February 24, 2013

ಅರ್ಧ ಕೇಳಿದ ಸಂಭಾಷಣೆಗೊಂದು ಸುಖಾಂತ್ಯ

"A walk in the garden is refreshing and sometimes depressing
ಇವತ್ತು ವಾಕ್ ಮುಗಿಸಿ ಕೂತಿದ್ದೆ. ನನ್ನ ಪಕ್ಕದ ಸೀಟ್ ನಲ್ಲಿ ಕೆಲವು ಹಿರಿಯರು ಕೂತಿದ್ದರು. ಕತ್ತಲೆಯಾಗ್ತಾ ಒಬ್ಬೊಬ್ಬರೆ ಜಾಗ ಖಾಲಿ ಮಾಡಿ ಹೊರಟ್ರು. ಕೊನೆಗೆ ಇಬ್ರು ಮಾತ್ರ ಉಳಿದರು. ಅವರಲೊಬ್ಬರು , 'ಹಾಂ, ಇನ್ನು ಕತ್ತಲಾಯ್ತು ನಾ ಕೂಡ ಮನೆಗೆ ಹೊರಟೆ, ಬನ್ನಿ ಹೊರಡುವ' ಅಂದ್ರು. ಅದಕ್ಕೆ ಆ ಹಿರಿಯ ವ್ಯಕ್ತಿ, 'ಇಲ್ಲ ನಾ ಮನೆಗೆ ಹೋಗಲಿಕ್ಕೆ ಇನ್ನೂ ಅರ್ಧ ಗಂಟೆ ಇದೆ. ಸೊಸೆ ನನಗೆ 7.30 ಗೆ ಮುಂಚೆ ಮನೆಗೆ ಬರಬಾರದೆಂದು ವಾರ್ನಿಂಗ್ ಕೊಟ್ಟಿದಾಳೆ' ಅಂದಾಗ ಒಂತರಹ ಆಯ್ತು ಕೇಳಿ"......
ಮೇಲೆ ನಮೂದಿಸಿದ್ದು ನನ್ನ ಫೇಸ್ ಬುಕ್ ಸ್ಟೇಟಸ್. ಅದಕ್ಕೆ ಒಂದಷ್ಟು ಸ್ಯಾಡ್ ಫೇಸ್ ಐಕನ್ ಕಮೆಂಟ್ ಮೂಲಕ. ಅವಧಿ ಮ್ಯಾಗ್ ನ ಜಿ.ಎನ್. ಮೋಹನ್ ಅವರು ಈ ಸ್ಟೇಟಸ್ ಅನ್ನು ಅವಧಿಯಲ್ಲಿ ಹಾಕಿಕೊಂಡಿದ್ದಾರೆ. ಅವರೆಲ್ಲರಿಗೂ ಬೇಜಾರಾಗಿದ್ದು ನನಗೆ ಕರುಳು ಚುರುಕ್ಕೆಂದಿತು. ಅದಕ್ಕೆ ಆ ಸಂಭಾಷಣೆಗೆ ನನ್ನದೇ ಆದ ಸುಖಾಂತ್ಯ ತೋರಿಸುವ ಪ್ರಯತ್ನ. ನಿಜವಾಗಿ ಅಲ್ಲಿ ಏನೇ ನಡೆಯಲಿ. ನಾವು ಪೊಸಿಟಿವ್ ಆಗಿ ವಿಚಾರ ಮಾಡಬಹುದಲ್ಲವಾ?
continued.....
'ಏನು ಕಾಲ ಬಂತಪ್ಪ? ನಮಗಿಂತ ಕಿರಿಯರಿಂದ ಇಂತಹುದ್ದೆಲ್ಲ ಕೇಳಬೇಕಾಗಿದೆ'
"ಛೆ ಛೆ ಅಂತಾದ್ದೇನೂ ಆಗಿಲ್ಲ. ನನ್ನ ಮಗನಿಗಿಂತ ನನ್ನ ಸೊಸೆಗೆ ನನ್ನ ಬಗ್ಗೆ ಹೆಚ್ಚಿನ ಕಾಳಜಿ. ಅವಳ ತಂದೆ ವೈದ್ಯರು. ಹಿಂದಿನ ತಿಂಗಳ ನನ್ನ ಆರೋಗ್ಯ ತಪಾಸಣೆಯಾದಾಗ ನನ್ನ ಮೈಯಲ್ಲಿ ವಿಟಮಿನ್ ಡಿ ಯ ಕೊರತೆ ಕಂಡು ಬಂದಿದೆ. 
ನನ್ನ ಮಗ ಚಿಕ್ಕವನಿರುವಾಗಲೇ ನನ್ನ ಹೆಂಡತಿ ತೀರಿಕೊಂಡಳು. ನಾನೊಬ್ಬನೇ ಅವನ ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಂಡೆ. ಅವನು ಎಷ್ಟು ಬೇಕು ಅಷ್ಟು ಓದಲು ಅನುವು ಮಾಡಿಕೊಟ್ಟೆ. ಕೊನೆಗೆ ಒಳ್ಳೆಯ ಕೆಲಸ ಸಿಕ್ಕಿ, ಅವನ ಕಛೇರಿಯಲ್ಲಿರುವ ಹುಡುಗಿಯನ್ನೇ ಮದುವೆಯಾದನು. ನನಗೆ ಸ್ವಲ್ಪ ಅಳುಕೇನೋ ಇತ್ತು. ಮತ್ತು ನಾನು ಅವರಿಬ್ಬರಿಗೆ 'ನೀವು ಬೇರೆ ಮನೆ ಮಾಡಿ ಇರಿ ಅಂತೆ ಸಲಹೆ ನೀಡಿದೆ. ಅದಕ್ಕೆ ಸೊಸೆ ನೆ ಮೊದಲಾಗಿ 'ಛೆ ಏನಂತ ಮಾತಾಡ್ತೀರಿ ಅಪ್ಪ' (ನನಗೆ ಮಾವ ಅಂತ ಕರೀದೆ, ಅಪ್ಪ ಅಂತಲೇ ಸಂಭೋದಿಸುವುದು ಅವಳು.)ನನ್ನ ಅಪ್ಪ ಬೇರೆ ನೀವು ಬೇರೆ ಅಂತ ನಾನು ಯಾವತ್ತು ತಿಳಕೊಂಡಿಲ್ಲ. ಎಲ್ಲರೂ ಒಟ್ಟಿಗೆ ಇರುವ ಬೇರೆ ಮನೆ ಗಿನೆ ಬೇಡ." ದೊಡ್ಡ ಮನೆ ಖರೀದಿಸಿ ನಾವು ಒಟ್ಟಿಗೆ ಇರ್ತೇವೆ.
ಇಬ್ಬರೂ ಕೆಲಸಕ್ಕೆ ಹೋಗ್ತಾರೆ. ಬೆಳಿಗ್ಗೆ 8 ಮನೆ ಬಿಟ್ಟರೆ ಸೊಸೆ 6.30 ಗೆಲ್ಲ ಮನೆಗೆ ಬಂದು ಅಡಿಗೆ ಗಿಡಿಗೆ ಮಾಡ್ತಾಳೆ. ಉಳಿದ ಕೆಲಸಕ್ಕೆ ಜನ ಇದ್ದಾರೆ. ಮಧ್ಯಾಹ್ನ ಬಿಸಿ ಬಿಸಿ ಚಪಾತಿ ಮಾಡಿಕೊಡಲು ಓರ್ವ ಮಹಿಳೆ ಬಂದು ಹೋಗುತ್ತಾಳೆ. ಈಗ ಮೊಮ್ಮಗ ಶಾಲೆಯಿಂದ ಮಧ್ಯಾಹ್ನವೆ ಬಂದು ಬಿಡುತ್ತಾನೆ. ಮಹಾ ತಂಟೆ ಖೋರ. ನನಗೆ ತೊಂದರೆಯಾಗುತ್ತೇನೋ ಅಂತ ಅವನಿಗೆ ಮನೆ ಬಳಿಯ creche ನಲ್ಲಿ ಹಾಕುತ್ತೇನೆ ಅಂದಾಗ ನಾನೇ ಬೇಡ ಅಂದೆ. ನಮ್ಮ ಮನೆಯೇನೋ ದೊಡ್ಡದಿದೆ ಆದರೆ ಅಕ್ಕ ಪಕ್ಕದ ಮನೆಗಳ ಹಾವಳಿಯಿಂದ ಗಾಳಿ ಬೆಳಕಿಗೆ ಸ್ವಲ್ಪ ಕೊರತೆ. ಅದಕ್ಕೆ ನನ್ನ ಸೊಸೆಯಿಂದ ನನಗೆ ಕಡ್ಡಾಯ ವಾಕಿಂಗ್." ಸ್ವಲ್ಪ ಹೊತ್ತು ಮೊಮ್ಮಗನ ಹಾವಳಿಯಿಂದ ಮುಕ್ತಿ, ವಾಕ್ ಮಾಡ್ತೀರಾ ಬಿಡ್ತೀರಾ ಅದು ನಿಮಗೆ ಬಿಟ್ಟಿದ್ದು, ಆದರೆ ಸ್ವಲ್ಪನಾದರೂ ತಾಜ ಗಾಳಿಗೆ ಇದ್ದು ಬನ್ನಿ "ಅಂತ ಅವಳು ಹೇಳೋದು. ಇವತ್ತು ನನ್ನ ಹುಟ್ಟು ಹಬ್ಬ. ಏನೋ ಸರ್ಪ್ರೈಸ್ ಇದೆ. ಅದಕ್ಕೆ 7.30 ನಂತರ ನನಗೆ ಬರಲು ಹೇಳಿದ್ದಾಳೆ ಎಂದು ಗಹಗಹಿಸಿ ನಕ್ಕರು ಆ ಹಿರಿಯರು
ಸರ್ಪ್ರೈಸ್ ಏನಂತ ನಿಮಗೆ ಬೇಕಾದನ್ನು ಊಹಿಸಿ.
:-)

February 23, 2013

ಚಿತ್ರಸಂತೆ 2013

ಕೇವಲ ಒಂದು ತಿಂಗಳಷ್ಟು ವಿಳಂಬ. ಅದೇಕೆಂದರೆ ಕ್ಯಾಮರಾದಿಂದ ಚಿತ್ರಗಳನ್ನು ಇನ್ನೊಂದು ಲ್ಯಾಪ್ ಟಾಪ್ ನಲ್ಲಿ ಸೇವ್ ಆಗಿದೆ. ಚಿಕ್ಕ laptop ಅದು. ಆದ್ದರಿಂದ ಇಬ್ಬರೂ ಹುಡುಗಿಯರಿಂದ ಅದಕ್ಕೆ ಡಿಮ್ಯಾಂಡ್ ಹೆಚ್ಚು. ಪ್ರಾಜೆಕ್ಟ್ ವರ್ಕ್ ಅದೂ ಇದೂ ಅಂತ. ನಿನ್ನೆ ಇವತ್ತು ಎರಡು ದಿನ ಇಬ್ಬರಿಗೂ ರಜೆ ಹಾಗಾಗಿ ಇವತ್ತು ನನ್ನ ಕೈಗೆ ಸಿಕ್ಕಿದೆ ಅದು. 
ಚಿತ್ರಸಂತೆಯ ಹಿಂದಿನ ರಾತ್ರಿ ನನ್ನ ಫೇಸ್ ಬುಕ್ ಮಿತ್ರ ರವೀಂದ್ರ ಮಾವಖಂಡ ಅವರು , ಭಾರತೀಯ ವಿದ್ಯಾ ಭವನದಲ್ಲಿ ನಡೆಯುವ ಪಂಡಿತ್ ಗಣಪತಿ ಭಟ್ ಹಾಸಣಗಿ ಅವರ ಸಂಗೀತ ಕಾರ್ಯಕ್ರಮದ ಬಗ್ಗೆ ತಿಳಿಸಿದ್ದರು. ಅದರ ಬಗ್ಗೆ ಮೈಲ್ ಕೂಡ ಮಾಡಿದ್ದರು ಅವರು, ಆದರೆ ನಾನು ಮರೆತಿದ್ದೆ. ಅವರು ನೆನಪಿಸಿದ್ದು ಒಳ್ಳೆಯದಾಯ್ತು ಹಾಗಾಗಿ ಬೆಳಿಗ್ಗೆ ನನ್ನ ನಿಹಾನ ಸವಾರಿ ಅಲ್ಲಿಗೆ. ನಿಹಾರಿಕಾ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ವಿಧ್ಯಾರ್ಥಿನಿ. ಬಸವೇಶ್ವರನಗರದ ಶುಭಾ ಧನಂಜಯ್ ಅವರ 'ಕರಣಂ' ನಲ್ಲಿ. ಅವಳ ಸಂಗೀತ ಗುರುಗಳು ಶ್ರೀಮತಿ ಸರೀತಾ ಕಟ್ಟಿ. ಹಾಗಾಗಿ ನಾವು ಸಂಗೀತ ಕಾರ್ಯಕ್ರಮಗಳನ್ನು ಮಿಸ್ ಮಾಡಿಕೊಳ್ಳುವುದು ಕಡಿಮೆ. ಅದೂ ಮುಂಜಾನೆ ಸಂಗೀತ ಕಾರ್ಯಕ್ರಮ ಕೇಳುವುದಕ್ಕಿಂತ ಆಹ್ಲಾದಕರವಾದದ್ದೂ ಎನೂ ಇಲ್ಲ. ಬೆಳ್ಳಿಗೆ ಎದ್ದು ತಿಂಡಿ ಅಡುಗೆ ಎಲ್ಲ ಮಾಡಿ, ಅವರೆಲ್ಲ್ಲ ಬ್ರೇಕ್ ಫಾಸ್ಟ್ -ಮಸಾಲೆ ದೋಸೆ - ಮಾಡ್ತಿರಬೇಕಾದ್ರೆ ನಾನು ರೆಡಿ ಯಾದೆ . ಬಂದ ಮೇಲೆ ತಿಂಡಿ ತಿಂದರಾಯಿತೆಂದು.
ಚೆನ್ನಾಗಿತ್ತು ಕಾರ್ಯಕ್ರಮ. ಬೆಳಿಗ್ಗೆ ಬೆಳಿಗ್ಗೆ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ತಲೆ ಕೆರೆದುಕೊಳ್ಳುತ್ತ, ಆಕಳಿಸುತ್ತ ಅವರು ಕಾರ್ಯಕ್ರಮವನ್ನು ಅಸ್ವಾದಿಸುತ್ತಿದ್ದರು. ಕಾರ್ಯಕ್ರಮದ ನಂತರ ರವೀಂದ್ರ ಅವರನ್ನು ಭೆಟ್ಟಿ ಮಾಡಿದೆ. ಪರಿಚಯ ಆಗಿ ಸುಮಾರು ಸಮಯ ಆಗಿದ್ದರೂ ಭೆಟ್ಟಿಯಾಗಿದ್ದು ಮೊದಲ ಸಲ. ಹಾಯ್ ಹಲ್ಲೋ ಅಂತ ಮಾತಾಡಿ ನಾವು ಹೊರಗೆ ಬಂದೆವು, ಅವರಿಗೂ ಕಛೇರಿಗೆ ಹೋಗಲಿಕ್ಕಿತ್ತು.
ನಾವು ಅಲ್ಲಿಂದ ಆಕೃತಿಗೆ ಬಂದೆವು ಅಲ್ಲಿ ಪ್ರತಿಭಾ ನಂದಕುಮಾರ್ ಅವರ ಪುಸ್ತಕ 'ಅನುದಿನದ ಅಂತರಗಂಗೆ' ಬಗ್ಗೆ ಸಂವಾದ ಕಾರ್ಯಕ್ರಮ ಇತ್ತು. ನಾವು ತಲುಪುವ ಮುಂಚೆನೇ ಶ್ರೀಕಾಂತರಿಂದ ಎಸ್ ಎಮ್ ಎಸ್ ಬಂತು' come home soon, lets us visit  the chitrasante, my friends daughter is exhibiting her works' ಅಂತ. ನಾನು ಓಕೆ ಅಂತ ಕಳಿಸಿದೆ. ನಾವು ಆಕೃತಿ ತಲುಪಿದಾಗ  ಪ್ರತಿಭಾ ಮತ್ತು ವಿಜಯಮ್ಮ ಆಗಲೇ ಬಂದಿದ್ದರು.
ಅನುದಿನದ ಅಂತರಗಂಗೆ ಎರಡನೇ ಆವೃತಿ ಬಿಡುಗಡೆ

ನಾನು, ನಿಹಾ, ಜಯಲಕ್ಷ್ಮಿ ಪಾಟೀಲ  ರನ್ನು ನೋಡಬಹುದು

ನಿಹಾರಿಕ 'ನಮ್ಮ ಮಾನಸ' ಪತ್ರಿಕೆಯ ಎಡಿಟೋರಿಯಲ್ ಟೀಮ್ ನಲ್ಲಿದ್ದುದರಿಂದ ಅವಳಿಗೆ ವಿಜಯಮ್ಮ ಮೊದಲೆ ಪರಿಚಯ. ಅವಳು ಅವರನ್ನು ನನ್ನನ್ನು ಪರಸ್ಪರ ಪರಿಚಯಿಸಿದಳು. ನಿಧಾನಕ್ಕೆ ಜನರು ಆಗಮಿಸಲಾರಂಭಿಸಿದರು. ಅಂಜಲಿ ರಾಮಣ್ಣ, ಜಯಲಕ್ಷ್ಮೀ ಪಾಟೀಲ್, ಉಷಾ ಕಟ್ಟೆಮನೆ ನನ್ನ ಅಂತ:ಪುರದ ಸಖೀಯರನ್ನು ಅಲ್ಲಿ ಕಂಡು ನನಗೆ ಆಶ್ಚರ್ಯದ ಜತೆ ಸಂತಸ, ಅವರು ಬರುವವರಿದ್ದಾರೆಂದು ಮೊದಲೇ ಗೊತ್ತಿದ್ದರೆ ಅವರಿಗೆಲ್ಲ ನನ್ನ ಮನೆಯಲ್ಲೇ ಲಂಚ್ ಎರೆಂಜ್ ಮಾಡ್ಬಹುದಿತ್ತು ಅಂತ ಹಳಹಳಿಸಿದೆ. 


ವಿಜಯಮ್ಮ ಪ್ರತಿಭಾ ಪರಸ್ಪರ ಹೊಗಳಿಕೆಯ ಮಾತನ್ನಾಡುತ್ತಿದ್ದರೆ ನಾನು ಅವರ ಚಂದದ ಸೀರೆ, ಅವರ ದೊಡ್ಡ ಬಿಂದಿ ಇದರಲ್ಲೇ ತಲ್ಲೀನಳಾಗಿದ್ದೆ. ಪ್ರತಿಭಾ ರ ಮಾತಿನಿಂದ ಅವರು ತುಂಬ ಒನೆಸ್ಟ್ (honest) ಮತ್ತು sensitive annistu. ಆತ್ಮಕತೆ/ಕಥೆ ಯೆಲ್ಲ 60 ವರ್ಷದ ಬಳಿಕ ಬರೀಬೇಕು ನನ್ನ ಪ್ರಕಾರ. ದಯಾನಂದ ಟಿ.ಕೆ ಕೂಡ ಏನೇನೋ ಮಾತಾಡಿದರಪ್ಪ. ನನಗೊಂದೂ ಅರ್ಥ ಆಗಲಿಲ್ಲ. ನಿಧಾನಕ್ಕೆ ಕನ್ನಡದಲ್ಲಿ ಮಾತನಾಡಿದ್ರೆ ಮಾತ್ರ ನನಗೆ ಅರ್ಥ ಆಗೋದು. ಅಷ್ಟರ ಮಧ್ಯೆ ನಾನು ಈಗಾಗಲೇ ಹಲವಾರು ಸಲ ಭೇಟ್ಟಿಯಾಗಿದ್ದ ನನ್ನ ಫೇಸ್ ಬುಕ್ ಪರಿಚಯದ ಕುಮಾರ್ ರೈತ ಫೋಟೊ ತೆಗೆಯುವಾಗ ನನ್ನ ಒಡೆದ ಕಾಲುಗಳು ಏನಾದರೂ ಕಂಡಾವೂ ಅಂತ ಮುಜುಗರ ಪಟ್ಟುಕಂಡು ನನ್ನ ಕಾಲನ್ನು ಸರಕ್ಕನೆ ಕುರ್ಚಿ ಕೆಳಗಡೆ ಅವಿತಿಟ್ಟೆ. :-)
ಅಂಜಲಿ ರಾಮಣ್ಣ ಅವರ ಮಾತು ಕಿವಿಯಲ್ಲಿ ಬೀಳಿತ್ತಿದ್ದರು ನಾನು ಅವರ ದನಿ ಅವರ ಹಾವಭಾವವನ್ನಷ್ಟೆ ಗಮನಿಸಿದ್ದು. ಯಾರಾದರೂ ಕಾರ್ಯಕ್ರಮದ ಬಗ್ಗೆ ವರದಿ ಹೇಗೂ ಒಪ್ಪಿಸುತ್ತಾರಲ್ಲವೇ, ಅದನ್ನೆ ನಿಧಾನಕ್ಕೆ ಓದಿದರಾಯ್ತು ಅಂದುಕೊಂಡೆ . ಒಂದು ಮಾತನಂತೂ ಅವರು ಸರಿಯಾಗೇ ಹೇಳಿದರು 'ಆತ್ಮಕತೆ' ಬಗ್ಗೆ ಸಂವಾದ ಮಾಡುವುದು ನನ್ನ ಪ್ರಕಾರ ಸರಿಯಿಲ್ಲ' ಅಂತ. ಅದು ನನಗೂ ಒಪ್ಪಿಗೆ.
ಜಯಲಕ್ಷ್ಮಿಯವರ ಸೀರೆ ಬ್ಲೌಸ್ ಕೂಡ ಸಕತ್ ಆಗಿತ್ತು. ಅವರನ್ನ compliment ಮಾಡಲು ಮರೆತುಬಿಟ್ಟೆ.
ಕಾರ್ಯಕ್ರಮ ಮುಗಿದ ತಕ್ಷಣ ಎಲ್ಲರಿಗೂ ಬೈ ಹೇಳಿ (ಕೆಲವು ಪುಸ್ತ್ಕಕಗಳು ಬೇಕಾಗಿದ್ದವು, ಆದರೆ ಬಿಲ್ಲಿಂಗ್ ಕೌಂಟರ್ ನಲ್ಲಿ ರಶ್ ಇತ್ತು. ಅದಲ್ಲದೇ ನಿಹಾರಿಕಾ ಗೆ 'ನಮ್ಮ ಮಾನಸ' ದ ಮೀಟಿಂಗ್ ಗೆ ಹೋಗ ಬೇಕಿತ್ತು
ಒಂದಂತು ನಿಜ.ಹೀಗೆ ಪುಸ್ತಕದ ಮಳಿಗೆಯಲ್ಲಿ ಸಂವಾದ ಕಾರ್ಯಕ್ರಮಗಳನ್ನು ಇಟ್ಟರೆ ಹಲವು ಮಂದಿ ಪುಸ್ತಕಗಳನ್ನು ಖರೀದಿಸುತ್ತಾರೆ. ಹಿಂದಿನ ಸಲ ನಾನು ನನ್ನ ಫ್ರೆಂಡ್ ಇಬ್ಬರದ್ದೇ ಖರೀದಿಯ ಬಿಲ್ಲ್ 1000ರೂ ಆಗಿತ್ತು. ಇನ್ನೂ ಹಲವರು ನಮ್ಮ ಹಿಂದೆ ಸರತಿ ಸಾಲಿನಲ್ಲಿದ್ದರು. good idea
ಸಧ್ಯ ಬೇಗ ರಿಕ್ಷಾ ಸಿಕ್ಕಿ, ನಾವು ಮನೆಗೆ ತಲುಪಿ ನೀಹಾ ಊಟ ಮಾಡಿ ರವೀಂದ್ರ ಕಲಾಕ್ಷೇತ್ರದ ಕಡೆ ಹೊರಟಳು. ನಮ್ಮ ರಾಯರು ಊಟ ಮಾಡಿ ಸಣ್ಣ ನಿದ್ರೆ ಹೊಡೆಯುವುದರಲ್ಲಿ ನಾನು ಬೆಳಿಗ್ಗಿನ ಗಡಿಬಿಡಿಯಲ್ಲಿ ಅಲ್ಲಲ್ಲೆ ಚೆಲ್ಲಿದ ಬಟ್ಟೆ ಪಾತ್ರೆ ಎಲ್ಲ ವಾಶ್ ಮಾಡಿ ಚಿತ್ರಸಂತೆಗೆ ಹೊರಡಲು ಅನುವಾದೆ.
ನಾಲ್ಕು ವರ್ಷದಿಂದ ಸತತವಾಗಿ ನಾವು ಚಿತ್ರ ಸಂತೆಗೆ ಹೋಗುತ್ತಿದ್ದೇವೆ. ಆದರೆ ಪ್ರಾಮಾಣಿಕವಾಗಿ ಹೇಳ್ತೇನೆ ಯಾಕೋ ಬೋರ್ ಆಗ್ತಾ ಇದೆ. ಇಷ್ಟ್ತು ವರ್ಷ ನಾನು-ನಿಹಾ-ಶ್ರೀಕಾಂತ ಬೆಳಿಗ್ಗೆ ಹೋಗ್ತ್ದಿದ್ದದ್ದು. ಅಷ್ಟು ರಶ್ ಇರಲ್ಲ.ಈ ಸಲ ನಿಹಾ ಇಲ್ಲದೇ ಏನೋ ಕಳಕೊಂಡ ಅನುಭವ. ನಾವು ತಲುಪುವಾಗ 3.30 ಅಬ್ಬಬ್ಬಾ ಅದೇನು ರಶ್. ನನಗಂತೂ ಒಳಗಡೆ ಹೋಗಕ್ಕೆ ಇಷ್ಟ ಇರಲಿಲ್ಲ. ನನಗೆ ಹೆದರಿಕೆ. ಮತ್ತು ಯಾರದಾದರು ಮೈಕೈ ತಾಗಿದರೆ ನನಗದು ಆಗೋದೆ ಇಲ್ಲ. 'ಬೇಡ ಶ್ರೀಕಾಂತ, ವಾಪಸ್ ಹೋಗುವ 'ಅಂದ್ರೆ ನನ್ನ ಕೈ ಗಟ್ಟಿ ಹಿಡಿದುಕೋ ಅಂದ್ರು. ಕೈ ಯೆನೋ ಹಿಡಿದೆ. ಆದರೆ ಅವರಿಗೆ ಫೋಟೊ ತೆಗಿಲಿಕ್ಕೆ ಕಷ್ಟ ಆಗ್ತಿತ್ತು. ಅದಕ್ಕ ನಾನು ಅವರ T-ಶರ್ಟ್ ಗಟ್ಟಿಯಾಗಿ ಹಿಡಿದುಕೊಂಡು ಅವರ ಫೇವರಿಟ್ t-ಶರ್ಟ್ ಈಗ ಒಂದು ಕಡೆ ಉದ್ದ ಸೊಟ್ಟಗಾಗಿ ಆ portion ಹಿಂಜಿದೆ:-) ಉತ್ತರಕನ್ನಡ ಜಿಲ್ಲೆಯಿಂದ ಒಂದು ದೊಡ್ಡ ಗುಂಪು ಬಂದಿತ್ತು ಅವರೆಲ್ಲ ಕೈ ಕೈ ಹಿಡಿದು ಚೈನ್ ಮಾಡಿಕೊಂಡು ಸಂತೆಯೊಳಗೆಲ್ಲ ಹೋಗಿದ್ದು ಮಜವಾಗಿತ್ತು.
ಈ ಸಲ ಚಿತ್ರಕ್ಕಿಂತ ಇತರೇ ಸಂಗತಿಗಳನ್ನು ಕ್ಯಾಮರಾದಲ್ಲಿ ಹಿಡಿದುಕೊಂಡಿದ್ದೇನೆ. ನೋಡಿ ಎಂಜಾಯ್ ಮಾಡಿ'






ಶಿವಾನಂದಾ ಸರ್ಕಲ್ ನಿಂದ ಒಳಗಡೆ ಹೋಗ್ತಾ

ಕಲರ್ ಲೆಸ್ cotton candy. ನಿಹಾ ಮಾಲು ಇದ್ರೆ ಕೊಂಡು ತಿನ್ನಬಹುದಿತ್ತು

ಮಾವಿನಕಾಯಿ, ಸೌತೆಕಾಯಿ take your pick

ಹೆಚ್ಚಿನ ಜನರನ್ನು ಆಕರ್ಷಿಸಿದ ಚಿತ್ರ

ನನ್ನ ಫೇವರಿಟ್

ಚಿತ್ರಕಲಾ ಪರಿಷತ್ ನ entrance

ಮುಖವಾಡ up-close

Ssssssssss Burning Artists


ಮುರಳಿ

ಬಿಸಿಬೇಳೆ ಬಾತ್, ಖಾರಾ ಬಾತ್, ಅಕ್ಕಿ ರೊಟ್ಟಿ, ಪಲಾವ್, ಜಾಮೂನು, ಹೋಳಿಗೆ, ಮಿರ್ಚಿ ಬೋಂಡ ಯಾವುದು ಬೇಕು?
ಹಾ ಮಿರ್ಚಿ ಬೋಂಡ ಕೊಡಿಸಿ ,ನಾ ಬೇಡ ಬೇಡ ಅಂದ್ರೂ ಫೋಟೊ ಕೂಡ ಹೊಡೆದರು ನಮ್ಮ ರಾಯರು
ಇನ್ನೂ ಕೆಲವು ಚಿತ್ರಗಳು ಎಲ್ಲಿಹೋದವು ಗೊತ್ತಾಗ್ತಾ ಇಲ್ಲ..:-)ಅವರ ಫ್ರೆಂಡ್ ಮಗಳಿಗೆ ಕೊಟ್ಟ ಸ್ಟಾಲ್ ಸಂಖ್ಯೆಯಲ್ಲಿ ಬೇರೆ ಯಾರೋ ಇದ್ದರು. ಆದ್ದರಿಂದ ಅವರ ಚಿತ್ರಗಳನ್ನು ವೀಕ್ಷಿಸಲು ಆಗಲೇ ಇಲ್ಲ. ಚಿತ್ರ ಸಂತೆಯಲ್ಲಿ ನನಗೆ ಇನ್ನೋರ್ವ ಅಂತ:ಪುರದ ಸ್ನೇಹಿತೆ ಸಂಧ್ಯಾರಾಣಿ ಸಿಕ್ಕಿದರು.
 so ಇಷ್ಟೆ. ನೀವೆಲ್ಲ ಇದನ್ನು ನೋಡ್ತಾ ಇರಿ ನಾನು ಅಕ್ಕ ಒಂದು ರೌಂಡ್ ಊರಿಗೆ ಹೋಗಿ ಬರ್ತೇವೆ...
:-)

February 12, 2013

ಮಜ್ಜಿಗೆ ಕಡಿ & ವಡಿ

ಹಿಂದಿನ ವಾರ ಮನೆಯಲ್ಲಿ ಕೋಲ್ಡ್, ಗಂಟಲು ನೋವು ಕೆಮ್ಮು ಅಂತ ನನ್ನ ಬಳಿ ಮಜ್ಜಿಗೆ stock ಸುಮಾರು ಉಳ್ಕೊಂಡಿತ್ತು ಫ್ರಿಜ್ ನಲ್ಲಿ. ಹೀಗೆ ಸುಮಾರು ದಿನ ಮಜ್ಜಿಗೆ ಸ್ಟಾಕ್ ಆದಾಗೆಲ್ಲ ಈ ಕಡಿ ಮಾಡುತ್ತೇನೆ. ನನ್ನ ಫೇವರಿಟ್ ಹಾಗೂ ಒಂದು ತುತ್ತು ಹೆಚ್ಚೇ ಊಟ ಒಳಸೇರುತ್ತೆ.
ಮಜ್ಜಿಗೆ (ಹುಳಿಯಾದಷ್ಟು ಹೆಚ್ಚು ರುಚಿ) 4ಗ್ಲಾಸ್, ಅರ್ಧ ಟೀ ಸ್ಪೂನ್ ಕಡಲೆ ಹಿಟ್ಟು ಹಾಕಿ ಗಂಟಾಗದಂತೆ ಮಿಶ್ರ ಮಾಡಿದಿ
ಎಣ್ಣೆಯಲ್ಲಿ ಜೀರಿಗೆ, ಸಾಸಿವೆ, ಕರಿಬೇವು, ಎರಡು ಬೆಳ್ಳುಳ್ಳಿ ಎಸಳು, ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ, ಒಂದು ಒಣಮೆಣಸಿನಕಾಯಿ, ಸ್ವಲ್ಪ ಅರಿಶಿನ ಪುಡಿ (ಲಭ್ಯವಿದ್ದಲ್ಲಿ ಎರಡು- ಮೂರು ಮೆಂತೆ ಎಲೆ ಅಥವ ಕಾಲು ಟಿಸ್ಪೂನ್ ಕಸೂರಿ ಮೇಥಿ) ಹಾಕಿ ಒಗ್ಗರಣೆ ತಯಾರು ಮಾಡಿಕೊಳ್ಳಿ. ಇದಕ್ಕೆ ಮಜ್ಜಿಗೆಯನ್ನು ಬೆರೆಸಿ. ಒಂದು ಕುದಿ ಬರೆಸಿ ಕೆಳಗಿಡಿ. ಕೊತ್ತಂಬರಿ ಸೊಪ್ಪು ಉದುರಿಸಿ
ವಡಿ:
usually ನಾನು ದೊಣ್ಣ ಮೆಣಸಿನಕಾಯಿ ಚಿಕ್ಕದಾಗಿ ಕತ್ತರಿಸಿ ಅದರ ಬೋಂಡಾ ಮಾಡಿ, ಕಡಿ ಬಡಿಸುವ ಮುನ್ನ ಅದನ್ನು ಕಡಿಯಲ್ಲಿ ಬೆರೆಸುವುದು.
ಈ ಸಲ ಸ್ವಲ್ಪ ಬೇರೆ ತರಹ ವಡಿ ಮಾಡಿದೆ

ಬೆಂಡೆಕಾಯಿ, ಹಸಿಮೆಣಸಿನಕಾಯಿ, ನೀರುಳ್ಳಿ, ದೊಣ್ಣಮೆಣಸು ಇವೆಲ್ಲವನ್ನು ಚಿಕ್ಕ ಚಿಕ್ಕದಾಗಿ ಕತ್ತರಿಸಿ ಉಪ್ಪು ಹಚ್ಚಿಟ್ಟೆ. ಸ್ವಲ್ಪ ಸಮಯಕ್ಎ ನೀರು ಬಿಟ್ಟಿತು. ಈ ನೀರಿಗೆ ಬೇಕಾದಷ್ಟೆ ಬೇಸನ/ಕಡಲೆಹಿಟ್ಟು ಬೆರೆಸಿ ಎಣ್ಣೆಯಲ್ಲಿ ಚಿಕ್ಕ ಚಿಕ್ಕ ಬೋಂಡ ಕರೆದಿಟ್ಟೆ. ಬೆಂಡೆಕಾಯಿಯಿಂದ ಬೋಂಡ ಕ್ರಿಸ್ಪ್ ಆಯ್ತು ಮತ್ತು ನೀರುಳ್ಳಿಯಿಂದ ಒಳ್ಳೆ ಪರಿಮಳ. ನಮ್ಮ ಮನೆಯಲ್ಲಿ ಎಲ್ಲರಿಗೂ ಇಷ್ಟ ಆಯ್ತು. ಇನ್ನು ನೀವು ಟ್ರೈ ಮಾಡಿ ನನಗೆ ಹೇಳಿ
ನಾನಂತು ಆಗಾಗ ಇದನ್ನು ಮಾಡ್ತಿರ್ತೀನಿ.
:-)

February 5, 2013

ಆ ಕಾಡುವ ಕಣ್ಣುಗಳು

BTM ಲೇಔಟ್ ಕಡೆ ಹೊರಟಿದ್ವಿ. ಬಸ್ ಸ್ಟಾಪ್ ನಲ್ಲಿ ಖಾಲಿಯಿದ್ದ ಬಸ್ ಸಿಕ್ತು. ಅಮ್ಮ ಮಗು ಕೂತಿದ್ದ ಸೀಟ್ ಪಕ್ಕದ ಸೀಟ್ ನಲ್ಲಿ ನಾನು ಕೂತೆ. ಗುಂಗರು ಕೂದಲಿನ ಮಗುವಿನ ಹಿಂಭಾಗ ಮಾತ್ರ ಕಾಣ್ತಾ ಇತ್ತು. ಬಸ್ಸ್ ಹೊರಟ ಸ್ವಲ್ಪ ಸಮಯಕ್ಕೆ ಮಗು ಅಮ್ಮನನ್ನು ತಟ್ಟಿತು. ಅಮ್ಮ ಸಿಪ್ಪಿ ಕಪ್ ನಿಂದ ಅದಕ್ಕೆ ನೀರು ಕುಡಿಸಿದಳು. ನಾನು ಕಿಟಕಿಯ ಹೊರಗಿನ ನೋಟದಲ್ಲಿ ಲೀನಳಾದೆ. ಯಾವಾಗ ಆ ಮಗು ತನ್ನ ಅಮ್ಮನ ಕಾಲಮೇಲಿಂದ ನಬ್ಬಿಬ್ಬರ ಮಧ್ಯ ಕೂತುಕೊಂಡಿತು ನನಗೆ ತಿಳಿಯಲಿಲ್ಲ.ಅಮ್ಮನ ಬಳಿ ಕಣ್ಣು ಹಾಯಿಸಿದ್ರೆ ಆಕೆ ಅನ್ಯಮನಸ್ಕಳಾಗಿ ತಲೆಯನ್ನು ಕಿಟಕಿಗೆ ಆನಿಸಿಕೊಂಡು ಸುಮ್ಮನೆ ಕೂತಿದ್ದಳು. ತಲೆನೋವೋ, motion sickness ಏನೂ ಅಂದುಕೊಂಡೆ. ನನ್ನ ಸೈಜ್ ಸ್ವಲ್ಪ ದೊಡ್ಡದೆ. ಆದ್ದರಿಂದ ಮಗು ಬೀಳದ ಹಾಗೆ ಬೆಚ್ಚಗೆ ನಮ್ಮಿಬ್ಬರ ಮಧ್ಯ ಕೂತಿತು. ನಾನೂ ನನ್ನದೇ ಆದ ಆಲೊಚನೆಗಳಲ್ಲಿ ಹುದುಗಿ ಹೋಗಿದ್ದೆ. ಮಗು ಮಿಸುಕಾಡಿ ತನ್ನ ಇರುವನ್ನು ಸಾರಿತು. ಪುನ: ಅಮ್ಮನನ್ನು ತಟ್ಟಲು, ಆಕೆ ಮಗುವನ್ನು ಕಾಲ ಮೇಲೆ ಕೂರಿಸಿಕೊಂಡು, ಕಾಲಬಳಿಯಿದ್ದ ಬ್ಯಾಗ್ ನಿಂದ ಡಬ್ಬಿ ತೆಗೆದು, ಸ್ಪೂನ್ ನಿಂದ ಊಟ ಮಾಡಿಸಲು ಶುರು ಮಾಡಿದಳು. ಆದರೆ ಆಕೆಯ ಮನಸ್ಸು ಅದರಲ್ಲಿರಲಿಲ್ಲ ಅಂತ ತಿಳಿಯಿತು. ಸ್ಪೂನ ಬಾಯಿಗೆ ಹೋಗುವುದಕ್ಕಿಂತ ಜಾಸ್ತಿ ಗಲ್ಲ ಗದ್ದದ ಕಡೆ ಹೋಗಿ ಮುಖ ಎಲ್ಲ ಎಂಜಲುಮಯ. ಎದುರುಬದುರು ಸೀಟ ಇತ್ತು ಆ ಬಸ್ ನಲ್ಲಿ. ಎದುರಿಗೆ ಕೂತ ಹುಡುಗಿ, ಆ ಅಮ್ಮನಿಂದ ಡಬ್ಬಿಯನ್ನು ಕಿತ್ತುಕೊಂಡು, 'ಚಿಕ್ಕಿ ಊಟ ಮಾಡಿಸ್ತಾಳೆ' ಅಂತ  ಮಗುವಿಗೆ ತನ್ನ ಬಳಿ ಕರೆದು, ಕಾಲ ಮೇಲೆ ಕೂರಿಸಿ, ಮುದ್ದುಗರೆಯುತ್ತ ಊಟ ಮಾಡಿಸಿದಳು. ಚಿಕ್ಕಿಗೆ ಚಂದದ ಮುಗುಳ್ನಗು ಇತ್ತು. ನಮ್ಮ ಕಣ್ಣುಗಳು ಸಂಧಿಸಿದಾಗಲೆಲ್ಲ ಅವಳು ಸಣ್ಣಗೆ ನಗುತ್ತಿದ್ದಳು. ಊಟ ಮಾಡಿ, ನೀರು ಕುಡಿದು ಆ ಮಗು ಪುನ: ನಮ್ಮ ಸೀಟಿನ ಮಧ್ಯದ ಜಾಗದಲ್ಲಿ ಕೂತುಕೊಂಡಿತು. ಈ ಸಲ ನಿಧಾನಕ್ಕೆ ಅದರ ಪುಟ್ಟ ಕೈ ನನ್ನ ಎಡಗೈನ್ ಚಿಕ್ಕ ಬೆರಳನ್ನು ಹಿಡಿದುಕೊಂಡು ಬಿಟ್ಟಿತು. ನಾನೂ ಆ ಬೆಚ್ಚಗಿನ ಹಿಡಿತವನ್ನು, ನಮ್ಮಿಬ್ಬರ ನಾಡಿ ಮಿಡಿತ ಒಂದಾಗಿ ಹಿತವಾಗಿ ಬಡಿಯುತ್ತಿತ್ತು, ಅದನ್ನು ಅನುಭವಿಸುತ್ತಲೇ ಕಿಟಕಿ ಹೊರಗಡೆ ನೋಡ್ತಾ ಇದ್ದೆ. ಬಸ್ ಡ್ರೈವರ್ ಅಚಾನಕ್ಕಾಗಿ ಬ್ರೇಕ್ ಹಾಕಿದ ರಭಸಕ್ಕೆ ನಾನು ಮಗು ಜಾರಿದೆವು. ಸಾವರಿಸಿ ಕೂತು ಕೊಂಡೆವು. ಬ್ರೇಕ್ ಹೊಡೆದಾಗ ನಬ್ಬಿಬ್ಬರ ಕೈ ಬಿಡುಗಡೆಯಾಗಿ ಆ ಬೆಚ್ಚಗಿನ ಫೀಲ್ ಹೋದ್ದರಿಂದ ಏನೋ ಇರುಸುಮುರುಸು ಅನ್ನುವಷ್ಟರಲ್ಲಿ ಪುನ: ಆ ಪುಟ್ಟ ಕೈಗಳು ನನ್ನ ಚಿಕ್ಕ ಬೆರಳನ್ನು ಅರಸಿ ಬಂದು ಹಿಡಿದುಕೊಂಡಿತು.
ರಿಫ್ಲೆಕ್ಸ್ ನಿಂದ ನಾನೂ ಆ ಮಗು ಮೊದಲ ಬಾರಿಗೆ ಒಬ್ಬರನ್ನೊಬ್ಬರು ನೋಡಿಕೊಂಡಿದ್ದು. ನನಗೆ ತಕ್ಷಣಕ್ಕೆ ಕಂಡಿದ್ದು ಅದರ ಮುದ್ದು ಮುಖದಲ್ಲಿ ಚಂದದ ಬಣ್ಣದ ಕಂಗಳು. ಯಾವುದೇ ಭಾರತೀಯ ಮಕ್ಕಳಲ್ಲಿ ನಾ ಆ ತರಹದ ಕಣ್ಣನ್ನು ನೋಡಿಲ್ಲ.

