Showing posts with label ವನಜಕ್ಕ. Show all posts
Showing posts with label ವನಜಕ್ಕ. Show all posts

August 10, 2012

ಉಡುಪಿ ರುದ್ರಭೂಮಿಯ ಉಸ್ತುವಾರಿ ನೋಡಿಕೊಳ್ಳುವ- ವನಜಕ್ಕ

ಜೀವನೋಪಾಯಕ್ಕೆ ಹೊಸ ದಾರಿಯನ್ನು ಮಹಿಳೆ ಕೈಗೊಂಡರೆ ಅದು ನನ್ನ ಕುತೂಹಲ ಕೆರಳಿಸುತ್ತದೆ. ಭೈಯನವರ ಅಂತ್ಯಸಂಸ್ಕಾರ ಮುಗಿಸಿ ಬಂದ ಕೂಡಲೆ ಶ್ರೀಕಾಂತ ನನಗೆ ಹೇಳಿದ್ದು 'ಮಾಲತಿ ಅಲ್ಲಿ ಸ್ಮಶಾನ ನೋಡಿಕೊಳ್ಳುವವರು ಮಹಿಳೆ' ಅಂತ. ನನಗೆ ಸೋಜಿಗವೆನಿಸಿ ನಿಹಾರಿಕಳಿಗೆ ಈ ಸಂಗತಿಯನ್ನು ರವಾನಿಸಿದೆ
ಗಂಡ ಕುಡಿತದಿಂದ ತೀರಿಕೊಂಡಾಗ ಪುಟ್ಟ ಪುಟ್ಟ ಮೂರು ಮಕ್ಕಳನ್ನು ಕರೆದುಕೊಂದು ವನಜಕ್ಕ ಸ್ಮಶಾನಕ್ಕೆ ತಲುಪಿದರು. ಅಲ್ಲಿ ಒಂದು ಪುಟ್ಟ ಸೂರು ಕಟ್ಟಿ ಜೀವಿಸಲಾರಂಭಿಸಿದರು. ಗಂಡನ ಕಸುಬು ಇದೇ ಆಗಿತ್ತು. ಅವರು ವಿಪರೀತ ಕುಡಿತದಿಂದ ಆಸ್ಪತ್ರೆಗೆ ದಾಖಲಾದಾಗ, ವನಜಕ್ಕ ಸ್ಮಶಾನದಲ್ಲಿನ ಕಾಯಕಗಳನ್ನು ಮಾಡಲು ಉಪಕ್ರಮಿಸಿದರು. ಗಂಡ ಆರೋಗ್ಯದಿಂದಿದ್ದ್ದಾಗ ಅವರೊಡಗೂಡಿ ಕೆಲಸ ಮಾಡಿದ ಅನುಭವ ವನಜಕ್ಕನ ನೆರವಿಗೆ ಬಂತು. ನಿಹಾ ಮತ್ತು ಅವಳ ಸ್ನೇಹಿತೆ ಶೀತಲ ಭಟ್ ತೆಗೆದಿರುವ ಫೋಟೊಗಳು.

ವನಜಕ್ಕ- ಹಲವಾರು ಸಂಘ ಸಂಸ್ಥೆಗಳು ವನಜಕ್ಕನನ್ನು ಸಮ್ಮಾನಿಸಿವೆ


registration, ಹೆಸರು, ವಿಳಾಸ ಇತ್ಯಾದಿ


ದಹನ ಕ್ರಿಯೆಗೆ ಸಜ್ಜಾಗ್ತಾ ಇರೋದು

ಮೊದಲು ಭಾರವಾದ ಕಟ್ಟಿಗೆಗಳನ್ನೆಲ್ಲ ತೊಂದರೆ ಆಗುತ್ತಿತ್ತಂತೆ, ಈಗ drudgery reduction ಉಪಾಯಗಳಿಂದ ಕಟ್ಟಿಗೆಯ ಚಿಕ್ಕ ಚಿಕ್ಕ ತುಂಡುಗಳನ್ನು ಮಾಡಬಹುದಂತೆ

