January 24, 2024

ಮೈಸೂರು - a quick trip & back

 ನಿಹಾ ಗೆ ಮೈಸೂರಿನ 'ಅರಿವು' ಶಾಲೆಗೆ ಭೇಟಿ ನೀಡಲು ಆಹ್ವಾನ ವಿತ್ತು. ಅಕ್ಕ ನಿಗೆ 'ಉಚಿತ ಪ್ರಯಾಣ' ಯೋಜನೆ ಅಡಿ ಒಂದ್ಸಲ  ಎಲ್ಲಾದರೂ ಹೋಗ ಬೇಕೆಂಬ ಆಸೆ ಇತ್ತು. ಹೇಗೂ ಮೊನ್ನೆ ಶುಕ್ರವಾರ ಆಕೆಗೆ ಕೇಕ್ ಆರ್ಡರ್ ಇರಲಿಲ್ಲ, ನಿಹಾ ಗೆ ಕೆಲಸದಿಂದ ಬ್ರೇಕ್ ಬೇಕಿತ್ತು. ನಾನಂತು ಯಾವಾಗಲೂ, ಎಲ್ಲಾದರೂ ಹೋಗಲು ever ready. 

4 ಗಂಟೆಗೆ ಎದ್ದು ಅವಲಕ್ಕಿ ಮತ್ತು ಬ್ರೆಡ್ sandwich ತಯಾರು ಮಾಡಿ, ನೀರು, ಸ್ನ್ಯಾಕ್ಸ್ ಮುಂತಾವುಗಳನ್ನು ಪ್ಯಾಕ್ ಮಾಡಿ 5.45 ಗೆ ಓಲಾ ಬುಕ್ ಮಾಡಿ ಮೇಜಿಸ್ಟಿಕ್ ಗೆ ಬಂದೆವು. ಓಲಾ ದವನಿಗೆ ದುಡ್ಡು ಪಾವತಿಸುತ್ತ, ಮೈಸೂರು ಬಸ್ ಎಲ್ಲಿ ಅಂತ ಕೇಳಿದಾಗ 'ಅಯ್ಯೋ ಮ್ಯಾಡಮ್ ಇಲ್ಲಿಗ್ಯಾಕೆ ಬಂದ್ರಿ? satellite ಟೌನ್ ಗೆ ಹೋಗೋದಲ್ವಾ?   ಯಾವುದಕ್ಕೂ terminal2 ರಲ್ಲಿ ವಿಚಾರಿಸಿ...ಅಲ್ಲಿಂದ satellite ಟೌನ್ ಗೆ ಬೆಜ್ಜಾನ್ ಬಸ್ ಗಳು ಓಡಾಡ್ತಾವೆ' ಅಂದಾಗ ಅವನಿಗೆ ಧನ್ಯವಾದ ಹೇಳಿ,..(ಈ ವರೆಗೆ ಮೈಸೂರಿಗೆ ಹಲವು ಬಾರಿ ನಾವು  ಬಾಡಿಗೆಗೆ ಗಾಡಿ ಮಾಡಿ ಕೊಂಡೆ  ಹೋಗಿದ್ದು) ಇನ್ನೂ ಎರಡು ಮೂರು ಅಂಗಡಿಯವರಿಗೆ  ಕೇಳಿ...ಟರ್ಮಿನಲ್ 2 ಗೆ ಹೋದೆವು. ಅಲ್ಲಿ ಬೆಂಗಳೂರು ಮೈಸೂರು A C ಬಸ್ ಒಂದು ನಿಂದಿತ್ತು. ಅದರೊಳಗೆ ಹೋಗಿ ಕೂತೆವು.  ನಾವು ಮೂರು ಜನ ಬಿಟ್ರೆ ಇನ್ನೊಬ್ಬರು ಗಂಡಸರು ಮಾತ್ರ ಅಷ್ಟು ದೊಡ್ಡ ಬಸ್ ನಲ್ಲಿ. ಅಷ್ಟರಲ್ಲಿ ಪಕ್ಕದಲ್ಲಿ ಸೆಟಲೈಟ್ ಟೌನ್ ಗೆ ಹೋಗುವ ಬಸ್ ಬಂತು. ನಮಗೆ A C ಬಸ್ ಅಷ್ಟು ಆಗಿ ಬರಲ್ಲ..ಅದಕ್ಕೆ ಟೌನ್ ನಲ್ಲಿ non A C ಬಸ್ ಸಿಗಬಹುದೆಂದು, ಆ ಬಸ್ ಹತ್ತಿದೆವು. 10 ನಿಮಿಷದಲ್ಲಿ ಬಸ್ ತುಂಬಿದ್ದು,  10 ನಿಮಿಷಕ್ಕೆ ಸಟಲೈಟ್ ಟೌನ್ ತಲುಪಿದ್ದೂ ಆಯ್ತು. ಅಲ್ಲಿ ಹಲವಾರು ಬಸ್ ಗಳು ಮೈಸೂರಿಗೆ ಹೊರಡಲು ಸಿದ್ಧವಾಗಿದ್ದವು. ಒಂದರಲ್ಲಿ ಹತ್ತಿ ಕೂತೆವು. ಜಾಗ ಸಿಕ್ಕಿತು ಹೇಗೂ. ಉಚಿತ ಪ್ರಯಾಣ. 6.15 ಗೆ ಬಿಟ್ಟ ಬಸ್ ಎರಡು ಮೂರು ಕಡೆ ನಿಂತು 9.45 ಗೆ ಮೈಸೂರಿಗೆ ತಲುಪಿದೆವು. ಟೈಮ್ ಇದ್ದ ಕಾರಣ  ವಿಷ್ಣುಪ್ರಸಾದ್ ಗೆ ಹೋಗಿ ಎರಡನೇ ರೌಂಡ್ ಬ್ರೆಕ್ಫಾಸ್ಟ್ ಮಾಡಿದೆವು. ನನಗೆ ಬಿಸಿ ಟಿ ಬೇಕಿತ್ತು. ಆರಾಮಾಗಿ ತಿಂಡಿ ತೀರ್ಥ ಮುಗಿಸಿ, ಅವರ ರೆಸ್ಟ್ ರೂಮ್ ಉಪಯೋಗಿಸಿ,  ಹೊರ ಬಂದಾಗ ಆಟೊ ದವ ಸಿಕ್ಕಿದ. ಎಲ್ಲಿಗೆ ಹೋಗಬೇಕು ಅಂದಾಗ ನಾನು ಮೊದಲಿಗೆ ನಿಹಾ ಹೋಗ ಬೇಕಾದ ಜಾಗ, ಶುಕವನ ಅಂತೆಲ್ಲ ಹೇಳುವಾಗ..' ಮೀಟರ್ ಮೇಲೆ ಎಲ್ಲಿಗೆ ಹೋಗಬೇಕೋ ಅಲ್ಲೆಲ್ಲ ಕರೆದುಕೊಂಡು ಹೋಗುವುದಾಗಿ ಹೇಳಿದ. ನಮಗೂ ಖುಷಿ ಯಾಯ್ತು. ಅವನ ಹೆಸರು ಸೋಮು.

ಇಲ್ಲಿವೆ ಕೆಲ ಚಿತ್ರಗಳು

ಮೊದಲು ಲಿಂಗಾಂಬುದಿ ಕೆರೆ... ನವೀಕರಿಸುವ ಕೆಲಸ ಭರದಿಂದ ಸಾಗಿದೆ









ಆಮೇಲೆ ಕಾರ್ಯಸಿದ್ಧಿ ಹನುಮಂತ. ಶುಕವನ  ತಾತ್ಕಾಲಿಕವಾಗಿ ಬಂದ್ ಮಾಡಿದ್ದಾರೆ. ದೇವಸ್ಥಾನದ ಆವರಣ ಚೆನ್ನಾಗಿದೆ. ರಾಮ ಭಜನೆ ಸಾಗಿತ್ತು. ದೂರದಿಂದ ಟೆಂಪೋ ಮಿನಿ ಬಸ್ ನಲ್ಲಿ ಬಂದು ಪೂಜಾ ಕಾರ್ಯದಲ್ಲಿ ಪಾಲ್ಗೊ0ಡಿದ್ದರು ಸುಮಾರು ಜನ. ಒಂದೇ ತರಹದ ಕಾವಿ ಬಣ್ಣದ ಸೀರೆ ಉಟ್ಟ ಭಕ್ತಾದಿ ಮಹಿಳೆಯರು. 12.30 ಗೆ ಮಂಗಳಾರತಿ ಆದಮೇಲೆ ದೇವಸ್ಥಾನ ಖಾಲಿ ಆಯ್ತು. ಹರಳು ಕಲ್ಲು ಅಳವಡಿಸಿದ ದೊಡ್ಡ ಹನುಮನ ಮೂರ್ತಿ. ಒಳಗಡೆ ಹೋದಾಗ ನನಗೆ ಸ್ಟೀಲ್ barricade annu ಹೊತ್ತು ಇಡುವ ಕೆಲಸ ಕೊಟ್ಟರು 😄. ಮಾಡಿದೆ. ಭಜನೆ ಮಂದಿ ಗೆ ಕೂರಲು  ಆನೂಕೂಲ ವಾಗುವಂತೆ ಅವನ್ನೆಲ್ಲ ಬದಿಗೆ ದೂಡಿಟ್ಟಿದ್ದರು.


ಏನಾದರೂ ಸಂಕಲ್ಪ (ಆಸೆ/ಅಭಿಲಾಷೆ) ಮಾಡಿ ಒಂದು ಸುಲಿಯದೆ ಇರುವ ತೆಂಗಿನಕಾಯಿ ಗೆ ಪೂಜೆ ಮಾಡಿ, ಅದನ್ನು ಹಿಡಿದುಕೊಂಡು ದೇವಸ್ಥಾನದ 12 ಪ್ರದಕ್ಷಿಣೆ ಮಾಡಿ, ಆ ತೆಂಗಿನಕಾಯಿಯನ್ನು ಒಂದು hall ನಲ್ಲಿ ಕಂಬಕ್ಕೆ ದಾರದಿಂದ ಜೋಡಿಸಬೇಕು....ಸಂಕಲ್ಪ ಪೂರ್ಣಗೊಳ್ಳುತ್ತದೆ ಎಂದು ನಂಬುವವರು.....👍👍
 ಮಿತ್ರ ರವೀಂದ್ರ ಮಾವಖಂಡ ಅವರಿಗೆ ಫೋನ್ ಮಾಡಿದ್ದೆ. ಅವರು ಅವರ ಸಂಸ್ಥೆ ಗೆ ಬರಲು ಆಹ್ವಾನವಿತ್ತರು.  ಪಂಚವಟಿ gardenia ದಲ್ಲಿ ಊಟ ಮಾಡಿ ಅವರಲ್ಲಿಗೆ ಹೋದ್ವಿ. ಅವರು ಮತ್ತು team ತಾಳೆಗರಿಯ ಬರಹಗಳನ್ನು ಸಂರಕ್ಷಿಸುವ ಕಾಯಕದಲ್ಲಿ ತೊಡಗಿದ್ದಾರೆ. 


ಅರ್ಧ ಗಂಟೆ ಅಲ್ಲಿ spend ಮಾಡಿ 'ಸಾಪಾ' ಅನ್ನುವ ಬೇಕರಿಗೆ ಭೇಟಿ ನೀಡಿ ಸಂಜೆ 4.45 ದುಡ್ಡು ಕೊಟ್ಟು ಬಸ್ಸಿಗೆ ಕೆಂಗೇರಿ ಯಲ್ಲಿಳಿದು ಅಲ್ಲಿಂದ ಮೆಟ್ರೋ ದಲ್ಲಿ ಮನೆಗೆ ಮರಳಿದೆವು. ಈ ಸಲ ಎರಡೇ ಗಂಟೆಯಲ್ಲಿ ಕೆಂಗೇರಿಯಲ್ಲಿದ್ದೆವು



ರಾತ್ರಿ ಏನು ಅಡಿಗೆ ಮಾಡುವ ಅಂತ ಆಲೋ  ಚಿಸಬೇಕಾದ್ರೆ ಶ್ರೀಕಾಂತ್ ಫೋನ್ ಮಾಡಿ ಹೊರಗಿನಿಂದ ಏನಾದ್ರು ತರುತ್ತೇನೆ ಅಂತ ಹೇಳಿದ್ರು...ಖಶಿಯಾಯ್ತು...a day well spent 😄😄❤️






No comments: