ನೆನಪಿನ ಸಂಚಿಯಿಂದ

June 3, 2026

ನೇರಳೆ ಹಣ್ಣು

 ನಮ್ಮ ಮನೆಯ ಬಳಿಯ ನಾನು ವಾಕ್ ಹೋಗುವ ಪಾರ್ಕ್ ನಲ್ಲಿ ಮೂರು ನೇರಳೆ ಹಣ್ಣಿನ ಮರಗಳಿವೆ. ದೊಡ್ಡ, ಸಣ್ಣ ಗಾತ್ರದ ನೇರಳೆ ಹಣ್ಣು. ಹಣ್ಣಾಗಿ ನೆಲದ ಮೇಲೆ ಬಿದ್ದಿರ್ತವೆ.  ನಮ್ಮ flat ಎದುರುಗಡೆ ದೊಡ್ಡ ನೇರಳೆ ಹಣ್ಣಿನ ಮರ, ಅದು ಜೂನ್-ಜುಲೈ ನಲ್ಲಿ ಹಣ್ಣು ಆಗ್ತವೆ. ಈಗೀಗ diabetes ಗೆ ಒಳ್ಳೇದು ಅಂತ ಸಿಕ್ಕಾ ಪತ್ತೆ ದುಬಾರಿ. ಇವತ್ತು ದೋಸೆ.ಹುಯ್ತಾ ಮಧ್ಯದಲ್ಲಿ ಇದರದ್ದೊಂದು ಫೋಟೋ ಶೂಟ್ ಮಾಡಿದೆ. ನಿಹಾಗೆ breakfast ಜತೆ ಇವತ್ತು ಜಾಮೂನು ಜ್ಯುಸ್ shot. ಗಾಜಿನ ಗ್ಲಾಸ್ ನ rim ಗೆ ಸ್ವಲ್ಪ ಉಪ್ಪು ಮತ್ತು ಖಾರದ ಪುಡಿ..ಜ್ಯುಸ್ ನಲ್ಲಿ ಸ್ವಲ್ಪ ಕಾಲಾ ನಮಕ್, ಮನೆಯಲ್ಲಿ ಬೆಳೆಸಿದ ಪುದಿನಾ....🙂👍🙏

ಸ್ವಲ್ಪ ಹೆಚ್ಛೆ ಕೆಲಸ ಆಗುತ್ತೆ ಜ್ಯುಸ್ ಮಾಡಲು ಆದರೆ ನನಗೆ ನೇರಳೆ, ದಾಳಿಂಬೆ ಹಣ್ಣಿನ ಜ್ಯುಸ್ ಮಾಡಲು ತುಂಬಾ ಖುಷಿ..🤔




ಶ್ರೀಕಾಂತ್ ಹೀಗೆ ನೇರಳೆ ಹಣ್ಣು/ತರಕಾರಿ  ಮಾರುವವರ ಬಗ್ಗೆ ತುಂಬಾ ಕಾಳಜಿ. ಅವರನ್ನೆಲ್ಲ ಪ್ರೀತಿಯಿಂದ ಮಾತನಾಡಿಸಿ, ಅವರ ಸುಖ ದುಃಖ ಎಲ್ಲ್ಲಾ ಆಲಿಸುವವರು...😏


ಹಾಗೆ ಸುಮ್ಮನೆ ಒಂದು ಮಿನಿ ಮಿನಿ ಲಹರಿ......🙂🙂

May 26, 2026

ಸಂಚಿಯಿಂದ ತೆಗೆದ ನೆನಪು - 25 years

 


ಮೊನ್ನೆ ಒಂದು ವೈರಲ್ ಆದ ಸುದ್ದಿ ಓದ್ತಾ  ಇದ್ದೆ. ಏನಿಲ್ಲ ಯಾರೋ ಮನೆ ಮಾಲೀಕರು ಬಾಡಿಗೆದಾರರ deposit ನಿಂದ 5000/- ಮಾತ್ರ ಕಟ್ ಮಾಡಿ ಉಳಿದ ಹಣವನ್ನು ತಂಟೆ ತಕರಾರಿಲ್ಲದೇ ವಾಪಸ್ ಮಾಡಿದರು ಅಂತ..

ನಾವು ಬೆಂಗಳೂರಿಗೆ ಬಂದು ಈ ತಿಂಗಳ ಕೊನೆಗೆ 25 ವರ್ಷ ಆಗಲಿದೆ. ನಮ್ಮ ಮೊದಲ ಬಾಡಿಗೆ ಮನೆ, ಚಿಕ್ಕದು, 5 ವರ್ಷದ ಲೀಸ್ ಮೇಲೆ ಪಡಕೊಂಡಿದ್ಫು. ಆ ಐದು ವರ್ಷಗಲ್ಲಿ, ನಮ್ಮ ಸಂಸ್ಥೆ ಹುಟ್ಟಿ, ಹಲವಾರು project ಗಳನ್ನು ನಿಭಾಯಿಸುತ್ತ, ಒಳ್ಳೆ ಹೆಸರನ್ನೂ ಸಂಪಾದಿಸಿತು. ಐದು ವರ್ಷಗಳ ನಂತರ ಲೀಸ್ ಮುಗಿದ ಹಾಗೆ, ಸಂಸ್ಥೆಯ ಹಿರಿಕರ ಸಲಹೆಯ ಮೇರೆಗೆ ದೊಡ್ಡ ಮನೆ ಬಾಡಿಗೆ ಪಡೆಯಲು ನಿಶ್ಚಯಿಸಿದೆವು. ಆಗ ಅಕ್ಕ ಪಕ್ಕ ದವರು, ಪರಿಚಯ ಇದ್ದವರು,  ಇಲ್ಲದವರು ಎಲ್ಲರೂ ಸಿಕ್ಕಿದ್ದೆ chance ಅಂತ ಶ್ರೀಕಾಂತ್ ರವರನ್ನು ಹೆದರಿಸಲು ಪ್ರಾರಂಭಿಸಿದರು...ನಿಮ್ಮ owner ತುಂಬಾ ಕಿರಿ ಕಿರಿ, ಹಳೆಯ ಬಾಡಿಗೆ ದಾರರಿಗೆ ದುಡ್ಡು ವಾಪಸ್ ಮಾಡಲು ತುಂಬಾ ಸತಾಯಿಸಿದ್ದಾರೆ ಅಂತ. " ದೊಡ್ಡ ಗಟ್ಟಿಯಾದ ಬೀಗ ಜಡಿದು, ದುಡ್ಡು ಕೊಟ್ಟ ಮೇಲೆ ಮನೆ ಅವರಿಗೆ ವಹಿಸಿ ಕೊಡಿ ಮುಂತಾದ ಸಲಹೆಗಳು...ಆ ಲೀಸ್ ಮೊತ್ತ ದೊಡ್ಡದೇ...ನಮಗೆ ಬೇಕಿತ್ತು. ಶ್ರೀಕಾಂತ್ ಆವಾಗ ಚಿಕ್ಕ ಚಿಕ್ಕ ವಿಷಯಕ್ಕೂ ನನ್ನ ಸಲಹೆ ಕೇಳುವವರು. ಎಲ್ಲರೂ ಹೇಳುವುದು ನಿಜ ಇರಬಹುದಾ? ನಿನಗೇನನ್ನಿಸುತ್ತೆ?
ಆವಾಗ ಸಣ್ಣ ಪ್ರಾಯ, ಏನೋ ಜಿದ್ದು, ಹುಮ್ಮಸ್ಸು, ಏನು ಬೇಕಾದರೂ ಸಾಧಿಸಬಹುದು ಎಂಬ ಹುಂಬ ಧೈರ್ಯ..( ಬ್ಯಾಂಕ್ ಕೆಲಸ ಬಿಡ್ತೇನೆ ಎಂದಾಗ ನಾನು ಹಿಂದೆ ಮುಂದೆ ಆಲೋಚಿಸದೆ, dont worry, manual labour ಬೇಕಾದ್ರು ಮಾಡಲು ನಾನು ರೆಡಿ...- ನಾನು ಮಾಡಿರುವ distance education ಡಿಗ್ರಿ ಗೆ ಒಳ್ಳೆ ಕೆಲಸ ಸಿಗುವ  ಭರವಸೆ ನನಗಿರಲಿಲ್ಲ 😀😀 - ಆದರೂ ಒಂದು ಕಡೆ life style e-magazine ಗೆ content developer  ಹುದ್ದೆಗೆ interview ಗೆ ಹೋಗಿ..ಅವರು 8000 ರೂ ಸಂಬಳ ಕೊಡಲು ರೆಡಿ ಯಾಗಿದ್ದರು. ಆಫಿಸ್ ಮಣಿಪಾಲ್ ಸೆಂಟರ್ ನಲ್ಲಿ. ನಾವಿದ್ದದು ರಾಜಾಜಿನಗರ. ಎರಡು ಬಸ್ ಚೇಂಜ್ ಮಾಡಿ ಹೋಗಬೇಕಿತ್ತು. ನನಗೂ ಒಪ್ಪಿಗೆ ಇತ್ತು. ಆದರೆ ಶ್ರೀಕಾಂತ್ 'ಇಲ್ಲ 10000 ಕೇಳು ಅಂದ್ರು...ಆ.ಆಫಿಸ್ ನವರು ಪಾಪ ನಾವೂ ಇತ್ತೀಚಿಗೆ ನಾವು ಶುರು ಮಾಡಿದ್ದೇವೆ...ಅಷ್ಟೆಲ್ಲ ಸಂಬಳ ಕೊಡಲು ಆಗುವುದಿಲ್ಲ, ಮುಂದೆ ಖಂಡಿತ  ಸಂಬಳ ಹೆಚ್ಚಿಸುವಾ ಅಂದ್ರು ....ಅಷ್ಟರಲ್ಲೇ ನಮಗೆ ಬೇರೆ ಪ್ರೊಜೆಕ್ಟ್ ಸಿಕ್ಕಿ, ನಾನು ಅದರಲ್ಲೇ involve ವಾಗುವುದೆಂದಾಯಿತು. ಅದೇ ಮಹಿಳಾ ಸ್ವ ಉದ್ಯೋಗ ಮಾರ್ಗದರ್ಶನ ಕೇಂದ್ರ...🙏🙏
ಯಾವತ್ತಿನ ಹಾಗೆ ಟ್ರಾಕ್ change ಆಯ್ತು)
ಐದು ವರ್ಷದಲ್ಲಿ ಲೀಸ್ ನ ಮೊತ್ತದಲ್ಲಿ ಎಷ್ಟು ಕಡಿತ ವಾಗುತ್ತದೆ ಅಂತ ಶ್ರೀಕಾಂತ್ ಖುದ್ದು ಲೆಕ್ಕ ಹಾಕಿ owner ಗೆ 'ಸರ್  ಇಷ್ಟು ಹಣ ಬರಬೇಕು'  ಎಂದಿದ್ದರು.. ಅವರೂ ಹೂಂ ಸರಿಯಾಗಿದೆ...ಪೈಂಟಿಂಗ್ ಹಣ ಒಂದು ಸೇರಿಸಿ. ಚೆಕ್ 'ಈ' ತಾರೀಕಿಗೆ  ತಂದು ಕೊಡ್ತೀನಿ' ಅಂದ್ರು
ನಿನ್ನ intution ಏನು ಹೇಳುತ್ತೆ  ಅಂತ ಶ್ರೀಕಾಂತ್  ಕೇಳಿದ್ದರು.
ನಾನು 'ಖಂಡಿತ ಏನೂ ತಕರಾರಿಲ್ಲದೇ ನಮ್ಮ ಹಣ ವಾಪಸ್ ಕೊಡುತ್ತಾರೆ...ಅಷ್ಟಕ್ಕೂ ಈಗಲೇ ಚಿಂತೆ ಯಾಕೆ ಮಾಡ್ತೀರಾ ಅಂದೆ...
ಹೇಳಿದ ತಾರೀಕಿಗೆ ಬೆಳ್ಳಂಬೆಳ್ಳಿಗೆ ಬೆಲ್. ಮನೆ ಮಾಲೀಕರು ಚೆಕ್ ಕೊಟ್ಟು ಹೋದರು..
ಆಮೇಲೆ ಚೆಕ್ bounce ಆಗುತ್ತೆ ಅಂತ ಎಲ್ಲರೂ  ಹೇಳಿದರು. 😀 ಶ್ರೀಕಾಂತ್ ಬ್ಯಾ0ಕ್ open ಆಗಲು ಕಾಯುತ್ತಿದ್ದು, ಬೇಗ ಹೋಗಿ ಚೆಕ್ ಕೊಟ್ಟರು...ಅಲ್ಲೂ ಎನೂ ಕಿರಿಕಿರಿಯಾಗಲಿಲ್ಲ...ದುಡ್ಡು credit ಆಯ್ತು
ಆ ಮೇಲೆ ಜನರು ಅಷ್ಟಕ್ಕೂ ಸುಮ್ಮನಾದರ' ಇಲ್ಲ 'ನಿಮ್ಮ ಗ್ರಹಚಾರ ಒಳ್ಳೆದಿತ್ತು ಅಂದ್ರು 😀😀
ಇದನ್ನು ಮೆಲುಕು ಹಾಕಲು ಶ್ರೀಕಾಂತ್ ಎ ಇಲ್ಲ 🙂



ಮೊನ್ನೆ ವಿಧಾನ ಸೌಧದ ಬಳಿ ನಡೆದುಕೊಂಡು ಹೋಗ್ತಾ ಇದ್ವಿ. 25 ವರ್ಷಗಳಲ್ಲಿ ಹಲವಾರು ಬಾರಿ ಆ ಕಡೆ ಹೋದರೂ ವಿಧಾನ ಸೌಧದ ಒಂದೂ ಚಿತ್ರ ಕೂಡ ತೆಗಿಲಿಲ್ಲ ಅಂದೆ ಅಕ್ಕನಿಗೆ. ಎರಡೂ ಬದಿ ರಸ್ತೆ ಖಾಲಿ ಇತ್ತು. ನಾನು ಬಿಸಿಲಲ್ಲಿ ಮೊಬೈಲ್ ಓಪನ್ ಮಾಡಲು ಪಿನ್ ಎಂಟರ್ ಮಾಡುವಷ್ಟರಲ್ಲಿ ಸಿಗ್ನಲ್ ಬಿಟ್ಟಿತ್ತು...😀 

May 22, 2026

ಕೊರೊನಾ ಕಾಲೇ ಕತೆ

 ಹೊರ ದೇಶದಲ್ಲಿರುವ ತಂಗಿಯ ಜತೆ ಮಾತು ಕತೆ ಮುಗಿಸಿ, ರಾಕಿಂಗ್ ಚೆಯರ್ ಮೇಲೆ ತೂಗುತ್ತ, ಆಫಿಸ್ ಗೆ ಹೋಗಲು ತಯಾರಾಗುತ್ತ ಅಲ್ಲೇ ಕನ್ನಡಿ ಎದುರು ನಿಂತು,ತಲೆ ಎತ್ತಿ, ಮೂಗು ಅರಳಿಸಿ, ಮೂಗಿನ ಹೊಳ್ಳೆಯಲ್ಲಿನ ಕೂದಲನ್ನು ಕಟ್  ಮಾಡುತ್ತಿದ ಗಂಡನ ಕಡೆ ನೋಡುತ್ತಾ 'ಹೇ ಕುಮಾರ್, ಯು ಆರ್ 62,  ಇಟ್ ಇಸ್ ಹೈ ಟೈಮ್ ಯು ರಿಟಯರ್ಡ್ ಅಂದ್ಲು ಹೇಮಾ.

ತಕ್ಷಣ ಅವಳ ಕಡೆ ಜಿಗುಪ್ಸೆಯಿಂದ ನೋಡಿ....ನಿವೃತ್ತಿ ಆದರೆ ನಿನ್ನನ್ನು ಸಾಕೋದು ಹೇಗೆ ಅಂದಾಗ ಹೇಮಾಗೆ ಶಾಕ್. ಒಂದು ಕ್ಷಣ ಮೈ ಎಲ್ಲ ತಣ್ಣಗಾಗಿ, ಬಿಸಿಯಾಯ್ತು.  ಪುನಃ ಅವಳ ಕಡೆ ನೋಡುತ್ತಾ.. ರಿಟೈರ್ ಆಗಿ ಏನು ಮಾಡಲಿ ಅಂದ್ರು ತುಸು ಮೆತ್ತಗಿನ ದನಿಯಲ್ಲಿ.
ಅರೆ ನೀವೊಬ್ಬ ಒಳ್ಳೆಯ ಆರ್ಟಿಸ್ಟ್, ಇತಿಹಾಸದ ಬಗ್ಗೆ ಕುತೂಹಲ, ಆ ಲೈನ್ ನಲ್ಲಿ ನಿಮ್ಮನ್ನು ತೊಡಗಿಸಬಹುದು ಅನ್ನುತ್ತಾ ಆಳವಾದ ಚಿಂತನೆಗೆ ಜಾರಿದಳು ಹೇಮಾ ಎಷ್ಟೆಂದರೆ, ಕಾಲೇಜಲ್ಲಿ ಲೆಕ್ಚರರ್ ಆದ ಮಗಳು, ಮನೆಯಿಂದ ಹೊರಡುವ ಮುನ್ನ 'ಬೈ ಮೊಮ್ಮಿ' ಅಂದದ್ದು ಕೇಳಿಸಲೇ ಇಲ್ಲ. 'ಅಮ್ಮ ಪೆನ್ನಿ ಫಾರ್ ಯುವರ್ ಥಾಟ್ಸ್' ಏನು ಯೋಚಿಸ್ತಾ ಇದ್ದೀಯಾ. ಅಲ್ವೇ ಅಪ್ಪ ಹೀಗಿಗೆ ಅಂದ್ರು ಕಣೆ. ಡಿಡ್ ಹಿ,  ಮೆನ್ !!!!' ಅನ್ನುತ್ತಾ ಚಪ್ಪಲಿ ಮೆಟ್ಟಿ, ಡಾರ್ ಲಾಕ್ ಹಚ್ಚಿ ಹೊರಟು ಬಿಟ್ಲು.
ತುಂಬಾ ಚಿಕ್ಕ ವಯಸ್ದಿಗೆ ಮದುವೆಯಾಗಿ ಕುಮಾರ್ ನ ದೊಡ್ಡ ಕುಟುಂಬ ಸೇರಿದ್ದಳು ಹೇಮಾ. ಇನ್ನು ಓದು ಬಾಕಿಯಿತ್ತು. 'ಇಷ್ಟು ಬೇಗ ಮದುವೆ ಬೇಡಮ್ಮ ಅಂತ ಸಣ್ಣಗಿನ ದನಿಯಲ್ಲಿ ಹೇಳಿದ್ದು, ತಂದೆ ಅವಳ ಸಹಾಯಕ್ಕಾಗಿ ಬಂದಿದ್ಫು, ಅವರನ್ನು ಗದರಿ, ನೀವು ಸುಮ್ನಿರಿ, ಹಾರ್ಟ್ ಪೆಶೆಂಟ್, ಒಳ್ಳೆ ಸಂಬಂಧ , ಅವರೇ ಕೇಳಿಕೊಂಡು ಬಂದಿದ್ದಾರೆ, ಜಾಸ್ತಿ ಮಾತಾಡಿದ್ತೆ, ಮುಂದೆ ಅವಳ ಮದುವೆ ನನ್ನ ಜವಾಬ್ದಾರಿಯಲ್ಲ, ನೀವೇ ನೋಡಿಕೊಳ್ಳಿ ಅಂದು ಜಬರಿಸಿದ್ದಾಗ, ನಿಜಕ್ಕೂ ಸೀಕಾಗಿದ್ದ ತಂದೆ, ಮುಂದೆ ಮಾತು ಮುಂದುವರೆಸಲಿಲ್ಲ. ಕಾಲೇಜಿನ ಪ್ರಿನ್ಸಿಪಾಲ್ ಗೆ ತಂದೆ ಮದುವೆ ಯ ಆಮಂತ್ರಣ ನೀಡಲು ಹೋದಾಗ, ಅವರನ್ನು ಸರಿ ತರಾಟೆಗೆ ತೆಗೊಂಡು, ಏನು ಅರ್ಜೆಂಟ್ ಇತ್ತು, ಕಲಿಯಲು ಹುಷಾರು ನಿಮ್ಮ ಮಗಳು ಅಂದಾಗ, ಸುಮ್ಮನೆ ತಲೆ ತಗ್ಗಿಸಿದ ತಂದೆಗೆ, ಅಟ್ ಲೀಸ್ಟ್ ಅವಳು ಮದುವೆಯಾದ ಮೇಲೆ, ಓದು ಮುಂದುವರೆಸಲಿ ಅಂದು, ಡಿಸ್ಟನ್ಸ್ ಎಜುಕೇಶನ್ ನ ಆಪ್ಲಿಕೇಶನ್ ಫಾರ್ಮ್ ಕೊಟ್ಟಿದ್ದರು. ಅಪ್ಪ ಮಾತು ಕೊಟ್ಟು ಅವಳ graaduation ನ ಜಿಮ್ಮೆದಾರಿ ತೆಗೆದುಕೊಂಡಿದ್ದರು.  ದೊಡ್ಡ ಕುಟುಂಬದ  ಮನೆ ಕೆಲಸಗಳನ್ನು ಮುಗಿಸಿ, ಮಧ್ಯಾಹ್ನ ಒಂದೆರಡು ಗಂಟೆ ಓದಲು ಕುಳಿತಿರುತ್ತಿದ್ದಳು. ಕೊನೆಯ ವರ್ಷದ ಪದವಿ ಪರೀಕ್ಷೆಯ ಸಮಯ ಮನೆಯ ಮೂವರು ಹಿರಿಯ ಸದಸ್ಯರಿಗೆ ಹುಷಾರು ತಪ್ಪಿ, ಮೂವರನ್ನು ಮೂರು ಬೇರೆ ಬೇರೆ ಕಡೆ ಆಸ್ಪ ತ್ರೆಗೆ ಸೇರಿಸಲಾಗಿ, ಮನೆ-ಆಸ್ಪತ್ರೆ ಓಡಾಟದಲ್ಲಿ, ಸಿಕ್ಕಾ ಪಟ್ಟೆ ಕೆಲಸ ಇದ್ದು... ಓದಿದ್ದು ಕಡಿಮೆ, ಆದರೂ ಕೊನೆ ಗಳಿಗೆಯಲ್ಲಿ ಓದಿ ಪಾಸ್ ಮಾಡಿದ್ದಳು. 5 ವರ್ಷದ ಬಳಿಕ  ಕುಮಾರ್ ಗೆ ಪ್ರೊಮೋಷನ್ ಆಗಿ ಬೇರೆ ಊರಿಗೆ  ಬದಲಿ ಆಯ್ತು.. ಈ ಹೊಸ ಜಾಗ ಪಟ್ಟಣ ಪ್ರದೇಶ, ಆದುದರಿಂದ ಅವಳು ಸಣ್ಣದೊಂದು ಕೆಲಸಕ್ಕೆ ಸೇರಿ ಮನೆಯ ಖರ್ಚಿಗೆ ಅವಳ ಸಂಬಳ ಅಲ್ಪ ಸ್ವಲ್ಪ ಸಹಾಯ ಆಗ್ತಿತ್ತು...ಅದಾದ ಮೇಲೆ ಪುನಃ ಹಳ್ಳಿಗೆ ಟ್ರಾನ್ಸ್ಫರ್..ಆಗ ಕೈ ತೋಟ ಎಲ್ಲ ಮಾಡಿ ಗೃಹ ಬಳಕೆಗೆ ಆಗುವಷ್ಟು ತರಕಾರಿಗಳನ್ನು ಬೆಳೆಸಿ, ಅಕ್ಕಪಕ್ಕದ ಮನೆಯವರೊಂದಿಗೆ ಶೇರ್ ಮಾಡಿ ಖುಷಿಯಾಗಿದ್ದಳು. ತುಂಬಾ  ಮಿತವ್ಯಯದ, ಜಾಗರೂಕತೆಯಿಂದ ಖರ್ಚು ಮಾಡುವ ಅಭ್ಯಾಸ ಹೊಂದಿದರಿಂದ ಯಾವುದೇ ವಿಶೇಷವಾದ ಏರು ಪೇರಿಲ್ಲದೆ ಜೀವನ ಸಾಗಿತ್ತು. ಇಬ್ಬರು ಮಕ್ಕಳು ಕಾಲೇಜು ಸೇರುವ ಸಮಯ ಅವರು ಬೆಂಗಳೂರು ಮಹಾನಗರ ತಲುಪಿದರು.
ಆಗ ಬ್ಯಾಂಕ್ ಸ್ವಯಂ ನಿವೃತ್ತಿ ಘೋಷಿಸಿತು.  ಕುಮಾರ್ ಮತ್ತು ಸ್ನೇಹಿತರು ಜಂಟಿಯಾಗಿ ಯಾವುದಾದರೂ ಉದ್ಯಮ ಶುರು ಮಾಡುವುದೆಂದ್ದು, ಮನೆಯಲ್ಲಿ ಹೇಳದೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬಿಟ್ಟರು.  ಸಿಕ್ಕಾಪಟ್ಟೆ ಸಿಟ್ಟು ಬಂದರೂ, ಸಾವರಿಸಿ ಸುಧಾರಿಸಿ ಪುನಃ ಕೆಲಸಕ್ಕೆ ಸೇರಿ ಮನೆಯನ್ನು ಸರಿದೂಗಿಸಿದ್ದಳೂ ಕೂಡ. ಅವರ ಉದ್ಯಮ ಚೆನ್ನಾಗಿ ನಡೆದು ಕೈ ತುಂಬಾ ದುಡ್ಡು ಬರಲು ಆರಂಭಿಸಿದ ಮೇಲೆ, ಹಾಗೂ ದೊಡ್ಡ ಮಗಳ ಮದುವೆಯ ನಂತರ ಅವಳು ಟೆರೇಸ್ ಗಾರ್ಡನ್, ಬಾಲ್ಕನಿ ಗಾರ್ಡನ್ ಅಂತ ಆರಾಮಾಗಿ ಇದ್ಲು.... ಚಿಕ್ಕದಾಗಿ ಹೇಳುವುದಾದರೆ ಆರ್ಥಿಕವಾಗಿ ಅವಳು ಸಣ್ಣ ಮಟ್ಟಿಗಾದರೂ ಸಹಾಯ ಮಾಡಿರುವಾಗ ಕುಮಾರ್ ಮುಖದಲ್ಲಿನ ಅಸಡ್ಡೆ ಅವಳನ್ನು ಸ್ವಲ್ಪ ಹೊತ್ತು ಅಸ್ವಸ್ಥಳನ್ನಾಗಿಸಿತು.
ತಲೆ ಕೊಡವಿ ಮನೆ ಕೆಲಸದತ್ತ ಗಮನ ಹರಿಸಿದಳು.
ಇದಾದ ಮೂರೆ ದಿನಕ್ಕೆ ಲಾಕ್ ಡೌನ್ ಘೋಷಿಸಲಾಯಿತು. ಲಾಕ್ ಡೌನ್ ಮೊದಲ ದಿನ...ಏನು ನಡೀತಾ ಇದೆ ಎನ್ನುವ ಗೊಂದಲ, ಗೊತ್ತಾಗದ ತಳಮಳ...ಮನೆಗೆ  ಬೇಕಾದ ಅಗತ್ಯ ಸಾಮಾನುಗಳನ್ನು ತರುವ ಗಡಿಬಿಡಿ...ಮಾಸ್ಕ್ ಹಾಕಿಕೊಂಡು ಹೊಸ ಜೀವನ... ಆ ರಾತ್ರಿ ಅವಳ ಸೇಲ್ ಫೋನ್  ರಾತ್ರಿ ಇಡೀ ಸದ್ದು ಮಾಡುತ್ತಿತ್ತು. ಅವಳು ಅದರ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ...
ಮರು ದಿನ ಬೆಳಿಗ್ಗೆ ಹೇಗೂ ವಾಕಿಂಗ್ ಇಲ್ಲ, ಅಂತ ಬಾಲ್ಕನಿಯಲ್ಲಿ ಕೂತು ಚಹಾ ಹೀರುತ್ತಾ ಮೊಬೈಲ್ ನಲ್ಲಿ ಯು ಟ್ಯೂಬ್ ಆನ್ ಮಾಡಿದಳು. ಸಿಕ್ಕಾಪಟ್ಟೆ ಮೆಸೇಜ್, ಕಮೆಂಟ್ ಗಳು. ಅವಳು ಹಸಿರು ತರಕಾರಿಗಳನ್ನು ಅತಿ ಹೆಚ್ಚು ದಿನ ಹೇಗೆ ಕಾಪಿಡ ಬೇಕೆಂದು ಹಾಕಿದ ವಿಡಿಯೋ ಒಂದು ವೈರಲ್ ಆಗಿತ್ತು. ಯು ಟ್ಯೂಬ್ ಅದನ್ನು ಟ್ರೆಂಡಿಂಗ್ ಚ್ಯಾನೆಲ್ ಅಂತ ಘೋಷಿಸಿತು. ಇದಾದ ಒಂದೇ ವಾರಕ್ಕೆ ಹಲವು ಲಕ್ಷ ಜನ ಅವಳ ಚ್ಯಾನೆಲ್ subscribe ಮಾಡಿದ್ದಲ್ಲದೆ ಯು ಟ್ಯೂಬ್ ವತಿಯಿಂದ ಸಣ್ಣ ಮೊತ್ತದ ದುಡ್ಡು ಹೇಮಳ ಬ್ಯಾಂಕ್ ಖಾತೆಗೆ ಜಮಾ ಆಯಿತು. ಲಾಕ್ ಡೌನ್ ಅವಧಿಯನ್ನು ಹೇಗೆ ಉಪಯೋಗಿಸುವುದೆಂದು ಅವಳು ವಿಚಾರ ಮಾಡಿ, ಬಾಲ್ಕನಿಯಲ್ಲಿ ಒಂದು ಸಣ್ಣ ಜಾಗ ಮಾಡಿ ಅಲ್ಲೊಂದು ಟೇಬಲ್ ಇಟ್ಟು.... ಸುಲಭವಾದ ಅಡುಗೆ, ಮನೆಯಲ್ಲೇ ಇದ್ದುಕೊಂಡು ವ್ಯಾಯಾಮ, ಕೊತ್ತಂಬರಿ ಸೊಪ್ಪು, ಮೆಂತೆ ಸೊಪ್ಪು ಕುಂಡದಲ್ಲಿ ಬೆಳೆಸುವುದು, ಧ್ಯಾನ, ಯಾವಾಗಲೋ ಕಲಿತ ಯು ಎಸ್  english ಸ್ಪೀಕಿಂಗ್ ಕೋರ್ಸ್ ಮುಂತಾದವುಗಳನ್ನು ಮಾಡುತ್ತಾ ದುಡಿಯಲು ಆರಂಭಿಸಿದಳು.  ಕುಮಾರ್ ನ factory ಬಂದಾಗಿತ್ತು. ಆಲ್ಲಿರುವ ಕೆಲಸಗಾರರಿಗೆ ಎಲ್ಲ ಸ್ವಲ್ಪ ಮಟ್ಟಿಗೆ ಧನ ಸಹಾಯ ಮಾಡಲು ಈ ದುಡ್ಡು ನೆರವಿಗೆ ಬಂತು. ಕುಮಾರ್ ಕೂಡ ಸುಮ್ಮನಿರದೆ ಅವಳಿಗೆ ಮನೆ ಕೆಲಸದಲ್ಲಿ ಆದಷ್ಟು ಸಹಾಯ ಮಾಡಲಾರಂಭಿಸಿದನು.
ಲಾಕ್ ಡೌನ್ ಎಲ್ಲ ಮುಗಿದು ಈಗ ಹಲವಾರು ವರ್ಷಗಳು ಕಳೆದಿವೆ. ಅವನ್ನು ಮೆಲುಕು ಹಾಕುತ್ತ ಇಬ್ಬರೂ ಮೊಮ್ಮಕ್ಕಳೊಂದಿಗೆ ಆಡುತ್ತಾ ನೆಮ್ಮದಿಯ ಜೀವನ ನಡೆಸುತ್ತಾರೆಂಬುವಲ್ಲಿಗೆ ನನ್ನ ಕತೆ .... ಒಪ್ಪಿಸಿಕೊಳ್ಳಿ...🙏🙏🙂🤔

May 20, 2026

5 months you've been gone

 


ಸ್ವಲ್ಪ ಸಮಯ ಅಲೋಪತಿ ಔಷಧಿ ಜತೆ ಆಯುರ್ವೇದ ಔಷಧಿ ಕೂಡ ತೆಗೋತಾ ಇದ್ರು ಶ್ರೀಕಾಂತ್. ಆರೋಗ್ಯದಲ್ಲಿ ಉತ್ತಮ ಸುಧಾರಣೆ ಇತ್ತೆಂದು ನನ್ನ ಅನಿಸಿಕೆ. 

ಒಮ್ಮೆ ಒಂದು ದೊಡ್ಡ ಆಸ್ಪತ್ರೆಗೆ ಹೋದ್ವಿ, ಲೀವರ್ transplant ಬಗ್ಗೆ ಸೆಕೆಂಫ್ opinion ತೆಗೊಳ್ಳಲು....ನನಗೆ ಹೋಮಿಯೋಪತಿ ಔಷಧಿ ಮೇಲೆ ಯಾಕೋ ಅಪಾರವಾದ ನಂಬಿಕೆ...ಶ್ರೀಕಾಂತ್ ಗೆ ಇರಲಿಲ್ಲ. ಡಾ. ಬಳಿ ನಾನು ಸಣ್ಣ ದನಿಯಲ್ಲಿ ಹೋಮಿಯೋಪತಿ ಔಷಧಿ ಅಂದದ್ದೇ ಅವರು ಟೇಬಲ್ ಮೇಲೆ ಬಲವಾಗಿ ಗುದ್ದಿ, ಗಟ್ಟಿ ದನಿಯಲ್ಲಿ...ಲೀವರ್ cirrhosis ಗೆ ಅಲೋಪತಿ ಔಷದಿ ಬಿಟ್ರೆ ಯಾವುದನ್ನೂ ತೆಗೋ ಬಾರದು ಅಂದಿದ್ದ ರಭಸಕ್ಕೆ ಶ್ರೀಕಾಂತ್ ಬಿಡಿ ನನಗೆ ಎಷ್ಟು ಭಯ ಆಯಿತೆಂದು ಹೇಳಲಿಕ್ಕೆ ಆಗದು. 😏😏 ಶ್ರೀಕಾಂತ್ ಮರು ದಿನದಿಂದ ಆಯುರ್ವೇದ ಔಷಧಿ ಬಿಟ್ಟೆ ಬಿಟ್ರು. ಆಮೇಲೆ ಪದೇ ಪದೇ ಆರೋಗ್ಯ ಬಿಗಡಾಯಿಸಲು ಆರಂಭ ವಾದಾಗ ನಾನೂ, ಅಕ್ಕ ಕೂಡ ಪುನಃ ಅದನ್ನು ಶುರು ಮಾಡಲು ಕೇಳಿಕೊಂಡೆವು. ಅವರು ಒಪ್ಪಲೇ ಇಲ್ಲ. 

 ಕಾಕಿ ಸೊಪ್ಪು, ತಂಬಳಿ, ಮಜ್ಜಿಗೆ ಎಲ್ಲ ಒಳ್ಳೇದು ಅಂತ ಅದೆಲ್ಲ ಮಾಡ್ತಿದ್ದೆ. 

ಯಾರೋ ಹೇಳ್ತಿದ್ರು 'ನೀನು ಶ್ರೀಕಾಂತ್ ನನ್ನು ತುಂಬಾ ಚೆನ್ನಾಗಿ ನೋಡಿ ಕೊಂಡೆ ಅಂತ

ಇಲ್ಲ ಹಲವಾರು ಬಾರಿ ನನ್ನ patience ಕೈಕೊಟ್ಟಿದೆ.

ಒಂದು ಸಂದರ್ಭ ಶೇರ್ ಮಾಡ್ತೇನೆ...

ಆ ದಿನ ಏಳುವಾಗ ಲೇಟ್. 11 ಗಂಟೆಗೆ ಡಾಕ್ಟರ್ ಅಪ್ಪೋಯಿಂಟ್ಮೆಮೆಂಟ್ಟ್ನ. ಮಜ್ಜಿಗೆ ಕಡಿತಿದ್ದೆ...ಹಾಲು ಉಕ್ಕಿ ಬಿತ್ತು. ಅದನ್ನು ಕ್ಲೀನ್ ಮಾಡಿದೆ. ಆಮೇಲೆ ಎಣ್ಣೆ ಬಾಟಲಿಯಲ್ಲಿ ತುಂಬಿಸುತ್ತಿದ್ದ ಹಾಗೆ, ಕೈ ಅಲ್ಲಾಡಿ ಅದೂ ಸ್ವಲ್ಪ ನೆಲದ ಮೇಲೆ ಬಿತ್ತು...ಅದನ್ನೂ ಕ್ಲೀನ್ ಮಾಡಿದೆ..ಸುಮಾರು ಹೊತ್ತು ತಗುಲಿತು. ದೋಸೆ ಬೇರೆ. ಕಾಯಿ ತುರಿದು ಚಟ್ನಿ ಮಾಡಲಿಕ್ಕಿತ್ತು. ನಿಹಾ ಗೆ ಒಂದು workshop conduct ಮಾಡಲಿಕ್ಕಿತ್ತು,  ಅವಳೂ ಬೇಗ ಹೊರಡಿಲಿಕ್ಕಿತ್ತು. ಕೇಕ್ ತಯಾರಿಸಿ, ದೊಡ್ಡ ಕೇಕ್ ಆದ್ದರಿಂದ ಅಕ್ಕನಿಗೆ ಅದರ ಡೆಲಿವರಿ ಮಾಡಲಿಕ್ಕಿತ್ತು. ನನಗೆ ತಿಂಡಿ ಪ್ಲಸ್ ಆಸ್ಪತ್ರೆಗೆ ಒಯ್ಯಲು ಉಪ್ಪು ರಹಿತ ಊಟದ ತಯಾರಿ ಇತ್ತು. ಅದರ ಮಧ್ಯೆ ಶ್ರೀಕಾಂತ್ ಮಜ್ಜ8ಗೆ ಕುಡಿಯಲು ಬಂದ್ರು...ಅದರಲ್ಲಿನ ಬೆಣ್ಣೆ ತೆಗೆಯಲು ಪುರುಸೊತ್ತು ಆಗಿರಲಿಲ್ಲ. 'ಸಾರಿ, ನಿಧಾನಕ್ಕೆ ಮಜ್ಜಿಗೆ ಬೆಸೆಯಿರಿ... ಬೆಣ್ಣೆ ತೆಗಿಲಿಲ್ಲ ಅಂದೆ...ಅದಕ್ಕೆ ಅವರು 'ಕೂಡಲೇ ಕೂಡಲೇ ಆ ಕೆಲಸ ಮಾಡಿದ್ರೆ ತಾಪತ್ರಯ ಇರಲ್ಲ ಅಂದ್ರು' ಎಲ್ಲಿತ್ತೋ ಸಿಟ್ಟು...ನಾನು ಕಿರುಚಿ'dont you dare lecture me..ನೀವು ನಾನು ಹೇಳಿದ ಕೂಡಲೇ ಡಾಕ್ಟರ್ ಬಳಿ ಹೋಗಿದಿದ್ರೆ ಈ ತಾಪತ್ರಯ ಇರುತ್ತಿರಲಿಲ್ಲ' ಅಂದೆ...he was so taken aback at my outburst..🤔🤔

ಇನ್ನೊಂದು ದಿನ ಹೀಗೆ...ಒಣಗಿದ ಬಟ್ಟೆಯ ರಾಶಿ ಮಂಚದ ಮೇಲೆ ಬಿದ್ದಿತ್ತು. ಹುಷಾರು ತಪ್ಪಿದ ಮೇಲೆ ಆಫಿಸ್ ಮೀಟಿಂಗ್ ಎಲ್ಲ ನಮ್ಮ ಮನೆಯಲ್ಲಿ. ಅವರಿಗೆ ಟಿ ಎಲ್ಲ ಮಾಡಲಿಕ್ಕೆ ಇರುತ್ತಿತ್ತು. ಯಾಕೋ ಆ ದಿನ ಕೂಡಬ್ತುಂಬಾ ಕೆಲಸ.. ಮಕ್ಕಳಿಬ್ಬರೂ ಮನೆಯಲ್ಲಿ ಇರಲಿಲ್ಲ. ನಾನು ಅಡಿಗೆ ಮನೆ ಚೊಕ್ಕಗೊಳಿಸಿ, ಬಟ್ಟೆ ಮಡೆಚಲು ಹೋದಾಗ....ಬಟ್ಟೆ ಎಲ್ಲ ಶ್ರೀಕಾಂತ್ ನೀಟಾಗಿ ಮಡಚಿ ಇಟ್ಟಿದ್ದರು. ನಾನು ತುಂಬಾ emotional ಆಗಿ thank you srikanth... ಅಂದಿದ್ದಕ್ಕೆ..ಅಯ್ಯೋ ನಿನಗೆ ಹೆಲ್ಪ್ ಆಗೋದಾದರೆ ದಿನಾ ಬಟ್ಟೆ ಮಡಚಿ ಇಡ್ತೇನೆ  ...ಅಂದ್ರು..ಬೇಜಾರಾಯಿತು ಕೇಳಿ....ಬೇಡ ಅಂದೆ...

ಹೀಗೆ i was/am not perfect...ಐದು ತಿಂಗಳಾಯ್ತು ಹೋಗಿ


ನಾಡಿದು ಬಾನುವಾರ ನಮ್ಮ ಮದುವೆಯಾಗಿ 39 ವರ್ಷ. ನಾನು 50 ವರ್ಷ ಜಗಳ ಆಡ್ತಾ, ತಮಾಷೆ ಮಾಡ್ತಾ ಇರಬಹುದೆಂದು ಕೊಂಡಿದ್ದೆ..😭😭. ,ಈ ಫೋಟೋ ಅವರ ಮೊಬೈಲ್ ನಲ್ಲಿತ್ತು

May 8, 2026

My bro - Krishnanand

 



My brother took a break from his packed schedule and came over to help me sort my finances. He gave me sound, practical advice, and as always, I was awed by him. I’m so proud of him. He’s not just smart—he explains things with incredible patience, at least to me.

He’s a self-made man. I still remember him at 18, waking up before dawn for college. If he could, he’d come home for a quick lunch before rushing to his part-time computer job, returning only late at night. (amusedly his boss did not know much about computers and it was my brother who helped and learnt alongside him. His boss who is now his best friend, , has a thriving business related to computers) This was the late 80s, when computers were just making their foray into India.

I’m proud because even then, he gave a portion of whatever little he earned to my mom. That was when Amma finally breathed a small 'financial 'sigh of relief ❤️🙏

He was just 10 when my father had his heart episode. He pedalled his bicycle as fast as he could to find someone with a car to help. I’ll never forget the fear and worry on his little face.

Last year, this time, when Srikanth was diagnosed with liver cirrhosis, he was in complete denial. 'not possible, the doctors are lying. Bhavaji has clean life style unlike us'. He was here with me during transfering of Srikanth's.mortal remains to the hospital for body donation and i am ever grateful for that 🙏

While clearing Srikanth’s files recently, I found a stack of unattended stocks and shares. He had reluctantly invested at my father’s behest for about five years before we lost track of them completely. When I asked my brother for advice, he said he first needed to drive his new car to our Kuldevata temple in Goa with Amma. “I’ll visit mom and then come to you, and we’ll sort it,” he told me.

It was four hectic days, but we managed to finish 75% of the work. The rest, I can handle 👍🙏
Malavika or akka , whom he loving calls  as  akkumbe is his favorite amongst all and he will not listen to my complaints against her, even a small one 😁😁

My only grouse is that he’s a bit lacking in humility. Yet with him, I find I can forgive it 🙂.


             ಯಾರದೇ ಕೆಟ್ಟು ಕಣ್ಣು ತಾಗದಿರಲಿ..🧿


I’m grateful for my family 🙂🙂👍❤️ and i find that i dont essily let any one inside this circle...( i think of ಘಾಚರ್ ಘೋಚರ್)

while other family members look up to me, i look up only to him 
#familymatters

April 28, 2026

ಎಳ್ಳು ಚಿತ್ರಾನ್ನ

 ಮೊನ್ನೆ ಭಾನುವಾರ ಜಯಮಹಲ್ ಪ್ಯಾಲೇಸ್ ನಲ್ಲಿ MTR food ನವರ food fest ಇತ್ತು...ಅಲ್ಲಿತ್ತು ಎಳ್ಳು ಚಿತ್ರಾನ್ನ. ನನಗೆ, ಅಕ್ಕ ಹಾಗೂ ಅವಳ ಸ್ನೇಹಿತೆ ಅನಘಾ ಗೆ ಇದು ತುಂಬಾ ಇಷ್ಟ ಆಯ್ತು. ನಾನು ಅಂದಾಜಲ್ಲೆ ನಿನ್ನೆ ತಯಾರಿಸಿದೆ

amma this is tastier ಅಂದ್ಲು ಮಗಳು. ನಿಹಾ ನಮ್ಮೊಂದಿಗೆ ಆ ದಿನ ಬಂದಿರಲಿಲ್ಲ. ಅವಳೂ ನಾ ಮಾಡಿದ್ದನ್ನು ತಿಂದು ಚೆನ್ನಾಗಿದೆ ಅಂದ್ಲು

ಅದಕ್ಕೂ ಮುಂಚೆ ನನ್ನ ಅಕ್ಕಿ ಹಿಟ್ಟಿನ ಉಬ್ಬು/ಉಕ್ಕರಿಸಿದ ರೊಟ್ಟಿ ಯು ಟ್ಯೂಬ್ ನಲ್ಲಿ 22,000 views ಪಡಿದಿದೆ. ಖುಷಿಯಾಯ್ತು 🙂🙏❤️

ಉಬ್ಬು ರೊಟ್ಟಿ/ಉಕ್ಕರಿಸಿದ ರೊಟ್ಟಿ

ಎಳ್ಳು ಚಿತ್ರಾನ್ನ ನಮ್ಮ ಮಾಮೂಲು ಚಿತ್ರಾನ್ನದ ಹಾಗೆಯೇ...ಕರಿ + ಬಿಳಿ ಎಳ್ಳು ಒಂದು ದೊಡ್ಡ ಚಮಚ, ಘಮ್ ಅನ್ನುವ ವರೆಗೆ ಹುರಿದು, ತಣ್ಣಗಾದ ಮೇಲೆ ಪುಡಿ ಮಾಡಿ,  ಚಿತ್ರಾನ್ನದ ಒಗ್ಗರಣೆಯಲ್ಲಿ ಬೆರೆಸೋದು..ಸ್ವಲ್ಪ ಹುಣಸೆ ಪೇಸ್ಟ್ ಬೆರೆಸೋದು, ಅರಿಶಿನ ಹಾಕ್ಲಿಕ್ಕಿಲ್ಲ..ಅಷ್ಟೇ 😁😁




 ವಿಸ್ತರಿತ recipe ಬೇಕೇ?? 🤔🤔

ಇದನ್ನೂ ನೋಡಿ 👇👇

MTR food festival



April 26, 2026

improvisation

 ಶ್ರೀಕಾಂತ್ ಗೆ  ದೈವಾಧೀನ ರಾಗುವ ಎರಡು ತಿಂಗಳ ಹಿಂದೆ, ಪ್ರತೀ ಮೂರು ದಿನಕ್ಕೊಮ್ಮೆ ಹೋಟಲ್ ಇಡ್ಲಿ ತಿನ್ನುವ ಆಸೆ ಆಗ್ತಿತ್ತು. ಚಟ್ನಿ ಮಾತ್ರ ಮನೆದೇ 😁


ನನ್ನ ಇಷ್ಟದ ಒಂದು ಪುಟ್ಟ ಅಂಗಡಿ  ಇದೆ. ರುಚಿಕರ ಆಹಾರ ಮಾತ್ರವಲ್ಲ, ಬೆಳಿಗ್ಗೆ ನಾಲ್ಕು ಗಂಟೆಗೆ ತೆರೆಯುತ್ತೆ.  ಗ್ಯಾಸ್ ಇಲ್ಲ ಅಂತ ಏನೂ complaint ಇಲ್ಲ. ಮೆನ್ಯು ನಲ್ಲಿ ಯಾವ ಐಟಂ ಕೂಡ ಕಡಿತ ಗೊಳಿಸಿಲ್ಲ. ಮತ್ತೆ ಅವರ ಲಕ್ ಅನ್ನಬಹುದು....ಅಂಗಡಿ ಇರೋ ಜಾಗ ದ ಎದುರು ಅಗಲ ರಸ್ತೆ ಮಾತ್ರವಲ್ಲದೇ ಅಷ್ಟೊಂದು ವಾಹನ ಸಂಚಾರ ಇಲ್ಲ. ವೀಡಿಯೊ ದಲ್ಲಿನ ಹಾಗೆ ರಸ್ತೆ ಪಕ್ಕ ಕಲ್ಲು ಪೇರಿಸಿ ಓಲೆ ಮಾಡಿಕೊಂಡಿದ್ದಾರೆ. ಪಲಾವ್ ರೆಡಿಯಾಗ್ತಿದೆ 😁👍

BTM eatery

ನನಗೆ ಒಂದು ಬೇಜಾರಿದೆ. ಯಾಕೆ ನಮ್ಮ ದೇಶ ಸೌರ ಶಕ್ತಿ ಉಪಯೋಗಿಸುತ್ತಿಲ್ಲ ಎಂದು? ನನ್ನ ತಂಗಿ ಮಗಳು ನಾನು ತುಂಬಾ ಪ್ರಯಾಣ ಕೈಗೊಳ್ಳುತ್ತೇನೆಂದು ನನಗೆ ಪುಟ್ಟದೊಂದು ಸೌರ ಟಾರ್ಚ್ ಕೊಟ್ಟಿದ್ದಳು....ಸ್ವಲ್ಪ ಬೆಳಕಿದ್ದರೂ ಸಾಕು ಅದು ತನ್ನಷ್ಟಕ್ಕೇ ಚಾರ್ಜ್ ಆಗ್ತಾ ಇರ್ತದೆ...(ಕಡೆಗೊಂದು ದಿನ ಅದು ಕಾಣೆಯಾಯ್ತು. ಮನೆಯೆಲ್ಲ ಮೇಲೆ ಕೆಳಗೆ ಮಾಡಿ ಹುಡುಕಿದೆ. ಲಾಸ್ಟ್ ಅದು ಶ್ರೀಕಾಂತ್ ಗೆ ಕೊಟ್ಟಿದ್ದ ನೆನಪು..ಆದರೆ ಅವರು ಬಿಲ್ಕುಲ್ ಅದರ ಬಗ್ಗೆ ಗೊತ್ತಿಲ್ಲ ಅಂದರು..ನಾನೂ ಸುಮ್ಮನಾದೆ. ಕೆಲವೊಂದು ತಿಂಗಳ ನಂತರ ಅವರ ಅಕ್ಕನ ಮನೆಗೆ ಹೋದಾಗ ಅಲ್ಲಿತ್ತು. 'ಓ ಇಲ್ಲ8ದೇ ನನ್ನ ಟಾರ್ಚ್, ಹಿಂದಿನ ಸಲ ಇಲ್ಲಿಗೆ ಬಂದಾಗ ಶ್ರೀಕಾಂತ್ ಬಿಟ್ಟು ಹೋಗಿರಬೇಕು' ಅಂದೆ ನನ್ನ ನಾದಿನಿಯ ಬಳಿ. ಅದಕ್ಕೆ ಅವರು ' ಇಲ್ಲ, ನನಗೆ ಟಾರ್ಚ್  ಇಷ್ಟ ಆಗಿದೆ, ನನಗೆ ಕೊಡು' ಅಂತ ಇಸ್ಕೊಂಡೆ ಅಂದ್ರು...🤔🤔)

ಹಾಗೆ ಸೂರ್ಯ ನಿಗೆ ಏಳುವ ಮೂಡ್ ಇಲ್ಲದಿದ್ದರೆ ಸೌರ battery ಗಳನ್ನು ಮಾಡಿ ಇಡಬಹುದು. ನನ್ನ ದಿವಂಗತ ಸ್ನೇಹಿತೆ ಸೂಸಿ ಮನೆಯಲ್ಲಿ ಇಂತಹ ವ್ಯವಸ್ಥೆ ಇತ್ತು...ಬಾವಿಯಿಂದ ನೀರು.ಕೂಡ ಸೌರ ಶಕ್ತಿಯಿಂದಲೆ ಟ್ಯಾ0ಕೆಗೆ ತುಂಬಿಸುತ್ತಿದ್ದರು. ಮಳೆಗಾಲಕ್ಕೆ ಉಪಯೋಗಿಸಲು  ಸೌರ ಬ್ಯಾಟರಿ ಕೂಡ ಇತ್ತು. ಆದರೆ ಅದು ಹಾಳಾದ ಮೇಲೆ ರಿಪೇರಿ ಆಗಲಿಲ್ಲ ಅಂದ್ರು.

ಆ ನಿಟ್ಟಿನಲ್ಲಿ ಸ್ವಲ್ಪ research ಮಾಡಿದರೆ ಒಳಿತಿತ್ತು ಸಂತ ನನ್ನ ಅನಿಸಿಕೆ..ನೀವೆನ್ನನ್ನುತ್ತೀರಾ?

ತೀರ್ಥಹಳ್ಳಿಯಲ್ಲಿ ನಾವು ತೋಟದ ಮನೆಗೆ ಸೋಲಾರ್ ಹಾಕಿಸುವಾ ಅಂದಿದ್ದೆ..ಅವರೂ ಹೂಂ ಅಂದಿದ್ರು...

ಅಷ್ಟೇ...ಸುಮ್ನೆ....