ಹಲವಾರು ದಿನ ಆಯ್ತು ಏನೂ ಬರೆದಿಲ್ಲ. ಯಾಕೋ ತುಂಬಾ ಬೇಜಾರು. ನೀವೆಲ್ಲ ಓದಿರುತ್ತೀರಿ, ಟಿ ವಿ ಯಲ್ಲಿ ನೋಡಿರ್ತೀರ... ನಮ್ಮ resident ಸೈಬರ್ ಕ್ರೈಮ್ ಪೊಲೀಸ್ inspector, ಶ್ರೀ ರವಿ ಯವರು, ಮಧ್ಯ ಪ್ರದೇಶ ದಲ್ಲಿ ಕಾರ್ಯ ನಿರ್ವಹ8ಸಲು ತೆರಳಿದಾಗ ಅಲ್ಲಿಯ ಭೀಕರ ರಸ್ತೆ ಅಪಘಾತದಲ್ಲಿ ಅಸು ನೀಗಿದರು.
ನಮ್ಮ ಅಪಾರ್ಟ್ಮೆಂಟ್ ನ whatsapp ಗ್ರೂಪ್ ನಲ್ಲಿ ಹಾಕಿ ದಾಗ ಸುದ್ದಿ ಓದಿ ಒಂದು ಕ್ಷಣ ಮೈ ಮರಗಟ್ಟಿ ಹೋಗಿ, ಎದೆ ಬಡಿತ ಜೋರಾಗಿ, ಮೈ ಎಲ್ಲ ತಣ್ಣಗೆ ಮರು ಕ್ಷಣ ಬಿಸಿ ಯಾಗಿ..ಏನಾಗ್ತಿದೆ ಅಂತ ಗೊತ್ತಾಗಲಿಲ್ಲ. ಸ್ಥಿಮಿತಕ್ಕೆ ಬರಲು ಸುಮಾರು ಹೊತ್ತಾಯಿತು. ಎರಡು ದಿನ ಮನೆಯಿಂದ ಕದಲಲಿಲ್ಲ. ರವಿಯವರಿಗೆ ಸಣ್ಣ ವಯಸ್ಸು...ಪುಟ್ಟ ಪುಟ್ಟ ಮಕ್ಕಳು...ಛೆ!! ಮೊನ್ನೆ ಮೊನ್ನೆ ಅಷ್ಟೇ ಅವರಿಗೆ chief minister's gold medal ಸಿಕ್ಕಿದಕ್ಕೆ ನಾವು ಸನ್ಮಾನ ಮಾಡಿದ್ದೆವು.
******************************************
you tube ನಲ್ಲಿ ಆಶೀಶ್ ಸಾರಡ್ಕ ಎನ್ನುವವರ channel ಅನ್ನು follow ಮಾಡ್ತೇನೆ ಅವರ financial advice ಗೋಸ್ಕರ. ಅವರ ಹೆಂಡತಿ ಕೂಡ ಅಸಿನೀಗಿದ್ದಾರೆ....ಹಾಗೆ ಆಕಸ್ಮಾತಾಗಿ ನಾಗರಾಜ್ ವಸ್ತಾರೆ ಯವರ ಹಲವಾರು interview ಗಳು ನನ್ನ ಪೇಜ್ ನಲ್ಲಿ ಕಾಣಿಸುತ್ತಿವೆ... randomly ಒಂದನ್ನು ಕ್ಲಿಕ್ ಮಾಡಿದೆ....ಇಬ್ಬರೂ ಹೆಚ್ಚು ಕಡಿಮೆ ಒಂದು ಮಾತು ಹೇಳಿದ್ದಾರೆ...ಅವರ ಜಾಗದಲ್ಲಿ ನಾವಿದ್ದರೆ..ಆಸ್ಪತ್ರೆಯ.ಹಣಕಾಸಿನ ವ್ಯವಹಾರ ನಿಭಾಯಿಸಲು ಅವರು ಕಷ್ಟ ಪಡಬೇಕಾ ಗುತ್ತಿತ್ತು ಅಂತ.
ಹೌದು ನನ್ನ ವಿಷಯದಲ್ಲೂ ಹಾಗೆ.....ಮದುವೆಯಾದ ಹೊಸದರಲ್ಲೇ ಶ್ರೀಕಾಂತ್ 'ಐದು ವರ್ಷ ಮಾತ್ರ ಬ್ಯಾಂಕ್ ನಲ್ಲಿ ಕೆಲಸ ಮಾಡ್ತೇನೆ ಆಮೇಲೆ ತೋಟ ಎಲ್ಲ ನೋಡಿಕೊಳ್ಳೋದು, ನೀನು ಸೆಗಣಿ ಎಲ್ಲ ಬಾಚಲು ರೆಡಿ ಇರ ರ್ಬೇಕು ಅಂತ.. ಆಗಲೇ ಹೇಳಿ ಬಿಟ್ಟಿದ್ದೆ....ಎಲ್ಲಾ ತರಹದ ಸಹಾಯ/ support ನನ್ನಿಂದ ನಿಮಗೆ ಇದೆ..ಹಣಕಾಸಿ ನ ವ್ಯವಹಾರ ಅಂದರೆ savings/ investment ಎಲ್ಲ ನಿಮ್ಮ department ಅಂತ....ಹಾಗೆ ನಡೆದುಕೊಂಡಿದ್ದೇನೆ ಕೂಡ...ಮನೆ ವ್ಯವಹಾರಕ್ಕೆ ಯಾವುದಕ್ಕೂ ನಾನು ಅವರ ಮೇಲೆ ಡಿಪೆಂಡ್ ಆಗಿರಲಿಲ್ಲ....ನಾನು ಕೆಲಸಕ್ಕೆ ಹೋಗುವಾಗ ನನ್ನ ಸಂಬಳದಲ್ಲಿ ಮನೆ ಖರ್ಚನ್ನು ನಿಭಾಯಿಸುತ್ತಿದ್ದೆ. ಅದೇನು ದೊಡ್ಡ ಮೊತ್ತ ಆಗಿರಲಿಲ್ಲ..ಮತ್ತು ದುಂದು ವೆಚ್ಚ ಏನೂ ಇರಲಿಲ್ಲ....ಜಾಗ ಇದ್ದ ಕಡೆ ಮನೆಗೆ ಬೇಕಾಗುವ ತರಕಾರಿಯೆಲ್ಲ ಬೆಳೆಸುತ್ತಿದ್ದೆ...ಹೀಗೆ 18 ವರ್ಷ ಬ್ಯಾಂಕ್ ನಲ್ಲಿ continue ಮಾಡಿದರು. ದೊಡ್ಡ ಮೊತ್ತದ ದುಡ್ಡು ಅಂದ್ರೆ ಬಾಡಿಗೆ ಮನೆ ಲೀಸ್, ಮಕ್ಕಳ ಫೀಸ್ ಮುಂತಾದ್ದು ಅವರು ಕಟ್ಟುತ್ತಿದ್ದರು. ತೋಟ ದಲ್ಲಿ ದುಡ್ಡು ಇನ್ವೆಸ್ಟ್ ಮಾಡುವಷ್ಟರಲ್ಲಿ ಮಕ್ಕಳಿಬ್ಬರೂ ಕೆಲಸಕ್ಕೆ ಸೇರಿಯಾಗಿತ್ತು. 'ಇನ್ನೂ ಪ್ರತಿ ತಿಂಗಳು ಅಣ್ಣನಿಗೆ ದುಡ್ಡು ಕಳಿಸ ಬೇಕು' ಅಂದಾಗ..ಅಗ್ಗ ನಾನು ಕೆಲಸಕ್ಕೆ ಹೋಗ್ತಿರಲಿಲ್ಲ, ನಾನು ಮೊದಲು ನನಗೆ ಮನೆ ಖರ್ಚಿಗೆ ಎಷ್ಟು ಬೇಕು ಅಂತ ಲೆಕ್ಕ ಹಾಕಿ.... ತಿಂಗಳಿಗೆ ನನಗೆ ಇಷ್ಟು ಕೊಟ್ಟುಬಿಡಿ..ಹಾಗೆ ಬೆಂಗಳೂರಿಗೆ ಬಂದ ಹಾಗೆ ನನ್ನ ಶೇರ್ಸ್ ನ ದುಡ್ಡು ಸೇರಿಸಿ ಒಂದು ಸೈಟ್ ಖರೀದಿಸಿದ್ದೆವು - ಅದು ಮಾರಾಟ ಮಾಡಿದಾಗ ಅದರ ಅರ್ಧ ದುಡ್ಡು ಮಕ್ಕಳಿಬ್ಬರ ಹೆಸರಿಗೆ...ಅದೊಂದೇ ನಾನು ಖಡಾಖಂಡಿತ ವಾಗಿ ಹೇಳಿದ್ದು...then it is your money..u can use it as you feel ರೈಟ್... ಅಂದೆ. ಮತ್ತು project ಹಣ ಸಿಗಲು ವಿಳಂಬವಾದಾಗ ನನ್ನ ಮದುವೆಯಲ್ಲಿ ಹಾಕಿದ ಚಿನ್ನ ಅದೆಷ್ಟು ಬಾರಿ ಬ್ಯಾಂಕ್ ನಲ್ಲಿ ಅಡವಿಟ್ಟಿದ್ದೇವೆ...
investment , IT ಬಗ್ಗೆ ಎಲ್ಲ ಕಲಿಸ್ತೇನೆ ಅಂದಾಗ 'ಅಯ್ಯೋ ಏನು ಅರ್ಜೆಂಟ್, ಕಲಿತರಾಯ್ತು ಎನ್ನುತ್ತಿದ್ದೆ ವಿನಃ ಅದರ ಸುದ್ದಿಗೆ ಹೋಗುತ್ತಿರಲಿಲ್ಲ. ಅಲ್ವೇ ಬ್ಯಾಂಕ್ ರ್ ಮಗಳು, ಬ್ಯಾಂಕ್ ರ್ ಹೆಂಡತಿ ಹಣಕಾಸಿನ ಬಗ್ಗೆ ಕಲಿಯಲ್ಲ ಅಂತ ಹೇಳಲಿಕ್ಕೆ ನಾಚಿಕೆ ಆಗಲ್ವಾ...ಮತ್ತೆ ನಾನೇನಾದರೂ ಇಲ್ಲದಿದ್ದರೆ ಏನು ಮಾಡ್ತಿಯಾ ಅಂದಾಗ ' ಅಯ್ಯೋ ಅಂತಹುದ್ದೆನೋ ಆಗಲ್ಲ ಅಂತಿದ್ದೆ 😭😏😏
ಆ ಮೇಲೆ ಬ್ಯಾಂಕ್ ಬಿಟ್ಟು ನಮ್ಮದೇ ಸಂಘ ಸಂಸ್ಥೆ ಅಂತ ಊರಿಗೆ ಈತ್ತೀಚಿನ 5 ವರ್ಷದಲ್ಲಿ ತುಂಬಾ invest ಮಾಡುತ್ತಿದ್ದರು. ಲೀವರ್ ಕಾಯಿಲೆಗೆ ತುಂಬಾ ದುಡ್ಡು ಖರ್ಚಾಗುವಾಗ ಸ್ವಲ್ಪ ದೃತಿಗೆಟ್ಟಿತು...ನನಗೆ ಯಾರಲೂ ದುಡ್ಡು ಕೇಳುವ ಮನಸ್ಸಿರಲಿಲ್ಲ...ಅದೃಷ್ಟವಶಾತ್ ಒಳ್ಳೆ ದುಡ್ಡಿಗೆ ಸೈಟ್ ಮಾರಿದೆವು...ಮನಸ್ಸಿಗೆ ಎಷ್ಟು ನಿರಾಳ ಅನ್ನಿಸಿತು. ಆದರೆ ನಮ್ಮ bad luck... ಲೀವರ್ ಕಸಿ ಗೆ ಲಭವಿದ್ದರೂ, ಇತರೆ complications ನಿಂದ ಸಾವನ್ನಪ್ಪಿದರು...ಬ್ಯಾಂಕ್ ಮತ್ತು ಆಫಿಸ್ ನಿಂದ ಮಾಡಿದ health insurance ತುಂಬಾ ಸಹಾಯಕ್ಕೆ ಬಂತು...
ಈಗ ತಮ್ಮ ನನಗೆ ದುಡ್ಡಿನ ಬಗ್ಗೆ ಹೇಳಿ ಕೊಡುತ್ತಾನೆ..❤️❤️ .ಮಾಲವಿಕಳಿಗೂ ಇದರ ಬಗ್ಗೆ ಸುಮಾರು ಜ್ಞಾನ ಇದೆ...ಶ್ರೀಕಾಂತ್ health insurance ಎಲ್ಲಾ ಅವಳೇ ನೋಡಿಕೊಳ್ಳುತ್ತಿದ್ಲು..ನಾನೇನಾದರೊ ಆಸ್ಪತ್ರೆ ವಾಸ, ಸಮಯ ಸಮಯಕ್ಕೆ ಮದ್ಫು ಮತ್ತು healthy ಅಡುಗೆ ವಿಷಯಗಳಲ್ಲಿ ತೊಡಗಿಕೊಂಡಿದ್ದೆ
ಅಷ್ಟೇ.... ಸುಮ್ನೆ ಸ್ವಲ್ಪ rants & raves..
ಹಾಂ ನನಗೆ 'ಸುಧಾರಾಣಿ' ಅವರ you tube channel ತುಂಬಾ ಇಷ್ಟವಾಗುತ್ತೆ 🙂