October 30, 2016

ದೀಪಾವಳಿಗೆ ಒಂದು ಫಿಲ್ ಗುಡ್ ಪೋಸ್ಟ್ ( my 400th post)



ಮಂಜುಳಾ ಒಳಗೆ ಅಡಿಗೆ ಮನೆಯಲ್ಲಿ ಸ್ವೀಟ್ ತಯಾರಿ ಯಲ್ಲಿ ವ್ಯಸ್ತಳಾಗಿದ್ದಳು. ಹೊರಗಡೆ ಜಾನಿಬಾಯಿ ಮತ್ತು ಅವಳ ಪುಟ್ಟ ಮಗಳು ಸೇರಿ ದೀಪಾವಳಿಗೆ ಅಂತ ಮನೆ ಹೊರಗಡೆ ಚೊಕ್ಕ ಗೊಳಿಸುತ್ತಿದ್ದರು. ಅವರ ಸಂಭಾಷಣೆ ಮಂಜುಳೆಯ ಕಿವಿ ಮೇಲೆ ಬೀಳುತ್ತಾ ಇತ್ತು.
" ಅಮ್ಮ ನಾವು ನಾಳೆ ಹಬ್ಬ ಮಾಡ್ತೀವಾ?'
" ಇಲ್ಲ ಮಗಳೇ ನಾವು ಎರಡು ದಿನ ಬಿಟ್ಟು ಹಬ್ಬ ಆಚರಿಸುವಾ, ಆಯ್ತಾ' ಈಗ ಎರಡು ಮೂರು ಮನೆಯ ಕೆಲಸ ಇದೆಯಲ್ಲವಾ? ನಾವು ಹಬ್ಬ ಅಂತ ಮನೆಯಲ್ಲಿ ಕುಳಿತರೆ ಅವರ ಮನೆಯಲ್ಲಿ ಕೆಲಸ ಮಾಡುವವರು ಯಾರು?"
ಮಂಜುಳೆಗೆ ಕುರುಳು ಚುರುಕ್ ಎಂದಿತು. ಅವರಿಗೆ ರಜೆ ಕೊಡುವಾ ಅಂದ್ರೆ ನಾಳೆ  ಡಿನ್ನರ್ ಪಾರ್ಟಿ ಗೆ ಸಹಾಯ ಮಾಡುವವರ್ಯಾರು?
ಅವಳಿಗೆ ಒಂದು ಐಡಿಯಾ ಬಂತು. ಬೇಗ ಬೇಗನೆ ಅಡಿಗೆ ತಿಂಡಿ ಕೆಲಸ ಮುಗಿಸಿ ಹೊರಗೆ ಹೋಗಿ ಜಾನಿಬಾಯಿ ಮತ್ತು ಅವಳ ಮಗಳಿಗೆ ಹೊಸ ಬಟ್ಟೆ, ಹಣತೆ, ಎಣ್ಣೆ , ಸ್ಕೂಲ್ ಬ್ಯಾಗ್ , ಬಣ್ಣ ಬಣ್ಣದ ಕತೆ ಪುಸ್ತಕ ತೆಗೊಂಡು ಅದನ್ನು ನೀಟಾಗಿ ಗಿಫ್ಟ್ ರ್ಯಾಪ್ ಮಾಡಿಸಿ ತಂದಿಟ್ಟು  ಕೊಂಡಳು.
ಮರುದಿನ ಬೆಳಿಗ್ಗೆ ಅವರು ಬಂದ ಕೂಡಲೇ ಅವರಿಗೆ ಅವರ ಉಡುಗೊರೆಯನ್ನು ಕೊಟ್ಟಳು. ಮಗಳು ಹೊಸ ಬಟ್ಟೆಯನ್ನು ಕೂಡಲೇ ಹಾಕಿಕೊಂಡಳು. ಸಂಜೆ ಆ ಹುಡುಗಿಯಿಂದಲೇ ಮನೆಯ ಮುಂದೆ ದೀಪಗಳನ್ನು ತನ್ನ ಮಕ್ಕಳ ಜೊತೆಯಲ್ಲೇ  ಹಚ್ಚಿಸಿ ತಂದ  ಪಟಾಕಿಗಳನ್ನು ಅವರೆಲ್ಲರೂ ಕೂಡಿಸಿ  ಹಚ್ಚಿದರು .
ದೀಪಾವಳಿಯ ಮರುದಿನ ಜಾನಿಬಾಯಿಗೆ ರಜೆ ಮಾತ್ರವಲ್ಲ ದೀಪಾವಳಿಯ ಮಿಠಾಯಿ ಮತ್ತು ಸ್ವಲ್ಪ ದುಡ್ಡನ್ನು ಕೊಟ್ಟು ಕಳಿಸಿ ಮನಸ್ಸಿಗೆ ಒಂದು ಸ್ವಲ್ಪ ಸಮಾಧಾನ ಆಗುವಂತೆ ನಡೆದುಕೊಂಡಳು ಮಂಜುಳಾ ..
ಸುಮ್ನೆ ದೀಪಾವಳಿಗೆ ಒಂದು ಫಿಲ್ ಗುಡ್ ಪೋಸ್ಟ್ .:-) 

October 28, 2016

ಆಕಾಶದಲ್ಲಿ fireworks

ಆಗ ನಾವು ಉಜಿರೆಯಲ್ಲಿದ್ದೆವು. ಕೆ ಟಿ ಗಟ್ಟಿ ಮಾಮನ  ಮಹಡಿ ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದೆವು. ಅವರ ಮಗಳಿಗೆ ಹುಷಾರಿಲ್ಲ ಅಂತ ಗಟ್ಟಿಯವರು ಮತ್ತು ಯಶೋದಾ ಆಂಟಿ ಪುಣೆ ಗೆ ಹೋಗಿದ್ದರು. ಅಲ್ಲಿ ಹೋದ ಮೇಲೆ ಮಗಳಿಗೆ ಹಲವಾರು ದಿನ ಆಸ್ಪತ್ರೆಯಲ್ಲಿರಬೇಕಾಗಿ ಬರುತ್ತೆ, ಸ್ವಲ್ಪ ಯಮುನಾ (ಯಶೋದಾ ಆಂಟಿ ಯಾ ಅಕ್ಕ) ಅವರಿಗೆ ಪ್ಹ್ರಿಜ್ ಕ್ಲಿನ್ ಮಾಡಲು ಸಹಾಯ ಮಾಡ್ತೀರಾ? ಅವರು ಮಂಗಳೂರಿಗೆ ಹೊರಟಿದ್ದಾರೆ ಅಂತ ಪುಣೆಯಿಂದ ಫೋನ್ ಮಾಡಿದ್ರು. ಆಮೇಲೆ ಯಮುನಾ  ಆಂಟಿ ಹೊರಟು  ಹೋದ್ರು. ಶ್ರೀಕಾಂತ ಕೂಡ ಮೈಸೂರಿಗೆ ಹೊರಟಿದ್ರು. ಗೇಟ್   ಆ ಕಡೆಯಲ್ಲಿರುವ ಸಚಿನ್  ಮನೆಯವರು ಕೂಡ ಯಾವುದೋ ಸಮಾರಂಭಕ್ಕೆ ಹೋಗಿದ್ದರಿಂದ ಮನೆಯಲ್ಲಿ ನಾನು ಮತ್ತು ಮಕ್ಕಳು ಮಾತ್ರ. ಗಟ್ಟಿಯವರ ಮನೆ ಪೇಟೆಯಿಂದ ದೂರ. ನಮ್ಮ ಮನೆಯಲ್ಲಿ ಫೋನ್ ಇತ್ತು ಆದರು ಅದು ಸರಿಯಿರುತ್ತಿದ್ದದ್ದೇ ಅಪರೂಪ. ಯಾವುದೋ ಕೆಲಸದ ಮೇಲೆ ನನ್ನ ಸ್ನೇಹಿತೆ ಸೂಸಿ ಮನೆಗೆ ಬಂದಿದ್ರು. ಅವರಿಗೆ ನಮ್ಮ ಮನೆಯಲ್ಲೇ ಉಳಿದು ಕೊಳ್ಳಲು  ಹೇಳಿದೆ. 
ಶ್ರೀಕಾಂತ ರಾತ್ರಿ ಊಟ ಮಾಡಿ ಮೈಸೂರಿಗೆ ಹೊರಟರು. ಮಕ್ಕಳು ಮಲಗಿದ್ದರು. ತಾರಸಿ ಮನೆಯಾದ್ದರಿಂದ ಸೆಕೆ. ಹಾಗಾಗಿ ನಾನು ಸೂಸಿ ಟೆರೇಸ್ ಮೇಲೆ ಇನ್ನೊಂದು ಎತ್ತರದಲ್ಲಿ ನೀರಿನ ಟ್ಯಾಂಕ್ ಮತ್ತು ಡಿಶ್ ಟಿ ವಿ ರಿಸೆಪ್ಟರ್ ಜಾಗಕ್ಕೆ ಹೋಗಿ ಕೂರುವ ಅಂದಾಜು ಮಾಡಿದೆವು. ಕುರುಕುಲು ತಿಂಡಿ ಹಣ್ಣು ಎತ್ತಿಕೊಂಡು, ಮಕ್ಕಳು ಮಲಗಿದ್ದರಿಂದ ಬಾಗಿಲಿಗೆ ಬಿಗ ಜಡಿದು ಟ್ಯಾಂಕ್ ಬಳಿ ಹತ್ತಿದೆವು. ಹೀಗೆ ಲೋಕಾಭಿರಾಮವಾಗಿ ಮಾತಲ್ಲಿ ಮುಳುಗಿದ್ದೆವು. ಹಾಗೆ ಅಡ್ಡಾದೆವು. ಶುಭ್ರ ಆಕಾಶ ಅಲ್ಲಲ್ಲಿ ಚುಕ್ಕೆ ಇಟ್ಟಂತಹ ನಕ್ಸತ್ರಗಳು . ಒಮ್ಮೆಲೇ ಆಕಾಶದಲ್ಲಿ ಸುರು ಸುರು ಬತ್ತಿ ಹಚ್ಚಿದ್ದ ದೃಶ್ಯ. ದೀಪಾವಳಿಯಂತೂ ಇರಲಿಲ್ಲ. ಇದ್ದರು ಈ ರೀತಿ ಪಟಾಕಿ ಮೊದಲೆಲ್ಲೂ ನೋಡಿರಲಿಲ್ಲ ಅಂತ ನಮ್ಮ ನಮ್ಮಲ್ಲೇ ಮಾತನಾಡಿದೆವು. ಆಗ ಮೊಬೈಲ್ ಎಲ್ಲ ಇರಲಿಲ್ಲ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ತಮ್ಮನ ಬಳಿ ಒಂದು ಪೇಜರ್ ಮಾತ್ರ ನೋಡಿದ್ದೆ. :-) ಇಲ್ಲದಿದ್ದರೆ ಈಗಿನ ಹಾಗೆ ಒಂದು ಸೆಲ್ಫಿ ತೆಗೆದುಕೊಳ್ಳಬಹುದಿತ್ತು. ಪೂರ್ತಿ ೧೫ ನಿಮಿಷ ನಮಗೆ ಮನೋರಂಜನೆ. 

ಮೇಲಿನ  ಚಿತ್ರ ನಾನು ಗುಗಲಿಸಿ ಹಾಕಿದ್ದೇನೆ. ಆದರೂ ನಾವು ನೋಡಿದ ದೃಶ್ಯ ಇನ್ನು ಆಕರ್ಷಕ ವಾಗಿತ್ತು. ನಾನು ಮತ್ತು ಸೂಸಿ ಮಾತ್ರ ಈ ಆಕಾಶ ಪಟಾಕಿ ನೋಡಿದ್ದು ಅಂದುಕೊಂಡಿದ್ವಿ. ಆದರೆ ಮರುದಿನ ಶ್ರೀಕಾಂತ ಮೈಸೂರಿನಿಂದ ತಲುಪಿದಕ್ಕೆ ಫೋನ್ ಮಾಡಿದಾಗ ಬಸ್ ನಲ್ಲಿ ಹೋಗುತ್ತಾ ಇದನ್ನು ನೋಡಿದ್ದು, ಬಸ್ ಡ್ರೈವರ್ ಬಸ್ ಸ್ಲೋ ಮಾಡಿದ್ದು ಎಲ್ಲ ಹೇಳಿದ್ದರು.
ಇಂತಹ ಕೆಲವು ಅಪರೂಪ ಡಾ ಸಂಗತಿಗಳನ್ನು ನೋಡಿ ಜೀವನ ಧನ್ಯ ವಾದ ಅನುಭವ. 
ಮೊನ್ನೆ ಕೂಡ ಫೇಸ್ ಬುಕ್ ನಲ್ಲಿ ಅಕಾಶದಲ್ಲಿ ಬೆಳಕಿನ ಓಕುಳಿ ನಡೆಯುತ್ತಿದೆಎಂದು ಹಾಕಿದ್ದು, ನಾನು ಬಾಲ್ಕನಿಯಲ್ಲೇ ಪವಡಿಸಿದ್ದೆ , ಆದರೆ ಬಾಲ್ಕನಿಯಿಂದ ಪೂರ್ತಿ ಆಕಾಶ ಕಾಣುವುದಿಲ್ಲ ಮತ್ತು ನಮ್ಮ ಅಪಾರ್ಥಮೆಮ್ಟ್ ನ ಟೆರೇಸ್ ಬಾಗಿಲಿಗೆ ಬಿಗ ಹಾಕಿರುತ್ತಾರೆ. ಟೆರೇಸ್ ಮೇಲೆಲ್ಲಾ ಸೋಲಾರ್ ಪ್ಯಾನೆಲ್ ಅಳವಡಿಸಲಾಗಿದೆ. 
ಓರಿನೋಯ್ಡ್ಸ್, Orionids/starburst galaxy google ಮಾಡಿ ನೋಡಿ ನಿಮಗೂ ಅಂದಾಜು ಆಗಬಹುದು.. 
ದೀಪಾವಳಿಗೆ ಒಂದು ಚಿಕ್ಕ ಪೋಸ್ಟ್. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. :-) 



October 6, 2016

ಸಂಚಿಯಿಂದ ತೆಗೆದ ನೆನಪು- ೧೩ about car and adventures

ಚಿಕ್ಕವಳಿದ್ದಾಗ ಭಾರತದ ಉದ್ದಗಲ ಪ್ರಯಾಣಿಸಿದ ಹೆಮ್ಮೆ ನನ್ನದು. ಅಜ್ಜ ನನ್ನ ತಂದೆಗೆ volkswagen Beetle- steel blue ಬಣ್ಣದ್ದು ಕೊಡಿಸಿದ್ದರು. ಆಗ ಸ್ಕೂಲ್ ಗೆ ಚಕ್ಕರ ಹಾಕಿ ತಿರುಗಾಟ ಮಾಡಿದ್ದಲ್ಲಿ ಕೇಳುವವರು ಯಾರೂ ಇರಲಿಲ್ಲ. ಅಷ್ಟೆ ಅಲ್ಲ ನನ್ನ ಅಜ್ಜ ದೊಡ್ಡ ಕುಳ ಆಗಿದ್ದರಿಂದ ಯಾರೂ ಯಾವುದರ ಬಗ್ಗೆಯೂ ಸೊಲ್ಲೆತ್ತುತ್ತಿರಲಿಲ್ಲ. ಪ್ರಯಾಣ ಅಂದರೆ ಸಿರ್ಫ್ ಯಾತ್ರಾ pilgrimage ಸ್ಥಳಗಳು- ಕಾಶಿ, ರಾಮೇಶ್ವರ, ಪಳನಿ, ಪಂಢರಾಪುರ, ತಿರುಪತಿ, ಕನ್ಯಾಕುಮಾರಿ, ಮದುರೈ etc. ಅಜೋಬಾ, ನಾನಿ, ಅಪ್ಪ, ಅಮ್ಮ, ನಾವು ಮೂರು ಮಕ್ಕಳು,( ನನ್ನ ತಂಗಿ ಇನ್ನೂ ಹುಟ್ಟಿರಲಿಲ್ಲ.) ಇಷ್ಟು ಜನ ಗಾಡಿಯಲ್ಲಿ.ಕೆಲವೊಮ್ಮೆ ಡ್ರೈವರ್ ಕೂಡ ಇರುತ್ತಿದ್ದ
ಗಾಡಿ, ರಸ್ತೆ ಮಧ್ಯ ಕೆಲವೊಮ್ಮೆ ಮುಷ್ಕರ ಹೂಡುತಿತ್ತು. ಆಗ ಅಜ್ಜ ಅಪ್ಪ ದಾರಿಯಲ್ಲಿ ಸಾಗುವ ಟ್ರಕ್ ನಿಲ್ಲಿಸಿ ನಮ್ಮ ಗಾಡಿ Tow ಮಾಡಿಸಿ ಹತ್ತಿರದ ಗರಾಜ್ ಗೆ ಸಾಗಿಸುತ್ತಿದ್ದರು. ಆಗ ಹೋಟಲ್ ಗಳು ಅಷ್ಟೊಂದು ಇರಲಿಲ್ಲ. ನಾವು ಹೀಗೆ ಯಾರಾದರೂ ಗರಾಜ್ ನಡೆಸುವವರ ಮನೆಯಲ್ಲಿ ರೊಟ್ಟಿ ಪಲ್ಯ ಚಟ್ನಿ ತಿನ್ನುತ್ತಿದ್ದ ನೆನಪು. ಕೆಲವೊಮ್ಮೆ ರಿಪೇರಿ ಆಗಲಿಕ್ಕೆ ಎರಡು ಮೂರು ದಿನಗಳೇ ಬೇಕಾಗುತ್ತಿದ್ದವು. :-)
ಹೀಗೆ ಒಂದು ಸಲ ಕಾರವಾರಕ್ಕೆ ಹೋಗುವಾಗ ದಾರಿಯಲ್ಲಿ ರಾತ್ರಿ ನಮ್ಮ ಗಾಡಿ ಮುಷ್ಕರ ಹೂಡಿತು. ಅದೊಂದು ಸೇತುವೆ. ಕೆಳಗೆ ಹರಿಯುತ್ತಿರುವ ನದಿ. ಒಂದು ಹುಲಿ ಧುತ್ ಅಂತ ನಮ್ಮ ಕಾರ್ ಮುಂದೆ. ನಾವು ಸದ್ದು ಮಾಡಬಾರದೆಂದು ಅಮ್ಮ ನನ್ನ ಮತ್ತು ತಮ್ಮನ ಬಾಯಿ ಗಟ್ಟಿ ಹಿಡಿದುಕೊಂಡಿದ್ದು, ನಮ್ಮ excitement ಇನ್ನೂ ಹಸಿಯಾಗಿದೆ.ಡ್ರೈವರ ಕೂಡಲೆ ಗಾಡಿಯ ಲೈಟ್ ಆಫ್ ಮಾಡಿದ. ಸ್ವಲ್ಪ ಹೊತ್ತು ಸುಮ್ಮನೆ ನಮ್ಮ ಕಡೆ ನೋಡಿ ಆಮೇಲೆ ನಿಧಾನಕ್ಕೆಬಳಿ ಸಾಗಿ ಪಂಜಿನಿಂದ ಟಾಪ್ ಮೇಲೆ ಹೊಡೆಯಿತು. ಕಾರ್ ಗಡಗಡ ನಡುಗಿದ್ದು ಇನ್ನೂ ನೆನಪಿದೆ. ಆಗ ಅಪ್ಪ, ಡ್ರೈವರ್ ಗೆ ಒಟ್ಟೊಟ್ಟಿಗೆ ಬೆಳಕು ಹಾಗೂ ಹಾರ್ನ್ ಮಾಡಲು ಹೇಳಿದರು. ಡ್ರೈವರ್ ಲೈಟ್ ಆನ್ ಮಾಡಿ ಹಾರ್ನ್ ಹಾಕಿದ್ದೆ ಹಾಕಿದ್ದು, ಹುಲಿ ಒಂದೇ ಉಸುರಿಗೆ ಓಡಿ ಹೋಯ್ತು. :-)
ಆಮೇಲೆ ಅಪ್ಪನಿಗೆ ಬಿಹಾರ್ ಗೆ ಟ್ರಾನ್ಸ್ಫರ್ ಆಯ್ತು. ಅಪ್ಪ ಹೋಗುವ ಮೊದಲು ಕಾರ್ ಅನ್ನು ಗೂಡ್ಸ್ ಟ್ರೈನ್ ನಲ್ಲಿ ಮುಂದೆ ಕಳುಹಿಸಿದ್ದರು. ಅಪ್ಪ ಬಿಹಾರ್ ತಲುಪಿ ಅಲ್ಲಿನ ಬ್ರಾಂಚ್ ಜಾಯಿನ್ ಆಗಿ ಮೂರು ತಿಂಗಳು ಕಳೆದರೂ ಕಾರ್ ನ ಪತ್ತೆ ಇಲ್ಲ. ಅಂತೂ ಇಂತೂ ಪತ್ರ ಬರೆದು ಬರೆದೂ, ಅಲ್ಲಿ ಇಲ್ಲಿ ಫೋನಾಯಿಸಿ...ಒಂದು ದಿನ ಪಟ್ನಾದ ಗೂಡ್ಸ್ ಶೆಡ್ ನಿಂದ ಫೋನ್ ಬಂತು, ಕಾರು ತಲುಪಿದೆಯೆಂದು. ಅಪ್ಪ ಹೋಗಿ ನೋಡಿದರೆ ಅದು ರಿಪೇರಿ ಆಗದಷ್ಟು ನುಜ್ಜುಗುಜ್ಜಾಗಿತ್ತು. ಕೊನೆಗೆ ಗುಜರಿಯಲ್ಲಿ 200 ರೂ ಅಷ್ಟೆ ಬಂದಿತ್ತು. ಆಮೇಲೆ ನಮ್ಮ ಅಪ್ಪ ಕಾರ್ ಸುದ್ದಿಗೆ ಹೋಗಲಿಲ್ಲ.
ಮೊನ್ನೆ ಗೋಕರ್ಣಕ್ಕೆ ಹೋಗುವ ದಾರಿಯಲ್ಲಿ ಮಕ್ಕಳಿಗೆ ಇದನ್ನು ಹೇಳ್ತಾ ಇದ್ದೆ.


October 3, 2016

ದೀಪಾವಳಿಗೆ ನಿಮ್ಮ ಉಡುಗೊರೆ ಸ್ವಲ್ಪ ಭಿನ್ನವಾಗಿರಲಿ

ದೀಪಾವಳಿಗೆ  ನಿಮ್ಮ ಆಪ್ತೆಷ್ಟರಿಗೆ ಎಷ್ಟಂತ ಸ್ವೀಟ್ ಕೊಡ್ತೀರಿ? ಈ ದೀಪಾವಳಿಗೆ ಬೇರೆ ಏನಾದರೂ ಉಡುಗೊರೆ ನೀಡಿ. for eg ಕೆಳಗಿನಕೊಂಡಿಯಲ್ಲಿನ ಫೈಟಿಂಗ್ಸ್.  ಇದರಲ್ಲಿ ಕೆಲವು ಈಗಾಗಲೇ ಮಾರಲ್ಪಟ್ಟಿವೆ. ನೀವು ತ್ವರೆ ಮಾಡಿ. ನಿಮ್ಮ ಆತ್ಮೀಯರು ನಿಮ್ಮ ಕಲಾ ಅಭಿರುಚಿಯನ್ನು  ನೋಡಿ ಮೆಚ್ಚಲಿ. :-) :-) 



chitrakale

ಇಲ್ಲಿದೆ ಒಂದು ಸ್ಯಾಂಪಲ್


September 30, 2016

spring roll ಸ್ಪ್ರಿಂಗ್ ರೋಲ್

ಇನ್ನು ಮಕ್ಕಳಿಗೆ ದಸರಾ ರಜಾ ಶುರು. . ಆಗ ಮಕ್ಕಳುಆಟ ಮುಗಿಸಿ ಅಥವಾ ಅವರ ಕ್ಲಾಸ್ ಮುಗಿಸಿ ಬಂದು ಅಮ್ಮ ಹಸಿವೆ ಎಂದಾಗ ಸ್ಪ್ರಿಂಗ್ ರೋಲ್ ಮಾಡಿ ಕೊಡಬಹುದು. ಸ್ಪ್ರಿಂಗ್ ರೋಲ್ ನ ಹೊರಗಿನ ಕವಚವನ್ನು ಮೊದಲೇ ಮಾಡಿಟ್ಟು ಶೀತಾಗಾರದಲ್ಲಿ ಕಾಪಿಟ್ಟುಕೊಳ್ಳಬಹುದು. 

ಮೊದಲಿಗೆ ಸ್ವಲ್ಪ ಮೈದಾ ಹಿಟ್ಟಿಗೆ ಸ್ವಲ್ಪ ಕಾರ್ನ್ ಫ್ಲೋರ್ ಮಿಕ್ಸ್ ಮಾಡಿ ನೀರು ಬೆರೆಸಿ ಗಂಟಾಗದಂತೆ ತೆಳುವಾದ ಹಿಟ್ಟು ತಯಾರಿಸಿ. ನಾನ್ ಸ್ಟಿಕ್ ಕಾವಲಿ ಓಲೆ ಮೇಲಿಡಿ. ಬಿಸಿ ಆದ ಮೇಲೆ ಒಂದು ಬ್ರಶ್ ಅನ್ನು ಹಿಟ್ಟಿನಲ್ಲಿ ಅಡ್ಡಿ ಪೈಂಟ್ ಮಾಡೊತರಹ ಕಾವಲಿ ಮೇಲೆ ಆಡಿಸಿ. ಒಂದಾದನಂತರ ಲಂಬವಾಗಿ ಹಿಟ್ಟನ್ನು ಕಾವಲಿಗೆ ಬ್ರಶ್ ಮಾಡ್ತಾ ಹೋಗಿ. 

ಒಣಗಿದಂತೆ ಕಂಡ ಕೂಡಲೇ ಕಾವಲಿಯಿಂದ ಬಿಡಿಸಿ ಪ್ಲೇಟ್ ಮೇಲೆ ಹಾಕಿ. ಇದಕ್ಕೆ ತೆಳು ಎಣ್ಣೆ ಸವರಿಡಿ . ಇದರ ಮೇಲೆ ಇನ್ನೊಂದು ಪದರ ಮಾಡಿ ಇಡುತ್ತಾ ಹೋಗಿ. ಹೀಗೆ ಕವಚಗಳು ರೆಡಿಯಾದ ಮೇಲೆ ಪ್ಹ್ರಿಜರ್ ನಲ್ಲಿ ಇತ್ತು ಬಿಡಿ. 






ಸ್ಪ್ರಿಂಗ್ ರೋಲ್ ನ ಹೂರಣ : ಕ್ಯಾಬೇಜ್, ದಪ್ಪ  ಮೆಣಸಿನಕಾಯಿ ಕ್ಯಾರಟ್ ಸಣ್ಣಕ್ಕೆ ಕಟ್ ಮಾಡಿಡಿ . ಎಣ್ಣೆಯಲ್ಲಿ ನೀರುಳ್ಳಿ ಬೆಳ್ಳುಳ್ಳಿಬಾಡಿಸಿ, ಇದಕ್ಕೆ ತರಕಾರಿಗಳನ್ನು ಬೆರೆಸಿ  ಉಪ್ಪು ಬೆರೆಸಿ ಎರಡು ನಿಮಿಷ ಕೈಯಾಡಿಸಿ ತಣ್ಣಗಾಗಲು  ಪಕ್ಕಕ್ಕಿಡಿ. 


ಈಗ ಒಂದೊಂದೇ ರೋಲ್ ಗಳನ್ನೂ ಬಿಡಿಸಿ. ಮಧ್ಯದಲ್ಲಿ ತರಕಾರಿ ಮಿಶ್ರಣವನ್ನು ಹಾಕಿ ಹಾಸಿಗೆ ಯಂತೆ ಸುರುಳಿ ಸುತ್ತಿ .

 ಹೀಗೆ ಐದಾರು ಸ್ಪ್ರಿಂಗ್ ರೋಲ್ ಮಾಡಿಡಿ. ಬಿಸಿ ಎಣ್ಣೆಯಲ್ಲಿ  ಪ್ರೈ ಮಾಡಿ. 
ಡಿಪ್ ಮಾಡಲು ಸಾಸ್. ಕೆಂಪು ಮೆಣಸನ್ನು ಬಿಸಿ ನಿರಿ ನಲ್ಲಿ ಹಾಕಿಡಿ. ಮೆದುವಾದ ಮೇಲೆ ಉಪ್ಪು ವಿನೆಗರ್, ಬೆಳ್ಳುಳ್ಳಿ ಸಕ್ಕರೆ ಹಾಕಿ ಮಿಕ್ಸಿ ಯಲ್ಲಿ ಪೇಸ್ಟ್ ಮಾಡಿಕೊಳ್ಳಿ. 
ಬಿಸಿ ಬಿಸಿ ಸ್ಪ್ರಿಂಗ್ ರೋಲ್ ರೆಡಿ ಟು ಸರ್ವ್ 
ರಿಸಿಪಿ : ಫಾರುಖ್ ಅಜಿಜ್ ಅವರ ಬ್ಲಾಗ್ : http://cubesnjuliennes.com/

September 24, 2016

ಗೋವಾದ ಸಮುದ್ರತಟದಲ್ಲಿ ಮೀನು ಹಿಡಿಯುವ ನೋಟ

ಮಳೆಗಾಲದಲ್ಲಿ ಗೋವಾ ತುಂಬಾ ssss ಚಂದ ಇರ್ತದೆ ಅಂತ ಕೇಳಿದ್ದೆ. ಹಾಗಾಗಿ  ಹಿಂದಿನ ತಿಂಗಳು ಗೋವಾಕ್ಕೆ ಹೋಗುವ ಪ್ಲ್ಯಾನ್ ಹಾಕಿದೆವು. ಅಲ್ಲೊಂದು ಮದುವೆಯಿತ್ತು. ಮದುವೆಯನ್ನು ಸೇರಿಸಿ ಒಂದು ನಾಲ್ಕು ದಿನ ಗೋವಾದಲ್ಲಿ ಇರುವುದೆಂದಾಯಿತು. ಟ್ರೈನ್ ನಲ್ಲಿ ಟಿಕಟ್ ಕೂಡ ಕಾದಿರಿಸಲಾಯಿತು . ಮಧ್ಯಾಹ್ನ ಮೂರೂ ಗಂಟೆಯ ಟ್ರೈನ್ , ಮಡಗಾಂವ್ ಮುಂದಿನ ದಿನ ಬೆಳಿಗ್ಗೆ ೫. ೦೦ ಕ್ಕೆ ತಲುಪತ್ತದೆಂದು ಅಲ್ಲಿನ ಲೋಕಲ್ ಟ್ಯಾಕ್ಸಿ ಕೂಡ ಬುಕ ಮಾಡಿದ್ದೆ.  ಪ್ರಯಾಣಿಸುವ ದಿನ ಶ್ರೀಕಾಂತ ಗೆ ಎಷ್ಟು ಸಮಯಕ್ಕೆ ಆಫಿಸ್ ನಿಂದ ಬರಬೇಕು, ಊಟ ಮಾಡಿ ಎಷ್ಟು ಹೊತ್ತಿಗೆ ಹೊರಡಬೇಕೆಂದು ಹೇಳಿದ್ದೆ ಬಂತು. ರಾಯರು ಮನೆಗೆ ಬಂದು ಊಟ ಮಾಡಿ ನಾನು ಅಡಿಗೆ ಮನೆಯನ್ನು ಚೊಕ್ಕಟಗಳಿಸುವಷ್ಟರಲ್ಲಿ ತುಂಬಾ ನೇ ವಿಳಂಬವಾಗಿಹೋಯಿತು. ಟ್ರೈನ್ ಹೊರಡಲು ಐದು ನಿಮಿಷ ಮೊದಲು ತಲುಪಬಹುದೆಂದು ಅಂದಾಜಿಸಿ ಓಲಾ ಕ್ಯಾಬ್ ಬುಕ್ ಮಾಡಿ ಹೊರಟೆವು. ಆದರೆ ಕೋರಮಂಗಲದಲ್ಲಿ ವಿಪರೀತ ವಾಹನ ದಟ್ಟಣೆ ಹಾಗು ಟ್ರಾಫಿಕ್ ಜಾಮ್  ನಿಂದಾಗಿ ಟ್ರೈನ್ ಮಿಸ್ ಆಯಿತು. ಟ್ರೈನ್ ನಾವು ಯಶವಂತಪುರದಿಂದ ಹಿಡಿದಕೊಳ್ಳಬೇಕಿತ್ತು. ನಮ್ಮ ಓಲಾ ಕ್ಯಾಬ್ ನವನಿಗೆ ಸಖತ್ ಬೇಜಾರಾಗಿ ನಮಗೆ ತುಮಕೂರು ವರೆಗೂ ಡ್ರಾಪ್  ಕೊಡುವ ಉಮ್ಮೇದು. ನನಗ್ಯಾಕೋ ಅಲ್ಲಿ ಕೂಡ ವಿಳಂಬವಾಗೇ ತಲುಪುತ್ತೇವೆಂದು ಗೊತ್ತಾಯಿತು. ಇನ್ನೇನು ಮನೆಗೆ ವಾಪಸ್ ಆಗೋದು ಅಂದೆ. ಈ ತರಹದ್ದು ನಮಗೇನು ಹೊಸತಲ್ಲ. :-) ಆದರೆ ಶ್ರೀಕಾಂತ ಗೆ ಏನನ್ನಿಸಿತ್ತೋ ..ಬೇಡ ಪ್ರಯಾಣದ ತಯಾರಿ ಎಲ್ಲಾ ಆಗಿದೆ, ನಾನು ರಜೆ ಹಾಕಿ ಆಗಿದೆ , ಹರೀಶ್ ಫ್ರೀ ಇದ್ದರೆ ಅವರ ಗಾಡಿ ಬಾಡಿಗೆಗೆ ತೆಗೊಂಡು ಹೋಗುವ ಅಂತ ಓಲಾ ದವನಿಗೆ ಯಶವಂತಪುರದ ಬಿಡಲಿಕ್ಕೆ ಹೇಳಿದೆವು. ಹರೀಶ ಬಂದು ನಮ್ಮನ್ನು ಯಶವಂತಪುರದಿಂದ ಗೋವಾಕ್ಕೆ ಕರೆದುಕೊಂಡು ಹೋಗಲು  ಬರುವ 'ತನಕ ರಿಟರ್ನ್  ಟಿಕೆಟ್, ಅಲ್ಲಿನ ಗಾಡಿ ಕ್ಯಾನ್ನ್ಸಲ್ ಮಾಡೋದು ಮುಂತಾದ ಕೆಲಸ ಮಾಡಿದೆವು. ಸರಿಯಾಗಿ ೩. ೪೫ ಕ್ಕೆ ನಾವು ಬೆಂಗಳೂರು ಬಿಟ್ಟೆವು. ಸಂಜೆ ಒಂದು ಟಿ ಗೆ ನಿಲ್ಲಿಸಿದ್ದೆ ಸೀದಾ ಗೋವಾಕ್ಕೆ ಪ್ರಯಾಣ. ನಾವು ಧಾರವಾಡ ದಿಂದ ರಾಮನಗರ  ರೋಡ ಅನಮೋಡ್  ಘಾಟ  ಹಿಡಿದುಕೊಂಡು ಹೋದೆವು. ಕಾಡು ಪ್ರದೇಶದಲ್ಲಿ ನಮಗೆ ಹಲವಾರು ಕಾಡು ಪ್ರಾಣಿ ನೋಡಲು ಸಿಕ್ಕಿದವು.  ರಾತ್ರಿ ೧ ಗಂಟೆಗೆ  ನಾವು ಮಾರ್ದೋಳ ದೇವಸ್ಥಾನ ತಲುಪಿದೆವು. ಆ ರಾತ್ರಿ ನಾವು ದೇವಸ್ಥಾನದ ಗೆಸ್ಟ್ ಹೌಸ್ ನಲ್ಲಿ ಉಳಿದುಕೊಂಡೆವು.
