Showing posts with label ಹೊಸ ವರುಷ 2014. Show all posts
Showing posts with label ಹೊಸ ವರುಷ 2014. Show all posts

January 1, 2014

ಹೊಸ ವರುಷಕ್ಕೊಂದು ಪೋಸ್ಟ್

(ತಂದೆಯವರ ವೈಕುಂಠ ಸಮಾರಾಧನೆಯೆಲ್ಲ ಮುಗಿಸಿ ಬೆಂಗಳೂರಿಗೆ ವಾಪಸ್ ಆದೆವು. ಬ್ಲಾಗ್ ಓಪನ್ ಮಾಡಿ ಓದಿದಾಗ ಯಾಕೋ ನನ್ನ ಬರಹಗಳ ಬಗ್ಗೆ ನನಗೇ ಬೇಸರ ಮೂಡಿ, ನನ್ನ ಅಡಿಗೆ ಬ್ಲಾಗ್ ಒಂದು ಹಾಗೇ ಬಿಟ್ಟು ನೆನಪಿನ ಸಂಚಿ ಡಿಲೀಟ್ ಮಾಡಿ ಬಿಟ್ಟೆ.
ಆದರೆ ಮರುದಿನದಿಂದ ಹಲವಾರು ಮೈಲ್ ಎಸ್ ಎಮ್ ಎಸ್ ಗಳ ಸರಮಾಲೆ ಶುರು ಆದವು. honestly i did not think anybody would miss it.
" ಪ್ಲೀಸ್ ನಿಮಗೆ ನಿಮ್ಮ ಬರಹಗಳ ಬಗ್ಗೆ ಏನೇ ಅಭಿಪ್ರಾಯ ಇರಲಿ, ನಮಗೆ ಓದಲು ಇಷ್ಟವಾಗುತ್ತೆ"
" ನನಗೆ ಬೇಸರ ಬಂದಾಗಲೆಲ್ಲ ನಿಮ್ಮ ಬ್ಲಾಗ್ ಬರಹಗಳಿಗೆ ಮೊರೆ ಹೋಗುತ್ತೇನೆ, ಬರೀರಿ. ಇಲ್ಲದಿದ್ದರೆ ನನಗೆ ತುಂಬಾ ಕಷ್ಟವಾಗುತ್ತೆ"
ಒಬ್ಬರಂತೂ, 'ನನ್ನ ಕತೆಗಳಿಗೆ ನಿಮ್ಮ ಬರಹ ಸ್ಪೂರ್ತಿ, ಕೆಲವು ಟಾಪಿಕ್ ಅನ್ನು ನಿಮ್ಮ ಬ್ಲಾಗ್ ನಿಂದ ಕದ್ದಿದ್ದೇನೆ ಅಂತ ಇತ್ತು. ಇದು ತುಂಬಾ far fetched ಅನ್ನಿಸಿದ್ರೂ ಓದಿ ನಕ್ಕು ಬಿಟ್ಟೆ. ಅದನ್ನು ಮಕ್ಕಳಿಗೂ ತೋರಿಸಿ ' ಒಹೋ ಮಾಲತಿ ಶೆಣೈ famous blogger ಅಂತ ಕಾಲೆಳೆಸಿಕೊಂಡೆ.
ಒಬ್ಬರು, "ಡಿಲೀಟ್ ಯಾಕೆ ಮಾಡಿದ್ರಿ?? ಹೊಸ ಪೋಸ್ಟ್ ಅಲ್ಲದಿದ್ದರೆ ಹಳೇದನ್ನು ಓದುತ್ತಿದ್ದೆವು' ಅಂದು ಬಿಟ್ರು. ನನಗೂ ಹೌದಲ್ಲವಾ ಅನ್ನಿಸಿತು. ನಿಮ್ಮೆಲ್ಲರ ಪ್ರೀತಿ ನನಗೆ ಖುಶಿಯಾಗಿದೆ.
ಮತ್ತೊಬ್ಬ ಕಿರಿಯ ಸ್ನೇಹಿತ ಅದನ್ನು ಹೇಗೆ ಅನ್ ಡೀಲೀಟ್ ಮಾಡೋದು ಅಂತ ಕೂಡ ತಿಳಿಸಿದ್ದಾರೆ. ಥ್ಯಾಂಕ್ಯೂ ಪುಟ್ಟು.
'ಓದುತ್ತಾರೆ' ಅಂತ ನನಗೆ ಗೊತ್ತಿಲ್ಲದವರೂ ಈ ತರಹ ಮೈಲ್ ಹಾಕಿದ್ದಾಗ ನನಗೆ ಆಶ್ಚರ್ಯ ಆಗಿದೆ."ಓದಿ ಎಂಜಾಯ್ ಮಾಡುತ್ತೇವೆ ಆದರೆ ಕಮೆಂಟ್ ಮಾಡಲ್ಲ ಅಷ್ಟೆ"( ನಾನು ಕಮೆಂಟ್ ಗಳಿಗೆ ಯಾವತ್ತೂ ಪ್ರಾಧಾನ್ಯತೆ ಕೊಟ್ಟಿಲ್ಲ) ಇನ್ನು ಬ್ಲಾಗ್ ಅನ್ನು ರಿವೈವ್ ಮಾಡದಿದ್ದರೆ ಅದು ಅಹಂಕಾರ ಅಂತಾಗುತ್ತದೆ. if you enjoy my ramblings what gives?? ನೀವೇ 'ಇನ್ನು ಬರೆಯುವುದನ್ನು ನಿಲ್ಲಿಸಿ ಮಾಲತಿ ಮೇಡಂ ಅನ್ನುವ ತನಕ ಬರೀತೇನೆ.

ಈ ಪೋಸ್ಟ್ ರಾಧಿಕಾ ಅವರಿಗೆ. Happy 2014 Radhika.)
(ಹೊಸ ವರ್ಷದ ಮೊದಲ ಪೋಸ್ಟ್ ಸ್ವಲ್ಪ ಗ'ಮ್ಮತ್ತಿ' (ಆ 'ಮತ್ತು' ಅಲ್ಲ ಮತ್ತೆ)ನದು. ನನ್ನ ತಮ್ಮನ ಮಗಳು 5 ವರ್ಷದ ಸಮೀಧಾ ಮತ್ತು ಯು.ಎಸ್ ತಂಗಿಯ ಮಗಳು, 9 ವರ್ಷದ ಶ್ರೇಯಾ ಅತ್ಯಂತ punny ಗಳು. whatsapp ನಲ್ಲಿ ಅವರ ಜತೆ pun (ಶ್ರೀವತ್ಸ ಜೋಶಿ pun ಗೆ ಕನ್ನಡ ಪದ ಕೊಟ್ಟಿದ್ದಾರೆ ಶ್ಲೇಷೆ ಅಂತ) ತುಂಬಾ ಎಂಜಾಯ್ ಮಾಡ್ತೇನೆ)
Co-incidence
ಬೆಂಗಳೂರಿಗೆ ಬರುವ ಮುಂಚೆ ಶ್ರೀಕಾಂತ ಗೆ ಮಣಿಪಾಲ್ ನಲ್ಲಿ ಪೋಸ್ಟಿಂಗ್ ಆಗಿತ್ತು. ಬ್ಯಾಂಕ್ ನ ಒಂದು ಹೊಸ ಉಳಿತಾಯ ಯೋಜನೆಗೆ ಒಂದು advertisement ತಯಾರಿಸಬೇಕಿತ್ತು. ಹೆಡ್ ಆಫಿಸ್ ಆದ್ದರಿಂದ ಈ ಜಾಹಿರಾತು ಹಿಂದಿ, ಇಂಗ್ಲಿಷ್ ಮತ್ತು ಕನ್ನಡದಲ್ಲಿ ಆಗಬೇಕಿತ್ತು.. ಕನ್ನಡ ಇಂಗ್ಲಿಷ್ ಶ್ರೀಕಾಂತ ವಹಿಸಿಕೊಂಡಿದ್ದರೆ, ಹಿಂದಿಯ ಜಾಹಿರಾತು ಬೋಳುವಾರ ಮೊಹಮ್ಮದ ಕುಂಯಿ ಮಾಮನವರದ್ದು. ನನಗೂ ಹೆಲ್ಪ್ ಮಾಡಲಿಕ್ಕೆ ಹೇಳಿದ್ದರು. ಕೆಲಸ ಮಾಡಿದ್ದಕ್ಕಿಂತ ನಾವು ನಕ್ಕಿದ್ದೆ ಹೆಚ್ಚು. ರಾತ್ರಿಯೆಲ್ಲ ಕೂತು ಮಾಡುತ್ತಿದ್ದ ನೆನಪು. ಆಮೇಲೆ ಅದು ದೊಡ್ಡ ದೊಡ್ಡ ಹೋರ್ಡಿಂಗ್ ಮೇಲೆ ಪ್ರದರ್ಶನ ಗೊಂಡಾಗ ನನಗಾದ ಹೆಮ್ಮೆ ಅಷ್ಟಿಷ್ಟಲ್ಲ. ಇಂಗ್ಲಿಷ್ ನಲ್ಲಿ 'Little Drops of Water....' ಅಂತ ಶುರು ಆಗುವ ವಾಕ್ಯ ಇತ್ತು. ಕೆಲವೆ ದಿನಗಳಲ್ಲಿ ದೀಪಾ ಮೆಹತಾ ಅವರ water ಸಿನಿಮಾ ಬಿಡುಗಡೆಯಾಗಿ ಬ್ಯಾನ್ ಆಯ್ತು. ನಮ್ಮ ಸ್ಲೋಗನ್ 'ವಾಟರ್' ಸಿನಿಮಾದ promo ಅಂತ ತಿಳಿದುಕೊಳ್ಳುವ ಭಯದಿಂದಾಗಿ ಅದನ್ನು scrap ಮಾಡಲಾಯಿತು. ಆಮೇಲೆ ನಮ್ಮ ಜೀವನದಲ್ಲಿ ಹಲವು ಹೊಸ ತಿರುವುಗಳು. ಬ್ಯಾಂಕ್ ನ golden hand shake scheme ಬಂದಾಗ ಶ್ರೀಕಾಂತ್ ಮತ್ತು ಕೆಲ ಆಪ್ತ ಗೆಳೆಯರು ಬ್ಯಾಂಕ್ ನಿಂದ ಸ್ವಯಂ ನಿವೃತ್ತಿ ಪಡೆದರು.
ಆಮೇಲೆ ನಮ್ಮ ಬೋರಿಯಾ ಬಿಸ್ತರ್ ಎಲ್ಲ ಬೆಂಗಳೂರಿಗೆ . ನಿಜ ಹೇಳಬೇಕೆಂದರೆ ಬ್ಯಾಂಕ್ ನ ಆ ಸ್ಕೀಮ್ ಬರುವ ಮುಂಚೆನೆ ಶ್ರೀಕಾಂತ್ ಗೆ ಬೇರೆ ಬೇರೆ ಕಡೆಯಿಂದ ಅವರ organisation ಸೇರಲು ಫೀಲರ್ಸ್ ಬರ್ತಾ ಇದ್ದವು. ನಮ್ಮ ಕುಟುಂಬ ವರ್ಗ ದವರಿಗೆಲ್ಲ ಶಾಕ್. ಒಳ್ಳೆ ನಿಶ್ಚಿತ ಸಂಬಳ, ಮುಂದೆ ಪ್ರೋಮೋಶನ್ ಗಳ ಖಾತರಿ ಇದ್ದದ್ದನ್ನು ಬಿಟ್ಟು ಕೆಲಸ ಬಿಡುತ್ತಾರೆಂದು ತುಂಬಾ ಸಂಕಟ ಪಟ್ಟಿದ್ದಾರೆ. ಅಮ್ಮ ಅಂತು ಅತ್ತು ಬಿಟ್ಟರು. ಅವರಿಗೆ ಸಮಾಧಾನ ಮಾಡಬೇಕಾದರೆ ಸಾಕುಬೇಕಾಯಿತು. ಕೆಲವು ಮಿತ್ರರು ಅಂದುಕೊಂಡವರು ದೂರ ಸರಿದುಬಿಟ್ಟರು. :-) ಇನ್ನು ಕೆಲವರು ಹುಚ್ಚರು ಅಂದರು. ಆದರೆ ಬ್ಯಾಂಕ್ ಬಿಡುವ ಆರು ದಿನಗಳ ಮುಂಚೆನೆ ನಮಗೊಂದು ಹೊಸ ಪ್ರಾಜೆಕ್ಟ್ ಸಿಕ್ಕಾಗಿತ್ತು. :-) ಈಗ ನೋಡಿದರೆ ಬ್ಯಾಂಕ್ ಕೆಲಸ ಗಿಂತ ಸಮಾಧಾನ, ಸಂತೋಷ, ಗಂಜಿ ಉಪ್ಪು ತುಪ್ಪಗಳಿಗೆ ಕೊರತೆಯಿಲ್ಲದಷ್ಟು ಸಂಪಾದನೆ. ಮುಖ್ಯ ಅಂದರೆ ನಾವು ಆಯ್ದುಕೊಂಡ ಕಸುಬಿನಿಂದ ನಮಗೆ ರಾತ್ರಿ ಸಮಾಧಾನದಿಂದ ನಿದ್ರೆ ಮಾಡುವ ಸುಖ.ದೇಶ ವಿದೇಶಗಳಲ್ಲಿ ಹೆಸರು ಮಾಡಿದೆ ನಮ್ಮ ಸಂಸ್ಥೆ. 
ಬೆಂಗಳೂರಿಗೆ ಬಂದ ಮೇಲೆ ನಾವು ತುಂಬಾ ವ್ಯಸ್ತವಾಗಿದ್ದೆವು. ಮನೆ, ಆಫಿಸು, ಮಕ್ಕಳ ಶಾಲೆ ಹುಡುಕುವ ಕೆಲಸಗಳು. ಸಿಕ್ಕ ಪ್ರಾಜೆಕ್ಟ್ ಅನ್ನು ಶುರು ಮಾಡುವ ತರಾತುರಿ. ಸುಮಾರು ಸಮಯದ ನಂತರ ಒಂದು ಕ್ಲಬ್ ನ ಪಾರ್ಟಿಯಲ್ಲಿ ಶ್ರೀಕಾಂತ ಗೆ ಬೋಳುವಾರ ಮಾಮ ಸಿಕ್ಕಿದರು.ಈ ಮಧ್ಯೆ ಅವರಿಗೆ ಬೆಂಗಳೂರಿಗೆ ವರ್ಗವಾಗಿತ್ತು. ಮಾತಾಡ್ತಾ ಅವರ ಮಾತು ವಸುಧೇಂದ್ರರ ಕಡೆ ಹೊರಳಿತು, ಅವರ ಬರಹದ ಬಗ್ಗೆ ಹೇಳಿದ್ದರಂತೆ. 'ಈ ಹುಡುಗ ತುಂಬ ಮೇಲೆ ಬರುತ್ತಾನೆvery promising writer ' ಅಂತ ಅಂದಿದ್ದರಂತೆ. ಆಮೇಲೆ ಒಂದು ದಿನ ಪೇಪರ್ ನಲ್ಲಿ ಅವರ ಕತೆ ಬಂದಿದ್ದನ್ನು ಶ್ರೀಕಾಂತ್ ಗೆ ಅವರು ತಿಳಿಸಿ, ಶ್ರೀಕಾಂತ ಅದನ್ನು ಓದಿ, ನನಗೋಸ್ಕರ ಇಟ್ಟಿದ್ದು, ಅದು ರದ್ದಿಯಲ್ಲಿ ಹೋಗಿ (ಆಗ ನನಗೆ ಕನ್ನಡ ಓದುವ ರೂಢಿ ಅಷ್ಟಿರಲಿಲ್ಲ), ವಸುಧೇಂದ್ರರ ನಂಬರ್ ಕೊಟ್ಟರಂತೆ 'ಮಾತಾಡಿ' ಅಂತ. ಶ್ರೀಕಾಂತ್ ಆ ನಂಬರ್ ಅನ್ನು ಫೋನ್ ಪಕ್ಕ ಇದ್ದ ಶೀಟ್ ನಲ್ಲಿ ಬರೆದಿಟ್ಟು ಕೊಂಡರು. ಅದರಲ್ಲಿ ಹೆಸರು ಎಲ್ಲೋ, ನಂಬರ್ ಎಲ್ಲೋ....ಇದೆಲ್ಲ ನಾನು ಆಫಿಸ್ ನಿಂದ ಮರಳುವ ಮುಂಚಿನ ಕತೆ. ಅಷ್ಟರಲ್ಲೆ ನನ್ನ ಮುಂಬೈಯ ನ ಆಪ್ತ, ಜೀವದ ಗೆಳತಿ ಬೆಂಗಳೂರಿನಲ್ಲೇ ಇದ್ದದ್ದು ನನ್ನ ನಂಬರ್ ಎಲ್ಲಿಂದಲೋ ಪಡೆದು ಮನೆಗೆ ಫೋನ್ ಮಾಡಿ ಶ್ರೀಕಾಂತ ಆ ಕಾಗದಲ್ಲೇ ಬರೆದರು. ನಾನು ಬಂದ ಮೇಲೆ ಆ ಸ್ನೇಹಿತೆಯು ಫೋನ್ ಮಾಡಿದ್ದನ್ನು ಹೇಳಿದರು, ನನಗೆ ಖುಶಿಯಿಂದ ಕುಣಿದಾಡುವಷ್ಟು ಸಂತೋಷ. ನಾನು ಪ್ರೆಂಡ್ ಶಿಪ್ ಎಲ್ಲ ಮಾಡುವುದರಲ್ಲಿ ಕಳ್ಳಿ. ನಾನಾಯ್ತು, ನಾವು ನಾಲ್ಕು ಜನರಾಯ್ತು. ಈಗೀಗ ಕೆಲವು ಆಪ್ತ ಮಿತ್ರರಿದ್ದಾರೆ. ಆ ನಂಬರ್ ಅನ್ನು ಬರೆದಿಟ್ಟುಕೊಂಡೆ. ಪುರುಸೊತ್ತಲ್ಲಿ ಫೋನ್ ಮಾಡಿದರಾಯ್ತು ಅಂದುಕೊಂಡಿದ್ದೆ. ಬೆಳಿಗ್ಗೆ ಆಫಿಸ್ ಗೆ ಹೋಗುವ ಗಡಿಬಿಡಿ, ಸಂಜೆ ಮನೆಗೆ ಬಂದ ಮೇಲೆ ಉಳಿದ ಮನೆಯ, ಆಫಿಸ್ ನ  ಕೆಲಸಗಳನ್ನು ಮುಗಿಸುವ ತರಾತುರಿಯಿಂದ ಫೋನ್ ಮಾಡಲಾಗಲಿಲ್ಲ. ಒಂದು ದಿನ ರಜೆಯಿತ್ತು. ಆ ದಿನ ಅವಳಿಗೊಂದು ಮೆಸೆಜ್ ಬಿಟ್ಟೆ. ಉತ್ತರ ಬರುವಾಗ ಮಾತ್ರ ಅದರಲ್ಲಿ ವಸುಧೇಂದ್ರ ಅತ್ತ ಮೆಸೆಜ್ ಕೊನೆಯಲ್ಲಿತ್ತು. ಶ್ರೀಕಾಂತ ಅವರ ಬಗ್ಗೆ ಹೇಳಿದ್ದರಿಂದ 'famous writer Vasudhendra'? ಅಂತ ಮರು ರಿಪ್ಲೈ ಕಳುಹಿಸಿದೆ. ಅದನ್ನು ನೋಡಿ ಅವರು ಫೋನ್ ಮಾಡಿಬಿಡೋದಾ? ನಾನು ಫೋನ್ ಎತ್ತಲಿಲ್ಲ ಯಾಕಂದ್ರೆ ನಾನು ಅವರ ಒಂದೂ ಪುಸ್ತಕ ಓದಿರಲಿಲ್ಲ, ಅವರ ಪರಿಚಯ ಕೂಡ ಇರಲಿಲ್ಲ. :-) ಈಗ ಬಿಡಿ ಅವರನ್ನು ತುಂಬಾ ಸತಾಯಿಸುತ್ತೇನೆ. ವಸುಧೇಂದ್ರರ ಬಳಿ ಮಾತಾಡಿದಾಗಲೆಲ್ಲ ಈ ವಿಷಯ ಹೇಳಲು ಮರೆತಿದ್ದೇನೆ. ಇದರ ಲಿಂಕ್ ಅವರಿಗೂ ಕಳಿಸುತ್ತೇನೆ. :-)
ಹಾಗಾದ್ರೆ ಗಮ್ಮತ್ತಿನ ವಿಷಯ ಏನಂತ ಹೇಳಲಾ?? ನನ್ನ ಆಪ್ತ ಸ್ನೇಹಿತೆ ಹಾಗೂ ವಸುಧೇಂದ್ರರ ನಂಬರ್ ಮಿಕ್ಸ್ ಅಪ್ ಆಗಿರಬಹುದು ಆದರೆ ಅವರಿಬ್ಬರೂ ಇರೋದು ಒಂದೇ ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ನಲ್ಲಿ. :-) ಚೆನ್ನಾಗಿದೆಯಾ ಕಾಕತಾಳೀಯದ ಕತೆ?
ವಸುಧೇಂದ್ರರ ಹೊಸ ಪುಸ್ತಕ 'ಮೋಹನಸ್ವಾಮಿ' ಬಂದಿದೆ. ಓದಿದ್ರಾ??
(ಮೋಹನಸ್ವಾಮಿಯ ಕವರ್ ಚಿತ್ರ ತುಂಬಾ ಇಷ್ಟ ಆಯ್ತು. ಹಾಗೆ ಚುಕ್ಕುಬುಕ್ಕುವಿನ ಹೊಸ ವರ್ಷದ ಡೆಸ್ಕ್ ಟಾಪ್ ಕ್ಯಾಲೆಂಡರ್ ಕೂಡ ಚೆನ್ನಾಗಿದೆ. ಬೇಕಿದಲ್ಲಿ ಅವರನ್ನು ಸಂಪರ್ಕಿಸಿ)
ಬಹುಶ: ನಾನು ನನ್ನ ಬ್ಲಾಗ್ ಅನ್ನು ರೆಗುಲರ್ ಆಗಿ ಅಪ್ ಡೇಟ್ ಮಾಡಲ್ಲ ಅನ್ನಿಸುತ್ತೆ. ಬರೀಲಿಕ್ಕೆ/ಕೋರಿಲಿಕ್ಕೆ 5 ವರ್ಷಕ್ಕಾಗುವಷ್ಟು ಸರಕು ಇದೆ ನನ್ನ ಬಳಿ.  ಆದ್ರೆ ಈಗ ನನಗೆ ಸಿಕ್ಕ ಸಮಯದಲ್ಲಿ ನಾನು ಮೊಬೈಲ್ ಗೇಮ್ಸ್  ಗೆ/ whatsapp ಗೆ addict ಆಗಿದ್ದೇನೆ. 
(ಮೊನ್ನೆ ಹುಬ್ಬಳ್ಳಿಯಿಂದ ಟ್ರೈನ್ ನಲ್ಲಿ ಬೆಂಗಳೂರಿಗೆ ವಾಪಸ್ ಆದ್ವಿ. ಜನಶತಾಬ್ದಿಯಲ್ಲಿ. ಇಲ್ಲಿ ಮನೆಯಲ್ಲಿ Wi-Fi (ವೈಫಿ) ಇದೆ ಅಲ್ಲಿ ಅಮ್ಮನ ಮನೆಯಲ್ಲೂ ವೈಫಿ ಇದೆ. ನನ್ನ ಸೆಲ್ ಫೋನ್ ನ ಮೊಬೈಲ್ ನೆಟ್ ವರ್ಕ್ 'on' ಮಾಡಿದೆ. ಆದರೆ ನೆಟ್ ಕನೆಕ್ಟ್ ಆಗಲಿಲ್ಲ. ಓದಲು ತಂದ ಪುಸ್ತಕ ಸೂಟ್ ಕೇಸ್ ಒಳಗೆ ಹೋಗಿತ್ತು. ಆಟ ಆಡುವ ಅಂದ್ರೆ ನೆಟ್ ಇಲ್ಲ. ನನಗೆ AC ನಲ್ಲಿ ಬರೋದು ಅಂದ್ರೆ ಆಗಲ್ಲ. ಮತ್ತು ವಿಂಡೋ ಸೀಟ್ ಕೂಡ ಸಿಕ್ಕಿರಲಿಲ್ಲ. ತುಂಬ ಕಿರಿ ಕಿರಿ ಅನ್ನಿಸ್ತ್ತು. ಸುಮ್ನೆ ಕಿತ್ತಳೆ ಹಣ್ಣು ತಿನ್ನುತ್ತ, ಬಂದಿರುವ ಎಸ್ ಎಮ್ ಎಸ್ ಗಳನ್ನೆಲ್ಲ ನೋಡ್ತಾ ಉತ್ತರ ಹಾಕ್ತಾ ಇದ್ದೆ. ಅಷ್ಟರಲ್ಲಿ wifi is available would you like to connect' ಅನ್ನುವ ಮೆಸೆಜ್ ಸೆಲ್ ಫೋನ್ ಸ್ಕ್ರೀನ್ ನಲ್ಲಿ ಫ್ಲ್ಯಾಶ್ ಆಯ್ತು. ಕೂಡಲೆ ಓಕೆ ಕೊಟ್ಟು ಆಡಲಿಕ್ಕೆ ಶುರು ಮಾಡಿದೆ. ಎಷ್ಟೊಂದು ಜನರಿದ್ರು ಗೊತ್ತಾ ಆಡುವವರು?/ ನನ್ನ ಪಕ್ಕದಲ್ಲಿ ಕೂತವರ ಬಳಿ ಹೈ ಫಂಡಾ apple tablet ಇತ್ತು. ಅದರಲ್ಲಿ ಅವರು Temple run ಆಟ ಶುರು ಹಚ್ಚಿಕೊಂಡ್ರು. ಒಂದು ಪುಟ್ಟ ಹುಡುಗ ಸಾಧಾರಣ 5 ವರ್ಷ ವಯಸ್ಸು ಇರಬಹುದು, ನಾಯಿಯ ಆಟ ಆಡ್ತಾ ಅದು ಗಳಿಗೆಗೊಂದು ಸಲ ವಾಂಯ್ ವಾಂಯ್ ಅನ್ನುತ್ತಾ ಇತ್ತು. ಅವನ ಅಮ್ಮನಿಗೆ 'ಸ್ವಲ್ಪ ವಾಲ್ಯೂಮ್ ಕಡಿಮೆ ಮಾಡಿ' ಅಂತ ರಿಕ್ವೆಸ್ಟ್ ಮಾಡಿದೆ. ಮಾಡಿದರು ಪಾಪ. ಆಮೇಲೆ ಬೆಂಗಳೂರು ತಲುಪಿದ್ದೆ ಗೊತ್ತಾಗಲಿಲ್ಲ.)
Facebook ಚಟ ಆಯ್ತು ಅಂತ ಅದರಿಂದ ಹೊರಗೆ ಬಂದೆ ಈಗ ಇದು. ಮೊಬೈಲ್ ಚಾರ್ಜ್ ಗೆ ಇಟ್ಟಿದಾಗ ಅಥವಾ ಮಕ್ಕಳು ಅದರಲ್ಲಿ ಆಟ ಆಡುವಾಗ ಸಿನಿಮಾ ನೋಡುತ್ತೇನೆ. ಮಿತ್ರರು ಫಿಲ್ಮ್ ಫೆಸ್ಟಿವಲ್ ಗೆ ಹೋಗಲಿಲ್ಲವಾ ಅಂತ ಕೇಳಿದಾಗ 'ಈ ಸಲ ನನ್ನದು ಮನೆಯಲ್ಲೇ ಬೆಂಗಾಲಿ ಫಿಲ್ಮ್ ಫೆಸ್ಟಿವಲ್ ನಡೀತಾ ಇದೆ ಅಂದೆ. ಮಿತ್ರ ರೊಬ್ಬರು ಹಲವಾರು ಬೆಂಗಾಲಿ ಸಿನಿಮಾ  ಕೊಟ್ಟಿದ್ದಾರೆ ಹಾಗೂ ನಿಹಾಳ ಕಾಲೇಜಿನ ಮನು ಸರ್ ಮರಾಠಿ ಸಿನಿಮಾ ಕಳುಹಿಸಲಿದ್ದಾರೆ.
ಒಟ್ಟಾರೆ i am gonna enjoy myself.
ನೀವು??
ಎಲ್ಲರಿಗೂ 2014 ಚೆನ್ನಾಗಿರಲಿ ಎಂದು ಹಾರೈಸುತ್ತ...
:-)
my cooking posts go here
http://malathihatescooking.blogspot.in/