ನೆನಪಿನ ಸಂಚಿಯಿಂದ

April 26, 2026

improvisation

 ಶ್ರೀಕಾಂತ್ ಗೆ  ದೈವಾಧೀನ ರಾಗುವ ಎರಡು ತಿಂಗಳ ಹಿಂದೆ, ಪ್ರತೀ ಮೂರು ದಿನಕ್ಕೊಮ್ಮೆ ಹೋಟಲ್ ಇಡ್ಲಿ ತಿನ್ನುವ ಆಸೆ ಆಗ್ತಿತ್ತು. ಚಟ್ನಿ ಮಾತ್ರ ಮನೆದೇ 😁


ನನ್ನ ಇಷ್ಟದ ಒಂದು ಪುಟ್ಟ ಅಂಗಡಿ  ಇದೆ. ರುಚಿಕರ ಆಹಾರ ಮಾತ್ರವಲ್ಲ, ಬೆಳಿಗ್ಗೆ ನಾಲ್ಕು ಗಂಟೆಗೆ ತೆರೆಯುತ್ತೆ.  ಗ್ಯಾಸ್ ಇಲ್ಲ ಅಂತ ಏನೂ complaint ಇಲ್ಲ. ಮೆನ್ಯು ನಲ್ಲಿ ಯಾವ ಐಟಂ ಕೂಡ ಕಡಿತ ಗೊಳಿಸಿಲ್ಲ. ಮತ್ತೆ ಅವರ ಲಕ್ ಅನ್ನಬಹುದು....ಅಂಗಡಿ ಇರೋ ಜಾಗ ದ ಎದುರು ಅಗಲ ರಸ್ತೆ ಮಾತ್ರವಲ್ಲದೇ ಅಷ್ಟೊಂದು ವಾಹನ ಸಂಚಾರ ಇಲ್ಲ. ವೀಡಿಯೊ ದಲ್ಲಿನ ಹಾಗೆ ರಸ್ತೆ ಪಕ್ಕ ಕಲ್ಲು ಪೇರಿಸಿ ಓಲೆ ಮಾಡಿಕೊಂಡಿದ್ದಾರೆ. ಪಲಾವ್ ರೆಡಿಯಾಗ್ತಿದೆ 😁👍

BTM eatery

ನನಗೆ ಒಂದು ಬೇಜಾರಿದೆ. ಯಾಕೆ ನಮ್ಮ ದೇಶ ಸೌರ ಶಕ್ತಿ ಉಪಯೋಗಿಸುತ್ತಿಲ್ಲ ಎಂದು? ನನ್ನ ತಂಗಿ ಮಗಳು ನಾನು ತುಂಬಾ ಪ್ರಯಾಣ ಕೈಗೊಳ್ಳುತ್ತೇನೆಂದು ನನಗೆ ಪುಟ್ಟದೊಂದು ಸೌರ ಟಾರ್ಚ್ ಕೊಟ್ಟಿದ್ದಳು....ಸ್ವಲ್ಪ ಬೆಳಕಿದ್ದರೂ ಸಾಕು ಅದು ತನ್ನಷ್ಟಕ್ಕೇ ಚಾರ್ಜ್ ಆಗ್ತಾ ಇರ್ತದೆ...(ಕಡೆಗೊಂದು ದಿನ ಅದು ಕಾಣೆಯಾಯ್ತು. ಮನೆಯೆಲ್ಲ ಮೇಲೆ ಕೆಳಗೆ ಮಾಡಿ ಹುಡುಕಿದೆ. ಲಾಸ್ಟ್ ಅದು ಶ್ರೀಕಾಂತ್ ಗೆ ಕೊಟ್ಟಿದ್ದ ನೆನಪು..ಆದರೆ ಅವರು ಬಿಲ್ಕುಲ್ ಅದರ ಬಗ್ಗೆ ಗೊತ್ತಿಲ್ಲ ಅಂದರು..ನಾನೂ ಸುಮ್ಮನಾದೆ. ಕೆಲವೊಂದು ತಿಂಗಳ ನಂತರ ಅವರ ಅಕ್ಕನ ಮನೆಗೆ ಹೋದಾಗ ಅಲ್ಲಿತ್ತು. 'ಓ ಇಲ್ಲ8ದೇ ನನ್ನ ಟಾರ್ಚ್, ಹಿಂದಿನ ಸಲ ಇಲ್ಲಿಗೆ ಬಂದಾಗ ಶ್ರೀಕಾಂತ್ ಬಿಟ್ಟು ಹೋಗಿರಬೇಕು' ಅಂದೆ ನನ್ನ ನಾದಿನಿಯ ಬಳಿ. ಅದಕ್ಕೆ ಅವರು ' ಇಲ್ಲ, ನನಗೆ ಟಾರ್ಚ್  ಇಷ್ಟ ಆಗಿದೆ, ನನಗೆ ಕೊಡು' ಅಂತ ಇಸ್ಕೊಂಡೆ ಅಂದ್ರು...🤔🤔)