hmm what about poor people?? :-(


ಅವರ ಬಗ್ಗೆ ಪತ್ರಿಕೆಗಳಲ್ಲಿ ಬಂದಿದ್ದು ಸಂತೋಷದಿಂದ ತೋರಿಸಿಕೊಂಡಿದ್ದು





ದಹನಕ್ಕೆ ಎಲ್ಲ ರೆಡಿ


ಕೆಳಗಿನಿಂದ ಬೆಂಕಿ ಹೊತ್ತಿಸುತ್ತಿರುವುದು

ಸ್ಥಿತ ಪ್ರಜ್ಞತೆ ..ಏನೋ ಹಳೆಯ ನೆನಪುಗಳು

ಸಿಲಿಕೊನ್ ಬರ್ನರ್ನಿಂದ ಈಗ ಕೇವಲ ಅರ್ಧ ಗಂಟೆಯಲ್ಲಿ ಒಂದು ದೇಹ ಸುಡಬಹುದಂತೆ. ಏಕಕಾಲಕ್ಕೆ 5 ದೇಹವನ್ನು ಸುಡುವ ಸೌಕರ್ಯ ಇದೆ.

ಆಗಲೆ ಬಂದ ಇನ್ನೊಂದು ಶವ

ಹಳೆಯ ಕತೆಯನ್ನೆಲ್ಲ ನಿಹಾ-ಶೀತಲ್ ಜತೆ ಹಂಚಿಕೊಂಡಿದ್ದು

accident ನಲ್ಲಿ ತೀರಿಕೊಂಡ ಮೂವರು ಚಿಕ್ಕ ಮಕ್ಕಳ ದೇಹ ಸಂಸ್ಕಾರ ಮಾಡಿದ್ದು ಇನ್ನೂ ಅವರಿಗೆ ಕಾಡುತ್ತದೆಯಂತೆ..

Sharing a lighter moment with the family of the deceased

ಇನ್ನೊಂದು ಬಾಡಿ...ಹೇಗಲ್ಲವಾ?? ಭೈಯ್ಯನವರ ಅಂತ್ಯಸಂಸ್ಕಾರಕ್ಕೆ ಬಂದ ಯಾರೋ ಒಬ್ಬರು (ಹತ್ತಿರದ ಸಂಬಂಧಿಕರು) ಫೋನ್ ನಲ್ಲಿ 'ಇನ್ನೂ ಮಣಿಪಾಲದಿಂದ ಬಾಡಿ ಬಂದಿಲ್ಲ ಅಂದಾಗ ನನ್ನ ಜೀವ ಎಲ್ಲ ವಿಲಿವಿಲಿಗುಟ್ಟಿತ್ತು...ಭೈಯ್ಯ ಸಿರ್ಫ್ ಏಕ್ ಬಾಡಿ ಬನ್ ಕೆ ರೆಹ ಗಯೇ..ಅಂತ..ಛೆ! :-(


ಈ ಚಿತ್ರ ಬರಹದ ಶ್ರೇಯ ನಿಹಾರಿಕಾ ಹಾಗೂ ಶೀತಲ್ ಭಟ್ ಅವರಿಗೆ ಸೇರುತ್ತದೆ.' ನಮ್ಮ ಮಾನಸ' ಪತ್ರಿಕೆಯಲ್ಲಿ ಇವರ ಚಂದದ ಬರಹ ಬಂದಿದೆ.

ಮರುದಿನ ವನಜಕ್ಕ ಹೇಳಿದ ಸಮಯಕ್ಕೆ ಶ್ರೀಕಾಂತ, ಅವರ ಭಾವ ಎಲ್ಲ ಹೋದಾಗ ಅಪರ ಕ್ರಿಯೆಗೆ ಬೇಕಾದ ಅಸ್ತಿಗಳನ್ನು ನೀಟಾಗಿ ಜೋಡಿಸಿಟ್ಟಿದ್ದರಂತೆ. ಮನೆಯಿಂದ ಬರುವಾಗ ಒಂದು ಗೋಣಿ ಚೀಲ, ಒಂದು ಮುಚ್ಚಳ ಇದ್ದ ಡಬ್ಬ ಹಾಗೂ ಚಿಕ್ಕ ದಾರ ತರಲು ವನಜಕ್ಕ ಹಿಂದಿನ ದಿನ ವನಜಕ್ಕ ಸೂಚಿಸಿದ್ದರು.
ಸಾವು. ನೋವು, ಗೋಳು ಇವನ್ನೆಲ್ಲ ದಿನ ನಿತ್ಯ ನಿಭಾಯಿಸುವ Vanajakkaನಿಗೊಂದು hats off...ಹೇಳೋಣವೇ?