ಒಂದು ಸಲ ಮಗಳು ತನ್ನ ತಂದೆಗೆ , ತನ್ನ ಜೀವನ ಬೇಸರದಿಂದ ಕೂಡಿದೆ ಮತ್ತು ಅದನ್ನು ಹೇಗೆ ನಿಭಾಯಿಸಬೇಕು ಅಂತ ನನಗೆ ಗೊತ್ತಾ ಗದೆ ಪರದಾಡ್ತಾ ಇದ್ದೇನೆ. 'ನನಗೆ ಇವೆಲ್ಲವನ್ನೂ ಎದುರಿಸಲು ಆಗ್ತಾ ಇಲ್ಲ. ಒಂದು ಸಮಸ್ಯೆ ಮುಗಿಯಿತು ಅನ್ನುವಾಗಲೇ ಹೊಸದೊಂದು ಸಮಸ್ಯೆ ಶುರು' ಅಂತ ದೂರುತ್ತಿದ್ದಳು.
ಅವಳ ತಂದೆ ಬಾಣಸಿಗ/ ಶೆಫ್ . ಅವಳನ್ನು ಅಡಿಗೆಮನೆಗೆ ಕರೆದುಕೊಂಡು ಹೋದ. ಅಲ್ಲಿ ಮೂರು ಪಾತ್ರೆಗಳಲ್ಲಿ ನೀರನ್ನು ತುಂಬಿ ಮೂರೂ ಪಾತ್ರೆಗಳನ್ನು ಓಲೆಯ ಮೇಲಿಟ್ಟ. ನೀರು ಕುದಿಯುತ್ತಿದ್ದಾಗ, ಒಂದರಲ್ಲಿ ಆಲೂಗಡ್ಡೆ, ಎರಡನೆ ಪಾತ್ರೆಯಲ್ಲಿ ಮೊಟ್ಟೆ ಹಾಗೂ ಮೂರನೆ ಪಾತ್ರೆಯಲ್ಲಿ ಕಾಫಿಪುಡಿಯನ್ನು ಹಾಕಿದ. ಅವೆಲ್ಲ ಕುದಿಯುತ್ತಿರುವಾಗ ಮಗಳೊಂದಿಗೆ ಒಂದೂ ಮಾತನ್ನು ಆಡದೆ ಸುಮ್ಮನೆ ಕುಳಿತ. ಇಪ್ಪತ್ತು ನಿಮಿಷ ಕಳೆದ ನಂತರ ಎಲ್ಲ ಪಾತ್ರೆಗಳನ್ನು ಓಲೆಯ ಮೇಲಿಂದ ತೆಗದು ಕೆಳಗಿಟ್ಟ. ಆಲೂಗಡ್ಡೆಯನ್ನು ತೆಗೆದು ಒಂದು ತಟ್ಟೆಯಲ್ಲಿ ಇಟ್ಟ. ಮೊಟ್ಟೆಯನ್ನು ಇನ್ನೊಂದು ತಟ್ಟೆಗೆ , ಕಾಫೀಪುಡಿ ಹಾಕಿದ ನೀರನ್ನು ಒಂದು ಲೋಟಕ್ಕೆ ರವಾನಿಸಿದ.
ಮಗಳ ಕಡೆ ತಿರುಗಿ ಈಗ ನಿನ್ನ ಎದುರಿಗೆ ಏನು ಕಾಣಿಸುತ್ತಿವೆ' ಕೇಳಿದ . ಆಲೂಗಡ್ಡೆ, ಮೊಟ್ಟೆ, ಕಾಫಿ ಅಂತ ಮಗಳು ತಟ್ಟಂತ ಉತ್ತರಿಸಿದಳು.
ಊಹೂಂ ಸರಿಯಾಗಿ ನೋಡು , ಆಲೂಗಡ್ಡೆಯನ್ನು ಮುಟ್ಟಿ ನೋಡು, ಈಗ ಹೇಳು. ಹೇಳಿದಂತೆ ಮಾಡಿದಳು. ಆಲೂಗಡ್ಡೆ ಮುಟ್ಟಲಿಕ್ಕೆ ಮೆತ್ತಗಿತ್ತು.
ಈಗ ಮೊಟ್ಟೆಯನ್ನು ಸುಲಿ. ಸುಲಿದಾಗ ಸಿಪ್ಪೆಯಿಂದ ಚಂದನೆಯ ಬೇಯಿಸಿದ ಮೊಟ್ಟೆ....
ಕಾಫಿಯನ್ನು ಕುಡಿದು ನೋಡು. ಅದರ ಪರಿಮಳ ಅವಳಲ್ಲಿ ಮಂದಹಾಸ ಮೂಡಿಸಿತು.
ಹೌದು ಅಪ್ಪ. ಏನಿದರ ಅರ್ಥ??
ಆಗ ಅಪ್ಪ ಉತ್ತರಿಸಿದ: ನೋಡು ಮಗಳೆ ಮೂರೂ ಸಾಮಗ್ರಿಯನ್ನು ಒಂದೆ ಕಷ್ಟಕ್ಕೆ ಗುರಿಪಡಿಸಿದೆ ಅಂದ್ರೆ ಬಿಸಿ ನೀರಿಗೆ ಹಾಕಿದೆ. ಆಲೂಗಡ್ಡೆ ಗಟ್ಟಿಯಿತ್ತು, ಬಿಸಿ ನೀರಿನಲ್ಲಿ ಹೇಗೆ ಮೆತ್ತಗೆ ಬೆಂದಿದೆ ನೋಡು. ಅದೇ ಮೊಟ್ಟೆ ಒಳಹೋಗುವಾಗ ದ್ರಾವಣದ ರೂಪ, ಬೇಯಿಸಿದ ಮೇಲೆ?? ಆದರೆ ಕಾಫಿ ಬೀಜ ಮಾತ್ರ ಅನನ್ಯ. ಬಿಸಿ ನೀರನ್ನೆ ಪರಿಮಳಯುಕ್ತವಾಗಿ ಬದಲಾಯಿಸಲಿಲ್ಲವೇ?
“
ಈಗ ಹೇಳು ಇದರಲ್ಲಿ ನೀನೇನಾಗಲು ಬಯಸುವೆ? ಕಷ್ಟ ಬಾಗಿಲು ತಟ್ಟಿದಾಗ ನೀನು ಹೇಗೆ ನಿಭಾಯಿಸುವೆ? ನೀನು ಆಲೂಗಡ್ಡೆ, ಮೊಟ್ಟೆ ಅಥವಾ ಕಾಫಿ ಬೀಜನಾ ??
.ಜೀವನದಲ್ಲಿ ಹಲವಾರು ಸಮಸ್ಯೆಗಳಿರುತ್ತವೆ. ಇದರಲ್ಲಿ ಮುಖ್ಯ ಏನೆಂದರೆ ನೀನೂ ಪರಿಸ್ಥಿತಿಯನ್ನು ಹೇಗೆ ಎದುರಿಸುತ್ತೀಯಾ ಮತ್ತು ಆ ಪರಿಸ್ಥಿತಿ ಯಲ್ಲಿ ಏನು ಮಾಡುತ್ತೀಯಾ ಅಂತಾ? ಜೀವನ ಅಂದ್ರೆ ಕಲಿಕೆ,ಹೊಂದಾಣಿಕೆ , ಮತ್ತು ದು:ಖ ಗಳನ್ನು ಸಮಸ್ಯೆ ಗಳನ್ನು ಸಕಾರಾತ್ಮಕವಾಗಿ ಸಾರ್ಥಕವಾಗಿ ಬದಲಿಸಿಕೊಳ್ಳುವುದು
ಇದು ವಾಟ್ಸ್ಯಾಪ್ , ಮೇಲ್ ಗಳಲ್ಲಿ ಪದೇ ಪದೇ ಬರುತ್ತಿಯಾ ಒಂದು ವಿಷಯ. ಯಾಕೋ ಟ್ರಾನ್ಸ್ಲೇಟ್ ಮಾಡ್ಬೇಕು ಅನ್ನಿಸ್ತು
:-)
No comments:
Post a Comment