December 19, 2016

ಗೋವಾದ ಉಂಡೆ ಪಾವ್ / ಪೊಯ್ ಭಾಕ್ರಿ



ಗೋವಾದಲ್ಲಿ ಚಾಂಡೋರ್ ಎಂಬ ಚೆಂದದ ಊರು. ಅಲಿ ಶ್ರೀಕಾಂತ ಬ್ಯಾಂಕ್ ಫ್ರೆನ್ಡ್ ಮಿಲಿಂದ್ ಸರದೇಸಾಯಿ ಯವರ ಮನೆ. ಗೋವಾ ಟೂರ್ ಹೋದಾಗ ಒಂದಿನ ಅವರ ಮನೇಲಿ ಅತಿಥಿ ಸತ್ಕಾರ. ಅವರ ಹೆಂಡತಿಗೆ ಅಷ್ಟೊಂದು ಆರಾಮ್ ಇಲ್ಲದಿದ್ದರೂ ನಮಗೋಸ್ಕರ ಹಲವಾರು ನಾನ್ ವೆಜ್ ಅಡಿಗೆ ಮಾಡಿದ್ದಲ್ಲದೆ, ಮಾಳವಿಕಾ ಗೋಸ್ಕರ ವೆಜಿಟೇರಿಯನ್ ಅಡಿಗೆ ಮಾಡಿಟ್ಟಿದ್ದರು ಪಾಪ. ಈ ಎಲ್ಲ ಅಡಿಗೆಗೂ ಪಾವ್ ಬೇಕೇ ಬೇಕಿತ್ತು. ಹಾಗಾಗಿ ನಾವು ಬ್ರಗಾಂಜ ಪ್ಯಾಲೇಸ್ ಮ್ಯೂಸೆಯಂ ಗೆ ಹೋಗಿ ವಾಪಸ್ ಮನೆಗೆ ಬರುವಾಗ ಪಾವ್ ಮಾಡುವ ಜೋಕಿಮ್ (Joaquim) ಡಿಸೋಜಾ ಅವರ ಬೇಕರಿಗೆ ಭೇಟಿ ನೀಡಿದೆವು, ಅವರ ಹೆಂಡತಿ ಮತ್ತು ಇಬ್ಬರು ಮಕ್ಕಳು ಈ ಬೇಕರಿ ನಡೆಸಲು ಸಹಾಯ ಮಾಡುತ್ತಾರಂತೆ.







ಇಲ್ಲಿವೆ ಕೆಲವು ಚಿತ್ರಗಳು. ತಾಜಾ ಪಾವ್ ಗಳಿಗೆ ಇವರಿಗೆ ತುಂಬಾ ಡಿಮಾಂಡ್, ಈಗಲೂ ಮರದ ಕಟ್ಟಿಗೆ ಬಳಸಿ ಪಾವ್ ಮಾಡುವ ಕೆಲವೇ ಕೆಲವು ಬೇಕರಿಗಳಲ್ಲಿ ಡಿಸೋಜಾ ಅವರದ್ದು ಒಂದು. ಹಿಟ್ಟು ಹುದುಗಿ ಬರಲು ೬-೮ ಗಂಟೆ ಇಡ್ತಾರಂತೆ. ಬೆಳಿಗ್ಗೆ ೬ ಗಂಟೆಗೆ ಪಾವ್ ಮಾಡಲು ಶುರು ಮಾಡ್ತಾರಂತೆ. ನಮಗೆ ಬಿಸಿ ಬಿಸಿ ಪಾವ್ ಕೊಟ್ಟರು ತಿನ್ನಲು. ಎಷ್ಟು ರುಚಿಯಾಗಿತ್ತು. ಆದರೆ ಅವರು ಅವರ ಪಾವ್ ನ ರ್ರೀಇಪಿ ಹೇಳಲು ನಗು ನಗುತ್ತಾ ನಿರಾಕರಿಸಿದರು. :-)

ಇದಕ್ಕೆ ಬೇಕಾಗುವ ಹುಣಸೆ  ಕಟ್ಟಿಗೆ ಇವರು ಕರ್ನಾಟಕದಿಂದ ತರಿಸುವುದಂತೆ. ಒಂದು ಟ್ರಕ್  ಲೋಡ್ ಗೆ  ೩೦ ಸಾವಿರ ಅವರಿಗೆ ೬ ತಿಂಗಳಿಗೆ ಸಾಕಾಗುವುದಂತೆ. ಹುಣಸೆ ಕಟ್ಟಿಗೆಯ ಶಾಖ ಬಹಳ ಹೊತ್ತು ಇರುತ್ತದೆ ಅಂತ ಹೇಳಿದರು.


ಜೋಕಿಮ್ , ಶ್ರೀಕಾಂತ ಮತ್ತು ಮಿಲಿಂದ ಸರದೇಸಾಯಿ 

ಇದಕ್ಕೆ ರಾಕೆಟ್ ಪಾವ್ ಅಂತಾರೆ. ಇದ್ರ texture ಸಾಫ್ಟ್ ಇರುತ್ತೆ. 

ತಣ್ಣಗಾಗಲು ಇತ್ತ ಪಾವ್ 

ಮೂರೂ ನಾಲ್ಕು ಬಗೆಯ ಪಾವ್ ಅನ್ನು ನಾವು ಖರೀದಿಸಿದೆವು ಬೆಂಗಳೂರಿಗೆ ತರಲು 

November 16, 2016

demonetization ಎರಡು ಚುಟುಕು ಕತೆಗಳು

೧........ 
ಆತ ಕಾಯುತ್ತಲಿದ್ದ. ಅಹಂಕಾರದ ಹೆಂಡತಿ ಈಗ ತಿಜೋರಿಯಲ್ಲಿದ್ದ ಹಣ ನನ್ನ ಬಳಿ ತಂದು 'ಈಗೇನು ಮಾಡುವುದು' ಅಂತ ಕೇಳೇ ಕೇಳ್ತಾಳೆ ಅಂತ. ಆಕೆಗೆ ತಾನು ಶ್ರೀಮಂತ ಕುಟುಂಬದವಳೆಂಬ ಹಮ್ಮು . 
ಅರೆರೆ ಇದೇನಿದು ಬ್ಯಾ೦ಕಿಗೆ ಹಳೆ ನೋಟು  ಕೊಟ್ಟು ಹೊಸದನ್ನು ತರಲು ಇನ್ನು ಎರಡೇ ದಿನಗಳು ಉಳಿದಿವೆ. ಹೆಂಡತಿ ಇನ್ನು ದುಡ್ಡು ಹೊರಗೆ ತೆಗಿಲಿಲ್ಲ. 
ಅಲ್ಲಿ ಆಕೆ ಗೆ ಒಳಗೊಳಗೇ ನಗು. ತನ್ನ ಅಪ್ಪ, ತಮ್ಮ ದೊಡ್ಡಪ್ಪಂದಿರು ಕೊಟ್ಟ ೧೦೦೦/೫೦೦ ಹಣವನ್ನೆಲ್ಲಾ ಆಕೆ ೧೦೦ ರೂ ಗಳ ಬಂಡಲ್ ಮಾಡಿಡುವ ಖಯಾಲಿ. ತಮ್ಮ೦ದಿರು ಆಕೆಯ ಚಿಲ್ಲರೆ ಬುದ್ದಿಗೆ  ಬೈದು ಬೈದು ಸುಮ್ಮನಾಗಿದ್ದರು. ಆಕೆದು ಒಂದೇ ಹಠ ದೇವಸ್ಥಾನದ  ಹುಂಡಿಗೆ ಹಾಕಲು, ಖರ್ಚು ಮಾಡಲು , ಈ ೧೦೦ ರೂ ನೋಟ್ ಗಳೆ  ನನಗೆ ಸರಿ . ಸ್ವಲ್ಪ ದುಡ್ಡಿನಿಂದ  ಆಕೆ ಚಿಕ್ಕ ಪುಟ್ಟ ಬಂಗಾರದ ಆಭರಣಗಳನ್ನು ಮಾಡಿಟ್ಟಿದ್ದಳು.. 


೨...... 
ಬ್ಯಾ೦ಕ್ ನಿ೦ದ ಹಣ ಪಡೆಯಲು ಅದೊಂದು ದೊಡ್ಡ ಕ್ಯೂ . ಅಲ್ಲೊಬ್ಬಳು ಹಣ್ಣು ಹಣ್ಣು ಮುದುಕಿ. ನಿಂತು ನಿಂತು ಸುಸ್ತಾಗಿ ಶಾಪ್ ಹಾಕುತ್ತಿದ್ದಳು. ಅಲ್ಲೇ ಇದ್ದ ಒಬ್ಬ 'ಅಜ್ಜಿ ಈಗ ಶಾಪ್ ಹಾಕ್ತಿಯಾ; ಮುಂದೆ ನಿನಗೆ ಒಳ್ಳೆದಾಗುತ್ತೆ ನೋಡ್ತಿರು' ಅಂದ. 
ಹೌದಪ್ಪ ಹೌದು ನಾನೋ ನಾಳೆ ನಾಡಿದ್ದೋ ಉರುಳಿ ಬಿದ್ದು ಸಾಯೋವವಳು. ನನ್ನ ಮಗ ಅಲ್ಲಿ ಆಸ್ಪತ್ರೆಯಲ್ಲಿ ಹುಷಾರಿಲ್ಲದೆ ಸೇರಿಕೊಂಡಿದ್ದಾನೆ. ದೇಶಕ್ಕೆ ಒಳ್ಳೆಯದೇನಾದರೂ ಆದರೆ ಆವನಾದ್ರು ನೋಡಬೇಕಾದ್ರೆ ನನಗೆ ಈಗ ತುರ್ತು ದುಡ್ಡಿನ ಅಗತ್ಯ ಇದೆ. ಏನ್ಮಾಡಿರಿ? 

October 30, 2016

ದೀಪಾವಳಿಗೆ ಒಂದು ಫಿಲ್ ಗುಡ್ ಪೋಸ್ಟ್ ( my 400th post)



ಮಂಜುಳಾ ಒಳಗೆ ಅಡಿಗೆ ಮನೆಯಲ್ಲಿ ಸ್ವೀಟ್ ತಯಾರಿ ಯಲ್ಲಿ ವ್ಯಸ್ತಳಾಗಿದ್ದಳು. ಹೊರಗಡೆ ಜಾನಿಬಾಯಿ ಮತ್ತು ಅವಳ ಪುಟ್ಟ ಮಗಳು ಸೇರಿ ದೀಪಾವಳಿಗೆ ಅಂತ ಮನೆ ಹೊರಗಡೆ ಚೊಕ್ಕ ಗೊಳಿಸುತ್ತಿದ್ದರು. ಅವರ ಸಂಭಾಷಣೆ ಮಂಜುಳೆಯ ಕಿವಿ ಮೇಲೆ ಬೀಳುತ್ತಾ ಇತ್ತು.
" ಅಮ್ಮ ನಾವು ನಾಳೆ ಹಬ್ಬ ಮಾಡ್ತೀವಾ?'
" ಇಲ್ಲ ಮಗಳೇ ನಾವು ಎರಡು ದಿನ ಬಿಟ್ಟು ಹಬ್ಬ ಆಚರಿಸುವಾ, ಆಯ್ತಾ' ಈಗ ಎರಡು ಮೂರು ಮನೆಯ ಕೆಲಸ ಇದೆಯಲ್ಲವಾ? ನಾವು ಹಬ್ಬ ಅಂತ ಮನೆಯಲ್ಲಿ ಕುಳಿತರೆ ಅವರ ಮನೆಯಲ್ಲಿ ಕೆಲಸ ಮಾಡುವವರು ಯಾರು?"
ಮಂಜುಳೆಗೆ ಕುರುಳು ಚುರುಕ್ ಎಂದಿತು. ಅವರಿಗೆ ರಜೆ ಕೊಡುವಾ ಅಂದ್ರೆ ನಾಳೆ  ಡಿನ್ನರ್ ಪಾರ್ಟಿ ಗೆ ಸಹಾಯ ಮಾಡುವವರ್ಯಾರು?
ಅವಳಿಗೆ ಒಂದು ಐಡಿಯಾ ಬಂತು. ಬೇಗ ಬೇಗನೆ ಅಡಿಗೆ ತಿಂಡಿ ಕೆಲಸ ಮುಗಿಸಿ ಹೊರಗೆ ಹೋಗಿ ಜಾನಿಬಾಯಿ ಮತ್ತು ಅವಳ ಮಗಳಿಗೆ ಹೊಸ ಬಟ್ಟೆ, ಹಣತೆ, ಎಣ್ಣೆ , ಸ್ಕೂಲ್ ಬ್ಯಾಗ್ , ಬಣ್ಣ ಬಣ್ಣದ ಕತೆ ಪುಸ್ತಕ ತೆಗೊಂಡು ಅದನ್ನು ನೀಟಾಗಿ ಗಿಫ್ಟ್ ರ್ಯಾಪ್ ಮಾಡಿಸಿ ತಂದಿಟ್ಟು  ಕೊಂಡಳು.
ಮರುದಿನ ಬೆಳಿಗ್ಗೆ ಅವರು ಬಂದ ಕೂಡಲೇ ಅವರಿಗೆ ಅವರ ಉಡುಗೊರೆಯನ್ನು ಕೊಟ್ಟಳು. ಮಗಳು ಹೊಸ ಬಟ್ಟೆಯನ್ನು ಕೂಡಲೇ ಹಾಕಿಕೊಂಡಳು. ಸಂಜೆ ಆ ಹುಡುಗಿಯಿಂದಲೇ ಮನೆಯ ಮುಂದೆ ದೀಪಗಳನ್ನು ತನ್ನ ಮಕ್ಕಳ ಜೊತೆಯಲ್ಲೇ  ಹಚ್ಚಿಸಿ ತಂದ  ಪಟಾಕಿಗಳನ್ನು ಅವರೆಲ್ಲರೂ ಕೂಡಿಸಿ  ಹಚ್ಚಿದರು .
ದೀಪಾವಳಿಯ ಮರುದಿನ ಜಾನಿಬಾಯಿಗೆ ರಜೆ ಮಾತ್ರವಲ್ಲ ದೀಪಾವಳಿಯ ಮಿಠಾಯಿ ಮತ್ತು ಸ್ವಲ್ಪ ದುಡ್ಡನ್ನು ಕೊಟ್ಟು ಕಳಿಸಿ ಮನಸ್ಸಿಗೆ ಒಂದು ಸ್ವಲ್ಪ ಸಮಾಧಾನ ಆಗುವಂತೆ ನಡೆದುಕೊಂಡಳು ಮಂಜುಳಾ ..
ಸುಮ್ನೆ ದೀಪಾವಳಿಗೆ ಒಂದು ಫಿಲ್ ಗುಡ್ ಪೋಸ್ಟ್ .:-) 

October 28, 2016

ಆಕಾಶದಲ್ಲಿ fireworks

ಆಗ ನಾವು ಉಜಿರೆಯಲ್ಲಿದ್ದೆವು. ಕೆ ಟಿ ಗಟ್ಟಿ ಮಾಮನ  ಮಹಡಿ ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದೆವು. ಅವರ ಮಗಳಿಗೆ ಹುಷಾರಿಲ್ಲ ಅಂತ ಗಟ್ಟಿಯವರು ಮತ್ತು ಯಶೋದಾ ಆಂಟಿ ಪುಣೆ ಗೆ ಹೋಗಿದ್ದರು. ಅಲ್ಲಿ ಹೋದ ಮೇಲೆ ಮಗಳಿಗೆ ಹಲವಾರು ದಿನ ಆಸ್ಪತ್ರೆಯಲ್ಲಿರಬೇಕಾಗಿ ಬರುತ್ತೆ, ಸ್ವಲ್ಪ ಯಮುನಾ (ಯಶೋದಾ ಆಂಟಿ ಯಾ ಅಕ್ಕ) ಅವರಿಗೆ ಪ್ಹ್ರಿಜ್ ಕ್ಲಿನ್ ಮಾಡಲು ಸಹಾಯ ಮಾಡ್ತೀರಾ? ಅವರು ಮಂಗಳೂರಿಗೆ ಹೊರಟಿದ್ದಾರೆ ಅಂತ ಪುಣೆಯಿಂದ ಫೋನ್ ಮಾಡಿದ್ರು. ಆಮೇಲೆ ಯಮುನಾ  ಆಂಟಿ ಹೊರಟು  ಹೋದ್ರು. ಶ್ರೀಕಾಂತ ಕೂಡ ಮೈಸೂರಿಗೆ ಹೊರಟಿದ್ರು. ಗೇಟ್   ಆ ಕಡೆಯಲ್ಲಿರುವ ಸಚಿನ್  ಮನೆಯವರು ಕೂಡ ಯಾವುದೋ ಸಮಾರಂಭಕ್ಕೆ ಹೋಗಿದ್ದರಿಂದ ಮನೆಯಲ್ಲಿ ನಾನು ಮತ್ತು ಮಕ್ಕಳು ಮಾತ್ರ. ಗಟ್ಟಿಯವರ ಮನೆ ಪೇಟೆಯಿಂದ ದೂರ. ನಮ್ಮ ಮನೆಯಲ್ಲಿ ಫೋನ್ ಇತ್ತು ಆದರು ಅದು ಸರಿಯಿರುತ್ತಿದ್ದದ್ದೇ ಅಪರೂಪ. ಯಾವುದೋ ಕೆಲಸದ ಮೇಲೆ ನನ್ನ ಸ್ನೇಹಿತೆ ಸೂಸಿ ಮನೆಗೆ ಬಂದಿದ್ರು. ಅವರಿಗೆ ನಮ್ಮ ಮನೆಯಲ್ಲೇ ಉಳಿದು ಕೊಳ್ಳಲು  ಹೇಳಿದೆ. 
ಶ್ರೀಕಾಂತ ರಾತ್ರಿ ಊಟ ಮಾಡಿ ಮೈಸೂರಿಗೆ ಹೊರಟರು. ಮಕ್ಕಳು ಮಲಗಿದ್ದರು. ತಾರಸಿ ಮನೆಯಾದ್ದರಿಂದ ಸೆಕೆ. ಹಾಗಾಗಿ ನಾನು ಸೂಸಿ ಟೆರೇಸ್ ಮೇಲೆ ಇನ್ನೊಂದು ಎತ್ತರದಲ್ಲಿ ನೀರಿನ ಟ್ಯಾಂಕ್ ಮತ್ತು ಡಿಶ್ ಟಿ ವಿ ರಿಸೆಪ್ಟರ್ ಜಾಗಕ್ಕೆ ಹೋಗಿ ಕೂರುವ ಅಂದಾಜು ಮಾಡಿದೆವು. ಕುರುಕುಲು ತಿಂಡಿ ಹಣ್ಣು ಎತ್ತಿಕೊಂಡು, ಮಕ್ಕಳು ಮಲಗಿದ್ದರಿಂದ ಬಾಗಿಲಿಗೆ ಬಿಗ ಜಡಿದು ಟ್ಯಾಂಕ್ ಬಳಿ ಹತ್ತಿದೆವು. ಹೀಗೆ ಲೋಕಾಭಿರಾಮವಾಗಿ ಮಾತಲ್ಲಿ ಮುಳುಗಿದ್ದೆವು. ಹಾಗೆ ಅಡ್ಡಾದೆವು. ಶುಭ್ರ ಆಕಾಶ ಅಲ್ಲಲ್ಲಿ ಚುಕ್ಕೆ ಇಟ್ಟಂತಹ ನಕ್ಸತ್ರಗಳು . ಒಮ್ಮೆಲೇ ಆಕಾಶದಲ್ಲಿ ಸುರು ಸುರು ಬತ್ತಿ ಹಚ್ಚಿದ್ದ ದೃಶ್ಯ. ದೀಪಾವಳಿಯಂತೂ ಇರಲಿಲ್ಲ. ಇದ್ದರು ಈ ರೀತಿ ಪಟಾಕಿ ಮೊದಲೆಲ್ಲೂ ನೋಡಿರಲಿಲ್ಲ ಅಂತ ನಮ್ಮ ನಮ್ಮಲ್ಲೇ ಮಾತನಾಡಿದೆವು. ಆಗ ಮೊಬೈಲ್ ಎಲ್ಲ ಇರಲಿಲ್ಲ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ತಮ್ಮನ ಬಳಿ ಒಂದು ಪೇಜರ್ ಮಾತ್ರ ನೋಡಿದ್ದೆ. :-) ಇಲ್ಲದಿದ್ದರೆ ಈಗಿನ ಹಾಗೆ ಒಂದು ಸೆಲ್ಫಿ ತೆಗೆದುಕೊಳ್ಳಬಹುದಿತ್ತು. ಪೂರ್ತಿ ೧೫ ನಿಮಿಷ ನಮಗೆ ಮನೋರಂಜನೆ. 

