January 4, 2018

ರಂಗಶಂಕರದಲ್ಲಿ ನಿನ್ನೆ


ನಿನ್ನೆ ಆಫಿಸ್ ಸ್ಟಾಫ್ ಎಲ್ಲಾ ಜೆ ಪಿ ನಗರದಲ್ಲಿರುವ 24th Main ರೆಸ್ಟಾರಂಟ್ ಗೆ ಹೊಸ ವರ್ಷದ ಪಾರ್ಟಿ ಅಂತ ಹೋಗಿದ್ದರು. ಅಲ್ಲಿಂದ ಬರ್ತಾ ಶ್ರೀಕಾಂತ ಮತ್ತು ಸಾಲಿಮಠರು ರಂಗಶಂಕರಕ್ಕೆ ಹೋಗಿದ್ದರು. ಹೋಗಿ ಅಲ್ಲಿಂದ ನನಗೆ ಫೋನ್ ಮಾಡಿ 'ಇವತ್ತು ಸಂಜೆ ೭,೩೦ ಗೆ 'ಸಾಹೇಬರು ಬರುತ್ತಾರೆ ' ನಾಟಕ ಇದೆ. ಚೆನ್ನಾಗಿದೆಯಂತೆ ಟಿಕೆಟ್ ಬುಕ್ ಮಾಡಲಾ ' ಅಂತ ಫೋನ್ ಮಾಡಿದರು. ನನಗೆ ಕಳೆದ ಎರಡು ರಂಗಶಂಕರದ ನಾಟಕಗಳು ತುಂಬಾ ನೀರಸ ಎನ್ನಿಸಿದಿದೆ. ನಾನು ಮಿನ ಮೇಷ ಏಣಿಸ್ತಿರಬೇಕಾದ್ರೆ. ಹೋಗುವ ಟಿಕೆಟ್ ಬುಕ್ ಮಾಡ್ತೇನೆ , ಮೊದಲು ಒಂದು ಸಲ ನೋಡಿದ್ದೇನೆ ಕಾಮೆಡಿ ಅಂದ್ರು. ನಾನು ಸರಿ ಎಂದೇ. 
ನಾನು ೬.೪೫ ಗೆ ಅಲ್ಲಿ ತಲುಪಿದೆ. ಇವರು ಇನ್ನು ಸೌತ್ ಎಂಡ್ ನಲ್ಲಿರೋ ನಮ್ಮ ಆಫಿಸ್ ನಿಂದ ಹೊರಟಿರಲಿಲ್ಲ. ಮತ್ತು ಹಸಿವೆಯಾಗಿದೆ ಏನಾದ್ರೂ ತಿನ್ನುಕೊಂಡು ಬರ್ತೇವೆ ಅಂದ್ರು. 'ಬೇಗ ಬನ್ನಿ ಲೇಟ ಆದ್ರೆ ನಿಮಗೆ ಎಂಟ್ರಿ ಇಲ್ಲ ' ಅಂದೆ. (ಆದ್ರೆ ರಂಗಶಂಕರಾದವರು ನಾಟಕ ಶುರು ಮಾಡುವಲ್ಲಿ ಸ್ವಲ್ಪಾಲೆಟ್ ಮಾಡುವುದು ಕಳೆದ ಹಲವಾರು ಬಾರಿ ಗಮನಿಸಿದ್ದೇನೆ . ಒಂದು ಸಲ ಅಂತೂ ಪ್ರೇಕ್ಷಕರಿಂದ 'ಟೈಮ್ ಆಯ್ತು ಶುರು ಮಾಡಿ 'ಅಂತ ಕೂಗಿದ್ದು ಇದೆ. 

                                     
ರಂಗಶಂಕರದ ಪುಸ್ತಕ  ಒಂದುರೌಂಡ್ ಹಾಕಿದೆ. ಮನೆಯಲ್ಲಿ ಪುಸ್ತಕದ ಕಪಾಟು ಭರ್ತಿಯಾಗಿದೆ.  ಅದಕೆ ಪುಸ್ತಕ ನೋಡಿದ್ದು ಮಾತ್ರ. ಖರೀದಿಸಲಿಲ್ಲ. ಇತ್ತೀಚಿಗೆ ವಸುಧೇಂದ್ರ ರ ವಿಷಮ ಭಿನ್ನ ರಾಶಿ ಪುಸ್ತಕ ಕೊಂಡಿದ್ದು ಬಿಟ್ಟರೆ ನಾನು ಪುಸ್ತಕದ ಅಂಗಡಿ ಕಡೆ ತಲೇನೆ ಹಾಕಿಲ್ಲ. ವಸುಧೇಂದ್ರರ ಪುಸ್ತಕ ತೀರ್ಥಹಳ್ಳಿಯಲ್ಲಿ ಬಿಟ್ಟು ಬಂದಿದ್ದೇನೆ. ಇನ್ನು ಓದಿಲ್ಲ. 

೭ ಗಂಟೆಗೆ ಜನರೆಲ್ಲಾ ಸರತಿ ಸಾಲಿನಲ್ಲಿ ನಿಲ್ಲಲ್ಲು ಆರಂಭಿಸಿದರು. ಶ್ರೀಕಾಂತ ಮತ್ತು ಸಾಲಿಮಠರು ೭. ೫ ಗೆ ತಲುಪಿದರು. ಸುಮ್ಮನೆ ಬರಲಿಲ್ಲ ನನಗೆ ಅಂತ ಮಿರ್ಚಿ ಬೊಂಡ  ತಂದಿದ್ದರು. ಅದು ಒಂದುಪೇಪರ್ ಪ್ಲೇಟ್ ನಲ್ಲಿ ಸುತ್ತಿ. ಸಾಲಿನಲ್ಲಿ ನಿಂತು ನಾನು ತಿನ್ನುವುದಾ? ಆಗಲೇ ಜನರನ್ನು ಒಳಗೆ ಬಿಡಲು ಆರಂಭಿದ್ದರು. ಒಳ್ಳೆ ಸೈಟ ಸಿಗಲ್ಲ ಅಂತ ನಾವು ಬೇಗ ಬೇಗ ಮೆಟ್ಟಿಲು ಹತ್ತಿ ಒಳಗೆ ಹೋದೆವು.  ನನ್ನ ಬಳಿ ಕವರ್ ಇರಲಿಲ್ಲ. ಅದಕ್ಕೆ ಒಂದು ಟೀಶ್ಯು  ಪೇಪರ್ನಲ್ಲಿ ಬೊಂಡಾಗಳನ್ನು ಸುತ್ತಿ ನನ್ನ ವ್ಯಾನಿಟಿ ಬ್ಯಾಗ್ ನಲ್ಲಿ ಹಾಕ್ಕೊಂಡೆ . ಮಧ್ಯದ ಮೂರನೇ ಸಾಲಿನಲ್ಲಿ ಕೆಲವು ಸೀಟ್ ಖಾಲಿ ಇದ್ದವು , ಅಲ್ಲೇ ಹೋಗಿ ತುರುಕಿಕೊಂಡೆವು. ನಮ್ಮ ಸೈಜ್ ಸ್ವಲ್ಪ ಜಾಸ್ತಿ ಆಗಿದೆ.  ಅದಕೆ ತುರುಕಿಕೊಂಡಿದ್ದು. :-(  ಜ್ಯಾಮ್ ಪ್ಯಾಕ್ ಅಂತಾರಲ್ಲವಾ ಹಾಗೆ. 

ನಾಟಕ ಶುರು ಆದ ಸ್ವಲ್ಪ ಹೊತ್ತಿನಲ್ಲೇ ನನ್ನ ಪಕ್ಕ ಕೂತ  ಹೆಂಗಸು ನನ್ನ ಕಡೆ ಓರೇ ಕಣ್ಣು ಮಾಡಿ ನೋಡಲು ಶುರು ಮಾಡಿದರು.  ಆಮೇಲೆ ನನ್ನ ಪರ್ಸ್ ನೋಡಿದರು .  ಮೊದಮೊದಲು ನನಗೆ ಅರಿವಾಗಲಿಲ್ಲ. ಆಮೇಲೆ ಅವರು ಅಕ್ಕ ಪಕ್ಕ, ತಾವು ಹಾಕಿಕೊಂಡ ಬಟ್ಟೆ ಹಾಗು ಮೆಲ್ಲಗೆ ನನ್ನ ಬಳಿ ಸರಿದು  ಮೂಸಲು ಆರಂಭಿಸಿದರು. ಅವರ ಇನ್ನೊಂದು ಪಕ್ಕ ಕೂತ  ಅವರ ಜತೆ ಬಂದ ಗಂಡಸಿಗೆ 'ಏನು ತಿಂದು ಬಂದ್ಯಾ? ಅಂತ ಕೂಡ ಕೇಳಿದರು .  ಮಾರಾಯ್ರೇ ಆಗ ನನ್ನ ಟ್ಯೂಬಲೈಟ್ ಹತ್ತಿಕೊಂಡಿದ್ದು. ನಮ್ಮ ರಾಯರ ಕರಾಮತೀಯ ಬೋ೦ಡಗಳು.  ತುಂಬಾ ಮುಜುಗರ ಆಯ್ತು. ನಾವು ನೀರಿನ ಬಾಟಲ್, ಮೊಬೈಲ್, ನನ್ನ ವಿಕ್ಸ್ ಕಿ ಗೋಲಿ, ಎಲ್ಲ ಕಾಗಿ ಪರ್ಸ್ ತಡಕಾಡುವಾಗಲೆಲ್ಲ  ಬೋ೦ಡಾದ ಒಂತರಹ ಪರಿಮಳ.  ಪಕ್ಕ ಕೂತವರು ಇನ್ನು ಹಿಂದೆ ಮುಂದೆ ಜರುಗುತ್ತಾ ಮೂಸುವುದನ್ನು  ಆರಂಭಿಸಿದಾಗ ನನಗೆ ಮುಜುಗರ ಕಡಿಮೆಯಾಗಿ ಮಜವೆನಿಸಲು ಆರಂಭವಾಯಿತು. ನನ್ನ ಪುಣ್ಯಕ್ಕೆ ಕಾಮಿಡಿ ನಾಟಕ ಆಗಿದ್ದು ಒಳ್ಳೆ ಆಯ್ತು ಎಲ್ಲರು ನಗುವಾಗ ನಾನು  ನನ್ನ ಪಕ್ಕದವರ   ಚಡಪಡಿಕೆ ನೋಡಿ ಟಾ೦ಯ್ ಅಂತ ಬೊಂಡ ಹೊರಗೆ ತೆಗೆದು ಅವರಿಗೆ ತೋರಿಸಿದರೆ ಅಂದುಕೊಂಡು   ಮುಸಿ ಮುಸಿ ನಗಲಾರಂಭಿಸಿದೆ . ಒಂದು ಸಲ ಸೈಲೆನ್ಸ್ ಇದ್ದಾಗ ಕಿಸಕ್ ಅಂತ ನಕ್ಕೆ. ಶ್ರೀಕಾಂತ್ ನನಗೆ 'ಯಾಕೆ ನಗ್ತಿದ್ದೀಯಾ ಅಂತ ಕೇಳಿದಾಗ ಏನಿಲ್ಲ ಅಂತ ತಲೆ ಅಲ್ಲಾಡಿಸಿದೆ. 
ನಾಟಕ ಸಾಧಾರಣವಾಗಿತ್ತು. ಕೆ.ವಿ. ಸುಬ್ಬಣ್ಣ ಹಾಗು ಕೆ.ವಿ ಅಕ್ಷರ ಅನುವಾದಿಸಿದ್ದ ನಿಕೊಲಾಯ್ ಗೊಗೊಲ್ ಬರೆದ  ರಷಿಯನ್ ನಾಟಕ ,Inspector General. ಅದನ್ನು ಆಧುನಿಕರಿಸಿ ನಾಟಕ ಮಾಡಿದ್ದಾರೆ. ಅದರಲ್ಲಿ ಮೋದಿ, ಪಪ್ಪು, ಇಟಲಿ , Nation wants to know ಎಲ್ಲ ಸಭಿಕರನ್ನು ನಗಿಸುವಲ್ಲಿ ಯಶಸ್ವಿಯಾದವು. 

ದೊಡ್ಡ ಹುದ್ದೆಯಲ್ಲಿರುವ ಆಫಿಸರ್ ಒಬ್ಬರು ಬರುತ್ತಾರೆಂದು ತಯಾರಾಗುವ ಸರಕಾರೀ ಕಾರಕೂನರು, ಮೇಯರ್ ಅವರ ನೇತೃತ್ವದಲ್ಲಿ ಬೇರೊಬ್ಬ ಸಾಧಾರಣ ಮನುಷ್ಯನನ್ನು ದೊಡ್ಡ  ಆಫಿಸರ್ ಎಂದು ಭಾವಿಸಿ ಅವನನ್ನು ಮಸ್ಕಾ ಹೊಡೆದು. , ಆ ವ್ಯಕ್ತಿ ಕೂಡ ಇವರನ್ನು ಮಂಕುಬೂದಿ ಎರಚುತ್ತಾ , ಎಲ್ಲರು ಕೊನೆಗೆ ಇಂಗು ತಿಂದ ಮಂಗನಂತಾಗಿ ಒಬ್ಬರನ್ನೊಬ್ಬರು ಆರೋಪಿಸುತ್ತ,ಅವರವರ ಕಪಟ ಮುಖವಾಡಗಳನ್ನು ತೆರೆಯುತ್ತಾ,  ನಾಟಕ ಕೊನೆಗೊಳ್ಳುತ್ತದೆ 
ಹಲವಾರು ವರ್ಷಗಳ ಹಿಂದೆ ನಾವು ಕಾಲಜಿನಲ್ಲಿ ಈ ನಾಟಕ ಮಾಡಿದ್ದ ನೆನಪು. ಅದು ಇದ್ದಕ್ಕಿಂತ ಚೆನ್ನಾಗಿತ್ತು ಅನ್ನಿಸ್ತು. ನಿನ್ನೆಯ ನಾಟಕ ಸೆಪ್ಪೆಯಾಗಿತ್ತು.

ಮನೆಗೆ ಬಂದು ಮೈಕ್ರೋವೇವ್ ನಲ್ಲಿ ಬೋ೦ದಗಳನ್ನು ಬಿಸಿಮಾಡಿ, ನಾಟಕದಲ್ಲಿ ನಮ್ಮ ಕಾಮೆಡಿ ಬಗ್ಗೆ ಮಕ್ಕಳೊಂದಿಗೆ ಶೇರ್ ಮಾಡ್ತಾ  ಗುಳುಂ  ಮಾಡಿದ್ವಿ. 

2 comments:

Radhika said...

It was nice reading all the new posts Malathi! Bonda story was too good :-D

nenapina sanchy inda said...

Thank you Radhika

malathi