು ಲೇಖಕರೇ ಆಯ್ಕೆ ಮಾಡುತ್ತಾರೆ. ಆಯ್ಕೆಯಾದ ವಿನ್ಯಾಸವು ಆಗಸ್ಟ್ ತಿಂಗಳಲ್ಲಿ ಪ್ರಕಟಗೊಳ್ಳುವ ಈ ಕಾದಂಬರಿಯ ಹೊದಿಕೆಯಾಗಲಿದೆ. ಗ್ರಂಥಮಾಲೆಯು ಆಗಸ್ಟ್‌ ೧೫ರಂದು ಧಾರವಾಡದಲ್ಲಿ ನಡೆಸಲಿರುವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು.

ಈಗ ನೀವು ಮಾಡಬೇಕಾದ್ದಿಷ್ಟು: ಈ ಕೆಳಗೆ ಕಾದಂಬರಿಕಾರರು ತಮ್ಮ ಕೃತಿಯ ಬಗ್ಗೆ ಹೇಳಿರುವ ಟಿಪ್ಪಣಿಯನ್ನು ಹಾಗೂ ಚುಕ್ಕುಬುಕ್ಕು ಈಗಾಗಲೇ ಪ್ರಕಟಿಸಿರುವ ಒಂದು ಅಧ್ಯಾಯವನ್ನೂ ಓದಿಕೊಳ್ಳಿ. (ನಿಮ್ಮ ಕಲ್ಪನೆಗೆ ನೆರವಾಗಬಲ್ಲ ಇನ್ನಷ್ಟು ವಸ್ತುವನ್ನೂ ಪ್ರಕಟಿಸುತ್ತೇವೆ, ಗಮನಿಸುತ್ತಿರಿ.) ನಂತರ ಈ ಪುಸ್ತಕಕ್ಕೆ ಹೊಂದುವಂಥ ಮುಖಪುಟ ವಿನ್ಯಾಸವೊಂದನ್ನು ರೂಪಿಸಿ ನಮಗೆ ಕಳುಹಿಸಿಕೊಡಿ. ಒಬ್ಬರು ಗರಿಷ್ಠ ಮೂರು ವಿನ್ಯಾಸಗಳನ್ನೂ ಕಳಿಸಬಹುದು. ಬಳಸುವ ಚಿತ್ರ ಅಥವಾ ಫೋಟೊಗಳು ನಿಮ್ಮದೇ ಆಗಿರಬೇಕು. ಇಂಟ್‌ರ್ನೆಟ್‌ ಚಿತ್ರಗಳನ್ನು ಯಥಾವತ್‌ ಬಳಸಬೇಡಿ. ಎಲ್ಲ ವಿಷಯಗಳಲ್ಲೂ ಆಯೋಜಕರದೇ ಅಂತಿಮ ತೀರ್ಮಾನ.

ನಿಮ್ಮ ಮುಖಪುಟಗಳನ್ನು ಇಮೇಲ್‌ ಮಾಡಬೇಕಾದ ವಿಳಾಸ: chukkumail@gmail.com. ಮುಖಪುಟದ ಅಳತೆ: ಅಗಲ 14.5 ಸೆಂಟಿಮೀಟರ್‌, ಎತ್ತರ 22.5 ಸೆಂಟಿಮೀಟರ್‌, ರೆಸಲೂಷನ್‌ 300, ನಮಗೆ ಇಮೇಲ್‌ ಮಾಡುವಾಗ 72 ರೆಸಲೂಷನ್‌ಗೆ ಇಳಿಸಿ ಜೆಪೆಗ್‌ ಫಾರ್ಮಾಟ್‌ಗೆ ಬದಲಾಯಿಸಿ ಕಳಿಸಿ.

ನಿಮಗೆ ಪುಸ್ತಕ ಮುಖಪುಟಗಳತ್ತ ಆಸಕ್ತಿ ಇದ್ದರೆ ಸಾಕು, ನೀವೀ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಫೋಟೋಶಾಪ್‌ ಬರಲೇಬೇಕು ಅಂತ ಇಲ್ಲ. ನೀವೇ ತೆಗೆದ ಫೋಟೊ, ಬಿಳಿಹಾಳೆ, ಬಣ್ಣ, ಬ್ರಷ್ಯು, ಕತ್ತರಿ, ಗೋಂದು ಏನನ್ನಾದರೂ ಬಳಸಿ. ಫೋಟೊ ತೆಗೆದು ಪುಸ್ತಕದ ಹೆಸರು ಸೇರಿಸಿ ಕಳಿಸಿ.

ಇದು ಈ ತಾಣದಲ್ಲಿ ನಡೆಯುತ್ತಿರುವ ಮೂರನೇ ಮುಖಪುಟ ಸ್ಪರ್ಧೆ. ಹಿಂದಿನ ಸ್ಪರ್ಧೆಗಳಂತೆಯೇ ಉತ್ಸಾಹದಿಂದ ಪಾಲ್ಗೊಳ್ಳುತ್ತೀರೆಂದು ನಿರೀಕ್ಷಿಸುತ್ತಿದ್ದೇವೆ. 


ನಿಮ್ಮ ಸಹಕಾರ, ವಿಶ್ವಾಸ ನಮ್ಮೊಂದಿಗೆ ಹೀಗೆಯೇ ಇರಲಿ.



ವಂದನೆಗಳೊಂದಿಗೆ

ಸೌಮ್ಯ ಕಲ್ಯಾಣ್ಕರ್
ಚುಕ್ಕುಬುಕ್ಕು ಟೀಮ್
:-)
good luck guys. 6 more days to go

June 29, 2014

ನಿಹಾ ಮಣಿ

ಈ ತಿಂಗಳ ಮೊದಲಿಗೆ ನಿಹಾ ಜತೆ ಅವಳ ಕಾಲೇಜ್ ಗೆ ಅವಳ ಸೈಕೊಲೊಜಿ ಪ್ರಾಕ್ಟಿಕಲ್ಸ್ ಗೆ ಸಬ್ಜೆಕ್ಟ್ ಆಗಿ ಹೋಗಿದ್ದೆ. ಈ ಸಲ ಅಕ್ಕನನ್ನು ಕರಕೊಂಡು ಹೋಗು ಅಂದ್ರೆ, ಇಲ್ಲ ಅಮ್ಮ ಯು ಆರ್ ಲಕ್ಕಿ ಫಾರ್ ಮಿ ಅಂತ ಪ್ಹುಸಲಾಯಿಸಿ ಕರಕೊಂಡು ಹೋದ್ಲು. ಅವಳ ಕೊನೆಯ ವರ್ಷ ಈ ಕಾಲೇಜ್ ನಲ್ಲಿ ಅದಕ್ಕೆ ನಾನು ಸುಮ್ಮನೆ ಹೋದೆ. 
ಕಾಲೇಜ್ ತಲುಪಿದ ತಕ್ಷಣ ಬೆಲ್ಲಕ್ಕೆ ಇರುವೆ ಮುತ್ತಿದ ಹಾಗೆ ಅವಳ ಕ್ಲಾಸ್ಮೇಟ್ಸ್ ಅವಳನ್ನು ಸುತ್ತುವರೆಯುವುದನ್ನು ನೋಡೋದೆ ಒಂದು  ಸಡಗರ ನನಗೆ. 'ನಿಯಾರಿಕ (ನಿಹಾರಿಕಾ) ಕ್ಯಾನ್ ಯು ಪ್ಲೀಸ್ ಹೆಲ್ಪ್ ಮಿ ವಿತ್ ದಿಸ್ ? ಅಂತ ಕೇಳೋವ್ರು ಎಷ್ಟೋ ಫ್ರೆಂಡ್ಸ್. ಅವಳ ಉತ್ತರ , ;Actually it is very easy ಅಂತ ಶುರು ಮಾಡಿ ನಿಧಾನಕ್ಕೆ ಅವರಿಗೆ ಅರ್ಥವಾಗುವಂತೆ explain ಮಾಡ್ತಾಳೆ. ಅವಳು ಟೀಚರ್ ಆಗಲಿ ಅಂತ ನನಗೆ ಅನಿಸಿ, ಹಾಗೇ ಹೇಳಿದ್ದೇನೆ ಕೂಡ. ಆದರೆ ಅವಳು I have no patience to teach, iam a one to one person ಅಂತ ಹೇಳಿ ನಗುತ್ತಾಳೆ. 
ಅವಳನ್ನು ಸ್ನೇಹಿತರು ಸುತ್ತುವರೆದಾಗ ನನಗೆ ನನ್ನ ಶಾಲಾ ಜೀವನದ ನೆನಪಾಗುತ್ತದೆ. ಯಾರಾದರೂ ಮಾತಾಡಿಸಿಯಾರೆಂದು ನಾನು ಬಗ್ಗಿಸಿದ ತಲೆ ಕ್ಲಾಸ್ ತಲುಪಿದ ಮೇಲೆಯೇ ಎತ್ತುತಿದ್ದುದು. ಟೀಚರ್ ಏನಾದರೂ ಪ್ರಶ್ನೆ ಕೇಳಿದ್ದಲ್ಲಿ ನನಗೆ ಉತ್ತರ ಗೊತ್ತಿದ್ದರೂ ನಾನು ಯಾವತ್ತು ಕೈ ಎತ್ತಿ ಉತ್ತರ ಗೊತ್ತುಂಟು ಅಂತ ಅಂದಿದಿಲ್ಲ. ನನಗೆ ಯಾವಾಗಲು ಒಂದು ಹೆದರಿಕೆ ಇರ್ತಿತ್ತು. ನಾನು ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿ, ಕ್ಲಾಸ್ ನ ಮಕ್ಕಳೆಲ್ಲ ನಾನು ಮಹಾ ಜಾಣೆ ಅಂತ ತಪ್ಪು ತಿಳಿದುಕೊಂಡು ನನ್ನ ನೋಟ್ ಬುಕ್ ಯಾರಾದರೂ ಪರೀಕ್ಷೆ ಸಮಯದಲ್ಲಿ ನನ್ನ ಬಳಿ ಪಡಕೊಂಡು ಅದನ್ನು ನನಗೆ ವಾಪಸ್ ಮರಳಿಸಲಿಕ್ಕೆ ಇಲ್ಲ ಅಂತ. (ಹೀಗಾಗಿದ್ದು ಯಾರೋ ನಾನು ಚಿಕ್ಕವಳಿದ್ದಾಗ ಮಾತಾಡ್ತಾ ಇದಾಗ ಕೇಳಿಸಿಕೊಂಡಿದ್ದು) ಒಂದ್ಸಲ ಹೀಗೆ ಅಂಬಿಕಾ ಕುಟ್ಟಿ ಟೀಚರ್ ಮ್ಯಾಥ್ಸ್ ಪಾಠ ಹೇಳಿಕೊಡ್ತಾ ಅದರ ಹಿಂದಿನ ದಿನ ನಮಗೆ trigonometry fucntion ಬಗ್ಗೆ ಹೇಳಿಕೊಟ್ಟಿದ್ದರು . ಯಾರಿಗೆ ಗೊತ್ತು ಅಂತ ಕೇಳಿದರು . ನನಗೆ ಗೊತ್ತಿತ್ತು ಆದರೂ ಗುಮ್ಮನ ಗುಸ್ಕನ ತರಹ ಸುಮ್ಮನಿದ್ದೆ. ಕೊನೆಗೆ ಟೀಚರ್ ಒಬ್ಬೊಬ್ಬರನ್ನೇ ನಿಲ್ಲಿಸಿ ಕೇಳುತ್ತಾ ಹೋದರು. ಹೆಚ್ಚಿನ ಹುಡುಗ ಹುಡುಗಿಯರು ಉತ್ತರ ಗೊತ್ತಿಲ್ಲ ಎಂದರು, ಕೆಲವರು ತಪ್ಪು ಉತ್ತರ ನೀಡಿದರು. ನನ್ನ ಸರದಿ ಬಂದಾಗ ನನಗೆ ಗೊತ್ತಿರುವ ಉತ್ತರ ಹೇಳಿದೆ. ಟೀಚರ್ ಅದು ಸರಿಯೋ ತಪ್ಪೋ ಅಂತ ತಿಳಿಸದೇ ಮುಂದಿನ ಬೆಂಚ್ ನವರಿಗೆಲ್ಲ ಪ್ರಶ್ನೆ ಕೇಳುತ್ತ ಹೋದರು. ಇಡೀ ಕ್ಲಾಸ್ ನ ಮಕ್ಕಳಿಗೆಲ್ಲ ಕೇಳಿ ಆಯ್ತು. ಆಮೇಲೆ ಓನ್ಲಿ ಮಾಲತಿ ಪೈ ವಿಲ್ ರಿಮೈನ್ ಇನ್ ದಿ ಕ್ಲಾಸ್ ರೆಸ್ಟ್ ಆಫ್ ಯು ಗೆಟ್ ಔಟ್ ಅಂತ ಹೇಳಿದರು. ಇಡೀ ಕ್ಲಾಸ್ ಖಾಲಿ ನಾನೊಬ್ಬಳೆ ಒಳಗೆ. ಟೀಚರ್ ನನಗೆ sarcastically ಮೇಡಂ ಜೀ ಉತರ ಗೊತ್ತಿತ್ತಲ್ಲವೇ, ಯಾಕೆ ಕೈ ಎತ್ತಲಿಲ್ಲ? ನಾನಾಗಿ ಕೇಳಬೇಕಿತ್ತೆ ಅಂತ ಬೈದು ಬಿಟ್ಟರು. ಅದ್ಯಾಕೋ ನನಗೆ ಯಾರನ್ನಾದ್ರೂ ಹಚ್ಚಿಕೊಳ್ಳೋದರಲ್ಲಿ ಒಂದು ತರಹ ಎಲರ್ಜಿ. ಈಗಲೂ. ಶ್ರೀಕಾಂತ ಎಷ್ಟೊಂದು ಜನರನ್ನು ನನಗೆ ಪರಿಚಯಿಸುತ್ತಾರೆ. ನಾನು ಆ ಕ್ಷಣಕ್ಕೆ ಹಲ್ಲೋ, ಹಾಯ್ ಅಂದು ಮರೆತು ಬಿಡುತ್ತೇನೆ. ಆಮೇಲೆ ಅವರು ಎಂದಾದರೊಂದು ನನಗೆ ಸಿಕ್ಕಿ ಮಾತನಾಡಿಸಿದರೆ ನಾನು ತಬ್ಬಿಬ್ಬು.
ಮಾಲವಿಕ ನನ್ನ ಹಾಗೆ ಸ್ವಲ್ಪ. ನಿಹಾ ಕಮ್ಪ್ಲೀಟ್ ಬೇರೆ. ತುಂಬಾ ಸೋಷಲ್ ನೇಚರ್. ಶ್ರೀಕಾಂತ ತರಹ ಅನ್ನಬಹುದು. 
ನಿಹಾ ಳ ರಿಸಲ್ಟ್ ಬಂದಿದೆ. ಪುನ: ಅವಳು ಒಳ್ಳೆ ಮರ್ಕ್ಸ್ ತೆಗೊಂಡು ಪಾಸ್ ಆಗಿದ್ದಾಳೆ . ಒಂದು ವರ್ಷ ಸ್ಟಡಿ ಗ್ಯಾಪ್ ತೆಗೊಂಡು ಆರ್ಟ್ ಫೋಟೋಗ್ರಾಫಿ ಬಗ್ಗೆ explore ಮಾಡುತ್ತಾಳಂತೆ. ನನಗೆ ಖುಶಿ. ಆಗಲೇ ಕೆಲವು ಫ್ರೀ lance ಕೆಲಸ ಮಾಡಿ ಸ್ವಲ್ಪ ದುಡ್ಡು ಮಾಡಿದ್ದಾಳೆ. 
ಅವಳಿಗೊಂದು ಗುಡ್ ಲಕ್. ಸುಮ್ನೆ ಶೇರ್ ಮಾಡುವ ಮನಸ್ಸಾಯ್ತು ಅಷ್ಟೆ.
ಮಗಳು ಅಪೂರ್ವಳ ಮದುವೆ ಚೆನ್ನಾಗಿ ನಡೆಯಿತು. ಆ ಗಡಿಬಿಡಿಯಲ್ಲಿದ್ದದ್ದರಿಂದ ಬ್ಲಾಗ್ ಅಪ್ಡೇಟ್ ಸ್ವಲ್ಪ ಸ್ಲೋ ಆಯ್ತು. ಇಲ್ಲಿದೆ ನಿಹಾ ಕ್ಲಿಕ್ ಮಾಡಿದ ಫೋಟೊಗಳು........
Some private moments at Apoorva's wedding

June 20, 2014

out of this world- 1

ಹಿಂದಿನ ವರ್ಷ ಜೂನ್ ನಲ್ಲಿ ನಡೆದದ್ದು. ಸಣ್ಣಕ್ಕೆ ಮಳೆ ಹನೀತಾ ಇತ್ತು. ಶ್ರಿಕಾಂತ 'ಇವತ್ತು ವಾಕ್ ಹೋಗಿದ್ದ್ಯೇನೆ?' ಅಂತ ಕೇಳಿದರು. ನಾನು ಹೋಗಿರಲಿಲ್ಲ. ಅದಕ್ಕ ಪ್ರಶ್ನೆ ನನಗಲ್ಲವೆಂಬಂತೆ ಇಗ್ನೋರ್ ಮಾಡಿದೆ. ನಾನು ಉತ್ತರ ಹೇಳಿಲ್ಲವಾದ್ದರಿಂದ ರಾಯರಿಗೂ ಗೊತ್ತಾಯ್ತು ನಾ ವಾಕ್ ಹೋಗಿಲ್ಲವೆಂದು. 'ಸೋಂಬೇರಿ , ನಡಿ  ನಡಿ ಮನೆಯಲ್ಲಿ ಫ್ರೂಟ್ಸ್ ಇಲ್ಲ, ಹಣ್ಣಿನ ಅಂಗಡಿಗೆ ಹೋಗಿ ತೆಗೊಂಡು ಬರುವ' ಅಂದರು. ನಾನು ಹ್ಯಾಪ್ ಮೋರೆ ಮಾಡ್ಕೊಂಡು ರೆಡಿಯಾದೆ. ಮಳೆ ನಿಂತಿತ್ತು. ವಾತಾವರಣ ಕೂಲ್ ಆಗಿತ್ತು. ಮೇನ್ ರಸ್ತೆಯಲ್ಲಿ ರಸ್ತೆ ಅಲ್ಲಲ್ಲಿ ಅಗೆದು ಹಾಕಿದ್ದರಿಂದ ಮಳೆ ನೀರಿನಿಂದ ಸೇರಿ ಕೊಚ್ಚೆಯಾಗಿತ್ತು. ನಿಧಾನವಾಗಿ ನಡೆಯದಿದ್ದರೆ ಜಾರುವುದು ಗ್ಯಾರಂಟಿ. ಡಾಕ್ಟರ್ ನನಗೆ ಬೋನ  ತುಂಬಾ ವೀಕ್ ಆಗಿದೆ ಅಂತ ಹೇಳಿದ ಸಮಯದಿಂದ ನಾನು ಜಾರಿ ಬೀಳದಂತೆ ತುಂಬ ಸಾವಧಾನವಾಗಿ ನಡೆಯುವುದು ಕಲಿತಿದ್ದೇನೆ. ಶ್ರೀಕಾಂತಗೆ ಕೆಲವೊಮ್ಮೆ ಕಿರಿಕಿರಿಯಾಗುವಷ್ಟು. :-) 

ಸರಿ, ರಸ್ತೆ ಮೇಲೆ ವಾಹನಗಳ ನಿರಂತರ ಓಡಾಟ, ಪಾದಚಾರಿಗಳಿಗೆ ಓಡಾಡಲು ರಸ್ತೆ ಇರಲಿಲ್ಲ. ಕೊಚ್ಚೆ ರಾಶಿಯ ಮೇಲೆ ನಡೀಬೇಕಾಯ್ತು. ಪುನ: ಸಣ್ಣಕ್ಕೆ ಮಳೆ  ಹನಿಯಲು ಶುರು ಆಯ್ತು. ವಾಹನಗಳ ದೀಪದ ಬೆಳಕಿ ನಲ್ಲಿ ಮಳೆನೀರಿಗೆ ಬೆಂಕಿ ತಾಗಿದಂತೆ, ಬಂಗಾರದ ಮಣಿಗಳನ್ನು ಸರಿಗೆಗೆ ಹಾಗಿ ಪೋಣಿಸಿದಂತೆ ಕಾಣುವುದನ್ನು ನಾನು ಎಂಜಾಯ್ ಮಾಡ್ತಾ ಶ್ರೀಕಾಂತ ಕೈಗೆ ಜೋತು ಬಿದ್ದು  ನಡೀತಾ ಇದ್ದೆ. ಅಷ್ಟರಲ್ಲಿ ದೂರದಲ್ಲಿ  ನಾನು ಆ ಗಿಡ್ಡ ಆಕೃತಿಯನ್ನು ನೋಡಿದ್ದು. ಬೆನ್ನಿನ ಮೇಲೆ ಭಾರವಾದ ಚೀಲ ಇದ್ದುದರಿಂದ ಬಾಗಿದ ಬೆನ್ನು. ಕಾಲುಗಳ ಬಳಿ ಮಡಚಿದ ಬಿಳಿ ಪೈಜಾಮ, ಮೇಲೆ ಹರಕಲು ಕಪ್ಪು ಕೋಟು. ಶ್ರೀಕಾಂತ ಸಡನ್ ಆಗಿ 'malathi, what are you doing? ಯಾಕೆ ಹೀಗೆ ತಳ್ಲುತ್ತ  ಇದ್ದೀಯ? ಇನ್ನು ಚರಂಡಿಗೆ ಬಿಳೋದೊಂದು ಬಾಕಿ ' See that man...over there?? he is going to come and touch me' ಅಂದೆ. ಅರೇ ಆತ  ಅಷ್ಟು ದೂರ ಇದ್ದಾನೆ, ಈ ವಾಹನ ಗಳ ಓಡಾಟದಲ್ಲಿ ಸಧ್ಯಕ್ಕಂತು ಆ ಅಸಾಮಿ ಕ್ರಾಸ್ ಮಾಡಲು ಆಗುವುದಿಲ್ಲ. ಮತ್ತೆ ವೈ ವಿಲ್ ಹಿ ಟಚ್ ಯು? ಅಂದ್ರು ನಾನು I don't know ಅಂತ ತಲೆ ಎತ್ತಿದರೆ ಆ ಮನುಷ್ಯ ನನ್ನ ಮುಂದೆಯೇ. ಎರಡು ಕೈಗಳನ್ನು ಶ್ರೀಕಾಂತ ರಟ್ಟೆಗೆ ಜೋತು  ಬಿಟ್ಟಿದ್ದೆ ಅಂದನಲ್ಲ?ನನ್ನ ಉದ್ದ ತೋಳಿನ ಚೂಡೀದಾರ ನಿಂದ ನನ್ನ ಬಲಗೈಯ ಬೆರಳಿನ ಮೇಲಿನ  ಸ್ವಲ್ಪ ಭಾಗ ಹೊರಗೆ ಇಣುಕ್ತಾ ಇತ್ತು. ಆ ಮನುಷ್ಯ ಅವನ ಬಲಗೈ ಯಿನ ತೋರು ಬೆರಳಿನಿಂದ ಒಂದ್ಸಲ ಮುಟ್ಟಿ ಸಲ್ಯೂಟ್ ಹೊಡೆದು ಹೋದ. 
ಈಗ ಶಾಕ್ ಆಗುವ ಸರದಿ ಶ್ರೀಕಾಂತ ದು 'ವಾಟ್ ವಾಸ್ that'?  ಅಂತ ಎರಡು ನಿಮಿಷ ನಾವು ಸುಮ್ನೆ ಅಲ್ಲಿ ನಿಂತಿದ್ವಿ. ಆಮೇಲೆ ತಲೆ ಕೊಡವಿಕೊಂಡು ಹಣ್ಣು ಖರೀದಿಸಿ , ನನಗೆ ಇವೆಲ್ಲವನ್ನೂ ಮಕ್ಕಳೊಂದಿಗೆ ಹಂಚಿಕೊಳ್ಳುವ ತವಕ. ಮರುದಿನ ಮಿತ್ರರೊಂದಿಗೆ ಇದನ್ನು ಶೇರ್ ಮಾಡಿದಾಗ ಅವರು 'ನಿನಗೇ  ಯಾಕೆ  ಯಾವಾಗಲು ಈ ತರದ್ದೆಲ್ಲ  ಆಗೋದು' ಅಂತ ಕೇಳಿದ್ರು. ಯಾಕೆಂದರೆ ಅವರ ಜತೆ ಇದ್ದಾಗ ಒಂದೆರಡು ಸಲ  ಈ ತರಹದು ಸಂಭವಿಸಿವೆ. :-)
ನಿನ್ನೆ ಫೇಸ್ ಬುಕ್ ನಲ್ಲಿ ಗಿರೀಶ ರಾವ್ ಹತ್ವಾರ್ (ಜೋಗಿ) ಅವರ ಸ್ಟೇಟಸ್ ಇದನ್ನು ನೆನಪಿಸಿತು.  ಅಷ್ಟೆ. ಹಾಗೆ ನಿಮ್ಮೊಂದಿಗೆ ಶೇರ್ ಮಾಡುವಾ ಅಂತ 

June 14, 2014

power packed pongal (copied from my food blog)

aka ಪಾಲಕ್  ಪೊಂಗಲ್

ಮೂರು ವರ್ಷದ ಹಿಂದೆ ಶ್ರೀಕಾಂತ ಗೆ ಆಫಿಸ್ ಕೆಲಸದ ಮೇಲೆ ಯೂರೊಪ್ ಗೆ ಹೋಗಲಿಕ್ಕಿತ್ತು. ಯೂರೊ ಡೊಲರ್ಸ್ ತೆಗೆದುಕೊಳ್ಳಲ್ಲು ರಿಚ್ ಮಂಡ್ ರೋಡ್ ಗೆ ಹೋಗಬೇಕಿತ್ತು. ಮತ್ತು ಅಲ್ಲಿಂದ ಪ್ರವಾಸಕ್ಕೆ ಬೇಕಾದ ಬಟ್ಟೆ ಬರೆಗಳನ್ನು ಕೊಳ್ಳಲು ಕಮರ್ಶಿಯಲ್ ಸ್ಟೀಟ್ ಗೆ ಹೋಗಲಿಕ್ಕೆದೆಯೆಂದು ನನಗೂ ಅವರ ಜತೆ ಬರಲು ಹೇಳಿದರು. ಆ ದಿನ ನಿಂಪಿ ಗೆ ರಜೆ. ಅವಳನ್ನೂ ಕರೆದುಕೊಂಡು ಹೋದೆವು. ರಿಚ್ ಮಂಡ್ ರೋಡ್ ಗೆ ಹೋಗಿ ಕ್ಯಾಶ್ ಕೊಟ್ಟು ಅದನ್ನು ಯೂರೊ ಡಾಲರ್ಸ್ ಗೆ ಬದಲಾಯಿಸಿ ( ಆ ಆಫಿಸ್ ತೆರೆಯುವುದೇ ಬೆಳಿಗ್ಗೆ 11.00 ಗಂಟೆಗೆ. ನಾವು ತಲುಪುವಾಗ 11.45. ಅಲ್ಲಿಯ ಫಾರ್ಮೆಲಿಟಿಸ್ ಮುಗಿಯ ಬೇಕಾದರೆ ಸುಮಾರು ಹೊತ್ತು ಕಳೆಯಿತು. ಹೊಟ್ಟೆ ತಾಳಹಾಕಲಾರಂಭಿಸಿತು. ಶ್ರೀಕಾಂತ ನಮ್ಮನ್ನು ಅಲ್ಲಿಯೆ ಬಳಿ ಯಿದ್ದ ವುಡ್ ಲ್ಯಾಂಡ್ಸ್ ಹೋಟಲ್ ಗೆ ಕರೆದುಕೊಂಡು ಹೋದರು. ಅಲ್ಲಿ ಮೊದಲ ಬಾರಿಗೆ ಸವಿದಿದ್ದು ಪಾಲಕ್ ಪೊಂಗಲ್. ನನಗಂತೂ ತುಂಬಾ ಇಷ್ಟ ಆಗಿ ಈಗ ನನ್ನದೇ ವರ್ಶನ್ ಗಳಲ್ಲಿ ಇದನ್ನು ಮಾಡುತ್ತೇನೆ.

ಬೇಕಾಗುವ ಸಾಮಾನು:
ಜವೆ ಗೋದಿ ಸದಕು (ಬ್ರೊಕನ್ ವ್ಹೀಟ್), ಹಸಿರು ಬೇಳೆ ಸಮ ಪ್ರಮಾಣದಲ್ಲಿ

ಮೊದಲಿಗೆ ನಾನು ಹೆಸರು ಬೇಳೆಯನ್ನು ಸ್ವಲ್ಪ ಹುರಿದುಕೊಳ್ಳುತ್ತೇನೆ.ತಣ್ಣಗಾದ ನಂತರ ಜವೆ ಗೋದಿಯೊಂದಿಗೆ ಮಿಕ್ಸ್ ಮಾಡಿ ಚೆನ್ನಾಗಿ ತೊಳೆದು ಮೂರು ಪಟ್ಟು ನೀರು ಹಾಕಿ ಬೇಯಿಸಬೇಕು.
ಪಾಲಕ್ ಸೊಪ್ಪು ಚೆನ್ನಾಗಿ ತೊಳೆದು ಎರಡು ನಿಮಿಷ ಬಿಸಿ ನೀರಿನಲ್ಲಿ ಹಾಕಿ, ಅದರಿಂದ್ದ ತೆಗೆದು ತಣ್ಣೀರಿನಲ್ಲಿ ಹಾಕಿಡಿ. ಆ ಮೇಲೆ ಮಿಕ್ಸಿಯಲ್ಲಿ ರುಬ್ಬಿ ಪಕ್ಕಕ್ಕಿಡಿ.
ನೀರುಳ್ಳಿ ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಿ (optional), ಸ್ವಲ್ಪ ಹಸಿ ಶುಂಠಿಯನ್ನು ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಿ.
ಸ್ವಲ್ಪ ಎಣ್ಣೆ/ತುಪ್ಪ ಬಿಸಿ ಮಾಡಿ. ಇದಕ್ಕೆ ಜೀರಿಗೆ, ಕರಿಬೇವು, ಇಡೀ ಕರಿ ಮೆಣಸು ಒಗ್ಗರಣೆಗೆ ಇಡಿ. ಇದಕ್ಕೆ ನೀರುಳ್ಳಿ ಬೆರೆಸಿ ಕೆಂಪಗಾಗುವ ತನಕ ಹುರಿಯಿರಿ, ನಂತರ ಶುಂಠಿ ಚೂರು ಹಾಕಿ. ಸ್ವಲ್ಪ ಅರಿಶಿನ ಪುಡಿ ಬೆರೆಸಿ. ರುಬ್ಬಿಟ್ಟ ಪಾಲಕ್ ಸೊಪ್ಪು ಬೆರೆಸಿ ಎರಡು ನಿಮಿಷ ಕೈಯಾಡಿಸಿ. ಸ್ವಲ್ಪ ನೀರು ಬೆರೆಸಿ. ಇದಕ್ಕೆ ಬೇಯಿಸಿಟ್ಟ ಗೋದಿ+ಹಸಿರುಬೆಳೆ ಹಾಕಿ. ಉಪ್ಪು ಚೂರು ಬೆಲ್ಲ ಬೆರೆಸಿ ಬೇಕಾದಷ್ಟು ನೀರು ಹಾಕಿ ಒಂದು ಕುದಿ ಬಂದ ನಂತರ ಕೆಳಗಿಳಿಸಿ. ಇದಕ್ಕೆ ಕಾಯಿ ಚಟ್ನಿ ಅಥವಾ ಟ್ಯೋಮೇಟೋ ನೀರುಳ್ಳಿ+ಮೊಸರು ಸ್ಯಾಲಾಡ್ ಜತೆ ಸೆರ್ವ್ ಮಾಡಿ.
ಬೇಗ ಹಸಿವೆ ಆಗಲ್ಲ. ಮತ್ತು ಇಡೀ ದಿನ್ active ಆಗಿರುತ್ತೆ ದೇಹ/ಮನಸ್ಸು. ಶುಗರ್ complaint ಇರುವವರಿಗೆ ಇದು ಉಪಯುಕ್ತ. 

