Showing posts with label ಹಣ್ಣಿನ ಪದ್ಯ. Show all posts
Showing posts with label ಹಣ್ಣಿನ ಪದ್ಯ. Show all posts

August 15, 2012

ಮಳೆಗಾಲ/ ಚಳಿಗಾಲಕ್ಕೆ ಒಂದು ಮಸ್ತ್ ಮಸ್ತ್ ಕಡಿ

ದಾಳಿಂಬೆ ಸಿಪ್ಪೆಯ ಕಡಿ (ಕೊಂಕಣಿ preparation)

at last ಮಳೆರಾಯ ನಮ್ಮ ಮೇಲೆ ಕರುಣೆ ತೋರಿಸಿ ಮಧ್ಯ ಮಧ್ಯ ಧೋ ಎನ್ನುವ ಮಳೆ ಸುರಿಸಿ ಬೆಂಗಳೂರನ್ನು ತಂಪಾಗಿಸಿದ್ದಾನೆ. thanks dude!. ಮಳೆಗಾಲ ಆದ್ರೂ ಕೊಡೆ ಇಲ್ಲದೇ ಓಡಾಡುವ ಜನರೇ ಜಾಸ್ತಿ. ಸಣ್ಣ ಪುಟ್ಟ ಮಳೆಗೆ ಕ್ಯಾ ರೆ ಅನ್ನದೇ ಧಾವಂತದ ನಡಿಗೆ, ಮಳೆ ಹನಿ ಜೋರಾದಾಗ ಮರ ದ ಬುಡ ಅಂಗಡಿ ಮುಂಗಟ್ಟೊಳಗೆ ತೂರಿಕೊಳ್ಳುವುದು ಅಥವ ನನ್ನ ಹಾಗೆ big bazaar, food world, hotel ಒಳಗೆ ಹೋಗಿನೂ ಒದ್ದೆಯಾಗುವುದನ್ನು ತಪ್ಪಿಸಬಹುದು.

ಹಾಂ ಮೊನ್ನೆ ಹೀಗೆ ಮಳೆ ಶುರು ಆದಾಗ MTR ಮಳಿಗೆಗೆ ನುಗ್ಗಿದೆ. Believe it or not ಸ್ಯಾಂಪಲ್ ಅಂತ ಬಿಸಿ ಬಿಸಿ ಜಿಲೇಬಿ ಮತ್ತು ಪನೀರ್ ಮಖ್ಖನ್ ಮಸಾಲಾ ಕೊಟ್ರು..ಮೀ ಎಂಜಾಯ್ಡ್..

ಮಳೆಯ ಜತೆ ಚಳಿ ಜ್ವರ ಕೆಮ್ಮು not necessarily in this order....ಹಾಗೂ ಕೆಲವೊಮ್ಮೆ ಕಲುಶಿತ ನೀರಿನಿಂದಾಗಿ ತಲೆದೋರುವ ಹೊಟ್ಟೆಯ ಶೂಲೆಗಳು. ಇವೆಲ್ಲರಿಂದ ತಪ್ಪಿಸಿಕೊಳ್ಳುವುದಕ್ಕಾಗಿ, ಹಾಗೂ  ಶೀತ ಜ್ವರದಿಂದಾಗಿ ನಾಲಿಗೆ ಜಡಗುಟ್ಟಿದ್ದರೆ ಇಗೋ ಇಲ್ಲಿದೆ ದಾಳಿಂಬೆ ಸಿಪ್ಪೆಯ ಕಡಿ


ಬೇಕಾಗುವ ಪದಾರ್ಥಗಳು
ಒಣಗಿದ ದಾಳಿಂಬೆ ಸಿಪ್ಪೆ (8-10 1 inch pieces), ತಾಜಾ ಹೆರೆದ ತೆಂಗಿನಕಾಯಿ, ಎರಡು ಕೆಂಪುಮೆಣಸು, ನಾಲ್ಕು ಕಾಳು ಮೆಣಸು, ಒಂದು ಟೀ ಸ್ಪೂನ್ ಜೀರಿಗೆ, ಹುರಿಯಲು ತುಪ್ಪ, ಹುಣಸೆ ಹುಳಿ, ಒಗ್ಗರಣೆಗೆ ಸಾಸಿವೆ ಕರಿಬೇವು or ಬೆಳ್ಳುಳ್ಳಿ  and last but not the least ಉಪ್ಪು
ತುಪ್ಪದಲ್ಲಿ ಜೀರಿಗೆ ಕಾಳುಮೆಣಸು ಕೆಂಪು ಮೆಣ್ಸು ಹುರಿಯಿರಿ. ಇದಕ್ಕೆ ಸಣ್ಣಕ್ಕೆ ಪೀಸ್ ಮಾಡಿದ ದಾಳಿಂಬೆ ಸಿಪ್ಪೆ ಬೆರೆಸಿ. ಘಂ ಅಂತ ಪರಿಮಳ ಬರುವ ತನಕ ಹುರಿಯಿರಿ. ತಣ್ಣಗಾದ ಮೇಲೆ ಕಾಯಿತುರಿ, ಹುಣಸೆಹಣ್ಣಿನೊಂದಿಗೆ ಉಪ್ಪು ಹಾಕಿ ನೈಸ್ ಆಗಿ ರುಬ್ಬಿ. ಎಷ್ಟು ಬೇಕು ಅಷ್ಟು ನೀರು ಹಾಕಿ ತೆಳ್ಳಗೆ ಮಾಡಿ. ಒಂದೆರಡು ಕುದಿ ಬಂದ ನಂತರ ಸಾಸಿವೆ ಕರಿಬೇವು ಅಥ್ವ ಬೆಳ್ಳುಳ್ಳಿಯ ಒಗ್ಗರಣೆ ಹಾಕಿ. ಬಿಸಿ ಬಿಸಿ ಅನ್ನದೊಂದಿಗೆ very good!!
in the pic: ಬೆಳ್ಳುಳ್ಳಿ ಒಗ್ಗರಣೆ ಹಾಕಿದ ಕಡಿ...

ವಿ.ಸೂ: ನಮ್ಮ ಇತ್ತೀಚಿಗಿನ ಮನೆಗೆ ಬೆಳಕು, ಗಾಳಿ, ಬಿಸಿಲು, ಬಿಸಿಲು ಮಚ್ಚು ಏನು ಇಲ್ಲ. ನಾನು ದಾಳಿಂಬೆ ಸಿಪ್ಪೆಯನ್ನು ಗ್ಯಾಸ್ ಸ್ಟವ್ ಕೆಳಗಡೆ ಇಟ್ಟು ಬಿಡೋದು. ಪೂರ್ತಿ ಅಡುಗೆ ಮುಗಿಸುವಷ್ಟರಲ್ಲಿ ಸಿಪ್ಪೆ ಒಣಗಿರುತ್ತೆ. ಅದನ್ನು ಗಾಳಿಯಾಡದ ಡಬ್ಬಿಯಲ್ಲಿ store ಮಾಡಿಡಿ. ಮೊನ್ನೆ ನಾನು ಮೈಕ್ರೋ ವೇವ್ ನಲ್ಲಿ ಸಿಪ್ಪೆಯನ್ನು ಒಣಗಿಸಿದ್ದು.
ಬಾಯಿ ಹುಣ್ಣು, ಹೊಟ್ಟೆ ನೋವು, ಮಧುಮೇಹಿಗಳಿಗೆ ಉತ್ತಮ ದಾಳಿಂಬೆ.

ಇದೋ ನಿಮಗೆ ಒಂದು ಹಣ್ಣಿನ ಪದ್ಯ..ಈ recipe ಒಂದಿಗೆ free....:-))ಕೊಳ್ಳಿರಿ ಮಧುಗಿರಿ ದಾಳಿಂಬೆ

ನಂಜನಗೂಡಿನ ರಸಬಾಳೆ
ತಂದಿಹೆ ಕೊಡಗಿನ ಕಿತ್ತಳೆ
ಬೀದರ ಜಿಲ್ಲೆಯ ಸೀಬೆಯ ಹಣ್ಣು
ಬೆಂಗಳೂರಿನ ಸೇಬಿನ ಹಣ್ಣು
ಕೊಳ್ಳಿರಿ ಹಿಗ್ಗನು ಹರಿಸುವವು
ಕಲ್ಲುಸಕ್ಕರೆಯ ಮರೆಸುವವು
ಕೊಳ್ಳಿರಿ ಮಧುಗಿರಿ ದಾಳಿಂಬೆ
ಬೆಳವಲ ಬಯಲಿನ ಸಿಹಿಲಿಂಬೆ
ಬೆಳಗಾವಿಯ ಸವಿ ಸಪೋಟ
ದೇವನಹಳ್ಳಿಯ ಚಕ್ಕೋತ
ನಾಲಿಗೆ ಬರವನು ಕಳೆಯುವವು
ದೇಹದ ಬಲವನು ಬೆಳೆಸುವವು
ಗಂಜಾಮ್‌ ಅಂಜೀರ್‌
ತುಮಕೂರ್ ಹಲಸು
ಧಾರವಾಡದ ಆಪೂಸು
ಮಲೆನಾಡಿನ ಅನಾನಸು
ಸವಿಯಿರಿ ಬಗೆಬಗೆ ಹಣ್ಣುಗಳ
ಕನ್ನಡ ನಾಡಿನ ಹಣ್ಣುಗಳ


~ (ಈ ಕವಿತೆ ಬರೆದವರು ಯಾರು??)
ಈ ಪ್ರಶ್ನೆ ಕೇಳಿ ಸುಮಾರು ದಿನದ ಮೇಲೆ ನಿನ್ನೆ ತಾರೀಕು: 25th September 2012 ಗೆ , ಯು.ಎಸ್ ನಲ್ಲಿರುವ ಮಿತ್ರ ಶ್ರೀವತ್ಸ ಜೋಶಿ ಈ ಕವಿತೆಯನ್ನು ಬರೆದವರು : ಕಯ್ಯಾರ ಕಿಞಣ್ಣ ರೈ ಅಂತ ತಿಳಿಸಿದ್ದಾರೆ. ಅವರಿಗೆ ಧನ್ಯವಾದಗಳು.

so ಹಣ್ಣು ತಿಂದು ಖುಶಿಯಾಗಿರಿ. ಎಲ್ಲರಿಗೂ 65 ನೇ ಸ್ವಾತಂತ್ರೋತ್ಸವದ ಶುಭಾಶಯಗಳು...ಪ್ರಣಬ್ ದಾ ಗೆ ಒಂದು goodluck ಹೇಳುವಾ??!!

ಇವತ್ತು ಅಂದರೆ ಆಗಸ್ಟ್ 17, 2012 ರಂದು ವಿಜಯಕರ್ನಾಟಕದಲ್ಲಿ ನನ್ನ ದಾಳಿಂಬೆ ಸಿಪ್ಪೆ ಕಡಿ ಪೋಸ್ಟ್ mention ಆಗಿದೆ. ನನ್ನ ಬ್ಲಾಗ್ ತಮ್ಮ ಬದರಿನಾಥ ಪಲವಳ್ಳಿಯವರು ಇದರ ಬಗ್ಗೆ ನನಗೆ alert ಮಾಡಿದ್ದು. Thanks Badari for noticing..
:-)