ಹಾಗೆ ಸೂರ್ಯ ನಿಗೆ ಏಳುವ ಮೂಡ್ ಇಲ್ಲದಿದ್ದರೆ ಸೌರ battery ಗಳನ್ನು ಮಾಡಿ ಇಡಬಹುದು. ನನ್ನ ದಿವಂಗತ ಸ್ನೇಹಿತೆ ಸೂಸಿ ಮನೆಯಲ್ಲಿ ಇಂತಹ ವ್ಯವಸ್ಥೆ ಇತ್ತು...ಬಾವಿಯಿಂದ ನೀರು.ಕೂಡ ಸೌರ ಶಕ್ತಿಯಿಂದಲೆ ಟ್ಯಾ0ಕೆಗೆ ತುಂಬಿಸುತ್ತಿದ್ದರು. ಮಳೆಗಾಲಕ್ಕೆ ಉಪಯೋಗಿಸಲು  ಸೌರ ಬ್ಯಾಟರಿ ಕೂಡ ಇತ್ತು. ಆದರೆ ಅದು ಹಾಳಾದ ಮೇಲೆ ರಿಪೇರಿ ಆಗಲಿಲ್ಲ ಅಂದ್ರು.

ಆ ನಿಟ್ಟಿನಲ್ಲಿ ಸ್ವಲ್ಪ research ಮಾಡಿದರೆ ಒಳಿತಿತ್ತು ಸಂತ ನನ್ನ ಅನಿಸಿಕೆ..ನೀವೆನ್ನನ್ನುತ್ತೀರಾ?

ತೀರ್ಥಹಳ್ಳಿಯಲ್ಲಿ ನಾವು ತೋಟದ ಮನೆಗೆ ಸೋಲಾರ್ ಹಾಕಿಸುವಾ ಅಂದಿದ್ದೆ..ಅವರೂ ಹೂಂ ಅಂದಿದ್ರು...

ಅಷ್ಟೇ...ಸುಮ್ನೆ....

April 20, 2026

4 months without you

 

                  two years ago...jog falls

ಒಬ್ಬ ಸಂಬಂಧಿಕರ complaint ಇತ್ತು. ನಮಗ್ಯಾರಿಗೂ serious ಅಂತ ಹೇಳೇ ಇಲ್ಲ. ನಾವು ಬರ್ತಿದ್ವಿ ಶ್ರೀಕಾಂತ್ ನನ್ನು ನೋಡಲು ಅಂತ....


20ನೆ dec ರಂದು ಬೆಳಿಗ್ಗೆ  ಡಾಕ್ಟರ್..'ಏನೂ improvement ಇಲ್ಲ. ಹೊಟ್ಟೆಯಲ್ಲಿ ಎದೆಯಲ್ಲಿ clot ಆಗಿದೆ. ಹೆಚ್ಚಂದ್ರೆ 10 ದಿನ. ventilator ನಾನು suggest ಮಾಡಲ್ಲ. ವಾರ್ಡ್ ಗೆ ಶಿಫ್ಟ್ ಮಾಡ್ತೇವೆ...comfortable ಆಗಿರಲಿಕ್ಕೆ ಅಷ್ಟೇ ಔಷಧಿ ಕೊಡ್ತೇವೆ....ಫ್ಯಾಮಿಲಿ ಮೆನ್ಬರ್ಸ್ ಎಲ್ಲ ಬಂದು ನೋಡಲಿಕ್ಕೆ ನಾವು ಅಡ್ಡಿ ಮಾಡಲ್ಲ ಅಂದ್ರು...ನಾನು ಕೆಳಗಡೆ toilet ಗೆ ಹೋಗಿ ಅತ್ತು ಬಂದೆ....ಕೊಪ್ಪ ದಿಂದ ಸ್ನೇಹಿತರು ಬಂದಿದ್ದರು....ವಿಸಿಟಿಂಗ್ ಟೈಮ್ ಅಂತ ಅವರನ್ನು ಕರೆದುಕೊಂಡು ಐಸಿಯು ಗೆ ಲಿಫ್ಟ್ ನಲ್ಲಿ ಹೋಗಬೇಕಾದ್ರೆ ಅಲ್ಲಿಂದ ಕಾಲ್ ಬಂತು...ಬೇಗ ಮೇಲೆ ಬನ್ನಿ cardiac ಅರೆಸ್ಟ್ ಆಗಿದೆ ಅಂತ....ಎಷ್ಟು ಸಡನ್ ಅಂದ್ರೆ ಏನು ಮಾಡಬೇಕೆಂದು ತೋಚಲಿಲ್ಲ..
ವಾರ್ಡ್ ಗೆ ಶಿಘ್ಟ್ ಆದ ಮೇಲೆ ಅವರನ್ನು comfortable ಆಗಿ ಇಡೋದು.. ಅವರ ಇಷ್ಟದ ಅವರಮ್ಮನ ಶಾಲ್ ಅವರಿಗೆ ಹೊದಿಸೋದು, ಅವರ ಇಷ್ಟದ ಸಂಗೀತ / ಹಾಡು...ಪಂಡಿತ್ ವೆಂಕಟೇಶ್ ಕುಮಾರ, ಗಂಗೂಬಾಯಿ ಹಾನಗಲ್, ಕಿಶೋರಿ ಅಮೊಂಕರ್,  ಉಸ್ತಾದ್ ರಶೀದ್ ಖಾನ್ ಸಂಗೀತ ಎಲ್ಲ ಹಾಕಿ ಕೇಳಿಸೋದು, ಯಾವ ಯಾವ ಸಂಬಂಧಿಕರಿಗೆ ಕರೀಬೇಕು ಅಂತೆಲ್ಲ ಪ್ಲಾನ್ ಹಾಕುವಾಗ ಸಡನ್ ಹೋಗಿ ಬಿಟ್ರು....ದಿಕ್ಕು ತೋಚದಂತಾಗಿತ್ತು...ಯಾರ್ ಯಾರ್ ಗೆ ಮೆಸೇಜ್ ಮಾಡಿದೆ ಗೊತ್ತಿಲ್ಲ....automaton mode ನಲ್ಲಿದ್ದೆ..

liver cirrhosis ಪತ್ತೆಯಾದಾಗ ನನ್ನ immediate family members,  ಶ್ರೀಕಾಂತ್ ಒಬ್ಬ ಅಣ್ಣನ ಮಗಳಿಗೆ ಮಾತ್ರ ತಿಳಿಸಿದ್ದೆವು...ಹುಷಾರಾಗುತ್ತಾರೆ ಅನ್ನುವ ಬಲವಾದ ನಂಬಿಕೆಯಿತ್ತು...ಆಗಸ್ಟ್ ರಿಂದ ಆಕ್ಟೊಬರ್ ..ಆರೋಗ್ಯದಲ್ಲಿ ಸುಮಾರು ಬದಲವಾಣೆಯಿತ್ತು...ಮತ್ತೆ  ಒಂದು ಸಲ ammonia ಜಾಸ್ತಿ ಆಗಿ ಈ ಕಡೆಯ ಪರಿವೆಯೇ ಇರಲಿಲ್ಲ. ಡಾ urine infection ನಿಂದ...ಪೂರ್ತಿ ಮೂತ್ರ ಹೊರ ಹೋಗದೆ ಹಾಗಾಗೋದು...ಅಂದ್ರು...
urinary infection ಅಂದಾಗ ನಾನು 'ನಾನು ಖುದ್ದಾಗಿ ಅವರ toilet clean ಮಾಡೋದು...ಅವರೊಬ್ಬರೇ ಅದನ್ನು ಉಪಯೋಗಿಸೋದು' ಅಂತ emotional ಆಗಿ ಹೇಳ್ತಿರಬೇಕಾದ್ರೆ.....
toilet ಗಲೀಜು ಕಾರಣ ಅಲ್ಲ. prostrate enlarge ಆಗಿ bladder ಮೇಲೆ pressure ಬಿದ್ಫು..ಪೂರ್ತಿ ಮೂತ್ರ ಖಾಲಿ ಆಗಲ್ಲ....ಅದ್ದರಿಂದ ಪದೇ ಪದೇ infection ಆಗುತ್ತೆ....liver transplant ಗೇ ಅಂತ ಸಜ್ಜಾದಾಗ ಯಾವುದೇ ಸರ್ಜರಿ ನಾವು ರಿಕಮೆಂಡ್
ಮಾಡಲ್ಲ ಅಂದ್ರು...liver  ಸಿಕ್ಕಿತ್ತು...ನಮ್ಮ ದುರ್ಭಾಗ್ಯ...ಕೊನೆಗೆ urinary infection ನಿಂದ ಕಿಡ್ನಿ ಕೆಲಸ ಮಾಡೋದು ನಿಂತೆ ಹೋಯ್ತು...ಮೂತ್ರದ ಚೀಲ ಅಳವಡಿಸಿದರು, dialysis ಆಯ್ತು.. ಉಹೂಂ....😭😭

ಇವತ್ತಿಗೆ ನಾಲ್ಕು ತಿಂಗಳಾಯ್ತು ಹೋಗಿ...🙏🙏

April 17, 2026

Unfermented Dosa/dose


ನನ್ನ ತಮ್ಮನ ಮಗಳಿಗೆ fermented ತಿಂಡಿಗಳು ಇಷ್ಟ ಆಗಲ್ಲ. ಅವಳಿಗೆ ಉದ್ದು-ಮೈದಾ ದೋಸೆ, ನೀರು ದೋಸೆ ಮತ್ತು ಕೆಳಗೆ ಕೊಟ್ಟಿರುವ ದೋಸೆ ಇಷ್ಟ.

ಕೊಂಕಣಿಯಲ್ಲಿ ಕರ್ ಕರ್ ಮಚಕಟ್ ಅಂತ ಹೆಸರು...ಸ್ವಲ್ಪ ದಪ್ಪ ಹುಯ್ಯಬೇಕು..

2 ಗ್ಲಾಸ್ ಅಕ್ಕಿ, 2 tb sp ಉದ್ದಿನ ಬೇಳೆ, 2 ಟೇಬಲ್ ಚಮಚ ತಾಜಾ ಕಾಯಿ ತುರಿ

ನಾನು ನಾಲ್ಕು ಗಂಟೆಗೆ ಎದ್ದಿರುತ್ತೇನೆ ಅಂತ ಹಲವಾರು ಬಾರಿ ಬ್ಲಾಗ್ ನಲ್ಲಿ ಹಾಕಿದ್ದೇನೆ....so ನಾಲ್ಕು ಗಂಟೆಗೆ ನೀರಲ್ಲಿ ನೆನೆಸ್ತೀನಿ. ಚಹಾ ಕುಡಿದು..ವಾಕ್ ಹೋಗಿ..6 ಗಂಟೆಗೆ ಎರಡು table spoon ತಾಜಾ ತೆಂಗಿನ ಕಾಯಿ ತುರಿ ಹಾಕಿ ತರಿ ತರಿ ಯಾಗಿ ರುಬ್ಬಿ..ಉಪ್ಪು ಬೆರೆಸಿ, regular ದೋಸೆ ಹಿಟ್ಟಿಗಿಂತ ,ಹಿಟ್ಟು ಸ್ವಲ್ಪ ನೀರು ನೀರಾಗಿರಲಿ batter.  ಬಿಸಿ ಬಿಸಿ ದೋಸೆ ಹುಯ್ದು, ಬಿಸಿ ಇರುವಾಗಲೇ ಬೆಣ್ಣೆ ಜತೆ ಜಮಾಯಿಸಿ..ನನಗೆ ಥ್ಯಾಂಕ್ಸ್ ಹೇಳಿ 🙂🙏❤️

ಚಿತ್ರದಲ್ಲಿ salted butter ಮತ್ತು  shadrasa cooking channel  ನಲ್ಲಿರಿವ, ಮಂಜೇಶ್ವರ ದೇವಸ್ಥಾನದಲ್ಲಿ ಊಟಕ್ಕೆ ಬಡಿಸುವ ಟೊಮೆಟೊ ಗೊಜ್ಜು...ನೋ ನೀರುಳ್ಳಿ ನೋ ಬೆಳ್ಳುಳ್ಳಿ...yet yummy

yummy crisp unfermented dosa

unfermented : ಹುದುಗು ಬರದ / ಹುಳಿಯಾಗಿರದ




April 12, 2026

Orchids

 ಹಿಂದಿನ ವಾರ ಎಲ್ಲ ಗಿಡಗಳಿಗೆ ನೀರು ಹಾಕ್ತಾ ಇದ್ದೆ. ಈ ಆರ್ಕಿಡ್ಗ  ಗಿಡ ಗಳಿಗೆ ತುಂಬಾ ನೀರು ಹಾಕಬಾರದು ಅಂತಾರೆ...ಹಾಗೂ ನನ್ನ ಬಳಿ ಈ ಗಿಡಗಳು ಉಳಿಯಲ್ಲ...ನನಗೂ ಅವಕ್ಕೂ ಕೂಡಿ ಬರಲ್ಲ....ಈ ಗಿಡಗಳು ನನ್ನ ಹುಟ್ಟು ಹಬ್ಬಕ್ಕೆ ರಾಧಿಕಾ ಗಂಗಣ್ಣ ಉಡುಗೊರೆಯಾಗಿ ಕಳಿಸಿದ್ದು....ಬಿಟ್ಟ ಹೂ ಮೂರು ತಿಂಗಳು ಇರುತ್ತೆ..ಇತ್ತು...

ಮೊನ್ನೆ ನೋಡಿದಾಗ ಗಿಡ ಎಲ್ಲ ಒಣಗಿದ ಹಾಗೆ ಅನ್ನಿಸಿ....'ಎಷ್ಟೊಂದು ಸೆಕೆ ಇದೆ...ನಿಮಗೆ ನೀರು ಕುಡಿಯಲು ಏನು ಧಾಡಿ' 'ಸುಮ್ನೆ ನಾಟಕ ಆಡಬೇಡಿ' ಅಂತ ಸರಿ ಬೈದು ಮೂರು ಆರ್ಕಿಡ್ ಗಿಡಕ್ಕೂ ಅರ್ಧ ಅರ್ಧ ಗ್ಲಾಸ್ ನೀರು ಸುರಿದೆ.

ನಿಹಾಳ ಸ್ನೇಹಿತೆ (ಖ್ಯಾತ ಬರಹಗಾರರ niece - ಬರಗಾರರು ಶ್ರೀಕಾಂತ್ ಗೆ friend and colleague) ಮನೆಗೆ ಬಂದಾಗ ಗಿಡಗಳ ಬಗ್ಗೆ ಮಾತು ಬಂದಾಗ ನಿಹಾ 'ಅಮ್ಮ ಊರಲ್ಲಿಲ್ಲದಿದ್ದಾಗ ನಾವು ನೀರು ಹಾಕಿದ್ರೂ ಸ್ವಲ್ಪ ದಿನ ಆದ ಮೇಲೆ ಗಿಡ ಡಲ್ ಕಾಣ್ ತಾವೆ, ಅಂದ್ರೆ ಅವಳು ಇದನ್ನು ಅನುಮೋದಿಸಿದಳು.   ನಮ್ಮಲ್ಲೂ ಹಾಗೆ ಅಮ್ಮ, ಅಣ್ಣನ ಮನೆಗೆ ಕೆಲ ದಿನ ಹೋಗಿ ಇದ್ದಾಗ , ನಾನು ಅಪ್ಪ ನೀರೆಲ್ಲ ಹಾಕತೆವೆ...ಸೇಮ್ ಕತೆ ಅಂತ....ಅದಕ್ಕೆ ನಾನು 'ಹೌದು, ನಾನು ಗಿಡಗಳ ಜತೆ ಮಾತು ಕತೆ ಆಡ್ತೀನಿ, ಹಾಡ್ತೀನಿ..i caress the plants ಅಂದೆ...
ಶ್ರೀಕಾಂತ್ ಗೂ ತುಂಬಾ ಇಷ್ಟ ಈ ಹುಡುಗಿ...ಸಮಯ ಹೋದದ್ದೇ ತಿಳಿಯಲ್ಲ..ಅಷ್ಟು ಮಾತು ನಗು, mimicry.. we talk about everything under the sun..🙂🙂 ನಾನು ಮೀನು ಅಡಿಗೆ ಮಾಡಿದಾಗಲೆಲ್ಲ ಅವಳಿಗೆ invite ಇರುತ್ತೆ.

ಇವತ್ತು ಆರ್ಕಿಡ್ ಗಿಡ ನೋಡಿಡ್ರೆ 😁😁❤️❤️ 👇👇


ಶ್ರೀಕಾಂತ್ ಇದ್ದಾಗ ಊಟಕ್ಕೆ ಬಂದಾಗ ಮಾಡಿದ್ಫು 👇👇

ಮೀನು ಊಟದ ಪ್ಲೇಟ್

April 4, 2026

ಒಂದು ಕಪ್ ಚಹಾ

 


ದಸರಾ ದಿನದಂದು, ದೀಪಾವಳಿಗೆ ಬರುವ  ನನ್ನ ಹುಟ್ಟು ಹಬ್ಬದ  ಮುಂಚಿತ ಉಡುಗೊರೆಯಾಗಿ, ಅಕ್ಕ, ಬ್ಯೂಟಿ salon ಅನ್ನೇ ಮನೆಗೆ ಕರೆಸಿದಳು.  8.30 ಗೆ ಬಂದಿದ್ಫು ಎಲ್ಲ ಕೆಲಸ ಮುಗಿಸುವಾಗ 1.00 ಗಂಟೆ. ಹಬ್ಬದ ದಿನ ನನಗೆ ಪಾಪ ಅನ್ನಿಸ್ತು. ಊಟ ಮಾಡಿ ಹೋಗಿ ಅಂದೆ. ಇಲ್ಲ, ಮನೆಯಲ್ಲಿ ಆಕೆಯ ತಂಗಿ ಮೈಸೂರಿನ ಹಳ್ಳಿಯಿಂದ ಇಲ್ಲಿಗೆ ಕಾಲೇಜು ಕಲಿಯಲು ಇವರ ಮನೆಯಲ್ಲೇ ಇದ್ದಾಳೆಂದೂ, 6 ವರ್ಷದ ಮಗಳು ಮನೆಯಲ್ಲಿ.ಇದ್ದಾಳೆಂದು...ತಂಗಿ ಅಡಿಗೆ ಮಾಡುತ್ತಾಳೆ ಅಂದ್ರು...ಅವರ ಗಂಡ factory ಕೆಲಸ, ಇವತ್ತು ರಜೆ ಇಲ್ಲ ಅಂದ್ರು...11.00 ಗಂಟೆಗೆ  ನಾನು ಚಹಾ ಮಾಡಿದಾಗ , ಅವರಿಗೂ ಕೊಟ್ಟು, ನಮಗೆ ಆ ದಿನ ಇಡ್ಲಿ ಸಾಂಬಾರು....ಕೊಡ್ಲಾ ಅಂದ್ರೆ ಬೇಡ ತಿಂಡಿ ಆಗಿ ನೆ ಬಂದಿದ್ಫು ಅಂದ್ರು  ಸ್ವಲ್ಪ ಕುರುಕುಲು ತಿಂಡಿಗಳನ್ನು ಕೊಟ್ಟೆ...ಎಲ್ಲಾ ತಿಂಡಿ ಚೆನ್ನಾಗಿ ತಿಂದ್ರು...ಅವರ ಗಂಡ ಶ್ರೀ0ಗೇರಿ ಯವರು ಅಂದ ಕೂಡಲೇ ಶ್ರೀಕಾಂತ್ ಕಿವಿ ಚುರುಕಾಯಿತು...ಅವರ ಬಗ್ಗೆ ಎಲ್ಲ ಕೇಳಿ ತಿಳಕೊಂಡ್ರು..ದಿನಕ್ಕೆ ಎಷ್ಟು ದುಡಿತಾರೆ, app ಮೂಲಕ ಬಂದ್ರೆ parlour ನವರು ಇವರಿಗೆ. ಎಷ್ಟು ಕೊಡ್ತಾರೆ, insurance ಹಾಗೆ ಹೀಗೆ ಅಂತ.....ನಾನು facial, ಹುಬ್ಬಿನ ಆಕಾರ ಮಾಡಿಸಿದೆ...ಮಕ್ಕಳು ಪೆಡಿಕ್ಯೂರ್.....ಹುಷಾರಿಲ್ಲದ ಶ್ರೀಕಾಂತ್ ಇದನ್ನೆಲ್ಲ ನೋಡಿ ಸಖತ್ impressed ಉ.....

ಮರುದಿನ ಅಕ್ಕನಿಗೆ 'ಅಕ್ಕಾ ನನಗೂ ಮಸಾಜ್ ಎಲ್ಲ ಮಾಡಿಸಬೇಕೆಂದು ಆಸೆ ಆಗಿದೇ ಅಂದ್ರು...ಕೂಡಲೇ ಅಕ್ಕಾ ಆ ಭಾನುವಾರ ಅವರಿಗೋಸ್ಕರ ಹೋಮ್ grooming ಬುಕ್ ಮಾಡಿದಳು....
ಅವನೂ ಕರೆಕ್ಟ್ 8 ಗಂಟೆಗೆ ಆಕಳಿಸುತ್ತಾ ಬಂದ....ನಮ್ಮ ರಾಯರೋ ಸ್ನೇಹ/ಸಂಘ ಜೀವಿ....ವಟವಟ ಮಾತಾಡ್ ಬೇಕು...ಅವನಿಗೋ ಮಾತೇ ಬೇಡ ದ ತರಹ.ಶ್ರೀಕಾಂತ್ ಹತ್ತು ಮಾತಾಡಿದ್ರೆ ಅವನು ಅರ್ಧ ಮಾತಾಡ್ತಿದ್ದ..,😁..ನಾನು ಶ್ರೀಕಾಂತ್ ಗೆ ಕೊಂಕಣಿಯಲ್ಲಿ ಈಗ ಎದ್ದಿರಬಹುದು., ಸಂಡೆ ಬೇರೆ...ಸುಮ್ಮನಿರಿ ಸ್ವಲ್ಪ ಹೊತ್ತು ಅಂದೆ....ಬೇಗ ಬೇಗ ನೆ ಬಿಸಿ ಬಿಸಿ ಟಿ ಮಾಡಿದೆ ಇಬ್ಬರಿಗೂ...ದೋಸೆ ತಿನ್ನುತ್ತಿಯಾ ಬೇಟಾ ಅಂದೆ....ಚುಟುಕಾಗಿ ಬೇಡ ಅಂದ...ಆದರೆ ಚಹಾ ಜತೆ ಮೂರು ನಾಲ್ಕ್ಯ್ ಬಗೆಯ ಬಿಸ್ಕಿಟ್, ಖಾರಿ ಬಿಸ್ಕತ್ತು ಮುಂತಾದು ಇಟ್ಟೆ....ಟೇಬಲ್ ಬಳಿ ಕುರ್ಚಿ ಎಳೆದು ಆರಾಮಾಗಿ ಪವಡಿಸಿ ಎರಡು ಗುಟುಕು ಚಹಾ ಕುಡಿದಿದ್ದೆ  ಹುಡುಗ ಚುರುಕಾಗಿ ಬಿಟ್ಟ....ಮಾ ಜಿ,  ಹಮಾರಿ ಮಾ ಭಿ   ಐಸೆ ಹೀ ಮಜೆದಾರ್ ಚಾಯ್ ಬನಾತಿ ಹೈ...ಮಾ ಕಿ ಯಾದ್ ಆ ಗಯಿ' ಅಂತ ಖುಷ್ ಆಗಿ ಬಿಟ್ಟ..ಪ್ಲೇಟ್ ನಲ್ಲಿ ಇಟ್ಟ ತಿಂಡಿಗಳನ್ನೆಲ್ಲಾ ನೀಟಾಗಿ ತಿಂದು..ಪ್ಲೇಟ್, ಚಹಾ ದ ಕಪ್ , ನಾನು ಬೇಡ ಬೇಡ ಅಂದ್ರು, ಅಡಿಗೆ ಮನೆಗೆ ಬಂದು, ತೊಳೆದು ಇಟ್ಟ..ದೇಖಿಯೇ ಮೇರಿ ಚಾಯ್ ಕಾ ಕಮಾಲ್ ಅಂತ.ಮಕ್ಕಳು ನಾನು ಅಡಿಗೆ ಮನೆಯಲ್ಲಿ ಮುಸು  ಮುಸು ನಗ್ತಾ ಇದ್ವಿ... ಶ್ರೀಕಾಂತ್ ಗೂ ಒಳ್ಳೆ ಮಸಾಜ್, ಹೇಯರ್ ಕಟ್,  ಪೀಡಿಕ್ಯೋರ್ ಎಲ್ಲ ಮಾಡಿ...ಸೈ ಆನಿಸಿಕೊಂಡ...ಉತ್ತರಾಖಂಡ್ ದವನಂತೆ..ಅಪ್ಪ ,ಅಮ್ಮ ತಂಗಿ , ತಮ್ಮ ಎಲ್ಲ ಖೇತಿ ಮಾಡ್ತಾರೆ ಅಂದ...ಜೀವನ ತುಂಬಾ ಕಷ್ಟ...ತಂಗಿಗೆ ಮದುವೆ ಮಾಡಬೇಕು ಅಂತೆಲ್ಲ ಅಂದ...ಯಾವ ಬೇಳೆ, ಅವರ ಆಹಾರ ವಿಧಾನಗಳನ್ನೆಲ್ಲ ಶ್ರೀಕಾಂತ್ ಕೇಳಿ ತಿಳಕೊಂಡ್ರು....ಹಿಂದಿನ ರಾತ್ರಿ ತುಂಬಾ kelasa ಇದ್ದು ರಾತ್ರಿ ಮಲಗುವಾಗ ಲೇಟ್ ಆಗಿ ಬಹುಶಃ ಮೂಡ್ ಹಾಳಾಗಿತ್ತೇನೋ....ಏಕ್ ಕಪ್ ಚಾಯ್ ನೆ ಸಬ್ ಕುಚ್ ಬದಲ್ ದಿಯಾ..😁😁
ಅಕ್ಕ ದಸರಾ ಗೆ ಮಾಡಿದ ಚಾಕೊಲೇಟ್ ಕೊಟ್ಟೆ...ಥಾಂಕ್ you ಮಾಜಿ ಅಂತ ಕಾಲಿಗೆ ಎರಗಿ ಹೋದ  ಹುಡುಗ...😁😁
ಶ್ರೀಕಾಂತ್ ಅವನು ಹಿದ ಮೇಲೆ ಎಷ್ಟು ದುಡ್ಡು ಆಯ್ತು ಅಂತ ಕೇಳಿದ್ರೆ...ಅಕ್ಕ 'ask no questions and you will be told no lies' ಒಲಿವರ್ ಗೋಲ್ಡ್ ಸ್ಮಿತ್ ಅವರ ಗಾದೆ ಉದುರಿಸಿ ನಗಿಸಿದಳು ' 😁😁
 am glad  we got to do these little things for srikanth ..😭😭






March 28, 2026

ಬಣ್ಣ -my ಬಣ್ಣ 😧

 i noticed those  girls while entering the hospital cafe. Both were very pretty..looked alike. Maybe sisters or even twins. Both were engrossed with their cell phones. Niha took turns sitting in the ward with Srikanth and she asked me go and have a leisurely tea. i ordered a tea and a veggie puff and sat in a toasty sunlit corner.  Found a discarded newspaper. opened the crossword part , found a pen in my bag and started solving. 'Auntie' someone called near my ear. i turned towards the voice and found one of the pretty girls. besides me.  'aunty i just wanted to compliment on your beautiful skin colouring', it is amazing. Me, i am not used to nor take easily to praise...arre what does this girl want,  i think..but sensibility/manners made me thank her...she must have seen the confusion/doubt in my face...'my sister thinks so too'....we haven't seen such colouring on anybody....i said this is the 'first time i am hearing of it...and turned to my crossword.....suddenly i realized i was sitting in the sunlight..i smiled at the girl who was still sitting beside me ...haha it is the sunlight...see 😁. she replied 'no aunty we observed you when you entered the cafe and wanted to.let you know...she smlled...i repeated my thank you  i was.a bit embarassed. she said bye and went back to her sibling....after i entered the ward i shared the incident with niha and said..i am so dumb..i forgot to say they were pretty themselves...


ಶ್ರೀಕಾಂತ್ ಹೋದ ಒಂದು ವಾರದ ಮೇಲೆ ಯಾಕೋ ಈ ಮೇಲಿನ ಘಟನೆ ನೆನಪಾಯ್ತು.
ಯಾಕೋ ಹೆದರಿದೆ
ಯಾಕೆಂದರೆ............
ಶ್ರೀಕಾಂತ್ ಗೆ ಲೀವರ್ transplant ಮಾಡಲೇ ಬೇಕಾಗುತ್ತದೆ ಎಂದ ಮೇಲೆ liver workup ಅಂತ ಮಾಡುತ್ತಾರೆ. ಬೇರೆ ಲೀವರ್ ಪಡೀಲಿಕ್ಕೆ ರಕ್ತದ ಗುಂಪು match ಆದ್ರೆ ಮಾತ್ರ ಸಾಕಾಗಲ್ಲ, kidney, heart, lungs ಎಲ್ಲ ಸರಿ ಕೆಲಸ ಮಾಡಿದ್ರೆ ಮಾತ್ರ transplant. ಇದನ್ನು airport ರೋಡ್ ನಲ್ಲಿರೋ Aster CMI ನಲ್ಲಿ ಮಾಡಿಸಿದ್ವಿ. ಎಷ್ಟು ದೂರ...ನಮ್ಮದೇ ವಾಹನ ಇದ್ರೂ it was too tiring..
ಅಲ್ಲಿ 4 ವರ್ಷದ ಮಗುವಿನಿಂದ 50+  ವರೆಗಿನ, ವಿವಿಧ ಸ್ಥರದ / ಹಂತದ/ಬಣ್ಣದ ಲೀವರ್ ಕಾಯಿಲೆ ಯ ಜನರನ್ನು ನೋಡಿದೆ. ಅದರಲ್ಲಿ ಒಬ್ಬ 28- 30 ವರ್ಷದ ಹಡುಗ ನ ಬಣ್ಣ ತುಂಬಾ ನೆ ವಿಚಿತ್ರವಾಗಿತ್ತು....ಲಕ ಲಕ ಹೊಳೆಯುವ ರಕ್ತ ಚಂದನದ ಬಣ್ಣ, ಹಳದಿ - ನೀರು ಭರಿತ ಕಣ್ಣು, ಮೂತ್ರದ ಚೀಲ ಕೈಯಲ್ಲಿ...ಮೂತ್ರದ ಚೀಲ ದ ಸಲುವಾಗಿ ಲುಂಗಿ ತೊಟ್ಟಿದ್ದ...i was fascinated by his colour.... ನಾನು ಕಣ್ಣು ಕೀಳಿಸದೆ ಅವನನ್ನು ನೋಡುತ್ತಿರಬೇಕಾದ್ರೆ ಅಕ್ಕ ನನಗೆ amma stop staring ಅಂತ ಗದರಿದಳು...ಅವನ  ಸಣ್ಣ ಪ್ರಾಯದ ಹೆಂಡತಿ ಕೂಡ ಅವನ ಜತೆ ಇದ್ದಳು....ಅವನೂ transplant ಗಾಗಿ ಕಾಯುತ್ತಿದ್ದ...
ಈ ಹುಡುಗಿಯರು  ಮತ್ತೆ ನೆನಪಾಗಿ , ಮೈ ನಡುಕ ಬಂದು, ನಾನು malathi manipal ನಲ್ಲಿ ಫುಲ್ body ಚೆಕ್ up ಮಾಡಿಸಿದೆ...low haemoglobin ಮತ್ತು pre diabetis ಪತ್ತೆಯಾಗಿದ್ರು ಬಿಟ್ರೆ ಎಲ್ಲ ಸರಿಯಾಗಿದೆ..
ಡೈಬೇಟಿಸ್ control ನಲ್ಲಿದೆ....stress ಇಂದ ಸಕ್ಕರೆ ಅಂಶ ಏರು ಪೇರಾಗ್ತದೆ ಮತ್ತು life style ಬಗ್ಗೆ ಕೇಳಿ...ಅದನ್ನೇ maintain ಮಾಡಿ..ಮೂರು ತಿಂಗಳ ನಂತರ ಪುನಃ ತಪಾಸಣೆ ಮಾಡುವಾ ಅಂದು ಔಷಧಿ ಏನೂ ಬರೆದು ಕೊಟ್ಟಿಲ್ಲ...
ಯಾಕೆ ನೆನಪಾಯ್ತು ಅಂದ್ರೆ ಮೊನ್ನೆ fort ಕೊಚ್ಚಿ ಯಲ್ಲಿ ಹೋಟೆಲ್ ನಲ್ಲಿ ಊಟಕ್ಕೆ ಕಾಯುತ್ತಿದ್ದಾಗ ನಿಹಾ 'ಅಮ್ಮ  you are glowing, let me take a pic ಅಂತ ಫೋಟೋ ತೆಗೆದ್ಲು...🤔🤔 ನಾನೂ ಚಿತ್ರ ನೋಡಿದೆ ನನಗೇನೂ glow ಆಗ್ತಿದ್ದೆನೆ ಅನ್ನಿಸಲಿಲ್ಲ..
ನಾನು ಮೊದಲಿನ ಧೈರ್ಯವಂತೆ ಮಾಲತಿ ಅಲ್ಲವೇ ಅಲ್ಲ...ಆಕ ನಿಂಪಿ ಗೆ ಸ್ವಲ್ಪ cold cough, ಆರೋಗ್ಯ ಏರು ಪೇರಾದ್ರೆ ತುಂಬಾನೇ tense ಆಗ್ತೀನಿ.  ಮೊದಲು ನನ್ನ panic attack ನಂತರ ಶ್ರೀಕಾಂತ್ ರ liver cirrhosis ಮತ್ತುdetect ಆದ 8 ತಿಂಗಳಿಗೆ ಸಾವು ನನ್ನನ್ನು ಕಂಗೆಡಿಸಿಬಿಟ್ಟಿದೆ 😭😭😏