ನೀಲಿ ಬೂದು ಮಿಶ್ರ ಅದ್ಭುತ ದೊಡ್ಡ ದೊಡ್ಡ ಕಣ್ಣುಗಳು. ನಾವಿಬ್ಬರೂ ಒಬ್ಬರನ್ನೊಬ್ಬರು ಬರೋಬ್ಬರಿ 5 ನಿಮಿಷಕ್ಕಿಂತ ಹೆಚ್ಚೆ ನೋಡುತ್ತ ಇದ್ದೆವು. ಆದರೆ ಆ ಚಂದದ ಮುಖದಲ್ಲಿ ಒಂದು ಚೂರು ನಗು ಇರಲಿಲ್ಲ. ಎಷ್ಟು ಗಂಭೀರ ಮುಖ ಮುದ್ರೆ ಅಂದ್ರೆ ನನಗೂ ಅದನ್ನು ಮಂಗಚೇಷ್ಟೆ ಮಾಡಿ ನಗಿಸ ಬೇಕು ಅನ್ನಿಸಲಿಲ್ಲ. ಸುಮಾರು ಒಂದು ಮುಕ್ಕಾಲು ಗಂಟೆಯ ಪಯಣದಲ್ಲಿ ನನ್ನ ಬೆರಳನ್ನು ಅದರ ಮುಷ್ಠಿಯಲ್ಲೇ ಹಿಡಿದು ಕೊಂಡಿತ್ತು. ನಮ್ಮ ಎದುರಿನ ಸೀಟಿನಲ್ಲಿ ಹಲವಾರು ಪ್ಯಾಸೆಂಜರ್ಸ್ ಬದಲಾದರು. ಅವರೆಲ್ಲ ಮಗುವನ್ನು ನಗಿಸುವ ಪ್ರಯತ್ನದಲ್ಲಿ ಸೋತರು. ಚಿಕ್ಕಿ ಗೆ ಯಾರದ್ದೋ ಫೋನ್ ಬಂದಾಗ, ಆಲಿಸದಿದ್ದರು ಕಿವಿಗಳಿಗೆ ಬೀಳುವ ಸಂಭಾಷಣೆಯಲ್ಲಿ ಕೇಳ ಸಿಕ್ಕಿದ್ದು ಇವಿಷ್ಟು, 'ತಲೆಗೆ ಪೆಟ್ಟು, ಸಿರಿಯಸ್, ಮತ್ತು NIMHANS. ಪುನ: ಆ ಮಗುವಿನ ಅಮ್ಮನ ಕಡೆ ನೋಡಿದ. ಯಥಾಪ್ರಕಾರ ಯಾವುದೇ ಪ್ರತಿಕ್ರಿಯೆ ಇಲ್ಲದೆ ಕಿಟಕಿಗೆ ತಲೆಯಾನಿಸಿ ಕೂತ ಭಂಗಿ. ಯಾವುದಕ್ಕೂ ಅವರಿಗೆ ಒಳ್ಳೆಯದಾಗಲಿ ಎಂದು ಮನಸ್ಸು ಹಾರೈಸಿತು.
ನಾವು ಇಳಿಯುವ ಸ್ಟಾಪ್ ಮೊದಲಿಗೆ ಬಂತು. ನಿಧಾನಕ್ಕೆ ನನ್ನ ಬೆರಳನ್ನು ಬಿಡಿಸಿ' ನಾ ಇಳಿತೆನೆ ಪುಟ್ಟ ಅಂತ ಹೇಳಿ, ಚಿಕ್ಕಿ ಗೆ ಒಂದು ಸ್ಮೈಲ್ ಕೊಟ್ಟು ನಾನು ಶ್ರೀಕಾಂತ ಇಳಿದೆವು.
ಇಳಿದ ಮೇಲೆ ಶ್ರೀಕಾಂತ ಹೇಳಿದ್ದು, ನೀವು ಒಬ್ಬರಿಗೊಬ್ಬರು ನೋಡ್ತಾ ಇದ್ದಿದ್ದು ಎಷ್ಟು ಚೆನ್ನಾಗಿತ್ತು ಆ moment ಗೊತ್ತಾ?? ಸೆಲ್ ಫೋನ್ ನಿಂದ ಫೋಟೊ ತೆಗೆಯುವ ಅನ್ನ್ಸಿಸಿತ್ತು ಅಂದರು. ಶ್ರೀಕಾಂತ್ ನನಗಭಿಮುಖವಾಗಿ ಇನ್ನೊಂದು ಬದಿಯ adjacent ಸೀಟ್ ನಲ್ಲಿ ಕೂತಿದ್ದರು.
ಈಗಲೂ ಯಾವುಯಾವುದೋ ಸಮಯದಲ್ಲಿ ಆ ಸುಂದರ ಕಣ್ಣುಗಳು ನನ್ನನ್ನು ಕಾಡುತ್ತವೆ. ನಾನು ಮುಗುಳ್ನಕ್ಕು ಆ ಮಗುವನ್ನು  ನಾ ಇದ್ದಲ್ಲಿಂದಲೇ 'ಎಲ್ಲ ಒಳ್ಳೆಯದೇ ಆಗಿರಲಿ' ಅಂತ ಹರೈಸುತ್ತೇನೆ. ನನ್ನ ಚಿಕ್ಕ ಬೆರಳನ್ನು ಗಲ್ಲಕ್ಕೆ ನೇವರಿಸುತ್ತೇನೆ.
this is my 222 nth post..(showing off)


:-)