January 16, 2020

ವನ ಭೋಜನ

ಶ್ರೀಕಾಂತರ agri ಕಾಲೇಜು ಸಹಪಾಠಿ ಶ್ರೀ ಜೈರಾಮ ರೆಡ್ಡಿ ಯವರು, ಬ್ಯಾಂಕ್ ನೌಕರಿಯಿಂದ ಹಿಂದಿನ ವರ್ಷ ನಿವೃತ್ತರಾಗಿ, ಗುಡಿಬಂಡೆ ತಾಲೂಕಿನ ಊಚಲಹಳ್ಳಿಯಲ್ಲಿ 6ವರೆ ಎಕರೆ ಜಮೀನು ಕೊಂಡು, ಅದರಲ್ಲಿ ಮನೆ ಕಟ್ಟಿಸಿ, ತೋಟದಲ್ಲಿ ಸೀಬೆ, ನೇರಳೆ, ಹಲಸು, ಮಾವು, ನುಗ್ಗೆ ಮುಂತಾದ ಸಸಿ ನೆಟ್ಟಿದ್ದಾರೆ...wow ಎಷ್ಟು ದೊಡ್ಡ ವಾಕ್ಯ!!!
ಹಾಗೆ ಅವರ ಆಮಂತ್ರಣದ ಮೇರೆಗೆ ಇನ್ನೂ ಕೆಲವು ಸಹಪಾಠಿಗಳ ಒಟ್ಟಿಗೆ ಅವರ ಊರಿಗೆ ಹೋಗಿ, ಮುಂಚಿತವಾಗಿ ಸಂಕ್ರಾಂತಿ ಹಬ್ಬ ಆಚರಿಸಿ ಮಧ್ಯಾಹ್ನ ವನ ಭೋಜನ ಮುಗಿಸಿ ಬಂದೆವು. ಅವರ ಶ್ರೀಮತಿಯವರು ಜ್ಯೋತಿ ರೆಡ್ಡಿ ಹಲವಾರು ಪಕವಾನ್ನಗಳನ್ನು ತಯಾರಿಸಿದರೆ, ನಾವು ಕೆಲವೊ0ದು ಭಕ್ಷ್ಯಗಳನ್ನು ಕಟ್ಟಿಕೊಂಡು ಹೋಗಿದ್ದೆವು.
ಬೆಳಿಗ್ಗೆ ಏಳಕ್ಕೆ ಹೊರಟ ನಮ್ಮ ಸವಾರಿ ರಾತ್ರಿ ಹತ್ತಕ್ಕೆ ಮನೆ ತಲುಪಿದ್ದು. ಕೆಲಗಿವೆ ಕೆಲವು ಚಿತ್ರಗಳು.
ನಿಮಗೆಲ್ಲರಿಗೂ ಒಂದು ದಿನ ತಡವಾಗಿ ಸಂಕ್ರಾಂತಿ ಹಬ್ಬದ ಶುಭಾಶಯಗಳು. 😊😊
ಜೈರಾಮ ರೆಡ್ಡಿ +ಜ್ಯೋತಿ ದಂಪತಿಯ ಈ enterprise ಗೆ ಎಲ್ಲರೂ ಶುಭ ಕೋರಿ.
ಮಧ್ಯಾಹ್ನ ಅಲ್ಲಿಗೆ ಶ್ರೀ ಶ್ರೀಧರ್ ಸಾಗರ್ ಅವರು ಆಗಮಿಸಿದರು. 78 ವಯಸ್ದಿನ ಇವರು ಆರ್ ಎಸ್ ಎಸ್ ನ ಪ್ರಮುಖ ಶಾಖಾಧಿಕಾರಿಯಾಗಿದ್ದವರು, Hindu Seva Prathishtan’s Director Sridhar Sagar, 6 ತಿಂಗಳ ಹಿಂದೆ ಗುಡಿಬಂಡೆ ಹಳ್ಳಿಯನ್ನು ದತ್ತು ಪಡೆದು ಅಲ್ಲಿ 'ಗ್ರಾಮ ವಿಕಾಸ' ಹೆಸರಿನ ಸಂಸ್ಥೆಯಡಿ ಹಲವಾರು ಸುಧಾರಣಾ ಕಾರ್ಯಗಳನ್ನು ಹಮ್ಮಿಕೊಂಡಿದ್ದಾರೆ.. ಸಂಜೆ ನಾವು ಅವರ ಸಂಸ್ಥೆಗೆ ಭೇಟಿ ನೀಡಿದೆವು.
                     ನಮ್ಮಮನೆಯ  ಸಂಕ್ರಾಂತಿ ಹಬ್ಬ
ಅಂಗಳದಲ್ಲಿ ಸೆಗಣಿ ಸಾರಿಸಿ, ರಂಗೋಲಿ ಹಾಕಿ ಪೊಂಗಲ್ ತಯಾರಿಸಲು ಮಡಿಕೆ ಸಜ್ಜಾಗಿ ಕುಳಿತಿದ್ದು
ಪೊಂಗಲ್ ತಯಾರು (ಚಿತ್ರ ಸ್ವಲ್ಪ ಹಿಂದೆ ಮುಂದೆ ಯಾಗಿವೆ)
ನಮ್ಮ mid morning ಚಹಾ ಮತ್ತು ಶೇಂಗಾ
ಗಂಡಸರೆಲ್ಲ ನಮ್ಮ ಮೇಲ್ವಿಚಾರಿಕೆಯಲ್ಲಿ ಪೊಂಗಲ್ ತಯಾರಿಸುತ್ತಿರುವುದು
ಹಲವಾರು ಹೂಗಳಲ್ಲಿ ಒಂದು
ವನ ಮಹೋತ್ಸವ.. ಎಲ್ಲ ದಂಪತಿಗಳು ಒಂದೊಂದು ಸಸಿ ನೆಟ್ಟೆವು
ಜೋಳದ ರೊಟ್ಟಿ ಮತ್ತು sides
ಊಟದ ಸಮಯ
 ತಮ್ಮ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳುವಳಿಕೆ ನೀಡುತ್ತಿರುವ ಸಾಗರ್ ಅವರು
ತೋಟದಲ್ಲಿ ಒಂದು ಸುತ್ತು
ಪೊಂಗಲ್ ಆಚರಿಸಿದ್ದು...ಅಗ್ನಿ ನೀಡುತ್ತಿರುವ ಜೈರಾಮ ರೆಡ್ಡಿ ಹಾಗೂ ಜ್ಯೋತಿ
ಬೆಳಗ್ಗಿನ ಉಪಹಾರದ ನಂತರ
ಶ್ರೀ ಶ್ರೀಧರ್ ಸಾಗರ್ ಜತೆ ಮಹಿಳಾಮಣಿಗಳು...,😀😀










No comments: