ಮೊನ್ನೆ ಭಾನುವಾರ ನನ್ನ ಮುದ್ದು ಸೊಸೆಯನ್ನು ಕರೆದುಕೊಂಡು 'ರಾಗಿ ಕಣ ಸಂತೆ' ಗೆ ಹೋಗಿದ್ದೆವು. ಏನಾಶ್ಚರ್ಯ ಅಲ್ಲಿ ಡಾ. ನಾ. ಸೋಮೇಶ್ವರ ಅವರು 'ಥಟ್ ಅಂತ ಹೇಳಿ' ಕಾರ್ಯಕ್ರಮ ನಡೆಸ್ತಾ ಇದ್ರು. ಸ್ವಲ್ಪ ಬೇಗ ಹೋಗಿದ್ದಿದ್ರೆ ನಾನೂ ಭಾಗವಹಿಸುತ್ತಿದ್ದೆ. ಥಟ್ ಅಂತ ಹೇಳಿ ಸುಮಾರು 25ವರ್ಷಗಳ ಹಿಂದೆ ನೋಡುತ್ತಿದ್ದೆ. ಆಮೇಲೆ ಒಂದು 12 ವರ್ಷ ನಮ್ಮಲ್ಲಿ ಟಿ ವಿ ಇರಲಿಲ್ಲ. ಈಗ ನಾನು you tube ನಲ್ಲಿ ನೋಡ್ತೇನೆ. ಒಂಚೂರು ಬದಲಾವಣೆ ಯಾಗಿಲ್ಲ. ಒಂದೆರಡು ಕಂತುಗಳಲ್ಲಿ ಬಜರ್ ಇರಲಿಲ್ಲ..ನನಗೆ ಕಿರಿಕಿರಿ ಅನ್ನಿಸ್ತು. ಪ್ರಶ್ನೆ ಗೆ ಆಯ್ಕೆಗಳು ಬರುವಾಗಿನ ಸೌಂಡ್ ತುಂಬಾ ಕಿರಿ ಕಿರಿ...ಆದರೂ ಜ್ಞಾನದಾಯಕ ಕಾರ್ಯಕ್ರಮ. ಮಗಳು ನಾನು ಸರಿಯಾದ ಉತ್ತರಗಳನ್ನು ನೀಡುವುದು ಕಂಡರೆ 'ಅಮ್ಮ ನೀನು ಭಾಗವಹಿಸಮ್ಮ' ಎನ್ನುತ್ತಾಳೆ. ನಾನು' ಹೋಗೆ, ಒಂದೈದು ಪುಸ್ತಕ ಸಿಗಲಿಲ್ಲ ಅಂದರೆ ನನಗೆ ನಾಚಿಕೆ, ಅಷ್ಟೇ ಅಲ್ಲ ನನಗೆ ಪದ್ಮ ಪುರಸ್ಕೃತರು, grammar ಪ್ರಶ್ನೆ ಬಂದರೆ zero ಅಂಕ ಬರುತ್ತೆ ' ಅನ್ನುವ ನಮ್ಮ ಯಾವತ್ತಿನ dialogue. ಅಕ್ಕ ಆ ದಿನ weaving ಕಲಿಯುತ್ತಿದ್ದಾಗಿನ ದೃಶ್ಯ ಕಾರ್ಯಕ್ರಮದಲ್ಲಿ ಬಂದಿದೆ. ಅಷ್ಟಕ್ಕೇ ನಾನು ಫುಲ್ ಖುಷ್ 😀
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಒಳ್ಳೆಯದಾಗಲಿ ಎಲ್ಲರಿಗೂ ❤️🙏
ಈ ಸಲದ ವಿಶೇಷ ಅಂದರೆ ತೋರಣಕ್ಕೆ ಮಾವಿನ ಎಲೆ, ಕೊಟ್ಟೆ ಕಡುಬಿಗೆ ಹಲಸಿನ ಎಲೆ, ಚಿತ್ರಾನ್ನಕ್ಕೆ ಮಾವಿನಕಾಯಿ, ತೊಂಡೆಕಾಯಿ + ಎಳೆ ಗೇರುಬೀಜದ ಪಲ್ಯಕ್ಕೆ ಗೇರುಬೀಜ ನಮ್ಮ ತೋಟದಿಂದ ನಾವೇ ಖುದ್ದಾಗಿ ಕೊಯ್ದು ತಂದಿದ್ದು. ನಿಹಾ ಕೂಡ ಬಂದಿದ್ದಾಳೆ. ಗಮ್ಮತ್ತಾಯಿತು ಹಬ್ಬ ಮಸ್ತು, ನಗು, ಹುಸಿ ಜಗಳದೊಂದಿಗೆ...
ನಮ್ಮಲ್ಲಿ ಯುಗಾದಿಗೆ ತೊಂಡೆಕಾಯಿ ಎಳೆಗೇರುಬೀಜದ ಪಲ್ಯ, ಮತ್ತು ಮಡ್ಗಣೆ (ಕಡ್ಲೆ ಬೇಳೆ ಪಾಯಸ) ಕಡ್ಡಾಯ. ಈ ಸಲ ಬೆಲ್ಲ, ರಾಗಿ ಕಣ ದ ಸಂತೆಯಲ್ಲಿ ಜೈವಿಕ ಕ ಸತ್ವ ದಿಂದ ಕೊಂಡಿದ್ದು. ತುಂಬಾ ರುಚಿಯಾಗಿದೆ. ಇವರು ಸಾವಯವ ಕಿರುಧಾನ್ಯ ದ ಉತ್ಪನ್ನಗಳನ್ನು ಮಾರುತ್ತಾರೆ.









No comments:
Post a Comment