June 8, 2014

ಮಾತಿಗಿಂತ ’ಮೌನ’..............??!! Not always

ಆಫಿಸ್ ನ ಕೆಲಸ, ಮತ್ತೊಂದೆರಡು ತುರ್ತು ಕೆಲಸ ಮುಗಿಸಿ ಅಲಿಂದ ಹೊರಡುವಾಗ ಲೇಟ್. ಆದರೂ 15 ನಿಮಿಷ ಮುಂಚೆ ತಲುಪುತ್ತೇವೆ ಅಷ್ಟು ಸಾಕು ಅಂದುಕೊಂಡಿದ್ದೆ. ರಾಯರು ನಮ್ಮನ್ನು drop ಮಾಡಿ ಮನೆಗೆ ಹೋಗುವವರಿದ್ದರು. ನಾನು ಶುಕ್ರವಾರ ಮೂರು ಟಿಕೆಟ್ ಬುಕ್ ಮಾಡಿಕೊಂಡಿದ್ದೆ. ಕೊನೆ ಗಳಿಗೆಯಲ್ಲಿ ಮಾಲವಿಕಾ ಬರಲ್ಲ ಅಂದ್ಲು. ನಾನು ನಿಹಾ (ನನ್ನ ನಿಹಾ ಕಾಲೇಜಿನ ಹಲವಾರು ನಾಟಕಗಳಲ್ಲಿ ಪ್ರತ್ಯಕ್ಷ/ಪರೋಕ್ಷವಾಗಿ ಭಾಗವಹಿಸಿ(ರಂಗ ಸಜ್ಜಿಕೆ ಅವಳ speciality) ಹಲವಾರು ಬಹುಮಾನಗಳನ್ನು ಪಡೆದಿದ್ದಾಳೆ. ಹಾಗಾಗಿ ನಾನು ಅವಳು ನಾಟಕಗಳಿಗೆ ಹೋಗುವುದು ಸಾಮಾನ್ಯ. ಏನಾದರೂ ಹೊಸತನ್ನು ಕಲೀಲಿಕ್ಕೆ/ನೋಡಕ್ಕೆ ಸಿಗತ್ತೆ ಅಂತ.) ದಾರಿ ಮಧ್ಯ ಶ್ರೀಕಾಂತ,’ನಾನು ನಾಟಕಕ್ಕೆ ಬರ್ತೀನಿ ಹೇಗೂ ಮೂರು ಟಿಕೆಟ್ ಬುಕ್ ಮಾಡಿದೀ ಅಲ್ಲ’ ಅಂದ್ರು. ನನಗೆ ಪುಕು ಪುಕು. ನಿಧಾನಕ್ಕೆ ಬಾಯಿ ಬಿಟ್ಟೆ. ’ಫೇಸ್ ಬುಕ್ ನಲ್ಲಿ ಹಾಕಿದ ಪೋಸ್ಟರ್ ನೋಡಿ ಮತ್ತು ನನ್ನ ಇಷ್ಟದ ಕುಮುದವಲ್ಲಿ ಅದರಲ್ಲಿ ಇದ್ದಾರೆ ಅಂತ ಈ ನಾಟಕ ನೋಡುವ ಪ್ಲ್ಯಾನ್ ಅಂತ ಹೆದರಿ ಹೆದರಿ ಹೇಳಿದೆ. ಪುಕುಪುಕು/ಹೆದರಿಕೆ ಯಾಕಂದ್ರೆ after an hectic tiruing day at the office i wanted him to relax and enjoy. 
ನಾನು ನನ್ನ ಯೋಚನೆಯಲ್ಲಿ ಮುಳುಗಿದ್ದು ಸಡನ್ ಆಗಿ ಅಲ್ಲಿಂದ ಹೊರಬಂದಾಗ ದಾರಿ ಫಲಕ ಅಶೋಕನಗರ ತೋರಿಸ್ತಾ ಇತ್ತು. ’ಹೋಯ್ ಮಾರಾಯ್ರೆ ಎಲ್ಲಿಗೆ ಅಂತಾ ಕರಕೊಂಡು ಹೋಗ್ತಿದ್ದೀರಿ? ಅಂದ್ರ’ ಹನುಮಂತನಗರ ಮೇಡಂ ಅಂದಾ ಆಟೋ ದವ. ಯಾರಿಗಾದ್ರು ಕೇಳಿ ಯಾಕೋ ದಾರಿ ತಪ್ಪಿದ ಹಾಗೆ ಅನ್ನಿಸ್ತಾ ಇದೆ ಅಂದೆ. ಅಲ್ಲೇ ನಿಂತಿದ್ದ ಇನ್ನೊಂದು ರಿಕ್ಷಾದವನಿಗೆ ಕೆ ಎಚ್ ಕಲಾಸೌಧ ಎಲ್ಲಿ ಅಂದ್ರೆ, ನನ್ನ ಮುಖ ಮಿಕಿ ಮಿಕಿ ನೋಡ್ತಾ ಇದ್ದ. ಕೊನೆಗೆ ರಾಮಾಂಜನೇಯ ದೇವಸ್ಥಾನ ಅಂದೆ. ಅದಕ್ಕೆ ರೈಟ್ ಗೆ ಹೋಗಿ ಇನ್ನೊಂದು ರೈಟ್ ಆಮೇಲೆ ಸರ್ಕಲ್ ಅಲ್ಲಿಂದ ಸೀದಾ ಅಂದ ಭೂಪ್. ನಮ್ಮ ಆಟೋ ಡ್ರೈವರ್ ಇನ್ನಷ್ಟು ಸುತ್ತಾಡಿಸಿ, ನಾನು ಆಲ್ಮೋಸ್ಟ್ ನನ್ನ ಭಾರವಾದ bag ನಿಂದ ಅವನ ತಲೆ ಒಡೆಯುವುದೊಂದು ಬಾಕಿ. ಅಂತೂ ಇಂತೂ ಸುತ್ತಾಡಿಸಿ ನನ್ನ ಪಿರಿಪಿರಿ ಮಧ್ಯೆ 7.28 ಕ್ಕೆ ನಾವು ಕಲಾಸೌಧ ತಲುಪಿದ್ವಿ. ಆಗಲೇ ಅಲ್ಲೆಲ್ಲ ರಶ್. ’ಚೆನ್ನಾಗಿದೆಯಾ ಈ ನಾಟಕ? ಎಷ್ಟೊಂದು ಜನರು ಅಮ್ತ ಕೇಳಿದರು ರಾಯರು. ಅದಕ್ಕೆ ನಾನು ಫೇಸ್ ಬುಕ್ ಪ್ರಭಾವ. ನಾನು ಅಲ್ಲೇ ಇದರ ಪೋಸ್ಟರ್ ನೋಡಿ ಬಂದದ್ದು ಅಂದಾಗ ಅವರು ಗಟ್ಟಿಯಾಗಿ ನಕ್ಕರು. ನಿಹಾ ಟಿಕೆಟ್ ತರಲು ತೆರಳಿದರೆ ನಾನು ಟಾಯಲೆಟ್ ಗೆ ಹೋದೆ. ಅಲ್ಲಿಂದ ಹೊರಗೆ ಬರುವಾಗ ಕೆಳಗಡೆ ಹೌಸ್ ಫುಲ್, ಮೇಲಕ್ಕೆ ಹೋಗಿ ಅಂದ್ರು. ನನಗೆ ಯಾವತ್ತೂ ನಾಟಕ ನೋಡಲು ಹೋದಾಗ ಒಳಗಡೆ ಹೋಗಿ ಸ್ಟೇಜ್ ಕಡೆಯ vantage point ನೋಡಿ ಜಾಗ ಹುಡುಕುವ ಅಭ್ಯಾಸ. ಮೇಲೆ ಕೂಡ ರಶ. ನಾನು ಹಲವಾರು ಬಾರಿ ಕೆ ಎಚ್ ಕಲಾಸೌಧಕ್ಕೆ ಹೋದರೂ ಮೇಲಿನ ಸೆಕ್ಷನ್ ಒಪನ್ ಮಾಡುವಷ್ಟು ಗರ್ದಿ ಇರಲಿಲ್ಲ. ರಾಯರು ಎದುರಿನ ಬೆಂಚ್ ಮೇಲೆ ಕೂರುವ ಅಂದ್ರು. ಅಲ್ಲಿ ಕೂತ್ರೆ ಅಲ್ಲಿನ parapet ನಮಗಿಂತ ಉದ್ದ. ಸ್ಟೇಜ್ ಸರಿಯಾಗಿ ಕಾಣ್ತಿರಲಿಲ್ಲ. ಮಂಗಗಳ ತರ parapet ಮೇಲೆ ನೇತಾಡ್ತಾ ನಾಟಕ ನೋಡುವ ಅನುಭವ. ಅದರಲ್ಲಿ ನನ್ನ ಹಿಂಬದಿ ಕೂತವರಿಗೆ ಕೆಮ್ಮು, ಗಡಿ ಗಡಿ ಕ್ಯಾಕರಿಸ್ತಾ ಇದ್ರೆ ನನಗೆ ಬೆನ್ನ ಮೇಲೆ ಅವರ ಕಫ ಏನಾದರೂ ಬೀಳ ಬಹುದು ಅಂತ amoeba ತರಹ ಮೈ ಅನ್ನು ಮುದುಡಿಸ್ತಾ ಇದ್ದೆ. :-(.  ಇಇನ್ನೊಬ್ಬರು ಪಿಸಿ ಪಿಸಿ ಮಾತಿನಲ್ಲಿ ನಾಟಕ ಯಾರಿಗೋ explain ಮಾಡ್ತಾ ಇದ್ರು. ಅಸಹನೆ ಇಂದ ಅವರ ಕಡೆ ನೋಡಿದ್ರೆ ಅವರು ಪುಟ್ಟ ಹುಡುಗಿಗೆ ನಾಟಕ explain ಮಾಡ್ತಾ ಇದ್ದದರಿಂದ ಸುಮ್ನಾದೆ. ಮತ್ತೆ ಹಿಂದೆ ಕೂತವರ ಕಾಲು ನಮ್ಮ ಬೆನ್ನಿಗೆ ತಾಗ್ತಾ literally we were on the edge of the seat. ಮನೆಗೆ ಬಂದು ಅಕ್ಕನಿಗೆ ಹೇಳಿ ನಕ್ಕಿದ್ದೆ ನಕ್ಕಿದ್ದು. ಅವಳು mommeeeee ಅಂತ ಹೇಳಿದಾಗ ಆಗುವ ಖುಶಿನೆ special.
’ಮೌನ’ ನಾಟಕ ಒಟ್ಟು ಐದು ಕತೆಗಳ ಸಂಗಮ. ಎರಡನೆ ಕತೆ ಅಷ್ಟು impressive ಆಗಿ ಬರಲಿಲ್ಲ. ಕೊನೆಯ ಕತೆಯಲ್ಲಿ ಹಾಡು ಸ್ವಲ್ಪ ಜಾಸ್ತಿ ಆಯ್ತು. ಕುಮುದವಲ್ಲಿಯವರ acting .005% over ಅನ್ನಿಸಿದ್ರೂ not bad. ಜಯಲಕ್ಷ್ಮಿ ಪಾಟೀಲ, ಪುಟ್ಟ ಸಾತ್ವಿಕ್ ಸೂಪರ್. ರಂಗ ಸಜ್ಜಿಕೆ, ಲೈಟಿಂಗ್ ನ ಹೊಸ ಟೆಕ್ ನೀಕ್ ಗೆ ನನ್ನದು 5/5. 
ಹಿನ್ನೆಲೆಗಾಯನ ಕುಮುದವಲ್ಲಿ ಸೂಪರ್.You have a very sweet voice. ಅವರ ಜತೆ ಇದ್ದವರು ಕೂಡ, ಆದರೆ ಚಪ್ಪಾಳೆ ತಟ್ಟುವ ಭರದಲ್ಲಿ ಅವರ ಹೆಸರುಗಳು ಸರಿಯಾಗಿ ಕೇಳಿಸಲಿಲ್ಲ. 
’ಮೌನ’ ನಾಟಕದ ಬಗ್ಗೆ ಹೇಳುವುದಾದ್ರೆ....................ಅರೇ ನಾನ್ಯಾಕೆ ಹೇಳ್ಲಿ?? ಪುನ: ಕೆ ಎಚ್ ಕಲಾಸೌಧದಲ್ಲಿ ಅವರ show ಇದೆ. ಹೋಗಿ ನೋಡಿ ಪ್ರೋತ್ಸಾಹಿಸಿ.
ಶ್ರೀಕಾಂತ ಅಂತೂ ಟೀಮ್ ನಲ್ಲಿರುವ ಒಟ್ಟಾರೆ youngsters ಗಳನ್ನು ನೋಡಿ ತುಂಬಾ ಇಂಪ್ರೆಸ್ಡ್. ನಾನು ನಿಹಾ ಗಿಂತ ಅವರು ಜಾಸ್ತಿ ಎಂಜಾಯ್ ಮಾಡಿದಾರೆ. I am glad.
ಆಜಾದ್ ಭಾಯ್ ನಿಮ್ಮನ್ನು ಸ್ಟೇಜ್ ಮೇಲೆ ಸೋಮಯಾಜಿ ಯವರು ನೆನಪಿಸಿಕೊಂಡಾಗ , ಶ್ರೀಕಾಂತ , ’ನಿನ್ನ ಆಜಾದ್ ಭಾಯ್ ನಾ’ ಅಂತ ಕೇಳಿದಾಗ ಹೌದು ಎನ್ನಲು ಖುಶಿ ಅನ್ನಿಸ್ತು. ನೀವು ಕುವೈಟ್ ನಲ್ಲಿದ್ದು ಕೊಂಡು ಸಪೋರ್ಟ್ ಮಾಡ್ತಿದ್ದೀರಲ್ಲ..ಭೇಷ!!! ಇಲ್ಲೆ ಇದ್ದುಕೊಂಡು ನಾವೇನೂ ಮಾಡಲ್ಲ.
ಪ್ರಕಾಶ ಹೆಗ್ಡೆ : ’ನಿಮ್ಮ ಬ್ಲಾಗ್ ಓದುತ್ತಿದ್ದ ದಿನಗಳಲ್ಲಿ ನನಗೆ ಸಖತ್ ಕಾಡಿದ ಕತೆಯನ್ನು ಇಲ್ಲಿ adapt ಮಾಡಿದ್ದು ಖುಶಿ ಅನ್ನಿಸ್ತು.
'ಮೌನ; i award it 3.8 / 5
:-) 
ಸರಿ ನೀವು ಓದ್ತಾ ಇರಿ ನಾ ಹೊಂಟೆ.....ಮೆಂಥ್ಯದ್ ದೊಸೆ ಮಾಡಲು ಎಲ್ಲರಿಗೂ ಹೊಟ್ಟೆ ಹಸೀತಾ ಇದೆ ಅಂತೆ. ಸಂಡೆ ಅಲ್ಲವಾ ಸ್ವಲ್ಪ ಲೇಟ್ .....ಇದನ್ನು ಬರೆದು ಹೋಗುವಾ ಅಂತ ಬಂದೆ
ಬರಲಾ??
:-)