ಮೇಲಿನ  ಚಿತ್ರ ನಾನು ಗುಗಲಿಸಿ ಹಾಕಿದ್ದೇನೆ. ಆದರೂ ನಾವು ನೋಡಿದ ದೃಶ್ಯ ಇನ್ನು ಆಕರ್ಷಕ ವಾಗಿತ್ತು. ನಾನು ಮತ್ತು ಸೂಸಿ ಮಾತ್ರ ಈ ಆಕಾಶ ಪಟಾಕಿ ನೋಡಿದ್ದು ಅಂದುಕೊಂಡಿದ್ವಿ. ಆದರೆ ಮರುದಿನ ಶ್ರೀಕಾಂತ ಮೈಸೂರಿನಿಂದ ತಲುಪಿದಕ್ಕೆ ಫೋನ್ ಮಾಡಿದಾಗ ಬಸ್ ನಲ್ಲಿ ಹೋಗುತ್ತಾ ಇದನ್ನು ನೋಡಿದ್ದು, ಬಸ್ ಡ್ರೈವರ್ ಬಸ್ ಸ್ಲೋ ಮಾಡಿದ್ದು ಎಲ್ಲ ಹೇಳಿದ್ದರು.
ಇಂತಹ ಕೆಲವು ಅಪರೂಪ ಡಾ ಸಂಗತಿಗಳನ್ನು ನೋಡಿ ಜೀವನ ಧನ್ಯ ವಾದ ಅನುಭವ. 
ಮೊನ್ನೆ ಕೂಡ ಫೇಸ್ ಬುಕ್ ನಲ್ಲಿ ಅಕಾಶದಲ್ಲಿ ಬೆಳಕಿನ ಓಕುಳಿ ನಡೆಯುತ್ತಿದೆಎಂದು ಹಾಕಿದ್ದು, ನಾನು ಬಾಲ್ಕನಿಯಲ್ಲೇ ಪವಡಿಸಿದ್ದೆ , ಆದರೆ ಬಾಲ್ಕನಿಯಿಂದ ಪೂರ್ತಿ ಆಕಾಶ ಕಾಣುವುದಿಲ್ಲ ಮತ್ತು ನಮ್ಮ ಅಪಾರ್ಥಮೆಮ್ಟ್ ನ ಟೆರೇಸ್ ಬಾಗಿಲಿಗೆ ಬಿಗ ಹಾಕಿರುತ್ತಾರೆ. ಟೆರೇಸ್ ಮೇಲೆಲ್ಲಾ ಸೋಲಾರ್ ಪ್ಯಾನೆಲ್ ಅಳವಡಿಸಲಾಗಿದೆ. 
ಓರಿನೋಯ್ಡ್ಸ್, Orionids/starburst galaxy google ಮಾಡಿ ನೋಡಿ ನಿಮಗೂ ಅಂದಾಜು ಆಗಬಹುದು.. 
ದೀಪಾವಳಿಗೆ ಒಂದು ಚಿಕ್ಕ ಪೋಸ್ಟ್. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. :-) 



October 6, 2016

ಸಂಚಿಯಿಂದ ತೆಗೆದ ನೆನಪು- ೧೩ about car and adventures

ಚಿಕ್ಕವಳಿದ್ದಾಗ ಭಾರತದ ಉದ್ದಗಲ ಪ್ರಯಾಣಿಸಿದ ಹೆಮ್ಮೆ ನನ್ನದು. ಅಜ್ಜ ನನ್ನ ತಂದೆಗೆ volkswagen Beetle- steel blue ಬಣ್ಣದ್ದು ಕೊಡಿಸಿದ್ದರು. ಆಗ ಸ್ಕೂಲ್ ಗೆ ಚಕ್ಕರ ಹಾಕಿ ತಿರುಗಾಟ ಮಾಡಿದ್ದಲ್ಲಿ ಕೇಳುವವರು ಯಾರೂ ಇರಲಿಲ್ಲ. ಅಷ್ಟೆ ಅಲ್ಲ ನನ್ನ ಅಜ್ಜ ದೊಡ್ಡ ಕುಳ ಆಗಿದ್ದರಿಂದ ಯಾರೂ ಯಾವುದರ ಬಗ್ಗೆಯೂ ಸೊಲ್ಲೆತ್ತುತ್ತಿರಲಿಲ್ಲ. ಪ್ರಯಾಣ ಅಂದರೆ ಸಿರ್ಫ್ ಯಾತ್ರಾ pilgrimage ಸ್ಥಳಗಳು- ಕಾಶಿ, ರಾಮೇಶ್ವರ, ಪಳನಿ, ಪಂಢರಾಪುರ, ತಿರುಪತಿ, ಕನ್ಯಾಕುಮಾರಿ, ಮದುರೈ etc. ಅಜೋಬಾ, ನಾನಿ, ಅಪ್ಪ, ಅಮ್ಮ, ನಾವು ಮೂರು ಮಕ್ಕಳು,( ನನ್ನ ತಂಗಿ ಇನ್ನೂ ಹುಟ್ಟಿರಲಿಲ್ಲ.) ಇಷ್ಟು ಜನ ಗಾಡಿಯಲ್ಲಿ.ಕೆಲವೊಮ್ಮೆ ಡ್ರೈವರ್ ಕೂಡ ಇರುತ್ತಿದ್ದ
ಗಾಡಿ, ರಸ್ತೆ ಮಧ್ಯ ಕೆಲವೊಮ್ಮೆ ಮುಷ್ಕರ ಹೂಡುತಿತ್ತು. ಆಗ ಅಜ್ಜ ಅಪ್ಪ ದಾರಿಯಲ್ಲಿ ಸಾಗುವ ಟ್ರಕ್ ನಿಲ್ಲಿಸಿ ನಮ್ಮ ಗಾಡಿ Tow ಮಾಡಿಸಿ ಹತ್ತಿರದ ಗರಾಜ್ ಗೆ ಸಾಗಿಸುತ್ತಿದ್ದರು. ಆಗ ಹೋಟಲ್ ಗಳು ಅಷ್ಟೊಂದು ಇರಲಿಲ್ಲ. ನಾವು ಹೀಗೆ ಯಾರಾದರೂ ಗರಾಜ್ ನಡೆಸುವವರ ಮನೆಯಲ್ಲಿ ರೊಟ್ಟಿ ಪಲ್ಯ ಚಟ್ನಿ ತಿನ್ನುತ್ತಿದ್ದ ನೆನಪು. ಕೆಲವೊಮ್ಮೆ ರಿಪೇರಿ ಆಗಲಿಕ್ಕೆ ಎರಡು ಮೂರು ದಿನಗಳೇ ಬೇಕಾಗುತ್ತಿದ್ದವು. :-)
ಹೀಗೆ ಒಂದು ಸಲ ಕಾರವಾರಕ್ಕೆ ಹೋಗುವಾಗ ದಾರಿಯಲ್ಲಿ ರಾತ್ರಿ ನಮ್ಮ ಗಾಡಿ ಮುಷ್ಕರ ಹೂಡಿತು. ಅದೊಂದು ಸೇತುವೆ. ಕೆಳಗೆ ಹರಿಯುತ್ತಿರುವ ನದಿ. ಒಂದು ಹುಲಿ ಧುತ್ ಅಂತ ನಮ್ಮ ಕಾರ್ ಮುಂದೆ. ನಾವು ಸದ್ದು ಮಾಡಬಾರದೆಂದು ಅಮ್ಮ ನನ್ನ ಮತ್ತು ತಮ್ಮನ ಬಾಯಿ ಗಟ್ಟಿ ಹಿಡಿದುಕೊಂಡಿದ್ದು, ನಮ್ಮ excitement ಇನ್ನೂ ಹಸಿಯಾಗಿದೆ.ಡ್ರೈವರ ಕೂಡಲೆ ಗಾಡಿಯ ಲೈಟ್ ಆಫ್ ಮಾಡಿದ. ಸ್ವಲ್ಪ ಹೊತ್ತು ಸುಮ್ಮನೆ ನಮ್ಮ ಕಡೆ ನೋಡಿ ಆಮೇಲೆ ನಿಧಾನಕ್ಕೆಬಳಿ ಸಾಗಿ ಪಂಜಿನಿಂದ ಟಾಪ್ ಮೇಲೆ ಹೊಡೆಯಿತು. ಕಾರ್ ಗಡಗಡ ನಡುಗಿದ್ದು ಇನ್ನೂ ನೆನಪಿದೆ. ಆಗ ಅಪ್ಪ, ಡ್ರೈವರ್ ಗೆ ಒಟ್ಟೊಟ್ಟಿಗೆ ಬೆಳಕು ಹಾಗೂ ಹಾರ್ನ್ ಮಾಡಲು ಹೇಳಿದರು. ಡ್ರೈವರ್ ಲೈಟ್ ಆನ್ ಮಾಡಿ ಹಾರ್ನ್ ಹಾಕಿದ್ದೆ ಹಾಕಿದ್ದು, ಹುಲಿ ಒಂದೇ ಉಸುರಿಗೆ ಓಡಿ ಹೋಯ್ತು. :-)
ಆಮೇಲೆ ಅಪ್ಪನಿಗೆ ಬಿಹಾರ್ ಗೆ ಟ್ರಾನ್ಸ್ಫರ್ ಆಯ್ತು. ಅಪ್ಪ ಹೋಗುವ ಮೊದಲು ಕಾರ್ ಅನ್ನು ಗೂಡ್ಸ್ ಟ್ರೈನ್ ನಲ್ಲಿ ಮುಂದೆ ಕಳುಹಿಸಿದ್ದರು. ಅಪ್ಪ ಬಿಹಾರ್ ತಲುಪಿ ಅಲ್ಲಿನ ಬ್ರಾಂಚ್ ಜಾಯಿನ್ ಆಗಿ ಮೂರು ತಿಂಗಳು ಕಳೆದರೂ ಕಾರ್ ನ ಪತ್ತೆ ಇಲ್ಲ. ಅಂತೂ ಇಂತೂ ಪತ್ರ ಬರೆದು ಬರೆದೂ, ಅಲ್ಲಿ ಇಲ್ಲಿ ಫೋನಾಯಿಸಿ...ಒಂದು ದಿನ ಪಟ್ನಾದ ಗೂಡ್ಸ್ ಶೆಡ್ ನಿಂದ ಫೋನ್ ಬಂತು, ಕಾರು ತಲುಪಿದೆಯೆಂದು. ಅಪ್ಪ ಹೋಗಿ ನೋಡಿದರೆ ಅದು ರಿಪೇರಿ ಆಗದಷ್ಟು ನುಜ್ಜುಗುಜ್ಜಾಗಿತ್ತು. ಕೊನೆಗೆ ಗುಜರಿಯಲ್ಲಿ 200 ರೂ ಅಷ್ಟೆ ಬಂದಿತ್ತು. ಆಮೇಲೆ ನಮ್ಮ ಅಪ್ಪ ಕಾರ್ ಸುದ್ದಿಗೆ ಹೋಗಲಿಲ್ಲ.
ಮೊನ್ನೆ ಗೋಕರ್ಣಕ್ಕೆ ಹೋಗುವ ದಾರಿಯಲ್ಲಿ ಮಕ್ಕಳಿಗೆ ಇದನ್ನು ಹೇಳ್ತಾ ಇದ್ದೆ.


October 3, 2016

ದೀಪಾವಳಿಗೆ ನಿಮ್ಮ ಉಡುಗೊರೆ ಸ್ವಲ್ಪ ಭಿನ್ನವಾಗಿರಲಿ

ದೀಪಾವಳಿಗೆ  ನಿಮ್ಮ ಆಪ್ತೆಷ್ಟರಿಗೆ ಎಷ್ಟಂತ ಸ್ವೀಟ್ ಕೊಡ್ತೀರಿ? ಈ ದೀಪಾವಳಿಗೆ ಬೇರೆ ಏನಾದರೂ ಉಡುಗೊರೆ ನೀಡಿ. for eg ಕೆಳಗಿನಕೊಂಡಿಯಲ್ಲಿನ ಫೈಟಿಂಗ್ಸ್.  ಇದರಲ್ಲಿ ಕೆಲವು ಈಗಾಗಲೇ ಮಾರಲ್ಪಟ್ಟಿವೆ. ನೀವು ತ್ವರೆ ಮಾಡಿ. ನಿಮ್ಮ ಆತ್ಮೀಯರು ನಿಮ್ಮ ಕಲಾ ಅಭಿರುಚಿಯನ್ನು  ನೋಡಿ ಮೆಚ್ಚಲಿ. :-) :-) 



chitrakale

ಇಲ್ಲಿದೆ ಒಂದು ಸ್ಯಾಂಪಲ್


September 30, 2016

spring roll ಸ್ಪ್ರಿಂಗ್ ರೋಲ್

ಇನ್ನು ಮಕ್ಕಳಿಗೆ ದಸರಾ ರಜಾ ಶುರು. . ಆಗ ಮಕ್ಕಳುಆಟ ಮುಗಿಸಿ ಅಥವಾ ಅವರ ಕ್ಲಾಸ್ ಮುಗಿಸಿ ಬಂದು ಅಮ್ಮ ಹಸಿವೆ ಎಂದಾಗ ಸ್ಪ್ರಿಂಗ್ ರೋಲ್ ಮಾಡಿ ಕೊಡಬಹುದು. ಸ್ಪ್ರಿಂಗ್ ರೋಲ್ ನ ಹೊರಗಿನ ಕವಚವನ್ನು ಮೊದಲೇ ಮಾಡಿಟ್ಟು ಶೀತಾಗಾರದಲ್ಲಿ ಕಾಪಿಟ್ಟುಕೊಳ್ಳಬಹುದು. 

ಮೊದಲಿಗೆ ಸ್ವಲ್ಪ ಮೈದಾ ಹಿಟ್ಟಿಗೆ ಸ್ವಲ್ಪ ಕಾರ್ನ್ ಫ್ಲೋರ್ ಮಿಕ್ಸ್ ಮಾಡಿ ನೀರು ಬೆರೆಸಿ ಗಂಟಾಗದಂತೆ ತೆಳುವಾದ ಹಿಟ್ಟು ತಯಾರಿಸಿ. ನಾನ್ ಸ್ಟಿಕ್ ಕಾವಲಿ ಓಲೆ ಮೇಲಿಡಿ. ಬಿಸಿ ಆದ ಮೇಲೆ ಒಂದು ಬ್ರಶ್ ಅನ್ನು ಹಿಟ್ಟಿನಲ್ಲಿ ಅಡ್ಡಿ ಪೈಂಟ್ ಮಾಡೊತರಹ ಕಾವಲಿ ಮೇಲೆ ಆಡಿಸಿ. ಒಂದಾದನಂತರ ಲಂಬವಾಗಿ ಹಿಟ್ಟನ್ನು ಕಾವಲಿಗೆ ಬ್ರಶ್ ಮಾಡ್ತಾ ಹೋಗಿ. 

ಒಣಗಿದಂತೆ ಕಂಡ ಕೂಡಲೇ ಕಾವಲಿಯಿಂದ ಬಿಡಿಸಿ ಪ್ಲೇಟ್ ಮೇಲೆ ಹಾಕಿ. ಇದಕ್ಕೆ ತೆಳು ಎಣ್ಣೆ ಸವರಿಡಿ . ಇದರ ಮೇಲೆ ಇನ್ನೊಂದು ಪದರ ಮಾಡಿ ಇಡುತ್ತಾ ಹೋಗಿ. ಹೀಗೆ ಕವಚಗಳು ರೆಡಿಯಾದ ಮೇಲೆ ಪ್ಹ್ರಿಜರ್ ನಲ್ಲಿ ಇತ್ತು ಬಿಡಿ. 






ಸ್ಪ್ರಿಂಗ್ ರೋಲ್ ನ ಹೂರಣ : ಕ್ಯಾಬೇಜ್, ದಪ್ಪ  ಮೆಣಸಿನಕಾಯಿ ಕ್ಯಾರಟ್ ಸಣ್ಣಕ್ಕೆ ಕಟ್ ಮಾಡಿಡಿ . ಎಣ್ಣೆಯಲ್ಲಿ ನೀರುಳ್ಳಿ ಬೆಳ್ಳುಳ್ಳಿಬಾಡಿಸಿ, ಇದಕ್ಕೆ ತರಕಾರಿಗಳನ್ನು ಬೆರೆಸಿ  ಉಪ್ಪು ಬೆರೆಸಿ ಎರಡು ನಿಮಿಷ ಕೈಯಾಡಿಸಿ ತಣ್ಣಗಾಗಲು  ಪಕ್ಕಕ್ಕಿಡಿ. 


ಈಗ ಒಂದೊಂದೇ ರೋಲ್ ಗಳನ್ನೂ ಬಿಡಿಸಿ. ಮಧ್ಯದಲ್ಲಿ ತರಕಾರಿ ಮಿಶ್ರಣವನ್ನು ಹಾಕಿ ಹಾಸಿಗೆ ಯಂತೆ ಸುರುಳಿ ಸುತ್ತಿ .

 ಹೀಗೆ ಐದಾರು ಸ್ಪ್ರಿಂಗ್ ರೋಲ್ ಮಾಡಿಡಿ. ಬಿಸಿ ಎಣ್ಣೆಯಲ್ಲಿ  ಪ್ರೈ ಮಾಡಿ. 
ಡಿಪ್ ಮಾಡಲು ಸಾಸ್. ಕೆಂಪು ಮೆಣಸನ್ನು ಬಿಸಿ ನಿರಿ ನಲ್ಲಿ ಹಾಕಿಡಿ. ಮೆದುವಾದ ಮೇಲೆ ಉಪ್ಪು ವಿನೆಗರ್, ಬೆಳ್ಳುಳ್ಳಿ ಸಕ್ಕರೆ ಹಾಕಿ ಮಿಕ್ಸಿ ಯಲ್ಲಿ ಪೇಸ್ಟ್ ಮಾಡಿಕೊಳ್ಳಿ. 
ಬಿಸಿ ಬಿಸಿ ಸ್ಪ್ರಿಂಗ್ ರೋಲ್ ರೆಡಿ ಟು ಸರ್ವ್ 
ರಿಸಿಪಿ : ಫಾರುಖ್ ಅಜಿಜ್ ಅವರ ಬ್ಲಾಗ್ : http://cubesnjuliennes.com/

September 24, 2016

ಗೋವಾದ ಸಮುದ್ರತಟದಲ್ಲಿ ಮೀನು ಹಿಡಿಯುವ ನೋಟ

ಮಳೆಗಾಲದಲ್ಲಿ ಗೋವಾ ತುಂಬಾ ssss ಚಂದ ಇರ್ತದೆ ಅಂತ ಕೇಳಿದ್ದೆ. ಹಾಗಾಗಿ  ಹಿಂದಿನ ತಿಂಗಳು ಗೋವಾಕ್ಕೆ ಹೋಗುವ ಪ್ಲ್ಯಾನ್ ಹಾಕಿದೆವು. ಅಲ್ಲೊಂದು ಮದುವೆಯಿತ್ತು. ಮದುವೆಯನ್ನು ಸೇರಿಸಿ ಒಂದು ನಾಲ್ಕು ದಿನ ಗೋವಾದಲ್ಲಿ ಇರುವುದೆಂದಾಯಿತು. ಟ್ರೈನ್ ನಲ್ಲಿ ಟಿಕಟ್ ಕೂಡ ಕಾದಿರಿಸಲಾಯಿತು . ಮಧ್ಯಾಹ್ನ ಮೂರೂ ಗಂಟೆಯ ಟ್ರೈನ್ , ಮಡಗಾಂವ್ ಮುಂದಿನ ದಿನ ಬೆಳಿಗ್ಗೆ ೫. ೦೦ ಕ್ಕೆ ತಲುಪತ್ತದೆಂದು ಅಲ್ಲಿನ ಲೋಕಲ್ ಟ್ಯಾಕ್ಸಿ ಕೂಡ ಬುಕ ಮಾಡಿದ್ದೆ.  ಪ್ರಯಾಣಿಸುವ ದಿನ ಶ್ರೀಕಾಂತ ಗೆ ಎಷ್ಟು ಸಮಯಕ್ಕೆ ಆಫಿಸ್ ನಿಂದ ಬರಬೇಕು, ಊಟ ಮಾಡಿ ಎಷ್ಟು ಹೊತ್ತಿಗೆ ಹೊರಡಬೇಕೆಂದು ಹೇಳಿದ್ದೆ ಬಂತು. ರಾಯರು ಮನೆಗೆ ಬಂದು ಊಟ ಮಾಡಿ ನಾನು ಅಡಿಗೆ ಮನೆಯನ್ನು ಚೊಕ್ಕಟಗಳಿಸುವಷ್ಟರಲ್ಲಿ ತುಂಬಾ ನೇ ವಿಳಂಬವಾಗಿಹೋಯಿತು. ಟ್ರೈನ್ ಹೊರಡಲು ಐದು ನಿಮಿಷ ಮೊದಲು ತಲುಪಬಹುದೆಂದು ಅಂದಾಜಿಸಿ ಓಲಾ ಕ್ಯಾಬ್ ಬುಕ್ ಮಾಡಿ ಹೊರಟೆವು. ಆದರೆ ಕೋರಮಂಗಲದಲ್ಲಿ ವಿಪರೀತ ವಾಹನ ದಟ್ಟಣೆ ಹಾಗು ಟ್ರಾಫಿಕ್ ಜಾಮ್  ನಿಂದಾಗಿ ಟ್ರೈನ್ ಮಿಸ್ ಆಯಿತು. ಟ್ರೈನ್ ನಾವು ಯಶವಂತಪುರದಿಂದ ಹಿಡಿದಕೊಳ್ಳಬೇಕಿತ್ತು. ನಮ್ಮ ಓಲಾ ಕ್ಯಾಬ್ ನವನಿಗೆ ಸಖತ್ ಬೇಜಾರಾಗಿ ನಮಗೆ ತುಮಕೂರು ವರೆಗೂ ಡ್ರಾಪ್  ಕೊಡುವ ಉಮ್ಮೇದು. ನನಗ್ಯಾಕೋ ಅಲ್ಲಿ ಕೂಡ ವಿಳಂಬವಾಗೇ ತಲುಪುತ್ತೇವೆಂದು ಗೊತ್ತಾಯಿತು. ಇನ್ನೇನು ಮನೆಗೆ ವಾಪಸ್ ಆಗೋದು ಅಂದೆ. ಈ ತರಹದ್ದು ನಮಗೇನು ಹೊಸತಲ್ಲ. :-) ಆದರೆ ಶ್ರೀಕಾಂತ ಗೆ ಏನನ್ನಿಸಿತ್ತೋ ..ಬೇಡ ಪ್ರಯಾಣದ ತಯಾರಿ ಎಲ್ಲಾ ಆಗಿದೆ, ನಾನು ರಜೆ ಹಾಕಿ ಆಗಿದೆ , ಹರೀಶ್ ಫ್ರೀ ಇದ್ದರೆ ಅವರ ಗಾಡಿ ಬಾಡಿಗೆಗೆ ತೆಗೊಂಡು ಹೋಗುವ ಅಂತ ಓಲಾ ದವನಿಗೆ ಯಶವಂತಪುರದ ಬಿಡಲಿಕ್ಕೆ ಹೇಳಿದೆವು. ಹರೀಶ ಬಂದು ನಮ್ಮನ್ನು ಯಶವಂತಪುರದಿಂದ ಗೋವಾಕ್ಕೆ ಕರೆದುಕೊಂಡು ಹೋಗಲು  ಬರುವ 'ತನಕ ರಿಟರ್ನ್  ಟಿಕೆಟ್, ಅಲ್ಲಿನ ಗಾಡಿ ಕ್ಯಾನ್ನ್ಸಲ್ ಮಾಡೋದು ಮುಂತಾದ ಕೆಲಸ ಮಾಡಿದೆವು. ಸರಿಯಾಗಿ ೩. ೪೫ ಕ್ಕೆ ನಾವು ಬೆಂಗಳೂರು ಬಿಟ್ಟೆವು. ಸಂಜೆ ಒಂದು ಟಿ ಗೆ ನಿಲ್ಲಿಸಿದ್ದೆ ಸೀದಾ ಗೋವಾಕ್ಕೆ ಪ್ರಯಾಣ. ನಾವು ಧಾರವಾಡ ದಿಂದ ರಾಮನಗರ  ರೋಡ ಅನಮೋಡ್  ಘಾಟ  ಹಿಡಿದುಕೊಂಡು ಹೋದೆವು. ಕಾಡು ಪ್ರದೇಶದಲ್ಲಿ ನಮಗೆ ಹಲವಾರು ಕಾಡು ಪ್ರಾಣಿ ನೋಡಲು ಸಿಕ್ಕಿದವು.  ರಾತ್ರಿ ೧ ಗಂಟೆಗೆ  ನಾವು ಮಾರ್ದೋಳ ದೇವಸ್ಥಾನ ತಲುಪಿದೆವು. ಆ ರಾತ್ರಿ ನಾವು ದೇವಸ್ಥಾನದ ಗೆಸ್ಟ್ ಹೌಸ್ ನಲ್ಲಿ ಉಳಿದುಕೊಂಡೆವು.
ಮರುದಿನ ಮದುವೆ  ರಾಮನಾಥಿಯಲ್ಲಿ. ಅಲ್ಲೇ ಹತ್ತಿರದಲ್ಲಿದ್ದ  ಕೆಲವು ದೇವಸ್ಥಾನಗಳಿಗೆ ಭೇಟಿ ನೀಡಿ , ಕೊಲ್ವಾ ಬೀಚ್ ನಲ್ಲಿ ನಿಗದಿಪಡಿಸಿದ ಲಾಂಗಿನ್ಹಾಸ್  ರಿಸಾರ್ಟ್ ನಲ್ಲಿ ತಂಗಿದ್ದೆವು. ಗೋವಾದಲ್ಲಿ ಪೂರ್ತಿ ಮಳೆ. ಸಂಜೆ ಮಳೆಯಲ್ಲಿ ಒಂದು ರೌಂಡ್ ಬಿಚ ಗೆ ಆಮೇಲೆ ಕತ್ತಲಾದ  ಮೇಲೆ ಬೀಚ್ ಬಳಿ ಇರುವ ಮಾರ್ಕೆಟ್ ಗೆ ಹೋದೆವು. ಮರುದಿನ ಬೆಳಿಗ್ಗೆ ನಾವು ಬೀಚ್ ವಾಕ್ ನನ್ನ ಯೋಗ ಮುಂತಾದವುಗಳನ್ನು ಹಮ್ಮಿಕೊಂಡಿದ್ದೆವು. ನಾವು ಬೀಚ್ ಗೆ ಹೋಗುವಾಗ ಆಗಲೇ ಅಲ್ಲಿ ಮೀನು ಹಿಡಿಯುವ ತಯಾರಿ ನಡೆಯುತ್ತಿತ್ತು. ನಾವು  ಒಂದೂವರೆ  ಗಂಟೆ ಅವರು ಗಾಳ  ಹಾಕಿ ನಿಲ್ಲುತ್ತಾರೆ. ಒಂದು ದೋಣಿ ಸಮುದ್ರದಲ್ಲಿ  ಬಲೆ ಯಾ ತುದಿಯನ್ನು ಹಿಡಿದುಕೊಂಡು ಹೋಗುತ್ತೆ. ದಂಡೆಯ ಮೀಮೇಲೆ  ಸುಮಾರು ೬೦ ಜನರ ತಂಡ ಬಲೆಯ ಉಳಿದ ಭಾಗ   ಹಿಡಿದುಕೊಂಡಿದ್ದರು. ಆವಾಗಾವಾಗ  ಕ್ಯಾಚ್ ಈ  excitement ಎಷ್ಟು contagious ಇತ್ತಂದ್ರೆ ನಾವೇ ಮೀನು   ಹಿಡಿಯಲು ನಿಂತವರ ತರಹ. ಕೆಲವೊಮ್ಮೆ ಏನು ಸಿಗದೇ ಮರಳುತ್ತಾರಂತೆ. ಆಗ ಬೇಜಾರಾಗುವುದುಲ್ಲವಾ ಅಂದ್ರೆ, "ಅದರಲ್ಲೇನು ಬೇಜಾರು ಒಂದು ದಿನ  ತುಂಬಾ ಮೀನು ಇನ್ನೊಂದು ದಿನ ಸ್ವಲ್ಪ ಕೆಲವೊಮ್ಮೆ ಏನು ಸಿಗಲ್ಲ ಆದರೂ ನಮಗೆ ಜೀವನದಲ್ಲಿ ನಿರಾಸೆ ಆಗುವ ಸಂಭವ ಬಂದಿಲ್ಲ ಅಂದ ಅವರ ಲೀಡರ್.
ಅಲೆಗಳ ಹೊಡೆತಕ್ಕೆ ಬಲೇ ಆ ಕಡೆ ಈ ಕಡೆ   ತೇಲಿದಾಗ  ನಿಂತವರು ಬೇಗ ಬೇಗ ಜಾಗ ಬದಲಾಯಿಸುತ್ತಾ ಇರಬೇಕು ಇಲ್ಲದಿದ್ದರೆ ಬಲೆಯಲ್ಲಿ ಗಂಟುಗಳಾಗುವ ಸಂಭವ ಹೆಚ್ಚು. ಮತ್ತೆ ತೋಳುಬಲ ಕೂಡ ಬೇಕು. ಕೆಲಸಗಾರರಲ್ಲಿ ತಮಿಳು, ತೆಲುಗು ಕನ್ನಡ ಮಾತನಾಡುವವರು ಇದ್ದರು.
ಬಲೇ ಒಂದು ಸಲ ದಡಕ್ಕೆ ಬಂದ ಮೇಲೆ ಅದನ್ನು  ನೀಟಾಗಿ ಮಧ್ಯಕ್ಕೆ ತಂದು ಅಕ್ಕ ಪಕ್ಕ ಸಿಕ್ಕಿ ಹಾಕಿಕೊಂಡ ಮೀನನ್ನು ಒಂದು ಕಟ್ಟಿಗೆಯ ತುಂಡಿನಿಂದ ಹೊಡೆದು ಬಲೆಯ  ಮಧ್ಯ ಬೀಳುವಂತೆ ಮಾಡುತ್ತಾರೆ. ತುಂಬಾ ಚಿಕ್ಕ ಚಿಕ್ಕ ಮೀನುಗಳನ್ನು ಪುಟ್ಟ ಪುಟ್ಟ ಉಡುಗ ಹುಡುಗಿಯರು ಆರಿಸಿ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಒಂದು ದಿಂದ ಸಾರಿಗೆ ಸಾಕಾಗುವಷ್ಟು.
ಇಲ್ಲಿವೆ ಕೆಲವು ಚಿತ್ರಗಳು
 ನಾವಿದ್ದ ಮೂರೂ ದಿನವೂ ನನ್ನನ್ನು ಹಿಂಬಾಲಿಸಿದ ನಾಯಿ. ಮಳೆಯಿಂದ ರಕ್ಷಿಸಲು ಅಕ್ಕ ಅವನಿಗೆ ಕೊಡೆ ಹಿಡಿದಿದ್ದು









 ಕೊಂಕಣಿಯಲ್ಲಿ ನಾವು ಖಮ್ಮಟೆ ಅನ್ನುವ ಮೀನು. ಇದನ್ನು ಒಣಗಿಸಿ ಇದರ ಚಟ್ನಿ ಮಾಡುತ್ತಾರೆ. 



ಸಂಸ್ಥೆ ಬಿಟ್ಟು ಇದನ್ನೇ ಉದ್ದಿಮೆಯನ್ನಾಗಿ ಪರಿಗಣಿಸಿದರೆ ಹೇಗೆ?? :-) 

September 18, 2016

ಒಂದು ಗಿಣ್ಣಿನ ಕತೆ

ಗಿಣ್ಣು ಕೊಂಕಣಿಯಲ್ಲಿ ನಾವು ಪೋಸು ಅಂತೇವೆ. 

ತುಂಬಾ ಚಿಕ್ಕವಳಿದ್ದಾಗ ಅಜ್ಜಿಯ ಮನೆಯಲ್ಲಿದೆ ಕೆಲವು ಸಮಯ. ಕೇರಳದ ಕಾಸರಗೋಡಿನಲ್ಲಿ. ಅಜ್ಜಿಯ ಜತೆ ಅವರ ಮಗಳ(ನನ್ನ ಸೋದರತ್ತೆ) ಸಂಸಾರ ಕೂಡ ಇತ್ತು . ದೊಡ್ಡಕುಟುಂಬ. ಮನೆಯಲ್ಲಿ ಮೂರೂ  ಹಸುಗಳಿದ್ದವು. ನರ್ಮದಾ, ಗೋದಾವರಿ ಮತ್ತು ಕಾಳಿ. ಮೊದಲಿನೆರಡು ಸೌಮ್ಯ ಸ್ವಭಾವದವರಾಗಿದ್ದು ಕಾಳಿ ಮಾತ್ರ ಸಿಟ್ಟಿನವಳು. ಅವಳಹಾಲು ಕರೆಯಲು ನನ್ನ ಅಜ್ಜಿ ಅಥವಾ ಸೋದರತ್ತೆನೆ ಆಗಬೇಕಿತ್ತು. ಉಳಿದವುಗಳಿಗೆ ನನ್ನ ಮಾಮ  ಬೆಳಿಗ್ಗೆ ಸಂಜೆ ಹಾಲು ಕರೆಯುತ್ತಿದ್ದ. ಚಿಕ್ಕಂದಿನಿಂದಲೇ ನನಗೆ ನಿದ್ದೆ ತೀರಾ ಕಡಿಮೆ. ಅಜ್ಜಿ ಜತೆ ಬೆಳಿಗ್ಗೆ ಬೇಗನೆ ಎದ್ದು  ನಾನೂ ಕೊಟ್ಟಿಗೆಗೆ  ಹೊಗ್ತಿದ್ದೆ. ಒಂದು ತಂಬಿಗೆಯಲ್ಲಿ ಬೆಚ್ಚಗಿನ ನೀರು, ಇನ್ನೊಂದು ದೊಡ್ಡ ತಂಬಿಗೆ ಹಾಲು ಕರೆದು ಹಾಕಲು. ಮೊದಲಿಗೆ ಅಜ್ಜಿ ಉಗುರು ಬೆಚ್ಚಗಿನ ನೀರಿನಿಂದ ಅದರ ಸ್ಥನವನ್ನು  ತೊಳೆಯುತ್ತಿದ್ದರು. ಅದಕ್ಕೂ ಮುಂಚೆ ಅದಕ್ಕೆ ತಿನ್ನಲು ಹುಲ್ಲು ಹರವಿ, ಅದರ ಮೈದಡವುತ್ತಿದ್ದರು. ಆ ಮೇಲೆ ಲಲ್ಲೆ ಗೆರೆಯುತ್ತ ಮಾತನಾಡುತ್ತ ಹಾಲು ಹಿಂಡುವ ಕಾಯಕ. ಸ್ಟೂಲ್ ಮೇಲೆ ಕುಳಿತು ತಂಬಿಗೆಯನ್ನು ಮೊಣಕಾಲುಗಳ ಮಧ್ಯ ಹಿಡಿದು ಎರಡು ಕೈಯಿಂದ ಅದರ ಮೊಲೆಗಳನ್ನು ಎಳೆಯ ಬೇಕು ಸಣ್ಣಕ್ಕೆ ಹಾಲಿನ ಝರಿ ತಂಬಿಗೆಯಲ್ಲಿ ಬೀಳುತ್ತಿತ್ತು. ಕಂಚಿನ ತಂಬಿಗೆಯಾದ್ದರಿಂದ ಟಿನ್ ಟಿನ್ ಸದ್ದು  ಬರೋದು. :-) ಆಮೇಲೆ ಅಡಿಗೆ ಮನೆಯ ಓಲೆ ಹಚ್ಚಿ ಹಾಲಿಗೆ ಸ್ವಲ್ಪ ನೀರು ಬೆರೆಸಿ ಅದನ್ನು ಕಾಯಿಸಲಿಕ್ಕಿಟ್ಟು  ಬೆಳಗ್ಗಿನ ತಿಂಡಿಗೆ ತಯಾರಿ. ಹೆಚ್ಚಾಗಿ ಉದ್ದಿನ ಅಕ್ಕಿಯ ಇಡ್ಲಿ ದೋಸೆ ಕಡುಬುಗಳೇ ಆಗುತ್ತಿದ್ದರಿಂದ ಅದರ ಚಟ್ನಿ ಗೆ ರುಬ್ಬುವುದು ಮುಂತಾದ್ದು ಮಾಡುತ್ತಿದ್ದರು. ...... ಇರಲಿ ಈ ಕತೆ ಮುಂದೆ ಯಾವಾಗಲಾದರೂ. ಆ ಹಾಲಿಗೆ ಏನು ರುಚಿ !!!!
ಒಂದು ದಿನ ರಾತ್ರಿ, ಹೀಗೆ ರಜೆಗೆ ಹೋಗಿದ್ದೆವು ಆಗ. ನರ್ಮದಾ ರಾತ್ರಿ ಇಡೀ ಅಂಬಾ sss ಅಂಬಾ ಅನ್ನುವುದು,ಅಜ್ಜಿ ಸೋದರತ್ತೆ ಪಾಳಿಯಲ್ಲಿ ಕೊಟ್ಟಿಗೆಗೆ ಹೋಗುವುದು ಬರುವುದು ,ಇನ್ನೂ  ಇಲ್ಲ ಅನ್ನುವುದು ನಡಿತಾ ಇತ್ತು. ನನಗೂ  ಎಚ್ಚರ. ಏನಜ್ಜಿ ಅಂತಾ ಕೇಳಿದೆ. ಏನಿಲ್ಲ ನೀನು  ಮಲಗು ನರ್ಮದೆ  ಕರು ಹಾಕಲು ತಯಾರಾಗಿದೆ ಅಂದರು. ಯಾವಾಗಲೋ ನನಗೆ ನಿದ್ದೆ. ಬೆಳಿಗ್ಗೆ ನೋಡಿದರೆ ಪುಟಾಣಿ  ಕರು . ಆದರೆ ನನಗೆ ಆವಾಗ ಗಿಣ್ಣು /ಪೋಸು   ತಿಂದ ನೆನಪಿಲ್ಲ. ಯಾವಾಗಲೋ ದೊಡ್ಡವಳಾದ ಮೇಲೆ,ಕರು ಹುಟ್ಟಿದ ಅಥವಾ ಮನುಜರಿಗೆ  ಮಗು ಹುಟ್ಟಿದ ನಂತರ ಬರುವ ಹಾಲಿಗೆ Colostrum ಅಂತಾರಂತಲೂ ಅದು ಕರುವಿಗೆ/ಮಗುವಿಗೆ ಕಾಯಿಲೆಗಳಿಂದ antibiotic ಉಪಾದಿಯಲ್ಲಿ ಕೆಲಸ ಮಾಡುತ್ತದೆಂದು  ಓದಿದ ನೆನಪು. ಹಾಗಾಗಿ ಅಜ್ಜಿ/ಸೋದರತ್ತೆ ಬಹುಶ: ಕರುವಿಗೆ ಆ ಹಾಲಿನ ವಂಚನೆ ಮಾಡುತ್ತಿರಲಿಲ್ಲವೆಂಬುದು ನನ್ನ ಎಣಿಕೆ. ಅವರನ್ನು ಕೇಳುವಾ ಅಂದರೆ ಅವರಿಬ್ಬರೂ ಈಗ ಕಾಲವಾಗಿದ್ದಾರೆ. 
ಗಿಣ್ಣು ನಾನು ತಿಂದಿದ್ದು ಮದುವೆಯಾದ ಮೇಲೆ ತೀರ್ಥಹಳ್ಳಿಗೆ ಬಂದ ಮೇಲೆ. ಅಲ್ಲಿ ಕೂಡು ಕುಟುಂಬ. ಮನೆಯಲ್ಲಿ ಆಗ ಹಸುಗಳು ಇರಲಿಲ್ಲ. ನಾನು ಮದುವೆಯಾಗಿ ಬರುವ ನಾಲ್ಕೈದು ವರ್ಷದ ಹಿಂದೇನೆ ಹಸು ಕಟ್ಟುವುದನ್ನು ನಿಲ್ಲಿಸಿದ್ದರಂತೆ. ಬೇರೆಯವರ ಮನೆಯಿಂದ ಗಿಣ್ಣು ತಂದುಕೊಡುತ್ತಿದ್ದರು.  ಹಾಗಾಗಿ ಆಸ್ವಾದಿಸುವಷ್ಟು ಗಿಣ್ಣು ಸಿಗುತ್ತಿರಲಿಲ್ಲ. ಒಂಚೂರು ಬಾಯಿಗೆ ಹಾಕುತ್ತಲೇ ಅದು ಯಾವಾಗಲೋ ಉದರದೊಳಗೆ ಮಾಯವಾಗುತ್ತಿತ್ತು. ಅದರ ರುಚಿ ಗೊತ್ತಾಗುತ್ತಿರಲಿಲ್ಲ. ಬೆಂಗಳೂರಿಗೆ ಬಂದ ಮೇಲೆ ಇಲ್ಲಿನ ಎಕ್ಸಿಭಿಶನ್ ನಲ್ಲೆಲ್ಲಾ ಪುಟ್ಟ ಪ್ಲಾಸ್ಟಿಕ್ ಡಬ್ಬಿಯಲ್ಲಿ ಗಿಣ್ಣು ಸಿಗುತ್ತಿದ್ದದ್ದು ನೋಡಿ ಸಖೇದಾಶ್ಚರ್ಯ ?? ಅರೆ ಇದೇನು ಧಂಡಿಯಾಗೆ ಸಿಗುತ್ತಿದೆ ಇಲ್ಲಿ  ಅಂತ!ಮಕ್ಕಳಿಗೆ ಅದರ ರುಚಿ ತೋರಿಸುವಾ ಅಂತ ಒಂದು ಪುಟ್ಟ ಡಬ್ಬಿ ತೆಗೊಂಡಿದಿದೆ. ಮಾಲವಿಕಾಳಿಗೆ ಅಷ್ಟು ಇಷ್ಟ ಆಗಿರಲಿಲ್ಲ. ನನಗೋ ಅದರ ರುಚಿ ಗೊತ್ತಾಗಲೇ ಇಲ್ಲ. ಶ್ರೀಕಾಂತ ಮಾತ್ರ ಇದು ಗಿಣ್ಣು ಅಲ್ಲವೇ ಅಲ್ಲ ಅಂದು ಬಿಟ್ರು.  ಆಮೇಲೆ ಇತ್ತೀಚಿಗೆ ತೀರ್ಥಹಳ್ಳಿಯಿಂದ ಆಗುಂಬೆಯ ಕಸ್ತೂರಿ ಅಕ್ಕನ ದೊಡ್ಡಮನೆಗೆ ಭೇಟಿಯಿತ್ತಾಗ ಅವರು ಪ್ರೀತಿಯಿಂದ ಫ್ರಿಜ್  ನಲಿದ್ದ ಬೆಲ್ಲದಿಂದ ಮಾಡಿದ ಗಿಣ್ಣು ತಿನ್ನಲು ಕೊಟ್ಟರು. ಅದು ಸ್ವಲ್ಪವೇ ಇತ್ತು . ಮುಜುಗರದಿಂದ ಒಂಚೂರು ನಾಲಿಗೆ ಮೇಲೆ ಹಾಕ್ಕೊಂಡೆ. 

ಪಾಕ ಶಾಲೆ ಅಂತ ಫೇಸ್ ಬುಕ್ ನ ಒಂದು  ಗ್ರೂಪ್ ನಲ್ಲಿದ್ದೇನೆ ನಾನು. ಅಲ್ಲಿ ಗಿಣ್ಣು  ಮಾಡುವ ರೆಡಿ ಮೆಡ್ ಪ್ಯಾಕೆಟ್ ಸಿಗುತ್ತದೆಂದು ಕೇಳಿದ್ದೆ. ಆದರೆ ತಂದು ಮಾಡಬೇಕೆನಿಸಲಿಲ್ಲ. ಮೊನ್ನೆ ಶ್ರೀಕಾಂತ ಮಲ್ಲೇಶ್ವರದ ಕಿಣಿ ಮಾಮನ ಅಂಗಡಿಗೆ ಹೋಗಿದ್ದರು. ಅಲ್ಲಿಂದ ಈ ಕಾಮಧೇನು ಗಿಣ್ಣು ಮಿಕ್ಸ್ ತಂದಿದ್ದರು.  
ಇಲ್ಲಿದೆ ನೋಡಿ ಪ್ಯಾಕೆಟ್ಟು ಮತ್ತು ನಾನು ಮಾಡಿದ ಗಿಣ್ಣು. ಏಲಕ್ಕಿ ಮಾತ್ರ ಹಾಕಲಿಲ್ಲ. ಉಳಿದ ತಯಾರಿ ಪ್ಯಾಕೆಟ್ ಹಿಂದುಗಡೆ ನಮೂದಿಸಿದಂತೆ. 
ಅರ್ಧ ಪ್ಯಾಕೆಟ್ ಹಸಿ ಹಾಲಲ್ಲಿ  , ೧೦೦ ಗ್ರಾಮ್ ಸಕ್ಕರೆ ಅಥವಾ ಬೆಲ್ಲ , ಏಲಕ್ಕಿ ಪುಡಿ , ಗಿಣ್ಣು ಪುಡಿ ಗಂಟಾಗದಂತೆ ಮಿಶ್ರ ಮಾಡುವುದು. ೧೫ ನಿಮಿಷ ಹಬೆ ಪಾತ್ರೆಯಲ್ಲಿ ಬೇಯಿಸುವುದು. ತಣಿದ ನಂತರ ಫ್ರಿಜ್  ನಲ್ಲಿ ಹಾಕಿಡುವುದು . ನಾನು ಎರಡು ಮೂರೂ ದಿನ ಉಳಿಯುತ್ತೆ ಅಂದುಕೊಂಡರೆ  ಒಂದೇ ಒಂದು ಪೀಸ್ ಉಳಿದಿದೆ. ನೀವು ತಂದುಕೊಂಡು ಮಾಡಿಕೊಂಡು ತಿನ್ಕಳ್ಳಿ  





September 1, 2016

auto ಅವಾಂತರಗಳು

ಯು ಎಸ್  ನಿಂದ  ಫ್ರೆ೦ಡ್  ಬಂದಿದ್ದರು. ನಾವೆಲ್ಲಾ ಇನ್ನೊಂದು ಫ್ರೆ೦ಡ್  ಮನೆಯಲ್ಲಿ ಊಟಕ್ಕೆ ಸೇರುವುದೆಂದಾಯಿತು. ಮಹಾಲಕ್ಮಿಪುರದಿಂದ ಜಯನಗರ ಒಂಬತ್ತನೆಯ ಬ್ಲಾಕ್ ಗೆ ಬರಬೇಕಿತ್ತು. ಆ ದಿನ ಮನೆಯಲ್ಲಿ ಏನೋ ಗಡಿಬಿಡಿ. ಅರ್ಜೆಂಟ್  ಆಫಿಸಿನ ಕೆಲಸ, ಮಾಲವಿಕಾ ನಿಹಾರಿಕಾ ರ ಲಂಚ್ ಬಾಕ್ಸ್ ಅಂತ ಲೇಟಾಯಿತು. ದಾರಿಯಲ್ಲಿ ಕೇಕ್ ಒಂದನ್ನು ಪಿಕ್ ಮಾಡಬೇಕಿತ್ತು. ಶ್ರೀಕಾಂತ ನನಗೆ ಬೇಕರಿ ತನಕ ಡ್ರಾಪ್ ಕೊಟ್ಟರು ಅಲ್ಲಿಂದ ನನಗೆ ರಿಕ್ಷಾ ಸಿಕ್ಕಿತ್ತು. ಇಷ್ಟೆಲ್ಲಾ ಗಡಿಬಿಡಿಯಲ್ಲಿ ನಾನು ಮೂತ್ರಕ್ಕೆ ಹೋಗದೆ ಕಟ್ಟಿಕೊಂಡು ಬಿಟ್ಟಿತ್ತು. ಆಟೋ ದವಾ ಇದ್ದ ಬದ್ದ ಹೊಂಡದಲ್ಲೆಲ್ಲ ರಿಕ್ಷಾ ಓಡಿಸ್ತಾ ಇದ್ದ. 
ಸ್ವಲ್ಪ ದೂರ ಹೋದ ಮೇಲೆ, 'ಹಾಲೋ, ಏನ್ರಿ ಇವತ್ತು ಮನೆಯಲ್ಲಿ ಉಪ್ಪಿಟ್ಟಾ? ಇನ್ನೊಂದು ಹೊಂಡದಲ್ಲಿ ರಿಕ್ಷಾ ಓಡಿಸಿದರೆ ನಾನು ಸತ್ತೇ ಹೋಗ್ತೀನಿ ಅಂದೆ'
ಅಯ್ಯೋ ಏನಾಯ್ತ್ರಿ ಮ್ಯಾಡಮ್ ? ಮೊದಲೇ ಹೇಳೋದಲ್ವಾ? ನಿಧಾನಕ್ಕೆ ಓಡಿಸ್ತಿನಿ. ಅಂದಹಾಗೆ ನಮ್ಮ ಹೆಂಡ್ರು ಇವತ್ತು ಏನು ಮಾಡಿಲ್ಲ. ಇನ್ನು ಟಿಫನ್ ಆಗಬೇಕಷ್ಟೆ ಮ್ಯಾಡಮೊರೆ. ನಾನು ರಿಕ್ಷಾ ಓಡಿಸಿ ಆದಷ್ಟು ದುಡ್ಡು ಓಟ್ಟು  ಮಾಡುವ ಪ್ರಯತ್ನ ಮಾಡ್ತಿವ್ನಿ. ಅದು ಸಾಕಾಗೋಲ್ಲ ಅಂತೆ. ಆಕೆ ಚೀಟಿ  ವ್ಯವಹಾರ ಮಾಡ್ತಾಳಂತೆ, ನಾನು ಬೇಡ ಅಂದಿದ್ದಕ್ಕೆ ಸಿಟ್ಟು ಮ್ಯಾಡಮ್. ಮದುವೆ ಮುಂಚೆನೇ ನಾನು ರಿಕ್ಷಾ ಓಡಿಸೋದು ಆಕೆಗೆ ಗೊತ್ತಿತ್ತು. ಚೀಟಿ ವ್ಯವಹಾರ ಎಲ್ಲ ನಮಗೆ ಹೇಳಿದ್ದಲ್ಲ. ನನ್ನ ತಲೆ ಎಲ್ಲಾ ಹಾಳಾಗಿದೆ ಮ್ಯಾಡಂ !! 
"ಎಲ್ಲಾದ್ರೂ ನಿಲ್ಲಿಸಿ ತಿಂಡಿ ತಿನ್ನಿ ಎಷ್ಟು ಲೇಟ ಆಗಿದೆ" ಅಂದಿದ್ದಕ್ಕೆ. ಜಯನಗರ ಕಡೆ ಬೇಜ್ಜಾನ್ ಹೋಟಲ್ ಗಳಿದ್ದಾವೆ. ಅಲ್ಲೇ ಏನಾದ್ರೂ ತಿಂತಿನಿ  ಅಂದ. 
ಜಯನಗರ ತಲುಪಿದ ಮೇಲೆ ದಾರಿ ಸ್ವಲ್ಪ ಕನ್ಫ್ಯೂಸ್ ಆಯ್ತು. ಕೇಕ್ ಹಿಡಿದುಕೊಂಡು ಮನೆ ಹುಡುಕೋದು ಅನುಕೂಲ ಆಗ್ತಿರಲಿಲ್ಲ. ಆದರೂ ಒಂಚೂರು ಬೇಸರಿಸಿಕೊಳ್ಳದೆ ನನ್ನ ಎಡ್ರಸ್ ಚೀಟಿ ಹಿಡಿದುಕೊಂಡು ನಾಲ್ಕೈದು ಕಡೆ ಕೇಳಿ ನನ್ನನ್ನು ಫ್ರೆನ್ಡ್  ಮನೆಗೆ ಬಿಟ್ಟರು. ತುಂಬಾ ಥ್ಯಾಂಕ್ಸ್ ಕಣ್ರೀ. ನಿಮಗೆ ಒಳ್ಳೆದಾಗಲಿ ಅಂದೆ. 
ಅಷ್ಟ೦ದ್ರಲ್ವಾ? ಅದೇ ಸಾಕು ಮ್ಯಾಡಮ್ ಅಂದ 

ಎಪಿಸೋಡ್ -೨ 
ಇದು ಇತ್ತೀಚಿಗೆ ನಡೆದಿದ್ದು. ಅಕ್ಕ ಕೇಕ್ ಒಂದನ್ನು ರಾಮಯ್ಯ ಕಾಲೇಜ್ ಕಡೆ ಒಯ್ಯಬೇಕಿತ್ತು. ಅದು ಯು ಎಸ ನಿಂದ  ಬಂದ ಆರ್ಡರ್, ಅವರ ವಯಸ್ಸಾದ ಅತ್ತೆ ಮಾವಂದರಿಗೆ ಕೇಕ್ ತಲುಪಿಸಬೇಕಿತ್ತು. ತುಂಬಾ ದೊಡ್ಡ ಕೇಕ್ ಅಥವಾ ಅವರ ಮನೆಗೆ ಹೋಗಿ ಸೆಟ್ ಮಾಡುವ ಕೆಲಸ ಇದ್ದರೆ, ನಾನು ಅಕ್ಕನ ಜತೆ ಹೋಗುತ್ತೇನೆ . ಅಲ್ಲಿ ತಲುಪಿದ ಮೇಲೆ ದಾರಿ ಗೊತ್ತಾಗಲಿಲ್ಲ. ಸ್ವಲ್ಪ ಸುತ್ತಾಡಬೇಕಾಯ್ತು. ಆಟೋದವನ ಆಟಾಟೋಪ ನೋಡಬೇಕಿತ್ತು! 'ಸರಿ ದಾರಿ ಗೊತ್ತಾಗಿಲ್ಲಾ ಅಂದ್ರೆ ಯಾರನ್ನಾದ್ರೂ ಕೇಳಬೇಕು, ಇಲ್ಲ ಆ ಮನೆಯವರನ್ನು ಇಲ್ಲಿ ಬರಲಿಕ್ಕೆ ಹೇಳಿ' ಅಂತ ವರಸೆ ಶುರು ಮಾಡಿದ. ನಾನು- ಅಲ್ಲಪ್ಪ ನಮಗೂ ಈ ಏರಿಯಾ ಹೊಸತು, ಮತ್ತು ವಯಸ್ಸಾದ ದಂಪತಿಗಳು, ಈ ಮಳೆಯಲ್ಲಿ ಅವರನ್ನೆಲ್ಲಿ ಬರಲಿಕ್ಕೆ ಹೇಳೋದು ಅಂತ ಕೇಳಿದೆ. ...ಮತ್ತೆ ನಿಮಗೆ ಮೀಟರ್ ಮೇಲೆ ಹತ್ತು ರೂಪಾಯಿ ಜಾಸ್ತಿನೇ ಕೊಡ್ತಿದ್ದೀವಿ, ಯಾಕೆ ಇಷ್ಟು ಗಲಾಟೆ? ನಾವೇನು ಸಂ ಸುಮ್ನೆ ಈ ಕಡೆ ಬಂದಿದ್ದೀವಾ? ಕೆಲಸ ಇರೋದಿಂದಲೇ ಬಂದಿದ್ದು  ?
" ಇಳೀರಿ ಮ್ಯಾಡಮ್  (ಅಕ್ಕ ಆಗಲೇ ಇಳಿದು ಕ್ರಾಸ್ ರೋಡ ಚೆಕ್ ಮಾಡ್ತಾ ಇದ್ಲು. ಜಿ ಪಿ ಎಸ ಬೇರೆ ಹಾಕ್ಕೊ೦ಡಿದ್ಲು) ಲೇಟ ಆಗ್ತಾ ಇದೆ' ಅಂದ. 'ಅರೆ ನಮಗೂ ಮನೇಲಿ ಕೆಲಸ ಇದೆ' (ಅಕ್ಕನಿಗೆ ಇನ್ನೊಂದು ಕೇಕ್ ಆರ್ಡರ್ ಇತ್ತು ). ನೀವು ಎಲ್ಲಿ ಬೇಕು ಅಲ್ಲಿ ಅಲೆದಾಡಿ ಮ್ಯಾಡಮ್, ನನ್ನ ಕಾಸ್ ಕೊಡಿ, ನಾ ಹೊಂಟೋಯ್ತಿನಿ  ಅಂದ. ನಾನು ಸರ್ಕಸ್ ಮಾಡಿ (ಕೇಕ್ ,ಕೊಡೆ , ಪರ್ಸ್ ಬ್ಯಾಗ್ ಎಲ್ಲ ನನ್ನತ್ರ ಇದ್ದವು) ಅವನ ಮೀಟರ್ ದುಡ್ಡು ಕೊಟ್ಟು ಅಷ್ಟೇ ಸರ್ಕಸ್ ಮಾಡ್ತಾ ಕೇಕ್ ಕೊಡೆ ಎಲ್ಲ ಬ್ಯಾಲನ್ಸ್ ಮಾಡ್ತಾ ಇದ್ದೆ. ಸಧ್ಯ ಮಾಲವಿಕಾ ಗೆ ಮನೆ ಸಿಕ್ಕಿ ಬಿಡ್ತು. ನಾವು ಇಳಿದ ಜಾಗದಲ್ಲೇ ಸ್ವಲ್ಪ ಮುಂದಕ್ಕೆ ತಿರುಗಿದ್ರೆ ಅವರ ಮನೆ. ಆಟೋ ದವನ ರಂಪ ಎಲ್ಲ ಹೇಳ್ದೆ. ಕೇಕ್ ಡೆಲಿವರಿ ಆದ ಮೇಲೆ ಓಲಾ ದವರಿಗೆ ಕಂಪ್ಲೈ೦ಟ ಕೊಟ್ಟಳು ಅಕ್ಕ ಫಾರ್ rude behaviour 

ಎಪಿಸೋಡ್ -೩
ಇದು ಹಾಗೆ ದೂರದಲ್ಲಿ ಕೇಕ್ ಡೆಲಿವರಿ ಮಾಡಲು ಹೋಗಿದ್ವಿ. ಇದು ಕೂಡಾ ಓಲಾ ಆಟೋ. ಹತ್ತುವ ಮುಂಚೆನೇ ಹೇಳಿದ್ದೆ ನಮಗೆ ದಾರಿ ಗೊತ್ತಿಲ್ಲ ಅಂತ. ಅವನೇನು ಮಾತನಾಡಲಿಲ್ಲ. ಎಡ್ರೆಸ್ ಅವನ ಮೊಬೈಲ್  ನಲ್ಲಿ ಹಾಕಿಕೊಂಡು ಮ್ಯಾಪ್ ಹಾಕ್ಕೊಂಡ . ಒಂದಷ್ಟು ದೂರ ತಲುಪಿದ  ಮೇಲೆ ಅವನ ಸೆಲ್ ಫೋನ್ ನ ಮ್ಯಾಪ್ ತೋರಿಸೋದು ನಿಂತು ಹೋಯ್ತು. ಆದರೆ ಎಲ್ಲ ಕಡೆ ಬೇರೆ ರಿಕ್ಷಾದವರನ್ನು ಕೇಳಿಕೊಂಡು ಹೋದ. ನಮಗೆ ಹೋಗಬೇಕಾದ ಏರಿಯಾ ಸಿಕ್ಕಿದ್ರು ಮನೆ ಹುಡುಕಲಿಕ್ಕೆ ಕಷ್ಟ ಆಗಿ  ದಾರಿಹೋಕರನ್ನು ಕೇಳಬೇಕಾಯ್ತು, ಅವರೆಲ್ಲ ' ಓ ಆ ಮನೆನಾ? ಅಂತ ಖುಷಿಯಿಂದ ವಿಳಾಸಕ್ಕೆ ಹೋಗುವ ದಾರಿ ಹೇಳಿದ್ರೂ  ಒಂದೆರಡು ಕನ್ಫ್ಯೂಷನ್. 'ಮ್ಯಾಡಮ್ ಎಲ್ಲರಿಗು ಆ ವ್ಯಕ್ತಿಯ ಪರಿಚಯ ಇದೆ' ಅವರು ಫಿಲ್ಮ್ ನವರಾ ಮ್ಯಾಡಮ್? 'ಅಲ್ಲ ಆದರೆ ಸುಪ್ರಸಿದ್ದ ನೃತ್ಯಗಾತಿ' ಅಂದೆ . ಟಿ ವಿ ನಲ್ಲೆಲ್ಲಾ ಬರ್ತಾರಾ? ಬಹುಶ: ಬರ್ತಾರೇನೋ. ನನಗೆ ಅವರ ಹೆಸರ ಪರಿಚಯ ಇದೆ ಆದರೆ ಅವರ ಡ್ಯಾನ್ಸ್ ನಾ ನೋಡಿಲ್ಲ ಅಂದೆ. ಮತ್ತೆ ನಮ್ಮನೇಲಿ ಟಿವಿ ಇಲ್ಲ ಅಂತಲೂ ಹೇಳಿದೆ. ಅವನಿಗೆ ಸಕತ್ ಟೆನ್ಷನ್ ಯಾಕೆ ಮ್ಯಾಡಂ ಟಿ ವಿ ಇಟ್ಟುಕೊಂಡಿಲ್ಲಾ? ಮತ್ತೆ ಬೋರ್ ಆದ್ರೆ ಏನು ಮಾಡ್ತೀರಿ ...ಮುಂತಾದ್ದು, ನಾನು 'ಓದುತ್ತೇನೆ ಅಂದೆ' ಅದು ಒಳ್ಳೇದೇ ಬಿಡಿ ಮ್ಯಾಡಮ್ , ನಮ್ಮನೇಲಿ ಟಿ ವಿ ಇಲ್ಲದಿದ್ದರೆ ಆಗೋದೇ ಇಲ್ಲ ಅಂತ ಸೇರಿಸಿದ.  ಅಷ್ಟ್ರಲ್ಲಿ ಅವರ ಮನೆಗೆ ಹೋಗುವ ಹಾದಿಗೆ ಅರಂಧತೀ  ನಾಗ್ ' ರಸ್ತೆ ಅಂತ ಬೋರ್ಡ್ ನೋಡಿ ಅವನಿಗೆ ಸಿಕ್ಕಾಪಟ್ಟೆ excitement . ಮ್ಯಾಡಮ್ ಶಂಕರ್ ನಾಗ್ ಅವರ ಹೆಂಡ್ರ ಹೆಸರು ' ಅಂತ. ಆ ಜಾಗ ವಂತೂ ನಮ್ಮ ಮನೆಯಿಂದ ಬೇರೆ ಊರು ಅನ್ನುವಷ್ಟು -ಸುಮಾರು ದೂರ ಇತ್ತು. ನಮಗೆ ವಾಪಸ್ ಬರಲು ವೆಹಿಕಲ್ ಸಿಕ್ಕೋದು ಸಂಶಯ  ಇತ್ತು. ಏನು ಮಾಡೋದಪ್ಪಾ ಅಂತ ಯೋಚಿಸ್ತೀರ ಬೇಕಾದ್ರೆ. ಆಟೋ ದವನೇ ಐಡಿಯಾ ಕೊಟ್ಟ. ಐದು ನಿಮಿಷ ಬಿಟ್ಟು ಆಟೋ ಬುಕ್ ಮಾಡಿ. ನಾನು ಇದೆ ಏರಿಯಾದಲ್ಲಿದ್ದೇನೆಂತ  ಆ ಆರ್ಡರ್ ನನಗೆ ಬರುತ್ತೆ ಅಂತ. ನನಗು ಸಮಂಜಸವೆನಿಸಿತು. ಅಲ್ಲಿ ಆಗಲೇ ಫಂಕ್ಷನ್ ನಡಿತಾ ಇತ್ತು , ಬಂದವರೆಲ್ಲ ಅವರವರ ವಾಹನಗಳಲ್ಲೇ ಬಂದಿದ್ದರು. ಜನನಿಬಿಡ ಪ್ರದೇಶ ... ಆದರೆ ಅಲ್ಲಿ ನೆಟ್ವರ್ಕ್  ಇಲ್ಲದೆ ನಮ್ಮ ಫೋನ್ ಕನೆಕ್ಟ್ ಆಗ್ತಾನೆ ಇರಲಿಲ್ಲ. ಆಟೋ ದವನು ಇರಲಿ ಬಿಡಿ ಮ್ಯಾಡಮ್ ಸುಮ್ನೆ ಮೀಟರ್ ಹಾಕ್ಕೊಂಡು  ಕರೆದುಕೊಂಡು ಹೋಗ್ತೀನಿ ಅಂದ . ಸರಿ ಅಂತ ನಾವು ಆರಾಮಾಗಿ ಅವನ ರಿಕ್ಷಾದಲ್ಲೇ ಬಂದ್ವಿ.  ಕೇಕ್ ಬೆಲೆಗಿಂತ ನಮ್ಮ ಟ್ರಾವೆಲ್ ಚಾರ್ಜ ಜಾಸ್ತಿ ಇತ್ತು. ಈ ತರಹ ಹಲವಾರು ಆರ್ಡರ್ ಬಂದಿವೆ :-) 
ಇನ್ನು ಕೆಲವು ಮುಂದಿನ ಸಲ. ಒಂದೆರಡು ಕೆಟ್ಟ ಅನುಭವ ಬಿಟ್ರೆ ನಮಗೆ ಸಿಕ್ಕಿದ ಆಟೋ ದವರು ಒಳ್ಳೆಯವರು

ಇಲ್ಲಿವೆ ಕೆಲ ಹಳೆ ಆಟೋ ಕತೆಗಳು
http://malathisanchiyinda.blogspot.in/2012/03/blog-post.html

http://malathisanchiyinda.blogspot.in/2014/05/blog-post_11.html

August 29, 2016

ಪಾತ್ತೊಳಿ (ಅರಸಿನ ಎಲೆ ಕಡುಬು)

ನನ್ನ ಮಗಳು ಕೊಂಕಣಿ ಅಡುಗೆಗಳನ್ನು ರೆಕಾರ್ಡ್ ಮಾಡುತ್ತಾಳಂತೆ. ವಿಡಿಯೋ ಕೊಂಕಣಿಯಲ್ಲಿದ್ದರು ಅದಕ್ಕೆ ಇಂಗ್ಲಿಷ್ ಸಬ ಸ್ಕ್ರಿಪ್ಟ್ ಇದೆ. ಆದ್ದರಿಂದ ಈ ತಿಂಡಿಗಳನ್ನು ಯಾರೇ  ಮಾಡಲು ಪ್ರಯತ್ನ ಪಡಬಬಹುದು.   ಮೊದಲನೆಯ ಪ್ರಯತ್ನ.
ಕೆಳಗಿನ  ಕೊಂಡಿಯನ್ನು ಕ್ಲಿಕ್ಕಿಸಿ
patholi

:-)

August 16, 2016

ಮಾಡಿದುಣ್ಣೋ ಮಾಹಾರಾಯ / what goes round comes round

ಒಬ್ಬನಿದ್ದ ಬಡವ. ಬೆಣ್ಣೆ ಮಾರಿ ಜೀವನ ನಡೆಸುತ್ತಿದ್ದ. ಅವನು ಒಂದು ಅಂಗಡಿಗೆ ಮಾತ್ರ ಬೆಣ್ಣೆ ಮಾರುತ್ತಿದ್ದ. ಒಂದು ಕೆ ಜಿ ಬೆಣ್ಣೆ ಮಾರಿ ಅದರ ದುಡ್ಡು ಇಸಕೊಂಡು ಮನೆಗೆ ಹೋಗುವುದು. ಇದು ಅವನ ದಿನಚರಿ ಒಂದು ಸಲ ಆ ಬೆಣ್ಣೆ ಕೊಂಡುಕೊಳ್ಳುವ  ಧಣಿ ಗೆ ಬೆಣ್ಣೆ  ಯನ್ನು ತೂಕ ಮಾಡುವ ಹುಕ್ಕಿ ಬಂತು. ಅರೆ ಇದೇನು ೯೦೦ ಗ್ರಾಮ್ ಮಾತ್ರ ಇದೆ. ಬರಲಿ ಅಂವ ಮಾಡ್ತೀನಿ ಇವತ್ತು ಅಂತ ಅವನಿಗೆ ಕಾಯ್ತಾ ಇದ್ದ.
ಬೆಣ್ಣೆ ಮಾರುವವ ಬಂದೊಡನೆ "ಏನಂತ ತಿಳಕಂಡಿದ್ದೀಯಾ. ಇಷ್ಟು ದಿನ ಮೋಸ ಮಾಡಿದೀಯಾ. ಇನ್ನೇ೦ದು ನನ್ನ ಅಂಗಡಿಗೆ ಬೆಣ್ಣೆ ಮಾರಲು ಬರಬೇಡಾ"ಅಂತ ಆವಾಜ್ ಹಾಕಿದ.
ಬೆಣ್ಣೆ ಮಾರುವವ: ಧಣಿಗಳೇ ಹಾಗೆ ಮಾಡ ಬೇಡಿ. ಈ ಬಡವನ ಹೊಟ್ಟೆ ಮೇಲೆ ಹೊಡಿಬೇಡಿ. ನೀವು ಪ್ರತಿ ದಿನ ಕೊಡುವ ದುಡ್ಡಿನಿಂದಲೇ ನನ್ನ ಜೀವನ. ಎಷ್ಟು ಬಡವನೆಂದರೆ ಬೆಣ್ಣೆ ತೂಕ ಮಾಡಲು ನನ್ನ ಬಳಿ ಒಂದು ಕೆ ಜಿ ತೂಕದ ತಕ್ಕಡಿ  ಕಲ್ಲೇ ಇಲ್ಲ. ನೀವು ಕೊಟ್ಟ ಒಂದು ಕೆ ಜಿ ಸಕ್ಕರೆ ಗೆ ಸಮ ಪ್ರಮಾಣದಲ್ಲಿ ಬೆಣ್ಣೆ ತೂಕ ಮಾಡಿ  ಕೊಡುವವ ನಾನು .....
ಧಣಿ = ಇಂಗು  ತಿಂದ  ಮಂಗ
ವಾಟ್ಸ್ಯಾಪ್ ನಲ್ಲಿ ಬಂದಿದ್ದು.

July 29, 2016

ಕಿರುಗತೆ - a very short story

ಆ ಮನೆಯಲ್ಲಿ ಗದ್ದಲವೋ ಗದ್ದಲ. ಅಲ್ಲಿ ಒಂದು ಮರಣ ಘಟಿಸಿತ್ತು. ತಾಯಿ ತನ್ನ ಮಗನ ಕಳೇಬರವನ್ನು ನೆಟ್ಟ ನೋಟದಲ್ಲಿ ನೋಡುತ್ತಿದ್ದಳು. ಮುಖದಲ್ಲಿ ಯಾವುದೇ ವಿಕಾರವು ಇರದೇ. ಕಣ್ಣಲ್ಲಿ ನೀರಿನ ಪಸೆ ಕೂಡ ಇರಲಿಲ್ಲ. ಆಕೆಯ ಅತ್ತೆ ಆಕೆಗೆ ತಿವಿದು, 'ಏನಾದರೂ ಉಸುರು, ಅತ್ತು ಬಿಡು , ಹೀಗೆ ಸುಮ್ಮನೆ ಮಾತ್ರ ಇರಬೇಡ' ಅಂತ ಒಂದುಕಡೆ ಹೇಳುತ್ತಲೂ, ಇನ್ನೊಂದು ಕಡೆ ಎದೆ ಬಡಿದು ಅಳುತ್ತಿದ್ದಳು. ಮಗನ ತಂದೆಯಂತೂ ಮೂರ್ಛೆ ಹೋಗಿ ಸಂಬಂಧಿಕರು ಗಾಳಿ ಹಾಕಿ ಮುಖದ ಮೇಲೆ ನೀರು ಚಿಮುಕಿಸುತ್ತಿದ್ದರು .

ಅತ್ತೆ ಇನ್ನೊಮ್ಮೆ ಆಕೆಯನ್ನು ತಿವಿದಾಗ, ಆಕೆ ರುದ್ರಾವತಾರ ತಾಳಿ , ಅತ್ತೆಯನ್ನು ದೂರ ನೂಕಿ 'ಯಾಕಳಬೇಕು  ನಾನು? ಅದೂ  ಪ್ರೀತಿ ಮಾಡಿದವಳು ಸಿಗಲಿಲ್ಲವೆಂದು ಸತ್ತವನಿಗೋಸ್ಕರ?. ಅಷ್ಟೇಯಾ ಜೀವನ ಅಂದ್ರೆ? 

ಅಳಬೇಕಾದವರು ನೀವು. ಮೊದಲನೇಯದು ಹೆಣ್ಣು ಮಗುವಾಯ್ತು ಯಾಕೋ ಸುಮ್ಮನಿದ್ರಿ. ಆದರೆ ನನ್ನ ನನ್ನ ಆರೋಗ್ಯ ಕೆಟ್ಟು hOgiddaroo ಎರಡು ಮೂರೂ ನಾಲ್ಕು ಹೆಣ್ಣು ಭ್ರೂಣಗಳನ್ನು , ಗಂಡು ಮಗು ಹೆರುವ ತನಕ , ,ನಿಮ್ಮಿಂದಾಗಿ ಸಾಯಿಸಲಿಲ್ಲವೇ? ಅದರ ಪಾಪ ನಿಮಗೆ ತಗುಲಿದೆ. ಗಂಡು ಮಗು ಎಂದು ನೀವು , ಅವನ ತಂದೆ ಸೇರಿ ತಲೆ ಮೇಲೆ ಏರಿಸಿ ಕುರಿಸಿದ್ರಿ. ಕೇಳಿದ್ದನ್ನೆಲ್ಲ ಕೊಡಿಸಿದ್ರಿ. ಈಗ ಹುಡುಗಿಯೊಬ್ಬಳ ಪ್ರೀತಿ ಸಿಗಲಿಲ್ಲ ವೆಂದು ಆತ್ಮಹತ್ಯೆ ಮಾಡಿದವನಿಗೋಸ್ಕರ ನಾ ಖಂಡಿತ ಅಳಲಾರೆ. 

ಅಲ್ಲೇ ಇದ್ದ ಮಗಳು 'ಬಾ ಅಮ್ಮ ನನ್ನ ಜತೆ ' ಅಂದಾಗ ಅವಳ ಆಸರೆ ಪಡೆದು ಆಚೆ ನಡೆದಳಾಕೆ. 


July 27, 2016

The Guiding Factor (TGF)

Niha my daughter does the script for these videos. do have a look and share with your friends who would like to visit BangaLuru, This will help them to make their stay enjoyable

ನಿಹಾರಿಕಾ 'ದ  ಗೈಡ್ಇಂಗ್ ಫ್ಯಾಕ್ಟರ್ ' ಎಂಬ ವಿಡಿಯೋ ಗಳಿಗೆ ಸಂಭಾಷಣೆಗಳನ್ನು ಬರೆಯುತ್ತಾಳೆ. ಬೆಂಗಳೂರಿಗೆ ಭೆಟ್ಟಿ ನೀಡುವ ಹೊಸಬರಿಗೆ ಇದರಿಂದ ತುಂಬಾ ಅನುಕೂಲವಾಗುತ್ತದೆ .
ಯಾವುದಾದರೂ ಒಂದು ಕೊಂಡಿಯನ್ನು ಕ್ಲಿಕ್ಕಿಸಿದರೆ ಉಳಿದ ವಿಡಿಯೋಗಳು ಕಾಣಸಿಗುತ್ತವೆ

THE GUIDING FACTOR

July 25, 2016

ಕನ್ನಡ ಪ್ರಭ -ಕಾಡುವ ನೆನಪು - ನಗುವಾಗ ನೆನಪಾಗುವಳು ವಿನ್ನಿ




ಚಿಕ್ಕಂದಿನಲ್ಲಿ ಅಜ್ಜನ ಹದ್ದುಬಸ್ತಿನಲ್ಲಿ ಬೆಳೆದೆ. ಅಜ್ಜ ಇಂಜಿನಿಯರ್. ಹಾಗಾಗಿ ಮನೆಗೆ  ಬರುವವರ ಸಂಖ್ಯೆ ದೊಡ್ಡದು. ಅವರ ಕ್ಲಯಂಟ್ಸ್  ಬಂದಾಗ ನಾನು ಹೊರಗಡೆ ಹಾಲ್  ಗೆ  ಬರೋದು ಅವರಿಗೆ ಇಷ್ಟ ಆಗ್ತಿರಲಿಲ್ಲ. ನನ್ನ ಕೋಣೆಯಲ್ಲಿ ಇರಬೇಕು. ನನ್ನ ಕೋಣೆಯಲ್ಲಿ ಪುಸ್ತಕ ಬೊಂಬೆಗಳು ಹಲವಾರು. ಅಜ್ಜ ತುಂಬಾ ಅನೂಕೂಲವಂತರು. ಆದ್ದರಿಂದ ನಾನು ಕೇಳಿದ್ದನ್ನೆಲ್ಲ ಕೊಡಿಸುತ್ತಿದ್ದರು. ಆದರೆ ಬೇರೆ ಯವರ ಸಂಪರ್ಕದಲ್ಲಿ ಇರಗೊಡುತ್ತಿರಲಿಲ್ಲ. ಹಾಗಾಗಿ ನಾನು ಮೌನಿ . ಯಾರ ಜತೆನೂ ಹೆಚ್ಚು ಮಾತು ಕತೆ ನಗು ಇವೆಲ್ಲ ಇರಲಿಲ್ಲ. ನಾನಿ (ಅಜ್ಜಿ)ಗೆ ಕ್ಯಾನ್ಸರ್  ಆದಾಗ ನನಗೆ ನನ್ನ ಅಪ್ಪ ಅಮ್ಮನ ಮನೆಗೆ ರವಾನಿಸಲಾಯಿತು. ಅಜ್ಜನ ಮನೆಯಲ್ಲಿ ರಾಣಿಯ ಹಾಗೆ ಬೆಳೆದ ನನಗೆ, ನನ್ನ ಉಳಿದ ಮೂವರು ತಮ್ಮ ತಂಗಿಯಂದಿಯರೊಂದಿಗೆ ಹೇಗೆ ಇರಬೇಕು ಅಂತ ಗೊತ್ತಾಗುತ್ತಿರಲಿಲ್ಲ. ಅವರ ಜಗಳಗಳನ್ನು ಬಿಟ್ಟ ಬಾಯಿಯಿಂದ ನೋಡೋದಷ್ಟೇ ನನ್ನ ಕೆಲಸ . ಹತ್ತನೆಯ ತರಗತಿಯಲ್ಲಿದ್ದಾಗ ನಂದಿನಿ ಅಂತ ಹುಡುಗಿ ನನ್ನ ಕ್ಲಾಸ್ ಜಾಯಿನ್ ಆದಳು. ನಾನು ಸುಮ್ಮನಿರುತ್ತಿದ್ದರಿಂದಲೋ ಏನೋ ಕೀಟಲೆ ಮಾಡಿ ನನ್ನನ್ನು ನಗಿಸುವ ಪ್ರಯತ್ನದಲ್ಲೇ ಇರುತ್ತಿದ್ದಳು. ಆಗ ನಗಲು   ಕಲಿತವಳು ನಾನು. ಅದೂ ಶಾಲೆಗೆ  ಮಾತ್ರ ಸೀಮಿತ ವಾಗಿತ್ತು.  ಸಿನಿಮಾ ನೋಡಿ ಅದರ ಕತೆಯನ್ನು ರಸವತ್ತಾಗಿ ವಿವರಿಸೋದು, ಟೀಚರ್ ಗಳನ್ನು ಅಣಕಿಸೋದು ಇಂತವೆಲ್ಲ ಮಾಡಿ ನಾನು ನಗುವಂತೆ ಮಾಡುತ್ತಿದ್ದಳು. ಆದರೆ ಅದು ಒಂದೆ ವರ್ಷ . ಆಮೇಲೆ ನಾವು ದೂರ ದೂರ.  ಪುನ: ನಾನು ನಗುವುದನ್ನು ಮರೆತೆ.  ನನಗೆ ಬೇಗ ಮದುವೆಯಾಯಿತು. ಆಗ ಪರಿಚಯವಾಗಿದ್ದು. ವಿನುತಾ. ವಿನುತಾ ನನ್ನ ಗಂಡನ ಆಪ್ತ ಸ್ನೇಹಿತರ ಹೆಂಡತಿ. ಸದಾ ನಗು ಮುಖ. ಆಮೇಲೆ ನಗಿಸುವುದು ಅವಳ ಜವಾಬ್ದಾರಿ. ಎರಡುವರೆ ವರ್ಷಗಳ ನಮ್ಮ ಒಡನಾಟದಲ್ಲಿ ಅವಳ ಜತೆ ನಕ್ಕಿದಷ್ಟು ನಾನು ಈವರೆಗೂ ನಕ್ಕಿದ್ದಿಲ್ಲ.  . ಅವಳು ಸ್ವಾಭಿಮಾನಿ. ತನ್ನ ಕಾಲಲ್ಲೇ ನಿಲ್ಲಬೇಕೆನ್ನುವ ಹಂಬಲ. ತನ್ನದೇ ಸ್ವಂತ ಉದ್ದಿಮೆ ಹಾಕುವ ನಿಟ್ಟಿನಲ್ಲಿ ಕಾರ್ಯಗತಳಾಗಿದ್ದಳು. ಇದರ ಮಧ್ಯ ಅವಳಿಗೊಂದು ಪುಟಾಣಿ ಮಗಳು ಹುಟ್ಟಿದಳು, ಮನೆಯಲ್ಲಿ ಅವಳ ಅಮ್ಮ ಹಾಗೂ  ಕೆಲಸದ ಪುಟ್ಟ ಹುಡುಗಿಯೊಂದಿಗೆ ಮಗುವನ್ನು ಬಿಟ್ಟು ಟ್ರೈನಿಂಗ್ ಅದು ಇದು ಅಂತ ಮನೆಯಿಂದ ಹೊರಗಿರುತ್ತಿದ್ದಳು. ಪುಟ್ಟ ಮಗುವನ್ನು ಬಿಟ್ಟು ಹೋಗಲು ಸಂಕಟವಾಗುತ್ತೆ, ಆದರೆ ಅವಕಾಶ ಬಂದಾಗ ಅದನ್ನು ಬಾಚಿಕೊಳ್ಳಬೇಕು ಅನ್ನುತ್ತಿದ್ದಳು ನನಗೆ. ಅವಳನ್ನು ನೋಡಿದರೆ ತುಂಬ ಖುಶಿ ನನಗೆ. ನಾವು ಆಗ ಇದ್ದದ್ದು ಕೊಪ್ಪ ದಲ್ಲಿ. ಪ್ರತಿ ಎರಡು ತಿಂಗಳಿಗೊಮ್ಮೆ  ಅವಳಿದ್ದ ಊರಿಗೆ ಹೋಗಿ ನಾಲ್ಕೈದು ದಿನ ನಮ್ಮ ಝಾಂಡಾ. ಹೊಸ  ಅಡುಗೆಗಳನ್ನು ಕಲಿಯೋದು, ಅದು ಸರಿಯಾಗದಿದ್ದಲ್ಲಿ ಅದಕ್ಕೆ ಎನೋ ಹೆಸರು ಇಟ್ಟು ನಗೋದು, ಟಿ ವಿಯಲ್ಲಿ ಬರುವ ಜಾಹೀರಾತುಗಳನ್ನು ಕೊಂಕಣಿಕರಿಸಿ ಹಾಡಿ, ಬೊಬ್ಬೆ ಹಾಕಿ ನಗುವುದು, ನನಗೆ ಏನೇನೋ  ಮೇಕ್ ಅಪ್ ಮಾಡುವುದು,  ಇಂತಹುದೇ ಎಲ್ಲಾ ಮಾಡುತ್ತಿದ್ದೆವು. ಒಂದು ದಿನ ಊರಲ್ಲಿದ್ದಾಗ ನಮಗೆ  ಟೆಲಿಗ್ರಾಮ್. ಅವಳ ಪುಟ್ಟ ಕಂದ ನಿದ್ದೆಯಲ್ಲೇ ಇಹ ಲೋಕ ತ್ಯಜಿಸಿತ್ತು. ಹುಟ್ಟುವಾಗಲೇ ಇದ್ದ ಹೃದಯದ ರಂದ್ರ ಆ ಪುಟಾಣಿಯನ್ನು  ಬಲಿ  ತೆಗೆದುಕೊಂಡಿತು.  ಆಗ  ನಾನು ಹೆಚ್ಚು  ಹೆಚ್ಚು ಅವಳ ಬಳಿ ಹೋಗಿ ಇರುತ್ತಿದ್ದೆ. ನಗು ಎಲ್ಲ ಮಾಯ, ಟೈಮ್ ಟ್ಟೈಮ್ ಗೆ ಮಶೀನ್ ತರಹ ಅಡುಗೆ ತಿಂಡಿ ಮಾಡಿ ಹಾಕಿ ಸುಮ್ಮನೆ ಹಾಲ್ ನ  ಸೋಫಾದಲ್ಲಿ ದೃಷ್ಟಿ ಎಲ್ಲೋ ನೆಟ್ಟು ಕುಳಿತುಕೊಳ್ಳುತ್ತಿದಳು. ನಾನು ಅವಳ ಜತೆ  ಸುಮ್ಮನೆ ಕುಳಿತುಕೊಳ್ಳುತ್ತಿದೆ.  ಅಷ್ಟರಲ್ಲೇ ನಾನು ತಾಯಿಯಾಗುವ ಮುನ್ಸೂಚನೆ. ಅಮ್ಮನ ಮನೆಗೆ ಹೋಗಿದ್ದೆ. ಅದೊಂದು ದಿನ ಯಾಕೋ ಸಂಕಟ. ಊಟ ಬೇಡ ನೀರು ಬೇಡ . ಅಮ್ಮ ಬೈದು ನನಗೆ ತಿನ್ನಿಸಿದ್ದರು ಆ ದಿನ, ವಿನ್ನಿಯ ನೆನಪು ತುಂಬಾ ಕಾಡುತ್ತಿತ್ತು. ಈಗಿನ ಹಾಗೆ ಆಗ  ಬೇಗ ಯಾರನ್ನೂ ಸಂಪರ್ಕಿಸಲು ಸಾಧ್ಯವಿರಲಿಲ್ಲ. ಟ್ರಂಕ್ ಕಾಲ್ ಬುಕ್ ಮಾಡಿ ಆಮೇಲೆ ಯಾವಾಗಲೋ ಮಾತು. ಕೊನೆಗೆ ನಾನು ಕೇಳ ಬಾರದ ಸುದ್ದಿಯನ್ನು ಹೊತ್ತು ತಂದಿತ್ತು ಇನ್ನೊಂದು ಟೆಲಿಗ್ರಾಮ್ , ವಿನ್ನಿ ಆತ್ಮ ಹತ್ಯೆ ಮಾಡಿ ಕೊಂಡಿದ್ದಳು.ಕಂದನ ಸಾವು ಅವಳು ತಡಕೊಳ್ಳಲಾಗಲಿಲ್ಲ. ಯಾವಾಗಲೋ ನನ್ನ ಜತೆ ಶೇರ್ ಮಾಡಿಕೊಂಡಿದ್ದಳು ' ನನ್ನ ಅಲಕ್ಷ  ದಿಂದ ಮಗು ಹೋಯಿತು' 
 ಅಂತ. ಆದಷ್ಟು ಸಮಾಧಾನ ಮಾಡಲು ಪ್ರಯತ್ನಿಸಿದೆ, ಅದು ವಂಶವಾಹಿ ಕಾಯಿಲೆ, ನೀನೇನು ಮಾಡುವ ಹಾಗಿರಲಿಲ್ಲ ಅಂತ. ಅವಳ ಸಾವನ್ನು ನನ್ನಿಂದ ಮುಚ್ಚಿಡುವ ಪ್ರಯತ್ನ ಮಾಡಿದರು ಎಲ್ಲರೂ. ಆದರೆ ನನಗೆ ಗೊತ್ತಾಯಿತು. ಕೆಲ ಹೊತ್ತು ಗೋಳಾಡಿ  ಅತ್ತೆ. ಆಮೇಲೆ ಪುನ: ಮೌನಿ ಯಾದೆ. ನಗುವುದನ್ನು ಮರೆತೇ, ನನ್ನ ಪುಟ್ಟ ಮಗಳು ನಿಹಾ ಹುಟ್ಟುವವರೆಗೆ. ಮೂವತ್ತು  ವರ್ಷಗಳೇ ಕಳೆದು ಹೋದವು ಈ ಘಟನೆಗೆ. ಈಗ ನಗಿಸುವ ಜಾವಾಬ್ದಾರಿ ನನ್ನ ಮಗಳದ್ದು. ಈಗ ಜೋರಾಗಿ ನಗುವಾಗಲೆಲ್ಲ , ತುಂಬಾ ಖುಷಿಯಾಗಿದಾಗ ವಿನ್ನಿಯನ್ನು  ನೆನೆಸಿಕೊಳ್ಳುತ್ತೇನೆ. 

July 13, 2016

ಕೇರಳದ ವಾಯ್ನಾಡ್ ನ ಸುಲ್ತಾನ್ ಬತ್ತೇರಿ

ನಾನು  ಮುಂಬೈನಲ್ಲಿ ಹುಟ್ಟಿ ಬೆಳೆದರು ಏಕಾಂತ ಬಯಸುವವಳು. ಬೆಂಗಳೂರು ನನಗಿಷ್ಟ ಆದರೂ ಆಗಾಗ ಬೆಂಗಳೂರಿನಿಂದ ಎಲ್ಲಾದರೂ ಹೊರಗೆ ಹೋಗಲು ಬಯಸುತ್ತೇನೆ.
ಹಿಂದಿನ ತಿಂಗಳು ನಿಹಾರಿಕಾಗೆ ಕೇರಳದ ಸುಲ್ತಾನ್ ಬತ್ತೇರಿಯ ಹೊಸ ಹೊಲಿಡೇ ಹೋಮ್ ನ ಫೋಟೋ ಶೂಟ್ ಒಂದರಲ್ಲಿ ಅಸ್ಸಿಸ್ಟ೦ಟ್ ಆಗಿ ಬರಲು ಆಹ್ವಾನವಿತ್ತು. ಕೊನೆ ಕ್ಷಣದಲ್ಲಿ 'ಅಮ್ಮ ನೀನು ಬರುತ್ತೀಯಾ' ಸುಮ್ಮನೆ ಕೂತು ಓದಬಬಹುದು ಎಂದಳು. ಯಾಕಾಗಬಾರದು ಎಂದು ಕೂಡಲೇ ಬಟ್ಟೆ ಬರೇ ತಿನಿಸುಗಳನ್ನು ಪ್ಯಾಕ್ ಮಾಡಿದೆ. ಮಧ್ಯಾಹ್ನ ಸರಿಯಾಗಿ ೩. ೩೦ ಗೆ ಬಸ್ ಕೆಂಗೇರಿ ಬಸ್ ನಿಲ್ದಾಣದಿಂದ ಹೊರಟಿತು. ಮೈಸೂರಿನಲ್ಲಿ ಒಂದು ಸ್ಟಾಪ್ ಬಿಟ್ಟರೆ ಸೀದಾ ಗುಂಡ್ಲುಪೇಟೆ ಗೆ ಸಂಜೆಯ ಚಹಾ ಗೆ ನಿಲ್ಲಿಸಿದರು. ಕತ್ತಲೆ ಯಲ್ಲಿ ಅರಣ್ಯದ ರಸ್ತೆಯಲ್ಲಿ ಹಜ್ಜೆಗೊಂದರಂತೆ ಸ್ಪೀಡ್ ಬ್ರೇಕರ್ ಗಳು. ಒಂದು ಆನೆಯ ಹಿಂಡು ನಮಗೆ ಕಾಣ ಸಿಕ್ಕಿತು. ಸಣ್ಣಕ್ಕೆ ಮಳೆ ಹನಿತಾ ಇದ್ದದರಿಂದ ವಾತಾವರಣ ತಂಪಾಗಿತ್ತು. ರಾತ್ರಿ ೮.೩೦ ಗೆ ನಾವು ಸುಲ್ತಾನ ಬತ್ತೇರಿ ತಲುಪಿದೆವು. ಹೊಲಿಡೇ ಹೋಮ್ ನ  ಮ್ಯಾನೇಜರ್ ಅಜೀಶ್ ನಮ್ಮನ್ನು ಕರೆದೊಯ್ಯಲು ಬಂದಿದ್ದರು. ಕಾರ್ ನಲ್ಲಿ ಸುಮಾರು ಹೊತ್ತು ಪ್ರಯಾಣ ಮಾಡಿದ ಹಾಗಾಯಿತು. ಏನಪ್ಪಾ ಇಷ್ಟು ಕತ್ತಲು ಹತ್ತಿರದಲ್ಲಿ ಯಾವ ಮನೆ ಬಿಡಿ, ಮನುಷ್ಯರು ಕಾಣ ಸಿಗಲಿಲ್ಲ.
ಚಿಕ್ಕ ಚೊಕ್ಕದಾದ ತ್ರೀ  ರೂಟ್ ಸ್  ಹೋಲಿಡೇ ಹೋಮ ತಲುಪಿದೆವು. ಹಸಿವೆಯಿಂದ ಹೊಟ್ಟೆ ತಾಳ ಹಾಕಲಾರಂಭಿಸಿತು. ಬೇಗ ಬೇಗನೆ ಒಂದು ಸುತ್ತು ಇಡೀ ಹೋಮ್ ನ ನೋಡಿ ಬಂದೆವು. ಬಿಸಿ ಬಿಸಿ ಅನ್ನ ಸಾಂಬಾರ್ , ಹಪ್ಪಳ ಉಪ್ಪಿನಕಾಯಿಯ ಊಟ ತುಂಬಾನೇ ಚೆನ್ನಾಗಿತ್ತು. ರಾತ್ರಿ ಮೆತ್ತನೆಯ ಹಾಸಿನ ಮೇಲೆ ಮಲಗಿದ್ದೆ, ನಿದ್ದೆ, ಬೆಳಿಗ್ಗೆ ಹಕ್ಕಿಗಳ ಕಲರವಕ್ಕೆ ಎಚ್ಚರವಾಯಿತು. ನಿಹಾ ಫೋಟೋ ಶೂಟ್ ಗೆ ತಯಾರು ಮಾಡುತ್ತಿದ್ದ ಹಾಗೆ ನಾನು ಒಂದು ರೌಂಡ್ ವಾಕ್ ಅಂತ ಹೊರಟೆ. ಐದೇ  ನಿಮಿಷದಲ್ಲಿ ನಾವು ಹಿಂದಿನ ದಿನ ರಾತ್ರಿ ಇಳಿದ ಬಸ್ ಸ್ತ್ಯಾಂಡ್ ಸಿಕ್ಕಿತು. ಅಲ್ಲಿಂದ ಮುಂದೆ ಪೇಟೆ. ಅಷ್ಟೇ ಅಲ್ಲ ಅಲ್ಲೆಲ್ಲ ಹಲವಾರು ಮನೆಗಳಿದ್ದವು. ನಗು ಮುಖದ ಹಲವು ಜನರು ಸಿಕ್ಕಿದರು. ಹಾಲಿನವ, ಮೀನು ಮಾರುವವ, ಇತ್ಯಾದಿ.
ಹಸಿರಿನಿಂದ ಕುಡಿದ ಸುಲ್ತಾನ ಬತ್ತೇರಿ ನಿಜಕ್ಕೂ ಒಂದು ಸುಂದರ ಆಹ್ಲಾದಕರ ವಾತಾವರಣದ ತಾಣ. ಜಿಂಕೆ ಗಳು ಭಯ ಭೀತಿಯಿಲ್ಲದೇ  ನಮಗೆ ಸೊಪ್ಪು ಹಾಕದೆ ತಮ್ಮದೇ ಲೋಕದಲ್ಲಿ ಇರುತ್ತಾರೆ.


                  red squirrel, ಕೆಂಪು ಅಳಿಲು
ಕೇರಳದ ವಿಶೇಷ ತಿಂಡಿ ಪುಟ್ಟು ಮತ್ತು ಕಡಲ್ ಕರಿ, ಪುರಿ , ಅವಿಯಲ್ ಮುಂತಾದ ಅಡಿಗೆಗಳನ್ನು ತಂಗಮ್ಮ ಅವರು ಮಾಡಿ ಬಡಿಸಿ ನಾವು  ಸವಿಯುವ ಅವಕಾಶವಾಯಿತು

ಹತ್ತಿರದಲ್ಲಿ ಟೂರಿಸ್ಟ್ ಜಾಗಗಳು ಹಲವು. ತ್ರೀ ರೂಟ್ಸ್ ನವರ ಹಲವಾರು ಟೂರ್ ಪ್ಯಾಕೇಜ್ ಗಳಿವೇ.

ನೀವು ಏಕಾಂತ ಬಯಸುವವರಾದರೆ, ಅಥವಾ ಏಕಾಂತದಲ್ಲಿ ಓದು ಬರಹ ಮಾಡುವುದಾದರೆ, ಹನಿಮೂನ್ ಗೆ  ಈ ಹೋಲಿಡೆ ಹೋಮ್ ಪ್ರಶಸ್ತವಾಗಿದೆ.
ಇಲ್ಲಿವೆ ಕೆಲವು ಸುಂದರ ಚಿತ್ರಗಳು. ಈ ಚಿತ್ರಗಳನ್ನು ಬ್ಲಾಗ್ ಬರಹಗಾರರ ಅನುಮತಿಯ ಮೇರೆಗೆ ನನ್ನ ಬ್ಲಾಗ್ ನಲ್ಲಿ ಬಳಸಿಕೊಂಡಿದ್ದೇನೆ. . ಹಾಗೆಯೇ ಅವರ ಬ್ಲಾಗ್ ಕೊಂಡಿಯನ್ನು ನೀಡುತ್ತೇನೆ.
LOYSNOISE

ಸೋ ಬೆಂಗಳೂರಿನಿಂದ ಬ್ರೇಕ್ ಬೇಕೆನಿಸಿದರೆ ತ್ರೀ ರೂಟ್ಸ್ ಹೋಲಿಡೇ ಹೋಮ್ ಸಂಪರ್ಕಿಸಿ.

Three roots: contact person Ajeesh/Sandhya
+91 9947697651
+91 9946 225455
Email: threerootsstay@gmail.com
ಕೇರಳದ ವಾಯ್ನಾಡ್ ನ ಸುಲ್ತಾನ್ ಬತ್ತೇರಿ 


July 12, 2016

ಬೆಳ್ಳಿಯ ಕಾಲ್ಗೆಜ್ಜೆ -2

ಬೆಳ್ಳಿಯ ಕಾಲ್ಗೆಜ್ಜೆ ಎಂಬ ನನ್ನದೊಂದು ಸಣ್ಣ ಲೇಖ ಬಂದಿತ್ತು ಕನ್ನಡಪ್ರಭದಲ್ಲಿ. ಅದರಲ್ಲಿ ಇದನ್ನು ಸೇರಿಸಬೇಕೆಂದಿದ್ದೆ , ಆದರೆ ಸಮಯಾವಕಾಶವಾಗಿರಲಿಲ್ಲ. ಅದಕ್ಕೆ ಒಂದು ಸೆಪೆರೇಟ್ ಪೋಸ್ಟ್. 
ನಿಕಟ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಳ್ಲಲು ಬೆಂಗಳೂರಿಗೆ ಬಂದಿದ್ದೆವು. ಆಗ ಆ ಮಾಮನ ಮನೆಯಲ್ಲಿ ಉಳಿದುಕೊಂಡೆವು. ಅವರಿಗೆ ಬಿನ್ನಿ ಮಿಲ್ಸ್ ನಲ್ಲಿ ಕೆಲಸವಿತ್ತು. ಆದರೆ ನಾವು ಹೋದಾಗ ಬಿನ್ನಿ ಮಿಲ್ಸ್ ಮುಷ್ಕರ ನಡೆಯುತಿತ್ತು. ಮಾಮಿ ಮಕ್ಕಳಿಗೆ ಟ್ಯೂಷನ್ಸ್ ಹೇಳಿಕೊಟ್ಟು ಅಲ್ಪ ಸ್ವಲ್ಪ ಸಂಪಾದಿಸುತ್ತಿದ್ದರು. ಶಾಲೆ/ಕಾಲೇಜಿಗೆ ಹೋಗುವ ಮಕ್ಕಳು. ಮನೆಯಲ್ಲಿ ಹಿರಿಯ ಜೀವ ಅವರ ತಾಯಿ . ಮತ್ತು ಬೆಂಗಳೂರು ಅಂದ್ರೆ ಖರ್ಚು ಏನು ಕಡಿಮೆಯೇ? ನಾವು ಶಾಪಿಂಗ್ ಅಂತ ಹೋಗುವಾಗ ಮಾಮಿ 'ಮಾಲವಿಕಳನ್ನು ಕರೆದುಕೊಂಡು ಹೋಗುವುದು ಬೇಡ. ಅವಳು ಇಲ್ಲೇ ಇರಲಿ' ಎಂದರು. ಮಾಲವಿಕ ಯಾರ ಜತೆನಾದ್ರು ಹೊಂದಿಕೊಂಡು ಹೋಗ್ತಿದ್ದಳು. ಹಾಗಾಗಿ ಅವಳನ್ನು ಬಿಟ್ಟು ನಿಹಾಳನ್ನು ಕರೆದುಕೊಂಡು  ಹೋದೆವು. ನಾವು ಪುನಃ: ಮನೆಗೆ ತಲುಪುವಾಗ ಸಂಜೆಯಾಗಿತ್ತು . ನಾವು ತಲುಪಿದ ಕೂಡಲೇ ಮಾಲವಿಕ ಅವಳ ಕಾಲಿಗೆ ಮಾಮ ಕೊಡಿಸಿದ ಕಾಲ್ಗೆಜ್ಜೆ ತೋರಿಸಿದಳು. ಯಾವತ್ತೂ ಹಠ ಹಿಡಿಯದ ನಿಹಾರಿಕಾ ನನಗೂ ಗೆಜ್ಜೆ ಬೇಕೆಂದು ರಂಪ ಮಾಡಿದಳು. ಮಾಮ ಅವಳನ್ನು ಕರೆದುಕೊಂಡು ಹೊರಟರು. ನನಗೋ ಮುಜುಗರ. ಪಾಪ ಮೊದಲೇ ಆರ್ಥಿಕ ಸಂಕಷ್ಟ . ಅಂತದ್ದರಲ್ಲಿ ಮಾಳವಿಕಾ ಮಾತ್ರವಲ್ಲ ಈಗ ನಿಹಾಳಿಗೂ ಗೆಜ್ಜೆ ಅಂದರೆ??!! ಪಾಪ ಸಾಲ ಮಾಡಿ ಕೊಂಡಿರಬೇಕು ಅಂತ. ನೋಡ ನೋಡುತ್ತಿದ್ದಂತೆ ನಿಹಾ ಳಿಗೂ ಕೂಡ ಕಾಲಿಗೆ ಗೆಜ್ಜೆ. 
ನಾನು ಮಾತ್ರ ಮನಸ್ಸು ತುಂಬಿ ಪ್ರಾರ್ಥನೆ ಮಾಡಿದೆ, 'ಬೇಗನೆ ಅವರ ಸಂಕಷ್ಟಗಳೆಲ್ಲ ಕೊನೆಗೊಳ್ಳಲಿ 'ಎಂದು. ಇದ್ದವರು ಕೊಡುವುದು ಬೇರೆ, ಸಂಕಷ್ಟದಲ್ಲಿದ್ದಾಗ ಅನ್ಯರಿಗೆ ಸಹಾಯ ಮಾಡುವವರೇ ದೊಡ್ಡವರು ನನ್ನ ಪ್ರಕಾರ. ಈಗ ಅವರ ಇಬ್ಬರು ಮಕ್ಕಳು ಹಾಗೆ ತುಂಬಾ ಒಳ್ಳೆಯವರು. ಯಾರಿಗಾದರೂ ಸಹಾಯ ಮಾಡಲು ಎತ್ತಿದ ಕೈ.
ಮೊನ್ನೆ ನನ್ನ ಇತ್ತೀಚಿಗಿನ ಬ್ಲಾಗ್ ಪೋಸ್ಟ್ ''ಭಯ' ನನ್ನ ಬ್ಲಾಗ್ ಅನ್ನು ಪರಿಚಯಿಸುವಾಗ ಕನ್ನಡಪ್ರಭ ದ  ಸಹ್ಯಾದ್ರಿ ನಾಗರಾಜ ಅವರು ಹಾಕಿದ್ದಾರೆ. ಇಲ್ಲಿದೆ ಅದ್ರ ಜೆಪೆಗ್ :-) ಅವರಿಗೊಂದು ಥ್ಯಾಂಕ್ಸ್