ಮರುದಿನ ಮದುವೆ  ರಾಮನಾಥಿಯಲ್ಲಿ. ಅಲ್ಲೇ ಹತ್ತಿರದಲ್ಲಿದ್ದ  ಕೆಲವು ದೇವಸ್ಥಾನಗಳಿಗೆ ಭೇಟಿ ನೀಡಿ , ಕೊಲ್ವಾ ಬೀಚ್ ನಲ್ಲಿ ನಿಗದಿಪಡಿಸಿದ ಲಾಂಗಿನ್ಹಾಸ್  ರಿಸಾರ್ಟ್ ನಲ್ಲಿ ತಂಗಿದ್ದೆವು. ಗೋವಾದಲ್ಲಿ ಪೂರ್ತಿ ಮಳೆ. ಸಂಜೆ ಮಳೆಯಲ್ಲಿ ಒಂದು ರೌಂಡ್ ಬಿಚ ಗೆ ಆಮೇಲೆ ಕತ್ತಲಾದ  ಮೇಲೆ ಬೀಚ್ ಬಳಿ ಇರುವ ಮಾರ್ಕೆಟ್ ಗೆ ಹೋದೆವು. ಮರುದಿನ ಬೆಳಿಗ್ಗೆ ನಾವು ಬೀಚ್ ವಾಕ್ ನನ್ನ ಯೋಗ ಮುಂತಾದವುಗಳನ್ನು ಹಮ್ಮಿಕೊಂಡಿದ್ದೆವು. ನಾವು ಬೀಚ್ ಗೆ ಹೋಗುವಾಗ ಆಗಲೇ ಅಲ್ಲಿ ಮೀನು ಹಿಡಿಯುವ ತಯಾರಿ ನಡೆಯುತ್ತಿತ್ತು. ನಾವು  ಒಂದೂವರೆ  ಗಂಟೆ ಅವರು ಗಾಳ  ಹಾಕಿ ನಿಲ್ಲುತ್ತಾರೆ. ಒಂದು ದೋಣಿ ಸಮುದ್ರದಲ್ಲಿ  ಬಲೆ ಯಾ ತುದಿಯನ್ನು ಹಿಡಿದುಕೊಂಡು ಹೋಗುತ್ತೆ. ದಂಡೆಯ ಮೀಮೇಲೆ  ಸುಮಾರು ೬೦ ಜನರ ತಂಡ ಬಲೆಯ ಉಳಿದ ಭಾಗ   ಹಿಡಿದುಕೊಂಡಿದ್ದರು. ಆವಾಗಾವಾಗ  ಕ್ಯಾಚ್ ಈ  excitement ಎಷ್ಟು contagious ಇತ್ತಂದ್ರೆ ನಾವೇ ಮೀನು   ಹಿಡಿಯಲು ನಿಂತವರ ತರಹ. ಕೆಲವೊಮ್ಮೆ ಏನು ಸಿಗದೇ ಮರಳುತ್ತಾರಂತೆ. ಆಗ ಬೇಜಾರಾಗುವುದುಲ್ಲವಾ ಅಂದ್ರೆ, "ಅದರಲ್ಲೇನು ಬೇಜಾರು ಒಂದು ದಿನ  ತುಂಬಾ ಮೀನು ಇನ್ನೊಂದು ದಿನ ಸ್ವಲ್ಪ ಕೆಲವೊಮ್ಮೆ ಏನು ಸಿಗಲ್ಲ ಆದರೂ ನಮಗೆ ಜೀವನದಲ್ಲಿ ನಿರಾಸೆ ಆಗುವ ಸಂಭವ ಬಂದಿಲ್ಲ ಅಂದ ಅವರ ಲೀಡರ್.
ಅಲೆಗಳ ಹೊಡೆತಕ್ಕೆ ಬಲೇ ಆ ಕಡೆ ಈ ಕಡೆ   ತೇಲಿದಾಗ  ನಿಂತವರು ಬೇಗ ಬೇಗ ಜಾಗ ಬದಲಾಯಿಸುತ್ತಾ ಇರಬೇಕು ಇಲ್ಲದಿದ್ದರೆ ಬಲೆಯಲ್ಲಿ ಗಂಟುಗಳಾಗುವ ಸಂಭವ ಹೆಚ್ಚು. ಮತ್ತೆ ತೋಳುಬಲ ಕೂಡ ಬೇಕು. ಕೆಲಸಗಾರರಲ್ಲಿ ತಮಿಳು, ತೆಲುಗು ಕನ್ನಡ ಮಾತನಾಡುವವರು ಇದ್ದರು.
ಬಲೇ ಒಂದು ಸಲ ದಡಕ್ಕೆ ಬಂದ ಮೇಲೆ ಅದನ್ನು  ನೀಟಾಗಿ ಮಧ್ಯಕ್ಕೆ ತಂದು ಅಕ್ಕ ಪಕ್ಕ ಸಿಕ್ಕಿ ಹಾಕಿಕೊಂಡ ಮೀನನ್ನು ಒಂದು ಕಟ್ಟಿಗೆಯ ತುಂಡಿನಿಂದ ಹೊಡೆದು ಬಲೆಯ  ಮಧ್ಯ ಬೀಳುವಂತೆ ಮಾಡುತ್ತಾರೆ. ತುಂಬಾ ಚಿಕ್ಕ ಚಿಕ್ಕ ಮೀನುಗಳನ್ನು ಪುಟ್ಟ ಪುಟ್ಟ ಉಡುಗ ಹುಡುಗಿಯರು ಆರಿಸಿ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಒಂದು ದಿಂದ ಸಾರಿಗೆ ಸಾಕಾಗುವಷ್ಟು.
ಇಲ್ಲಿವೆ ಕೆಲವು ಚಿತ್ರಗಳು
 ನಾವಿದ್ದ ಮೂರೂ ದಿನವೂ ನನ್ನನ್ನು ಹಿಂಬಾಲಿಸಿದ ನಾಯಿ. ಮಳೆಯಿಂದ ರಕ್ಷಿಸಲು ಅಕ್ಕ ಅವನಿಗೆ ಕೊಡೆ ಹಿಡಿದಿದ್ದು









 ಕೊಂಕಣಿಯಲ್ಲಿ ನಾವು ಖಮ್ಮಟೆ ಅನ್ನುವ ಮೀನು. ಇದನ್ನು ಒಣಗಿಸಿ ಇದರ ಚಟ್ನಿ ಮಾಡುತ್ತಾರೆ. 



ಸಂಸ್ಥೆ ಬಿಟ್ಟು ಇದನ್ನೇ ಉದ್ದಿಮೆಯನ್ನಾಗಿ ಪರಿಗಣಿಸಿದರೆ ಹೇಗೆ?? :-) 

September 18, 2016

ಒಂದು ಗಿಣ್ಣಿನ ಕತೆ

ಗಿಣ್ಣು ಕೊಂಕಣಿಯಲ್ಲಿ ನಾವು ಪೋಸು ಅಂತೇವೆ. 

ತುಂಬಾ ಚಿಕ್ಕವಳಿದ್ದಾಗ ಅಜ್ಜಿಯ ಮನೆಯಲ್ಲಿದೆ ಕೆಲವು ಸಮಯ. ಕೇರಳದ ಕಾಸರಗೋಡಿನಲ್ಲಿ. ಅಜ್ಜಿಯ ಜತೆ ಅವರ ಮಗಳ(ನನ್ನ ಸೋದರತ್ತೆ) ಸಂಸಾರ ಕೂಡ ಇತ್ತು . ದೊಡ್ಡಕುಟುಂಬ. ಮನೆಯಲ್ಲಿ ಮೂರೂ  ಹಸುಗಳಿದ್ದವು. ನರ್ಮದಾ, ಗೋದಾವರಿ ಮತ್ತು ಕಾಳಿ. ಮೊದಲಿನೆರಡು ಸೌಮ್ಯ ಸ್ವಭಾವದವರಾಗಿದ್ದು ಕಾಳಿ ಮಾತ್ರ ಸಿಟ್ಟಿನವಳು. ಅವಳಹಾಲು ಕರೆಯಲು ನನ್ನ ಅಜ್ಜಿ ಅಥವಾ ಸೋದರತ್ತೆನೆ ಆಗಬೇಕಿತ್ತು. ಉಳಿದವುಗಳಿಗೆ ನನ್ನ ಮಾಮ  ಬೆಳಿಗ್ಗೆ ಸಂಜೆ ಹಾಲು ಕರೆಯುತ್ತಿದ್ದ. ಚಿಕ್ಕಂದಿನಿಂದಲೇ ನನಗೆ ನಿದ್ದೆ ತೀರಾ ಕಡಿಮೆ. ಅಜ್ಜಿ ಜತೆ ಬೆಳಿಗ್ಗೆ ಬೇಗನೆ ಎದ್ದು  ನಾನೂ ಕೊಟ್ಟಿಗೆಗೆ  ಹೊಗ್ತಿದ್ದೆ. ಒಂದು ತಂಬಿಗೆಯಲ್ಲಿ ಬೆಚ್ಚಗಿನ ನೀರು, ಇನ್ನೊಂದು ದೊಡ್ಡ ತಂಬಿಗೆ ಹಾಲು ಕರೆದು ಹಾಕಲು. ಮೊದಲಿಗೆ ಅಜ್ಜಿ ಉಗುರು ಬೆಚ್ಚಗಿನ ನೀರಿನಿಂದ ಅದರ ಸ್ಥನವನ್ನು  ತೊಳೆಯುತ್ತಿದ್ದರು. ಅದಕ್ಕೂ ಮುಂಚೆ ಅದಕ್ಕೆ ತಿನ್ನಲು ಹುಲ್ಲು ಹರವಿ, ಅದರ ಮೈದಡವುತ್ತಿದ್ದರು. ಆ ಮೇಲೆ ಲಲ್ಲೆ ಗೆರೆಯುತ್ತ ಮಾತನಾಡುತ್ತ ಹಾಲು ಹಿಂಡುವ ಕಾಯಕ. ಸ್ಟೂಲ್ ಮೇಲೆ ಕುಳಿತು ತಂಬಿಗೆಯನ್ನು ಮೊಣಕಾಲುಗಳ ಮಧ್ಯ ಹಿಡಿದು ಎರಡು ಕೈಯಿಂದ ಅದರ ಮೊಲೆಗಳನ್ನು ಎಳೆಯ ಬೇಕು ಸಣ್ಣಕ್ಕೆ ಹಾಲಿನ ಝರಿ ತಂಬಿಗೆಯಲ್ಲಿ ಬೀಳುತ್ತಿತ್ತು. ಕಂಚಿನ ತಂಬಿಗೆಯಾದ್ದರಿಂದ ಟಿನ್ ಟಿನ್ ಸದ್ದು  ಬರೋದು. :-) ಆಮೇಲೆ ಅಡಿಗೆ ಮನೆಯ ಓಲೆ ಹಚ್ಚಿ ಹಾಲಿಗೆ ಸ್ವಲ್ಪ ನೀರು ಬೆರೆಸಿ ಅದನ್ನು ಕಾಯಿಸಲಿಕ್ಕಿಟ್ಟು  ಬೆಳಗ್ಗಿನ ತಿಂಡಿಗೆ ತಯಾರಿ. ಹೆಚ್ಚಾಗಿ ಉದ್ದಿನ ಅಕ್ಕಿಯ ಇಡ್ಲಿ ದೋಸೆ ಕಡುಬುಗಳೇ ಆಗುತ್ತಿದ್ದರಿಂದ ಅದರ ಚಟ್ನಿ ಗೆ ರುಬ್ಬುವುದು ಮುಂತಾದ್ದು ಮಾಡುತ್ತಿದ್ದರು. ...... ಇರಲಿ ಈ ಕತೆ ಮುಂದೆ ಯಾವಾಗಲಾದರೂ. ಆ ಹಾಲಿಗೆ ಏನು ರುಚಿ !!!!
ಒಂದು ದಿನ ರಾತ್ರಿ, ಹೀಗೆ ರಜೆಗೆ ಹೋಗಿದ್ದೆವು ಆಗ. ನರ್ಮದಾ ರಾತ್ರಿ ಇಡೀ ಅಂಬಾ sss ಅಂಬಾ ಅನ್ನುವುದು,ಅಜ್ಜಿ ಸೋದರತ್ತೆ ಪಾಳಿಯಲ್ಲಿ ಕೊಟ್ಟಿಗೆಗೆ ಹೋಗುವುದು ಬರುವುದು ,ಇನ್ನೂ  ಇಲ್ಲ ಅನ್ನುವುದು ನಡಿತಾ ಇತ್ತು. ನನಗೂ  ಎಚ್ಚರ. ಏನಜ್ಜಿ ಅಂತಾ ಕೇಳಿದೆ. ಏನಿಲ್ಲ ನೀನು  ಮಲಗು ನರ್ಮದೆ  ಕರು ಹಾಕಲು ತಯಾರಾಗಿದೆ ಅಂದರು. ಯಾವಾಗಲೋ ನನಗೆ ನಿದ್ದೆ. ಬೆಳಿಗ್ಗೆ ನೋಡಿದರೆ ಪುಟಾಣಿ  ಕರು . ಆದರೆ ನನಗೆ ಆವಾಗ ಗಿಣ್ಣು /ಪೋಸು   ತಿಂದ ನೆನಪಿಲ್ಲ. ಯಾವಾಗಲೋ ದೊಡ್ಡವಳಾದ ಮೇಲೆ,ಕರು ಹುಟ್ಟಿದ ಅಥವಾ ಮನುಜರಿಗೆ  ಮಗು ಹುಟ್ಟಿದ ನಂತರ ಬರುವ ಹಾಲಿಗೆ Colostrum ಅಂತಾರಂತಲೂ ಅದು ಕರುವಿಗೆ/ಮಗುವಿಗೆ ಕಾಯಿಲೆಗಳಿಂದ antibiotic ಉಪಾದಿಯಲ್ಲಿ ಕೆಲಸ ಮಾಡುತ್ತದೆಂದು  ಓದಿದ ನೆನಪು. ಹಾಗಾಗಿ ಅಜ್ಜಿ/ಸೋದರತ್ತೆ ಬಹುಶ: ಕರುವಿಗೆ ಆ ಹಾಲಿನ ವಂಚನೆ ಮಾಡುತ್ತಿರಲಿಲ್ಲವೆಂಬುದು ನನ್ನ ಎಣಿಕೆ. ಅವರನ್ನು ಕೇಳುವಾ ಅಂದರೆ ಅವರಿಬ್ಬರೂ ಈಗ ಕಾಲವಾಗಿದ್ದಾರೆ. 
ಗಿಣ್ಣು ನಾನು ತಿಂದಿದ್ದು ಮದುವೆಯಾದ ಮೇಲೆ ತೀರ್ಥಹಳ್ಳಿಗೆ ಬಂದ ಮೇಲೆ. ಅಲ್ಲಿ ಕೂಡು ಕುಟುಂಬ. ಮನೆಯಲ್ಲಿ ಆಗ ಹಸುಗಳು ಇರಲಿಲ್ಲ. ನಾನು ಮದುವೆಯಾಗಿ ಬರುವ ನಾಲ್ಕೈದು ವರ್ಷದ ಹಿಂದೇನೆ ಹಸು ಕಟ್ಟುವುದನ್ನು ನಿಲ್ಲಿಸಿದ್ದರಂತೆ. ಬೇರೆಯವರ ಮನೆಯಿಂದ ಗಿಣ್ಣು ತಂದುಕೊಡುತ್ತಿದ್ದರು.  ಹಾಗಾಗಿ ಆಸ್ವಾದಿಸುವಷ್ಟು ಗಿಣ್ಣು ಸಿಗುತ್ತಿರಲಿಲ್ಲ. ಒಂಚೂರು ಬಾಯಿಗೆ ಹಾಕುತ್ತಲೇ ಅದು ಯಾವಾಗಲೋ ಉದರದೊಳಗೆ ಮಾಯವಾಗುತ್ತಿತ್ತು. ಅದರ ರುಚಿ ಗೊತ್ತಾಗುತ್ತಿರಲಿಲ್ಲ. ಬೆಂಗಳೂರಿಗೆ ಬಂದ ಮೇಲೆ ಇಲ್ಲಿನ ಎಕ್ಸಿಭಿಶನ್ ನಲ್ಲೆಲ್ಲಾ ಪುಟ್ಟ ಪ್ಲಾಸ್ಟಿಕ್ ಡಬ್ಬಿಯಲ್ಲಿ ಗಿಣ್ಣು ಸಿಗುತ್ತಿದ್ದದ್ದು ನೋಡಿ ಸಖೇದಾಶ್ಚರ್ಯ ?? ಅರೆ ಇದೇನು ಧಂಡಿಯಾಗೆ ಸಿಗುತ್ತಿದೆ ಇಲ್ಲಿ  ಅಂತ!ಮಕ್ಕಳಿಗೆ ಅದರ ರುಚಿ ತೋರಿಸುವಾ ಅಂತ ಒಂದು ಪುಟ್ಟ ಡಬ್ಬಿ ತೆಗೊಂಡಿದಿದೆ. ಮಾಲವಿಕಾಳಿಗೆ ಅಷ್ಟು ಇಷ್ಟ ಆಗಿರಲಿಲ್ಲ. ನನಗೋ ಅದರ ರುಚಿ ಗೊತ್ತಾಗಲೇ ಇಲ್ಲ. ಶ್ರೀಕಾಂತ ಮಾತ್ರ ಇದು ಗಿಣ್ಣು ಅಲ್ಲವೇ ಅಲ್ಲ ಅಂದು ಬಿಟ್ರು.  ಆಮೇಲೆ ಇತ್ತೀಚಿಗೆ ತೀರ್ಥಹಳ್ಳಿಯಿಂದ ಆಗುಂಬೆಯ ಕಸ್ತೂರಿ ಅಕ್ಕನ ದೊಡ್ಡಮನೆಗೆ ಭೇಟಿಯಿತ್ತಾಗ ಅವರು ಪ್ರೀತಿಯಿಂದ ಫ್ರಿಜ್  ನಲಿದ್ದ ಬೆಲ್ಲದಿಂದ ಮಾಡಿದ ಗಿಣ್ಣು ತಿನ್ನಲು ಕೊಟ್ಟರು. ಅದು ಸ್ವಲ್ಪವೇ ಇತ್ತು . ಮುಜುಗರದಿಂದ ಒಂಚೂರು ನಾಲಿಗೆ ಮೇಲೆ ಹಾಕ್ಕೊಂಡೆ. 

ಪಾಕ ಶಾಲೆ ಅಂತ ಫೇಸ್ ಬುಕ್ ನ ಒಂದು  ಗ್ರೂಪ್ ನಲ್ಲಿದ್ದೇನೆ ನಾನು. ಅಲ್ಲಿ ಗಿಣ್ಣು  ಮಾಡುವ ರೆಡಿ ಮೆಡ್ ಪ್ಯಾಕೆಟ್ ಸಿಗುತ್ತದೆಂದು ಕೇಳಿದ್ದೆ. ಆದರೆ ತಂದು ಮಾಡಬೇಕೆನಿಸಲಿಲ್ಲ. ಮೊನ್ನೆ ಶ್ರೀಕಾಂತ ಮಲ್ಲೇಶ್ವರದ ಕಿಣಿ ಮಾಮನ ಅಂಗಡಿಗೆ ಹೋಗಿದ್ದರು. ಅಲ್ಲಿಂದ ಈ ಕಾಮಧೇನು ಗಿಣ್ಣು ಮಿಕ್ಸ್ ತಂದಿದ್ದರು.  
ಇಲ್ಲಿದೆ ನೋಡಿ ಪ್ಯಾಕೆಟ್ಟು ಮತ್ತು ನಾನು ಮಾಡಿದ ಗಿಣ್ಣು. ಏಲಕ್ಕಿ ಮಾತ್ರ ಹಾಕಲಿಲ್ಲ. ಉಳಿದ ತಯಾರಿ ಪ್ಯಾಕೆಟ್ ಹಿಂದುಗಡೆ ನಮೂದಿಸಿದಂತೆ. 
ಅರ್ಧ ಪ್ಯಾಕೆಟ್ ಹಸಿ ಹಾಲಲ್ಲಿ  , ೧೦೦ ಗ್ರಾಮ್ ಸಕ್ಕರೆ ಅಥವಾ ಬೆಲ್ಲ , ಏಲಕ್ಕಿ ಪುಡಿ , ಗಿಣ್ಣು ಪುಡಿ ಗಂಟಾಗದಂತೆ ಮಿಶ್ರ ಮಾಡುವುದು. ೧೫ ನಿಮಿಷ ಹಬೆ ಪಾತ್ರೆಯಲ್ಲಿ ಬೇಯಿಸುವುದು. ತಣಿದ ನಂತರ ಫ್ರಿಜ್  ನಲ್ಲಿ ಹಾಕಿಡುವುದು . ನಾನು ಎರಡು ಮೂರೂ ದಿನ ಉಳಿಯುತ್ತೆ ಅಂದುಕೊಂಡರೆ  ಒಂದೇ ಒಂದು ಪೀಸ್ ಉಳಿದಿದೆ. ನೀವು ತಂದುಕೊಂಡು ಮಾಡಿಕೊಂಡು ತಿನ್ಕಳ್ಳಿ