ಇವತ್ತು ಪಟ್ಟು ಹಿಡಿದು ಬರೀಲಿಕ್ಕೆ ಕೂತಿದ್ದೇನೆ. ತಿಂಗಳ ಮೇಲಾಯಿತು ಏನೂ ಬರೆದೆ ಇಲ್ಲ. ವಾಕಿಂಗ್ ಹೋದಾಗ ನೋಡಿದ ದೃಶ್ಯದ ಆಧಾರದ ಮೇಲೆ ಈ ಸಣ್ಣ ಕತೆ ಹೆಣೆದಿದ್ದೇನೆ..ಒಪ್ಪಿಸಿಕೊಳ್ಳುವಂತವರಾಗಿ....:-)
.
.
.
.
.
.ಮನೋರಮಾ ಗಾರ್ಡನ್ ನ ಸುತ್ತು ಹೊಡೆದು ಬರುವಾಗ ಈ ದೃಶ್ಯ ಅವಳಿಗೆ ಎದುರಾಯಿತು. ಅವಳ ಅಮ್ಮ ಒಬ್ಬ ಗಂಡಸಿನ ಜತೆ ಅವ್ಯಾಚ್ಯ ಶಬ್ದಗಳಿಂದ ಜಗಳವಾಡುತ್ತಿದ್ದಳು..’ಏನೋ ನೀನು ನನ್ನ ಮಗಳ ಮಿಂಡ ನಾ? ಏನು ಅವಳ ಜತೆ ನಿನ್ನ ಖುಸುಪುಸು? ನೀವು ಒಟ್ಟಿಗೆ ಇದ್ದದ್ದನ್ನ ನಾನು ನೋಡಲಿಲ್ಲ ಅಂದುಕೊಂಡೆಯಾ ಹೇಗೆ? ಬೋಸುಡಿ ಮಗನೆ..ಅಂದದ್ದು ಮಾತ್ರವಲ್ಲ ಅಲ್ಲೆ ಇದ್ದ ಇಟ್ಟಿಗೆಯನ್ನು ಎತ್ತಿಕೊಂಡಳು ಅವನನ್ನು ಹೊಡೆಯಲು. ಇದೆಲ್ಲ ನೋಡಿ ಮನೋರಮಾ ಓಡು ನಡಿಗೆ ಯಿಂದ ಅವರ ಬಳಿ ಬಂದು, ಅವಳ ಅಮ್ಮ ಕೈ ಎಳೆದಳು , ಆ ಜಾಗ ದಿಂದ ಹೊರಡಲು..ಆದರೆ ಅವಳ ಅಮ್ಮನ ಬೈಗಳು ಇನ್ನೂ ನಿಂತಿರಲಿಲ್ಲ..ಅಷ್ಟೆ ಅಲ್ಲ ಆ ವ್ಯಕ್ತಿ ತಬ್ಬಿಬ್ಬಾಗಿ ಇವರಿಬ್ಬರ ಬಳಿ ನೋಡುತ್ತಿದ್ದ. ಗಾರ್ಡನ್ ಬಳಿಯಿಂದ ಹಲವಾರು ಒಳದಾರಿಗಳು ಮುಖ್ಯ ರಸ್ತೆಗೆ ಒಯ್ಯುತ್ತಿದ್ದವು. ಹಾಗೆ ಈ ವ್ಯಕ್ತಿ ಕೂಡ ಶಾರ್ಟ್ ಕಟ್ ಬಳಸಲು ಈ ದಾರಿಯಿಂದ ಬಂದರೆ ಇಲ್ಲಿ ಹೀಗೆ.... ಮನೋರಮಾ ಅವರಿಗೆ ’ಹೋಗಿ ಸರ್..ಅಮ್ಮನಿಗೆ ಸ್ವಲ್ಪ ತಲೆ ಸರಿಯಿಲ್ಲ..ತುಂಬಾ sorry. ಅಂದಳು , ಮುಖ ಎಲ್ಲ ನಾಚಿಕೆ ಅವಮಾನದಿಂದ ಕೆಂಪಗಾಗಿತ್ತು. ಅವನು ಸಿಟ್ಟು ತಿರಸ್ಕಾರದಿಂದ...ಏನ್ರೀ ಮೆಂಟಲ್ ಹಾಸ್ಪಿಟಲ್ ಸೇರಿಸೋದು ಬಿಟ್ಟು ಹೀಗೆ ದಾರಿ ಹೋಕರನ್ನ ಬೈಯ್ಯೋದ...?? ಮೆಂಟಲ್ ನನ್ನ್ಮಕ್ಕಳು..ಅಂತ ಅಲ್ಲಿಂದ ಹೊರಟು ಹೋದ.
ಮನೋರಮಾ ’ಬಹುಶ: ನಾನು ಇವತ್ತು ಎದುರಿನ ಬಾಗಿಲು ಸರಿಯಾಗಿ ಎಳೆದುಕೊಂಡಿಲ್ಲಾ ಹಾಗಾಗಿ ಅಮ್ಮ ಮನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು’ ಅಂದು ಕೊಂಡು ಅಮ್ಮನನ್ನು ಎಳೆದುಕೊಂಡೆ ಮನೆಗೆ ಬಂದಳು. ಇತ್ತೀಚಿಗೆ ಅವಳ ಅಮ್ಮನಿಗೆ ಅವಳ ಮೇಲೆ ಸಂಶಯ ಜಾಸ್ತಿಯಾಗಿತ್ತು. ಆಫಿಸ್ ಕೆಲಸ ಮುಗಿಸಿ ಕೆಲವೊಮ್ಮೆ ಮನೆಗೆ ಬರುವಾಗ ಲೇಟ್ ಆದರೆ ’ಏನೇ ಯಾರ ಜತೆ ಚಕ್ಕಂದ ಆಡ್ತೀದ್ದಿ..ಅಂತಲೋ....ಬೋಸುಡಿಕೆ ಆಫಿಸ್ ಗೆ ಹೋಗ್ತೀಯಾ ಎಲ್ಲಿ ಅಂಡಲಿಲಿಕ್ಕೆ ಹೊಗ್ತೀಯ ಎಂಬಂತಹ ಅವ್ಯಾಚ್ಯ ಶಬ್ದಗಳ ಬಳಕೆ ಇತ್ತೀಚಿಗೆ ವಿಪರೀತ ವಾಗಿತ್ತು. ಅಷ್ಟೆ ಅಲ್ಲ ನ್ಯುಸ್ ಪೇಪರ್ ಬಿಲ್, ಹಾಲಿನವ, ಹೂವಿನವ ಬಂದಾಗಲೆಲ್ಲ ಇಂತವೇ ಬೈಗಳು. ಆಫಿಸಿನಿಂದ ಮನೆಗೆ ಮರಳಿ ಮನೆಗೆ ಬಂದಾಗ ಒಂದು ಲೋಟ ಬಿಸಿ ಟೀ ಯಾರಾದರೂ ಮಾಡಿಕೊಡುವಂತಿದ್ದರೆ...ರೆ....ರೆ.....
ಬಾಗಿಲಿನ ಸದ್ದಾದಾಗ ಮನೋರಮಾ ಎದ್ದು ಹೊರಗೆ ಬಂದಳು. ಅವಳ ಸ್ನೇಹಿತೆ ಲತಾ ಬಂದಿದ್ದಳು. ’ಏನಾಯಿತು? ಅದೇ ಹಳೆ ಪ್ರಾಬಲ್ಂ ಆ?? ಯಾಕೆ ಅಳ್ತಾ ಇದ್ದೀಯಾ? ನಿನಗೆ ಎಷ್ಟೊಂದು ಸಾರಿ ಸಮಜಾಯಿಸಿ ಹೇಳಿದೆ ಅಮ್ಮನಿಗೆ ಒಂದು ಒಳ್ಳೆಯ ಸ್ಯಾನಿಟೋರಿಯಮ್ ಗೆ ಸೇರಿಸು ಅಂತ. ಇನ್ನೂ ಎಷ್ಟು ಅಂತ ಅನುಭವಿಸುತ್ತೀಯಾ?? you have a right to be happy. ಈಗಲೇ ನಿನಗೆ 28 . ಯಾರಿಗೋಸ್ಕರ ತ್ಯಾಗ ಮಾಡುತ್ತೀಯಾ?...ಮನೋರಮಳ ಸಪ್ಪಗಿನ ಮುಖ ನೋಡಿ..’ ನೋಡು ರಮ್ಮಿ, ಒಂದು ಮಾತು ಕೇಳ್ತಿಯಾ?? ಕೆಲವು ದಿನಗಳ ಮಟ್ಟಿಗೆ ಅಮ್ಮನನ್ನು ಸ್ಯನಿಟೋರಿಯಮ್ ನಲ್ಲಿಡುವ ಪ್ಲಾನ್ ಮಾಡು. ನೋಡು ಇನ್ನೂ ಪಾಪ ಪ್ರಜ್ಝೆ ಕಾಡುತ್ತಿದ್ದರೆ ಅಲ್ಲಿಂದ ಕರೆದುಕೊಂಡು ಬರುವಾ ಆಗದೆ?? ಇವತ್ತು ನೀನು ಆಲೋಚನೆ ಮಾಡು. ಯಾಕಂದ್ರೆ ಪರಿಸ್ಥಿತಿ ಮೀರುತ್ತಾ ಇದೆ. ಅಕ್ಕಪಕ್ಕದವರಿಗೂ ನಿನ್ನಮ್ಮನ ಮಾತುಗಳು ಕೇಳಿ ಕಿರಿಕಿರಿಯಾಗ್ತಾ ಇದೆ. ಸುಮ್ನೆ ಅವರೆಲ್ಲರ ಕಂಪ್ಲೈನ್ ಬರುವ ಮುಂಚೆ ಏನಾದರೂ ನಿರ್ಧರಿಸು. ನಾನಿದ್ದೀನಿ ನಿನ್ನ ಜತೆ. ಸರಿ..ಸಂಜೆ ಸಿಗ್ತೀನಿ,,ಆಫಿಸ್ ಗೆ ಲೇಟ್ ಆಯ್ತು..
.
.
.
.
.
.
.
ಅಂತೂ ಗಟ್ಟಿ ಮನಸ್ಸು ಮಾಡಿ ಮನೋರಮಾ ತನ್ನ ತಾಯಿಯನ್ನು ಪ್ರಖ್ಯಾತ ಆಶ್ರಮವೊಂದಕ್ಕೆ ಸೇರಿಸಿ ಬಂದಳು. ಒಂದು ನಾಲ್ಕು ದಿನ ತುಂಬಾ ಸಂಕಟ ಪಟ್ಟಳು. ತಿಂಗಳಿಗೊಮ್ಮೆ ಅವಳು ತನ್ನ ಅಮ್ಮನನ್ನು ಕಾಣಬಹುದಿತ್ತು. ಸ್ವಲ್ಪ ಹೆಚ್ಚೆ ಖರ್ಚಾದರೂ ಅಲ್ಲಿನ ವಾತಾವರಣ ಚೆನ್ನಾಗಿತ್ತು. ದೊಡ್ಡ ತೋಟದ ಮಧ್ಯೆ ಈ ಆಶ್ರಮ. ಅಲ್ಲಿ ಸೇರಿಸಿರುವ ಎಲ್ಲರಿಗೂ ಚೆನ್ನಾಗಿ ನೋಡಿಕೊಳ್ಳುವವರಿದ್ದರು. ದಿನಾ ಭೇಟಿ ಕೋಡುವ ವೈದ್ಯರು, ಯೋಗಾ ಕ್ಲಾಸ್ ಮುಂತಾದವು
.
.
.
.
..
ಈಗ ಸ್ವಲ್ಪ ಪ್ಲ್ಯಾಶ್ ಬ್ಯಾಕ್ ಗೆ ಹೋಗುವಾ....
ಮನೋರಮಾ ಅವಳ ಅಪ್ಪ ಅಮ್ಮನಿಗೆ ಮೂರನೆಯವಳು..ಅದೂ ಅವಳ ಅಮ್ಮನಿಗೆ 40 ರ ಮೇಲಾಗಿತ್ತು. ಮುಟ್ಟು ನಿಲ್ಲುವ ಸಮಯ ಎಂದು ನಿರ್ಲಕ್ಷಿಸಿದ್ದೆ ತಪ್ಪಾಯಿತು. ತಾನು ಗರ್ಭಿಣಿ ಎಂದು ಅರಿವಾದಾಗ ತುಂಬಾ ವಿಳಂಬವಾಗಿತ್ತು. ತೆಗೆಸಿದರೆ ಅವರ ಜೀವಕ್ಕೆ ಅಪಾಯ ಎಂದು ವೈದ್ಯರು ಹೇಳಿದ್ದರು. ಅಂತೂ ಇಂತೂ ಕಷ್ಟಕರ ಡೆಲಿವರಿಯಾಗಿ ..ಚೇತರಿಸಿಕೊಳ್ಳಲು ಅವಳ ಅಮ್ಮನಿಗೆ ತುಂಬಾ ಸಮಯ ಬೇಕಾಯಿತು. ಮನೋರಮಳಿಗೆ ಇಬ್ಬರು ಅಣ್ಣಂದಿರು..ಆಗಲೇ ಕಾಲೇಜು ಮುಗಿಸಿ, ಮನೋರಮೆಗೆ ತಿಳಿವಳಿಕೆ ಬರುವಷ್ಟರಲ್ಲಿ, ಕೆಲಸದ ಮೇಲೆ ಹೊರದೇಶಕ್ಕೆ ಹೋದವರು ಅಲ್ಲೇ ಮದುವೆ ಮಕ್ಕಳು ಮನೆ ಅಂತ ಮಾಡಿ ಹಾಯಾಗಿದ್ದರು. ತಮ್ಮ ಇಳಿವಯಸ್ಸಿನಲ್ಲಿ ತನಗೆ ಆಸರೆಯಾಗ ಬಹುದೆಂದು ತಿಳಿದುಕೊಂಡ ಅಮ್ಮನಿಗೆ ಇದರಿಂದ ಆಘಾತವಾಯಿತು. ಏತನ್ಮಧ್ಯೆ ಮನೋರಮಾಳ ತಂದೆಯ ದೇಹಾಂತವಾಗಿತ್ತು. ಮಗಂದಿರಿಬ್ಬರೂ ದೂರವೇ ಉಳಿದರು. ಪತ್ರವಿಲ್ಲ, ಮಾತುಕತೆಯಿಲ್ಲ..ಎನೂ ಇಲ್ಲ. ಮನೋರಮಾ ಕಲಿಯುವುದರಲ್ಲಿ ಜಾಣೆ. ಸ್ವಂತ ಪ್ರತಿಭೆಯಿಂದ ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗದಲ್ಲಿದ್ದಳು. ಅಮ್ಮನನ್ನು ನೋಡಿಕೊಳ್ಳಲ್ಲು ಯಾರು ಇಲ್ಲವೆಂದು ಮದುವೆ ಕೂಡ ಮಾಡದೇ ಉಳಿದುಕೊಂಡಿದ್ದಳು. ಇತ್ತೀಚಿಗೆ ಅವಳ ಅಮ್ಮನಿಗೆ ತುಂಬ ಹೆದರಿಕೆ. ಗಂಡು ಮಕ್ಕಳು ಕೈ ಬಿಟ್ಟರು. ಮನೋರಮಾ ಕೂಡ ಮದುವೆಯಾಗಿ ಹೋದರೆ ಎಂಬ ಭಯದಿಂದ ಅವರ ಮಾನಸಿಕ ಕಾಯಿಲೆ ಉಲ್ಬಣಿಸಿತ್ತು. ಯಾರದರೂ ಚಿಕ್ಕ ಪ್ರಾಯದ ಗಂಡಸನ್ನು ನೋಡಿದರೆ ಅವರು ಮನೋರಮೆಯನ್ನು ಮದುವೆ ಮಾಡಿಕೊಂಡು ಹೋಗುತ್ತಾರೆಂಬ ಭ್ರಮೆ...ಹಾಗಾಗೀ ಗಾರ್ಡನ್ ಬಳಿಯ ಆ ವ್ಯಕ್ತಿಯೊಂದಿಗೆ ಹಾಗೇ ಬಿಹೇವ್ ಮಾಡಿದ್ದರು
.
.
.
.
ಲತಾ ಹೇಳಿದ ಹಾಗೆ ನಾಲ್ಕು ದಿನ ಮನೋರಮಾಗೆ ಗಿಲ್ಟ್ ಕಾಡಿತ್ತು. ಆದರೆ ಅಲ್ಲಿ ಅಮ್ಮ ಡಾಕ್ಟರ್, ಔಷಧಿ ಯೋಗದ ಪರಿಣಾಮದಿಂದ ಮಾನಸಿಕ ಶಾಂತಿ ಪಡೆದಿದ್ದರು. ಮನೋರಮ ತನ್ನ ಉದ್ಯೋಗದಲ್ಲಿ ಇನ್ನಷ್ಟು ತೊಡಗಿಸಿಕೊಂಡು ಪ್ರೋಮೋಷನ್ ನಿರೀಕ್ಷೆಯಲ್ಲಿದ್ದಾಳೆ. ಇನ್ನೆರಡು ತಿಂಗಳಲ್ಲಿ ಮದುವೆ ಕೂಡ ಇದೆ....
ನನಗೆ ಇನ್ವಿಟೇಶನ್ ಕಳಿಸಿದ್ದಾಳೆ...ನೀವೂ ಬರಬಹುದು....
-:-)
.
,
7 comments:
Hopefully mother also will be back with Manorama now that her health is improved :-)
you have a right to be happy. enno maatu kelavomme hosa nirdhaaragalannu tegedukollalu naadi agutte.
thank you Radhika...hopefully with the grandchildren around she can fully recover. i have seen miracles happen...and i believe in them!! :-)
manasinamane:hEgiddeeri? nimm blog hesaru badalaayisidraa??
thank you. u r back after a very very long time.
nanu aaraamaagiddeeni madam. neevu hegiddeeri? nan blog hesaru badalisilla. nimmanta hitaishi blaagigara seleta matte karetandide.
nimage mail madlikke prayatna maaide aagalilla.
manasinamane@gmail.com
ಈ ನೆಪದಲ್ಲಾದರೂ ಅವರ ತಾಯಿಗೆ ಹುಷಾರಾದರೆ ಸಾಕು.
ಈಕೆಯೂ ಮದುವೆಯಾಗಿ ಖುಷಿಯಾಗಿರಲಿ.
Lets hope possitive...
ಸೂಕ್ಷ್ಮ ಕತೆ. ನಿರೂಪಣೆ ಚೆನ್ನಾಗಿದೆ.
-->
ಪುಷ್ಪರಾಜ್
Thank you Badari...FB nalli hakidakke. serious aagi tegObeDi yaaroo..it's just a story...
thank you Pushparaj Chowta...:-)
Post a Comment