ಶ್ರೀಕಾಂತ್ ಗೆ ಸಿಕ್ಕಾಪಟ್ಟೆ weight loss ಆಗಿ ಸರಿಯಾದ ಸೈಜ್ ಬಟ್ಟೆ ತೆಗೊಂಡ್ರೆ ಹೊಟ್ಟೆ ಮೇಲೆ ಟೈಟ್ ಆಗುತ್ತಿತ್ತು, ಲೂಸ್ ತೆಗೊಂಡ್ರೆ shoulder ಮೇಲಿಂದ ಇಳಿತಿತ್ತು...ಪ್ಲಸ್ ನಾವು ತಂದದ್ದು, online ಆರ್ಡರ್ ಮಾಡಿದ್ದು ಅವರಿಗೆ ಸರಿ ಆಗ್ತಿರಲಿಲ್ಲ..ಅಂತ ನಾನು ಅವರನ್ನು reliance ಗೆ ಕರೆದುಕೊಂಡು ಹೋದಾಗ, ನನಗೂ force ಮಾಡಿ ಮೇಲಿನ ಚಿತ್ರದಲ್ಲಿನ ಡ್ರೆಸ್ ತೆಗೆಸಿಕೊಟ್ರು...ನಮ್ಮ ಲಾಸ್ಟ್ ಶಾಪಿಂಗ್ outing. ತೆಗೆದುಕೊಂಡ ಬಟ್ಟೆ ಹಾಕಲೇ ಇಲ್ಲ, ಆರೋಗ್ಯ ಹದಗೆಡುತ್ತಾ ಹೋಯ್ತು...ಇತ್ತೀಚಿಗೆ ಒಂದು ದೊಡ್ಡ suitcase ತುಂಬಾ ಬಟ್ಟೆ ವೃದ್ಧಾಶ್ರಮಕ್ಕೆ ಕೊಟ್ಟೆ...
ನನ್ನ ಹೊಸ ಚಸ್ಮ ಹಾಕಿ ಚಿತ್ರ ತಮ್ಮ-ಅಮ್ಮ ನಿಗೆ ಕಳಿಸಿದ್ದು ನಿಮಗೂ....ಅವರೊ ಇಲ್ಲಿಗೆ ಬಾ ಬಾ ಅಂತ ಕರೀತಿರ್ತಾರೆ, ನನಗೆ ಎಲ್ಲೂ ಹೋಗಲೂ ಮನಸ್ಸಿಲ್ಲ 😏.