July 4, 2016

Biscoot Factory cakes




 biggest cake from Biscoot factory till date a whopping 7 kg cake for wedding



 this here is a cup cake for hibiscus grower

 cookies and chocolate gift hamper for Deepavali


 Place your order now 9902825368

Like it on Face Book at the following link

Biscoot Factory

June 30, 2016

ಭಯ

ಆತನಿಗೆ ಹಾವೆಂದರೆ ಸಿಕ್ಕಾಪಟ್ಟೆ ಭಯ. ಹಾಗಾಗಿ ಅವನ ಊರಲ್ಲಿ ೧೦೬ ನೇ ಮಹಡಿಯ ಕಟ್ಟಡದಲ್ಲಿ ೧೦೬ ನೇ ಮಹಡಿಯಲ್ಲಿ ಮನೆ ಕೊಂಡುಕೊಂಡ. ಅಷ್ಟು ದೊಡ್ಡ ಕಟ್ಟಡಕ್ಕೆ ಹಾವು ಬರುವ ಹೆದರಿಕೆ ಅವನಿಗೆ ಲವಲೇಶವೂ ಇರಲಿಲ್ಲ, ಹಾಗಾಗಿ ಅವನು ಆ ರಾತ್ರಿ ತುಂಬಾ ಚೆನ್ನಾಗಿ ನಿದ್ದೆ ಮಾಡಿದ. ಮಾರನೇ ದಿನ ಬೆಳಿಗ್ಗೆ ಬಾಗಿಲಿನ ಕರೆಗಂಟೆಯ ಸದ್ದಾದಾಗ ಅವನಿಗೆ ಎಚ್ಚರ. ಅವನ ಪಕ್ಕದ ಫ್ಲ್ಯಾಟ್ ನಲ್ಲಿರುವ ಅಮ್ಮ ಮಗ ಕೂಡಿ  ಅವನಿಗೆ ಆ ಕಟ್ಟಡಕ್ಕೆ ಹಾಗೂ ಅವರ ನೆಕ್ಸ್ಟ್ ಡೋರ್ ನೈಬರ್ ಆಗಿದ್ದಕ್ಕೆ ಸ್ವಾಗತಿಸಲು ಬಂದು ಒಂದು ಚಂದದ  ಸಣ್ಣ ಸಣ್ಣ ನೇರಳೆ ಬಣ್ಣದ ಹೂಗಳ ಕುಂಡವನ್ನು ಕೊಟ್ಟು ಅವರು ಹೊರಟರು. ಅದನ್ನು ಬಾಲ್ಕನಿಯ ಕಟ್ಟೆಯ ಮೇಲಿಟ್ಟು ಎಷ್ಟು ಸುಂದರವಾಗಿ  ಫ್ಲ್ಯಾಟ್ ಗೆ ಕಳೆಯನ್ನು ಕೊಟ್ಟಿದೆ ಆ ಹೂ ಕುಂಡ ಅಂತ ಖುಷಿಯಾಗಿದ್ದ. 
ಮರುದಿನ ಬೆಳಿಗ್ಗೆ ಎದ್ದ ಕೂಡಲೇ ಅವನ ಕಣ್ಣು ಹೂಕುಂಡದ ಬಳಿ ಹೋಯಿತು. ಅಲ್ಲೇನೋ ವಿಲವಿಲನೆ ಅಲ್ಲಾಡುವ ಹುಳ ಕಾಣಿಸಿತು. ಹಾವು ಎಂದು ಆತನಿಗೆ ಹೃದಯ sthaMbana ಆಯ್ತು. 
ಎರಡು ದಿನದ ನಂತರ ಕೊಳೆತ ವಾಸನೆಗೆ ಪೊಲೀಸರು ಮನೆ ಬಾಗಿಲು ಒಡೆದು ಒಳ ಹೊಕ್ಕರು. ಪುಟ್ಟ ಗಿಡ ಬಿಸಿಲಿಗೆ ಒಣಗಿತ್ತು ಅದರಿಂದ ಕೆಲವು ಎರೆಹುಳಗಳು ಹರಿದಾಡ್ತಿದ್ದವು. ಆ ಮನುಷ್ಯ ಅವನ್ನೇ ಹಾವು ಎಂದು ತಿಳಿದು ಹೆದರಿ ಮೃತ ಪಟ್ಟಿದ್ದ. 
ನನ್ನ ಅಜ್ಜ ನಾನು ಚಿಕ್ಕವಳಿದ್ದಾಗ ಒಂದು ಕತೆ ಹೇಳಿದ್ದರು. ಒಬ್ಬನ ಮಗನ  ಕುಂಡಲಿಯಲ್ಲಿ ಹಾವಿನ ಕಡಿತದಿಂದ ಸಾವು ಎಂದು ಬರೆದಿತ್ತು. ಹಾಗಾಗಿ ಅವನ ತಂದೆ  ಸಮುದ್ರದ ಮಧ್ಯೆ ಒಂದು ಕಂಬ ಕಟ್ಟಿ ಆ ಕಂಬದ ಮೇಲೆ ಮನೆಯೊಂದನ್ನು ಮಾಡಿ ಮಗನನ್ನು ಅಲಿಟ್ಟನಂತೆ . ಆಳು ಕಾಳು  ಸೇವಕರಿಂದ ಜೀವನ ಏನು ಸಮಸ್ಯೆ ಇಲ್ಲದೆ ನಡೆಯುತ್ತಿತ್ತು. ಮಗನಿಗೆ ೧೮ ವರ್ಷ  ಆದಾಗ ತಂದೆ ಅಂದುಕೊಂಡನಂತೆ "ಈ ಕುಂಡಲಿ ಎಲ್ಲ ಸುಳ್ಳು ' ಅಷ್ಟು ಉದ್ದದ ಕಂಬದ ಮೇಲಿನ ಮನೆಗೆ ಹಾವು ಹೇಗೆ ಹೋಗುತ್ತೆ' ಅಂತ,
ಮಗ ಒಂದು ಸಲ ಸಮುದ್ರದ ಕಡೆಗೆ ನೋಡುತ್ತಿದ್ದ ಹಾಗೆ ಒಂದು ಚೆಂದದ  ನಿಂಬೆ ಹಣ್ಣು ನೀರೊಳಗೆ ತೇಲಿ ಹೋಗುತ್ತಾ ಇತ್ತಂತೆ. ಆ ಹುಡುಗ ಆಳುಗಳನ್ನು ಕಳುಹಿಸಿ ಅದನ್ನು ತನ್ನ ಕೊಠಡಿ ಗೆ ತರಿಸಿದನಂತೆ. ರಸಭರಿತ ನಿಂಬೆ ಹಣ್ಣನ್ನು ಚಾಕುವಿನಿಂದ ಕೊಯ್ದಾಗ ಅದರಲ್ಲಿನ ಹಾವು ಹೊರಗೆ ಬಂದು ಆ ಹುಡುಗನ್ನ ಕಚ್ಚಿಬಿಟ್ಟಿತಂತೆ, ಈ ಕತೆ ನೆನಪಾಗಿ ಮೇಲಿನ ಕತೆ ಬರೆದಿದ್ದು. 
ಅಂದ ಹಾಗೆ ಒಂದು ಸಲ ಶ್ರೀಕಾಂತ ಕಸಿನ್ ಮನೆ ಗೋವಾದಲ್ಲಿನ ಅವರ  ಮನೆಗೆ, ಅದೂ  ಅವರು ಇದ್ದದ್ದು ಎಂಟನೇ ಮಹಡಿಯಲ್ಲಿ . ಅವರ ಬಾಲ್ಕನಿಯಲ್ಲಿ ಹಾವನ್ನು ಕಂಡು ಹೆದರಿದ್ದರು. ನನಗೆ ಫೋನ್ ಮಾಡಿದಾಗ ನಾನು ಡಿಟೆಕ್ಟಿವ್ ತರಹ ಎಲ್ಲ ಕೇಳಿಕೊಂಡು, ಅಂದರೆ ಮನೆಯಲ್ಲಿ ಏನೇನೆಲ್ಲ ನಡೆಯಿತು, ಆ ದಿನ ಮನೆಗೆ ಹೊರಗಿನಿಂದ ಏನು ತಂದಿದ್ದರು ವಗೈರೆ. 
ಆಗ ಗೊತ್ತಾದದ್ದು ಅದು ಮನೆಗೆ ತಂದು ಕೊಟ್ಟ ಕಣಿಲೆಯ ಪದರದಲ್ಲಿ ಅಡಗಿಕೊಂಡು ಬಂದಂತಹ   ಹಾವಿನ ಮರಿ... ವಿಷಕಾರಿ ಅಲ್ಲ ಅನ್ನುವುದೊಂದೇ ಸಮಾಧಾನ 
ಮೊನ್ನೆ   ಸ್ನೇಹಿತೆ ಸೂಸಿ ಫೋನ್  ಮಾಡಿದಾಗ, ನೀರಿನ ಹೂಜಿ  ತೆಗೆದಿದ್ದೆ ಕ್ಲಿನ್ ಮಾಡಲು ಅದರ ಕೆಳಗೆ ಸ್ವಲ್ಪ ಜಾಗ ಇತ್ತು . ಅದರಲ್ಲಿ ಹಾವೊಂದು ಸಿಂಬಿ ಸುತ್ತಿ   ಕುಳಿತಿತ್ತು. ಮಾಲತಿ ಇದ್ದರೆ  ಏನು ಮಾಡ್ತಿದ್ದಳು ಅಂತ ಆಲೋಚನೆ ಮಾಡಿ ಅದನ್ನು ಕಸಬರಿಕೆ ಮತ್ತು ರಟ್ಟಿನ ಸಹಾಯದಿಂದ   ನೀರಿನ ಕೊಳದಲ್ಲಿ ಬಿಟ್ಟರಂತೆ. ಸೂಸಿ ಇರೋದು ಚಾರ್ಮಾಡಿ ಬೆಟ್ಟದ ತಪ್ಪಲಿನಲ್ಲಿ, ದಡ್ಡ ಕಾಡಿನ ನಡುವೆ. ಹಾಗಾಗಿ ಅಲ್ಲಿ ಹಾವು ಸರ್ವೇ ಸಾಮಾನ್ಯ. 
ಸುಮ್ನೆ ಒಂದು ಲಹರಿ, ಆಗುವುದೆಲ್ಲ ಆಗೇ ಆಗುತ್ತೆ. ಸುಮ್ಮನೆ ಹೆದರಿಕೊಂಡು ಇರಬಾರದು.  
:-)

June 23, 2016

Anti climax- a kannada short story

'ಅಮ್ಮಾ ನಿನ್ನ ಆ ಜುಜುಬಿ ಕೆಲಸ ಬಿಟ್ಟು ಬಿಡು ನನ್ನ ಜತೆ ಯು ಎಸ ಗೆ ಬಾ ಅಂತ ಮಗಳ ಮಾತು ಕೇಳಿ ಸರಸಳಿಗೆ ಮೈ ಪರಚಿಕೊಳ್ಳುವಂತೆ ಆಯ್ತು. ಆಫಿಸಿಗೆ ಲೇಟ್ ಆಗುತ್ತೆ ಬೇಗ ದೋಸೆ ತಿನ್ನಲು ಬಾ ಅಂದಿದ್ದಕ್ಕೆ ಮಗಳು ವೇಣಿ ಹೀಗೆ ಮಾತಾಡಿದ್ದಳು. 

ಸರಸ ಮೌನ ತಾಳಿ ಆಫಿಸ್ ಗೆ ನಡೆದಳು. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಹಾಗೆ ಹಿಂದಿನ ನೆನಪುಗಳೆಲ್ಲ ಫ್ಲಾಶ್ ಬ್ಯಾಕ್ ನಲ್ಲಿ ಅವಳಿಗೆ ಗೋಚರಿಸಿತು. ಕಣ್ಣು ಮುಚ್ಚಿ ತಲೆಯನ್ನು ಕಿಟಕಿಗಾನಿಸಿದಳು. 

ಆಗಿನ ಕಾಲದ ಹಾಗೆ ಸರಸ್ಳಿಗೆ ಬೇಗ ನೆ ಮದುವೆ ಮಾಡಿದರು. ಆಕೆಯದ್ದು ಪಿ ಯು ಸಿ ಮುಗಿದಿದ್ದಷ್ಟೆ. ಅವಳ ಅಪ್ಪ ನಿಗೆ ಅವಳನ್ನು ಮುಂದಕ್ಕೆ ಓದಿಸುವ ಯೋಚನೆಯಿರಲಿಲ್ಲ. ಹಾಗೇ ಈ ನೆಂಟಸ್ತನ ಕೂಡಿ ಬಂತು. ಮದುವೆಯೂ ಆಯಿತು. ಸರಸ ಹಠವಿಡಿದು ಮನೆಕೆಲಸದೊಂದಿಗೆ ಓದನ್ನು ಮುಂದುವರೆಸಿ  ಸ್ನಾತಕೋತ್ತರ ಪದವಿಯನ್ನು ಪಡೆಯಲು ಯಶಸ್ವಿಯಾದಳು. ನರಹರಿ ಒಳ್ಳೆಯವನು. ಫ್ಯಾಕ್ಟರಿ ಒಂದರಲ್ಲಿ ಸೂಪರ್ವೈಸರ್ ಕೆಲಸ. ಸಂಬಳ ತಕ್ಕಮಟ್ಟಿಗಿತ್ತು. ಆದರೆ ಕಾಯಿಲೆಯ ಮನುಷ್ಯ. ಎರಡು ದಿನ ಕೆಲಸಕ್ಕೆ ಹೋದರೆ ನಾಲ್ಕು ದಿನ ಮನೆಯಲ್ಲಿ. ಹಾಗಾಗಿ ಹಿಂದೆ ಮುಂದೆ ಆಲೋಚಿಸದೆ ಸರಸ ಬ್ಯಾಂಕ್ ಒಂದರಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಯಶಸ್ವಿಯಾದಳು. ಮಗಳು ತ್ರಿವೇಣಿ ಹುಟ್ಟಿದ ನಾಲ್ಕು ವರ್ಷಕ್ಕೆ ನರಹರಿ ಕಾಲವಾದ . ಆಗ ಸರಸಳ ನೌಕರಿಯೇ ಅವಳಿಗೆ ಧೈರ್ಯ ತುಂಬಿದ್ದು. ಮಗಳು ಓದುವುದರಲ್ಲಿ ಅಷ್ಟು ಜಾಣೆಯಲ್ಲದಿದ್ದರೂ ಇಂಜಿನಿಯರಿಂಗ್  ಮಾಡಲೇ ಬೇಕೆಂದು ಹಠ ಹಿಡಿದಿದ್ದರಿಂದ ಬ್ಯಾಂಕ ನಲ್ಲಿ ಸಾಲ ಸೋಲ ಮಾಡಿ ಅವಳಿಗೆ ಓದಿಸಿದ್ದಳು. ಈಗ ಅವಳಿಗೆ ಹೆಸರಾಂತ ಐಟಿ ಕಂಪನೆಯೊಂದರಲ್ಲಿ ಕೆಲಸ. ಅದರ ನಿಮಿತ್ತ ಅವಳು ಯು ಎಸ ನಲ್ಲಿರೋದು. ಅಲ್ಲಿಯೇ ಅವಳ ಸಹ ಕೆಲಸಗಾರನೊಂದಿಗೆ ಮದುವೆ ಮಾಡಿಕೊಂಡಿದ್ದಾಳೆ. ಈಗ ಅವಳು ಚೊಚ್ಚಿಲ  ಗರ್ಭಿಣಿ. ಭಾರತದ ಕಛೇರಿಯಿಂದ ಕೆಲವೊಂದು ಡಾಕ್ಯೂಮೆಂಟ್ಸ್ ಗೆಂದು ಬಂದಿದ್ದವಳು ಈ ಮಾತು ಹೇಳಿದ್ದಾಳೆ. 

ದುಡಿಯುವ ಮಗಳು ಒಂದು  ದಿನ ಕೂಡ ಅಮ್ಮ ಪಡೆದ  ಲೋನ್ ನ ವಿಷಯದ ಬಗ್ಗೆ ಮಾತಾಡಿಲ್ಲ . ಈಗ ಅವಳು ಪ್ರೀತಿಯಿಂದೇನೂ ಅವಳ ಅಮ್ಮನನ್ನು ತನ್ನ ಜೊತೆ ಇರಕ್ಕೆ ಕರೆದಿಲ್ಲ ಎಂದು ಸರಸಳಿಗೆ ಗೊತ್ತು. ಅಲ್ಲಿ ಅವಳ ಬಾಣಂತನ ಮತ್ತು ಮಗುವನ್ನು ನೋಡಿಕೊಳ್ಳಲು ಅಷ್ಟೆ ಬಾ ಎಂದಿದ್ದಾಳೆ. 

ಸರಸ  ದುಡ್ಡಿನ ಸಂಕಷ್ಟದಿಂದ  ಹಲವಾರು ಸಲ ಚಿಕ್ಕ ಪುಟ್ಟ ಆಸೆಗಳನ್ನು ಕೈ ಬಿಟ್ಟಿದ್ದಾಳೆ, ಆದರೆ ಮಗಳಿಗೆ ಏನನ್ನು ಕಡಿಮೆಯಾಗದಂತೆ ಬೆಳೆಸಿದ್ದಾಳೆ,

ಸಂಜೆ ಬಂದ ಮೇಲೆ ಆಕೆ ವೇಣಿಯನ್ನು ತರಾಟೆಗೆ ತೆಗೆದುಕೊಂಡಳು. "ಏನೇ ನನ್ನ ಕೆಲಸ ಜುಜುಬಿಯಾ? ನಿನ್ನ ಓದಿಗೆ, ನಂತರದ ಕೆಲಸಕ್ಕೆ ಈ ಜುಜುಬಿ  ಕೆಲಸದ ಸಂಬಳದಿಂದಲೇ ಸಾಧ್ಯವಾಗಿದ್ದು. ನಾನು ಯು ಎಸ ಗೆ ನಿನ್ನ ಸೇವೆ ಮಾಡಲು ಬರಲ್ಲ. ಬೇಕಾದರೆ ನಿನ್ನ ಗಂಡ ನ ಕಡೆಯವರನ್ನು ಕರೆ'
ಏನಂದಿ? ನನ್ನ ಗಂಡನ ಕಡೆಯವರಾ? ಅವರನ್ನು ಏನೆಂದು ಕೊಂಡಿದ್ದೀಯಾ ?ಅವರು ದೊಡ್ಡ ಜನ . ಅವರೆಲ್ಲ ಹಾಗೆಲ್ಲಾ ಬರಲ್ಲ. 
"ಮತ್ತು  ನಾನೇನೂ ಇಲ್ಲಿ ಬಿಟ್ಟ್ಟಿ ಕೂತಿದ್ದಿನಾ?? ಲೋನ್ ತೆಗೆಂಡಿದ್ದು ಏನು ಮಾಡೋದು? ನೀನು ಒಂದಿನನಾದ್ರೂ  ಅಮ್ಮ ಉಳಿದ ದುಡ್ಡು ಕಟ್ಟುತ್ತೀನಿ ಅಂದ್ಯಾ? ಹೋಗಲಿ ಬಿಡು ಕೆಲಸ ಬಿಟ್ರೆ ಕಾಯಂ ಆಗಿ ನನ್ನನ್ನು ಯು ಎಸ ನಲ್ಲಿಟ್ಟು ಕೋತಿಯಾ? 
ಅದಕ್ಕೆ ವೇಣಿ ಏನೂ ಉತರಿಸಲಿಲ್ಲ . ಅದರ ಬದಲು 'ನೀನು ನನಗೆ ಈಗ ಸಹಾಯ ಮಾಡದಿದ್ದರೆ ಇನ್ನೆಂದೂ ನಿನ್ನ ಮುಖ ನೋಡಲ್ಲ' ಅಂತ ಸಿಟ್ಟಿನಿಂದ ಅಬ್ಬರಿಸಿದಳು 
ಅದಕ್ಕೆ ಸರಸ 'ಹೋಗ್ , ಹೋಗೆ ನಿನ್ನನ್ನು ನಂಬಿ ಜೀವನ ಮಾಡಿದ್ರೆ ಅಷ್ಟೇ, ನನ್ನ ಕತೆ ಗೋವಿಂದ. ಇನ್ನು ಹತ್ತು ವರ್ಷ ಸರ್ವಿಸ್ ಇದೆ ನನಗೆ.   ನೀನು ನನ್ನ ಮುಖ ನೋಡೋದೇನೂ ಬೇಡ. ಆದ್ರೆ ನನ್ನ ನಂತರ ನನ್ನ ಆಸ್ತಿ ನಿನಗೆ ಒಂದು ಬಿಡಿಗಾಸು ಸಿಗಲ್ಲಾ. ಎಲ್ಲ ಅನಾಥಾಶ್ರಮಕ್ಕೆ ಬರೆದು ಕೊಡುತ್ತೇನೆ. ಅಹಂಕಾರ ನಿನಗೆ ಮಾತ್ರ ಕಟ್ಟಿಟ್ಟ ಬುತ್ತಿಯಲ್ಲ. ನನ್ನ ಮುಂದಿನ ಜೀವನ ನಾನು ಆರಾಮಾಗಿ ನಡೆಸುತ್ತೇನೆ. ನಿನಗೊಂದು ದೊಡ್ಡ ನಮಸ್ಕಾರ 'ಎಂದು ಮಾತು ಮುಗಿಸಿ, ತನ್ನ ಸಂಜೆಯ ವಾಕ್ ಗೆ ಹೊರಟು ಹೋದಳು 
:-) 


June 20, 2016

In God's own country - a place to relax

Last week Niha was called to assist in a photoshoot of a new holidayhome/resort. At the last minute Niha asked if i wanted to accompany her and i accepted.  Armed with a suspense thriller and quickly bundling some clothes and snacks in a bag , we caught the Kerala Transport bus at three from Kengeri Satellite town to Sulthan Battheri, waynad district, Kerala. With just short stop at Mysore and another one at Gundlupet for evening tea we reached Sulthan battheri at 8.30 pm in the night.
The manager of the resort was waiting to pick us up. There was a slight drizzle and it was cool. But the way to the resort was dark.







A quick look around the rooms and hot yummy dinner and we were off to retire for the day.the mattress was comfortable and the quilt warm.   Morning i woke to the twittering of innumerable birds.


After freshening up Niha went to assist her friend in making the arrangements for Photoshoot and i took a quiet walk by myself. The roads were full of ups and downs and surrounded by lush greenery and to my utter delight i found there were many households in the surrounding area. the road to resort was dark because of the powercut and also due to the thick cover of greenery. Not long into my walk and  i realised were situated just few minutes away from the bus stand and further away was the market. On the way met a fish seller and milk man on moped with loud hrns. they stand in a corner and blow on their horn ( both the horns had different sounds for the people to identify between the fish and milk seller) and people in the vicinity run with their vessels for fish or milk. :-)
 clean country road with not much traffic is ideal for family outings on bicycles


After a yummy breakfast of puttu and kadala curry and When Niha was busy with her work i spent quiet time with my book and FaceBook 🙂
at night the place is good to have barbecues and campfire, there is ample space for games and parking your vehicles.
If you want a break from Bangalore and wish to visit some place nearby and if you would like to read/ write something this is the place to be.
Morning walks are the pleasantest. You can see deers roaming freely and i spied more than 10 varieties of birds (they were hard to capture on my cell phone) and a strange snake with a head on both the ends 🙂




The people looking after the place, be it Sandhya who mans the front office or tangamma who dishes out tasty kerala delicacies and mujeeb and babu, the Manager Ajeesh are all friendly, smiling  and approachable.
They have different tour packages for the guests and once their website is up and running i will link it up to this note.
In the meantime you can contact  Ajeesh's at:
Three roots
+91 9947697651
+91 9946 225455
Email: threerootsstay@gmail.com

So what are you doing this weekend???!!
:-)