ಮದುವೆಗೆ ಮೊದಲು ಅಮ್ಮನಿಗೆ ಅಡಿಗೆ ಕೆಲಸದಲ್ಲಿ ಸಹಾಯ ಮಾಡಿ ಅಷ್ಟೇ ಗೊತ್ತಿದ್ದು . ಅಮ್ಮನ ಕೆಲಸ ಎಲ್ಲ ಫಾಸ್ಟ್ ಎಕ್ಸ್ಪ್ರೆಸ್. ಓದು ಮುಗಿಸುವ ಮುನ್ನವೇ ಮದುವೆಯಾಯ್ತು, ಹಾಗಾಗಿ ಅಡುಗೆ ಕಲಿಯುವುದೆಂಬುದು ದೂರವೇ ಉಳಿಯಿತು. ಅಮ್ಮ ಮಾಡುವ ಅಡುಗೆಯನ್ನು ಮಾಡಿ ಅಲ್ಲದಿದ್ದಾರೂ ಕಣ್ಣಾರೆ ನೋಡಿ ಗೊತ್ತಿತ್ತು. ಸಂಪೂರ್ಣ ಅಡುಗೆ ಮಾಡಿದ್ದು ಮದುವೆ ಯಾದ ಮೇಲೆ. ಅಮ್ಮನ ಬಳಿ ಕೇಳಿಸಿಕೊಂಡು ಅಪ್ಪನ ಹಳೆಯ ಬ್ಯಾಂಕ್ ಡೈರಿ ಯಲ್ಲಿ ಬರೆದುಕೊಂಡ ಕೆಲವು ನನಗಿಷ್ಟವಾದ ಅಡುಗೆಗಳು, ಅದನ್ನೇ ನೋಡಿ ಮಾಡುತ್ತಿದ್ದೆ. ಮದುವೆಯಾದ ಮೇಲೆ ಶ್ರೀಕಾಂತ ನನಗೆ ಹಲವಾರು ಅಡುಗೆ ಪುಸ್ತಕ ಗಳನ್ನೂ ತಂದುಕೊಟ್ಟರು. ಅದರಲ್ಲಿ ಮುಖ್ಯವಾದದು ಜಯಾ ವಿ ಶೆಣೈ ಅವರ ಕೊಂಕಣಿ ಊಟ- ಉಪಾಹಾರ . a to ಝೆಡ್ ಕೊಂಕಣಿ ಮಾತ್ರವಲ್ಲ ಕೆಲವು ನಾರ್ಥ್ ಇಂಡಿಯನ್ ಅಡುಗೆಗಳಾದ, ಚೋಲೆ ಬಟೂರೆ, ಸಮೋಸಾ, ಪಾನಿ ಪೂರಿ ಮು೦ತಾದವು ಇದ್ದವು. ಈಗಲೂ ನಮ್ಮಲ್ಲಿ ಮದುವೆಯಾದ ಹೊಸದರಲ್ಲಿ ಈ ಪುಸ್ತಕ ಉಡುಗೊರೆಯಾಗಿ ಕೊಡುತ್ತೇವೆ. ಮತ್ತೀಗ ಇಂಗ್ಲೀಷ ಭಾಷೆಯಲ್ಲೂ ಲಭ್ಯ. ಯು ಎಸ ನಲ್ಲಿರುವ ನನ್ನ ತಂಗಿ ಕೊಂಕಣಿ ಅಡುಗೆ ಇಷ್ಟ ಪಡುವ ಅವಳ ಕನ್ನಡಿಗ ಫ್ರೆಂಡ್ಸ್ ಗಳಿಗೆಲ್ಲ ಈ ಪುಸ್ತಕ ತೆಗುದುಕೊಂಡು ಹೋಗುತ್ತಾಳೆ ಪ್ರತಿ ಸಲ ಭಾರತಕ್ಕೆ ಬಂದಾಗ.
ಮುದುವೇಯಾದ ಹೊಸದರಲ್ಲಿ ಕಾಲೇಜು ಪುಸ್ತಕ ಓದಿ ಓದಿ ಬೇಜಾರಾಗಿ ಹೊಸ ಹೊಸ ಅಡುಗೆಗಳು ಪ್ರಯತ್ನ ಮಾಡುತ್ತಿದ್ದೆ. ಹೆಚ್ಚಾಗಿ ರುಚಿಯಾಗೆ ತಯಾರಾಗುತ್ತಿದ್ದವು. guinea ಪಿಗ್ ಗಳು ಶ್ರೀಕಾಂತ ಆಫಿಸಿನ ಬ್ಯಾಚೆಲರ್ ಗಳು.
ಆಗಿನ್ನೂ ಮೊಬೈಲ್ ಬಿಡಿ ಫೋನ್ ಕೂಡ ಇರಲಿಲ್ಲ. ನಾನು ಅಮ್ಮನಿಗೆ ಪತ್ರ ಬರೆದರೆ ಕನಿಷ್ಠ ೧೫ ದಿನಗಳು ಬೇಕಿದ್ದವು ಕೊಪ್ಪದಿಂದ ಮುಂಬೈ ತಲುಪಲು. ಅರ್ಜೆಂಟ್ ಏನಾದ್ರೂ ಮೆಸೇಜ್ ಕಳುಹಸಿಲು ಇದ್ದರೆ ಶ್ರೀಕಾಂತ ಅವರ ಆಫಿಸ್ ನಿಂದ ಅಪ್ಪನ ಆಫಿಸ್ ಗೆ ಫೋನ್ ಮಾಡುತ್ತಿದ್ದರು. ಆಗ ಟ್ರಂಕ್ ಕಾಲ್ ಬುಕ್ ಮಾಡಬೇಕಿತ್ತು.
ಹೀಗಿದ್ದಾಗ ಒಂದು ಸಲ ನನ್ನ ಅಡುಗೆ ಕೆಲಸ ಮುಗಿಸಿ ಪರೀಕ್ಷೆಗೆ ಓದುತ್ತಿದ್ದೆ. ಆಫಿಸ್ ನ ಪಿಯನ್ ಬಂದು ಆರು ಜನ ಊಟಕ್ಕೆ ಬರುತ್ತಾರಂತೆ ಅಂತ ಸೈಕಲ್ ನಲ್ಲಿ ಬಂದು ಹೇಳಿ ಹೋದ. ನಮ್ಮ ಮನೆ ಪೇಟೆಯಿಂದ ಸಾಕಷ್ಟು ದೂರ. ನಾನು ಮಧ್ಯಾಹ್ನ ಸ್ವಲ್ಪ ಹೆಚ್ಚಿಗೆ ಅಡುಗೆ ಮಾಡಿಡುತ್ತಿದ್ದೆ. , ಯಾಕೆಂದರೆ ಹಲವು ಬಾರಿ ಬೇರೆ ಹಳ್ಳಿಯಿಂದ ಬಂದ ಆಫಿಸರ್ಗಳಿಗೆ ಶ್ರೀಕಾಂತ ಊಟಕ್ಕೆ ಕರೆದುಕೊಂಡು ಬರುತ್ತಿದ್ರು. ತುರ್ತು ಸಾಮಾನು ತರಕಾರಿ ಬೇಕಾದ್ರೆ , ಅದು ಬೇಸಿಕ್ ಕೆಲವೇ ಕೆಲವು ,ನಮ್ಮ ಮನೆಯ ಹಿಂಬದಿಯಿದ್ದ ಸುಂದರ ಮಾಮನ್ ಮನೆ ಕಮ್ ಅಂಗಡಿಯಲ್ಲಿ ಸಿಗುತ್ತಿತ್ತು. ನಾನು ಮಾಡಿದ್ದು ಕಾಯಿ ಹಾಕಿ ಕೊಂಕಣಿ ಅಡುಗೆಗಳು. ಬಂದವರಿಗೆ ಇಷ್ಟ ಆಗುತ್ತೋ ಗೊತ್ತಿರಲಿಲ್ಲ. ಯಾವುದಕ್ಕಾದರೂ ಟೊಮೇಟೊ ರಸಂ ಮಾಡುವಾ ಅಂತ ಟೊಮೇಟೊ, ಕೊತ್ತಂಬರಿ ಸೊಪ್ಪು ಮುಂತಾದವು ಕೊಳ್ಳಲು ಸುಂದರ ಮಾಮನ ಅಂಗಡಿಗೆ ಹೋದೆ. ತುಂಬಾ ನಿಧಾನಕ್ಕೆ ಸಾಮಾನು ಕಟ್ಟಿ ಕೊಡ್ತಾ ಇದ್ರು. 'ಮಾಮ ಸ್ವಲ್ಪ ಜಲ್ದಿ ಮಾಡಿ, ಊಟಕ್ಕೆ ಜನ ಬರುತ್ತಾರೆ ಅಂದೆ. :
ಹೌದಾ? ಎಷ್ಟು ಜನಾ?
ನನಗೆ ಆಶ್ಚರ್ಯ ಆದ್ರೂ ....
"೬-೭ "
ಏನು ತಿಳಿದುಕೊಳ್ಳದಿದ್ರೆ ಒಂದು ಮಾತು ಹೇಳಲಾ "?
"ಹೇಳಿ ಮಾಮಾ "
"ಒಂದು ರಾಶಿ ಅಡಿಗೆಯಿದೆ ದಯವಿಟ್ಟು ತೆಗೆದುಕೊಂಡು ಹೋಗ್ತೀರಾ"?
ಸುಂದರ ಮಾಮ ಫಂಕ್ಷನ್ ಗಳಿಗೆಲ್ಲ ಅಡಿಗೆ ಮಾಡಿ ಕೊಡುತ್ತಿದ್ದರು. ಆ ದಿನ ಯಾರ ಮನೆಯಲ್ಲಿ ಫಂಕ್ಷನ್ ಇತ್ತೋ ಅಲ್ಲಿ ಸಾವು ನಡೆಯಿತು. ಹಾಗಾಗಿ ಒಂದು ರಾಶಿ ಅಡಿಗೆ ಇದೆ ಅಂದಿದ್ದು.
ನಾನು ಹೆಚ್ಚು ಯೋಚನೆ ಮಾಡದೆ ಸರಿ ಎಂದೇ
ನೀವು ಮನೆಗೆ ಹೋಗಿ, ಕೆಲಸದವರ ಬಳಿ ಕಳುಹಿಸುತ್ತೇನೆ ಅಂತ, ಹತ್ತು ಹಲವು ಪಲ್ಯ, ಕೂಟು , ಹಪ್ಪಳ ಸ್ವೀಟ್ ಎಲ್ಲ ಕಳುಹಿಸಿದ್ರು. ಅದರ ಜತೆ ೧೦ ಬಾಳೆ ಎಲೆ ಕೂಡ.
ಶ್ರೀಕಾಂತ ಅವರ ಆಫಿಸಿನ ಜನರನ್ನು ಕರೆದುಕೊಂಡು ಬಂದ್ರು ಅವರಿಗೆಲ್ಲ ಮಾತ್ರವಲ್ಲ ಶ್ರೀಕಾಂತಗು ಆಶ್ಚರ್ಯ ಅಷ್ಟೆಲ್ಲ ಅಡಿಗೆ ಮಾಡಿದಳಾ ಇವಳು ಅಂತ. ನಾನು ನಗುತ್ತಾ ಒಂದೊಂದೇ ಐಟೆಮ್ ಬಡಿಸ್ತಾ ಇದ್ದೆ. ಶ್ರೀಕಾಂತ ಗೆ ಅಡಿಗೆ ಕತೆ ರಾತ್ರಿ ಹೇಳಿದ್ದು ನಾನು. ಮತ್ತೆ ಸುಂದರ ಮಾಮನ ಅಡುಗೆ ಕೊಪ್ಪ ಊರಲ್ಲೇ ಫೇಮಸ್. ಇಲ್ಲಿ ಆಫಿಸ್ ನಿಂದ ಬಂದವರು ನನನ್ನು ಹಾಡಿ ಹೊಗಳಿದರಂತೆ. ಹಾ ಹಾ ಹಾ
ಹೀಗೆ ಒಂದು ಸಲ ಒಂದು ಬಸ್ ಇಡೀ ರೈತರು ಬಂದಿದ್ದರು. ೪೦ ಜನ. ಅವರಿಗೋಸ್ಕರ ನಾನೊಬ್ಬಳೇ ಸಂಜೆಯ ತಿಂಡಿ ಅಂತ ಬನ್ಸ್, ಶಂಕರಪಾಳೆ (ತುಕಡಿ) ಶೇವು, ಕಾಫಿ ಎಲ್ಲ ಮಾಡಿದ್ದೆ. ಮರುದಿನ ಪುನ: ಬಂದಾಗ ಅಷ್ಟು ಜನರಿಗೆ ಕಲಸಿದ ಅವಲಕ್ಕಿ ಬಟಾಟಾ ವಡಾ ಮಾಡಿ ಸೈ ಎನ್ನಿಸಿಕೊಂಡಿದ್ದೆ.
ಬೆಂಗಳೂರಿಗೆ ಬಂದ ಮೇಲೆ ತಿಂಗಳಿಗೊಮ್ಮೆಯಾದರೂ ಆಫಿಸ್ ನವರಿಗೆ ಊಟ ಇಡುತ್ತಿದ್ದೆ. ಕ್ರಮೇಣ ಅಡುಗೆ ಮಾಡುವುದರಲ್ಲಿ ನನಗೆ ಇಂಟರೆಸ್ಟ್ ಹೋಗಿದೆ. ಏನೋ ಒಂದು ಮಾಡಿ ಹಾಕ್ತೇನೆ. ಉಪಾಯವಿಲ್ಲದೆ ತಿನ್ನುತ್ತಾರೆ. ಇಲ್ಲದಿದ್ದರೆ ಹೊರಗಿನಿಂದ ತಂದು ತಿನ್ನುತ್ತೇವೆ,
ಶ್ರೀಕಾಂತ, ಮಕ್ಕಳು ಯಾರನ್ನಾದ್ರೂ ಊಟಕ್ಕೆ ಕರೀಬಹುದಾ ಅಂದ ಕೊಡಲೇ ಸಖತ್ ಟೆನ್ಷನ್ ಆಗುತ್ತೆ. ಆದಷ್ಟು ಹೊರಗೆ ಕರೆದುಕೊಂಡು ಹೋಗಿ ಅನ್ನುತ್ತೇನೆ
ಈಗ ಉಮ್ಮೇದಿನಿಂದ ಬಹುಷ್ಯ ಅಡುಗೆ ಮಾಡೋದು, ನಿಹಾ ಬೇರೆ ಊರಿಂದ ಹಿಂದಿರುಗಿದಾಗ, ವಸುಧೇಂದ್ರ , ನಿಹಾಳ ಕೇರಳದ ಫ್ರಎಂಡ್ಸ್ ಗಳಿಗೆ ಮೀನು ಅಡುಗೆ ಮಾತ್ರ .
ಈಗ ನೆಂಟರಿಷ್ಟರನ್ನು ಮನೆಗೆ ಕರೆಯೋದಾದ್ರೆ 'ಬನ್ನಿ ನಮ್ಮ ಮನೆಯ ಎದುರು ಗಡೆಯ ರಸ್ತೆಯಿಂದ ಫುಡ್ ಸ್ಟ್ರೀಟ್ ಶುರು ಆಗತ್ತೆ ಅಂತ ಆಮಂತ್ರಣ ನೀಡೋದು. ;-) :-)
ಇವತ್ತಿನ ಪ್ರಜಾವಾಣಿ- ಭೂಮಿಕಾ ಪುರವಣಿಯಲ್ಲಿ ಸ್ಮಿತಾ ಅಮೃತ್ ರಾಜ್ 'ಅಡುಗೆ ಮನೆಯೊಳಗಿನ ಎಡವಟ್ಟುಗಳು' ಅಂತ ಬರೆದದ್ದನ್ನು ಓದಿ ಈ ಮೇಲಿನ ಸಂಗತಿ ನೆನಪಾಗಿ ಬರೆದೆ
:-)
1 comment:
ಮಾಲತಿ ಅಕ್ಕ, ಸರಿ ಸುಮಾರು ಮೂರು ವರ್ಷದ ನಂತರ ಬ್ಲಾಗ್ ಗಳಲ್ಲಿನ ಲೇಖನಗಳನ್ನು ಓದಬೇಕು. ಬರೆಯಬೇಕೆನಿಸಿದೆ. ನಾನು ನಿಮ್ಮ ಬ್ಲಾಗ್ ನ ಲೇಖನಗಳನ್ನು ತಪ್ಪದೆ ಓದುತ್ತಿದ್ದೆ. ಅಡುಗೆ ಮಾಡುವುದು ಸುಲಭವೆಂಬಂತೆ ಕಂಡರೂ, ಇಷ್ಟಪಟ್ಟು ಮಾಡಿದರೆ ಮಾತ್ರ ರುಚಿಯಾಗಿರುತ್ತದೆ.ಆಡುಗೆ ಬಗ್ಗೆ ನೀವು ಬರೆದ ಲೇಖನವನ್ನು ಓದುವಾಗ ನನ್ನ ಮಡದಿ ಮಾಡುವ ಹೊಸ ಹೊಸ ಅಡುಗೆ ಪ್ರಕಾರಗಳ ನೆನಪಾಯ್ತು. ನನ್ನ ಬ್ಲಾಗ್ sarovaradallisuryabimba.blogspot.in ಗೂ ಭೇಟಿ ಕೊಡಿ.
Post a Comment