March 23, 2020

ಅಪಘಾತ / accident / ಜನತಾ ಕರ್ಫ್ಯೂ

ಇವತ್ತು ಬೆಳಿಗ್ಗೆ ಒತ್ತು ಶ್ಯಾವಿಗೆಗೆ ರೆಡಿ ಮಾಡಿ ನಾನು ಬಾಲಕನಿಗೆ ಬಂದು ಟೀ ಕುಡಿಯುವಾಗ ಆಗಲೇ 6.30 ಗಂಟೆ. ದೊಡ್ಡ ತಗಡು ಬಿದ್ದ ಸದ್ದಾಯಿತು. ನಮ್ಮ ಸಿಗ್ನಲ್ ನಲ್ಲೇ ಅಪಘಾತ. ಬೈಕ್ ಮತ್ತು ಬಿ ಎಂ ಟಿ ಸಿ ಬಸ್.   ಕೆಲವೇ ಕೆಲವು ಜನ ಸಹಾಯ ಮಾಡಲು ಓಡಿದ್ರು. ಒಬ್ಬ ಅಪಘಾತ ಸಹಾಯವಾಣಿಗೆ ಫೋನಾಯಿಸಿದ. 5 ನಿಮಿಷದಲ್ಲಿ ಸಂಚಾರಿ ಪೊಲೀಸ್ ವಾಹನ ಬಂದರೆ ಅಂಬುಲನ್ಸ್ 8 ನಿಮಿಷಕ್ಕೆ ಹಾಜರ್. ಆದರೂ ಎಷ್ಟೋ ಹೊತ್ತು ಕಾದ ಅನುಭವ..
ಸದ್ದನ್ನು ಕೇಳಿ ಒಬ್ಬ ಮಹಿಳೆ ಎಷ್ಟು ದೂರ ಓಡಿದಳು. ಆಮೇಲೆ ನಿಧಾನಕ್ಕೆ ವಾಪಸ್ ಘಟನಾ ಸ್ಥಳಕ್ಕೆ ಬಂದಳು. ಸhಹಾಯ ಮಾಡಿದ ಒಬ್ಬರು ಸನಿಟಿಜಿರ್ ನಿಂದ ಬಹಳ ಹೊತ್ತು ಕೈ ಒರೆಸಿದರು. ಕೆಲವು ಮೆಟ್ರೋ ಕೆಲಸಗಾರರು ಇಲ್ಲೇ ಇದ್ದಾರೆ. ಪಾಪ ಅಲ್ಲೇ ಒಂದು ತಗಡಿಗೆ ಬೆಂನಾನಿಸಿ ಕೂತಿದ್ದಾನೆ
ಹೋಟಲ್ ನ resident ಕೆಲಸಗಾರರು ದೊಡ್ಡದಾಗಿ ಹಾಡು ಹಾಕ್ಕೊಂಡಿದ್ದಾರೆ
ಸಂಜೆ ಜಾಗಂಟೆ ಮತ್ತು ತಾಳದೊಂದಿಗೆ ವೈರಸ್ ವಿರುದ್ಧ ಹೋರಾಡುತ್ತಿದ್ದವರಿಗೋಸ್ಕರ , ನ್ಮಆಮ್ಎಂಎಂಆ ಬಿಬಿಎಂಪಿ, ಪೆರಿಕೆ, ಹಸಲು ತಂದು ಕೊಡುವವರು..ಅಂಬುಲನ್ಸ್ ಚಾಲಕರು...ಇತ್ಯಾದಿ 🙏🙏
ಇವತ್ತು ಹಕ್ಕಿಗಳ ಸದ್ದು ನಿಚ್ಚಳವಾಗಿ ಕೇಳಿಸುತ್ತಿತ್ತು. ಕೆಲ ಎಳೆಯರು ಬೈಕ್ ನಲ್ಲಿ ಕಿರುಚಾಡ್ತ ಹೋಗ್ತಿದ್ರು.
ಯಾಕೋ ಇದು ನೆನಪಾಯ್ತು. ನಾವು ಊಬರ್ ,ಓಲಾ ಬಾಡಿಗೆ ಗಾಡಿಯಲ್ಲಿ ಹೋಗುವಾಗ, ಶ್ರೀಕಾಂತ್ ಯಾವಾಗಲೂ ಅವರನ್ನು ಮಾತಾಡಿಸಿ ಅವರ ಸುಖ ದುಃಖದ ಕಾಳಜಿ ವಹಿಸುತ್ತಾರೆ. ಆಗ ಒಬ್ಬ ಚಾಲಕ ನಮ್ಮಒಂದಿಗೆ ಹಂಚಿಕೊಂಡಿದ್ದು....ದುಡ್ಡು ಉಳಿಸೊಗೋಸ್ಕರ ಕಂಪನಿಯವರು ಒಂದು ಪುಟ್ಟ ರೂಮ್ನಲ್ಲಿ 4-5 ಜನರನ್ನು ಉಳಿದುಕೊಳ್ಳುವ ವ್ಯವಸ್ಥೆ ಮಾಡ್ತಾರಂತೆ. ತೊಂದರೆಯಾಗಲ್ವಾ ಅಂತ ಕೇಳಿದಕ್ಕೆ ಇಲ್ಲ ಮ್ಯಾಡಂ ಶಿಫ್ಟ್ ನಲ್ಲಿ ಕೆಲಸ ಮಾಡ್ತೇವೆ..ಅಂದಿದ್ದ...ಅಕಸ್ಮಾತ್ ಅವರಿಗೆ ಊರಿಗೆ ಹೋಗಳಾಗದ ಸಂದರ್ಭ ದಲ್ಲಿ ????!!!!!
ನಾನು ಬಾಲ್ಕನಿಯಲ್ಲಿ ಗಿಡಗಳೊಂದಿಗೆ ಕೂತು ಓದಿದೆ
ಕರೆಂಟ್, ಇಂಟರ್ನೆಟ್ ಕೂಡ ಬಂದ್ ಆಗಿದ್ದಿದ್ರೆ ?????????
ನಿನ್ನೆನೆ ಬರೆದಿದ್ದೆ. ಎರಡು ಫೋಟೋ download ಮಾಡುವಾ ಅಂತ ಪ್ರಯತ್ನ ಮಾಡಿದೆ..ಆಗಲಿಲ್ಲ..ಮರೆತು ಫೋಟೋ ಕೂಡ delete ಮಾಡಿದೆ. 😲🤔🤔



No comments: