February 24, 2013

ಅರ್ಧ ಕೇಳಿದ ಸಂಭಾಷಣೆಗೊಂದು ಸುಖಾಂತ್ಯ

"A walk in the garden is refreshing and sometimes depressing
ಇವತ್ತು ವಾಕ್ ಮುಗಿಸಿ ಕೂತಿದ್ದೆ. ನನ್ನ ಪಕ್ಕದ ಸೀಟ್ ನಲ್ಲಿ ಕೆಲವು ಹಿರಿಯರು ಕೂತಿದ್ದರು. ಕತ್ತಲೆಯಾಗ್ತಾ ಒಬ್ಬೊಬ್ಬರೆ ಜಾಗ ಖಾಲಿ ಮಾಡಿ ಹೊರಟ್ರು. ಕೊನೆಗೆ ಇಬ್ರು ಮಾತ್ರ ಉಳಿದರು. ಅವರಲೊಬ್ಬರು , 'ಹಾಂ, ಇನ್ನು ಕತ್ತಲಾಯ್ತು ನಾ ಕೂಡ ಮನೆಗೆ ಹೊರಟೆ, ಬನ್ನಿ ಹೊರಡುವ' ಅಂದ್ರು. ಅದಕ್ಕೆ ಆ ಹಿರಿಯ ವ್ಯಕ್ತಿ, 'ಇಲ್ಲ ನಾ ಮನೆಗೆ ಹೋಗಲಿಕ್ಕೆ ಇನ್ನೂ ಅರ್ಧ ಗಂಟೆ ಇದೆ. ಸೊಸೆ ನನಗೆ 7.30 ಗೆ ಮುಂಚೆ ಮನೆಗೆ ಬರಬಾರದೆಂದು ವಾರ್ನಿಂಗ್ ಕೊಟ್ಟಿದಾಳೆ' ಅಂದಾಗ ಒಂತರಹ ಆಯ್ತು ಕೇಳಿ"......
ಮೇಲೆ ನಮೂದಿಸಿದ್ದು ನನ್ನ ಫೇಸ್ ಬುಕ್ ಸ್ಟೇಟಸ್. ಅದಕ್ಕೆ ಒಂದಷ್ಟು ಸ್ಯಾಡ್ ಫೇಸ್ ಐಕನ್ ಕಮೆಂಟ್ ಮೂಲಕ. ಅವಧಿ ಮ್ಯಾಗ್ ನ ಜಿ.ಎನ್. ಮೋಹನ್ ಅವರು ಈ ಸ್ಟೇಟಸ್ ಅನ್ನು ಅವಧಿಯಲ್ಲಿ ಹಾಕಿಕೊಂಡಿದ್ದಾರೆ. ಅವರೆಲ್ಲರಿಗೂ ಬೇಜಾರಾಗಿದ್ದು ನನಗೆ ಕರುಳು ಚುರುಕ್ಕೆಂದಿತು. ಅದಕ್ಕೆ ಆ ಸಂಭಾಷಣೆಗೆ ನನ್ನದೇ ಆದ ಸುಖಾಂತ್ಯ ತೋರಿಸುವ ಪ್ರಯತ್ನ. ನಿಜವಾಗಿ ಅಲ್ಲಿ ಏನೇ ನಡೆಯಲಿ. ನಾವು ಪೊಸಿಟಿವ್ ಆಗಿ ವಿಚಾರ ಮಾಡಬಹುದಲ್ಲವಾ?
continued.....
'ಏನು ಕಾಲ ಬಂತಪ್ಪ? ನಮಗಿಂತ ಕಿರಿಯರಿಂದ ಇಂತಹುದ್ದೆಲ್ಲ ಕೇಳಬೇಕಾಗಿದೆ'
"ಛೆ ಛೆ ಅಂತಾದ್ದೇನೂ ಆಗಿಲ್ಲ. ನನ್ನ ಮಗನಿಗಿಂತ ನನ್ನ ಸೊಸೆಗೆ ನನ್ನ ಬಗ್ಗೆ ಹೆಚ್ಚಿನ ಕಾಳಜಿ. ಅವಳ ತಂದೆ ವೈದ್ಯರು. ಹಿಂದಿನ ತಿಂಗಳ ನನ್ನ ಆರೋಗ್ಯ ತಪಾಸಣೆಯಾದಾಗ ನನ್ನ ಮೈಯಲ್ಲಿ ವಿಟಮಿನ್ ಡಿ ಯ ಕೊರತೆ ಕಂಡು ಬಂದಿದೆ. 
ನನ್ನ ಮಗ ಚಿಕ್ಕವನಿರುವಾಗಲೇ ನನ್ನ ಹೆಂಡತಿ ತೀರಿಕೊಂಡಳು. ನಾನೊಬ್ಬನೇ ಅವನ ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಂಡೆ. ಅವನು ಎಷ್ಟು ಬೇಕು ಅಷ್ಟು ಓದಲು ಅನುವು ಮಾಡಿಕೊಟ್ಟೆ. ಕೊನೆಗೆ ಒಳ್ಳೆಯ ಕೆಲಸ ಸಿಕ್ಕಿ, ಅವನ ಕಛೇರಿಯಲ್ಲಿರುವ ಹುಡುಗಿಯನ್ನೇ ಮದುವೆಯಾದನು. ನನಗೆ ಸ್ವಲ್ಪ ಅಳುಕೇನೋ ಇತ್ತು. ಮತ್ತು ನಾನು ಅವರಿಬ್ಬರಿಗೆ 'ನೀವು ಬೇರೆ ಮನೆ ಮಾಡಿ ಇರಿ ಅಂತೆ ಸಲಹೆ ನೀಡಿದೆ. ಅದಕ್ಕೆ ಸೊಸೆ ನೆ ಮೊದಲಾಗಿ 'ಛೆ ಏನಂತ ಮಾತಾಡ್ತೀರಿ ಅಪ್ಪ' (ನನಗೆ ಮಾವ ಅಂತ ಕರೀದೆ, ಅಪ್ಪ ಅಂತಲೇ ಸಂಭೋದಿಸುವುದು ಅವಳು.)ನನ್ನ ಅಪ್ಪ ಬೇರೆ ನೀವು ಬೇರೆ ಅಂತ ನಾನು ಯಾವತ್ತು ತಿಳಕೊಂಡಿಲ್ಲ. ಎಲ್ಲರೂ ಒಟ್ಟಿಗೆ ಇರುವ ಬೇರೆ ಮನೆ ಗಿನೆ ಬೇಡ." ದೊಡ್ಡ ಮನೆ ಖರೀದಿಸಿ ನಾವು ಒಟ್ಟಿಗೆ ಇರ್ತೇವೆ.
ಇಬ್ಬರೂ ಕೆಲಸಕ್ಕೆ ಹೋಗ್ತಾರೆ. ಬೆಳಿಗ್ಗೆ 8 ಮನೆ ಬಿಟ್ಟರೆ ಸೊಸೆ 6.30 ಗೆಲ್ಲ ಮನೆಗೆ ಬಂದು ಅಡಿಗೆ ಗಿಡಿಗೆ ಮಾಡ್ತಾಳೆ. ಉಳಿದ ಕೆಲಸಕ್ಕೆ ಜನ ಇದ್ದಾರೆ. ಮಧ್ಯಾಹ್ನ ಬಿಸಿ ಬಿಸಿ ಚಪಾತಿ ಮಾಡಿಕೊಡಲು ಓರ್ವ ಮಹಿಳೆ ಬಂದು ಹೋಗುತ್ತಾಳೆ. ಈಗ ಮೊಮ್ಮಗ ಶಾಲೆಯಿಂದ ಮಧ್ಯಾಹ್ನವೆ ಬಂದು ಬಿಡುತ್ತಾನೆ. ಮಹಾ ತಂಟೆ ಖೋರ. ನನಗೆ ತೊಂದರೆಯಾಗುತ್ತೇನೋ ಅಂತ ಅವನಿಗೆ ಮನೆ ಬಳಿಯ creche ನಲ್ಲಿ ಹಾಕುತ್ತೇನೆ ಅಂದಾಗ ನಾನೇ ಬೇಡ ಅಂದೆ. ನಮ್ಮ ಮನೆಯೇನೋ ದೊಡ್ಡದಿದೆ ಆದರೆ ಅಕ್ಕ ಪಕ್ಕದ ಮನೆಗಳ ಹಾವಳಿಯಿಂದ ಗಾಳಿ ಬೆಳಕಿಗೆ ಸ್ವಲ್ಪ ಕೊರತೆ. ಅದಕ್ಕೆ ನನ್ನ ಸೊಸೆಯಿಂದ ನನಗೆ ಕಡ್ಡಾಯ ವಾಕಿಂಗ್." ಸ್ವಲ್ಪ ಹೊತ್ತು ಮೊಮ್ಮಗನ ಹಾವಳಿಯಿಂದ ಮುಕ್ತಿ, ವಾಕ್ ಮಾಡ್ತೀರಾ ಬಿಡ್ತೀರಾ ಅದು ನಿಮಗೆ ಬಿಟ್ಟಿದ್ದು, ಆದರೆ ಸ್ವಲ್ಪನಾದರೂ ತಾಜ ಗಾಳಿಗೆ ಇದ್ದು ಬನ್ನಿ "ಅಂತ ಅವಳು ಹೇಳೋದು. ಇವತ್ತು ನನ್ನ ಹುಟ್ಟು ಹಬ್ಬ. ಏನೋ ಸರ್ಪ್ರೈಸ್ ಇದೆ. ಅದಕ್ಕೆ 7.30 ನಂತರ ನನಗೆ ಬರಲು ಹೇಳಿದ್ದಾಳೆ ಎಂದು ಗಹಗಹಿಸಿ ನಕ್ಕರು ಆ ಹಿರಿಯರು
ಸರ್ಪ್ರೈಸ್ ಏನಂತ ನಿಮಗೆ ಬೇಕಾದನ್ನು ಊಹಿಸಿ.
:-)

February 23, 2013

ಚಿತ್ರಸಂತೆ 2013

ಕೇವಲ ಒಂದು ತಿಂಗಳಷ್ಟು ವಿಳಂಬ. ಅದೇಕೆಂದರೆ ಕ್ಯಾಮರಾದಿಂದ ಚಿತ್ರಗಳನ್ನು ಇನ್ನೊಂದು ಲ್ಯಾಪ್ ಟಾಪ್ ನಲ್ಲಿ ಸೇವ್ ಆಗಿದೆ. ಚಿಕ್ಕ laptop ಅದು. ಆದ್ದರಿಂದ ಇಬ್ಬರೂ ಹುಡುಗಿಯರಿಂದ ಅದಕ್ಕೆ ಡಿಮ್ಯಾಂಡ್ ಹೆಚ್ಚು. ಪ್ರಾಜೆಕ್ಟ್ ವರ್ಕ್ ಅದೂ ಇದೂ ಅಂತ. ನಿನ್ನೆ ಇವತ್ತು ಎರಡು ದಿನ ಇಬ್ಬರಿಗೂ ರಜೆ ಹಾಗಾಗಿ ಇವತ್ತು ನನ್ನ ಕೈಗೆ ಸಿಕ್ಕಿದೆ ಅದು. 
ಚಿತ್ರಸಂತೆಯ ಹಿಂದಿನ ರಾತ್ರಿ ನನ್ನ ಫೇಸ್ ಬುಕ್ ಮಿತ್ರ ರವೀಂದ್ರ ಮಾವಖಂಡ ಅವರು , ಭಾರತೀಯ ವಿದ್ಯಾ ಭವನದಲ್ಲಿ ನಡೆಯುವ ಪಂಡಿತ್ ಗಣಪತಿ ಭಟ್ ಹಾಸಣಗಿ ಅವರ ಸಂಗೀತ ಕಾರ್ಯಕ್ರಮದ ಬಗ್ಗೆ ತಿಳಿಸಿದ್ದರು. ಅದರ ಬಗ್ಗೆ ಮೈಲ್ ಕೂಡ ಮಾಡಿದ್ದರು ಅವರು, ಆದರೆ ನಾನು ಮರೆತಿದ್ದೆ. ಅವರು ನೆನಪಿಸಿದ್ದು ಒಳ್ಳೆಯದಾಯ್ತು ಹಾಗಾಗಿ ಬೆಳಿಗ್ಗೆ ನನ್ನ ನಿಹಾನ ಸವಾರಿ ಅಲ್ಲಿಗೆ. ನಿಹಾರಿಕಾ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ವಿಧ್ಯಾರ್ಥಿನಿ. ಬಸವೇಶ್ವರನಗರದ ಶುಭಾ ಧನಂಜಯ್ ಅವರ 'ಕರಣಂ' ನಲ್ಲಿ. ಅವಳ ಸಂಗೀತ ಗುರುಗಳು ಶ್ರೀಮತಿ ಸರೀತಾ ಕಟ್ಟಿ. ಹಾಗಾಗಿ ನಾವು ಸಂಗೀತ ಕಾರ್ಯಕ್ರಮಗಳನ್ನು ಮಿಸ್ ಮಾಡಿಕೊಳ್ಳುವುದು ಕಡಿಮೆ. ಅದೂ ಮುಂಜಾನೆ ಸಂಗೀತ ಕಾರ್ಯಕ್ರಮ ಕೇಳುವುದಕ್ಕಿಂತ ಆಹ್ಲಾದಕರವಾದದ್ದೂ ಎನೂ ಇಲ್ಲ. ಬೆಳ್ಳಿಗೆ ಎದ್ದು ತಿಂಡಿ ಅಡುಗೆ ಎಲ್ಲ ಮಾಡಿ, ಅವರೆಲ್ಲ್ಲ ಬ್ರೇಕ್ ಫಾಸ್ಟ್ -ಮಸಾಲೆ ದೋಸೆ - ಮಾಡ್ತಿರಬೇಕಾದ್ರೆ ನಾನು ರೆಡಿ ಯಾದೆ . ಬಂದ ಮೇಲೆ ತಿಂಡಿ ತಿಂದರಾಯಿತೆಂದು.
ಚೆನ್ನಾಗಿತ್ತು ಕಾರ್ಯಕ್ರಮ. ಬೆಳಿಗ್ಗೆ ಬೆಳಿಗ್ಗೆ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ತಲೆ ಕೆರೆದುಕೊಳ್ಳುತ್ತ, ಆಕಳಿಸುತ್ತ ಅವರು ಕಾರ್ಯಕ್ರಮವನ್ನು ಅಸ್ವಾದಿಸುತ್ತಿದ್ದರು. ಕಾರ್ಯಕ್ರಮದ ನಂತರ ರವೀಂದ್ರ ಅವರನ್ನು ಭೆಟ್ಟಿ ಮಾಡಿದೆ. ಪರಿಚಯ ಆಗಿ ಸುಮಾರು ಸಮಯ ಆಗಿದ್ದರೂ ಭೆಟ್ಟಿಯಾಗಿದ್ದು ಮೊದಲ ಸಲ. ಹಾಯ್ ಹಲ್ಲೋ ಅಂತ ಮಾತಾಡಿ ನಾವು ಹೊರಗೆ ಬಂದೆವು, ಅವರಿಗೂ ಕಛೇರಿಗೆ ಹೋಗಲಿಕ್ಕಿತ್ತು.
ನಾವು ಅಲ್ಲಿಂದ ಆಕೃತಿಗೆ ಬಂದೆವು ಅಲ್ಲಿ ಪ್ರತಿಭಾ ನಂದಕುಮಾರ್ ಅವರ ಪುಸ್ತಕ 'ಅನುದಿನದ ಅಂತರಗಂಗೆ' ಬಗ್ಗೆ ಸಂವಾದ ಕಾರ್ಯಕ್ರಮ ಇತ್ತು. ನಾವು ತಲುಪುವ ಮುಂಚೆನೇ ಶ್ರೀಕಾಂತರಿಂದ ಎಸ್ ಎಮ್ ಎಸ್ ಬಂತು' come home soon, lets us visit  the chitrasante, my friends daughter is exhibiting her works' ಅಂತ. ನಾನು ಓಕೆ ಅಂತ ಕಳಿಸಿದೆ. ನಾವು ಆಕೃತಿ ತಲುಪಿದಾಗ  ಪ್ರತಿಭಾ ಮತ್ತು ವಿಜಯಮ್ಮ ಆಗಲೇ ಬಂದಿದ್ದರು.
ಅನುದಿನದ ಅಂತರಗಂಗೆ ಎರಡನೇ ಆವೃತಿ ಬಿಡುಗಡೆ

ನಾನು, ನಿಹಾ, ಜಯಲಕ್ಷ್ಮಿ ಪಾಟೀಲ  ರನ್ನು ನೋಡಬಹುದು

ನಿಹಾರಿಕ 'ನಮ್ಮ ಮಾನಸ' ಪತ್ರಿಕೆಯ ಎಡಿಟೋರಿಯಲ್ ಟೀಮ್ ನಲ್ಲಿದ್ದುದರಿಂದ ಅವಳಿಗೆ ವಿಜಯಮ್ಮ ಮೊದಲೆ ಪರಿಚಯ. ಅವಳು ಅವರನ್ನು ನನ್ನನ್ನು ಪರಸ್ಪರ ಪರಿಚಯಿಸಿದಳು. ನಿಧಾನಕ್ಕೆ ಜನರು ಆಗಮಿಸಲಾರಂಭಿಸಿದರು. ಅಂಜಲಿ ರಾಮಣ್ಣ, ಜಯಲಕ್ಷ್ಮೀ ಪಾಟೀಲ್, ಉಷಾ ಕಟ್ಟೆಮನೆ ನನ್ನ ಅಂತ:ಪುರದ ಸಖೀಯರನ್ನು ಅಲ್ಲಿ ಕಂಡು ನನಗೆ ಆಶ್ಚರ್ಯದ ಜತೆ ಸಂತಸ, ಅವರು ಬರುವವರಿದ್ದಾರೆಂದು ಮೊದಲೇ ಗೊತ್ತಿದ್ದರೆ ಅವರಿಗೆಲ್ಲ ನನ್ನ ಮನೆಯಲ್ಲೇ ಲಂಚ್ ಎರೆಂಜ್ ಮಾಡ್ಬಹುದಿತ್ತು ಅಂತ ಹಳಹಳಿಸಿದೆ. 


ವಿಜಯಮ್ಮ ಪ್ರತಿಭಾ ಪರಸ್ಪರ ಹೊಗಳಿಕೆಯ ಮಾತನ್ನಾಡುತ್ತಿದ್ದರೆ ನಾನು ಅವರ ಚಂದದ ಸೀರೆ, ಅವರ ದೊಡ್ಡ ಬಿಂದಿ ಇದರಲ್ಲೇ ತಲ್ಲೀನಳಾಗಿದ್ದೆ. ಪ್ರತಿಭಾ ರ ಮಾತಿನಿಂದ ಅವರು ತುಂಬ ಒನೆಸ್ಟ್ (honest) ಮತ್ತು sensitive annistu. ಆತ್ಮಕತೆ/ಕಥೆ ಯೆಲ್ಲ 60 ವರ್ಷದ ಬಳಿಕ ಬರೀಬೇಕು ನನ್ನ ಪ್ರಕಾರ. ದಯಾನಂದ ಟಿ.ಕೆ ಕೂಡ ಏನೇನೋ ಮಾತಾಡಿದರಪ್ಪ. ನನಗೊಂದೂ ಅರ್ಥ ಆಗಲಿಲ್ಲ. ನಿಧಾನಕ್ಕೆ ಕನ್ನಡದಲ್ಲಿ ಮಾತನಾಡಿದ್ರೆ ಮಾತ್ರ ನನಗೆ ಅರ್ಥ ಆಗೋದು. ಅಷ್ಟರ ಮಧ್ಯೆ ನಾನು ಈಗಾಗಲೇ ಹಲವಾರು ಸಲ ಭೇಟ್ಟಿಯಾಗಿದ್ದ ನನ್ನ ಫೇಸ್ ಬುಕ್ ಪರಿಚಯದ ಕುಮಾರ್ ರೈತ ಫೋಟೊ ತೆಗೆಯುವಾಗ ನನ್ನ ಒಡೆದ ಕಾಲುಗಳು ಏನಾದರೂ ಕಂಡಾವೂ ಅಂತ ಮುಜುಗರ ಪಟ್ಟುಕಂಡು ನನ್ನ ಕಾಲನ್ನು ಸರಕ್ಕನೆ ಕುರ್ಚಿ ಕೆಳಗಡೆ ಅವಿತಿಟ್ಟೆ. :-)
ಅಂಜಲಿ ರಾಮಣ್ಣ ಅವರ ಮಾತು ಕಿವಿಯಲ್ಲಿ ಬೀಳಿತ್ತಿದ್ದರು ನಾನು ಅವರ ದನಿ ಅವರ ಹಾವಭಾವವನ್ನಷ್ಟೆ ಗಮನಿಸಿದ್ದು. ಯಾರಾದರೂ ಕಾರ್ಯಕ್ರಮದ ಬಗ್ಗೆ ವರದಿ ಹೇಗೂ ಒಪ್ಪಿಸುತ್ತಾರಲ್ಲವೇ, ಅದನ್ನೆ ನಿಧಾನಕ್ಕೆ ಓದಿದರಾಯ್ತು ಅಂದುಕೊಂಡೆ . ಒಂದು ಮಾತನಂತೂ ಅವರು ಸರಿಯಾಗೇ ಹೇಳಿದರು 'ಆತ್ಮಕತೆ' ಬಗ್ಗೆ ಸಂವಾದ ಮಾಡುವುದು ನನ್ನ ಪ್ರಕಾರ ಸರಿಯಿಲ್ಲ' ಅಂತ. ಅದು ನನಗೂ ಒಪ್ಪಿಗೆ.
ಜಯಲಕ್ಷ್ಮಿಯವರ ಸೀರೆ ಬ್ಲೌಸ್ ಕೂಡ ಸಕತ್ ಆಗಿತ್ತು. ಅವರನ್ನ compliment ಮಾಡಲು ಮರೆತುಬಿಟ್ಟೆ.
ಕಾರ್ಯಕ್ರಮ ಮುಗಿದ ತಕ್ಷಣ ಎಲ್ಲರಿಗೂ ಬೈ ಹೇಳಿ (ಕೆಲವು ಪುಸ್ತ್ಕಕಗಳು ಬೇಕಾಗಿದ್ದವು, ಆದರೆ ಬಿಲ್ಲಿಂಗ್ ಕೌಂಟರ್ ನಲ್ಲಿ ರಶ್ ಇತ್ತು. ಅದಲ್ಲದೇ ನಿಹಾರಿಕಾ ಗೆ 'ನಮ್ಮ ಮಾನಸ' ದ ಮೀಟಿಂಗ್ ಗೆ ಹೋಗ ಬೇಕಿತ್ತು
ಒಂದಂತು ನಿಜ.ಹೀಗೆ ಪುಸ್ತಕದ ಮಳಿಗೆಯಲ್ಲಿ ಸಂವಾದ ಕಾರ್ಯಕ್ರಮಗಳನ್ನು ಇಟ್ಟರೆ ಹಲವು ಮಂದಿ ಪುಸ್ತಕಗಳನ್ನು ಖರೀದಿಸುತ್ತಾರೆ. ಹಿಂದಿನ ಸಲ ನಾನು ನನ್ನ ಫ್ರೆಂಡ್ ಇಬ್ಬರದ್ದೇ ಖರೀದಿಯ ಬಿಲ್ಲ್ 1000ರೂ ಆಗಿತ್ತು. ಇನ್ನೂ ಹಲವರು ನಮ್ಮ ಹಿಂದೆ ಸರತಿ ಸಾಲಿನಲ್ಲಿದ್ದರು. good idea
ಸಧ್ಯ ಬೇಗ ರಿಕ್ಷಾ ಸಿಕ್ಕಿ, ನಾವು ಮನೆಗೆ ತಲುಪಿ ನೀಹಾ ಊಟ ಮಾಡಿ ರವೀಂದ್ರ ಕಲಾಕ್ಷೇತ್ರದ ಕಡೆ ಹೊರಟಳು. ನಮ್ಮ ರಾಯರು ಊಟ ಮಾಡಿ ಸಣ್ಣ ನಿದ್ರೆ ಹೊಡೆಯುವುದರಲ್ಲಿ ನಾನು ಬೆಳಿಗ್ಗಿನ ಗಡಿಬಿಡಿಯಲ್ಲಿ ಅಲ್ಲಲ್ಲೆ ಚೆಲ್ಲಿದ ಬಟ್ಟೆ ಪಾತ್ರೆ ಎಲ್ಲ ವಾಶ್ ಮಾಡಿ ಚಿತ್ರಸಂತೆಗೆ ಹೊರಡಲು ಅನುವಾದೆ.
ನಾಲ್ಕು ವರ್ಷದಿಂದ ಸತತವಾಗಿ ನಾವು ಚಿತ್ರ ಸಂತೆಗೆ ಹೋಗುತ್ತಿದ್ದೇವೆ. ಆದರೆ ಪ್ರಾಮಾಣಿಕವಾಗಿ ಹೇಳ್ತೇನೆ ಯಾಕೋ ಬೋರ್ ಆಗ್ತಾ ಇದೆ. ಇಷ್ಟ್ತು ವರ್ಷ ನಾನು-ನಿಹಾ-ಶ್ರೀಕಾಂತ ಬೆಳಿಗ್ಗೆ ಹೋಗ್ತ್ದಿದ್ದದ್ದು. ಅಷ್ಟು ರಶ್ ಇರಲ್ಲ.ಈ ಸಲ ನಿಹಾ ಇಲ್ಲದೇ ಏನೋ ಕಳಕೊಂಡ ಅನುಭವ. ನಾವು ತಲುಪುವಾಗ 3.30 ಅಬ್ಬಬ್ಬಾ ಅದೇನು ರಶ್. ನನಗಂತೂ ಒಳಗಡೆ ಹೋಗಕ್ಕೆ ಇಷ್ಟ ಇರಲಿಲ್ಲ. ನನಗೆ ಹೆದರಿಕೆ. ಮತ್ತು ಯಾರದಾದರು ಮೈಕೈ ತಾಗಿದರೆ ನನಗದು ಆಗೋದೆ ಇಲ್ಲ. 'ಬೇಡ ಶ್ರೀಕಾಂತ, ವಾಪಸ್ ಹೋಗುವ 'ಅಂದ್ರೆ ನನ್ನ ಕೈ ಗಟ್ಟಿ ಹಿಡಿದುಕೋ ಅಂದ್ರು. ಕೈ ಯೆನೋ ಹಿಡಿದೆ. ಆದರೆ ಅವರಿಗೆ ಫೋಟೊ ತೆಗಿಲಿಕ್ಕೆ ಕಷ್ಟ ಆಗ್ತಿತ್ತು. ಅದಕ್ಕ ನಾನು ಅವರ T-ಶರ್ಟ್ ಗಟ್ಟಿಯಾಗಿ ಹಿಡಿದುಕೊಂಡು ಅವರ ಫೇವರಿಟ್ t-ಶರ್ಟ್ ಈಗ ಒಂದು ಕಡೆ ಉದ್ದ ಸೊಟ್ಟಗಾಗಿ ಆ portion ಹಿಂಜಿದೆ:-) ಉತ್ತರಕನ್ನಡ ಜಿಲ್ಲೆಯಿಂದ ಒಂದು ದೊಡ್ಡ ಗುಂಪು ಬಂದಿತ್ತು ಅವರೆಲ್ಲ ಕೈ ಕೈ ಹಿಡಿದು ಚೈನ್ ಮಾಡಿಕೊಂಡು ಸಂತೆಯೊಳಗೆಲ್ಲ ಹೋಗಿದ್ದು ಮಜವಾಗಿತ್ತು.
ಈ ಸಲ ಚಿತ್ರಕ್ಕಿಂತ ಇತರೇ ಸಂಗತಿಗಳನ್ನು ಕ್ಯಾಮರಾದಲ್ಲಿ ಹಿಡಿದುಕೊಂಡಿದ್ದೇನೆ. ನೋಡಿ ಎಂಜಾಯ್ ಮಾಡಿ'






ಶಿವಾನಂದಾ ಸರ್ಕಲ್ ನಿಂದ ಒಳಗಡೆ ಹೋಗ್ತಾ

ಕಲರ್ ಲೆಸ್ cotton candy. ನಿಹಾ ಮಾಲು ಇದ್ರೆ ಕೊಂಡು ತಿನ್ನಬಹುದಿತ್ತು

ಮಾವಿನಕಾಯಿ, ಸೌತೆಕಾಯಿ take your pick

ಹೆಚ್ಚಿನ ಜನರನ್ನು ಆಕರ್ಷಿಸಿದ ಚಿತ್ರ

ನನ್ನ ಫೇವರಿಟ್

ಚಿತ್ರಕಲಾ ಪರಿಷತ್ ನ entrance

ಮುಖವಾಡ up-close

Ssssssssss Burning Artists


ಮುರಳಿ

ಬಿಸಿಬೇಳೆ ಬಾತ್, ಖಾರಾ ಬಾತ್, ಅಕ್ಕಿ ರೊಟ್ಟಿ, ಪಲಾವ್, ಜಾಮೂನು, ಹೋಳಿಗೆ, ಮಿರ್ಚಿ ಬೋಂಡ ಯಾವುದು ಬೇಕು?
ಹಾ ಮಿರ್ಚಿ ಬೋಂಡ ಕೊಡಿಸಿ ,ನಾ ಬೇಡ ಬೇಡ ಅಂದ್ರೂ ಫೋಟೊ ಕೂಡ ಹೊಡೆದರು ನಮ್ಮ ರಾಯರು
ಇನ್ನೂ ಕೆಲವು ಚಿತ್ರಗಳು ಎಲ್ಲಿಹೋದವು ಗೊತ್ತಾಗ್ತಾ ಇಲ್ಲ..:-)ಅವರ ಫ್ರೆಂಡ್ ಮಗಳಿಗೆ ಕೊಟ್ಟ ಸ್ಟಾಲ್ ಸಂಖ್ಯೆಯಲ್ಲಿ ಬೇರೆ ಯಾರೋ ಇದ್ದರು. ಆದ್ದರಿಂದ ಅವರ ಚಿತ್ರಗಳನ್ನು ವೀಕ್ಷಿಸಲು ಆಗಲೇ ಇಲ್ಲ. ಚಿತ್ರ ಸಂತೆಯಲ್ಲಿ ನನಗೆ ಇನ್ನೋರ್ವ ಅಂತ:ಪುರದ ಸ್ನೇಹಿತೆ ಸಂಧ್ಯಾರಾಣಿ ಸಿಕ್ಕಿದರು.
 so ಇಷ್ಟೆ. ನೀವೆಲ್ಲ ಇದನ್ನು ನೋಡ್ತಾ ಇರಿ ನಾನು ಅಕ್ಕ ಒಂದು ರೌಂಡ್ ಊರಿಗೆ ಹೋಗಿ ಬರ್ತೇವೆ...
:-)

February 12, 2013

ಮಜ್ಜಿಗೆ ಕಡಿ & ವಡಿ

ಹಿಂದಿನ ವಾರ ಮನೆಯಲ್ಲಿ ಕೋಲ್ಡ್, ಗಂಟಲು ನೋವು ಕೆಮ್ಮು ಅಂತ ನನ್ನ ಬಳಿ ಮಜ್ಜಿಗೆ stock ಸುಮಾರು ಉಳ್ಕೊಂಡಿತ್ತು ಫ್ರಿಜ್ ನಲ್ಲಿ. ಹೀಗೆ ಸುಮಾರು ದಿನ ಮಜ್ಜಿಗೆ ಸ್ಟಾಕ್ ಆದಾಗೆಲ್ಲ ಈ ಕಡಿ ಮಾಡುತ್ತೇನೆ. ನನ್ನ ಫೇವರಿಟ್ ಹಾಗೂ ಒಂದು ತುತ್ತು ಹೆಚ್ಚೇ ಊಟ ಒಳಸೇರುತ್ತೆ.
ಮಜ್ಜಿಗೆ (ಹುಳಿಯಾದಷ್ಟು ಹೆಚ್ಚು ರುಚಿ) 4ಗ್ಲಾಸ್, ಅರ್ಧ ಟೀ ಸ್ಪೂನ್ ಕಡಲೆ ಹಿಟ್ಟು ಹಾಕಿ ಗಂಟಾಗದಂತೆ ಮಿಶ್ರ ಮಾಡಿದಿ
ಎಣ್ಣೆಯಲ್ಲಿ ಜೀರಿಗೆ, ಸಾಸಿವೆ, ಕರಿಬೇವು, ಎರಡು ಬೆಳ್ಳುಳ್ಳಿ ಎಸಳು, ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ, ಒಂದು ಒಣಮೆಣಸಿನಕಾಯಿ, ಸ್ವಲ್ಪ ಅರಿಶಿನ ಪುಡಿ (ಲಭ್ಯವಿದ್ದಲ್ಲಿ ಎರಡು- ಮೂರು ಮೆಂತೆ ಎಲೆ ಅಥವ ಕಾಲು ಟಿಸ್ಪೂನ್ ಕಸೂರಿ ಮೇಥಿ) ಹಾಕಿ ಒಗ್ಗರಣೆ ತಯಾರು ಮಾಡಿಕೊಳ್ಳಿ. ಇದಕ್ಕೆ ಮಜ್ಜಿಗೆಯನ್ನು ಬೆರೆಸಿ. ಒಂದು ಕುದಿ ಬರೆಸಿ ಕೆಳಗಿಡಿ. ಕೊತ್ತಂಬರಿ ಸೊಪ್ಪು ಉದುರಿಸಿ
ವಡಿ:
usually ನಾನು ದೊಣ್ಣ ಮೆಣಸಿನಕಾಯಿ ಚಿಕ್ಕದಾಗಿ ಕತ್ತರಿಸಿ ಅದರ ಬೋಂಡಾ ಮಾಡಿ, ಕಡಿ ಬಡಿಸುವ ಮುನ್ನ ಅದನ್ನು ಕಡಿಯಲ್ಲಿ ಬೆರೆಸುವುದು.
ಈ ಸಲ ಸ್ವಲ್ಪ ಬೇರೆ ತರಹ ವಡಿ ಮಾಡಿದೆ

ಬೆಂಡೆಕಾಯಿ, ಹಸಿಮೆಣಸಿನಕಾಯಿ, ನೀರುಳ್ಳಿ, ದೊಣ್ಣಮೆಣಸು ಇವೆಲ್ಲವನ್ನು ಚಿಕ್ಕ ಚಿಕ್ಕದಾಗಿ ಕತ್ತರಿಸಿ ಉಪ್ಪು ಹಚ್ಚಿಟ್ಟೆ. ಸ್ವಲ್ಪ ಸಮಯಕ್ಎ ನೀರು ಬಿಟ್ಟಿತು. ಈ ನೀರಿಗೆ ಬೇಕಾದಷ್ಟೆ ಬೇಸನ/ಕಡಲೆಹಿಟ್ಟು ಬೆರೆಸಿ ಎಣ್ಣೆಯಲ್ಲಿ ಚಿಕ್ಕ ಚಿಕ್ಕ ಬೋಂಡ ಕರೆದಿಟ್ಟೆ. ಬೆಂಡೆಕಾಯಿಯಿಂದ ಬೋಂಡ ಕ್ರಿಸ್ಪ್ ಆಯ್ತು ಮತ್ತು ನೀರುಳ್ಳಿಯಿಂದ ಒಳ್ಳೆ ಪರಿಮಳ. ನಮ್ಮ ಮನೆಯಲ್ಲಿ ಎಲ್ಲರಿಗೂ ಇಷ್ಟ ಆಯ್ತು. ಇನ್ನು ನೀವು ಟ್ರೈ ಮಾಡಿ ನನಗೆ ಹೇಳಿ
ನಾನಂತು ಆಗಾಗ ಇದನ್ನು ಮಾಡ್ತಿರ್ತೀನಿ.
:-)

February 5, 2013

ಆ ಕಾಡುವ ಕಣ್ಣುಗಳು

BTM ಲೇಔಟ್ ಕಡೆ ಹೊರಟಿದ್ವಿ. ಬಸ್ ಸ್ಟಾಪ್ ನಲ್ಲಿ ಖಾಲಿಯಿದ್ದ ಬಸ್ ಸಿಕ್ತು. ಅಮ್ಮ ಮಗು ಕೂತಿದ್ದ ಸೀಟ್ ಪಕ್ಕದ ಸೀಟ್ ನಲ್ಲಿ ನಾನು ಕೂತೆ. ಗುಂಗರು ಕೂದಲಿನ ಮಗುವಿನ ಹಿಂಭಾಗ ಮಾತ್ರ ಕಾಣ್ತಾ ಇತ್ತು. ಬಸ್ಸ್ ಹೊರಟ ಸ್ವಲ್ಪ ಸಮಯಕ್ಕೆ ಮಗು ಅಮ್ಮನನ್ನು ತಟ್ಟಿತು. ಅಮ್ಮ ಸಿಪ್ಪಿ ಕಪ್ ನಿಂದ ಅದಕ್ಕೆ ನೀರು ಕುಡಿಸಿದಳು. ನಾನು ಕಿಟಕಿಯ ಹೊರಗಿನ ನೋಟದಲ್ಲಿ ಲೀನಳಾದೆ. ಯಾವಾಗ ಆ ಮಗು ತನ್ನ ಅಮ್ಮನ ಕಾಲಮೇಲಿಂದ ನಬ್ಬಿಬ್ಬರ ಮಧ್ಯ ಕೂತುಕೊಂಡಿತು ನನಗೆ ತಿಳಿಯಲಿಲ್ಲ.ಅಮ್ಮನ ಬಳಿ ಕಣ್ಣು ಹಾಯಿಸಿದ್ರೆ ಆಕೆ ಅನ್ಯಮನಸ್ಕಳಾಗಿ ತಲೆಯನ್ನು ಕಿಟಕಿಗೆ ಆನಿಸಿಕೊಂಡು ಸುಮ್ಮನೆ ಕೂತಿದ್ದಳು. ತಲೆನೋವೋ, motion sickness ಏನೂ ಅಂದುಕೊಂಡೆ. ನನ್ನ ಸೈಜ್ ಸ್ವಲ್ಪ ದೊಡ್ಡದೆ. ಆದ್ದರಿಂದ ಮಗು ಬೀಳದ ಹಾಗೆ ಬೆಚ್ಚಗೆ ನಮ್ಮಿಬ್ಬರ ಮಧ್ಯ ಕೂತಿತು. ನಾನೂ ನನ್ನದೇ ಆದ ಆಲೊಚನೆಗಳಲ್ಲಿ ಹುದುಗಿ ಹೋಗಿದ್ದೆ. ಮಗು ಮಿಸುಕಾಡಿ ತನ್ನ ಇರುವನ್ನು ಸಾರಿತು. ಪುನ: ಅಮ್ಮನನ್ನು ತಟ್ಟಲು, ಆಕೆ ಮಗುವನ್ನು ಕಾಲ ಮೇಲೆ ಕೂರಿಸಿಕೊಂಡು, ಕಾಲಬಳಿಯಿದ್ದ ಬ್ಯಾಗ್ ನಿಂದ ಡಬ್ಬಿ ತೆಗೆದು, ಸ್ಪೂನ್ ನಿಂದ ಊಟ ಮಾಡಿಸಲು ಶುರು ಮಾಡಿದಳು. ಆದರೆ ಆಕೆಯ ಮನಸ್ಸು ಅದರಲ್ಲಿರಲಿಲ್ಲ ಅಂತ ತಿಳಿಯಿತು. ಸ್ಪೂನ ಬಾಯಿಗೆ ಹೋಗುವುದಕ್ಕಿಂತ ಜಾಸ್ತಿ ಗಲ್ಲ ಗದ್ದದ ಕಡೆ ಹೋಗಿ ಮುಖ ಎಲ್ಲ ಎಂಜಲುಮಯ. ಎದುರುಬದುರು ಸೀಟ ಇತ್ತು ಆ ಬಸ್ ನಲ್ಲಿ. ಎದುರಿಗೆ ಕೂತ ಹುಡುಗಿ, ಆ ಅಮ್ಮನಿಂದ ಡಬ್ಬಿಯನ್ನು ಕಿತ್ತುಕೊಂಡು, 'ಚಿಕ್ಕಿ ಊಟ ಮಾಡಿಸ್ತಾಳೆ' ಅಂತ  ಮಗುವಿಗೆ ತನ್ನ ಬಳಿ ಕರೆದು, ಕಾಲ ಮೇಲೆ ಕೂರಿಸಿ, ಮುದ್ದುಗರೆಯುತ್ತ ಊಟ ಮಾಡಿಸಿದಳು. ಚಿಕ್ಕಿಗೆ ಚಂದದ ಮುಗುಳ್ನಗು ಇತ್ತು. ನಮ್ಮ ಕಣ್ಣುಗಳು ಸಂಧಿಸಿದಾಗಲೆಲ್ಲ ಅವಳು ಸಣ್ಣಗೆ ನಗುತ್ತಿದ್ದಳು. ಊಟ ಮಾಡಿ, ನೀರು ಕುಡಿದು ಆ ಮಗು ಪುನ: ನಮ್ಮ ಸೀಟಿನ ಮಧ್ಯದ ಜಾಗದಲ್ಲಿ ಕೂತುಕೊಂಡಿತು. ಈ ಸಲ ನಿಧಾನಕ್ಕೆ ಅದರ ಪುಟ್ಟ ಕೈ ನನ್ನ ಎಡಗೈನ್ ಚಿಕ್ಕ ಬೆರಳನ್ನು ಹಿಡಿದುಕೊಂಡು ಬಿಟ್ಟಿತು. ನಾನೂ ಆ ಬೆಚ್ಚಗಿನ ಹಿಡಿತವನ್ನು, ನಮ್ಮಿಬ್ಬರ ನಾಡಿ ಮಿಡಿತ ಒಂದಾಗಿ ಹಿತವಾಗಿ ಬಡಿಯುತ್ತಿತ್ತು, ಅದನ್ನು ಅನುಭವಿಸುತ್ತಲೇ ಕಿಟಕಿ ಹೊರಗಡೆ ನೋಡ್ತಾ ಇದ್ದೆ. ಬಸ್ ಡ್ರೈವರ್ ಅಚಾನಕ್ಕಾಗಿ ಬ್ರೇಕ್ ಹಾಕಿದ ರಭಸಕ್ಕೆ ನಾನು ಮಗು ಜಾರಿದೆವು. ಸಾವರಿಸಿ ಕೂತು ಕೊಂಡೆವು. ಬ್ರೇಕ್ ಹೊಡೆದಾಗ ನಬ್ಬಿಬ್ಬರ ಕೈ ಬಿಡುಗಡೆಯಾಗಿ ಆ ಬೆಚ್ಚಗಿನ ಫೀಲ್ ಹೋದ್ದರಿಂದ ಏನೋ ಇರುಸುಮುರುಸು ಅನ್ನುವಷ್ಟರಲ್ಲಿ ಪುನ: ಆ ಪುಟ್ಟ ಕೈಗಳು ನನ್ನ ಚಿಕ್ಕ ಬೆರಳನ್ನು ಅರಸಿ ಬಂದು ಹಿಡಿದುಕೊಂಡಿತು.
ರಿಫ್ಲೆಕ್ಸ್ ನಿಂದ ನಾನೂ ಆ ಮಗು ಮೊದಲ ಬಾರಿಗೆ ಒಬ್ಬರನ್ನೊಬ್ಬರು ನೋಡಿಕೊಂಡಿದ್ದು. ನನಗೆ ತಕ್ಷಣಕ್ಕೆ ಕಂಡಿದ್ದು ಅದರ ಮುದ್ದು ಮುಖದಲ್ಲಿ ಚಂದದ ಬಣ್ಣದ ಕಂಗಳು. ಯಾವುದೇ ಭಾರತೀಯ ಮಕ್ಕಳಲ್ಲಿ ನಾ ಆ ತರಹದ ಕಣ್ಣನ್ನು ನೋಡಿಲ್ಲ.

ನೀಲಿ ಬೂದು ಮಿಶ್ರ ಅದ್ಭುತ ದೊಡ್ಡ ದೊಡ್ಡ ಕಣ್ಣುಗಳು. ನಾವಿಬ್ಬರೂ ಒಬ್ಬರನ್ನೊಬ್ಬರು ಬರೋಬ್ಬರಿ 5 ನಿಮಿಷಕ್ಕಿಂತ ಹೆಚ್ಚೆ ನೋಡುತ್ತ ಇದ್ದೆವು. ಆದರೆ ಆ ಚಂದದ ಮುಖದಲ್ಲಿ ಒಂದು ಚೂರು ನಗು ಇರಲಿಲ್ಲ. ಎಷ್ಟು ಗಂಭೀರ ಮುಖ ಮುದ್ರೆ ಅಂದ್ರೆ ನನಗೂ ಅದನ್ನು ಮಂಗಚೇಷ್ಟೆ ಮಾಡಿ ನಗಿಸ ಬೇಕು ಅನ್ನಿಸಲಿಲ್ಲ. ಸುಮಾರು ಒಂದು ಮುಕ್ಕಾಲು ಗಂಟೆಯ ಪಯಣದಲ್ಲಿ ನನ್ನ ಬೆರಳನ್ನು ಅದರ ಮುಷ್ಠಿಯಲ್ಲೇ ಹಿಡಿದು ಕೊಂಡಿತ್ತು. ನಮ್ಮ ಎದುರಿನ ಸೀಟಿನಲ್ಲಿ ಹಲವಾರು ಪ್ಯಾಸೆಂಜರ್ಸ್ ಬದಲಾದರು. ಅವರೆಲ್ಲ ಮಗುವನ್ನು ನಗಿಸುವ ಪ್ರಯತ್ನದಲ್ಲಿ ಸೋತರು. ಚಿಕ್ಕಿ ಗೆ ಯಾರದ್ದೋ ಫೋನ್ ಬಂದಾಗ, ಆಲಿಸದಿದ್ದರು ಕಿವಿಗಳಿಗೆ ಬೀಳುವ ಸಂಭಾಷಣೆಯಲ್ಲಿ ಕೇಳ ಸಿಕ್ಕಿದ್ದು ಇವಿಷ್ಟು, 'ತಲೆಗೆ ಪೆಟ್ಟು, ಸಿರಿಯಸ್, ಮತ್ತು NIMHANS. ಪುನ: ಆ ಮಗುವಿನ ಅಮ್ಮನ ಕಡೆ ನೋಡಿದ. ಯಥಾಪ್ರಕಾರ ಯಾವುದೇ ಪ್ರತಿಕ್ರಿಯೆ ಇಲ್ಲದೆ ಕಿಟಕಿಗೆ ತಲೆಯಾನಿಸಿ ಕೂತ ಭಂಗಿ. ಯಾವುದಕ್ಕೂ ಅವರಿಗೆ ಒಳ್ಳೆಯದಾಗಲಿ ಎಂದು ಮನಸ್ಸು ಹಾರೈಸಿತು.
ನಾವು ಇಳಿಯುವ ಸ್ಟಾಪ್ ಮೊದಲಿಗೆ ಬಂತು. ನಿಧಾನಕ್ಕೆ ನನ್ನ ಬೆರಳನ್ನು ಬಿಡಿಸಿ' ನಾ ಇಳಿತೆನೆ ಪುಟ್ಟ ಅಂತ ಹೇಳಿ, ಚಿಕ್ಕಿ ಗೆ ಒಂದು ಸ್ಮೈಲ್ ಕೊಟ್ಟು ನಾನು ಶ್ರೀಕಾಂತ ಇಳಿದೆವು.
ಇಳಿದ ಮೇಲೆ ಶ್ರೀಕಾಂತ ಹೇಳಿದ್ದು, ನೀವು ಒಬ್ಬರಿಗೊಬ್ಬರು ನೋಡ್ತಾ ಇದ್ದಿದ್ದು ಎಷ್ಟು ಚೆನ್ನಾಗಿತ್ತು ಆ moment ಗೊತ್ತಾ?? ಸೆಲ್ ಫೋನ್ ನಿಂದ ಫೋಟೊ ತೆಗೆಯುವ ಅನ್ನ್ಸಿಸಿತ್ತು ಅಂದರು. ಶ್ರೀಕಾಂತ್ ನನಗಭಿಮುಖವಾಗಿ ಇನ್ನೊಂದು ಬದಿಯ adjacent ಸೀಟ್ ನಲ್ಲಿ ಕೂತಿದ್ದರು.
ಈಗಲೂ ಯಾವುಯಾವುದೋ ಸಮಯದಲ್ಲಿ ಆ ಸುಂದರ ಕಣ್ಣುಗಳು ನನ್ನನ್ನು ಕಾಡುತ್ತವೆ. ನಾನು ಮುಗುಳ್ನಕ್ಕು ಆ ಮಗುವನ್ನು  ನಾ ಇದ್ದಲ್ಲಿಂದಲೇ 'ಎಲ್ಲ ಒಳ್ಳೆಯದೇ ಆಗಿರಲಿ' ಅಂತ ಹರೈಸುತ್ತೇನೆ. ನನ್ನ ಚಿಕ್ಕ ಬೆರಳನ್ನು ಗಲ್ಲಕ್ಕೆ ನೇವರಿಸುತ್ತೇನೆ.
this is my 222 nth post..(showing off)


:-)

January 30, 2013

ದೇವರ ಹುಚ್ಚು

ದೇವರ ಹುಚ್ಚು ಕಾದಂಬರಿ ಓದಿದ ಮೇಲೆ ಹಳೆಯ ಪೋಸ್ಟ್ ಗೆ ಇನ್ನಷ್ಟು ಮಸಾಲೆ ಸೇರಿಸಿ:
niha's art 

ನಮ್ಮ ಮನೆ ಎರಡು ಮನೆಗಳ ಮಧ್ಯ sandwich ನಂತಿದೆ.ಇವತ್ತು ಪಕ್ಕದ ಮನೆಯಲ್ಲಿ ಪೂಜೆ ಇತ್ತು. ಹೋಮ ಹವನದ ಹೊಗೆ, especially ಅಗ್ನಿಗೆ ತುಪ್ಪದ ಹವಿಸ್ಸು ಬಿದ್ದ ಪರಿಮಳ ಭರಿತ ಹೊಗೆ, ಪೂರ್ತಿ ನಮ್ಮನೆಯೊಳಗೆ. ಒಂದು ತರಹದ nice nice feeling!!ಅದನ್ನು ಅಘ್ರಾಣಿಸುತ್ತ ಸುಮಾರು ಹೊತ್ತು ಸಮಯ ಕಳೆದೆ. ಅಮ್ಮನ ಫೋನ್ ಬಂದಾಗ ಅಮ್ಮನಿಗೂ ಹೇಳಿದೆ. ಮತ್ತು ಇವತ್ತು ಗ್ಯಾರಂಟಿ ಸೊಳ್ಳೆ ಇರಲ್ಲ ಅಂತಲೂ ಸೇರಿಸಿದೆ.ಅದಕ್ಕೆ ಅಮ್ಮ’ ಇರಲಿ, ನಿನಗೆ ದೇವರು, ಪೂಜೆ ಅಂತಹುದಲ್ಲೆಲ್ಲ ನಂಬಿಕೆ ಇಲ್ಲದಿದ್ದರೂ ನೋಡು, ದೇವರು ಮಾತ್ರ ನಿನ್ನನ್ನ ಬಿಡಲ್ಲ. ದೇವರ ಮನೆ, ದೀಪಗಳನ್ನು ಕ್ಲೀನ್ ಮಾಡುವುದು ಇಂತಹುದೆಲ್ಲ ಮಾಡುತ್ತೇನೆ. ದೇವರ ದೀಪ ಹಚ್ಚುವ, ಪೂಜೆ ಮಾಡುವ ಕೆಲಸ ಮಾತ್ರ ಶ್ರೀಕಾಂತ್ ದ್ದು.

ಆಶ್ಚರ್ಯ ಅಂದರೆ ನನ್ನ ತಂದೆ ತಾಯಿ ಮನೆಯಲ್ಲಿ, ಅಥವಾ ನಾನು ಬೆಳೆದ ಅಜ್ಜನ ಮನೆಯಲ್ಲಿ ದೇವರಲ್ಲಿ ಭಕ್ತಿ ತುಂಬ. ಆದರೂ ನಾನ್ಯಾಕೆ ಹಾಗಾದೆ ಎಂಬುದೇ ಅವರಿಗೆಲ್ಲ ಅಚ್ಚರಿ. ಮದುವೆಯಾದ ಮೇಲೆ ನೋಡಿದ್ರೆ ಶ್ರೀಕಾಂತ್ ಮನೆಯಲ್ಲಂತೂ ದೈವ ಭಕ್ತಿ ಒಂದಳತೆ ಸ್ವಲ್ಪ ಹೆಚ್ಚೆ ಅನ್ನಬಹುದು.

ನಾವು ಬೆಂಗಳೂರಿಗೆ 2001 ನಲ್ಲಿ ಬಂದಾಗ ನಮ್ಮ ಮೊದಲ ಬಾಡಿಗೆ ಮನೆ (ಇದು ಮೂರನೆದು ಮತ್ತು hopefully last )ಇದ್ದದ್ದು ಮಹಾಲಕ್ಷ್ಮಿ ಲೇ ಔಟ್ ನಲ್ಲಿ. ಸ್ವಲ್ಪ ಎತ್ತರದ ಪ್ರದೇಶದಲ್ಲಿತ್ತು. ಎರಡನೇ ಮಹಡಿ. ಮನೆಗಿಂತ ಮನೆಯ ಎದುರಿಗಿದ್ದ ಬಿಸಿಲು ಮಚ್ಚು(terrace) ದೊಡ್ದದಾಗಿತ್ತು. ನನಗಂತು ಮಹಾ ಅನುಕೂಲ. ಯಾಕಂದ್ರೆ ನನ್ನ ಹತ್ತು ಹಲವು ಹೂವಿನ ಕುಂಡಗಳನ್ನಿಡಲು ಜಾಗ ಮಾತ್ರವಲ್ಲದೇ ಇನ್ನಷ್ಟು ಹೊಸ ಹೂ ಗಿಡ ಗಳನ್ನು ನಾನು ತಂದು ಸೇರಿಸಿದೆ.

ನನ್ನ ಝೂಲಾ ಗೂ ಒಳ್ಳೆ ಜಾಗ ಸಿಗ್ತು. ಬೆಳಿಗ್ಗೆ ನಾಲ್ಕು ಗಂಟೆ ನನ್ನ ಮೊದಲ ಚಹಾ ಸೇವನೆಗೆ ಪ್ರಶಸ್ತವಾಗಿತ್ತು. ನಾನು ಕೂತಲ್ಲಿಂದ ISKCON ದೇವಳದ ಗೋಪುರದ ತನಕ clear view ಸಿಗುತ್ತಿತ್ತು. ಮಳೆ ಚಳಿಗಾಲದಲ್ಲೆಲ್ಲ ಸಖತ್ enjoyment. ದೂರದ ಗಿಡಮರದೆಡೆಯಲ್ಲಿ ಕಣ್ಣು ಮುಚ್ಚಾಲೆಯಾಡುವ ಬೀದಿ ದೀಪಗಳು, ಮಳೆ ನೀರಿನ ತರಹಾವರಿ direction ಗಳು, ಡಿಸೆಂಬರ್ ನಿಂದ ಮಾರ್ಚ್ ವರೆಗಿನ ಕುಳಿರ್ಗಾಳಿ ಮತ್ತು ಮಂಜು. ನಿಧಾನವಾಗಿ ಬೆಳಗು ಮೂಡುವುದನ್ನು ನೋಡುವುದು ಅತ್ಯಂತ ಸಂತಸದ ಸಂಗತಿ. ಮುಂಬೈನಲ್ಲಿದ್ದಾಗ ನಮ್ಮ ಐದನೆ ಮಹಡಿ ಕಿಟಕಿಯಿಂದ ನನಗೆ ಸಮುದ್ರ ಕಾಣುತಿತ್ತು. ಸಂಜೆ ನಾನು ಮತ್ತು ನನ್ನ ಫ್ರೆಂಡ್ ನಿಲಿಮಾ terrace ಮೇಲಿಂದ ಸೂರ್ಯಾಸ್ತವನ್ನು ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಈಗ ಅವಳೂ  ಬೆಂಗಳೂರಿನಲ್ಲಿದ್ದಾಳೆ.

ಬೆಂಗಳೂರಿಗೆ ಬಂದಾಗಲೆಲ ಅಮ್ಮನಿಗಂತೂ ತುಂಬ ಖುಶಿ..ಒಂದೊಂದು ದಿನ ಒಂದೊಂದು ದೇವಸ್ಥಾನ. ಮನೆಯ ಎದುರುಗಡೆ ರಾಘವೇಂದ್ರ ಸ್ವಾಮಿ ದೇವಸ್ಥಾನ, ಮನೆಯ ಹಿಂಭಾಗದಲ್ಲಿ ಸುಬ್ರಮಣ್ಯ ಸ್ವಾಮಿ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನ. (ಬಾತ್ ರೂಮ್ ನಿಂದ ಕಾಣುತಿತ್ತು). :-) ನಾವಿರುವ ಬೀದಿಯ entrance ನಲ್ಲಿ ,ಪಂಚಮುಖಿ ಗಣಪ, ವಾಸವಿ,ಬಸ್ ಸ್ಟಾಪ್ ಹತ್ತಿರ ಬಾಲಾಜಿ(ವೆಂಕಟರಮಣ),ಮಂಗಳಕುರುಮಾರಿಯಮ್ಮ ...ಇನ್ನು ಸ್ವಲ್ಪ ಮುಂದಕ್ಕೆ ಹೋದರೆ famous ಮಹಾಲಕ್ಷ್ಮಿ ಮತ್ತು ದೊಡ್ಡ ಹನುಮ....ಅಲ್ಲಿಂದ ಹತ್ತು ಹೆಜ್ಜೆ ನಡೆದರೆ ISKCON. ನಮ್ಮ ಮನೆಗೆ ಬಂದಾಗ, ಅಮ್ಮ ಯಾರೋಂದಿಗೋ ಫೋನ್ ನಲ್ಲಿ ಮಾತಾಡ್ತಾ ’ನಮ್ಮ ಮಾಲತಿಗೆ ದೇವರಲ್ಲಿ ನಂಬಿಕೆ ಇಲ್ಲದಿದ್ದರೆ ಏನಾಯ್ತು. ಅವಳ ಸುತ್ತ ಮುತ್ತ ಮಾತ್ರ ತುಂಬಾ ದೇವರುಗಳು ಇದ್ದಾರೆ’ ಅಂತ

ಇನ್ನೊಂದು ವಿಚಿತ್ರ ಸಂಗತಿಯೆಂದರೆ ನಮ್ಮ ಮನೆಯ ಔನರ್ ಹೆಂಡತಿ, ಪ್ರತಿ ವರ್ಷ ವರಮಹಾಲಕ್ಷ್ಮೀ ವೃತ ಹಾಗೂ ನವರಾತ್ರಿಯಲ್ಲಿನ ಶುಕ್ರವಾರದಂದು ನನಗೆ ಬೆಳಿಗ್ಗೆ 5 ಗಂಟೆಯ ಪೂಜೆಗೆ ಕರೆಯುತ್ತಿದ್ದರು. ನಾನು ಹೇಗೂ ಬೇಗ ಏಳುವುದು ಅವರಿಗೆ ಗೊತ್ತು. breakfast ಮಾಡದೇ ಬನ್ನಿ ಅಂತ ಒಂದು request ಇರುತ್ತಿತ್ತು. ಅವರು first time ಪೂಜೆಗೆ ಕರೆದಾಗಲೇ ನನಗೆ ದೇವರಲ್ಲಿ ನಂಬಿಕೆ ಇರದಿದ್ದು ಹೇಳಿದ್ದೆ. ಆದರೂ ಅವರು ಪೂಜೆಯ ದಿನ ನನ್ನ ಕಾಲು ತೊಳೆದು,ಕೆನ್ನೆಗೆ ಒಂದು 25 ಗ್ರಾ ಅರಿಶಿನ ಬಳಿದು. ಕುಂಕುಮ ಹಚ್ಚಿ, ಕೈಗೆ ಹಸಿರು ಕೆಂಪು ಗಾಜಿನ ಬಳೆ ತೊಡಿಸುತ್ತಿದ್ದರು. ಹಣ್ಣು ಹಂಪಲು ಕೊಟ್ಟು ಕಳಿಸುತ್ತಿದ್ದರು. ನನಗಂತೂ ಸಿಕ್ಕಾ ಪಟ್ಟೆ ಮುಜುಗರ. ನಾವಲ್ಲಿರುವ 5 ವರ್ಷವೂ ಈ ಪ್ರಸಂಗ ಹೀಗೆ ಮುಂದುವರೆಯಿತು.

ಮತ್ತೆ, ನಾವು ಈಗಿರುವ ಮನೆಗೆ ತುಂಬ ಹತ್ತಿರದಲ್ಲಿ ದೊಡ್ಡ ಶನಿ ದೇವಸ್ಥಾನ. ಈಗ ಇಲ್ಲಿ ಬಂದಾಗ ಅಮ್ಮ ಕುಣಿದಾಡುವುದೊಂದೇ ಬಾಕಿ..ಯಾಕೆಂದ್ರೆ ಮನೆಯ ಹಿಂಬಾಗಿಲು ತೆಗೆದ್ರೆ, ಎದುರಿಗಿರುವ ಗೋಡೆ ನೆ ಶ್ರೀ ರಾಮ ಮಂದಿರದ್ದು. ನಾನು ಬಟ್ಟೆ ಒಣಗಿಸಲಿಕ್ಕೆ ಹಾಕುವಾಗಲೆಲ್ಲ ನನ್ನ ಕೈ ಹಲವಾರು ಸಲ ಅಂತು ಗೋಡೆಗೆ ತಾಗುತ್ತೆ.

ಇತ್ತೀಚಿಗೆ ಅಮ್ಮ ನನ್ನ ಜಾತಕ ಯಾರಿಗೋ ತೋರಿಸಿದ್ದರು. ನನಗೀಗ ಏಳುವರೆ ಶನಿ ಕಾಟವಂತೆ. ಪ್ರತೀ ಶನಿವಾರ ಶನಿದೇವರಿಗೆ ಮೂರು ಪ್ರದಕ್ಷಿಣೆ ಹಾಕಬೇಕಂತೆ..........

ಜನವರಿ ೩೦, ೨೦೧೩...continued....
niha's art

ಅಮ್ಮ ಜಾತಕ ತೋರಿಸಿದ ಜ್ಯೋತಿಷ್ಯರು, ಪ್ರತೀ ಶನಿವಾರ ಎಳ್ಳೆಣ್ಣೆಯಲ್ಲಿ ನಾನು ನನ್ನ ಮುಖ ನೋಡಿ ಅದನ್ನು ಶನಿ ದೇವಸ್ಥಾನದ ದೀಪದಲ್ಲಿ ಸುರಿಯಲು ಹೇಳಿದ್ದರು. ನಾನಂತು ಹಾಗೆ ಮಾಡಲಿಲ್ಲ.

ಹೀಗೆ ಎರಡು ವರ್ಷಗಳ ಹಿಂದೆ ಶ್ರೀಕಾಂತ ಗೆ ಡೆಂಗೆ (Dengue) ಆಗಿ ಪರಿಸ್ಥಿತಿ ಸೀರಿಯಸ್ ಆಗಿತ್ತು. ನೀಹಾ ಗೂ ಜ್ವರ ತಲೆಗೆ ಏರಿ ಶ್ರೀಕಾಂತ ನ ವಾರ್ಡ್ ಲ್ಲೆ ಇನ್ನೊಂದು ಬೆಡ್ ನಲ್ಲಿ ಅವಳಿಗೂ ಎಡ್ ಮಿಟ್ ಮಾದಿಸಿದ್ದರು. ಆ ವಾರ ಪೂರ್ತಿ ಆಸ್ಪತ್ರೆ ಮನೆ ಆಸ್ಪ್ತತ್ರೆ ಅಂತ ಅಲೆದಾಡುವುದೇ ಆಗಿತ್ತು. ಎಲ್ಲ ಸರಿ ಹೋಗಿ ಅವರನ್ನು ಮನೆಗೆ ತಂದ ನಂತರ, ಸುಮಾರು ಒಂದು ತಿಂಗಳ ನಂತರ ಅಮ್ಮ ಫೋನ್ ನಲ್ಲಿ ಹೀಗೆ ಕೇಳಿದ್ದರು 'ಅಲ್ಲವೇ ಶ್ರೀಕಾಂತ ಗೆ ಸೀರಿಯಸ್ ಆದಗಲೂ ಕೂಡ ನಿನಗೆ ದೇವರ ನೆನಪು ಬರಲಿಲ್ಲವೇ ಅಂತ. ನನಗೆ ಆಶ್ಚರ್ಯ . ಅಮ್ಮ ನನಗೆ ಡಾಕ್ತರ್‍, ಔಷಧಿ, blood platelet, transfusion..ಇಷ್ಟರಲ್ಲೆ ತಲೆ ಓಡ್ತಾಯಿತ್ತು ದೇವರನ್ನ ಯಾಕೆ ನೆನೆಸಲಿ ಅಂದೆ? ಅಷ್ಟಲ್ಲದೆ ಒಂದು ದಿನ ಇಡೀ ನಾನು ಉಲ್ಟಾ ಚೂರಿದಾರ್ ಹಾಕಿಕೊಂಡು, ಶ್ರೀಕಾಂತ ರ ರಕ್ತದ ಗುಂಪಿಗೆ ಮ್ಯಾಚ್ ಆಗೋವರನ್ನು ಹುಡುಕುತ್ತ ಇಡೀ ಬೆಂಗಳೂರು ತಿರುಗಿ ಬಂದಿದ್ದೇನೆ. ಅದೂ ನನಗೆ ರಾತ್ರಿ ಬಟ್ಟೆ ಚೆಂಜ್ ಮಾಡುವಾಗ ಗೊತ್ತಾಗಿದ್ದು. ಯಾರನ್ನೂ ನೆನಸುವಷ್ಟು ಪುರುಸೊತ್ತಿರಲಿಲ್ಲ ಅಂತ ಹೇಳಿದ್ದೆ. ಅಮ್ಮ ನನಗೆ 'ವಿಚಿತ್ರ ಪ್ರಾಣಿ' ಅಂತ ಹೇಳಿ ಫೋನ್ ಕಟ್ ಮಾಡಿದ್ದರು.

ಹೀಗೆ ಗಿರೀಶ್ ರಾವ್ ಹತ್ವಾರ್ ಅವರು ಬರೆದ ಕಾದಂಬರಿ 'ದೇವರ ಹುಚ್ಚು' ಓದ್ತಾ ನನ್ನ ಹಳೆ ಪೋಸ್ಟ್ ಗಳಿಗೆ ಇನ್ನಷ್ಟು ಸರಕು ಸಿಕ್ಕಿದೆ.

ಉಡುಪಿಯಲ್ಲಿದ್ದಾಗ ನಡೆದದ್ದು. ನಾನು ಸೂಸಿ (Susie) ಕೃಷ್ಣ ಮಠಕ್ಕೆ ಹೋಗಿದ್ದೆವು. ಸೂಸಿ ಗೆ ಕೃಷ್ಣನೆಂದರೆ ಇಷ್ಟ. ನನಗೂ ನನ್ನ ಅಜ್ಜ ಚಿಕ್ಕಂದಿನಲ್ಲಿ ಬಾಲಕೃಷ್ಣನ ಕತೆಗಳನ್ನು ಹೇಳಿ ಅವನು ಒಂದುತರಹ ನನಗೆ playmate ಆಗಿದ್ದ. ನನ್ನದು ಅವನ ಜತೆ imaginary ಆಟ. ಪುಸ್ತಕ ಒದುವ ಹುಚ್ಚು ಬೆಳೆದ ಮೇಲೆ ಬಾಲಕೃಷ್ಣ ನನ್ನ ಜೀವನದಿಂದ ಕ್ರಮೇಣ ಕಣ್ಮರೆಯಾದ.
ಸೂಸಿಯನ್ನು ಕರೆದುಕೊಂಡೆ ಹೋದೆ. ರಶ್ ಇರಲಿಲ್ಲ. ಕೇವಲ ಬೆರಳಣಿಕೆಯಷ್ಟು ಜನ. ನಾನು ಸೂಸಿಯೊಂದಿಗೆ ಗರ್ಭಗುಡಿಯ ಸುತ್ತು ಹೊಡೆದು ಕಿಂಡಿಯಿಂದ ಕೃಷ್ಣನನ್ನು ತೋರಿಸಿ ಅಲ್ಲೆ ಗೋಡೆಗೆ ಬೆನ್ನಾನಿಸಿ ಕೂತಿದ್ದೆ. ಸೂಸಿ ದೇವರಿಗೆ ಮೂರು ಪ್ರದಕ್ಷಿಣೆ ಹಾಕಿ, ಧ್ಯಾನಕ್ಕೆ ಕೂತರು. ಆಗಲೇ ನಾನು ಆ ಅಮ್ಮ ಮಕ್ಕಳನ್ನು ನೋಡಿದ್ದು. ಇಬ್ಬರು ಹೆಣ್ಣು ಮಕ್ಕಳು. ದೊಡ್ಡವಳು ಕೂತ ಭಂಗಿಯಲ್ಲೆ ನಡೆದಾಡಲು ಬರುವುದಿಲ್ಲ ಎಂದು ಸೂಚಿಸುವಂತಿದ್ದಳು. ಎರಡನೆಯವಳು ತುಂಬ ಚಿಕ್ಕವಳು. ದೊಡ್ಡ ಹುಡುಗಿಯನ್ನು ನೋಡನೋಡುತ್ತಿದ್ದ ಹಾಗೆ ಅವಳ ಒಂದೊಂದೆ ಅಂಗಾಗ ಸೆಟೆದುಕೊಳ್ಳುವುದು ಆ ಹುಡುಗಿ ಸಣ್ಣಕ್ಕೆ ಚೀರಾಡಲು ಆರಂಭಿಸಿದಳು. ಆಗ ಆ ಅಮ್ಮ ಕೃಷ್ಣ ಭಜನೆ ಹಾಡಿದಳು, ಎರಡು ಕೈಯನ್ನು ಬೇಡುವ ಮಾದರಿಯಲ್ಲಿ ಹಿಡಿದು, ಮಧ್ಯ ಮಧ್ಯ ದೇವರಿಗೆ ತನ್ನ ಮಗಳ ಕಡೆ ಬಟ್ಟು ಮಾಡಿ ತೋರಿಸುವುದು ನಡೆಸಿದಳು. ಆ ಹಾಡಲ್ಲಿನ ದೈನ್ಯತೆ, ನೋವು, ಅಸಹಾಯಕತೆ, ಆರ್ದ್ರತೆ, ಆಸೆ ನನ್ನನ್ನು ಎಷ್ಟು ಕಾಡಿಸಿ ಸಿಟ್ಟಿಗೇಳಿಸಿತ್ತೆಂದರೆ, ನಾನೇನಾದರು ದೇವರಿದ್ದಲ್ಲಿ ಪ್ರತ್ಯಕ್ಷಳಾಗಿ ಅವಳ ನೋವನ್ನು ನಿವಾರಿಸುತ್ತಿದೆ ಅನ್ನುವಷ್ಟು. ನಾನು ಸೂಸಿ ಗೋಳಿಬಜೆ ತಿಂದು, ಐಸ್ ಕ್ರೀಮ್ ತಿಂದು ಮನೆಗೆ ಮರಳುವ ಯೋಜನೆ ಹಾಕಿಕೊಂಡಿದ್ವಿ. ಆ ಅಮ್ಮ ಮಕ್ಕಳ ದೃಷ್ಯ ನನ್ನನ್ನು ಎಷ್ಟು ಕದಡಿತೆಂದರೆ, ನಾನು,ಸೂಸಿ' am not feeling good all of a sudden, please let us go home' ಅಂದೆ. ಮನೆಗೆ ಬಂದರೂ ನನಗೆ ಕಣ್ಣ ಮುಂದೆ ಅದೇ ಸೀನ್. ಸೂಸಿ , ಅಲ್ಲಿದ್ದ ಕೆಲವು ಜನರು, ಪುರೋಹಿತರು ಎಲ್ಲರೂ ಇದ್ದು ಆ ಅಮ್ಮ ಮಕ್ಕಳನ್ನು ignore ಮಾಡಿದ್ದರು. ಸುಮಾರು ದಿನಗಳ ನಂತರ ಯಾಕೋ ನನಗೇ ಮಾತ್ರ ಅವರು ಕಾಣಿಸಿದ್ದರಾ ಅಂತ ಅನ್ನಿಸಿದಿದೆ. ಹಾಗೆ ಆ ರಾತ್ರಿ ನನಗೊಂದು ಕನಸು ಬಿದ್ದಿತ್ತು. ಯಾವುದೋ ದನಿ 'ನಿನಗೆ ಅವರ ಬಗ್ಗೆ ಕರುಣೆ ಉಕ್ಕಿತಲ್ಲ' ಅದೇ ಅವರಿಗೆ ಒಳಿತನ್ನು ಮಾಡಿದೆ ಅಂದಾಗ ಆಶ್ಚರ್ಯ ಜತೆ ನಿರಾಳತೆ ತುಂಬಿದ ಸಮಾಧಾನ.

ಹಾಗೆ ಒಂದು ದಿನ ದೇವರ ತಲೆಗೆ ವಜ್ರದ ಕಿರೀಟಕ್ಕೆಂದು ದೇವಸ್ಥಾನದ ಕಮಿಟಿಯವರು ದೇಣಿಗೆ ಕೇಳಲು ಬಂದಿದ್ದರು.  ಅಷ್ಟಲ್ಲದೆ ಕೆಲವು ದೇವರ ಪುಸ್ತಕಗಳನ್ನೂ ತಂದಿದ್ದರು ಸೇಲ್ ಗೆ. ನಾನು ಇಲ್ಲ ನಾ ದುಡ್ಡು ಕೊಡಲು ನಿರಾಕರಿಸಿದೆ. ಅದಕ್ಕೆ ಪುಸ್ತ್ಕಗಳನ್ನಾದರೂ ಖರೀದಿಸಿ ಅಂದರು. ನನಗೆ ಅಂತರಲ್ಲೆಲ್ಲ ನಂಬಿಕೆಯಿಲ್ಲ ನಾ ಓದೋದು ಇಲ್ಲ ಅಂದ. ಅದಕ್ಕೆ ಅವರು 'ಯಾಕೆ ನಿಮಗೆ ದೇವರಲ್ಲಿ ನಂಬಿಕೆಯಿಲ್ಲವೆ' ಅಂತ ಕೇಳಿದಾಗ 'ಇಲ್ಲ್' pls ಹ್ಗೊರಡಿ ಅನನಗೆ ಆಫಿಸ್ ಗೆ ಲೇಟ್ ಆಗುತ್ತೆ ಅಂದೆ. ಅವರು ಹೋದರು. 10 ನಿಮಿಷಗಳ ನಂತರ ಪುನ: ಬಾಗಿಲ ಸದ್ದಾಯಿತು. ನೋಡಿದರೆ ಆಗ ಬಂದ ಹೆಂಗಸು 10 -12 ಜನರನ್ನು ಅವಳೊಂದಿಗೆ ಕರೆತಂದಿದ್ದಳು. ಅವರಲ್ಲಿ ಒಬ್ಬ ಹಿರಿಯರು ನನ್ನ ಹೆಸರು, ಮನೆಯವರ ಹೆಸರು ಮುಂತಾದನ್ನು ಕೇಳಿದರು ನಾನು ಹೇಳಿದೆ. ಮತ್ತೆ ದೇವರಲ್ಲಿ ನಂಬಿಕೆಯಿಲ್ಲ ಅಂತಂದ್ರಂತೆ'? ನಾನು ಹೌದು ಅಂದೆ. ಪುನ: ದುಡ್ಡು ಕೊಡಲಿಕ್ಕೆ ಪೀಡಿಸಿದರು. ನನಗೂ ಕಿರಿಕಿರಿ ಅನ್ನಿಸಲಿಕ್ಕೆ ಶುರು ಆಯ್ತು. 'ಪ್ಲೀಸ್ ಇಲ್ಲಿಂದ ಹೊರಡಿ ನಾನು ಹೊರಗಡೆ ಹೋಗಬೇಕು ಅಂದ' ಅದಕ್ಕೆ ಅವರು 'ನಿನಗೆ ಒಳ್ಳೆಯದಾಗುವುದಿಲ್ಲ. ಬೇಗ ನೀನು ದೇವರನ್ನು ನಂಬುವಂತವಳಾಗುತ್ತಿಯಾ' ಅಂತೆಲ್ಲ ಅಂದರು. ಅದಕ್ಕೆ ನಾ ಅಂದೆ, 'ದೇವರೇನು ನಿಮ್ಮ ಬಳಿ ಖುದ್ದಾಗಿ ಹೇಳಿದನಾ' ನನಗೆ ವಜ್ರದ ಕಿರೀಟ ಮಾಡಿಸಿ ಕೊಡಿ ಅಂತ. ಅದೇ ದುಡ್ಡಿನಿಂದ ಇಂದಿನ ಯುವಕರಿಗೆ ಸ್ವ ಉದ್ಯೋಗ ಮುಂತಾದನ್ನು ಕಲ್ಪಿಸಿಕೊಡಬಹುದಲ್ಲ್ವಾ?ದೇವರು ನಿಮಗೆ ಥ್ಯಾಂಕ್ಸ್ ಹೇಳಲ್ಲ, ಈ ಯುವಕರಾದರೂ ಅವರ ಜೀವನಕ್ಕೆ ದಾರಿ ತೋರಿಸಿದ್ದಿರೆಂದು ನಿಮ್ಮೊಂದಿಗೆ ಧನ್ಯತಾಭಾವ ಹೊಂದಬಹುದು ಮತ್ತೆ ನಿಮ್ಮ ಧಮಕಿಗೆಲ್ಲ ನಾನು ಹೆದರುವವಳಲ್ಲ'. ನಮ್ಮ ಮನೆಯವರಿಗೆಲ್ಲ ನನ್ನ ಬಗ್ಗೆ ಗೊತ್ತು. ದಯವಿಟ್ಟು ನೀವು ಈಗ ಜಾಗ ಖಾಲಿ ಮಾಡಿ' ಅಂದೆ. ಆಮೇಲೇನೂ ಗೊಣಗ್ತಾ ಹೋದ್ರು.

ಅಮ್ಮ ಇನ್ನೊಬ್ಬ ಯಾರೋ ಹೆಸರಾಂತ್ ಜ್ಯೋತಿಷಿಗೆ 'ಇವಳಿಗೆ ಶನಿ ಕಾಟ. ಉಪಶಮನಕ್ಕೆಂದು ಹೇಳಿದ್ದ ಒಂದು ಉಪಾಯವನ್ನೂ ಮಾಡಲ್ಲ' ಅಂತ ಹೇಳಿದಾಗ ,'ತಾಯಿ ಅವಳ ಸುದ್ದಿಗೆ ಹೋಗಬೇಡಿ. ಅವಳ ಹೇಗಿದ್ದಾಳೋ, ಹಾಗೆ ಇರಲಿ' ಅಂತ ಸುಮ್ಮನಾಗಿಸಿದರಂತೆ..:-) ಇವನ್ನೆಲ್ಲ ನಾನು ತುಂಬ ಎಂಜಾಯ ಮಾಡ್ತೇನೆ ವಿನ: ನಾನೇನೂ 'ದೇವರು ಅಂತ ತಿಳಿದಿಕೊಂಡಿಲ್ಲ. ನನ್ನನ್ನು ನಂಬಿ 'ಪ್ಲೀಸ್ ಪ್ಲೀಸ್'

ರಸ್ತೆ ಮೇಲೆ ಹೋಗ್ತ ಜನರು ನನ್ನನ್ನು ನೋಡಿ ನಗುವುದು, ತಬ್ಬಿ ಕೊಳ್ಳುವುದು, ಸುಮ್ಮನೆ ಮಾತನಾಡಿಸುವುದು, ಕೆಲವು ಮಿತ್ರರಿಗೆ ನನ್ನ ಜತೆ ಮಾತನಾಡಿದರೆ ಅವರಿಗೆ ಒಳ್ಳೆಯದಾಗುತ್ತೆ ಅಂತ ಅನ್ನಿಸುವುದು, ನನ್ನ ತಮ್ಮ 'ನೀನು ನನ್ನ ಪ್ಯಾಕ್ಟರಿ' ಗೆ ಲಕ್ಕಿ' ಅಂತ ನಾನು ಅವರಲ್ಲಿ ಹೋದಾಗ ನನಗೆ ಫ್ಯಾಕ್ಟರಿ ಕರೆದುಕೊಂಡು ಹೋಗಿ ನನ್ನ ಕಾಲಿಗೆ ಎರಗುವುದು, (ಅವನಂತು ಒಂದು ಹೆಜ್ಜೆ ಮುಂದೆನೆ ಅಲೋಚಿಸುತ್ತಾನೆ. ನಾನು ಮಾಲತೀಆನಂದಮಯೀ ಆಶ್ರಮ ಪ್ರಾರಂಭಿಸಿ ಎಲ್ಲರನ್ನು ತಬ್ಬಿ ಮುತ್ತು ಕೊಡಬೇಕಂತೆ, ಅವನು ಮ್ಯಾನೇಜರ್ ಆಗಿ ದುಡ್ಡು ಮ್ನ್ಯಾನೇಜ್ ಮಾಡ್ತಾನಂತೆ') ಶ್ರೀಕಾಂತ ಪ್ರೋಜೆಕ್ಟ್ ಪ್ರೋಪೋಸಲ್ ಕಳಿಸುವ ಮುನ್ನ ನನ್ನ ಕೈ ನಿಂದ ಆ ಪೇಪರ್ ಅನ್ನು ಮುಟ್ಟಿಸುವುದು, ಮೈಲ್ ನಲ್ಲಿ ಕಳಿಸಬೇಕಾದ್ರೆ ಫೈನಲ್ 'ಎಂಟರ್' /ಸೆಂಡ್ ಬಟನ್ ನನ್ನಿಂದ ಮಾಡಿಸುವುದು, ಅಪಾರ ರಘು ನ ಯಾವ ಕವರ್ ಪೇಜ್ ಗೆ ಪ್ರಶಸ್ತಿ ಬರುತ್ತೆ (ಪ್ರೂಫ್ ಇದೆ ಇದಕ್ಕೆ ನಮ್ಮಿಬ್ಬರ ಬಳಿಯೂ) ಇತ್ಯಾದಿ ಇತ್ಯಾದಿ..ಎಲ್ಲ ನೋಡಿ ನಾ ನಿಹಾಗೆ ಹೇಳಿದ್ದೆ, ನಿಹಾ ನಾನು ಶಾಪಗ್ರಸ್ತ ದೇವತೆ' ಇರಬೇಕು ಕಣೆ ಅಂತ. ಅವಳು ಇರಲಿಕ್ಕಿಲ್ಲ ಅಮ್ಮ. 'ಬೆಳಿಗ್ಗೆ ಎದ್ದಾಗ ನಿನ್ನ ಬಾಯಿಗೆ ವಾಸನೆ ಹೊಡೆಯುತ್ತೆ' ಅಂತ ಹೇಳಿ 'ನಾನು-ದೇವರು' ಎಂಬ ಹುಚ್ಚನ್ನು ನನ್ನ ತಲೆಯಿಂದ ಜರ್ರ್ ನೆ ಇಳಿಸಿದಳು. ಹೌದಲ್ಲವೇ ನಾನು ತಿನ್ನುತ್ತಿನಿ, ಟಾಯಲೆಟ್ ಗೆ ಹೋಗ್ತೀನಿ..."ದೇವರು-ಮಲಮೂತ್ರ ಇಲ್ಲದವರು" ಅಂತೆಲ್ಲೋ ಓದಿದ್ದನ್ನು ನೆನಪಿಸುತ್ತಾಳೆ ಮಾಲವಿಕ...:-)

ಹೀಗೆಲ್ಲ ನಡೆಯುತ್ತೆ ಅಂತ ನಾನು 'ನನ್ನನ್ನು ದೇವರು ಅಂದುಕೊಂಡಿದ್ದೀನಾ? ಖಂಡಿತ ಇಲ್ಲ. ಕೆಲವರು ನನ್ನನ್ನು ತಮ್ಮ ಜೀವಕ್ಕಿಂತ ಹೆಚ್ಚಿಗೆ ಹಚ್ಚಿಕೊಂಡಿದ್ದವರಿದ್ದಾರೆ, ನಾನು ಅವರನ್ನು ಹಚ್ಚ್ ಕೊಂಡಿಲ್ಲ. ಅವರು ನನ್ನ ಜತೆ ಸಂಪರ್ಕದಲ್ಲಿರುವಷ್ಟು  ಸಮಯ ನಾನು ಅವರ ಜತೆ ಇರ್ತೀನಿ, ಅಮೇಲೆ ಮರೆತು ಬಿಡ್ತೀನಿ. ಈ ಕಾರಣಕ್ಕೆ ಜಗಳ ಮಾಡುವವರೂ ಇದ್ದಾರೆ.

ದೇವರನ್ನು ನಂಬುವವರು ನಿಜವಾಗಿ ಹೇಳಿ: ಸಂತೋಷದಿಂದ್ದಾಗ ದೇವರಿಗೆ 'ಧನ್ಯವಾದ' ದೇವರೆ ಅಂದಿದ್ದೀರಾ? ಇಡಿ ದಿನ ಖುಶಿಯಾಗಿದ್ದು ರಾತ್ರಿ ಮಲಗುವಾಗ 'ಇವತ್ತಿನ ದಿನ ಚೆನ್ನಾಗಿತ್ತು, ಇವತ್ತು ನಾನು ಮಾಡಿದ ಅಡಿಗೆ ರುಚಿಯಾಗಿತ್ತು ಎಲ್ಲರೂ ಅದನ್ನು ಎಂಜಾಯಿಸಿದರು, ನಾನು ಬರೆದ ಕತೆ ಚೆನ್ನಾಗಿದೆ ಅಂದ್ರು, ಇವತ್ತೂ ಯಾವುದೇ ಟೆನ್ಷನ್ ಇರಲಿಲ್ಲ, ಇವತ್ತು ಟಾಯ್ಲೆಟ್ ಸಲೀಸಾಗಿ ಆಯ್ತು ಇಂತಹ ಚಿಕ್ಕ ಪುಟ್ಟ ವಿಷಯಗಳು- ನಿನಗೆ ಥ್ಯಾಂಕ್ಸ್ ದೇವರೆ ಅಂದಿದ್ದೀರಾ?? ಹೃದಯದ ಮೇಲೆ ಕೈಯಿಟ್ಟು ಹೇಳಿ..ದೇವರನ್ನು ಕೇವಲ scapegoat ತರಹ ಯೂಸ್ ಮಾಡ್ತೀವಾ??

ದೇವರನ್ನು ಜನರು ಯಾಕೆ ನಂಬುತ್ತಾರೆ? ದೇವರೆಂದರೆ ಯಾರು? ನಿಜಕ್ಕೂ ಇದ್ದಾನಾ? ಇವೆಲ್ಲ ನನ್ನನೂ ಕಾಡುತ್ತವೆ. ಹೋಮ ಹವನ ಪೂಜೆ ಎಲ್ಲ ಮಾಡಿಸುತ್ತಾರಲ್ಲವೆ? ಇದೆಲ್ಲ ಯಾಕಾಗಿ? ಮತ್ತು ನಾನ್ಯಾಕೆ ಹೀಗೆ?? ಯಾರು ಅಸ್ತಿಕರು?

 ಹೊರಗೆ ಸಭೆ ಸಮಾರಂಭದಲ್ಲಿ / ಪಂಡಿತ್ ಜಸರಾಜರು, ನಮ್ಮ ಎಮ್ ಎಸ್ ಸುಬ್ಬುಲಕ್ಷ್ಮಿ, ಪಂಡಿತ್ ವೆಂಕಟೇಶಕುಮಾರ, ಭೀಮಸೇನ ಜೋಶಿಯವರು, ಪ್ರವೀಣ ಘೋಡಕಿಂಡಿ ಕೊಳಲು, ಪಂಡಿತ್ ಶಿವಕುಮಾರ ಶರ್ಮ ರ ಸಂತೂರ ಇವೆಲ್ಲ ಕೇಳುವಾಗ, ದೇವರ ನಾಮ ಸುಶ್ರಾವ್ಯವಾಗಿ ಹಾಡುತ್ತ, ಕೃಷ್ಣಾsssss' ಅಂತ ಹಾಡು ವಾಗ ನನಗ್ಯಾಕೆ ತನ್ಮಯತೆ??ಅದ್ಯಾಕೆ ನನ್ನ ಎದೆಯಾಳಕ್ಕೆ ಹೋಗಿ ನನ್ನ ಕಣ್ಣು ತನ್ನಷ್ಟಕ್ಕೆ ಮುಚ್ಚಿಕೊಳ್ಳುತ್ತವೆ?? .......ಕೆಲವು ವಿಷಯಗಳನ್ನು ವಿಶ್ಲೇಷಿಸದೆ (spelling wrongaa) ಸುಮ್ನೆ ಅನುಭವಿಸಬೇಕು ಅಂತ ನನ್ನ ಅನಿಸಿಕೆ.

parting punch: ಅಮ್ಮ ಇಷ್ಟಕ್ಕೆ ಸುಮ್ಮನಾಗಿದ್ದಾರಾ? ಇಲ್ಲ. ಅವರದ್ದು ಒಂದು ಪಾರ್ಟಿಂಗ್ ಶಾಟ್( parting shot)' 'ನನಗೆ ದೇವರಲ್ಲಿ ನಂಬಿಕೆಯಿದೆ. ಆ ನಂಬಿಕೆನೇ ನಿನ್ನನ್ನು ಕಾಯ್ತಾ, ಕಾಪಾಡ್ತಾ ಇದೆ' ಅಂತ..ಹಾಗಾದ್ರೆ ಹಾಗೆ...ನನ್ನ ನಗುವೇ ಇದಕ್ಕೂ ಕೂಡ ಉತ್ತರ.

ಸುಮ್ನೆ ಈ ಪೋಸ್ಟ್ ಅನ್ನ ಎಂಜಾಯ್ ಮಾಡಿ. iam like that only neither ಆಸ್ತಿಕ not ನಾಸ್ತಿಕ.
ಹೊಯ್ ಮಾರಾಯ್ರೆ ಇದನ್ನೆಲ್ಲ ಓದಿ ಹೆದರಬೇಡಿ. ಐ ಯಾಮ್ ನಾರ್ಮಲ್ . ನನ್ನ ಅಡಿಗೆಯಲ್ಲೂ ಕೆಲವೊಮ್ಮೆ ಉಪ್ಪು ಜಾಸ್ತಿ ಯಾಗುತ್ತೆ, ಮನೆ ಗಲೀಜು ಇಟ್ಟುಕೊಂಡಾಗ ಶ್ರೀಕಾಂತ ಹತ್ತಿರ ಬೈಯಿಸಿಕೊಳ್ಳುತ್ತೀನಿ, ನಾನು ಬೀಳ್ತೀನಿ, ಏಳ್ತೀನಿ.

ನಾನು ಸಿರ್ಫ್ ಮಾಲತಿ/ ಮಾಲ್ತಿ/ಮಾಲsssತಿsss/ಮಲ್ಲು/ಮಲ್ಲಿ/ ಮಾಂಚು/ಮಮಾನ್/ಮೊಮ್ಮೀ/ನಂದೀತಾ/ನಂದೀಪಾ/ ಮಲ್ಲಿಕಾಕಾ/ಸುಬ್ಬಿ/ಜೀಜಾಬಾಯಿ/ಜಮದಗ್ನಿ/ದುರ್ವಾಸಮುನಿ/ 'ಮಾಲ್ದೀ-ಗಾರೀಬಾಲ್ಡ್ದೀ' etc..not god ever!!

ಕೆಲವೊಮ್ಮೆ ನಾನು ನುಡಿದದ್ದು ನಿಜವಾಗದಿದ್ದರೆ ನಾನು ಮಹಾ ನಾಟಕೀಯವಾಗಿ ಛೆ! I am losing my divine power' ಅಂತಲೂ ಹೇಳ್ತೀನಿ. ನಗ್ತೀನಿ. ನಗಿಸ್ತೀನಿ. ಜೀವನವನ್ನು ಕಾಂಪ್ಲೆಕ್ಸ್ ಮಾಡಕ್ಕೆ ಹೋಗಲ್ಲ.

ಲವ್ ಯು ಅಕ್ಕ, ನಿಂಪು, ಶ್ರೀಕಾಂತ & ಪಾಂಡು, ಶ್ರೇಯ,ಸ್ಯಾಮಿ for making my life so interesting and enjoyable. and love u all blog reading guys...

ಇಷ್ಟೆಲ್ಲ ಓದಿ ಬೋರ್ ಅನ್ನಿಸದಿದ್ರೆ dessert ತರಹ ಈ ಹಳೆಯ ಪೋಸ್ಟ್ ಕೂಡ ಓದಿ:
:-)

January 25, 2013

ಎಲ್ಲಿಂದಲೋ ಎಲ್ಲಿಗೋ- ಒಂದು ಲಹರಿ




ಸುರಗಿ ಮತ್ತು ಕೇದಗೆ ಒಣಗಿದರೂ ಪರಿಮಳ ಬೀರುತ್ತಲೇ ಇರುತ್ತವೆ. ಸುರಗಿ ಹೂ, ಆದರೆ ಕೇದಗೆ/kewra, leaf modification. ನಮ್ಮ ತೀರ್ಥಹಳ್ಳಿಯ ತೋಟದಲ್ಲಿ ಪುಟ್ಟದೊಂದು ಕೇದಗೆ/ಮುಂಡುಗದ ವನ. ಈ ವನದಲ್ಲಿ ಹಾವುಗಳ ಓಡಾಟ ಹೆಚ್ಚು ಅನ್ನುತ್ತಾರೆ. ಆದರೆ ನಮ್ಮ ತೋಟದ ನೀರಿನ ಬಳಿ ಒಂದು ಕಪ್ಪನೆಯೆ ಉದ್ದದ  ನಾಗರಹಾವು ಓಡಾಡುವುದನ್ನು ಕಂಡಿದ್ದೇನೆ. ನಾಗರಹಾವು ಅಂದ ತಕ್ಷಣ ಎರಡು ವರ್ಷದ ಹಿಂದಿನ ಚೌತಿಯಂದು ನಡೆದ ಘಟನೆ ನೆನಪಾಗುತ್ತದೆ. ನಾವು ಬೆಂಗಳೂರಿನಿಂದ ತೀರ್ಥಹಳ್ಳಿಗೆ ಹಬ್ಬಕ್ಕೆ ಹೋಗಿದ್ದೆವು. ಹಬ್ಬದ ದಿನ ಬೆಳಿಗ್ಗೆ ಅಕ್ಕ (ಓರಗಿತ್ತಿ) ಅಡಿಗೆ ಮನೆಯ ಲೈಟ್ ಹಾಕಬೇಕಾದರೆ ಮಿಡಿನಾಗರ ಹಾವೊಂದು ಅಡಿಗೆ ಮನೆಯಲ್ಲಿ, ನೆಲಕ್ಕೆ ತಾಗಿರುವಂತೆ, ಗೋಡೆಯೊಳಗಿನ ಕಪಾಟು ಸೇರಿಕೊಂಡಿದ್ದನ್ನು ನೋಡಿದರು. ಮಳೆ ಬಂದಿದ್ದರಿಂದಾಗಿ,ವಾತಾವರಣ ತಂಪಾಗಿದ್ದು, ಆ ಕಪಾಟಿನ ಬಾಗಿಲು ಪೂರ್ತಿ ಹಾಕಲಿಕ್ಕೆ ಬರುತ್ತಿರಲಿಲ್ಲ. ಆ ಕಪಾಟಿನಲ್ಲಿ ಅಕ್ಕನ ಸಾಂಬಾರು ಪದಾರ್ಥದ ಡಬ್ಬಿ, ಎಣ್ಣೆ, ತುಪ್ಪ, ಬೆಣ್ಣೆ ಇಡುವ ಜಾಗ. ಸರಿ ನಾನು ಅಡಿಗೆ ಮನೆಗೆ ಹೋದಾಗ ಅಕ್ಕ ಹೀಗೀಗೆ ಹಾವು ಸೇರಿಕೊಂಡಿದೆ. ಕತ್ತಲೆಯಲ್ಲಿ ಏನೂ ಕಾಣುವುದಿಲ್ಲ. ಅಡಿಗೆ ಮನೆಯಲ್ಲಿ ಬಲ್ಬ್ ಇದ್ದರು ಅದರ ಬೆಳಕು ಕಪಾಟಿನ ಒಳಗೆ ತಲುಪುತ್ತಿರಲಿಲ್ಲ. ನಾನು ಕೋಣೆಗೆ ಹೋಗಿ ನನ್ನ ಸೆಲ್ಲ್ ಫೋನ್ ಬೆಳಕಿನಿಂದ ಹಾವು ಹುಡುಕುವ ಪ್ರಯತ್ನದಲ್ಲಿ ಅಡಿಗೆ ಮನೆ ತುಂಬ ಮಲಗಿಕೊಂಡು ಡಬ್ಬಿ/ಬಾಟಲಿಗಳ ಮಧ್ಯ ಕೈ ಹಾಕಿ ತಡಕಾಡುತ್ತ ಇದ್ದೆ . ಅಷ್ಟರಲ್ಲಿ ಭೈಯಾ ದೊಡ್ಡ ಟಾರ್ಚ್ ಒಂದನ್ನು ಹಿಡಿದುಕೊಂಡು ಒಂದು ಕೋಲು ಒಳಗೆ ಸೇರಿಸಿ ಹುಡುಕಾಡಿದೆವು. ಊಹೂಂ ಹಾವು ಕಾಣಲೇ ಇಲ್ಲ. ಆಮೇಲೆ ನಮ್ಮ ಹಬ್ಬದ ಗಡಿಬಿಡಿಯಲ್ಲಿ ಆಘಟನೆ ಮರೆತೇ ಹೋಯಿತು.


ಬೆಂಗಳೂರಿಗೆ ಮರಳಿದ ಮೇಲೆ ಯಾರೋ ಹಾವಿನ ವಿಷಯ ಮಾತನಾಡುವಾಗ, ಸಡನ್ ಆಗಿ ನನಗೆ ಆ ದಿನದ ಅಡಿಗೆ ಮನೆ ಸೀನ್ ನೆನಪಾಗಿ, 'ಅರೇ ಮಿಡಿನಾಗರಹಾವನ್ನು ನೋಡುವ ಹುನ್ನಾರದಲ್ಲಿ ನಾನು 5'2" ಹೆಬ್ಬಾವಿನಂತೆ ಅಡಿಗೆ ಮನೆಯಲ್ಲಿ ಹೊರಳಾಡಿದ್ದನ್ನು ಕಂಡು ಭೈಯ್ಯ ನವರಿಗೆ ಏನನ್ನಿಸಿತೋ ಅಂತ ನನ್ನಷ್ಟಕ್ಕೆ ನಗ್ತಾ ಇದ್ದೆ.Sumathi Deepa Hegde : munna!has amma shared this with you? :-) )

ಸರಿ, ರಾಯರು ಮುಂಬೈಗೆ ಹೋಗ್ತಾ ಫ್ಲೈಟ್ ನಲ್ಲಿ ಓದಲು 'ಸುರಗಿ' ಪುಸ್ತಕ ಎತ್ತುಕೊಂಡಿದ್ದಾರೆ. ಸುರಗಿ ಜತೆ ನೀಹಾ ಮಾಡಿದ bookmark ಕೂಡ ಹೋಗ್ತಾ ಇದೆ ಮುಂಬೈಗೆ. ಚಾನ್ಸ್. ಅವರು ರೆಡಿಯಾಗುವಾಗ ನಾನು ಸುಮ್ಮನೆ ಸುರಗಿಯ ಪುಟ ತಿರುಗಿಸ್ತಾ ಇದ್ದೆ. ಮುಖ ಪುಟ ನನಗಿಷ್ಟ ಆಗಿದೆ. ಉಳಿದ ಮೂವರಿಂದ no comments' ಮುಖಪುಟದ ರೇಖಾಚಿತ್ರ ಜ.ನಾ.ತೇಜಶ್ರೀ ಯವರದ್ದು ಹಾಗೂ ವಿನ್ಯಾಸ ಮಾದಿದವರು ಚನ್ನಕೇಶವ ಅಂತ ಒಳಗಡೆ ನಮೂದಿಸಲಾಗಿದೆ. ಜ.ನಾ. ತೇಜಶ್ರೀ ಯವರ ಬಗ್ಗೆ ಅನಂತಮೂರ್ತಿ ಯವರು ಆತ್ಮೀಯವಾಗಿ ಬರೆದಿದ್ದಾರೆ. ಒಳಗಡೆ ಫೊಂಟ್ (font) ಸ್ವಲ್ಪ ಚಿಕ್ಕದಾಗಿದೆ. 


6 ಗಂಟೆಗೆ ಹೊರಡಬೇಕಿದ್ದ ಫ್ಲೈಟ್ ಇನ್ನೂ poor visibility due to fog ನಿಂದ ನಿಲ್ದಾಣದಲ್ಲೇ ಇದೆಯಂತೆ. ಕ್ಯೂ ನಲ್ಲಿ ಇವರದ್ದು 14 ನೇ ನಂಬರ್ ಅಂತೆ take-off ಗೆ. ಇಷ್ಟರಲ್ಲೆ ಅರ್ಧ 'ಸುರಗಿ' ಮುಗಿಸಿಬಿಟ್ಟಿರುತ್ತಾರೆ. :-) ಹಸಿವೆಯಾಗಿ ಏನು ತಿಂಡಿ ಅಂತ ಕೇಳಿದರು. ನಾನು ಒಗ್ಗರಣೆ ಹಾಗಿದ ಮೈದಾ ಹಿಟ್ಟಿನ ದೋಸೆ ಅಂತ ನಾಲಿಗೆ ಹೊರಚಾಚುವ ಐಕನ್ ಕಳಿಸಿಸ್ದ್ದೆ ಸೆಲ್ ನಲ್ಲಿ. ಅದಕ್ಕೆ ಅವರು ಮುಂಬೈ ನಲ್ಲಿ ನನ್ನ ಇಷ್ಟದ ವಡಾ ಪಾವ್+ ಚಟ್ನಿ ಪುಡಿ+ ಹುರಿದ ಹಸಿಮೆಣಸಿನ ಕಾಯಿ ಕೊಂಬೋ ತಿನ್ನುತ್ತಾರಂತ ನನಗೀಗ ಹೊಟ್ಟೆಯುರಿ :-(

ಈ ವರ್ಷ ನಾನು ಹೆಚ್ಚಿಗೆ ಕನ್ನಡ ಪುಸ್ತಕಗಳನ್ನು ಓದಬೇಕೆಂದು ಠರಾಯಿಸಿದ್ದೇನೆ. ಈಗಾಗಲೇ ವಿವೇಕ ಶಾನಭಾಗ ರ 'ಘಾಚರ್ ಘೋಚರ್' ಓದಿ ಮುಗಿಸಿದೆ. ತೀರ್ಥಹಳ್ಳಿಯಲ್ಲಿ ಬಿಟ್ಟು ಬಂದು, ಓದು ಸ್ಥಗಿತಗೊಂಡ 'ಸ್ವಪ್ನ ಸಾರಸ್ವತ' ಪುನ: ನನ್ನ ಕೈಗೆ ಸಿಕ್ಕಿದೆ. ಇನ್ನು ಕೆಲವೆ ಪುಟಗಳು ಬಾಕಿ ಇವೆ. ಅದಾದ ಮೇಲೆ ಜೋಗಿ urph Girish Rao Hatwar ಯವರ 'ದೇವರ ಹುಚ್ಚು' ನೋಡುವ ಏನು ಬರೆದಿದ್ದಾರೆ ಹೇಗೆ ಬರೆದಿದ್ದಾರೆ ಅಂತ.

ಸುರಗಿ , ಕೇದಗೆ ಜತೆ ನನಗಿಷ್ಟವಾದ ಇನ್ನೊಂದು ಹೂವು ಕೆಂಡಸಂಪಿಗೆ..
ಪರಿಮಳಯುಕ್ತ ಗುರುವಾರ ನಿಮ್ಮದಾಗಲಿ.
Loads of love:
ಮಾಲತಿ ಎಸ್
(ಕೇದಗೆ ಮತ್ತು ಸುರಗಿ ನೆಟ್ ನಿಂದ ಕದ್ದಿದ್ದು)
ಫೇಸ್ ಬುಕ್ ನಲ್ಲಿ ಹಾಕಿದ್ದು. ಇಲ್ಲಿ ಗೂ...
:-)

January 20, 2013

ಕೇರಳ ಕೋಕೊನಟ್ ರೈಸ್ - ഒരു കഥാ

ಬೆಂಗಳೂರಿಗೆ ಬಂದ ಹೊಸತರಲ್ಲಿ ಸುಚಿತ್ರ ಫಿಲ್ಮ್ ಸೊಸೈಟಿ ಗೆ ಒಂದು ಸಿನಿಮಾ ಪ್ರದರ್ಶನಕ್ಕೆ ಹೋಗಿದ್ದೆವು. ಅಲ್ಲಿ ಪ್ರಶಾಂತ್ ಪಂಡಿತ ನಮಗೆ ಸುಚಿತ್ರ ಫಿಲ್ಮ್ ಸೊಸೈಟಿಯ ಮೆಂಬರ್ ಆಗಲು ತಿಳಿಸಿದರು. ಫಾರ್ಮ್ ನಲ್ಲಿ ಮನೆಯ ವಿಳಾಸ ಇ-ಮೈಲ್ ಇತ್ಯಾದಿ ನಮೂದಿಸಿದ್ದೆ. ಹಾಗಾಗಿ ಸುಚಿತ್ರಾದಲ್ಲಿ ಏನಾದರೂ ಸಭೆ-ಸಮಾರಂಭಗಳಿದ್ದರೆ ನನಗೆ ಇ-ಮೈಲ್ ಬರುತ್ತಿತ್ತು. ಒಂದೊಮ್ಮೆ ಯಾವುದೋ query ಗೆ ನಾನು reply all ಕೊಟ್ಟಿದ್ದು, ಆಗ ಪರಿಚಯ ಆಗಿದವರು ಸಲೀಲ್. ಆಮೇಲೆ ನಾವು ಯಾಹೂ ಚಾಟ್ ನಲ್ಲಿ on-off ಸಿಕ್ಕುಮಾತು-ನಗು ವಿನಲ್ಲಿ ಪರಿವರ್ತನೆಯಾಯಿತು. ಆಮೇಲೆ ಫೋನ್ ನಂ ವಿನಿಮಯ ಮಾಡಿಕೊಂಡ ಮೇಲೆ ಆಗಾಗ ಮತಾಡುತ್ತಿದ್ದೆವು. ಅವರು ಸಾಫ್ಟ್  ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮೂಲ ತ:  ಕೇರಳದವರು. ಕೆಲ ವರುಷ ಹೊರದೇಶದಲ್ಲೂ ಇದ್ದು ಬಂದವರು. ಅವರ ಹಾಬಿ ಶಾರ್ಟ್ ಫಿಲ್ಮ್ ಮಾಡುವುದಿತ್ತು.

ಹಾಗೆ ಒಂದು ಸಲ ಮಾತನಾಡುವಾಗ ಇವತ್ತು 'ನನ್ನ ಅಡಿಗೆಯವನು ಬಂದಿಲ್ಲ' ಹೊರಗೆ ಊಟಕ್ಕೆ ಹೋಗ್ತಾ ನಿಮ್ಮ ಜತೆ ಮಾತಾಡ್ತಿದ್ದೀನಿ ಅಂದ್ರು. ಮಾತಿಗೆ ನಿಮ್ಮನೇಲಿ ಏನು ತಿಂಡಿ ಅಂತ ಕೇಳಿದರು. ನಾನು 'ಕೇರಳ ಕೊಕೋನಟ್ ರೈಸ್' ಅಂದೆ. 
"ಅದನ್ನು ಹೇಗೆ ಮಾಡುವುದು"?
ನಾನು ಹೇಳಿದೆ. ಇಂಟರೆಸ್ಟಿಂಗ್ ಅಂದರು. ಆಮೇಲೆ ನಮ್ಮ ಟಾಪಿಕ್ ಬೇರೆ ವಿಷಯಗಳಗೆ ಹೊರಳಿತು.
ಮರುದಿನ ಪುನ: ಫೋನ್ ಮಾಡಿದರು' more than 3/4 of my life i spent in Kerala da. but i had not heard nor tasted Kerala coconut rice. So i asked my mommee. and she said such a thing as Kerala Coconut rice does not exist' ಅಂತ. ಹೊರದೇಶದಲ್ಲಿ ಹಲವಾರು ವರ್ಷ ಇದ್ದುದರಿಂದ ಅಪರೂಪಕ್ಕೊಮ್ಮೆ ಕೆಲವು ಪದಗಳಿಗೆ ಅವರ ಮಾತಲ್ಲಿ ಮಲಯಾಳಿ accent ಹೊಮ್ಮುತ್ತಿತ್ತು. ಅದಲ್ಲಿ 'ಕೋಕನಡ್', ಓಟೋ (auto) ಅಂತದಕ್ಕೆಲ್ಲ ನಾನು ಮುಕ್ತವಾಗಿ ನಗುತ್ತಿದ್ದೆ. why da you are teasing me ಅಂತಿದ್ದರು ಕೂಡ.

ಆ ಮೇಲೆ ಕೆಲಸ ಬಿಡುವ ಅಂದಾಜಲ್ಲಿ ನನ್ನ ಬಳಿ ಕೌಂನ್ಸೆಲ್ಲಿಂಗ್ ಅಂತ ಹಲವಾರು ಬಾರಿ ಮಾತನಾಡಿದ್ದಲ್ಲದೇ, ಮನೆಗೆ ಬಂದು ನಮ್ಮ ಜತೆ ಊಟ ಮಾಡಿ, ಒಂದು ಜಮೀನು ಖರೀದಿಸಲು ಅದರ ಬಗ್ಗೆ ಶ್ರೀಕಾಂತ ಹತ್ತಿರ ಸಮಾಲೋಚನೆ ನಡೆಸಿದರು. ನನ್ನ ತರಹ ಅವರಿಗೂ ಓದಿನ ಹುಚ್ಚು. ಮಲಯಾಳಿ/ಆಂಗ್ಲ್ ಪುಸ್ತಕ, ಮಲಯಾಳಿ ಸಿನಿಮಾ ಬಗ್ಗೆ ಎಲ್ಲ ನಮ್ಮ ಮಾತು ಇರುತ್ತಿತ್ತು. 
ನನಗೆ, ಹೇಳಿದಂತೆ ಮಾಡುವ, ಧೈರ್ಯದಿಂದ ಮುನ್ನುಗ್ಗುವ ಈಗಿನ ಯುವಕ ಯುವತಿಯರನ್ನು ಕಂಡರೆ ಏನೋ ಒಂದು ತರಹ ಖುಶಿ.ಸಲೀಲ್ ನನಗಿಂತ ತುಂಬ ಚಿಕ್ಕವರು. malathi i have enough savings to last me for another year. Will i be able to make it? I am so used to drawing a fixed salary every month its a bit scary  what do you suggest anta? ನಾ ಅವರಿಗೆ go ahead, everything is going to be fine' ಅಂದಿದೆ. ಏನಾದ್ರು ಟೆನ್ಷನ್ ಆದಾಗ ಫೋನ್ ಮಾಡೋವ್ರು.

ಈಗ ಅವರು ಕೇರಳದಲ್ಲಿ ಜಮೀನು ಖರೀದಿಸಿ ಅಲ್ಲಿ ಕೃಷಿ ಮಾಡ್ತಾ, ರಾಷ್ಟ್ರೀಯ/ಅಂತರಾಷ್ಟ್ರೀಯ  ಮಟ್ಟದಲ್ಲಿ ಹೆಸರು ಗಳಿಸಿರುವ short film/Documentary film maker. ಅವರ 7 ವರ್ಷದ ಮಗಳು ಪಾರೋ ಸಣ್ಣ ಪುಟ್ಟ advertisement ನಲ್ಲಿ ಕಾಣಿಸಿಕೊಳ್ಳುತ್ತಾಳೆ. ಅವರ ಪತ್ನಿ ಸಿಂಧು ನ ಸಾಥ್ ಅವರಿಗಿದೆ.

ಹೀಗೆ kerala coconut rice ಅನ್ನುವ ಹೆಸರಿಟ್ಟು ನನ್ನದೇ ಆದ ಹೊಸರುಚಿ ಮಾಡಿದಾಗಲೆಲ್ಲ ನನಗೆ ಸಲೀಲ್ ಜತೆ ಮಾತಾಡಿದ್ದು ನೆನಪಾಗುತ್ತೆ. ಈಗಲೂ ಫೋನ್ ಮಾಡಿದಾಗಲೆಲ್ಲ ನಮ್ಮ ಕೋಕೊನಟ್ ರೈಸ್ ಬಗ್ಗೆ ಮಾತು ಹೊರಳೇ ಹೊರಳುತ್ತೆ.
ಇಲ್ಲಿದೆ ಚಿತ್ರ

ಅದನ್ನು ತಯಾರಿಸಲು: 
1. ಅನ್ನ ಮಾಡಿಟ್ಟುಕೊಂಡು ಅದು ತಣ್ಣಗಾಗಲು ಬಿಡಿ. ಅನ್ನ ಬಿಡಿ ಬಿಡಿಯಾಗಿರಲಿ
2. ಜೀರಿಗೆ, ಮೆಂತೆ, ಹಿಂಗು ಇವುಗಳನ್ನು ಎಣ್ಣೆ ಹಾಕದೇ ಹುರಿದು, ಅದು ತಣ್ಣಗಾದ ನಂತರ ಪುಡಿಮಾಡಿಟ್ಟುಕೊಳ್ಳಿ.
3. ಒಗ್ಗರಣೆಗೆ ಉದ್ದಿನ ಬೇಳೆ, ಸಾಸಿವೆ, ಸ್ವ್ಲಲ್ಪ ಹೆಚ್ಚೆ ಕರಿಬೇವು ಹಾಕಿ, ನಾಲ್ಕೈದು ಉದ್ದಕ್ಕೆ ಸೀಳಿದ ಹಸಿಮೆಣಸಿನಕಾಯಿ ಹಾಕಿ. 
ಇದಕ್ಕೆ ಮಾಡಿಟ್ಟುಕೊಂಡ ಪುಡಿ ಬೆರೆಸಿ. ಅನ್ನ ಬೆರೆಸಿ ಉಪ್ಪು ಸಕ್ಕರೆ ಹಾಕಿ. ೫ ನಿಮಿಷ ಮುಚ್ಚಿಡಿ. ಆಮೇಲೆ ಅದರ ಮೇಲೆ ತಾಜಾ ಹೆರೆದ ಕಾಯಿ ತುರಿ ಸಿಂಪಡಿಸಿ.
kerala coconut rice ರೆಡ್ಡಿ ಟು ಈಟ್..
:-)