ನಮ್ಮ ಮನೆ ಬಳಿಯ famous landmark ಉಡುಪಿ garden ಹೋಟಲ್. ಆದರೆ ನಾವು ನಮ್ಮ ಸ್ವಂತ flat ಗೆ ವಾಸೀಸಲು ಬರುವಷ್ಟರಲ್ಲಿ ಅದು ಶಿವ ಸಾಗರ್, ನ್ಯೂ ಶಾಂತಿ ಸಾಗರ್, ಉಪಹಾರ ದರ್ಶಿನಿ ಅಂತೆಲ್ಲ ಉಸ್ತುವಾರಿ ಬಡಲಾಗ್ತಾ ಇತ್ತು. ಇತ್ತೀಚಿನ ಒಂದು ವರ್ಷ ಅದು ಬಂದ್ ಆಗಿತ್ತು. ಇವತ್ತು ಮನೆಗೆ ಬೇಕಾಗುವ ಅಗತ್ಯ ಸಾಮಗ್ರಿ ತರಲು ಆ ಕಡೆ ಹೋದರೆ ಏನಾಶ್ಚರ್ಯ... ಅದು ಕೆಳಗಿನ ಚಿತ್ರದಂತೆ ಮದ್ಯ ಮಾರುವ ಅಂಗಡಿ ಯಾಗಿದೆ...
ಇದಪ್ಪ ಉದ್ಯಮಶೀಲತೆಯೆಂದರೆ 🤔🤔😁
Jokes apart. ನಿಜವಾದ ಉದ್ಯಮಶೀಲತೆಯೆಂದರೆ ನಮ್ಮ ಹಾಲು ಮಾರುವವನದ್ದು. ಲಾಕ್ ಡೌನ್ ಘೋಷಿಸಿದ ಕೆಲವೇ ದಿನಗಳಲ್ಲಿ, ಹಾಲಿನ ಜತೆ ಬ್ರೆಡ್ಡು, ಮೊಟ್ಟೆ ಮುಂತಾದವುಗಳನ್ನು ಮಾರಲಿಕಿಟ್ಟ. ಬೇಕಾರಿಗಳು ಓಪನ್ ಆದ ಮೇಲೆ ಪಫ್, ಕೇಕ್, ಜ್ಯುಸ್ ಮಾತ್ರವಲ್ಲ ಅವೆಲ್ಲವನ್ನು ಡಿಸ್ಪ್ಲೇ ಮಾಡಲು ಒಂದು ಅಂದದ ಕೇಸ್ ಕೂಡ ಎಲ್ಲಿಂದಲೋ ಸಂಪಾದಿಸಿದ.
ಕೆಲವು ದಿನಗಳ ಹಿಂದೆ ಹಳ್ಳಿಯಿಂದ ನಮ್ಮ ರೈತರು, ಅಪಾರ್ಟ್ಮೆಂಟ್ ಗಳಿಗೆ ಮಾವು ಸರಬರಾಜು ಮಾಡಲು ಬೆಳ್ಳಿಗ್ಗೆ ನಾಲಕ್ಕು ಗಂಟೆಗೆ ಹೊರಟಿದ್ದರು. ಬ್ರೆಕ್ಫಾಸ್ಟ್ ಮಾಡಲು ಎಲ್ಲೂ ಅವಕಾಶವಿರಲಿಲ್ಲ...ಹಾಗಾಗಿ ಮಧ್ಯಾಹ್ನದ ಹೊತ್ತಿಗೆ ನಾನು ಅವರಿಗೆ ಅವಲಕ್ಕಿ ಉಸಲಿ, ಚಹಾ, ಕೆಲವು ಕುರುಕುಲು ತಿಂಡಿ ಕಳುಹಿಸಿದ್ದೆ. ಸಂಜೆಗೆ ನನಗೆ ಹಾಲು ಬೇಕಿತ್ತು. ಸುಮಾರು ನಾಲಕ್ಕು ಗಂಟೆಗೆ ಹಾಲು ತರಲು ಹೋದಾಗ ಅವರು ಊಟಕ್ಕೆ ಕುಳಿತಿದ್ದರು ಪಾಪ ಅಷ್ಟು ಪುರುಸೊತ್ತಿಲ್ಲದ ವ್ಯಾಪಾರ. ಮೆಟ್ರೊ ಕೆಲಸದವರೆಲ್ಲ ಅವರ ಅಂಗಡಿಗೆ ಬರುತ್ತಾರೆ. ನನಗಂತೂ ಹೀಗೆ ಚುರುಕಾಗಿ ವ್ಯಾಪಾರ ಮಾಡುವವರನ್ನು ಕಂಡರೆ ಖುಷಿ ಮತ್ತು respect.

No comments:
Post a Comment