June 18, 2026

Vasudhendraರ ಅಮ್ಮ ನಮಗೂ ಇಷ್ಟ

so, ನಿಹಾ 'ಅಮ್ಮ, investment ಅಂತ ಬಂಗಾರ ತೆಗೋಳ್ತೇನೆ ಅಂದ್ಲು. ನಾನೂ excite ಆಗಿ ಹೂಂ ಕಣೆ, ಅಂದೆ. ಆದರೆ ನನಗೂ ಮಕ್ಕಳಿಗೂ ಬಂಗಾರದ ಖರೀದಿಯ ಬಗ್ಗೆ ಏನೂ ಅಂದ್ರೆ ಏನೂ ಗೊತ್ತಿಲ್ಲ. ಮದುವೆಯ ನಂತರ ಅಂದ್ರೆ ಈ 38 ವರ್ಷಗಳಲ್ಲಿ ಎರಡೇ ಸಲ ಬಂಗಾರ ಖರೀದಿ ಮಾಡಿದ್ದು. ಎರಡೂ ಸಲ ಅಮ್ಮ ಇದ್ರು...ನಾನು ತಲೆ ಕೆಡಿಸಿಕೊಂಡಿರಲಿಲ್ಲ. ನನ್ನ ತಮ್ಮನಿಗೆ ಮೆಸೇಜ್ ಮಾಡಿದೆ. ಅವನು ಇದರಲ್ಲಿ ನಿಸ್ಸೀಮ. ಅವನು ಏನು ಕೇಳ ಬೇಕು, ಎಲ್ಲಿ ಚೌಕಾಸಿ ಮಾಡಬೇಕು ಅಂತೆಲ್ಲ ಮೆಸೇಜ್ ಕಳಿಸಿದ... ನಾವು ಬೆಪ್ಪು ತಕ್ಕಡಿಗಳು ಹೋಗಿ ಬಂಗಾರ ಖರೀದಿ ಮಾಡಿದೆವು...ಅವರು ಬಿಲ್ ಮಾಡುವಾಗ ಕೌಂಟರ್ ನಲ್ಲಿ ನಮಗೆ ಸಹಾಯ ಮಾಡುತ್ತಿರುವ ಹುಡುಗಿ ಮಾಲವಿಕಾಳಿಗೆ ಕೆಲವಾರು scheme ಬಗ್ಗೆ ಹೇಳುತ್ತಿದ್ದಳು. 

ನಾನು ಆರನೇ ಕ್ಲಾಸ್ ಓದುತ್ತಿದ್ದಾಗ ಅಮ್ಮ , ಬಂಗಾರದ ಅಂಗಡಿಯಲ್ಲಿ ಇಂತಹದೊಂದು  scheme ಗೆ ದುಡ್ಡು ಹಾಕಿದ್ದು...ಮಕ್ಕಳಿಗೆ guess what amma purchased with this scheme, ಅಂದ್ರೆ obviously gold ಅಂದ್ರು...ಅಲ್ಲ ಸ್ಟೀಲ್ ಪ್ಲೇಟ್ s ಅಂದೇ. 😁.  ನಾನು ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳುತ್ತಿರಲ್ಲಿ. ಅಜ್ಜನ ಮನೆಯಲ್ಲಿ ಕಂಚು, ಮಣ್ಣಿನ ಪಾತ್ರೆಗಳು... ಅಮ್ಮನ ಮನೆಯಲ್ಲಿ ಸ್ಟೀಲ್ ಲೋಟಗಳಿದ್ರೂ ತಿಂಡಿಗೆ ಮಾತ್ರ ಹಿಂಡಾಲಿಯಂ ತಟ್ಟೆ. ನೆಂಟರು ಬಂದಾಗ ಅದರಲ್ಲಿ ತಿಂಡಿ ಬಡಿಸುವುದು ಮಾತ್ರ  ನನಗೆ ಮುಜುಗರದ ವಿಷಯ. ಅಮ್ಮನಿಗೆ ಹೇಳಿದಾಗ ಅಮ್ಮನಿಗೆ ಸಿಟ್ಟು ಆಶ್ಚರ್ಯ ಒಟ್ಟಿಗೆ ಆದವು. ಬಂಗಾರದ ಅಂಗಡಿಯಲ್ಲಿ ಪ್ರತಿ ತಿಂಗಳು 10 ರೂ ಕಟ್ಟಬೇಕು. 10 ತಿಂಗಳ ನಂತರ ಬಂಗಾರ ಅಥವಾ ಅಲ್ಲಿ display ನಲ್ಲಿರುವ ಯಾವುದೇ ಐಟಂ ತೆಗೋ ಬಹುದಿತ್ತು. ಹಾಲು ಕಾಯಿಸುವ ಮಿಲ್ಕ್ ಕುಕ್ಕರ್  , ಗಾಜಿನ ಟೀ ಸೆಟ್, ಸ್ಟೀಲ್ ಲೋಟ, ತಟ್ಟೆ ಮುಂತಾದವು. ಅದರಲ್ಲಿ ನವಿಲಿನ ಉಬ್ಬು ಕೆತ್ತನೆ ಇರುವ ಒಂದು ಡಜನ್ ಸ್ಟೀಲ್ ಪ್ಲೇಟ್ ಕೂಡ ಇದ್ದವು. ಒಂದು ಹತ್ತು ರೂ extra ಕೊಟ್ಟರೆ ಅದು ಖರೀದಿಸ ಬಹುದಿತ್ತು. ನನ್ನ ಮುಖ ನೋಡುತ್ತಾ ಅಮ್ಮ ಅದನ್ನೇ ಕೊಂಡರು..

ಇಷ್ಟೆಲ್ಲ ವಿಷಯ ಯಾಕಂದ್ರೆ ವಸುಧೇಂದ್ರರ 'ಸ್ಟೀಲ್ ಪಾತ್ರೆಗಳು' ಪ್ರಬಂಧದ ಬಗ್ಗೆ ಮಾತುಕತೆ.........👇👇

ಮೊನ್ನೆ  ಭಾನುವಾರ ಹಲವು ದಿನಗಳ ನಂತರ ಒಂದು ಕಾರ್ಯಕ್ರಮ attend ಮಾಡಿದೆ. ವಸುಧೇಂದ್ರ ರ ಪುಸ್ತಕ 'ನಮ್ಮಮ್ಮಅಂದ್ರೆ ನಮಗಿಷ್ಟ' ಪುಸ್ತಕದ ಆಂಗ್ಲ ಅನುವಾದದ book talk . ಮಾಲವಿಕ register ಮಾಡಿದ್ದಳು.ಅದರ venue 'ಬೇಕು' ಬಗ್ಗೆ ಕೂಡ ಕುತೂಹಲವಿತ್ತು.

. cozy, ಚೆನ್ನಾಗಿತ್ತು ಕಾರ್ಯಕ್ರಮ. ಮನಸ್ಸಿಗೆ ಹಿತವಾಯ್ತು. ನಗು ಮಾತು, ಗಮ್ಮತ್ತು, ಹಾಡು etc...🙂 ಸಮಯ ಸರಿದಿದ್ದೇ ತಿಳಿಯಲಿಲ್ಲ.


ಮಳೆ ಇದ್ದ ಕಾರಣ ನಾವು ಬೆರಳೆಣಿಕೆಯಷ್ಟು ಜನ ಮಾತ್ರ ಇದ್ದೆವು. ಸಭಿಕರಲ್ಲಿ ಒಬ್ಬರು ಕಾರ್ಯಕ್ರಮದ  recording ಮಾಡಿದ್ದಾರೆ. ವಸುಧೇಂದ್ರ ಅವರು ಅದನ್ನು ಶೇರ್ ಮಾಡಬಹುದು. ನಾನು ಕೆಲವು ಚಿತ್ರ ತೆಗೆದೆ...🙂

             ಅವರ ಜತೆ ಒಂದು ಚಿತ್ರ ನಿಹಾ ಕ್ಲಿಕ್ಸ್. ಅಭಿಮಾನಿ ಗಳ ಮಧ್ಯದಲ್ಲಿ ಹೋಗಿ ನಾನೇ ಕೇಳಿ ಚಿತ್ರ ತೆಗಿದಿದ್ದು 🙂🙏
ಅನುವಾದಕರಾದ ನಾರಾಯಣ್ ಶಂಕರನ ಮತ್ತು ಪುಸ್ತಕದ ಬಗ್ಗೆ ಮಾತನಾಡಿದ  ಡಾ. ವನಮಾಲಾ ವಿಶ್ವನಾಥ


'ಬೇಕು' ನಡೆಸುತ್ತಿರುವುದು ಒಬ್ಬಳು ಯುವ ಉದ್ಯಮಿ. ಗ್ರಾಹಕರಿಂದ ತು0ಬಿ ತುಳುಕುತ್ತಿತ್ತು. ಒಂದು TOUCHWOOD  ಹಾರೈಸಿದೆ. ಈ ತರಹ enterprise ನೋಡಿದ್ರೆ  ಮನಸ್ಸಿಗೆ  ಹಿತವಾಗುತ್ತೆ. ❤️❤️



No comments: